ShareChat
click to see wallet page
search
#ದಿನಪತ್ರಿಕೆ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #📜ಪ್ರಚಲಿತ ವಿದ್ಯಮಾನ📜 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್
ದಿನಪತ್ರಿಕೆ - # ವಿಜಯವಾಣಿ ಸುದ್ದಿಜಾಲ ಬೆಂಗಳೂರು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶನದಂತೆ , * 01.10.2026 ರ ಅರ್ಹತಾ ದಿನಾಂಕ'ದ ಅಧಾರದ ಮೇಲೆ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್ ಐಆರ್ ) ಪ್ರಕ್ರಿಯೆ ಜೂನ್ 30 ರ ಮಂಗಳವಾರದಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ . ಗು ನಿಮ್ಮಹಕ್ಕು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಯುಕುಮಾರ್ ರಿಷ್ಕರಣೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಮಗ್ರ ಮಾಹಿತಿ ಒತ್ತು ನೀಡಿದರು . ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ , ಸಿದ್ಧತೆ ಮತ್ತು ತರಬೇತಿ ಪ್ರಕ್ರಿಯೆಗಳು ಜೂ .20 ರಿಂದ ಈರವರೆಗೆ ನಡೆದಿವೆ . ಜೂ . 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ( ಬಿಎಲ್‌ಒ ) ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ' ಫಾರಂ ನೀಡಲಿದ್ದಾರೆ . ತದನಂತರ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಹಾಗೂ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದರು . ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ರಾಜ್ಯಾದ್ಯಂತ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ . ಇವರೊಂದಿಗೆ 31 ಜಿಲ್ಲಾ ಚುನಾವಣಾಧಿಕಾರಿಗಳು , 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು , 224 ಮತದಾರರ ನೋಂದಣಾಧಿಕಾರಿಗಳು , 336 ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ 7,556 ಬಿಎಲ್‌ಒ ಮೇಲ್ವಿಚಾರಕರಿಗೂ ಸಮಗ್ರ ತರಬೇತಿ ನೀಡಲಾಗಿದೆ . ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ 1,15,112 ಬೂತ್‌ ಮಟ್ಟದ ಏಜೆಂಟರಿಗೂ ( ಬಿಎಲ್‌ಎ ) ಜಿಲ್ಲಾ ಚುನಾವಣಾಧಿಕಾರಿಗಳು ತರಬೇತಿ ನೀಡಲಾಗಿದೆ ಎಂದರು . ಪರಿಷ್ಕರಣಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಮತ್ತು ವಿಧಾನಸಭಾ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು , ಕ್ಯಾಲಿಗಳು ಮತ್ತು ಪ್ರಭಾತ್‌ ಫೇರಿಗಳನ್ನು ಅಯೋಜಿಸಲಾಗುತ್ತಿದೆ . ಸಾರ್ವಜನಿಕ ಜಾಗೃತಿ ಮತ್ತು ಪಾರದರ್ಶಕತೆಗಾಗಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ಕಾರ್ಯಾಗಾರ ನಡೆಸಲಾಗಿದೆ . 5.54 ಕೋಟಿ ಮತದಾರರಿಗೆ ನಮೂನೆ ವಿತರಣೆ 16.06.2026 ರ ಅನ್ವಯ ಕರ್ನಾಟಕ ಒಟ್ಟು 5,54,32,314 ಮತದಾರರನ್ನು ಹೊಂದಿದ್ದು , ಇವರೆಲ್ಲರೂ ಈ ವಿಶೇಷ ಸಮಗ್ರ ಪರಿಷ್ಕರಣಿಯ ವ್ಯಾಪ್ತಿಗೆ ಒಳಪಡಲಿದ್ದಾರೆ . ಬೂತ್ ಮಟ್ಟದ ಅಧಿಕಾರಿಗಳು ತಮಗೆ ನಿಯೋಜಿಸಲಾದ ಮತಗಟ್ಟೆ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಲಿದ್ದಾರೆ . ಅಲ್ಲಿ ಅವರು ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಮತದಾರರಿಗೆ ಗಣತಿ ನಮೂನೆಗಳನ್ನು ( ಎನ್ನುಮರೇಷನ್ ಫಾರಂ ) ವಿತರಿಸಲಿದ್ದಾರೆ . ಕರಡು ಮತದಾರರ ಪಟ್ಟಿ ಪ್ರಕಟಣೆ ದಿನಾಂಕ : 05-06-2026 | ವಿಜಯವಾಣಿ ನಂ 1 ಇ ೦ ದಿನಿ ೦ ದ ಎಸ್‌ಐಆರ್ ಪ್ರಕ್ರಿಯೆ ಮತದಾರ ಸೌಲಭ್ಯ ಕೇಂದ್ರ ಕೆಲವು ಮತದಾರರಿಗೆ ಅರ್ಜಿ ಭರ್ತಿ ಮಾಡುವುದು ಕಷ್ಟವಾಗಬಹುದು , ಭಾಷೆ ಸಮಸ್ಯೆ ಎದುರಾಗಬಹುದು ಅಥವಾ ಸಮಯ ವಿವೇಚನೆ ಎಸ್‌ಐಆರ್ ಯಶಸ್ವಿಯಾಗಬೇಕೆಂದರೆ ಬಿಎಲ್‌ಒಗಳು ಮತ್ತು ಮತದಾರರ ಭೇಟಿ ಮುಖ್ಯವಾಗುತ್ತದೆ . ಹೀಗಾಗಿ ಮತದಾರರ ಲಭ್ಯತೆಗೆ ಅನುಗುಣವಾಗಿ ಬಿಎಲ್‌ಒಗಳ ಭೇಟಿಗೆ ಅವಕಾಶವಿರುತ್ತದೆ . ಕೃಷಿ ಪ್ರಧಾನ ಪ್ರದೇಶ , ನಗರ ಪ್ರದೇಶದಲ್ಲಿ ಬೇರೆ ಬೇರೆ ಸಮಯದಲ್ಲಿ ಬಿಎಲ್‌ಒಗಳು ಭೇಟಿ ಮಾಡುತ್ತಾರೆ . ಬೆಂಗಳೂರಿನಂತಹ ಪ್ರದೇಶದಲ್ಲಿ ವೀಕೆಂಡ್‌ಗೆ ಆದ್ಯತೆ ನೀಡಲಾಗುತ್ತದೆ . ಜತೆಗೆ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ , ಬಡಾವಣೆ ನಿವಾಸಿಗಳ ಸಂಘದ ಸಹಾಯ ಯಾಚಿಸಲು ಆಯೋಗ ಮುಂದಾಗಿದೆ . ಆಗಸ್ಟ್ 5 ರವರೆಗೆ ದಾಖಲೆ ಕೊಡಬೇಕಿಲ್ಲ ಜೂ .30 ರಿಂದ ಜುಲೈ 29 ರವರೆಗೆ ಬಿಎಲ್ ಒಗಳು ಮನೆ ಮನೆಗೆ ತೆರಳಿ ನಮೂನೆ ಕೊಡಲಿದ್ದಾರೆ . ಈ ವೇಳೆ ಯಾರೂ ದಾಖಲೆ ಕೊಡಬೇಕಿಲ್ಲ . ಅರ್ಜಿ ಭರ್ತಿ ಮಾಡಿ , ಸಹಿ ಮಾಡಿ , ಫೋಟೋ ಹಚ್ಚಿ ವಾಪಸ್ ನೀಡಿದರಾಯಿತು . ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯವಿದ್ದರಷ್ಟೇ ದಾಖಲೆ ಸಲ್ಲಿಸಬೇಕು . ದಾಖಲೆ ಅಗತ್ಯವಿದ್ದರೆ ಬಿಎಲ್‌ ಒಗಳು ಕೇಳುತ್ತಾರೆ . ಆಗ ಆಗಸ್ಟ್ 5 ಕ್ಕೆ ಕರಡು , ಅಕ್ಟೋಬರ್ 7 ಕ್ಕೆ ಫೈನಲ್ ಮಾಹಿತಿ ಕೊರತೆ ಇದ್ದಲ್ಲಿ ಅಂತಹವರು ಚುನಾವಣೆ ಆಯೋಗದಿಂದಲೇ ಕಾರ್ಯನಿರ್ವಹಿಸುವ ಮತದಾರರ ಸೌಲಭ್ಯ ಕೇಂದ್ರ ಸಂಪರ್ಕಿಸಬಹುದು . ಅಲ್ಲಿ ಮಾರ್ಗದರ್ಶನ ಸಿಗಲಿದೆ . ಅದೇ ರೀತಿ ಬಿಎಲ್‌ಒಗಳ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಬಿಎಲ್‌ಒ ಫೆಸಿಲಿಟೇಷನ್ ಸೆಂಟರ್ ಕೂಡ ಆರಂಭಿಸಲಾಗುತ್ತಿದೆ . 2 ಮಾದರಿ ಸಿಕ್ಕರ್ ಬಳಕೆ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡುವ ಸಮಯದಲ್ಲಿ ಪಾರದರ್ಶಕತೆಗಾಗಿ ಎರಡು ಬಣ್ಣದ ಸ್ಟಿಕರ್‌ಗಳನ್ನು ಬಳಸುತ್ತಾರೆ . ಮನೆಗೆ ಗಣತಿ ನಮೂನೆಯನ್ನು ವಿತರಿಸಿದ್ದಕ್ಕೆ ಗುರುತಾಗಿ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಅಂಟಿಸಿದರೆ , ಭೇಟಿಯ ಸಮಯದಲ್ಲಿ ಮನೆಗೆ ಬೀಗ ಹಾಕಿದ್ದರೆ ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಅಂಟಿಸುತ್ತಾರೆ . ಭರ್ತಿ ಮಾಡಿದ ನಮೂನೆ ಸಂಗ್ರಹಿಸಲು ಅಧಿಕಾರಿಗಳು ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಲಿದ್ದಾರೆ . ನೋಟಿಸ್‌ ಕೊಡುವುದು ಹೆಸರು ತೆಗೆಯುವುದಕ್ಕಾಗಿ ಅಲ್ಲ ನೋಟಿಸ್ ಕೊಡುವುದು ಹೆಸರು ತೆಗೆದು ಹಾಕುವುದಕ್ಕಲ್ಲ ಎಂದು ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ . ಮತದಾರರ ಪಟ್ಟಿಯಲ್ಲಿ ಇರುವ ದೋಷ ಸರಿಪಡಿಸಲು ಯಾರಿಗೂ ಅವಕಾಶವಿಲ್ಲ . ಹೀಗಾಗಿ ಮತದಾರರ ಗಮನಕ್ಕೆ ತಂದೇ ಮುಂದುವರಿಯಲಾಗುತ್ತದೆ . ಇದಕ್ಕಾಗಿ ನೋಟಿಸ್ ನೀಡಲಾಗುತ್ತದೆ . ದಾಖಲೆ ಇದ್ದರೆ ಅದನ್ನು ಗಮನಿಸಿ ದೋಷ ಸರಿಪಡಿಸುವ ಕೆಲಸವಷ್ಟನ್ನೇ ಆಯೋಗ ಮಾಡುತ್ತದೆ . ಮನೆ ಬಾಗಿಲಿಗೆ ಬರಲಿದೆ ನಮೂನೆ ಚುನಾವಣೆ ಆಯೋಗ ಹೇಳಿರುವ ದಾಖಲೆಗಳನ್ನು ಹಾಜರಿಪಡಿಸಬೇಕು . ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಗತ್ಯ . ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಸಂಪೂರ್ಣವಾಗಿ ಸಹಕರಿಸಬೇಕು . ( ಅನ್ನುಕುಮಾರ್ ರಾಜ್ಯದ ಮುಖ್ಯ ಚುನಾವಣಾಧಿಕಾರಿ ನಿಮಗಿದು ತಿಳಿದಿರಲಿ ಬಿಎಲ್‌ಒಗಳು ಕೊಡುವ ದ್ವಿಪ್ರತಿಯ ನಮೂನೆಯಲ್ಲಿ ಒಂದಕ್ಕೆ ಫೋಟೋ ಹಚ್ಚಿ , ಸಹಿ ಮಾಡಿ ವಾಪಸ್ ಸಲ್ಲಿಸಬೇಕು . ಯಾರು ನಮೂನೆ ವಾಪಸ್ ಕೊಡುವುದಿಲ್ಲವೋ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಸೇರುವುದಿಲ್ಲ . ಇತ್ತೀಚೆಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹತೆ ಪಡೆದಿರುವ ಹೊಸ ನಾಗರಿಕ ನಮೂನೆ 6 ' ಅನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು . ಮತದಾರರ ಸೌಲಭ್ಯ ಕೇಂದ್ರ , * ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ವಿವರದ ಮಾಹಿತಿಯನ್ನು https : // ceo . kamataka.gov.in/vfc/details/ ಮೂಲಕ ಪಡೆಯಬಹುದು . ಅರ್ಜಿ ನಮೂನೆಯು ಕನ್ನಡದಲ್ಲಿ ಇರಲಿದೆ . ಭರ್ತಿ ಮಾಡುವಾಗ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಭರ್ತಿ ಮಾಡಬೇಕು . 6 ಅನಾರೋಗ್ಯ , ಕೆಲಸದ ನಿಮಿತ್ತ ಪರ ಊರಿನಲ್ಲಿದ್ದರೆ ಕುಟುಂಬ ಸದಸ್ಯರ ಪೈಕಿ 18 ವಯಸ್ಸು ದಾಟಿದವರು ಸಹಿ ಮಾಡಿ ವಾಪಸ್ ಕೊಡಲು ಅವಕಾಶವಿದೆ . 7 ಗಣತಿ ನಮೂನೆ ಭರ್ತಿ ಮಾಡಲು ವೆಬ್ https://voters.cci.gov . in / ಅಥವಾ ECINET ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜೂ .30 ರಿಂದ ಸೌಲಭ್ಯಗಳು ಲಭ್ಯವಿರುತ್ತವೆ . ಮುಂದಿನ ಕಾರ್ಯಚಟುವಟಿಕೆ ಪ್ರತಿದಿನ ಎಷ್ಟು ಅರ್ಜಿ ಸಲ್ಲಿಕೆಯಾಗಿವೆ , ಎಷ್ಟು ವಾಪಸ್ ಬಂದಿದೆ ಎಂಬ ಮಾಹಿತಿಯನ್ನು ಬಿಎಲ್ ಒಗಳು ಅಪ್ಲೇಟ್ ಮಾಡುತ್ತಾರೆ . ಅದನ್ನು ಆಯೋಗವು ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ತಿಳಿಸಲಿದೆ . ಅದೇ ರೀತಿ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಮ್ಯಾಪಿಂಗ್ ಶೇ .90 ದಾಟಿಲ್ಲ . ಇದು ಮುಂದುವರಿಯಲಿದೆ . 126 ವಿಧಾನಸಭಾ ಕ್ಷೇತ್ರದಲ್ಲಿ ಶೇ .95 ಕ್ಕಿಂತ ಹೆಚ್ಚಾಗಿದೆ . Bengaluru Edition Jun 30 , 2026 Page No. 19 Powered by : erelego.com - ShareChat