
anekal today24/7 on Instagram: "ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಪೂಜಾರಿ ; ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು . ಮಂಡ್ಯ, ಏ.15: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುತ್ತು ಮಾರಮ್ಮ ದೇಗುಲದ ಬಳಿ ನಡೆದ ಉತ್ಸವದಲ್ಲಿ ದೇವರ ಕೊಂಡ ಹಾಯುವ ವೇಳೆ ದೇವರ ಗುಡ್ಡಪ್ಪ ಕೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಕುಮಾರ್ (43) ಎಂದು ಗುರುತಿಸಲಾಗಿದೆ. ಕೊಂಡಕ್ಕೆ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಧಾವಿಸಿದ ಅವರ ಸಹೋದರಿ ರಾಜೇಶ್ವರಿ (46) ಅವರಿಗೂ ಗಾಯಗಳಾಗಿವೆ. ಇಂದು ಮುತ್ತುಮಾರಮ್ಮ ದೇವಿಯ ಉತ್ಸವದ ಅಂಗವಾಗಿ ದೇಗುಲದ ಮುಂಭಾಗ ದೇವರ ಕೊಂಡ ಹಾಯುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಮತೋಲನ ಕಳೆದುಕೊಂಡ ಕುಮಾರ್ ಮುಗ್ಗರಿಸಿ ಕೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. #mandya #mysore #hindus #TempleNews #highlights TempleVibes"

