ರಾಜ್ಯದಲ್ಲಿ ಮಳೆ ಕೊರತೆಯಾದ ಹಿನ್ನಲೆ ಯಾದಗಿರಿ ತಾಲೂಕಿನ ಹಳ್ಳಿಗೇರಾ ಗ್ರಾಮದ ಭಕ್ತರು ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಪೂಜೆ ಮಾಡಿದರು.ಪೂಜೆ ಸಂದರ್ಭದಲ್ಲಿಯೇ ಮಲ್ಲಯ್ಯನ ಪವಾಡ ನಡೆದಿದ್ದು ಅಚ್ಚರಿಗೆ ಕಾರಣವಾಯಿತು.ಮಲ್ಲಯ್ಯನ ಮೂರ್ತಿಯಿಂದ ಹೂವುಗಳು ಉದುರಿದವು.ಇದು ಮಳೆಗಾಗಿ ಮಲ್ಲಯ್ಯ ಆಶೀರ್ವಾದ ಮಾಡಿದ್ದಾನೆಂದು ಭಕ್ತರ ಮಾತಾಗಿದೆ. #🔱 ಭಕ್ತಿ ಲೋಕ