ShareChat
click to see wallet page
search
ವಧು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ದುರ್ಗಶ್ರೀ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕನ್ನಡ, ತೆಲುಗು ಎರಡೂ ಭಾಷೆಗಳಿಂದಲೂ ದೂರ ಉಳಿದಿದ್ದರು. ಅದು ಅಲ್ಲದೇ ತೆಲುಗು ಸೀರಿಯಲ್‌ ಒಂದರಿಂದ ಅರ್ಧಕ್ಕೆ ಹೊರಬಂದು ಅಚ್ಚರಿ ಮೂಡಿಸಿದ್ದರು. ಸದ್ಯ ಏಕೆ? ಏನು ಎಂಬುವುದಕ್ಕೆ ವಿವರವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ. ನನ್ನ ಆರೋಗ್ಯ ಸಮಸ್ಯೆಯಿಂದ ಈ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಒಂದು ಶೆಡ್ಯೂಲ್‌ ಶೂಟಿಂಗ್‌ ಮುಗಿಸಿ ಕೊಟ್ಟು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದ ತಕ್ಷಣ ಆರೋಗ್ಯ ಕ್ಷೀಣಿಸಿತ್ತು. ಆಸ್ಪತ್ರೆಗೆ ಹೋಗಿ ತೋರಿಸಿದಾಗ ತಕ್ಷಣ ಅಡ್ಮಿಟ್‌ ಮಾಡಿಕೊಂಡರು. ನಂತರ ನನ್ನ ಐಸಿಯು(ICU)ಗೆ ಶಿಫ್ಟ್ ಮಾಡಿದರು. ನಂತರ ಗೊತ್ತಾಗಿದ್ದು ಗರ್ಭಾಶಯದ ಸಿಸ್ಟ್ ಗಂಟು (Uterus Cyst) ಇದೆ ಅಂತ. ಅದನ್ನ ಆಪರೇಶನ್‌ ಮಾಡಿ, ತೆಗೆಯಬೇಕು ಅಂದರು. ನನಗೆ 21 ದಿನಗಳ ಕಾಲ ಬೆಡ್‌ ರೆಸ್ಟ್ ಮಾಡಲು ಹೇಳಿದರು. #💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱
💔ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ; ಬರೋಬ್ಬರಿ ಒಂದು ತಿಂಗಳು ಬೆಡ್‌ ರೆಸ್ಟ್‌😱 - ShareChat