ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ದಿನಪತ್ರಿಕೆ #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್
📜ಪ್ರಚಲಿತ ವಿದ್ಯಮಾನ📜 - ಕನ್ನಡಪ್ರಭ ಜುಲೈನಲ್ಲಿ ಕೇಂದ್ರ ಮಂತ್ರಿ ಮಂಡಲ ಪುನಾರಚನೆ ? ಕೆಲವರು ಪಕ್ಷದ ಕೆಲಸಕ್ಕೆ | ವೈಫಲ್ಯ ಕಾರಣ ಕೆಲವರಿಗೆ ಕೊಕ್ ನವದೆಹಲಿ : ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನಾರಚನೆ ಸನ್ನಿಹಿತವಾಗುತ್ತಿರುವಂತೆ ತೋರುತ್ತಿದ್ದು , ಇದು ಬಹುಶಃ ಸಂಸತ್ತಿನ ಮಳೆಗಾಲದ ಅಧಿ ವೇಶನ ಪ್ರಾರಂಭವಾಗುವ ಮೊದಲು ( ಜುಲೈ 3 ನೇ ವಾರಕ್ಕೂ ಮುನ್ನ ) ನಡೆಯಬಹುದು ಎಂದು ಮೂಲಗಳು ಹೇಳಿವೆ . ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಪಕ್ಷದಲ್ಲಿ ಹೊಸ ಪದಾಧಿಕಾರಿಗಳ ತಂಡವನ್ನು ಶೀಘ್ರ ರಚಿಸಲಿದ್ದಾರೆ . ಇದರ ಜತೆಗೆ ಕೇಂದ್ರ ಸಚಿವ ಸಂಪುಟದ ಪುನಾರಚನೆಯೂ ನಡೆಯಲಿದೆ . ಏಕೆಂದರೆ ಕೆಲವು ಕೇಂದ್ರ ಸಚಿವರು ಪಕ್ಷ ಸಂಘಟನೆಗೆ ಹೋಗಲಿದ್ದು , ಅವರು ಸಚಿವ ಖಾತೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ . ಅಂಥ ಸ್ಥಾನಗಳನ್ನು ಭರ್ತಿ ಮಾಡುವ ಜತೆಗೆ ಹಲವು ಸಚಿವರ ಖಾತೆ ಬದಲಾವಣೆ ಕೂಡ ನಡೆಯಲಿವೆ ಎ ೦ ದು ಗೊತ್ತಾಗಿದೆ . 3 ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮೇಲೆ ನೀಟ್ ಹಾಗೂ ಸಿಬಿಎಸ್‌ಇ ಪರೀಕ್ಷಾ ವೈಫಲ್ಯದ ಆರೋಪಗಳಿದ್ದು , ಅವರ ಭವಿಷ್ಯವು ಅನಿಶ್ಚಿತವಾಗಿದೆ . ಇತ್ತೀಚೆಗೆ ಸಚಿವ ಜಾರ್ಜ್ ಕುರಿಯನ್ ರಾಜ್ಯ ಸಭೆಗೆ ಮರುನಾಮಕರಣ ಆಗದ ಕಾರಣ ರಾಜೀನಾಮೆ ನೀಡಿದ್ದಾರೆ . ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಕೂಡ ರಾಜ್ಯ ಸಭೆಗೆ ಮರುನಾಮಕರಣಗೊಂಡಿಲ್ಲ . ಅವರನ್ನು ಪಂಜಾಬ್‌ ವಿಧಾನಸಭೆ ಚುನಾವಣೆಗೆ ಗಮನ ಹರಿಸಲು ಪಕ್ಷ ಕಳಿಸಬಹುದು . ಇಂಥ ಇನ್ನೂ ಕೆಲವು ಬದಲಾವಣೆ ಆಗಬಹುದು ಎಂದು ಮೂಲಗಳು ಹೇಳಿವೆ . ಇಬ್ಬರು ಕೇಂದ್ರ ಸಚಿವರಾದ ಪಂಕಜ್ ಚೌಧರಿ ಮತ್ತು ಹರ್ಷ ಮಲ್ಲೋತ್ರಾ ಅವರಿಗೆ ಈಗಾಗಲೇ ಉತ್ತರ ಪ್ರದೇಶ ಮತ್ತು ದೆಹಲಿಯ ಪಕ್ಷದ ಘಟಕಗಳ ನೇತೃತ್ವ ವಹಿಸಲಾಗಿದೆ . ಬಿಜೆಪಿ ತನ್ನ ' ಒಬ್ಬ ವ್ಯಕ್ತಿ , ಒಂದು ಹುದ್ದೆ ' ನಿಯಮವನ್ನು ಅನುಸರಿಸುವ ಸಾಧ್ಯತೆ ಹೆಚ್ಚು , ಇದು ಸರ್ಕಾರದಿಂದ ಸಚಿವರು ಹೊರಬರಲು ಕಾರಣವಾಗಲಿದೆ ಎಂದು ಅವು ವಿವರಿಸಿವೆ . ಒಂದು ವೇಳೆ ಪುನಾರಚನೆ ನಡೆದರೆ , ಸಾಮಾನ್ಯವಾಗಿ ಜುಲೈ 3 ನೇ ವಾರ ಆರಂಭ ಆಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ನಡೆಯಬಹುದು . ಪ್ರಧಾನಿಯವರ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ದಿನಾಂಕ ನಿಗದಿ ಕಾರ್ಯದ • ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೊಸ ಸಂಪುಟದಲ್ಲಿ ಪ್ರಾಧಾನ್ಯತೆ ಸಿಗುವ ಸಾಧ್ಯತೆ • ಆಪ್ ಪಕ್ಷಾಂತರಿಗಳು , ಟಿಎಂಸಿ , ಸೇನಾ ಬಂಡಾಯ ಸಂಸದರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ? # 3 ರಾಜ್ಯಪಾಲರು ಶೀಘ್ರ ನಿವೃತ್ತಿ , ಕೆಲವು ಸಚಿವರಿಗೆ ಗೌರರ್ ಹುದ್ದೆ ? ಆಗುವ ಸಾಧ್ಯತೆಯಿದೆ . ಪ್ರಾದೇಶಿಕತೆ , ರಾಜ್ಯ , ಜಾತಿ ಮತ್ತು ನಿಷ್ಠೆಯ ಅಂಶಗಳ ಆಧಾರದ ಮೇಲೆ ಸಚಿವ ಸಂಪುಟವನ್ನು ಸಮತೋಲನಗೊಳಿಸಲು ಯತ್ನಿಸಲಾಗುತ್ತಿದೆ . ಮುಂದಿನ ವರ್ಷ ಉತ್ತರ ಪ್ರದೇಶ , ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆ ಯಲಿರುವುದರಿಂದ , ಅಲ್ಲಿನ ಸಂಸದರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ . ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡ ಕಾರಣ ರಾಜ್ಯದ ಕೆಲವು ಬಿಜೆಪಿ ಸಂಸದರನ್ನು ಕೇಂದ್ರ ಸಚಿವಾಲಯಕ್ಕೆ ಸೇರಿಸಿಕೊಳ್ಳಬಹುದು . ಬಂಡಾಯ ಟಿಎಂಸಿ ಮತ್ತು ಶಿವಸೇನೆ ( ಯುಬಿಟಿ ) ಗುಂಪುಗಳ ಕೆಲವು ಪ್ರತಿನಿಧಿಗಳು ಹಾಗೂ ಆಪ್ ತೊರೆದು ಬಿಜೆಪಿ ಸೇರಿದ 7 ರಾಜ್ಯಸಭಾ ಸದಸ್ಯರಲ್ಲಿ ಕೆಲವರು ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ . 3 ರಾಜ್ಯಪಾಲರು ನಿವೃತ್ತಿ : ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ( ಕರ್ನಾಟಕ ) , ಮಂಗುಭಾಯಿ ಪಟೇಲ್ ( ಮಧ್ಯಪ್ರದೇಶ ) ಮತ್ತು ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ( ಉತ್ತರಾಖಂಡ ) - ಮುಂಬರುವ ತಿಂಗಳು ಗಳಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ . ಗೆಹಲೋತ್ ಮತ್ತು ಪಟೇಲ್ ಜುಲೈನಲ್ಲಿ ಮತ್ತು ಸಿಂಗ್‌ ಸೆಪ್ಟೆಂಬರ್‌ನಲ್ಲಿ ಅಧಿಕಾರ ಮುಗಿಸಲಿದ್ದಾರೆ . ಹೀಗಾಗಿ ಸರ್ಕಾರದಿಂದ ಹೊರಬರುತ್ತಿರುವ ಕೆಲವು ಸಚಿವರಿಗೆ ಖಾಲಿ ಆಗಲಿರುವ ಈ ರಾಜ್ಯಪ ಪಾಲರ ಹುದ್ದೆಗಳನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ . BENGALURU Edition Jun 29 , 2026 Page No. 09 Powered by : erelego.com - ShareChat