💫 *Holi Full Moon*
💫 *Kama Dahana*
💫 *Lunar Eclipse*
💫 *World Wildlife Day*
💫 *Chaitanya Mahaprabhu Jayanti*
*Sunrise:* 06:35 AM
*Sunset:* 6:29 PM
*Auspicious Time:* 05:09 AM to 06:44 AM
*Inauspicious Time:* 08:57 AM to 09:45 AM and 11:19 PM to 12:07 AM
*Rahu Kala:* 03:00 PM to 04:30 PM
*Gulika Kala:* 12:00 PM to 1:30 PM
*Yamaganda Kala:* 09:00 AM to 10:30 AM Until
*Ardha Prahara:* Morning 07:30 to 09:00
*Tithi:* Full Moon Evening 05:07 then Padya
*Nakshatra:* Makha Morning 07:31 then Hubba
*Karan:* Vishti Morning 05:28 then Bava Evening 05:07 then Balava
*Yoga:* Sukarma Morning 10:25 then Dhruti.
#Sanatana Daily panchaga
_For more information..._
WhatsApp Group:⬇️
Sanatan Panchanga:
https://chat.whatsapp.com/GN6DkB3COEGCPllU4XYQou
💫 *ಹೋಳಿ ಹುಣ್ಣಿಮೆ*
💫 *ಕಾಮ ದಹನ*
💫 *ಚಂದ್ರ ಗ್ರಹಣ*
💫 *ವಿಶ್ವ ವನ್ಯಜೀವಿ ದಿನ*
💫 *ಚೈತನ್ಯ ಮಹಾಪ್ರಭು ಜಯಂತಿ*
*ಸೂರ್ಯೋದಯ:* ಬೆಳಿಗ್ಗೆ ಗಂಟೆ 06:35
*ಸೂರ್ಯಾಸ್ತ:* ಸಾಯಂಕಾಲ ಗಂಟೆ 6:29
*ಶುಭ ಸಮಯ:* ಬೆಳಿಗ್ಗೆ ಗಂಟೆ 05:09 ರಿಂದ 06:44 ತನಕ
*ಅಶುಭ ಸಮಯ:* ಬೆಳಿಗ್ಗೆ ಗಂಟೆ 08:57 ರಿಂದ 09:45 ತನಕ ಹಾಗೂ ರಾತ್ರಿ ಗಂಟೆ ಗಂಟೆ 11:19 ರಿಂದ 12:07 ತನಕ
*ರಾಹು ಕಾಲ:* ಅಪರಾಹ್ನ ಗಂಟೆ 03:00 ರಿಂದ 04:30 ತನಕ
*ಗುಳಿಕ ಕಾಲ:* ಮಧ್ಯಾಹ್ನ ಗಂಟೆ 12:00 ರಿಂದ ಅಪರಾಹ್ನ ಗಂಟೆ 01:30 ತನಕ
*ಯಮಗಂಡ ಕಾಲ:* ಬೆಳಿಗ್ಗೆ ಗಂಟೆ 09:00 ರಿಂದ ಗಂಟೆ 10:30 ತನಕ
*ಅರ್ಧ ಪ್ರಹರ:* ಬೆಳಿಗ್ಗೆ ಗಂಟೆ 07:30 ರಿಂದ 09:00 ತನಕ
*ತಿಥಿ:* ಹುಣ್ಣಿಮೆ ಸಾಯಂಕಾಲ ಗಂಟೆ 05:07 ತನಕ ನಂತರ ಪಾಡ್ಯ
*ನಕ್ಷತ್ರ:* ಮಖಾ ಬೆಳಿಗ್ಗೆ ಗಂಟೆ 07:31 ತನಕ ನಂತರ ಹುಬ್ಬಾ
*ಕರಣ:* ವಿಷ್ಟಿ ಬೆಳಿಗ್ಗೆ ಗಂಟೆ 05:28 ತನಕ ನಂತರ ಬವ ಸಾಯಂಕಾಲ ಗಂಟೆ 05:07 ತನಕ ನಂತರ ಬಾಲವ
*ಯೋಗ:* ಸುಕರ್ಮಾ ಬೆಳಿಗ್ಗೆ ಗಂಟೆ 10:25 ತನಕ ನಂತರ ಧೃತಿ.
#ಸನಾತನ ನಿತ್ಯ ಪಂಚಾಗ
_ಹೆಚ್ಚಿನ ಮಾಹಿತಿಗಳಿಗಾಗಿ..._
WhatsApp Group:⬇️
ಸನಾತನ ಪಂಚಾಂಗ:
https://chat.whatsapp.com/GN6DkB3COEGCPllU4XYQou
*ಸೂರ್ಯೋದಯ:* ಬೆಳಿಗ್ಗೆ ಗಂಟೆ 06:35
*ಸೂರ್ಯಾಸ್ತ:* ಸಾಯಂಕಾಲ ಗಂಟೆ 6:29
*ಶುಭ ಸಮಯ:* ಬೆಳಿಗ್ಗೆ ಗಂಟೆ 06:18 ರಿಂದ 07:51 ತನಕ
*ಅಶುಭ ಸಮಯ:* ಅಪರಾಹ್ನ ಗಂಟೆ 12:56 ರಿಂದ 01:43 ತನಕ ಹಾಗೂ ಅಪರಾಹ್ನ ಗಂಟೆ 03:18 ರಿಂದ 04:06 ತನಕ
*ರಾಹು ಕಾಲ:* ಬೆಳಿಗ್ಗೆ ಗಂಟೆ 07:30 ರಿಂದ 09:00 ತನಕ
*ಗುಳಿಕ ಕಾಲ:* ಅಪರಾಹ್ನ ಗಂಟೆ 01:30 ರಿಂದ 03:00 ತನಕ
*ಯಮಗಂಡ ಕಾಲ:* ಬೆಳಿಗ್ಗೆ ಗಂಟೆ 10:30 ರಿಂದ ಮಧ್ಯಾಹ್ನ ಗಂಟೆ 12:00 ತನಕ
*ಅರ್ಧ ಪ್ರಹರ:* ಬೆಳಿಗ್ಗೆ ಗಂಟೆ 09:00 ರಿಂದ10:30 ತನಕ
*ತಿಥಿ:* ಚತುರ್ದಶಿ ಸಾಯಂಕಾಲ ಗಂಟೆ 05:55 ತನಕ ನಂತರ ಹುಣ್ಣಿಮೆ
*ನಕ್ಷತ್ರ:* ಆಶ್ಲೇಷಾ ಬೆಳಿಗ್ಗೆ ಗಂಟೆ 07:51 ತನಕ ನಂತರ ಮಖಾ
*ಕರಣ:* ಗರಜ ಬೆಳಿಗ್ಗೆ ಗಂಟೆ 06:29 ತನಕ ನಂತರ ವನಿಜ ಸಾಯಂಕಾಲ ಗಂಟೆ 05:55 ತನಕ
*ಯೋಗ:* ಅತಿಗಂಡ ಅಪರಾಹ್ನ ಗಂಟೆ 12:19 ತನಕ ನಂತರ ಸುಕರ್ಮಾ.
#ಸನಾತನ ನಿತ್ಯ ಪಂಚಾಗ
_ಹೆಚ್ಚಿನ ಮಾಹಿತಿಗಳಿಗಾಗಿ..._
WhatsApp Group:⬇️
ಸನಾತನ ಪಂಚಾಂಗ:
https://chat.whatsapp.com/GN6DkB3COEGCPllU4XYQou
“ಶಿವ-ಪ್ರಿಯ” ವಿಷ್ಣುವಾದರೆ, “ವಿಷ್ಣು-ಪ್ರಿಯ” ಶಿವ -
ದೃಷ್ಟಿ ದೋಷವುಳ್ಳವರು ಬೇರೆ ಬೇರೆ ನೋಡುತ್ತಾರೆ:-
#🔱 ಭಕ್ತಿ ಲೋಕ
ವೈಕುಂಠಪತಿ ನಾರಾಯಣ ಮತ್ತು ಲಕ್ಷ್ಮಿಯ ಮಧ್ಯೆ ಏನೋ ಕಾರಣಕ್ಕೆ ಮಾತಿಗೆ ಮಾತಾಗಿ ಕೋಪಗೊಂಡು ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆಂದು ಅವಳು ಕೇಳಲಿಲ್ಲ. ಶಾಪದ ಪ್ರಭಾವದಿಂದ ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರಬೇಕಾ ಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ ಪತಿಯನ್ನು ಬಿಟ್ಟಿರ ಬೇಕಲ್ಲ ಎಂಬ ಹತಾಶೆ ನೋವು ಹೆಚ್ಚಾಗಿ, ತನ್ನ ಪತಿಯನ್ನು ಹೇಗಾದರೂ ಮಾಡಿ ಹತ್ತಿರ ಕರೆಸಿ ಕೊಳ್ಳಬೇಕು ಎಂಬ ಯೋಚನೆ ಬಂದಿತು. “ಶಿವ”ನನ್ನು ಕುರಿತು ಕಠಿಣ ತಪಸ್ಸು ಮಾಡಲು ಕುಳಿತಳು. ಅವಳ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ, ಲಕ್ಷ್ಮಿಯನ್ನು ಕೇಳಿದ ನೀನು ನನ್ನನ್ನು ಕುರಿತು ಏಕೆ ತಪಸ್ಸು ಮಾಡಿದೆ ನಿನಗೆ ಎಂತದೇ ಕಠಿಣ ಸಮಸ್ಯೆ ಬಂದರೂ ಜಗತ್ಪರಿಪಾಲಕನಾದ ಶ್ರೀ ಹರಿ ಚಿಟಿಕೆ ಹೊಡೆಯುವುದರಲ್ಲಿ ಸರಿಪಡಿಸುತ್ತಿದ್ದ. ಹೀಗಿರುವಾಗ ನನ್ನನ್ನು ಆರಾಧಿಸಿದ್ದು ಏಕೆ ಎಂದು ಕೇಳಿದ.
ಲಕ್ಷ್ಮಿಯು, ಮಹಾದೇವ, ನನ್ನ ಪತಿ ನಾರಾಯಣ ಯಾವಾಗಲೂ ಧ್ಯಾನ ಮಾಡುತ್ತಿ ದ್ದರು ಒಂದು ದಿನ ಕೇಳಿದೆ, ಸ್ವಾಮಿ, ತ್ರಿಪುರಾಂತಕರಾದ ನೀವು ಎಲ್ಲರಿಗೂ ಒಡೆಯ ಎಂದು ನಾನು ನಿಮ್ಮನ್ನು ಮದುವೆ ಯಾಗಿದ್ದು, ಹೀಗಿರುವಾಗ ನೀವು ಯಾರನ್ನು ಧ್ಯಾನಿಸಬೇಕು ಎಂದು ಕೇಳಿದೆ. ಶ್ರೀಹರಿ ನಕ್ಕು, ನಾನು ಶಿವನ ಧ್ಯಾನ ಮಾಡುವೆ “ಪರಮೇಶ್ವರ ನನ್ನ ಪ್ರಾಣ, ನಾನು ಪರಮೇಶ್ವರನ ಪ್ರಾಣ” ನಾವಿಬ್ಬರೂ ಬೇರೆ ಬೇರೆ ಅಲ್ಲ, ಇಬ್ಬರೂ ಒಂದೇ. ನನಗೆ ಶಿವನು ಪ್ರಿಯನಾದರೆ- ಶಿವನಿಗೆ ನಾನು ಪ್ರಿಯ. ಯಾರು ನಮ್ಮಿಬ್ಬರನ್ನು ಬೇರೆ ಬೇರೆ ಯಾಗಿ ನೋಡುತ್ತಾರೋ ಅವರು ದೃಷ್ಟಿ ದೋಷಿಗಳಾಗಿರುತ್ತಾರೆ. ಯಾರೇ ನನ್ನ ಭಕ್ತರಾಗಿರಲಿ ಶಿವನಿಗೆ ಅಗೌರವ ತೋರಿದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಅವರ ಪೂಜೆ -ಧ್ಯಾನ- ದಾನ - ಪಠಣ- ಬೋಧನೆ ಯಾವುದು ಫಲ ಕೊಡುವುದಿಲ್ಲ. ಇದೇ ಮಾತು ಶಿವನದು ಆಗಿದೆ. ಶಿವ ಭಕ್ತರಾದ ಯಾರೇ ಆದರೂ ವಿಷ್ಣುವಿಗೆ ಅಗೌರವ ತೋರಿ ದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಹಾಗೆ ಅವರ ಶಿವ ಧ್ಯಾನ- ಶಿವ ಪೂಜೆ- ದಾನ- ಧರ್ಮ ಎಲ್ಲವೂ ವ್ಯರ್ಥ. ಇದು ಶಿವ ಮತ್ತು ವಿಷ್ಣುವಿನ ಒಮ್ಮತ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಹಾಗೆ, ಪುರಾಣಗಳೂ ಇದನ್ನೆ ಹೇಳುತ್ತವೆ. ಆದರೆ ಕ್ಷುಲ್ಲಕ ಮನಸ್ಸಿನ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮಹಾನ್ ಪಂಡಿತರೆಂದು ತಿಳಿದವರೇ, ಶಿವ ಮತ್ತು ವಿಷ್ಣುವಿನ ನಡುವೆ ಭೇದ ಕಲ್ಪಿಸಿ ಸಮಾಜ ಒಡೆಯುವ ಪಾತಕಿಗಳಾಗುತ್ತಿದ್ದಾರೆ. ಭಗವಂತ ಒಬ್ಬನೇ ಅವನ ರೂಪ ಹಲವು, ಎಂದು ಜ್ಞಾನಿಗಳು, ವಿಚಾರವಂತರು, ಹೇಳುತ್ತಿದ್ದ ರೂ ಒಬ್ಬ ದೇವನನ್ನು ಛಿದ್ರ ಛಿದ್ರ ಮಾಡಿ ನಾನು ಮೇಲು, ತಾನು ಮೇಲು ಎಂದು ಸ್ವಯಂ ಘೋಷಣೆ ಮಾಡಿಕೊಂಡು ಜನರ ಐಕ್ಯತಾ ಭಾವವನ್ನು ಒಡೆಯುತ್ತಿದ್ದಾರೆ ಇದರ ಕರ್ಮ ಫಲ ಅವರಿಗೆ ಕಾದಿರುತ್ತದೆ ಎಂದು ಮಹಾ ತಪಸ್ವಿಗಳು, ತ್ರಿಕಾಲ ಜ್ಞಾನಿಗಳು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ.
ಮೇಲಿನ ಕಥೆಯಂತೆ, ಲಕ್ಷ್ಮಿಯು ಪ್ರಾರ್ಥಿಸಿ, ಮಹಾದೇವ ನೀವು ಹೇಗಾದರೂ ಮಾಡಿ ನಾರಾಯಣನನ್ನು ಕರೆಸುವಂತೆ ಶಿವನಲ್ಲಿ ಬೇಡಿದಳು. ಶಿವನು ತಕ್ಷಣ ತನ್ನ ಗಣಗಳಲ್ಲಿ ಒಬ್ಬನನ್ನು ವೈಕುಂಠಕ್ಕೆ ಕಳಿಸಿ ವಿಷ್ಣುವನ್ನು ಕರೆಸಿದನು. ಮಹಾವಿಷ್ಣು ಶಿವನ ಮಾತನ್ನು ಮನ್ನಣೆ ಮಾಡಿ ಮುಂದಿನ ತನ್ನ ಲೀಲಾ ಕಾರ್ಯ ಆರಂಭಿಸಲು, ತಾನು ಗಂಡು ಕುದುರೆ ಯಾಗಿ ಲಕ್ಷ್ಮಿ ಇದ್ದ ಜಾಗಕ್ಕೆ ಬಂದನು. ಹೆಣ್ಣು ಕುದುರೆಯಾ ಗಿದ್ದ ಲಕ್ಷ್ಮಿಗೆ ಗಂಡು ಕುದುರೆ ನೋಡಿ ತನ್ನ ಪತಿ ಎಂಬುದು ತಿಳಿಯಿತು. ಇಬ್ಬರು ಕೆಲವು ಕಾಲ ಸುಖವಾಗಿದ್ದರು. ಅವರಿಗೆ ಒಂದು ಮಗು ಹುಟ್ಟಿತು. ಲಕ್ಷ್ಮಿಗೆ ಮಗುವನ್ನು ಕಂಡರೆ ಬಹಳ ಪ್ರೀತಿ. ಕ್ಷಣವು ಬಿಟ್ಟಿರಲಿಲ್ಲ. ಆದರೆ ವಿಷ್ಣು ಲೀಲಾ ಕಾರ್ಯದ ನಿಮಿತ್ತ ಜನಿಸಿದ ಮಗುವನ್ನು ವೈಕುಂಠಕ್ಕೆ ಕರೆತರಲು ಒಪ್ಪದ ಅಲ್ಲೇ ಬಿಟ್ಟು, ಲಕ್ಷ್ಮಿ ಯನ್ನು ಕರೆದುಕೊಂಡು ವೈಕುಂಠಕ್ಕೆ ಬಂದನು.
“ಹರಿವರ್ಮ” ಎಂಬ ರಾಜ ನೂರು ವರ್ಷದಿಂದ ಸಂತಾನಕ್ಕಾಗಿ ತಪಸ್ಸು ಮಾಡುತ್ತಿ ದ್ದನು. ನಾರಾಯಣನು, ರಾಜನ ಕನಸಿನಲ್ಲಿ ಬಂದು ಏನು ಬೇಕು? ಎಂದಾಗ, ರಾಜನು, ಹೇ ನಾರಾಯಣ ನಿನ್ನ ಹಾಗೂ ಲಕ್ಷ್ಮಿಯಿಂದ ಜನಿಸಿದ ಸಂತಾನ ನನಗೆ ಕರುಣಿಸು ಎಂದು ಬೇಡಿದ, ಆಯಿತು ಎಂದ ವಿಷ್ಣು ಹಾಗಾದರೆ ನೀನು ಈಗಲೇ ಯಮುನಾ ಮತ್ತು ತಮಸ ನದಿಗಳ ಸಂಗಮದಲ್ಲಿ ನನ್ನ ಹಾಗೂ ಲಕ್ಷ್ಮಿಯ ಸಂತಾನವಾದ ಒಂದು ಮಗು ಇದೆ ಅದನ್ನ ತೆಗೆದುಕೊಂಡು ಬಂದು ಸಾಕು ಎಂದನು. ರಾಜನು ಬೆಳಿಗ್ಗೆ ಎದ್ದು ಕನಸಿನಂತೆ ಯಮುನಾ ಮತ್ತು ತಮಾಸ ನದಿಗಳ ಸಂಗಮ ದತ್ತ ಹೋಗಿ ನೋಡಿದಾಗ ಸುಂದರವಾದ ಶಿಶು ಕಾಣಿಸಿತು. ಸಂತೋಷದಿಂದ ಆ ಮಗುವನ್ನು ಅರಮನೆಗೆ ತಂದು “ಏಕವೀರ” ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕಿದನು. ಈ ಮಗು ಮುಂದೆ ದೊಡ್ಡವನಾಗಿ ರಾಜ್ಯದ ಅರಸನಾಗಿ “ಹಯ್ ಹಯರ” ವಂಶವನ್ನು ನಿರ್ಮಾಣ ಮಾಡಿದನು.
ಜಗಜ್ಜಾಲಪಾಲಂ ಕಚತ್ಕಂಠ ಮಾಲಂ
ಶರಶ್ಚಂದ್ರಬಾಲಂ ಮಹಾದೈತ್ಯ ಕಾಲಂ!
ನಬೋ ನೀಲಕಾಯಂ ದುರಾವಾರ ಮಾಯಂ
ಸುಪದ್ಮ ಸಹಾಯಂ ಭಜೇ ಹಂ ಭಜೇ ಹಂ!!
Follow the 𝗦𝗮𝗻𝗮𝘁𝗮𝗻𝗮 𝗗𝗛𝗔𝗥𝗠𝗔🚩 channel on WhatsApp: https://whatsapp.com/channel/0029VaDuLDn9WtC3ZajDZR33 #🔱 ಭಕ್ತಿ ಲೋಕ











