#🔴ಬಜೆಟ್ 2026: ಬಹು ಮುಖ್ಯವಾದ ಕೇಂದ್ರದ ಭರವಸೆಗಳು📢 ಕೇಂದ್ರ ಬಜೆಟ್ನಲ್ಲಿ, ಭಾರತ ಸರ್ಕಾರವು ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.
ವಿಶೇಷವಾಗಿ ಕಳೆದ ವರ್ಷದ ಭದ್ರತಾ ಸವಾಲುಗಳ ನಂತರ, ಹೈಟೆಕ್ ಆಧುನೀಕರಣ ಮತ್ತು ಸ್ವಾವಲಂಬನೆಗೆ ಈ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.
*₹7.85 ಲಕ್ಷ ಕೋಟಿ* ಮೊತ್ತದ ರಕ್ಷಣಾ ಬಜೆಟ್ನ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
# 1. ದಾಖಲೆ ಮಟ್ಟದ ಅನುದಾನ
ಒಟ್ಟು ಹಂಚಿಕೆ:
ರಕ್ಷಣಾ ಸಚಿವಾಲಯಕ್ಕೆ ಒಟ್ಟು ₹7.85 ಲಕ್ಷ ಕೋಟಿ ನೀಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ (₹6.81 ಲಕ್ಷ ಕೋಟಿ) ಸುಮಾರು 15% ರಷ್ಟು ಹೆಚ್ಚಾಗಿದೆ.
ಆಧುನೀಕರಣ (ಬಂಡವಾಳ ವೆಚ್ಚ):
ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು ಮತ್ತು ಯುದ್ಧನೌಕೆಗಳ ಖರೀದಿಗಾಗಿ ₹2.31 ಲಕ್ಷ ಕೋಟಿ (28% ಏರಿಕೆ) ಮೀಸಲಿಡಲಾಗಿದೆ.
ಕಾರ್ಯಾಚರಣೆ ವೆಚ್ಚ:
ಸಂಬಳ, ಉಪಕರಣಗಳ ನಿರ್ವಹಣೆ ಮತ್ತು ಸನ್ನದ್ಧತೆಗಾಗಿ ₹3.65 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ.
# 2. "ಆತ್ಮನಿರ್ಭರ" (ಸ್ವಾವಲಂಬನೆ) ಉಪಕ್ರಮಗಳು
ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಹೆಚ್ಚಿನ ಆದ್ಯತೆ ನೀಡಿದೆ:
ಕಸ್ಟಮ್ಸ್ ಸುಂಕ ವಿನಾಯಿತಿ:
ವಿಮಾನದ ಬಿಡಿಭಾಗಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲಾಗಿದೆ.
ಇದು ದೇಶೀಯ ಎಂಆರ್ಒ (MRO) ಉದ್ಯಮಕ್ಕೆ ಸಹಕಾರಿಯಾಗಲಿದೆ.
ದೇಶೀಯ ಖರೀದಿ:
ಆಧುನೀಕರಣ ಬಜೆಟ್ನ ಬಹುಪಾಲು ಮೊತ್ತವನ್ನು (₹1 ಲಕ್ಷ ಕೋಟಿಗಿಂತ ಹೆಚ್ಚು) ಭಾರತೀಯ ರಕ್ಷಣಾ ತಯಾರಕರಿಂದ ವಸ್ತುಗಳನ್ನು ಖರೀದಿಸಲು ಬಳಸಲಾಗುವುದು.
ದುರ್ಲಭ ಖನಿಜಗಳ ಕಾರಿಡಾರ್:
ಸುಧಾರಿತ ಕ್ಷಿಪಣಿ ವ್ಯವಸ್ಥೆಗಳಿಗೆ ಅಗತ್ಯವಿರುವ ಖನಿಜಗಳನ್ನು ಪಡೆಯಲು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ "ರೇರ್ ಅರ್ಥ್ ಕಾರಿಡಾರ್ಗಳನ್ನು" ಸ್ಥಾಪಿಸಲಾಗುವುದು.
# 3. ಪ್ರಮುಖ ಯೋಜನೆಗಳು
ಹೆಚ್ಚುವರಿ ಹಣಕಾಸು ನೆರವಿನಿಂದ ಈ ಕೆಳಗಿನ ಯೋಜನೆಗಳು ವೇಗವನ್ನು ಪಡೆದುಕೊಳ್ಳಲಿವೆ:
ವಾಯುಯಾನ:
ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳು ಮತ್ತು ಸ್ವದೇಶಿ ಎಎಮ್ಸಿಎ (AMCA) ಯುದ್ಧ ವಿಮಾನಗಳ ಅಭಿವೃದ್ಧಿ.
ನೌಕಾದಳ:
ಮುಂದಿನ ಪೀಳಿಗೆಯ ಜಲಾಂತರ್ಗಾಮಿ ನೌಕೆಗಳು ಮತ್ತು ನೌಕಾಪಡೆಗೆ ಬೇಕಾದ ವಿಮಾನಗಳು.
ತಂತ್ರಜ್ಞಾನ:
ಡ್ರೋನ್ ತಂತ್ರಜ್ಞಾನ ಮತ್ತು ಎಐ (AI) ಆಧಾರಿತ ಯುದ್ಧ ವ್ಯವಸ್ಥೆಗಳ ಮೇಲೆ ಹೆಚ್ಚಿನ ಗಮನ.
ಗಡಿ ಮೂಲಸೌಕರ್ಯ
: ಗಡಿ ರಸ್ತೆ ಸಂಸ್ಥೆಗೆ (BRO) ಹೆಚ್ಚಿನ ಅನುದಾನ ನೀಡುವ ಮೂಲಕ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ವೇಗ ನೀಡಲಾಗುವುದು.
# 4. ನಿವೃತ್ತಿ ವೇತನ ಮತ್ತು ಕಲ್ಯಾಣ
ರಕ್ಷಣಾ ಪೆನ್ಷನ್:
ಅನುಭವಿ ಸೈನಿಕರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಪೆನ್ಷನ್ ಮೊತ್ತವನ್ನು ₹1.71 ಲಕ್ಷ ಕೋಟಿಗೆ ಏರಿಸಲಾಗಿದೆ.
#🎥 Motivational ಸ್ಟೇಟಸ್ 12ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಹಾರ್ದಿಕ ಶುಭಾಶಯಗಳು.
#madivalamachideva
#🎥 Motivational ಸ್ಟೇಟಸ್ ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿ ಕೂಡಲೇ ಗಡಿಪಾರು (Deport) ಮಾಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜನವರಿ 28, 2026ರಂದು ನಡೆದ ವಿಚಾರಣೆಯಲ್ಲಿ, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಉಳಿದುಕೊಂಡಿರುವವರು ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿಯರನ್ನು ತಕ್ಷಣವೇ ಅವರ ದೇಶಗಳಿಗೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ಸವಾಲು ಎದುರಾಗುವ ಸಾಧ್ಯತೆಯಿರುವುದರಿಂದ, ಇವರನ್ನು ಪತ್ತೆಹಚ್ಚಲು ವಿಶೇಷ ಅಭಿಯಾನ ನಡೆಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಈ ಆದೇಶದ ಬೆನ್ನಲ್ಲೇ ಪೊಲೀಸರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಅಲ್ಲದೆ, ವಿದೇಶಿ ಪ್ರಜೆಗಳಿಗೆ ಮನೆ ನೀಡುವ ಮುನ್ನ ಮಾಲೀಕರು ಅವರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
#KarnatakaHighCourt #IllegalImmigrants #DeportationOrder #ForeignNationals #SANewsKarnataka #KannadaNews #Karnataka
#🎥 Motivational ಸ್ಟೇಟಸ್ ಮಹಾರಾಷ್ಟ್ರ ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀಮತಿ ಸುನೇತ್ರಾಅಜಿತ್ ಪವಾರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು🌷🙏
ನಿಮ್ಮ ನಾಯಕತ್ವ ಮಹಿಳೆಯರಿಗೆ ಶಕ್ತಿ ಹಾಗೂ ಆಶಾಕಿರಣವಾಗಲಿ🌷🙏
#sunetraajitpawar #FirstWomanDeputyCM #maharashtra
#🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 ಶಬ್ದ ಗಾರುಡಿಗ, ಜ್ಞಾನಪೀಠ ಪ್ರಶಸ್ತಿ ವಿಜೇತ ದ.ರಾ. ಬೇಂದ್ರೆ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ🌷
ನಾಡಿನ ಮಣ್ಣಿನ ಸೊಗಡನ್ನು, ಬದುಕಿನ ತತ್ವಗಳನ್ನು ಕವಿತೆಯಾಗಿಸಿದ ಅವರ ಲಯಬದ್ಧ ಸಾಹಿತ್ಯ ನಮಗೆ ಸದಾ ಪ್ರೇರಣೆ. ಅಂಬಿಕಾತನಯದತ್ತರ ಕಾವ್ಯ ಚಿಂತನೆಗಳು ನಮ್ಮ ಮನದಲ್ಲಿ ಅಮರವಾಗಿರಲಿ🌷🌷🙏
#ದರಾಬೇಂದ್ರೆ
#🎥 Motivational ಸ್ಟೇಟಸ್ *ವಿದೇಶಿಗರು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ. ನಾವು ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಮಾರುಹೋಗುತ್ತಿದ್ದೇವೆ.ಇದು ದುರಂತವೇ ಸರಿ*😌😌🤔🫣🤭😍🌷🙏👌♥️
#🎥 Motivational ಸ್ಟೇಟಸ್ 1) ತಾಲ್ಲೂಕು ಕಚೇರಿಯಲ್ಲಿ ಲಂಚ
2) ಜಿಲ್ಲಾ ಕಚೇರಿಯಲ್ಲಿ ಲಂಚ
3) ನಗರಸಭೆಯಲ್ಲಿ ಲಂಚ
4) ಪೊಲೀಸ್ ಸ್ಟೇಷನ್ ನಲ್ಲಿ ಲಂಚ
5) ಗ್ರಾಮ ಪಂಚಾಯಿತ್ತಿ ಲಂಚ
6) BBMP ಎಲ್ಲಿ ಲಂಚ
7) KEB ಯಲ್ಲಿ ಲಂಚ
8.) ಕೃಷಿ ಇಲಾಖೆಯಲ್ಲಿ ಲಂಚ
9) PWD ಲಂಚ
10) BEO ಕಚೇರಿಯಲ್ಲಿ ಲಂಚ
11) ಸರ್ಕಾರಿ ಕೆಲಸಕ್ಕೆ ಲಂಚ
12) ಟ್ರಾಫಿಕ್ ಪೊಲೀಸ್ ಲಂಚ
13) ರಾಜ್ಯದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ...
14) ನಿರುದ್ಯೋಗ ) ಸಮಸ್ಯೆ ಇದೆ...
15) ಗುಂಡಿ ಬಿದ್ದಿರುವ ರಸ್ತೆಗಳು
16) ರೈತರ ಆತ್ಮಹತ್ಯೆ
17) ಬೆಲೆಯೇರಿಕೆ
18) ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಹಾಳಾಗಿವೆ
19) ಕಲಬೆರಿಕೆ ಆಹಾರ ಪದಾರ್ಥ
20) ಮರಳು ಗಾಣಿಗರಿಕೆ
21) ಕಲುಷಿತ ನೀರು, ಕಲುಷಿತ ಗಾಳಿ
ದುಡಿಯುವ ದುಡ್ಡು , ಕಟ್ಟುವ ತೆರಿಗೆ ಎಲ್ಲಾ ರಾಜಕಾರಣಿಗಳ ಖಜಾನೆಗೆ.... JCB ಪಕ್ಷದವರು ಎಲ್ಲಾ ಭ್ರಷ್ಟರು... ಈ ಮೂರು ಪಕ್ಷದವರು ಭ್ರಷ್ಟಾಚಾರ ಮಾಡಿದ್ದಾರೆ...
ಇದಕೆಲ್ಲಾ ಮೂಲ ಕಾರಣ ನಾವು ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ, ಹಣಕ್ಕೆ ಮತ ಹಾಕೋದು...
ರಾಜಕೀಯದಲ್ಲಿ ಜನರ ದುಡ್ಡು ಇದೆ...
1) ಖಾಸಗಿ ಶಾಲೆ ಮಾಲಿಕರು ರಾಜಕಾರಣಿಗಳು....
2) ಸಕ್ಕರೆ ಕಾರ್ಖಾನೆ ಮಾಲಿಕರು ರಾಜಕಾರಣಿಗಳು....
2) DCC ಬ್ಯಾಂಕ್ ನಿರ್ದೇಶಕರು ರಾಜಕಾರಣಿಗಳು
2) ಖಾಸಗಿ ಆಸ್ಪತ್ರೆ ಮಾಲಿಕರು ರಾಜಕಾರಣಿಗಳು....
3) ವೈನ್ ಸ್ಟೋರ್ ಮಾಲಿಕರು ರಾಜಕಾರಣಿಗಳು..
4) ಗಣಿಗಾರಿಕೆ ಮಾಲಿಕರು ರಾಜಕಾರಣಿಗಳು..
5) ಮೆಡಿಕಲ್ ಕಾಲೇಜು ಮಾಲಿಕರು ರಾಜಕಾರಣಿಗಳು..
6) ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಿಗಳು...
ಪ್ರಸನ್ನ ಕುಮಾರ್ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಚಾಮರಾಜನಗರ 9886884668
ಇದೆಲ್ಲಾ ಗೊತ್ತಿದ್ದರೂ ಅದೇ ರಾಜಕಾರಣಿಗಳಿಗೆ 500 ರೂಪಾಯಿಗೆ ಮತ ಹಾಕುವ ನಮ್ಮ ಜನರು...
#🎥 Motivational ಸ್ಟೇಟಸ್ *ಬಿಜೆಪಿಯ ಅಚ್ಚರಿಯ ಆಯ್ಕೆಗಳಿಗೆ ಇವೆಲ್ಲ ಕೆಲವು ನಿದರ್ಶನಗಳು...!!!*
🪷🪷🪷
ಪಕ್ಷದ ಹಾಗೂ ಸಾಂವಿಧಾನಿಕ ಹುದ್ದೆಗಳಿಗೆ ಅಚ್ಚರಿಯ ಆಯ್ಕೆ ಮಾಡಿ ಯಶಸ್ವಿ ಆಗುವುದ್ರಲ್ಲಿ ಬಿಜೆಪಿಯನ್ನು ಮೀರಿಸಲು ಯಾರ್ಗೂ ಸಾಧ್ಯವಿಲ್ಲ.
ಮಧ್ಯಪ್ರದೇಶದಲ್ಲಿ ಸತತ 4 ಸಲ ಮುಖ್ಯಮಂತ್ರಿ ಆಗಿ, 5ನೇ ಬಾರಿಗೆ ಕೂಡ ಪಕ್ಷಕ್ಕೆ ಭರ್ಜರಿ ಬಹುಮತ ತಂದುಕೊಟ್ರೂ ಶಿವರಾಜ್ ಸಿಂಗ್ ಚೌಹಾಣ್ 5 ನೇ ಬಾರಿ ಮಾತ್ರ ಮುಖ್ಯಮಂತ್ರಿ ಆಗ್ಲಿಲ್ಲ.ಆಗ ಮುಖ್ಯಮಂತ್ರಿ ಆದವರು ಅಷ್ಟಾಗಿ ಪರಿಚಯವಿರದ ಯುವ ನೇತಾರ "ಮೋಹನ್ ಯಾದವ್".
ಅಸ್ಸಾಂ ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ "ಸರ್ಬಾನಂದ ಸೋನೋವಾಲ್" ಮೋದಿಜೀಯವರ ಖಟ್ಟರ್ ಅಭಿಮಾನಿ ಆಗಿದ್ರೂ ಕೂಡ 2ನೇ ಬಾರಿಗೆ ಮಾತ್ರ ಮುಖ್ಯಮಂತ್ರಿಯಾಗಿ ಮುಂದುವರೆಯಲಿಲ್ಲ.ಆಗ ಮುಖ್ಯಮಂತ್ರಿಯಾದವರು "ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿದ್ದ ಹಿಮಂತ ಬಿಸ್ವಾ ಶರ್ಮ" ಎಂಬ ಖಟ್ಟರ್ ಹಿಂದುತ್ವವಾದಿ.
ಗುಜರಾತ್ನಲ್ಲಿ ಮೊದಲ ಬಾರಿ ಶಾಸಕರಾಗಿ ಮುಖ್ಯಮಂತ್ರಿ ಹುದ್ದೆಗೇರಿ ಆಯ್ಕೆಯಾದವರು "ಭೂಪೇಂದ್ರ ಪಟೇಲ್" ಅವರು.
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿ ಮತ್ತೆ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದಾಗ ಅಲ್ಲಿ ಕೂಡ ಮುಖ್ಯಮಂತ್ರಿ ಆಗಿದ್ದು "ಇವರ ಹೆಸರನ್ನು ಯಾರೂ ಕೂಡ ಕೇಳಿರದ" ರೇಖಾ ಗುಪ್ತ ಅವರು.
ಮಹಾರಾಷ್ಟ್ರದಲ್ಲಿ ಕೂಡ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದು ಕೂಡ "ಅಷ್ಟೇನೂ ಚಿರಪರಿಚಿತರಾಗಿರದ, ಈಗ ಜನಪ್ರಿಯರಾದ" ದೇವೇಂದ್ರ ಫಡ್ನವಿಸ್ ಅವರು.
ಛತ್ತೀಸ್ಗಢದ ಭೂಪೇಶ್ ವಘೇಲ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ,ಮುಖ್ಯಮಂತ್ರಿ ಆಗಿದ್ದು "ಈಗಲೂ ಅವರ ಹೆಸರನ್ನು ಹಲವರು ಕೇಳಿರದ" ವಿಷ್ಣು ದೇವ್ ಸಾಯ್ ಅವರು.
ಈ ಪರಂಪರೆ ಈಗಲೂ ಮುಂದುವರೆದಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಮಾಧ್ಯಮಗಳ ಊಹೆ ಥರಥರಾವರಿಯದಾಗಿತ್ತು. ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಮುಂತಾಗಿ ಹೆಸರು
ಗಳು ತೇಲಿಬಂದಿದ್ವು. ಬಿಜೆಪಿಯ ಉನ್ನತ ಸ್ತರದ ಪದಾಧಿಕಾರಿಗಳಿಗೂ ಕೂಡ ಅದರ ಸುಳಿವಿರ್ಲಿಲ್ಲ.
ಯಾಕೆಂದ್ರೆ ಹಿಂದೆಲ್ಲ ಒಂದು ರಾಷ್ಟ್ರೀಯ ಪಕ್ಷ ವನ್ನು ಮುನ್ನಡೆಸುವ ಹೊಣೆಯನ್ನು "ಅನುಭವ ಇರ್ತದೆ, ವಯಸ್ಸಿನಲ್ಲಿ ಮಾಗಿರ್ತ್ತಾರೆ,ತಂತ್ರಗಳನ್ನು ರೂಪಿಸೋದ್ರಲ್ಲಿ ನಿಪುಣರಾಗಿರ್ತಾರೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ" ಹಿರಿಯ ನಾಯಕರಿಗೆ ಮುನ್ನಡೆಸುವ ಹೊಣೆಯನ್ನು ಹೊರಿಸಲಾಗ್ತಿತ್ತು.
ಆದ್ರೆ ಇದುವರೆಗೂ ಬಿಜೆಪಿ ಪಕ್ಷವು ಒಂದು ಬಾರಿಯೂ ಗೆಲ್ಲಲಾಗದ ತಮಿಳುನಾಡು,
ಕೇರಳ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ 45 ರ ಹರೆಯದ ಯಾರ್ಗೂ ಅಷ್ಟಾಗಿ ಪರಿಚಯವಿರದ ನಿತಿನ್ ನಬೀನ್ ಎಂಬ ಯುವಕನೊಬ್ಬನನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನಿಯುಕ್ತಿ ಮಾಡಿದಾರೆ ಅಂದ್ರೆ ಬಿಜೆಪಿ ವರಿಷ್ಠರ ಎಂಟೆದೆಯ ಧೈರ್ಯ
ವನ್ನು ಮೆಚ್ಲೇಬೇಕು. ಕಳೆದ ವಾರ ಬಿಹಾರ ಮೂಲದ 45 ರ ಹರೆಯದ ನಿತಿನ್ ನಬಿನ್ ಅವರು ಅವಿರೋಧವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಹಾರದಲ್ಲಿ ನಿತಿನ್ ನಬೀನ್ ಅವರು ಶ್ರೀಮಂತರ ಪ್ರತಿಷ್ಠಿತ ಕುಟುಂಬದವರಲ್ಲ. ಅವರ ತಂದೆ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಜೆಪಿಯ ಶಾಸಕರಾಗಿದ್ರು ಎನ್ನುವುದನ್ನು ಬಿಟ್ರೆ ನಿತಿನ್ ಅವರಿಗೆ ಬೇರೆ ಯಾವ ರಾಜಕೀಯ ಹಿನ್ನಲೆಯೂ ಇಲ್ಲ. ಕಾಯಸ್ಥ ಸಮುದಾಯಕ್ಕೆ ಸೇರಿದ ನಿತಿನ್ ಹುಟ್ಟಿದ್ದು ಝಾರ್ಖಂಡ್ಗೆ ಸೇರಿದ ರಾಂಚಿಯಲ್ಲಿ 1980 ರ ಮೇ 23 ರಂದು. ಅಚ್ಚರಿ ಅಂದ್ರೆ ಬಿಜೆಪಿ ಸಂಸ್ಥಾಪನೆಯಾಗಿದ್ದು 1980ರ ಏಪ್ರಿಲ್ 6 ರಂದು! ಬಿಜೆಪಿ ಸ್ಥಾಪನೆಯಾಗಿ 45 ವರ್ಷ. ನಿತಿನ್ ನಬೀನ್ ಅವರಿಗೂ ಈಗ 45ರ ಹರೆಯ. ಪತ್ನಿ ದೀಪಮಾಲ ಶ್ರೀವಾಸ್ತವ. ಒಂದು ಗಂಡು, ಒಂದು ಹೆಣ್ಣು ಸಂತಾನ ಇರುವ ಪುಟ್ಟ ಕುಟುಂಬ.
ಬಿಹಾರದಲ್ಲಿ ನಿತಿನ್ ನಬೀನ್ ಬಿಜೆಪಿ ಈ ಬಾರಿ ಅತಿ ಹೆಚ್ಚು ಶಾಸಕರನ್ನು ಹೊಂದುವಂತಾಗುವು ದ್ರಲ್ಲೂ ಶ್ರಮಿಸಿದ್ರು.ನಿತಿನ್ ನಬೀನ್ ಅವರು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಹುದ್ದೆ ನಿರ್ವಹಿಸಿ ದೇಶದುದ್ದಗಲದ ರಾಜಕೀಯ ಸಮೀಕರಣವನ್ನೂ ಬಲ್ಲವರು. ದೆಹಲಿಗೆ ನಿಮ್ಮ ವಸತಿಯನ್ನು ಬದಲಾಯಿಸಬೇಕಾಗುತ್ತದೆ ಎಂದು ಅಮಿತ್ ಶಾ ಕೆಲವು ದಿನಗಳ ಮೊದಲು ಸೂಚಿಸಿದಾಗ "ತನ್ನನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾಡಬಹುದೆಂದು" ನಿತಿನ್ ಭಾವಿಸಿದ್ರಂತೆ. ಆದರೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡ್ಬಹುದು ಎಂಬ ಕಲ್ಪನೆ ಅವರಿಗೂ ಇರ್ಲಿಲ್ಲ.
ಬಿಜೆಪಿಯು ಕಾರ್ಯಕರ್ತರ ಶ್ರಮದ ಮೇಲೆಯೇ ಅಷ್ಟೆತ್ತರಕ್ಕೆ ಏರಿರುವ ಪಕ್ಷ. ಅಧ್ಯಕ್ಷರು ಯಾರೇ ಆಗಿರ್ಲಿ ಪಕ್ಷದ ಸೋಲು-ಗೆಲುವುಗಳು ಕಾರ್ಯಕರ್ತರನ್ನೇ ಅವಲಂಬಿಸಿದೆ. ಆದರೆ ಯಾವ ಅಧ್ಯಕ್ಷರೂ ಇದುವರೆಗೂ ಯಾರದ್ದೋ ಕೈಗೊಂಬೆಯಾಗಿ ವರ್ತಿಸಿ ನಿಷ್ಕ್ರಿಯರೆನಿಸಿ ಕೊಂಡಿಲ್ಲ.ಹೋರಾಟದ ಹಿನ್ನೆಲೆಯಿಂದಲೇ ಅಧ್ಯಕ್ಷ ಗಾದಿಗೇರಿರುವುದರಿಂದ ಕಾರ್ಯಕರ್ತರ ನಾಡಿ ಬಡಿತ ಹೇಗಿರುತ್ತದೆ? ಎಂಬುದು ಅವರಿಗೆ ಗೊತ್ತಿರುತ್ತದೆ. ಇತರೆ ಪಕ್ಷಗಳಲ್ಲಿರುವಂತೆ ಅಧ್ಯಕ್ಷರು ತಮ್ಮ ಸುತ್ತಮುತ್ತ ಠಳಾಯಿಸುವ ಪಟಾಲಂ ಮಾತನ್ನೇ ನಿಜವೆಂದು ಭಾವಿಸುವ ಕೆಟ್ಟ ಪರಿಪಾಠ ಬಿಜೆಪಿಯಲ್ಲಿಲ್ಲ. ಪಟಾಲಂ ಮಾತನ್ನೆ ನಂಬಿ ಕಾರ್ಯಕರ್ತರ ಮಾತನ್ನು ಕಡೆಗಣಿಸಿದರೆ ಯಾವ ಪರಿ ಪಶ್ಚಾತ್ತಾಪ ಪಡಬೇಕಾದೀತೆಂಬ ಅಂದಾಜು ಅಧ್ಯಕ್ಷ ಗಾದಿಗೇರಿದವರಿಗೆ ಇದ್ದೇ ಇರುತ್ತದೆ,ಇರ್ಬೇಕು ಕೂಡ. ಬಿಜೆಪಿಯು A Party with a difference ಎಂಬ ಪ್ರಶಂಸೆಗೆ ಪಾತ್ರವಾಗಿರುವುದಕ್ಕೂ ಇದೇ ಕಾರಣ.
ಆದರೆ ಬಿಜೆಪಿ ಈ ಬಾರಿ ಯುವ ನಾಯಕನಿಗೆ ಮಣೆ ಹಾಕಿ ಹೊಸ ಪ್ರಯೋಗಕ್ಕೆ ಕೈ ಹಾಕುವ ಸಾಹಸ ಮಾಡಿದೆ.ಹಾಗಂತ ನಿತಿನ್ ನಬೀನ್ ಅನನುಭವಿಯೇನೂ ಅಲ್ಲ. ಪಶ್ಚಿಮ ಪಾಟ್ನಾದಿಂದ ಒಂದು ಬಾರಿ ಹಾಗೂ ಬಂಕಿಪುರ ಕ್ಷೇತ್ರದಿಂದ ಸತತ ನಾಲ್ಕು ಬಾರಿ.ಹೀಗೆ ಒಟ್ಟು 5 ಬಾರಿ ಬಿಹಾರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ
ದ್ದಾರೆ. ಸಂಪುಟ ದರ್ಜೆಯ ಸಚಿವರಾಗಿ ರಸ್ತೆ, ನಗರಾಭಿವೃದ್ಧಿ, ಕಾನೂನು ಇತ್ಯಾದಿ ಇಲಾಖೆ ಗಳನ್ನು ನಿರ್ವಹಿಸಿದ್ದಾರೆ. ಛತ್ತೀಸ್ಗಢ, ದೆಹಲಿ, ಸಿಕ್ಕಿಂ ಮೊದಲಾದ ರಾಜ್ಯಗಳ ಚುನಾವಣೆಯಲ್ಲಿ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ.
ಛತ್ತೀಸ್ಗಢದಲ್ಲಿ ಮತ್ತೆ ಭೂಪೇಶ್ ವಘೇಲಾ ಅವರ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೇರಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದ್ದವು. ಆದರೆ ಆದದ್ದೇ ಬೇರೆ. ಬಿಜೆಪಿಗೆ ಅಲ್ಲಿ ಸ್ಪಷ್ಟ ಬಹುಮತ ದೊರಕಿತ್ತು. ದಿಲ್ಲಿಯಲ್ಲೂ ಆಮ್ ಆದ್ಮಿ ಪಕ್ಷ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇವರೆಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರು ವಂತೆ ಮಾಡುವಲ್ಲಿ ನಿತಿನ್ ನಬೀನ್ ಅವರ ತಂತ್ರಗಾರಿಕೆ, ಸಂಘಟನಾತ್ಮಕ ಕಾರ್ಯವು ಗೆಲುವು ಸಾಧಿಸಿತ್ತು. ಸದ್ಯದ ರಾಜಕೀಯ ವ್ಯವಸ್ಥೆ , ಚುನಾವಣೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಅಪಾರ ಜ್ಞಾನ ನಿತಿನ್ಗೆ ಇದೆ. ಮೋದಿ ಮತ್ತು ಅಮಿತ್ ಶಾ ಅವರಂತಹ ಘಟಾನುಘಟಿ ನಾಯಕರ ಬೆಂಬಲವಂತೂ ಅವರಿಗೆ ಸದಾ ಶ್ರೀರಕ್ಷೆಯಾಗಿದೆ.
45ರ ಹರೆಯದ ಯುವ ನಾಯಕನೊಬ್ಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪದವಿಗೇರಿದ್ದನ್ನು ಸಹಿಸಲಾಗದ ಕೆಲವು ಬಿಜೆಪಿ ವಿರೋಧಿಗಳು ನಾನಾ ಬಗೆಯ ಅಪಪ್ರಚಾರಕ್ಕೆ ಈಗ ಮುಂದಾಗಿರುವುದು ನಿರೀಕ್ಷಿತ ಬೆಳವಣಿಗೆಯೇ. “ನಿತಿನ್ ನಬೀನ್ ಏನಿದ್ದರೂ ಮೋದಿಜೀ, ಶಾಜೀ ಅವರ ಕೈಗೊಂಬೆ.ಅಡ್ವಾಣಿ, ಜೋಶಿ ಅಂತಹವರನ್ನೇ ಬದಿಗೆ ಸರಿಸಿದವರಿಗೆ ನಿತಿನ್ ನಬೀನ್ ಯಾವ ಲೆಕ್ಕ? ನಿತಿನ್ ಆಯ್ಕೆಗೆ RSS ಗೆ ಸಹಮತವಿರಲಿಲ್ಲ" ಹೀಗೆ ಇತ್ಯಾದಿ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಬಿಜೆಪಿ ಕೋಟಿಗಟ್ಟಲೆ ಪಕ್ಷದ ನಿಧಿ ಸಂಗ್ರಹಿಸಿದೆ. ದೇಶದಾದ್ಯಂತ ಪಕ್ಷದ ಭವ್ಯ ಕಚೇರಿಗಳನ್ನು ನಿರ್ಮಿಸಿದೆ ಎಂಬ ಟೀಕೆಗಳೂ ಕೇಳಿಬಂದಿವೆ. ಬಿಜೆಪಿ ಅನೈತಿಕ ಮಾರ್ಗದಲ್ಲಿ ಹಣ ಸಂಗ್ರಹಿಸಿದ್ರೆ, ಅಕ್ರಮವಾಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಿದ್ರೆ ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವ ಅವಕಾಶ ವಿರೋಧಿಗಳಿಗೆ ಇದೆ. ಹೋರಾಡಲಿ.ಅದು ಬಿಟ್ಟು ಬರಿದೇ ಆರೋಪ ಗಳನ್ನೆಸಗಿ "ಹಿಟ್ ಆಂಡ್ ರನ್" ಸೂತ್ರ ಅನುಸರಿಸಿದರೆ ಏನು ಪ್ರಯೋಜನ?
ರಾಜಕೀಯ ರಂಗದಲ್ಲಿ ಇದುವರೆಗಿನ ಅನುಭವ, ಪಕ್ಷದ ವರಿಷ್ಠರ ಭೀಮಬಲದ ಬೆಂಬಲ, ಜೊತೆಗೆ ಕಾರ್ಯಕರ್ತರ ಅಚಲ ಸಹಕಾರದ ಬಲದಿಂದಾಗಿ ಪಕ್ಷವನ್ನು ಮುನ್ನಡೆಸುವುದು ನಬೀನ್ ಅವರಿಗೆ ಕಷ್ಟದ ಸಂಗತಿಯಾಗಲಿಕ್ಕಿಲ್ಲ. ಆದರೆ ಹಾಗಂತ ಅವರಿಗೆ ಸವಾಲುಗಳೇನೂ ಇಲ್ಲವೆಂದಲ್ಲ. ಇದುವರೆಗೆ ಒಮ್ಮೆಯೂ ಅಧಿಕಾರಕ್ಕೇರಲಾಗದ ಕೇರಳ, ತಮಿಳುನಾಡು , ಪಶ್ಚಿಮ ಬಂಗಾಳ ಚುನಾವಣೆಗಳು ಅವರಿಗೆ ಸವಾಲಾಗಿ ನಿಂತಿವೆ. ಆ ರಾಜ್ಯಗಳಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ನಿತಿನ್ ನಬೀನ್ರವರು ಅಪಾರ ಶ್ರಮವಲ್ಲದೆ ತಂತ್ರಗಾರಿಕೆಯನ್ನೂ ಹೆಣೆಯಬೇಕಾಗುತ್ತದೆ.
ಕೇಂದ್ರದಲ್ಲಿ ಬಿಜೆಪಿ ಮಿತ್ರಪಕ್ಷಗಳ ಸಹಕಾರ ದೊಂದಿಗೆ ಅಧಿಕಾರ ನಡೆಸುತ್ತಿದೆ. ಈ ಮಿತ್ರರನ್ನು ಸಂಭಾಳಿಸಬೇಕಾಗುತ್ತದೆ. ಈಗೇನೋ ಮಿತ್ರರು ಹೊಂದ್ಕೊಂಡಿದ್ದಾರೆ. ಆದರೆ ಕಾಲ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ.ರಾಜಕೀಯ ಇಂದಿದ್ದಂತೆ ಮುಂದೆಯೂ ಇರುತ್ತದೆಂದು ಹೇಳಕ್ಕೆ ಆಗಲ್ಲ.ದೇಶದ ಜನರಿಗೆ ಯುವನಾಯಕ ಆಗಿರುವ ನಿತಿನ್ ಅದನ್ನೆಲ್ಲ ಹೇಗೆ ನಿರ್ವಹಿಸುತ್ತಾರೆಂಬ ಕುತೂಹಲವಂತೂ ಇರುತ್ತದೆ.
ಹೇಳಿ ಕೇಳಿ ಇದು ಜೆನ್ ಝೀಗಳ ಯುಗ. ಯುವ ಪೀಳಿಗೆಯೇ ದೇಶದ ಆಗುಹೋಗುಗಳನ್ನು ನಿರ್ಣಯಿಸುವ ಕಾಲಘಟ್ಟದಲ್ಲಿ ನಿತಿನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಅತ್ಯಂತ ಸಕಾಲಿಕ. ಯುವಕರನ್ನು ಮತ್ತಷ್ಟು ಪ್ರಮಾಣದಲ್ಲಿ ಪಕ್ಷದತ್ತ ಸೆಳೆಯುವ ಸವಾಲು ಕೂಡ ಅವರ ಮುಂದಿದೆ.
ಯುವನಾಯಕನೊಬ್ಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪದವಿಗೇರಿರುವ ವಿದ್ಯಮಾನವು ಕರ್ನಾಟಕ ರಾಜ್ಯ ಬಿಜೆಪಿಗೂ ಒಂದು ಎಚ್ಚರಿಕೆಯ ಸಂದೇಶ ವನ್ನು ರವಾನಿಸಿದೆ. ಕೆಲವು ಹಿರಿಯ ನಾಯಕರ ಸ್ವಪ್ರತಿಷ್ಟೆ , ಅಹಂಗಳಿಂದ ರಾಜ್ಯ ಬಿಜೆಪಿಯು "ಮನೆಯೊಂದು ಮೂರು ಬಾಗಿಲು" ಆಗ್ಬಾರ್ದೆಂಬ ಸ್ಪಷ್ಟ ಸಂದೇಶ ಅದ್ರಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಅಂತ್ಯಗೊಳ್ಳಬೇಕಾದರೆ ಈ ಸ್ಪಷ್ಟ ಸಂದೇಶವನ್ನು ರಾಜ್ಯ ಬಿಜೆಪಿ ಅನುಷ್ಠಾನಕ್ಕೆ ತರಲೇಬೇಕಾಗಿದೆ. (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,)
*ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂಥೆ ಉರಿಯುವಾ🔥🔥🚩*
*ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ*🙏🏻🚩












