ಶೀರ್ಷಿಕೆ -ದಿವ್ಯ ಚೇತನ
ಭರತ ಮಾತೆಯ ಹೆಮ್ಮೆಯ ಕುವರ
ದಿವ್ಯ ಸಂಸ್ಕೃತಿಯ ಶ್ರೇಷ್ಠತೆಯ ಹರಿಕಾರ
ಇವರೇ ನೋಡಿ ಮಹಾನಾಯಕ ಅಂಬೇಡ್ಕರ್
ಸಂವಿಧಾನದ ಶಿಲ್ಪಿ ವಿಶಿಷ್ಟ ಚೇತನಕಾರ
ಬಾಲ್ಯದಲ್ಲಿ ಉಂಡರು ನೂರಾರು ಕಷ್ಟಗಳ
ತಪವ ಗೈದು ಕಲಿತರು ಶಾಲೆಯಲಿ ಅಕ್ಷರಗಳ
ಸಾಲು ಸಾಲು ಸವಾಲುಗಳಿಗೆ ದೃತಿಗೆಡಲಿಲ್ಲ
ಮೌಡ್ಯ ಜನರ ದಬ್ಬಾಳಿಕೆಯ ಮೌನವಾಗಿ ಸಹಿಸಿದರಲ್ಲ
ಸ್ಪಷ್ಟ ನಿಲುವಿನ ದಿಟ್ಟ ಹೋರಾಟಗಾರ
ವಿವೇಕದ ಹಾದಿ ಬಿಡದ ನಿಜ
ಛಲಗಾರ
ಮಾನವತೆ ಎತ್ತಿ ಹಿಡಿದ ಮುತ್ಸದ್ದಿ ಈತ
ನೋವಿನಲು ನಗುವುದನು ಕಲಿಸಿದ ಧೀಮಂತ
ಜಾತಿ ಮತ ಬೇಧಗಳ ಅಲ್ಲಗಳೆದರು
ಸರ್ವರೂ ಸಮಾನರೆಂಬ ತತ್ವ ಸಾರಿದರು
ವಿಶ್ವವೇ ತಲೆಬಾಗುವ ಶ್ರೇಷ್ಠ ಜ್ಞಾನಿ ಎನಿಸಿದರು
ಬದುಕಿನದ್ದಕ್ಕೂ ಜ್ಞಾನ ಪಡೆಯುತ್ತಲೇ ನಡೆದರು
ಸಕಲ ದೇಶಗಳ ಸಂವಿಧಾನ ಅಭ್ಯಸಿಸಿದರು
ಜಗಕೆಲ್ಲ ಮಾದರಿ ಸಂವಿಧಾನ ರಚಿಸಿದರು
ಉಸಿರಿರುವ ತನಕ ಮಾನವತೆಗಾಗಿ ಹೋರಾಡಿದರು
ಮರೆಯದ ಮಾಣಿಕ್ಯವಾಗಿ ಇತಿಹಾಸದ ಪುಟ ಸೇರಿದರು #💐ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ🙏🏼 #📝ನನ್ನ ಕವಿತೆಗಳು #✍️ ಮೋಟಿವೇಷನಲ್ ಕೋಟ್ಸ್ #🖋️ ನನ್ನ ಬರಹ


