ShareChat
click to see wallet page
search
#ದಿನಪತ್ರಿಕೆ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #📜ಪ್ರಚಲಿತ ವಿದ್ಯಮಾನ📜
ದಿನಪತ್ರಿಕೆ - ವಿಜಯವಾಣಿ ನಂ 1 ಕನ್ನಡ ದಿನಪತ್ರಿಕೆ ಕರಡು ಅಧಿಸೂಚನೆ ಪ್ರಕಟಿಸಿದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ನೇರ ನೇಮಕಾತಿ 2500 ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆ ಸೃಜನೆ • ವಿಜಯವಾಣಿ ಸುದ್ದಿಜಾಲ ಬೆಂಗಳೂರು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಬೋಧನೆಗಾಗಿ ಪ್ರತ್ಯೇಕ ಶಿಕ್ಷಕ ವೃಂದದ ರಚನೆಯನ್ನು ಘೋಷಿಸಿದ್ದ ಸರ್ಕಾರ ಇದೀಗ ಕರಡು ಅಧಿಸೂಚನೆಯನ್ನು ಹೊರಡಿಸಿದೆ . ಶಿಕ್ಷಣ ಇಲಾಖೆಯಲ್ಲಿ ಭರ್ತಿಯಾಗದ ಹಾಗೂ ಬೋಧಕರಿಲ್ಲದ ಒಟ್ಟು 2,500 ಹುದ್ದೆಗಳನ್ನು ಗುರುತಿಸಿ ಅವುಗಳನ್ನು ' ಕಂಪ್ಯೂಟರ್ ಸೈನ್ಸ್ ಟೀಚ‌ ' ವೃಂದವಾಗಿ ರೂಪಿಸಿದೆ . ಈ ಹುದ್ದೆಗಳ ವೃಂದ ನೇಮಕಾತಿ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ . ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು , ಇದಕ್ಕಾಗಿ ಅಗತ್ಯ ವಿದ್ಯಾರ್ಹತೆಯ ಮಾನದಂಡಗಳನ್ನು ಸ್ಪಷ್ಟಪಡಿಸಿದೆ . ಶಿಕ್ಷಕರ ಅರ್ಹತೆಗಳೇನು ?: ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು ( ಸಾರ್ವಜನಿಕ ಶಿಕ್ಷಣ ಇಲಾಖೆ ) ( ನೇಮಕಾತಿ ) ( ತಿದ್ದುಪಡಿ ) ನಿಯಮಗಳು- 2026 ಎಂದು ಈ ನಿಯಮಗಳನ್ನು ಕರೆಯಲಾಗಿದೆ . ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8 ನೇ ತರಗತಿ ) ತಿದ್ದುಪಡಿಯಾಗಿ ಈ ಹೊಸ ವೃಂದದ ಶಿಕ್ಷಕರನ್ನು ಸೇರ್ಪಡೆ ಮಾಡಲಾಗಿದೆ . ಬಿಇ ಬಿ.ಟೆಕ್ ಪದವಿ ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಈ ಶಿಕ್ಷಕ ಹುದ್ದೆಗಳಿಗೆ ಅರ್ಹರಾಗಿದ್ದಾರೆ . ಜತೆಗೆ , ಪ್ರೌಢ ಹಾಗೂ ಪಿಯು ಹಂತದಲ್ಲಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿರಬೇಕು ಎಂದು ತಿಳಿಸಲಾಗಿದೆ . ವಿದ್ಯಾರ್ಹತೆ ಏನು ?: ಬಿಎಸ್‌ಸಿ ಇನ್ ಕಂಪ್ಯೂಟರ್ ಸೈನ್ಸ್ , ಬಿಸಿಎ , ಬಿಐಟಿ , ಬಿಇ - ಸಿಎಸ್ , ಬಿಟೆಕ್ - ಸಿಎಸ್ ಹೊಂದಿರಬೇಕು . ಇದರ ಜತೆಗೆ , ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಿರತಕ್ಕದ್ದು ಎಂದು ವಿದ್ಯಾರ್ಹತೆ ನಿಗದಿ ಮಾಡಲಾಗಿದೆ . ನೇಮಕಾತಿಯಲ್ಲಿ ವಿನಾಯಿತಿ : ಶಾಲಾ ಶಿಕ್ಷಣ ಇಲಾಖೆಗೆ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ . ಹಲವು ವಿನಾಯ್ತಿಗಳನ್ನು ನೀಡಲಾಗಿದೆ . ಬಿ.ಇಡಿ ಮತ್ತು ಟಿಇಟಿ ಅರ್ಹತೆ ಪಡೆಯಲು ಐದು ವರ್ಷಗಳ ಸಮಯವನ್ನು ನೀಡಿದೆ . ಹೀಗಾಗಿ ಈ ಅಭ್ಯರ್ಥಿಗಳ ನೇಮಕಾತಿಗೆ ಟಿಇಟಿ ಹಾಗೂ ಬಿ.ಇಡಿ ಕಡ್ಡಾಯವಲ್ಲ ಎಂದು ತಿಳಿಸಿದೆ . Bengaluru Edition Jul 01 , 2026 Page No. 11 Powered by : erelego.com - ShareChat