Vikas Chandra
ShareChat
click to see wallet page
@347372301
347372301
Vikas Chandra
@347372301
Changed the universe in meditation spirituality
#😏ಇದೇ ಪ್ರಪಂಚ *ಬದುಕಿನ ಸರಿಯಾದ ಉಪಕರಣಗಳು* ಅಡುಗೆ ಮನೆಯ ನಲ್ಲಿ ಮತ್ತೆ ಸೋರುತ್ತಿತ್ತು. ಇನ್ನೇನು ಮಾಡುವುದು ಎಂದುಕೊಂಡು ಒಬ್ಬ ಪ್ಲಂಬರ್ ಅನ್ನು ಫೋನ್ ಮಾಡಿ ಕರೆದೆ. ಸ್ವಲ್ಪ ಹೊತ್ತಿನ ನಂತರ ಮಧ್ಯ ವಯಸ್ಸಿನ ಒಬ್ಬ ಮನುಷ್ಯ ಬಂದ. ಮಾಸಲಾದ ಹರಿದ ಒಂದು ಟೂಲ್ ಕಿಟ್ ಹಿಡಿದು ಅವನು ಶಾಂತವಾಗಿ ದೃಢ ಹೆಜ್ಜೆಗಳಿಂದ ಒಳಗೆ ಬಂದ. ಅವನು ಕೆಲಸ ಮಾಡುವುದನ್ನೇ ನಾನು ನೋಡುತ್ತಿದ್ದೆ. ತನ್ನ ಟೂಲ್ ಕಿಟ್ ನಿಂದ ಅವನು ಒಂದು ಸ್ಪಾನರ್ ಹೊರ ತೆಗೆದ. ಅದರ ಹಿಡಿ ಸೀಳು ಬಿಟ್ಟಿತ್ತು. "ಇಂತಹ ಸ್ಪಾನರ್ ನಿಂದ ಅವನು ಹೇಗೆ ಸರಿ ಮಾಡಬಹುದು ?" ನಾನು ನಿ:ಶಬ್ದವಾಗಿ ಯೋಚಿಸುತ್ತಾ ನಿಂತೆ. ಸ್ಪಾನರ್ ಸರಿ ಇಲ್ಲ ಎಂದು ಅವನು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ ! ಅವನು ತದೇಕಚಿತ್ತದಿಂದ ಕೆಲಸ ಮಾಡುತ್ತಾ ನಲ್ಲಿಯನ್ನು ತಿರುಗಿಸಿ ಅದನ್ನು ಬಿಡಿಸಿದ. ತುಕ್ಕು ಹಿಡಿದ ಒಂದು ಭಾಗವನ್ನು ಕತ್ತರಿಸಬೇಕಾಗಿತ್ತು. ಅವನು ತನ್ನ ಬ್ಯಾಗನ್ನು ತಡಕಾಡಿ, ಗರಗಸವನ್ನು ಹೊರ ತೆಗೆದ. ಅದರ ಅರ್ಧದಷ್ಟು ಭಾಗ ಕಟ್ ಆಗಿತ್ತು. ಈಗ ನನಗೆ ಅನುಮಾನ ಬರಲಾರಂಬಿಸಿತು. ನಾನೇನಾದರೂ ತಪ್ಪಾದ ಮನುಷ್ಯನನ್ನು ಕರೆದಿದ್ದೀನಾ ? ಎಂದು. ಆದರೆ 10 ನಿಮಿಷದಲ್ಲಿ ಸೋರುತ್ತಿದ್ದ ನಲ್ಲಿಯಲ್ಲಿ ಸೋರಿಕೆ ಸಂಪೂರ್ಣ ನಿಂತಿತು. ಒಂದು ಹನಿ ನೀರೂ ತೊಟ್ಟಿಕ್ಕುತ್ತಿರಲಿಲ್ಲ ! ನಲ್ಲಿಗೆ ಕಟ್ಟಿಕೊಂಡಿದ್ದ ಕೊಳಕನ್ನು ತೆಗೆದು, ಅದು ಹೊಳೆಯುವಂತೆ ಮಾಡಿದ್ದ ಅವನು. ನಾನು 200 ರೂಪಾಯಿಯ ನೋಟನ್ನು ಅವನ ಕೈಗಿಟ್ಟೆ. ಅವನು ಬೇಡ ಎಂಬಂತೆ ತಲೆಯಾಡಿಸಿ ಹೇಳಿದ " ಬೇಡ ಸರ್, ಇದರ ಅರ್ಧದಷ್ಟು ಹಣ ಸಾಕು". ಈಗ ನನ್ನ ಆಶ್ಚರ್ಯ ಮಿತಿಮೀರಿತು. ಅವನನ್ನೇ ದಿಟ್ಟಿಸುತ್ತಾ ಕೇಳಿದೆ "ಈಗಿನ ಕಾಲದಲ್ಲಿ ಯಾರು ತಾನೇ ಹೆಚ್ಚಿನ ಹಣವನ್ನು ನಿರಾಕರಿಸುತ್ತಾರೆ ?" ನನ್ನ ಮಾತಿಗೆ ಅವನ ನಸುನಗೆಯೇ ಪ್ರತಿಕ್ರಿಯೆ ಆಗಿತ್ತು. ಅವನದು ಶಾಂತ ಮುಖ ಮತ್ತು ಸ್ಥಿರವಾದ ನಗೆ. "ಸರ್, ಪ್ರತಿಯೊಂದು ಕೆಲಸಕ್ಕೂ ಒಂದು ನಿರ್ದಿಷ್ಟ ಬೆಲೆ ಇರುತ್ತದೆ. ಇವತ್ತು ನಾನು ಹೆಚ್ಚಿನ ಹಣವನ್ನು ತೆಗೆದುಕೊಂಡರೆ ನಾಳೆ ಇನ್ನೂ ಹೆಚ್ಚಿನ ಹಣವನ್ನು ನಿರೀಕ್ಷಿಸುತ್ತೇನೆ. ಅದು ಸಿಗದಿದ್ದಾಗ ನನಗೆ ದುಃಖವಾಗುತ್ತದೆ. ಆದ್ದರಿಂದ ಸರಿಯಾದ ಬೆಲೆಯನ್ನೇ ನಾನು ಯಾವಾಗಲೂ ತೆಗೆದುಕೊಳ್ಳುತ್ತೇನೆ. ಇದು ನನಗೆ ತೃಪ್ತಿ ನೀಡುತ್ತದೆ". ಅವನ ಮಾತನ್ನು ಸಮ್ಮತಿಸುತ್ತ ನಾನು ಹೇಳಿದೆ : "ಕೂಲಿ ಅಂತ ಅಲ್ಲದಿದ್ದರೂ ನಿನ್ನ ಸೀಳಿದ ಸ್ಪಾನರ್ ಮತ್ತು ಮುರಿದ ಗರಗಸ ಕೊಳ್ಳಲಾದರೂ ಇದನ್ನು ತಗೋ. ಆಗ ನಿನ್ನ ಕೆಲಸವಾದರೂ ಸುಲಭವಾಗುತ್ತೆ". ಅವನು ಕೊಕ್ ಎಂದು ನಕ್ಕು ಹೇಳಿದ "ಓಹೋ ಸರ್, ಈ ಉಪಕರಣಗಳು ಎಂದಿದ್ದರೂ ಹಾಳಾಗುವುದೇ. ಅವುಗಳ ಗತಿಯೇ ಅಷ್ಟು. ಆದರೆ ಅವು ಮುರಿದಿದ್ದರೂ, ಸೀಳಿದ್ದರೂ ತಮ್ಮ ಕೆಲಸವನ್ನು ಮಾಡುತ್ತವೆ - ಹಿರಿಯ ನಾಗರಿಕರಂತೆ. ನಮ್ಮ ಮೈ ಮೇಲಿನ ಕೆಲವು ಕಲೆಗಳು ನಮ್ಮನ್ನು ವೇಸ್ಟ್ ಬಾಡಿ ಯನ್ನಾಗಿ ಮಾಡುವುದಿಲ್ಲ". ಸ್ವಲ್ಪ ತಡೆದು, ಅವನು ಮುಂದುವರೆಸಿದ : " ಸರ್, ನೀವು ಆಫೀಸಿನಲ್ಲಿ ಬರೆಯುವಾಗ, ಬರೆಯುವ ಪೆನ್ ಯಾವುದು ಎಂಬುದು ಮುಖ್ಯವೇ ? ನಿಮಗೆ ಬರೆಯುವುದು ಗೊತ್ತಿದ್ದರೆ ಅದು ದುಬಾರಿ ಪೆನ್ನೋ ಸಾಧಾರಣ ಪೆನ್ನೋ ಎಂಬುದು ಮುಖ್ಯವಾಗುವುದಿಲ್ಲ. ನೀವು ಯಾವುದೇ ಪೆನ್ನಿನಿಂದ ಆದರೂ ಚೆನ್ನಾಗಿಯೇ ಬರೆಯುತ್ತಿರಿ. ಆದರೆ, ನಿಮಗೆ ಬರೆಯುವುದೇ ಗೊತ್ತಿಲ್ಲದಿದ್ದರೆ, ದುಬಾರಿ ಪೆನ್ನು ಇಟ್ಟುಕೊಂಡಿದ್ದರೂ ಏನು ಉಪಯೋಗ ? ಕೌಶಲ್ಯವು ನಿಮ್ಮ ಕೈಗಳಲ್ಲಿ ಇದೆಯೇ ಹೊರತು ಉಪಕರಣಗಳಲ್ಲಿಲ್ಲ". ನಾನು ಮೂಕನಾಗಿ ಅಲ್ಲಿ ನಿಂತಿದ್ದೆ. ಅವನ ಮಾತುಗಳು ನನ್ನ ಮನಸ್ಸಿನ ಆಳಕ್ಕೆ ಇಳಿದವು. ಸುಕ್ಕಾಗಿದ್ದ ಅವನ ಮುಖದಲ್ಲಿದ್ದ ತೃಪ್ತಿ ಅಸಾಧಾರಣವಾದದ್ದು. ಅದು ದುಡ್ಡು ಕೊಟ್ಟು ಕೊಳ್ಳುವಂತದ್ದಲ್ಲ". ಅವನ ವಿಚಾರವೇ ಒಂದು ಸಂಪತ್ತು. ಎಷ್ಟೋ ಸಾರಿ ನಾವು ಐಶ್ವರ್ಯ ಮತ್ತು ಸೌಕರ್ಯ - ಇವುಗಳನ್ನ ಗಳಿಸಲು ನುಗ್ಗುತ್ತಿರುತ್ತೇವೆ. ನಾವು ಬದುಕಿನ ನಿಜವಾದ ಉಪಕರಣಗಳನ್ನು ಮರೆತಿರುತ್ತೇವೆ -- *ಪ್ರಾಮಾಣಿಕತೆ* *ಕಠಿಣ ಪರಿಶ್ರಮ* *ಕೃತಜ್ಞತೆ ಮತ್ತು* *ತೃಪ್ತಿ* ಎಲ್ಲಿಯವರೆಗೆ ಈ ಉಪಕರಣಗಳು ಭದ್ರವಾಗಿರುತ್ತವೆಯೋ, ಅವು ಮುರಿದಿದ್ದರೂ ಪವಾಡವನ್ನು ನಿರ್ಮಿಸಬಲ್ಲವು. ಆದರೆ ಇವುಗಳೇ ಕಾಣೆಯಾದಾಗ, ಪ್ರಪಂಚದಲ್ಲಿ ಎಷ್ಟೇ ಸಂಪತ್ತಿದ್ದರೂ ನಮ್ಮೊಳಗಿನ ಸೋರಿಕೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಜಿ ಕೆ ವೆಂಕಟೇಶಮೂರ್ತಿ (ಮೂಲ ಇಂಗ್ಲೀಷ್ ನಿಂದ ಭಾವಾನುವಾದ )
#😏ಇದೇ ಪ್ರಪಂಚ ಆಧ್ಯಾತ್ಮಿಕತೆ ಎಂದರೇನು? ಏಕೆ ಕಲಿಯಬೇಕು? ಹೇಗೆ ಕಲಿಯಬೇಕು? ಆಧ್ಯಾತ್ಮಿಕತೆ ಎಂದರೆ ದೇವರು, ವಿಧಿ–ವಿಧಾನಗಳು ಅಥವಾ ನಂಬಿಕೆಗಳ ವಿಷಯವಲ್ಲ. ಅದು ನಮ್ಮೊಳಗಿನ ಅಜ್ಞಾನ, ಭಯ ಮತ್ತು ಅಹಂಕಾರವನ್ನು ಸತ್ಯದ ಬೆಳಕಿನಲ್ಲಿ ನೋಡುವ ಪ್ರಾಮಾಣಿಕ ಪರಿಶೀಲನೆ. ನಾವು ದುಃಖದಲ್ಲೇ ಏಕೆ ಸಿಲುಕುತ್ತೇವೆ, ತಪ್ಪು ಆಯ್ಕೆಗಳನ್ನು ಏಕೆ ಮಾಡುತ್ತೇವೆ ಎಂಬುದನ್ನು ಅರಿಯುವ, ಬುದ್ಧಿಯ ಪ್ರಯತ್ನ. ಆಧ್ಯಾತ್ಮಿಕತೆ ಎಂದರೆ ಜೀವನವನ್ನು ತಪ್ಪಿಸಿಕೊಳ್ಳುವುದು ಅಲ್ಲ, ಜೀವನವನ್ನು ಸ್ಪಷ್ಟವಾಗಿ ನೋಡುವುದು. ಏಕೆ ಕಲಿಯಬೇಕು? ಏಕೆಂದರೆ ತಿಳಿಯದೇ ಬದುಕಿದರೆ ಜೀವನವೇ ನಮಗೆ ಆಳುತ್ತದೆ. ತಿಳಿದರೆ ನಾವು ಜೀವನವನ್ನು ಅರಿತು ನಡೆಯಬಹುದು. ದುಃಖದಿಂದ ಮುಕ್ತಿ, ಒಳಗಿನ ಸ್ವಾತಂತ್ರ್ಯ ಮತ್ತು ಸ್ಪಷ್ಟತೆ ಇದೇ ಅದರ ಅರ್ಥ. ಆಚಾರ್ಯ ಪ್ರಶಾಂತ್ ಹೇಳುವಂತೆ, ಸಮಸ್ಯೆ ಹೊರಗಲ್ಲ, ನಮ್ಮೊಳಗಿನ ಅಜ್ಞಾನದಲ್ಲಿದೆ. ಹೇಗೆ ಕಲಿಯಬೇಕು? ತಂತ್ರಗಳಿಂದಲ್ಲ, ಮಂತ್ರಗಳಿಂದಲ್ಲ. ನಿರಂತರ ಸ್ವಪರಿಶೀಲನೆ, ಪ್ರಶ್ನಿಸುವ ಬುದ್ಧಿ ಮತ್ತು ಸತ್ಯದಲ್ಲಿ ನಿಲ್ಲುವ ಧೈರ್ಯ ಬೇಕು. ಪಲಾಯನ ಅಲ್ಲ, ಎದುರಾಟವೇ ಮಾರ್ಗ. ಆಚಾರ್ಯ ಪ್ರಶಾಂತ್ ಬೋಧಿಸುವುದು ಒಂದೇ—ನಿನ್ನನ್ನು ನೀನು ತಿಳಿದುಕೋ.
#😏ಇದೇ ಪ್ರಪಂಚ ಜೀವನದ ಬಗ್ಗೆ ನಮಗೆ ತಿಳಿಯದಿರುವ ಮೋಹ ಇದರರ್ಥ. ಯಾರಿಗೆ ಜೀವನ ಸರಿಯಾಗಿ ಅರ್ಥ ವಾಗಿಲ್ಲವೋ , ಯಾರು ಯಾವುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೊ , ಎಲ್ಲದರ ಬಗ್ಗೆ ನಮಗೆಷ್ಷೆ ಆಸೆ, ಬಯಕೆ ಮೋಹವಿದ್ದರೂ ನಾವದನ್ನು ಅನುಭವಿಸಲು ಸಾದ್ಯವಿಲ್ಲವೆಂದು ತಿಳಿದಾಗ ನಮಗೆ ಬೇಸರವಾಗುತ್ತದೆ.ನೆನಪಿಡಿ - ಜೀವನ ನಶ್ವರ ಎಂದು ತಿಳಿಯುವುದು ಸಂಪೂರ್ಣವಾಗಿ ಎಲ್ಲವನ್ನೂ ಅನುಭವಿಸಿದಾಗ,/ ಯಾವುದೂ ಬೇಡವೆಂದು ತಿರಸ್ಕರಿಸಿದಾಗ ಮಾತ್ರ. ಒಂದೇ ಜೀವನದಲ್ಲಿ ಎಲ್ಲವನ್ನೂ ಅನುಭವಿಸಲು ಸಾದ್ಯವೇ ಎಂದು ಪ್ರಶ್ನಿಸಿದಾಗ, ಇಲ್ಲ ಅದು ಸಾದ್ಯವಿಲ್ಲ, ಕಾರಣ ಪ್ರತೀ ಜನ್ಮದಲ್ಲೂ ನಾವು ಸುಕಾಸುಮ್ಮನೆ ಯಾವುದೆಲ್ಲವನ್ನೂ ಬಯಸುತ್ತೇವೊ ಅದನ್ನು ಅನುಭವಿಸುತ್ತಲೇ ಸಾಗುತ್ತೇವೆ , ಈ ಜನ್ಮದಲ್ಲಿ ಯಾವುದನ್ನು ಸರಿಯಾಗಿ ಅನುಭವಿಸಲು ಸಾದ್ಯವಿಲ್ಲದೆ ನೊಂದುಕೊಳ್ಳುತ್ತೇವೊ , ಅದಕ್ಕಾಗಿ ಅತಿ ಹೆಚ್ಚು ಶ್ರಮ/ಶ್ರದ್ಧೆ ಹಾಕಿರುತ್ತೇವೊ , ಆದರೂ ಅದು ಸಿಗದೆ ಕೊನೆಗೆ ನಾವು ಸಾವನ್ನಪ್ಪತ್ತೇವೊ ಅದು ನಮಗಾಗಿ ಕಾಯ್ದಿರಿಸಿದ ಮೀಸಲಾಗಿರುತ್ತದೆ. ಅದು ಕೈಹಾಕಿದರೂ ಹಾಕದಿದ್ದರೂ ಆಕಸ್ಮಿಕವಾಗಿ ಸಿಗುತ್ತದೆ. ಒಂದು ರೀತಿ ಪುಣ್ಯ/ಅದೃಷ್ಟದ ಹಾಗೆ. ಹೀಗೆ ಪ್ರತೀ ಜನ್ಮದಲ್ಲೂ ನಾವು ಪ್ರತಿಯೊಂದನ್ನೂ ಅನುಭವಿಸಿದ ನಂತರ ನಮಗೆ ಬದುಕು ಸಾಕೆನಿಸುತ್ತೆ .ಆಗ ಬದುಕು ನಶ್ವರ ಎಂಬ ಅರಿವಾಗುತ್ತದೆ ಮನುಷ್ಯ ಜೀವನದ ಹಾದಿಯಲ್ಲಿ ಸರಿಯಾಗಿ ನಡೆದುಕೊಳ್ಳುವುದನ್ನ ಕಲಿಯುತ್ತಾನೆ.
#😏ಇದೇ ಪ್ರಪಂಚ ಕ್ಷಮಿಸಿ! ಈ ಪ್ರಶ್ನೆಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲ. ಏಕೆಂದರೆ ನನಗೆ ಹದಿಹರೆಯದಲ್ಲಿ ಪ್ರೀತಿಯ ಸಾಂಗತ್ಯ ದೊರೆಯಲಿಲ್ಲ. ನಾನು ಯಾರೊಬ್ಬರಿಗೂ ಪ್ರೀತಿ ಯ ನಿವೇದನೆ ಅಥವ ಭಿಕ್ಷೆಯನ್ನು ಬೇಡಲಿಲ್ಲ. ನನಗೂ ಯಾರೂ ಯಾಚಿಸಲಿಲ್ಲ. ಪ್ರತಿ ವಿಷಯದಲ್ಲೂ ಪ್ರೀತಿ….!? ಖಂಡಿತವಾಗಿಯೂ ನಾನು ಯಾವುದೇ ಸಜೀವ, ನಿರ್ಜೀವ ,ಇತ್ಯಾದಿ ಅವಶ್ಯಕತೆಗಿಂತ ಹೆಚ್ಚಿನ ಮಮತೆ ತೋರಿಸಿಲ್ಲ. ಇನ್ನೂ ವೈಫಲ್ಯವನ್ನು ಕಾಣುವುದು ಹೇಗೆ? ಬಹುಶಃ (ಈ ಉತ್ತರ ಬರೆಯುವಾಗ ಒಳ ಮನಸ್ಸು ಹೇಳಿದ್ದರಿಂದ) ನಾನು ಶ್ರೀಮಂತಿಕೆ ( ಸಜೀವ, ನಿರ್ಜೀವ ಅಲ್ಲದ) ಯನ್ನು ಅಲ್ಪ ಮಟ್ಟಿಗೆ ಮೋಹಿಸುತಿದ್ದೀನಿ ಅನಿಸುತ್ತೆ. ಉತ್ತರಕ್ಕೆ ಬರೋಣ. 1. ಮಾನವನ ಮನಸ್ಸು ವಯಸ್ಸಿಗೆ ತಕ್ಕಂತೆ ಅಭಿಲಾಷೆಗಳನ್ನು ಉತ್ಪತ್ತಿ ಮಾಡುತ್ತದೆ (ವಿಕೃತವಾಗಿರುತ್ತದೆ) ಎಂಬುದನ್ನು ಅರಿತುಕೊಳ್ಳ ಬೇಕು. 2. ಪ್ರಪಂಚದಲ್ಲಿ ಸುಂದರವಾದ ಸ್ತ್ರೀ/ಪುರುಷ/ಪ್ರಾಣಿ/ಮೂರ್ತಿ/ವಸ್ತು ಗಳು ಹುಟ್ಟಿದ್ದಾವೆ, ಹುಟ್ಟುತ್ತಲೇ ಇರುತ್ತಾವೆ ಎಂಬ ಸತ್ಯ ತಿಳಿದು ಮೋಹದಲ್ಲಿ ಬೀಳಬೇಕು. ಒಂದು ಹೋದರೆ ಇನ್ನೂಂದು ಎಂಬ ಕಲ್ಪನೆ ಅಂತರಂಗದಲ್ಲಿ ಇರಬೇಕು. 3. ಧಾರಾಳವಾಗಿ ಅತ್ತು ಬಿಡಿ ಕಣ್ಣೀರು ಬರುವವರೆಗೆ.(ಕಣ್ಣೀರು ಬರದಿದ್ದರೆ ನಿಮ್ಮ ಅಂತರಂಗದಲ್ಲಿ ಇದೆ ಎಂದರ್ಥ). 4. ಮಲಗಿದಾಗ ಅಥವ ಒಬ್ಬಂಟಿ ಆಗಿದ್ದರೆ ಸುಂದರವಾದ ಸ್ತ್ರೀ/ಪುರುಷ/ಪ್ರಾಣಿ/ಮೂರ್ತಿ/ವಸ್ತು ಗಳು ನಿಮ್ಮ ಜೊತೆಯಲ್ಲಿ ಇರುವಂತೆ ಧನಾತ್ಮಕವಾಗಿ ಕಲ್ಪಿಸಿಕೊಳ್ಳಿ. 5. ಸ್ನೇಹಿತರೊಂದಿಗೆ ಬೆರೆಯಿರಿ. ಬಿಟ್ಟು ಹೋದವರ ಬಗ್ಗೆ ವಿಷಯ ಪ್ರಸ್ತಾಪಿಸದಂತೆ ವಿನಂತಿಸಿ. 6. ಸಾಧ್ಯವಾದರೆ ಊರು ಬಿಡಿ. ಬೇರೆ ಪರಿಸರ ಮನಸ್ಸನ್ನು ಪ್ರಫುಲ್ಲಗೊಳಿಸಬಹುದು. 7. ಪದೇ ಪದೇ ಬಿಟ್ಟವರು ನಿಮ್ಮ ಮುಂದೆ ಬರುವ ಪ್ರಸಂಗವಿದ್ದರೆ ಉತ್ತಮ ಸಮಯಕ್ಕಾಗಿ ಕಾಯಿರಿ. ಅದು 3 ರಿಂದ 6 ತಿಂಗಳು ಮಾತ್ರ! (ಪಾಯಿಂಟ್ 2 ನ್ನು ಮನಸ್ಸಿನಲ್ಲಿಟ್ಟು ಮುಂದುವರೆಯಿರಿ).
#😏ಇದೇ ಪ್ರಪಂಚ ಹೆದರಿಸಲು ಅಲ್ಲೇನೂ ಇಲ್ಲ, ಅದೊಂದು ಸ್ಥಿತಿ ಅಷ್ಟೆ. ಭಯ ಎನ್ನುವುದು ನಮ್ಮ ಬದುಕಿನಲ್ಲಿ ಮುಂಬರುವ ಕ್ಷಣಗಳು ನಮ್ಮನ್ನ ಯಾವ ಸ್ಥಿತಿಗೆ ತಂದು ನಿಲ್ಲಿಸುತ್ತದೋ ಏನೋ ಎಂಬ ಅಂತರವನ್ನು ಸೃಷ್ಟಿಸುತ್ತದೆ , ಅದೆ ಭಯ. ಹೃದಯದ ಬಡಿತದಲ್ಲಿ ವ್ಯತ್ಯಾಸ ವಾಗುತ್ತದೆ. ಸಂತೋಷದಿಂದ ಇದ್ದಾಗ ಹೃದಯದ ಬಡಿತ ಶಾಂತವಾಗಿರುತ್ತದೆ, ಪ್ರತಿಯೊಂದು ಹಾರ್ಮೋನ್ಸ್ ಗಳ ಕೆಲಸವೆಂದರೆ ತಪ್ಪಾಗಲಾರದು. ಈ ಹಾರಾಮೋನ್ಸ್ ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ನಾವು ಸೇವಿಸಿದ ಆಹಾರ ರಕ್ತವಾಗಿ ಪರಿವರ್ತನೆ ಹೊಂದುತ್ತದೆ. ದೇಹದಲ್ಲಿ ಹಸಿವು ಬಾಯಾರಿಕೆ ಇದ್ದಾಗ ನಮಗೆ ಯಾವ ಬಯಕೆ ಆಸೆ ಏನೂ ಇರೋದಿಲ್ಲ, ತೃಪ್ತಿ ದಾಯಕ ಆಹಾರ ಸೇವನೆ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ , ಅಲ್ಲಿಗೆ ದೇಹದ ಕೆಲಸ ಮುಗಿಯಿತು.ಕಣ್ಣು ನಮಗೆ ಯಾವುದು ಸುಂದರವಾಗಿ ಕಾಣುತ್ತದೋ ಅದನ್ನು ಸೆರೆಹಿಡಿಯುತ್ತದೆ, ಮನಸ್ಸು ನಾವು ಯಾವುದೆಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಯೋಚಿಸುತ್ತೇವೋ ಅದರಂತೆ ಕಲ್ಪಿಸಿಕೊಂಡುಬಿಡುತ್ತದೆ, ಈ ಕಲ್ಪನೆಗೆ ಪ್ರೋತ್ಸಾಹ ನೀಡುವುದು ಹಾರ್ಮೋನ್ಸ್ ಗಳು. ಹಾಗೆ ನಾವು ಸಂತೋಷದಿಂದ ಇದ್ದಾಗ ಅದಕ್ಕೆ ಸಂಬಂಧಿಸಿದಂತೆ ರಾಸಾಯನಿಕ ಕ್ರಿಯೆಯಲ್ಲಿ ಅವು ತೊಡಗಿಸಿಕೊಳ್ಳುತ್ತವೆ, ದುಃಖ ದಲ್ಲಿ ಇದ್ದಾಗಲೂ ಹಾರ್ಮೋನ್ಸ್ ಗಳು ತೊಡಗಿಕೊಳ್ಳುತ್ತವೆ. ಆಸೆ ,ಬಯಕೆ ,ಪ್ರೀತಿ ,ವಿಶ್ವಾಸ, ಸ್ನೇಹ , ಕಾಮ , ಪ್ರತೀ ವಿಷಯದಲ್ಲೂ ಅವು ತೊಡಗಿಸಿಕೊಳ್ಳುತ್ತವೆ. ಆದ್ದರಿಂದ ನಮಗೆ ಭಯ ಹೋಗಬೇಕೆಂದರೆ ನಾವು ನಮ್ಮನ್ನ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಭಯವೇಕಿದೆ !?ಎಂದರೆ, ನಾವು ನಿರಂತರ ಮುಂದೆ ಒದಗಬಹುದಾದ ಲಾಭ ನಷ್ಟವನ್ನು ಯೋಚಿಸುತ್ತೇವೆ , ಒಳಿತು ಕೆಡುಕಿನ ಬಗ್ಗೆ ಚಿಂತಿಸುತ್ತೇವೆ . ಈ ಚಿಂತನೆ ನಮ್ಮಲ್ಲಿ ಈ ಕ್ಷಣದ ನೆಮ್ಮದಿಯನ್ನು ಹಾಳುಮಾಡುತ್ತದೆ, ಇದೆ ಭಯಕ್ಕೆ ಮೂಲ ಕಾರಣ. ಪ್ರತಿಯೊಂದನ್ನೂ ಒಪ್ಪಿಕೊಳ್ಳಿ , ಇಂದು ನೋವು ಇದೆ ಎಂದರೆ ನಾಳೆ ನಲಿವು ಇದೆ ಎಂದರ್ಥ. ಈಗ ಖುಃಷಿ ಇದೆ ಎಂದರೆ ನಾಳೆ ದುಃಖ ಇದೆ ಎಂದರ್ಥ. ಎಲ್ಲವನ್ನೂ ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಒಳಗೂಡಿಸಿಕೊಳ್ಳಿ. ಒಳಗೂಡಿಸಿಕೊಂಡಾಗ ಬದುಕಿನಲ್ಲಿ ಸುಃಖ ದುಃಖಗಳು ಬರುವುದಿಲ್ಲವೇ ! ಎಂದು ಕೇಳಬಹುದು? ಬರುತ್ತದೆ, ಆದರೆ ಅವುಗಳನ್ನು ನಿಭಾಯಿಸಲು ನೀವು ಸಮರ್ಥರಾಗಿರುತ್ತೀರಿ. ಹಾಗಿದ್ದಾಗ ಭಯ ಹೇಗೆ ಬರಲುಸಾಧ್ಯ. !?..
#😏ಇದೇ ಪ್ರಪಂಚ ಬದುಕನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲವಂತೆ. ತಾಯಿಯ ಗರ್ಭದಿಂದ ಧರೆಗೆ ಬಿದ್ದಾಗ ಪ್ರಾರಂಭವಾಗುವ ಬದುಕು ಮುಂದೆ ಬಾಲ್ಯ, ಯೌವನ, ಮುಪ್ಪುಗಳನ್ನು ದಾಟುವ ಪ್ರಕ್ರಿಯೆಯಲ್ಲಿ ಅನೇಕ ವಿಸ್ಮಯಗಳನ್ನು, ಪಾಠಗಳನ್ನು ಕಲಿಸಿರುತ್ತದೆ. ಬದುಕೆನ್ನುವುದು ಒಂದು ರೀತಿಯಲ್ಲಿ ಡ್ರೆೃವಿಂಗ್‌ನ ದಾರಿ ಇದ್ದಂತೆ ! ಇಲ್ಲಿ ಹಸಿರು ದೀಪ ಇದೆ, ಕೆಂಪು ದೀಪ ಇದೆ, ತಿರುವುಗಳಿವೆ, ದಿನ್ನೆಗಳೂ ಇವೆ. ಜೀವನದಲ್ಲಿ ಬರುವ ಸಂತಸದ ಕ್ಷಣಗಳನ್ನು ಹಸಿರು ದೀಪಕ್ಕೆ ಹೊಲಿಸಿದರೆ, ದುಃಖದ, ಮರೆಯಬೇಕೆನ್ನುವ ಕ್ಷಣಗಳನ್ನು ಕೆಂಪು ದೀಪಕ್ಕೆ ಹೋಲಿಸಬಹುದು. ಡ್ರೆೃವಿಂಗ್‌ ಮಾಡುವಾಗ ಹೇಗೆ ಬರೀ ಹಸಿರು ದೀಪಗಳೇ ಬರುವುದಿಲ್ಲವೊ, ಅದೇ ರೀತಿ ಬದುಕಿನಲ್ಲಿ ಬರೀ ಸಂತಸದ ಕ್ಷಣಗಳೇ ತುಂಬಿರುವುದಿಲ್ಲ. ಬದುಕಿನಲ್ಲಿ ಸಂತಸದ ಕ್ಷಣಗಳಾಗಲಿ (ಹಸಿರು ದೀಪ), ದುಃದ ಕ್ಷಣಗಳಾಗಲಿ (ಕೆಂಪು ದೀಪ), ಯಾವುದೂ ಶಾಶ್ವತವಲ್ಲ . ಬಹಳ ವೇಳೆಯವರೆಗೆ ಇರುವುದಿಲ್ಲ. ದುಃಖ ಬಂದಾಗ, ಒಂದು ಕ್ಷಣ ವಿರಮಿಸಿ ಹೆಚ್ಚಿನ ಉತ್ಸಾಹದಿಂದ ಮುಂದೆ ನಡೆಯುವುದೇ ಬದುಕು. ಒಟ್ಟಿನಲ್ಲಿ ಬದುಕಿನ ಮೇಲೆ ನಮ್ಮ ಹಿಡಿತ ಏನೂ ಇಲ್ಲ, ಎಲ್ಲವೂ ವಿಧಿಯಾಟ. ಇಲ್ಲಿ ಬದುಕಿನ ಪಥವನ್ನು, ಬದುಕಿನ ತಿರುವುಗಳನ್ನು ನಿರ್ಧರಿಸುವುದು ವಿಧಿ ಮಾತ್ರ. ನಾವೇನಿದ್ದರೂ ಅದರ ಅಡಿಯಾಳುಗಳು ಎಂಬುದನ್ನು ಕವಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಜೀವನದಲ್ಲಿ ಬರುವ ಸುಖದುಃಖಗಳು ವಿಧಿಯನ್ನು ಅವಲಂಬಿಸಿವೆ. ಜಟಕಾಬಂಡಿ ಅದರ ಸಾಹೇಬನ ಹಿಡಿತದಲ್ಲಿ ಮುಂದೆ ಸಾಗುವಂತೆ, ನಮ್ಮ ಬದುಕು ವಿಧಿಯ ಹಿಡಿತದಲ್ಲಿದೆ. ಅದರಂತೆ, ಬದುಕಿನಲ್ಲಿ ಬಂದದ್ದನ್ನು, ಸ್ವೀಕಾರ ಮಾಡುವ ಮನೋಭಾವ ಇರಬೇಕು, ಸುಖದುಃಖ ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು ಎಂಬ ಸಂದೇಶವೂ ಇದರಲ್ಲಿದೆ. ಇನ್ನೊಂದು ಮಗ್ಗುಲು ನೋಡುವದಾದರೆ ನಮ್ಮ ಬದುಕೇ ಒಂದು ಜಟಕಾ ಬಂಡಿ, ಅದನ್ನೆಳೆದುಕೊಂಡು ಹೋಗುವ ನಾವೇ ಕುದುರೆಗಳು. ಈ ಬದುಕೆಂಬ ಜಟಕಾ ಬಂಡಿಯನ್ನು ಓಡಿಸುವವನೇ ವಿಧಿ, ಎಂದರೆ ಪರಮಾತ್ಮ. ಬಂಡಿಗೆ ಕಟ್ಟಿದ ಕುದುರೆಗೆ ಆ ಬಂಡಿ ಓಡಿಸುವವನು ಹೇಳಿದಲ್ಲಿಗೆ ಹೋಗಬೇಕು. ಅದು ಮದುವೆಗಾದರೂ ಆಗಬಹುದು ಅಥವಾ ಸ್ಮಶಾನಕ್ಕಾದರೂ ಆಗಬಹುದು. ಬದುಕೆಂಬ ಜಟಕಾ ಬಂಡಿಯನ್ನು ಎಳೆಯುವ ಕುದುರೆಗಳಾದ ನಮಗೆ, ಬದುಕ ಬಂಡಿಯನ್ನು ಎಳೆದೂ ಎಳೆದೂ ಸುಸ್ತಾಗಿ ಕಾಲು ಸೋತು ಕುಸಿದರೆ ವಿಶ್ರಮಿಸಿಕೊಳ್ಳಲು ನೆಲವುಂಟು ಎಂದು ಬದುಕಿನ ಓಟದ ಸತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. ಬರೆದಷ್ಟು ಮುಗಿಯದ, ಚಿಂತಿಸಿದಷ್ಟೂ ಹೊಳೆಯದ ಬದುಕು ಇನ್ನೊಂದು ದೃಷ್ಟಿಯಲ್ಲಿ ತುಂಬಾ ಅತ್ಯಮೂಲ್ಯ. ಇದರ ನಶ್ವರತೆಯ ಬಗ್ಗೆ ಎಷ್ಟೇ ಮಾತನಾಡಿದರೂ ಇದರ ಚೆಲುವು ನಮ್ಮನ್ನು ಮುದಗೊಳಿಸುತ್ತದೆ. ಎಷ್ಟೇ ಕಷ್ಟವಿದ್ದರೂ, ಕಿರಿ ಕಿರಿಯಿದ್ದರೂ, ವಸಂತದಲ್ಲಿ ಬಿರಿಯುವ ಹೂಗಳು, ಹುಟ್ಟುವ ಗರಿಕೆ, ಹುಣ್ಣಿಮೆಯ ಚಂದ್ರ ಇವುಗಳಿಂದ ಅರಳದ ಮನಸ್ಸು ಯಾವುದೂ ಇಲ್ಲ. ತಿಮ್ಮಗುರು ಡಿ.ವಿ.ಜಿ. ಒಂದು ಕಡೆ ಬರೆಯುತ್ತಾರೆ "ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ" ಎಷ್ಟೊಂದು ಅರ್ಥಪೂರ್ಣ ಮಾತು. ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂತ ಭಾವಿಸುವೆ.
#🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ - ShareChat
00:30
#🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ - ShareChat
00:15
#😏ಇದೇ ಪ್ರಪಂಚ ಶ್ರೀ ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಭಗವದ್ಗೀತೆ, ಉಪನಿಷತ್ತು, ಬ್ರಹ್ಮ ಸೂತ್ರಗಳಿಂದ ಬ್ರಹ್ಮಾಂಡದ ಮೂಲವಾದ ಒಬ್ಬ ಪರಮಾತ್ಮನ ಬಗ್ಗೆ ಬೋಧಿಸಿದಾಗ ಜನರಿಗೆ ದೇವರ ಬಗ್ಗೆ ಏಕೆ ಗೊಂದಲವಿದೆ? ಅಲೋವೆರಾದಲ್ಲಿ ಇರುವ ಪೌಷ್ಟಿಕ ಅಂಶಗಳು ಯಾವವು? ನೀವು ದೊಡ್ಡ ಠೇವಣಿ ಮಾಡಿದಾಗ ಬ್ಯಾಂಕುಗಳು ನಿಮ್ಮನ್ನು ವಿಭಿನ್ನವಾಗಿ ಪರಿಗಣಿಸುತ್ತವೆಯೇ? ಮೃತ್ಯು ಹೊಂದಿದ ಮಾನವನ ಆತ್ಮ ಪುನರ್ಜನ್ಮ ಹೊಂದುವುದು ಅನ್ನುವದಾದರೆ ಪಿತೃಪಕ್ಷದಂದು ಏಕೆ ಆತ್ಮಗಳಿಗೆ ಪೂಜೆ ಮಾಡುತ್ತರೆ ಮತ್ತು ಪುನರ್ಜನ್ಮ ಹೊಂದಿದ ಆತ್ಮವು ಆ ದಿನ ಬರುವುದು ಹೇಗೆ ಸಾಧ್ಯ? BXO ಸಮಸ್ಯೆ ಅಪಾಯವೇ? ದೇವರ ಅಸ್ತಿತ್ವದ ಪುರಾವೆಗಳ ಅವಶ್ಯಕತೆಯಿಂದ ಮುಳುಗಿರುವವರು, ವಿಜ್ಞಾನವು ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಬಹುದಾದರೂ, ಅನೇಕರು ಸೃಷ್ಟಿ ಮತ್ತು ದೇವರ ಅಸ್ತಿತ್ವದ ಬಗ್ಗೆ ನಂಬಲಾಗದವರಾಗಿಯೇ ಇರುತ್ತಾರೆ, ನೀವು ಒಪ್ಪುವುದಿಲ್ಲವೇ? ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವಷ್ಟು ಸರ್ವಜ್ಞರು ನಾವಲ್ಲ ನಾವಂತು ಇಂತವರ ಪ್ರಶ್ನೆಯನ್ನು ಕಸದಬುಟ್ಟಿಗೆ ಹಾಕುವವರು. ವಿಜ್ಞಾನವು ಎಷ್ಟೆ ಮುಂದುವರಿದರು ಮಣ್ಣಿನಿಂದಾಗಲಿ ಇಥವಾ ಇನ್ಯಾವುದೆ ವಸ್ತುವಿನಿಂದ ಎಲ್ಲರೀತಿಯ ಜೀವಿಗಳನ್ನು ಸೃಷ್ಟಿಸುವುದು ಅಸಾಧ್ಯ ದೇವರು ಸೃಷ್ಟಿಸಿದಂತೆ ತದ್ರೂಪವನ್ನು ಸೃಷ್ಟಿಸಿದರು ಅದರಲ್ಲಿ ದೇವರು ಸೃಷ್ಟಿಸಿದ ಮನುಷ್ಯನ ರೂಪಕ್ಕೆ ಬುದ್ದಿಮತ್ತೆಗೆ ಕಾರ್ಯವಿಧಾನಕ್ಕೆ ಸಮನಾಗಲಾರವು ಯಂತ್ರಗಳಾಗಲಿ ಮಣ್ಣಿನ ಮುದ್ದೆಯಾಗಲಿ ತಮ್ಮ ಸಂಕುಲವನ್ನು ವೃದ್ದೀಮಾಡುವ ಕೆಲಸ ಅದರಿಂದ ಆಗದು ಅದು ದೇವರು ಸೃಷ್ಟಿಸಿದ ಜೀವಿಗಳಲ್ಲಿ ಮಾತ್ರ ಮುಂದುವರೆಯುವಂತಾದ್ದು. ಇಷ್ಟೆಲ್ಲಾ ಪುರಾವೆ ಇದ್ದರು ಮನುಷ್ಯ ದೇವರನ್ನು ನಂಬದೆ ಕುಚೋದ್ಯದ ಪ್ರಶ್ನೆ ಕೇಳುವುದು ಮೋರ್ಖತನವೋ ಅಹಂಕಾರವೊ ಅನುಮಾನವೋ ಅಥವಾ ಅಪನಂಬಿಕೆಯೋ ಗೊತ್ತಿಲ್ಲ ನಾವು ಕೆಲವು ವಿಮೆಗಳಿಗೆ ಕಟ್ಟಿದ ಹಣವನ್ನು ನಾವು ಎಂದಿಗೂ ಹಿಂದೆ ಕೇಳುವುದಿಲ್ಲ. ಆಗ ಆ ಹಣ ಎಲ್ಲಿಗೆ ಹೋಗುತ್ತದೆ? ಉದಾಹರಣೆಗೆ: ವಾಹನ ವಿಮೆ ಗುಡ್ ಡೌಟ್.. ನಾವು ಹಲವಾರು ರೀತಿಯ ವಿಮೆ ಮಾಡುತ್ತೇವೆ. ಆದರೆ ದೇವರ ದಯೆಯಿಂದ ದಿನಗಳು ಯಾವುದೇ ಅಪಾಯವಿಲ್ಲದೆ ಕಳೆಯಲಿ ಎಂದು ಪ್ರಾರ್ಥಿಸುತ್ತೇವೆ. ಇದು ಸಹ ಸಂಭವಿಸುತ್ತದೆ. ಆದರೆ ತುರ್ತು ಸಮಯದಲ್ಲಿ ನಮಗೆ ಸಹಾಯ ಮಾಡುವ ವಿಮೆಯನ್ನು ನಾವು ಮೊದಲು ನಂಬುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಆಯಾ ವಿಮಾ ಕಂಪನಿ ಪರಿಹಾರ ನೀಡಲಿದೆ. ಇದು ನಮಗೆ ಗೊತ್ತು. ಏನೂ ಆಗದಿದ್ದರೆ ಏನು? ನಾವು ಕಟ್ಟುವ ವಿಮಾ ಕಂತು ಏನಾಗುತ್ತದೆ... ಇದನ್ನು ತಿಳಿಯುವ ಮೊದಲು ವಿಮಾ ಕಂಪನಿಯ ಪಾಲಿಸಿಗಳನ್ನು ಅರ್ಥಮಾಡಿಕೊಳ್ಳೋಣ.. ವಿಮಾ ಕಂಪನಿಯು ಪಾವತಿಸುವ ಹಣ ವಿಮಾ ಕಂಪನಿಗೆ ಸೇರಿಲ್ಲ. ನಮ್ಮದು.. ಅಂದರೆ ಹೇಗೆ? ಉದಾಹರಣೆಗೆ ಹತ್ತು ಮಂದಿಗೆ ವಿಮೆ ಇದೆ ಎಂದಿಟ್ಟುಕೊಳ್ಳೋಣ.. ಅವರಲ್ಲಿ ಒಬ್ಬರಿಗೆ ಪರಿಹಾರ ನೀಡಬೇಕಾದರೆ ಉಳಿದ ಒಂಬತ್ತು ಮಂದಿಗೆ ಪರಿಹಾರ ನೀಡಲಾಗುವುದು. ಏಕೆಂದರೆ ನಾವು ಕಟ್ಟುವ ಪ್ರೀಮಿಯಂಗಿಂತ ನಮಗೆ ಸಿಗುವ ವಿಮೆ ಪರಿಹಾರವೇ ಹೆಚ್ಚು. ಇದೆಲ್ಲವನ್ನೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDIA) ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ. ಆದ್ದರಿಂದ ನಾವು ಕಳೆದುಕೊಳ್ಳುವ ಯಾವುದೇ ಅವಕಾಶವಿಲ್ಲ. ಸರಿ ನಿಮ್ಮ ಉತ್ತರ ಸಿಕ್ಕಿದೆ. ಇಲ್ಲಿ ಇನ್ನೊಂದು ಅನುಮಾನವಿದೆ. ಎಲ್ಲರಿಗೂ ಒಂದೇ ಬಾರಿ ಪರಿಹಾರ ನೀಡಬೇಕಾದರೆ? ಭೂಕಂಪಗಳು ಮತ್ತು ಅಗ್ನಿ ಅವಘಡಗಳಂತಹ ಸಾಮೂಹಿಕ ವಿಪತ್ತುಗಳ ಸಂದರ್ಭದಲ್ಲಿ, ವಿದೇಶಿ ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡುವ ಮೊದಲು ವಿಮಾ ಕಂಪನಿಯು ಜಾಗರೂಕರಾಗಿರುತ್ತದೆ. ಉದಾಹರಣೆಗೆ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿಯು ಪ್ಯಾರಿಬಸ್ ಕಂಪನಿಯೊಂದಿಗೆ ಈ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.. ಈ ಮಟ್ಟಿಗೆ, ಅದು ಪಡೆಯುವ ಪ್ರೀಮಿಯಂನ ಭಾಗವನ್ನು ಆ ಕಂಪನಿಗೆ ಪಾವತಿಸುತ್ತದೆ.. ಮತ್ತು ನಮ್ಮ ಸಾರ್ವಜನಿಕ ವಲಯದ ಎಲ್‌ಐಸಿಗೆ ಕೇಂದ್ರ ಸರ್ಕಾರವು ಖಾತರಿ ನೀಡುತ್ತದೆ... . ಧನ್ಯವಾದ. ಜೀವನದ ಕೆಲವು ಕಟು ಸತ್ಯಗಳು ಯಾವುವು? ಜೀವನದಲ್ಲಿ ಕಟುಸತ್ಯಗಳು ಅಥವಾ ಕಠಿಣ ಸತ್ಯಗಳು ಹಲವಾರು ಇರಬಹುದು. ಇವು ವ್ಯಕ್ತಿಗಳಿಗೆ ಅನುಭವಿಸಬಹುದಾದ ಕಠಿಣ ಸತ್ಯಗಳಾಗಿವೆ: 1. ಮರಣ: ಸತ್ಯಾಂಶವೇನೆಂದರೆ ನಾವು ಎಂದೆಂದಿಗೂ ಬದುಕುತ್ತಿರುವುದೆಂದಲ್ಲ. ನಮ್ಮಲ್ಲಿ ಒಂದು ದಿನ ಬದುಕುವ ಕೊನೆಯ ಸಮಯವನ್ನು ಅನುಭವಿಸಬೇಕು. 2. ಸಹನಶೀಲತೆ: ಸಮಸ್ಯೆಗಳು ಮತ್ತು ಕಠಿಣತೆಗಳು ನಮ್ಮ ಜೀವನದ ಒಂದು ಅವಶ್ಯಕ ಭಾಗವಾಗಿವೆ. ನಾವು ಅವುಗಳನ್ನು ಸಹನೆಯಿಂದ ಎದುರಿಸಬೇಕಾಗುತ್ತದೆ. 3. ಸಹಜವಾದ ಬದಲಾವಣೆ: ಬದಲಾವಣೆ ಜೀವನದ ಸ್ವಭಾವವಾಗಿದೆ. ಯಾವುದೇ ಸ್ಥಿತಿ ಅಥವಾ ಸ್ಥಿತಿ ಸ್ಥಿತಿಗೆ ಬದಲಾಗುತ್ತದೆ. 4. ಸ್ವಾರ್ಥತೆ ಮತ್ತು ಅಸತ್ಯ: ಸತ್ಯವನ್ನು ಮರೆಯುವುದು ಮತ್ತು ಸ್ವಾರ್ಥತೆ ಅಥವ ಮಿಥ್ಯಾಪ್ರಮಾಣಗಳನ್ನು ಅನುಸರಿಸುವುದು ನಮ್ಮ ಜೀವನಕ್ಕೆ ಕಟುಸತ್ಯಗಳಾಗಬಹುದು. 5. ಸಂಕಟ ಮತ್ತು ದುಃಖ: ಜೀವನದಲ್ಲಿ ಸಂಕಟ ಮತ್ತು ದುಃಖಗಳು ಅನಿವಾರ್ಯ ಭಾಗಗಳು. ಇವು ಎದುರಿಸುವುದು ಮತ್ತು ಅವುಗಳಿಂದ ಪಾಠ ಕಲಿಯುವುದು ಆವಶ್ಯಕ. 6. ಮೃತ್ಯುವಿಗೆ ಸಿದ್ಧನಾಗುವುದು: ಜೀವನದಲ್ಲಿ ಯಾವುದೇ ಸಮಯದಲ್ಲಿ ಮೃತ್ಯು ನಮಗೆ ಕರಾರುವಾಗಬಹುದು. ಇದು ಅನಿವಾರ್ಯ ಸತ್ಯ. 7. ನಿಷ್ಕಳಂಕ ಸ್ನೇಹ: ಎಲ್ಲ ಸ್ಥಿತಿಗಳಲ್ಲಿಯೂ ನಿಷ್ಕಳಂಕ ಸ್ನೇಹವು ಕಠಿಣ ಸತ್ಯವಾಗಬಹುದು. ಸ್ನೇಹವು ತಲುಪುವುದು ಮತ್ತು ನಿಭಾನುಭವಿಸುವುದು ಕೂಡ ಅತ್ಯಂತ ಪ್ರಮುಖ. ಭಗವದ್ಗೀತೆ, ರಾಮಾಯಣ ಎಲ್ಲಾ ಸುಳ್ಳು ಎನ್ನುವ ಬುದ್ಧಿಜೀವಿಗಳು, ಕುರಾನ್, ಬೈಬಲ್ ಸುಳ್ಳು ಎಂದೇಕೆ ಹೇಳುವುದಿಲ್ಲ? ಈ ಪ್ರಶ್ನೆಗೆ ಬುದ್ದಿ ಜೀವಿಗಳು ಕುರಾನ್ ಮತ್ತು ಬೈಬಲ್ ಸುಳ್ಳು ಎಂದು ಹೇಳಿಕೆ ಕೊಡಬೇಕೇ? ಕೇವಲ ಒಂದು ವರ್ಗದವರನ್ನು ತೃಪ್ತಿ ಪಡಿಸಬೇಕೇ? ಬುದ್ದಿಜೀವಿಗಳು ವಿಷಯವನ್ನು ತಾರ್ಕಿಕವಾಗಿ ಆಲೋಚಿಸುತ್ತಾರೆ. ಸಾಕ್ಷ್ಯಾಧಾರಗಳನ್ನು ನೋಡುತ್ತಾರೆ. 2000 ವರ್ಷದಷ್ಟು ಹಳೆಯ ಧರ್ಮ ಗ್ರಂಥಗಳು ಮೂಲ ಪ್ರತಿಗಳ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ರಾಮಾಯಣ, ಮಹಾಭಾರತ,ಭಗವತ್ಗೀತೆ ಸತ್ಯವಿರಬಹುದು! 4000 ವರ್ಷ ಹಳೆಯವು! ಸಾಕ್ಷಿಯ ಕೊರತೆ ಇದೆ. ಸಾಕ್ಷ್ಯಗಳು ಸಿಕ್ಕಿದರೆ ಅವರ ಆಲೋಚನೆಗಳು ಬದಲಾಗಿ ಒಪ್ಪಿಕೊಳ್ಳುತ್ತಾರೆ. ದೊರೆತಿರುವ ಮೂಲ ಪ್ರತಿಗಳನ್ನು ಮ್ಯೂಸಿಯಂ ನಲ್ಲಿ ಇಡಿ. ಇಂದಿನ ಕಂಪ್ಯೂಟರ್ ಯುಗದಲ್ಲಿ ನೀವು ನಾವೆಲ್ಲರೂ ಬುದ್ದಿ ಜೀವಿಗಳಿಗಿಂತ ಹೆಚ್ಚಾಗಿದ್ದೇವೆ. ತಾರ್ಕಿಕವಾಗಿ ಯೋಚಿಸುತ್ತಿಲ್ಲ! ನಾನು ಮಹಾಭಾರತವನ್ನು ನಂಬುತ್ತೇನೆ ಹಾಗೆಯೇ ಮಸ್ಕಿ ಶಾಸನವನ್ನು ನಂಬುತ್ತೇನೆ. ಮಸ್ಕಿ ಶಾಸನ 2200 ವರ್ಷ ಹಳೆಯದು ಹಾಗೆಯೇ ಮಹಾಭಾರತ 3000 ದಿಂದ 4000 ಹಳೆಯದು. ಇತಿಹಾಸ ತಜ್ಞರು ಮತ್ತು ಬುದ್ದಿಜೀವಿಗಳು ಶಾಸನವನ್ನು ನೋಡುವ ದೃಷ್ಟಿಕೋನವೇ ಬೇರೆ. ಕೆತ್ತನೆಯಲ್ಲಿನ ಪ್ರತಿಯೊಂದು ವಿಚಾರವನ್ನು ತಾರ್ಕಿಕವಾಗಿ ನೋಡುತ್ತಾರೆ. ಪ್ರತಿಯೊಂದು ಧರ್ಮಗ್ರಂಥಗಳಲ್ಲೂ ನ್ಯೂನತೆಗಳಿರುತ್ತವೆ ಕಾಲದಿಂದ ಕಾಲಕ್ಕೆ ಬದಲಾಗುವ ಯುವ ಸಮೂಹವು ಓದಿ ಗ್ರಹಿಸುವ ಮನಃಸ್ಥಿತಿಯ ಮೇಲೆ ತೂಗಬಹುದು. ಪ್ರಶ್ನೆಯನ್ನು ಕೇಳುವ ನಾವು ಹೆಚ್ಚೆಂದರೆ ಜೀವನದಲ್ಲಿ ನಾಲ್ಕಾರು ಸಾವಿರ ಜನರೊಡನೆ ಬೆರೆತು ವಿಷಯಗಳ ಪ್ರಸ್ತಾಪ ಮಾಡಿರಬಹುದು. ಬುದ್ದಿಜೀವಿಗಳು/ರಾಜಕಾರಣಿಗಳು ಲಕ್ಷಾಂತರ ಜನರ, ನುರಿತ, ಪರಿಣಿತರ, ತಂತ್ರಜ್ಞಾನಿಗಳೊಡನೆ ಬೆರೆತು ವಿಷಯಗಳನ್ನು ಹಂಚಿಕೊಂಡಿರುತ್ತಾರೆ. ಸಮಾಜಕ್ಕೆ ಯಾವುದನ್ನು ಹೇಗೆ ಹೇಳೆಬೇಕು ಎಂಬುದು ಅರ್ಥ ಮಾಡಿಕೊಂಡಿರುತ್ತಾರೆ. ಇಲ್ಲದಿದ್ದರೆ ಸಮನ್ವಯದ ಕೊರತೆ ಎದುರಾಗಿ ರಾಜ್ಯಗಳು ದೇಶಗಳಾಗಿ ಛಿದ್ರವಾಗುತಿತ್ತು ಎಂದು ನನ್ನ ಅನಿಸಿಕೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಜನರು ಇನ್ನೂ ಮೌಢ್ಯತೆಯಲ್ಲಿ ಜೀವಿಸುತ್ತಿರುವರು ಎಂದು ಅನಿಸುವುದಿಲ್ಲವೇ? ಬೇರೆಯವರ ಮನೆಯಲ್ಲಿ ಅಥವಾ ಹೊರಗಡೆ ಸಿಗುವ ಊಟ ಏನಾದರೂ ಮಾಡಿದರೆ ಅದರ ಅನ್ನದ ಋಣ ನಮ್ಮ ಮೇಲೆ ಇರುತ್ತದೆಯೇ ದಯವಿಟ್ಟು ಇದರ ಬಗ್ಗೆ ತಿಳಿಸಿಕೊಡಿ ನಮ್ಮ ಅಮ್ಮ ಅವಾಗವಾಗ ಹೇಳಿ ತಿನ್ನಬೇಡ ಎಂದು ಬೈಯುತ್ತಿರುತ್ತಾರೆ? ತಿಳಿದಿರುವವರು ಹೇಳಿ ಅಸಭ್ಯ ಬರಹ ಬೇಡ ಮನುಷ್ಯನ ಚಿಂತೆಯನ್ನು ಹೇಗೆ ತೆಗೆದುಹಾಕಬಹುದು? ಮನಸ್ಸು ನೆಮ್ಮದಿಯಿ೦ದಿರಲು ಕೆಲವೊ೦ದು ಸಲಹೆಗಳು ಘೋರವಾದ ಕೆಟ್ಟ ಕೆಲಸಗಳನ್ನು ಮಾಡಿದವರನ್ನು ತೀವ್ರವಾಗಿ ಖ೦ಡಿಸಬೇಕು ಎ೦ಬ ಭಾವನೆ ಹೊ೦ದಿರುವುದು. ಆದರೆ ಇ೦ಥಹ ಕೆಟ್ಟ ಕೆಲಸಗಳನ್ನು ಅಪಸಾಮಾನ್ಯತೆಯಿ೦ದ ಅರಿಯದೆ ಮಾಡಿರುತ್ತಾರೆ ಅ೦ಥಹವನು ನಾವು ಬದಲಿಸಲು ಪ್ರಯತ್ನಿಸಬೇಕು. ನಾವು ಅ೦ದುಕೊ೦ಡ೦ತೆ ಕೆಲಸಗಳು ಆಗದಿರುವುದು ಬಹಳ ಘೋರವಾದುದು ಎ೦ದುಕೊಳ್ಳುವುದು. ಇದಕ್ಕೆ ಬದಲಾಗಿ ಕೆಟ್ಟ ಸ್ಥಿತಿಗಳ ಬಗೆಗೆ ನಾವು ನಿಯ೦ತ್ರಣ ಹೊ೦ದಬೇಕು. ಅಥವಾ ಗುರಿಯನ್ನು ಬದಲಿಸಿ ನಮ್ಮ ಸಾಮರ್ಥ್ಯಕ್ಕನುಗುಣವಾದ ಗುರಿಯನ್ನಿಟ್ಟುಕೊ೦ಡು ಸ೦ತ್ರಪ್ತಿ ಪಡೆಯಬೇಕು. ಮನುಷ್ಯನಿಗೆ ಬರುವ ಕಷ್ಟಗಳು ಹೊರಗಿನ ಜನರಿ೦ದ ಮತ್ತು ಬಾಹ್ಯ ಘಟನೆಗಳಿ೦ದ ಬಲವ೦ತವಾಗಿ ಬರುತ್ತವೆ೦ಬ ಭಾವನೆ ಬೆಳೆಸಿಕೊ೦ಡಿರುವುದು. ಬದಲಾಗಿ ದುರದ್ರುಷ್ಟ ಸ್ಥಿತಿಗಳನ್ನು ನಾವು ಕೈಗೊ೦ಡಿರುವುದರಿ೦ದ ಕಷ್ಟಗಳು ಬ೦ದಿವೆಯೆ೦ದು ಅರಿಯಬೇಕು. ಏನೋ ಕೆಟ್ಟದ್ದಾಗಿರುವುದರಿ೦ದ ನಮಗೆ ಎಲ್ಲವೂ ತಲೆಕೆಳಗಾಗುತ್ತಿವೆ ಎ೦ಬ ಭಾವನೆ ಹೊ೦ದಿರುತ್ತೇವೆ. ಬದಲಾಗಿ ಕಷ್ಟದ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸಬೇಕು ಸಾಧ್ಯವಿಲ್ಲದಿದ್ದರೆ ಇರುವುದನ್ನೇ ಒಪ್ಪಿಕೊಳ್ಳಬೇಕು. ಜೀವನದ ಕಷ್ಟ-ದಾರ್ಪಣ್ಯಕ್ಕಾಗಿ ಮತ್ತು ಸ್ವಯ೦ ಜವಾಬ್ದಾರಿಗಳಿ೦ದ ದೂರವಿರುವುದು ಸುಲಭವಾದುದು ಎ೦ಬ ಭಾವನೆ ಬೆಳೆಸಿಕೊಳ್ಳುವುದು ಬದಲಾಗಿ ಆದರೆ ಇದು ದೀರ್ಘಕಾಲದಲ್ಲಿ ವ್ಯಕ್ತಿಗೆ ತೊ೦ದರೆಯನ್ನು೦ಟು ಮಾಡುತ್ತದೆ. ನಮಗಿ೦ತಲೂ ಬಲವಾದುದು ಅಥವಾ ದೊಡ್ಡದಿದೆ ಅದನ್ನು ನಾವು ಎಲ್ಲದಕ್ಕೂ ಅವಲ೦ಬಿಸಬೇಕು ಎ೦ಬ ಭಾವನೆ ಇದಕ್ಕೆ ಬದಲಾಗಿ ಸರಿಯಾದ ಆಲೋಚನೆಯಿ೦ದ ಸ್ವತ೦ತ್ರವಾಗಿರುವುದನ್ನು ಕಲಿಯಬೇಕು. ಎಲ್ಲಾ ವಿಷಯಗಳಲ್ಲೂ ನಾವು ದಕ್ಷರಾಗಿರಬೇಕು, ಬುದ್ಢಿವ೦ತರಗಿರಬೇಕು ಮತ್ತು ಸಾಧಕರಾಗಿರಬೇಕು ಎ೦ದು ತಿಳಿಯುವುದು. ಇದಕ್ಕೆ ಬದಲಾಗಿ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಸಾಧಿಸುತ್ತಿದ್ದೇವೆ ಎ೦ಬ ಅರಿವನ್ನು ಬೆಳೆಸಿಕೊಳ್ಳಬೇಕು. ಏನೋ ಒ೦ದು ಆಗಬಾರದ್ದು ಆಗಿದೆ ಅದುದರಿ೦ದ ಇದು ಜೀವನಪೂರ್ತಿ ನನಗೆ ತೊ೦ದರೆಯು೦ಟು ಮಾಡುತ್ತಿದೆ ಎ೦ಬ ಭಾವನೆ ಬೆಳೆಸಿಕೊಳ್ಳುವುದು. ಬದಲಾಗಿ ಪೂರ್ವಾನುಭಗಳಿ೦ದ ಕಲಿತಿದ್ದೇ ಆದರೆ ಮತ್ತು ಅರ್ಥ ಪೂರ್ವಾಗ್ರಹಗಳಿ೦ದ ಕೂಡಿರುವುದನ್ನು ಕಲಿಯಬೇಕು. ನಾವು ಘಟನೆಗಳ ಮೇಲೆ ಸ್ಪಷ್ಟವಾದ ನಿಯ೦ತ್ರಣ ಹೊ೦ದಿರಬೇಕು ಎ೦ಬ ಭಾವನೆ ಹೊ೦ದಿರವುದು. ಬದಲಾಗಿ ಪ್ರಪ೦ಚದಲ್ಲಿ ಘಟನೆಗಳು ಸ೦ಭಾವ್ಯತೆ ಮತ್ತು ಅನಿರೀಕ್ಷಿತವಾಗಿ ನಡೆಯುತ್ತವೆಯಾದರೂ ಅದರಲ್ಲಿಯೇ ನಾವು ಆನ೦ದ ಪಡೆಯಬಹುದು ಎ೦ಬ ಅರಿವು ಬೆಳೆಸಿಕೊಳ್ಳಬೇಕು. ನಾವು ಸುಮ್ಮನಿದ್ದರೆ ಎಲ್ಲವೂ ಸರಾಗವಾಗಿರುತ್ತದೆ ಮತ್ತು ಮನುಷ್ಯ ಸ೦ತೋಷದಿ೦ದಿರುತ್ತಾನೆ ಎ೦ಬ ಭಾವನೆ ಬೆಳೆಸಿಕೊಳ್ಳುವುದು ಬದಲಾಗಿ ನೀವು ಕ್ರಿಯಾತ್ಮಕವಾಗಿ ಮಾಖ್ಯ ಕೆಲಸಗಳನ್ನು ಮಾಡಿದರೆ ನಮ್ಮನ್ನು ನಾವು ತೊಡಗಿಸಿಕೊ೦ಡರೆ ಸ೦ತೋಷದಿ೦ದಿರುತ್ತದೆ, ನಮ್ಮ ಸ೦ವೇಗಗಳ ಮೇಲೆ ನಾವು ಯಾವುದೇ ನಿಯ೦ತ್ರಣ ಹೊ೦ದಿಲ್ಲ ನಮ್ಮ ಸ೦ವೇಗಗಳ ಗೊ೦ದಲಕ್ಕೆ ನಾವೇನೂ ಮಾಡಲೂ ಸಾಧ್ಯವಿಲ್ಲ ಎ೦ದು ತಿಳಿದಿರುವುದು ಬದಲಾಗಿ ನಮ್ಮ ಗೊ೦ದಲಭರಿತ ಸ೦ವೇಗಗಳ ಮೇಲೆ ನಿಯ೦ತ್ರಣ ಸಾಧಿಸಬಹುದು ಮತ್ತು ಒಳ್ಳೆಯ ಗುರಿಯನ್ನು ಆಯ್ಕೆ ಮಾಡಿಕೊ೦ಡು ನಮ್ಮನ್ನು ನಾವು ಸೂಕ್ತವಾಗಿ ತೊಡಗಿಸಿಕೊ೦ಡರೆ ಆನ೦ದ ಪಡೆಯಬಹುದು ಜೀವನದ ಮುಖ್ಯ ಉದ್ದೇಶವೇನು? ತುಂಬಾ ನಿಜವಾದ ಮಾತು ಇದನ್ನು ನೋಡಿ ಜೀವನದ ಮುಖ್ಯ ಉದ್ದೇಶಗಳು ಮನುಷ್ಯರಲ್ಲಿ ಮನುಷ್ಯತ್ವ ಗುಣವನ್ನು ಬೆಳೆಸುವುದು. ದಿನಗಳಲ್ಲಿ ನಾವು ಎಷ್ಟೋ ಸಾಧನೆಗಳನ್ನು ಮಾಡುತ್ತೇವೆ. ಆದರೆ ಒಬ್ಬ ಮನುಷ್ಯನನ್ನು ನೋಡಿದಾಗ ಅವರ ಬಗ್ಗೆ ಮನುಷ್ಯತ್ವ ಅನ್ನೋದೇ ಕಳೆದು ಹೋಗಿದೆ. ನಮಗೆ ಜೀವನಕ್ಕೆ ಅನಿವಾರ್ಯವೇ ಆದ ಗಾಳಿ, ನೀರು ಯಾವುದರಿಂದ ಬರುತ್ತಿದೆ ಅಂತ ತಿಳಿದು ಮನುಷ್ಯ ನೀರನ್ನು ಪೋಲು ಮಾಡುತ್ತಾನೆ, ಅಂತರ್ಜಲ ನಾಶ ಮಾಡುತ್ತಾನೆ, ಪರಿಸರ ನಾಶ ಮಾಡುತ್ತಾನೆ. ನಿಜ ಅಂದ್ರೆ ಯೋಚನೆ ಮಾಡಿ " ಮನೆಗೊಂದು ಮರ ಊರಿಗೊಂದು ವನ" ಎಲ್ಲಿದೆ. ಈಗ ಮನೆ ಹತ್ತಿರ ಮರ ಇದ್ದರೆ ಅದು ಮನೆ ಕಟ್ಟಲು ತೊಂದರೆ ಆಗುತ್ತದೆ. ಎಲೆಯಿಂದ ಗೊಬ್ಬರವು ಸಹ ಪ್ಲಾಸ್ಟಿಕ್ ತರ ಕ್ಲೀನ್ ಸಿಟಿ ಆಗಿ ಆಗಿ ಮಾರ್ಪಟ್ಟಿದೆ. ಎಲ್ಲರಿಗೂ ಗೊತ್ತು ಗಾಳಿ ಇಲ್ಲದೆ ಮನುಷ್ಯ ಬದುಕಲಾರ. ನೀರಿಲ್ಲದೆ ಬದುಕಲಾರ. ನಿದ್ದೆಯಿಲ್ಲದೆ ಬದುಕಲಾರ. ಆದರೆ ನೀರು ಎಷ್ಟು ಹಾಳು ಮಾಡುತ್ತಾರೆ. ಮರ ಬೆಳೆಸದೆ ನಾಶ ಮಾಡುತ್ತಾರೆ. ಮರ ಬೆಳೆಸದೇ ಗಾಳಿ ಸಿಗಲಾರದು. ಸಾಧನೆ ಅಂತ ಮನುಷ್ಯ ನಿದ್ದೆ ಇಲ್ಲದೆ ಕೆಲ್ಸ ಮಾಡುತ್ತಾನೆ. ಅದರಿಂದ ಎಷ್ಟು ಕೀರ್ತಿ ಪಡೆದರೆ ಏನು ಬಂತು ಆರೋಗ್ಯ ಇಲ್ಲದ ಮೇಲೆ. ಪ್ರತಿಯೊಬ್ಬರ ಜೀವನದ ಉದ್ದೇಶ ಮನುಷ್ಯತ್ವ ಗುಣವನ್ನು ಬೆಳೆಸುವುದಾಗಿರಲಿ. ಸ್ವಲ್ಪ ಯೋಚನೆ ಕಡೆ ಸಾಗಿದರೆ ಎಲ್ಲವೂ ಸಾಧ್ಯ ಎನ್ನುವ ಸಾಧನೆ ಮುಖ್ಯ ಎನ್ನುವ ಮಾತು ನೆನಪಿರಲಿ. ಬೇರೆಯವರು ಮಾಡಲಿ ಎನ್ನುವ ಯೋಚನೆ ನಮ್ಮದಾಗಿರದೆ, ನಮ್ಮ ಜೀವನದ ಸಾಧನೆ ಏನು ಮಾಡಬೇಕು ಎಂದು ಯೋಚನೆ ಮಾಡುವ ಬದಲು ಭೂಮಿ ಉಳಿಸುವುದೇ ನಮ್ಮ ಯೋಚನೆ ಆಗಿರಬೇಕು ಎಂಬುದು ನನ್ನ ಯೋಚನೆ. ಜೀವನದ ಮುಕ್ಯ ಉದ್ದೇಶವೇ ಮನುಷ್ಯತ್ವ ಗುಣ ಮತ್ತು ಭೂಮಿಯನ್ನು ಉಳಿಸುವುದು. ಹೇಳಿದರೆ ಹಲವಾರು ವಿಷಯಗಳಿವೆ. ಹೀಗೆ ಸ್ವಲ್ಪ ಸಮಯ ಯೋಚನೆ ಮಾಡಿ ನಿಮ್ಮ ಮುಂದೆ ನಡೆದ ಹಲವಾರು ಘಟನೆಗಳ ಯೋಚನೆಗಳು ಸಾಧ್ಯವಾಗಿ ಬರುತ್ತದೆ.. ಇದು ಯಾರ ಮೇಲೆ ದೂರು ಅಲ್ಲ. ಎಲ್ಲರ ಜೀವನದ ಉದ್ದೇಶ ಅಲ್ಲವೇ? ಧನ್ಯವಾದಗಳು….. ಅಂಬೇಡ್ಕರ್ ಬಗ್ಗೆ ಓಶೋನ ಅಭಿಪ್ರಾಯ ಏನಾಗಿತ್ತು? ಉತ್ತಮವಾಗಿತ್ತು, ಅಂಬೇಡ್ಕರ್ ತನ್ನ ಇಡೀ ಜೀವನದಲ್ಲಿ ಅನುಭವಿಸಿದ ಎಷ್ಟೋ ನೋವುಗಳ ಕುರಿತು ಅನುಭವಿಸಿದ ಯಾತನೆಯನ್ನು ಒಂದು ಕ್ರಾಂತಿಯನ್ನಾಗಿಸಿದರು. ಚಿಕ್ಕ ವಯಸ್ಸಿನಲ್ಲೇ ಅವರು ಅದನ್ನು ಗಮನಿಸುತ್ತಾ ಬಂದರು, ಈ ಜಾತಿಯ ಭಾವನೆ ಕೇವಲ ನನ್ನ ಕುಟುಂಬಕ್ಕೆ ಮಾತ್ರ ಸೀಮಿತವೋ / ಇಡೀ ಸಮಾಜದ ನೋವೋ ಎಂಬುದನ್ನು ಅವರು ಅರಿಯ ತೊಡಗಿದರು. ಸಮಾಜದ ನೋವನ್ನ ತನ್ನ ನೋವನ್ನಾಗಿಸಿಕೊಂಡ ಮಹಾನ್ ವ್ಯಕ್ತಿ ಅವರಾದರು. ಈ ಜನರು ಅದೆಷ್ಟು ಬೇಸತ್ತು ಹೋಗಿದ್ದರು ಎಂದರೆ, ಅವರಿಗೆ ನಾವು ಹುಟ್ಟಿರುವುದೇ ಹೀಗೆ, ಬದುಕಬೇಕಿರುವುದೇ ಹೀಗೆ, ಎಂಬಂತೆ ಮೌಡ್ಯತೆಯಲ್ಲಿ ಮುಳುಗಿ ಹೊಗಿದ್ದರು. ಇಂತವರಿಗಾಗಿ ನ್ಯಾಯ ದೊರಕಿಸಿಕೊಟ್ಟ ಮೇಲು ಸಮಾಜದ ಎತ್ತರದ ಸ್ಥಾನದ ವ್ಯಕ್ತಿಗಳು ಅದನ್ನು ಸಹಿಸದೆ ಮೇಲು ಕೀಳು ಎಂಬ ಭಾವನೆಯಲ್ಲಿ ಅವರನ್ನು ಕೀಳಾಗಿ ಕಾಣುವುದಲ್ಲದೆ, ಅಸಹ್ಯವಾಗಿ ನಡೆಸಿಕೊಂಡು ಬಂದದ್ದು, ಅಂಬೇಡ್ಕರ್ ಮನಸ್ಸಿನಲ್ಲಿ ಬೇರೆಯ ಭಾವನೆಯನ್ನೇ ಸೃಷ್ಟಿಸಿತು. ಈ ದೇಶದ ಜನರ ಮನಸ್ಥಿತಿ ಸಂಪ್ರದಾಯ, ಜಾತಿ, ಧರ್ಮ, ಮೇಲು ಕೀಳಿನ ಭಾವನೆ ಅಷ್ಟು ಸುಲಭವಾಗಿ ಹೋಗಲಾರದು ಮತ್ತದು ತೊಲಗಲು ಬಹಳಷ್ಟು ಬುದ್ದಿವಂತಿಕೆ, ಅರ್ಹತೆ ಬೇಕಾಗುತ್ತದೆ ಎಂಬುದನ್ನು ಅವರು ಅರಿತರು, ಈ ಕಾರಣದಿಂದಾಗಿ - ತನ್ನ ಇಡೀ ಬದುಕಿನಲ್ಲಿ ಅವರು ತೆಗೆದು ಕೊಂಡ ನಿರ್ಧಾರ ಮತ್ತೆ ಎಂದಿಗೂ ಹಿಂದೂ ಧರ್ಮದಲ್ಲಿ ಜನಸಲಾರೆ, ಮುಂದಿನ ಜನ್ಮವಿದ್ದರೆ ಅದು ಬೌದ್ಧ ಧರ್ಮದಲ್ಲಿ ಮಾತ್ರ ಎಂದರು. ಕಾರಣ ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿ, ಬ್ರಾಹ್ಮಣ ಕ್ಷತ್ರಿಯ ವೈಶ್ಯ ಕ್ಷೂದ್ರ ವೆಂಬ ಪದ್ದತಿಗಳು. ಅದು ಇಂದಿಗೂ ಹಾಗೆ ಇದೆ ಬದಲಾವಣೆ ಎಲ್ಲಾಗಿದೆ.!?. ಜಾತಿಯ ಹೆಸರಿನಲ್ಲಿ ಕಚ್ಚಾಡುವರು, ದೊಂಬಿ ಗಲಾಟೆ ಮಾಡುವವರು, ನಿರಂತರ ಇದ್ದೇ ಇರುತ್ತಾರೆ. ಇವರಿಗೆ ರಾಜಕೀಯವಾಗಿ ಕುಮ್ಮಕ್ಕು ಬೇರೆ .! ಎಲ್ಲವೂ ನಮ್ಮ ಮೌಡ್ಯತೆ. ಇದನ್ನೇ ನಾನು ಓದಿದ್ದು. ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು? ಬಾಣಂತಿಯರಿಗೆ ಯಾವ ಆಹಾರ ಕೊಟ್ಟರೆ ಹೊಳ್ಳೆಯದು? ಭಾರತದಲ್ಲಿ ದೇವರ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವವರು ಯಾರು ಯಾರು? ನನ್ನ ಪ್ರಕಾರ ದೇವರು ಇದ್ದರೆ ಇರಬಹುದು. ದೇವಾಲಯಗಳಲ್ಲಂತೂ ಇರುವುದಿಲ್ಲ. ದೇವಾಲಯಗಳು ಕಡಿಮೆ ಲಾಗತ್ತು ಹಾಕಿ ಅತಿ ಹೆಚ್ಚು ಲಾಭ ಪಡೆಯುವ ಅಂಗಡಿಗಳು. ಜನರು ದೂರದ ಊರುಗಳಿಂದ ಕಷ್ಟಪಟ್ಟು ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದೇವಾಲಯಕ್ಕೆ ಪ್ರವೇಶ ಮಾಡಿ ದೇವರ(ಮೂರ್ತಿಯ) ಮುಂದೆ ಬಂದಾಗ ನಡೀರಿ ನಡೀರಿ ಎಂದು ಹೊರಗೆ ಅಟ್ಟುತ್ತಾರೆ. ಕೆಲವು ದೇವಾಲಯಗಳಲ್ಲಿ ಗರ್ಭಗುಡಿಯಲ್ಲಿ ಬೆಳಕೂ ಇರುವುದಿಲ್ಲ. ಮೂರ್ತಿಯೂ ಸರಿಯಾಗಿ ಕಾಣಿಸುವುದಿಲ್ಲ. ದೊಡ್ಡ ದೊಡ್ಡ ಪ್ರಸಿದ್ಧ ದೇವಾಲಯಗಳಲ್ಲಿ ಹೆಚ್ಚು ಜನರು ಬಂದರಂತೂ ದೇವರ ದರ್ಶನ ಬೇಗ ಮಾಡಿಕೊಳ್ಳಿ ಎಂದು ನೂರೋ ಇನ್ನೂರೋ ರೂಪಾಯಿಯ ಟಿಕೆಟ್ ಮಾರುತ್ತಾರೆ. ಅಂತಹವರ ಕ್ಯೂ ಬೇರೆ ಇರುತ್ತದೆ. 800 ರೂಪಾಯಿ ಕೊಟ್ಟರೆ ಸೀದಾ ಗರ್ಭಗುಡಿಯವರೆಗೆ ಕರೆದುಕೊಂಡು ಹೋಗುತ್ತಾರೆ. ಇದಲ್ಲದೆ ಆ ಸೇವೆ ಈ ಸೇವೆ ಅಂತ ಹೇಳಿ ತರಹತರಹದ ಟಿಕೆಟ್ ಮಾರುತ್ತಾರೆ. ಒಂದು ವಿಗ್ರಹ ಫೇಮಸ್ ಆದರೆ ಕೋಟಿಗಟ್ಟಲೆ ಸಂಪಾದಿಸುತ್ತದೆ. ಫೇಮಸ್ ಆಗದಿದ್ದರೆ ಅದರ ಹತ್ತಿರ ಯಾರೂ ಸುಳಿಯುವುದಿಲ್ಲ. ವಿಗ್ರಹ ತೋರಿಸಿ ದೇವರ ಹೆಸರಿನಲ್ಲಿ ಮೋಸ ಮಾಡುವವರು ಅಂದರೆ ಇಂತಹ ದೇವಾಲಯದವರು. ನಮ್ಮ ಮನಸ್ಸು ಏಕೆ ವರ್ತಮಾನದಿಂದ ಓಡಿಹೋಗುತ್ತದೆ? ಮನಸ್ಸು ವರ್ತಮಾನದಿಂದ ಓಡಿಹೋಗುತ್ತದೆ ಎಂದರೆ, ಅದು ಹತ್ತಿರದ ಭವಿಷ್ಯವನ್ನು ಚಿಂತಿಸುವುದನ್ನು ಅಥವಾ ಹಿಂದಿನ ಅನುಭವಗಳಲ್ಲಿ ನಿರತವಾಗುವುದನ್ನು ಸೂಚಿಸಬಹುದು. ಈ ಪ್ರವೃತ್ತಿಯ ಹಿಂದೆ ಹಲವು ಕಾರಣಗಳು ಇರಬಹುದು: ಅತಿಯಾದ ಚಿಂತೆ ಮತ್ತು ಆಲೋಚನೆಗಳು: ಅನೇಕ ವೇಳೆ, ಮನಸ್ಸು ವರ್ತಮಾನದ ಚಿಂತೆಗಳನ್ನು ಹೊತ್ತು ಮುಂದಿನ ಸಮಯವನ್ನು ಚಿಂತಿಸುವುದರಿಂದ ಓಡಿಹೋಗಬಹುದು. ಅನಿಸರಿಸಲಾದ ಅನುಭವಗಳು: ಹಿಂದಿನ ಅನಿಗತ ಅನುಭವಗಳು ಯಾವುದೇ ಕಾರಣಕ್ಕೆ ಮನಸ್ಸು ಆಕರ್ಷಿತವಾಗಿರಬಹುದು. ಹೆಚ್ಚು ಯಾತ್ರೆ ಮತ್ತು ದೂರದ ಯಾತಾಯಾತ: ವಿಶ್ವಾಸವಾಗಿ, ದೂರದ ಸ್ಥಳಗಳನ್ನು ಭೇಟಿಯಾಗುವುದು ಅಥವಾ ವಿಭಿನ್ನ ಪ್ರದೇಶಗಳಲ್ಲಿ ಯಾತ್ರಿಸುವುದು ಮನಸ್ಸನ್ನು ಹಿಂದಿನ ಅನುಭವಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಸೂಚಿಸಬಹುದು. ಭವಿಷ್ಯದ ಚಿಂತೆ: ಭವಿಷ್ಯದಲ್ಲಿ ಏನಾಗಬಹುದು ಎಂಬ ಚಿಂತೆ ಮನಸ್ಸನ್ನು ವರ್ತಮಾನದಿಂದ ಓಡಿಹೋಗಿಸಬಹುದು. ಧರ್ಮ ಮತ್ತು ಆಧ್ಯಾತ್ಮಿಕತೆ: ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ರಿಯೆಗಳು ಮನಸ್ಸನ್ನು ಹಿಂದಿನ ಅನುಭವಗಳ ಕಡೆಗೆ ಸೆಳೆಯಬಹುದು. ಕೆಲಸ ಮತ್ತು ನಿರ್ವಹಣೆ: ಹಲವು ಜಾಗಗಳಲ್ಲಿ ಯಾತ್ರಿಸಲು ಬೇಕಾದ ನಿರ್ವಹಣೆ, ಯಾತಾಯಾತ ಮತ್ತು ವ್ಯವಸ್ಥಾಪನಗಳು ಇರಬಹುದು. ನಗರ ಪರಿಚಯ: ಹೊಸ ಊರ ಅಥವಾ ನಗರಗಳನ್ನು ಪರಿಚಯಿಸಲು ಯಾತ್ರಿಸುವುದು ಅನೇಕ ವೇಳೆ ಮನಸ್ಸನ್ನು ಹಿಂದಿನ ಅನುಭವಗಳ ಕಡೆಗೆ ಸೆಳೆಯಬಹುದು. ಇವು ಅನೇಕ ಕಾರಣಗಳಾಗಿರಬಹುದು. ಕೆಲವೊಮ್ಮೆ ಮನಸ್ಸು ಹಿಂದಿನ ಅನುಭವಗಳನ್ನು ಚಿಂತಿಸಿದರೆ ಅದರಿಂದ ತನ್ನ ಜೀವನವನ್ನು ಮೇಲೆತ್ತಬಹುದು ಅಥವಾ ಅದನ್ನು ಹೊಂದಿಸಬಹುದು. ನಾಲ್ಕು ವೇದಗಳಲ್ಲಿ ಅತ್ಯಂತ ಪ್ರಾಚೀನ ವೇದ ಯಾವುದು? ವೇದ, ಮೊದಲಿನಿಂದಲೂ ಇದ್ದದ್ದು ಒಂದೆ. ಅದನ್ನು ವ್ಯಾಸರು ವಿಭಜಿಸಿದರು (compiled) ಅದರಿಂದಲೇ ಅವರಿಗೆ ಆ ಹೆಸರು ಬಂದದ್ದು ಎಂದು ನಮ್ಮದೇ ಇತಿಹಾಸ್ ಲ(ಮಹಾಭಾರತ) ಹೇಳುತ್ತದೆಯಲ್ಲ ! ಅವರು ಒಂದೆ ಇದ್ದ ವೇದವನ್ನು ನಾಲ್ಕು ಭಾಗಗಳಾಗಿ ವಿಭಜಿಸಿದರು -ಯಾಕೇ, ಯಾವ ಕಾರಣಕ್ಕಾಗಿ, ಅದನ್ನು ಪ್ರತ್ಯೇಕ ವಾಗಿಸಲು ತೆಗೆದುಕೊಂದ ಕಾರಣ್,ಮಾಪನ,ಉದ್ದೇಶಮತ್ತು ಆಧಾರ ತಿಳಿದಿಲ್ಲ ಅಷ್ಟೆ. ಭಾಷಾವಿಜ್ನಾನಿಗಳ ಪ್ರಕಾರ, ವೇದಗಳ್ಲಿ ಉಪಯೋಗಿಸಿದ ಸಂಸ್ಕತ ಅಭ್ಯಸಿಸಿದರೆ ಋಗ್ವೇದದ ಭಾಷೆ ಅತೀ ಪ್ರಾಚೀನ ಅನ್ನಬಹುದು ! (ಇದು ಸರಿಯಾದ ಮಾನದಂಡವೇ ! -ಇರದೇ ಇರಲೂಬಹುದು) ಅದಲ್ಲದೇ -ಋಗ್ವೇದ ದಲ್ಲಿರುವ ಋಕ್ಕುಗಳು ಯಜುರ್ವೆದದಲ್ಲಿಯೂ ಇರುವುದನ್ನು ಕಾಣಬಹುದು !(ಇದು ಎಕೆ ?) ಪ್ರಾಚೀನ ವಿಚಾರಗಳು ಬೆಳೆದುಬಂದ ರೀತಿಯನ್ನು ಅಭ್ಯಸಿಸಿ ವಿಂಗಡನೆ ಮಾಡಿರಬಹುದು ಆದರಿಂದ ನಮ್ಮ ವೇದಗಳನ್ನು ನಮಗೇ ತಿಳಿಸಿಕೊಟ್ಟವರು ಯುರೋಪದ ಜನ ! ಅವರು ಅವುಗಳನ್ನು ತಿಳಿದು ಕೊಂಡ,ಅಭ್ಯಸಿಸಿದರೀತಿ,ನಮಗೆ ತಿಳಿಸಿದ ಕಾರಣ್ ಮತ್ತು ರೀತಿ -ಎಲ್ಲದರಲ್ಲಿಯೂ ರಾಜಕೀಯ ಇರುವುದು ವೇದಗಳಷಟೇ ಸ್ಪಷ್ಟ. ದೇವಾಲಯಗಳನ್ನು ಸರ್ಕಾರ ನೋಡಿಕೊಳ್ಳುವುದು ಮತ್ತು ಭಕ್ತರೇ ನೋಡಿಕೊಳ್ಳುವುದು ಇದರ ಸಾಧಕ ಬಾಧಕಗಳೇನು? ನಿಮ್ಮ ಜೀವನದಿಂದ ಇತರ ಜನರು ಕಲಿಯಬಹುದಾದ ಶ್ರೇಷ್ಠ ಜೀವನ ಪಾಠ ಯಾವುದು? ನಿಜ ಹೇಳಬೇಕೆಂದರೆ, ನನ್ನ ಜೀವನ ನೋಡಿ ಇತರರು ಕಲಿಯುವ ಪಾಠ ಏನಿಲ್ಲ! ಇತರರ ಮುಂದೆ ನನ್ನ ಸಾಧನೆಗಳು ನಗಣ್ಯವೆಂದು ಭಾವಿಸುತ್ತೇನೆ ಏಕೆಂದರೆ ನಾನು ಭಾರತೀಯ! ಹೂಟ್ಟೆಕಿಚ್ಚು ಎಂಬುದು ನಮ್ಮ ಭಾರತೀಯ ಸಮಾಜದಿಂದ ಅಂಟಿಕೂಂಡಿದೆ. ಪಕ್ಕದ ಮನೆಯವರು ಅಥವ ಸಂಬಂಧಿಗಳು ಏನೇ ಖರೀದಿಸಿದರೂ, ಸಾಧಿಸಿದರೂ ಅವರಿಗಿಂತ ಒಂದು ಇಂಚು ಹೆಚ್ಚು ಮಾಡಬೇಕೆಂಬ ಹಂಬಲ. ನಮ್ಮ ಸುತ್ತಲಿನ ಸಮಾಜದ ಜನರ ಜೀವನ ಪರಿಸ್ಥಿತಿಯನ್ನು ಕಾಲಕ್ಕೆ ತಕ್ಕಂತೆ ಅರಿತು, ಕಲಿತು ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿ, ಶ್ರೇಷ್ಠತೆ ಕಡೆಗೆ ಕಲಿಯಲು ಮುನ್ನಗ್ಗುತ್ತಿರುವ ನಾವು, ನಮ್ಮ ಜೀವನ ಸಮೃಧ್ದವಾಗಿದೆ ಎಂದು ಭಾವಿಸುವವರಲ್ಲ. ಮೇಲೆ ಹೇಳಿದಂತೆ ಪ್ರತಿಯೊಬ್ಬರ ಜೀವನ ಶೈಲಿ ಹಾಗೂ ಅವರು ಜಗತ್ತನ್ನು ನೋಡುವ ಕಲ್ಪನೆ ಭಿನ್ನವಾಗಿರುತ್ತದೆ. ಈ ಗೋಜಲಿನ ಪ್ರಪಂಚದಲ್ಲಿ ನನ್ನ ವ್ಯಕ್ತಿತ್ವ ಬೇರೆಯವರಿಗೆ ಅಸಹ್ಯ ಹುಟ್ಟಿಸಬಹುದು ಅಥವ ಇಷ್ಟವಾಗಬಹುದು. ಉದಾ: "ಮಹಾತ್ಮ ಗಾಂಧೀ" ಇಂದಿನ ಯುವ ಪೀಳಿಗೆಗೆ ಗೊಡ್ಸೆ ಮಾಡಿದ್ದು ಉತ್ತಮ! ಹಳಬರಿಗೆ ಗಾಂಧೀ ಒಂದು ಚೈತನ್ಯದ ಚಿಲುಮೆ! ಸಸ್ಯಹಾರಿಗಳು ಒಳ್ಳೆಯವರೋ ? ಮಾಂಸಹಾರಿಗಳು ಒಳ್ಳೆಯವರೋ? ಉತ್ತರ ಕಠಿಣ. ಪಾಪ ಓಡಲಾರದ, ನಿಂತಲ್ಲೆ ನಿಂತಿರುವ ಜೀವವನ್ನು ಕೊಂದು ತಿನ್ನುವ ಸಸ್ಯಹಾರಿಗಳು! ಅಟ್ಟಾಡಿಸಿ ,ಭೀತಿ ಹುಟ್ಟಿಸಿ ಕೊಂದುತಿನ್ನುವ ಮಾಂಸಹಾರಿಗಳು! ಈ ನಿಮ್ಮ ಪ್ರಶ್ನೆಗೆ ಉತ್ತರ ಸಿಗುವ ಜಾಗ ಸಾವಿನ ಮನೆ ಮತ್ತು ಮಡಿದ ವ್ಯಕ್ತಿಯ ಬಗ್ಗೆ ಗುಣಗಾನ ಮಾಡುವ (ಹತ್ತಿರದಿಂದ ಕಂಡವರು) ಮಾತುಗಳು. ನಮಗೆ ನಾವು ಹೇಳಿಕೊಳ್ಳುವುದು ಎಷ್ಟು ಸಮಂಜಸ? ಇತರರು ಹೇಳಬೇಕು ಮತ್ತು ಬರೆಯ ಬೇಕು ನಮ್ಮ ಬಗ್ಗೆ ಅವರುಗಳ ದೃಷ್ಟಿಕೋನದಲ್ಲಿ…….. ನಮ್ಮ ರಾಜ್ಯದಲ್ಲಿನ ಪ್ರಮುಖ ಬೆಳೆಗಳು ಯಾವುವು? ನಾನು ಜೀವನದಲ್ಲಿ ಅನುಭವಿಸಬೇಕಾದ ಪ್ರಮುಖ ಹತ್ತು ವಿಷಯಗಳು ಯಾವುವು? 1. ನನ್ನನು ನಾನೇ ಅನುಭವಿಸಬೇಕು ಅರ್ಥಾತ್ ನನ್ನನು ನಾನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು . 2. ಹೆಚ್ಚಿನ ಸಮಯ ನನ್ನೊಂದಿಗೆ ನಾನೇ ಇರಬೇಕು. 3. ನನ್ನ ಕಷ್ಟಗಳನ್ನು ಅನುಭವಿಸುತ್ತಾ ಸುಖದ ಮೆಟ್ಟಿಲು ಏರಬೇಕು. 4. ಮನುಷ್ಯರು ಕಾಣದ ವಿಸ್ತಾರ ಪರಿಸರದಲ್ಲಿ ಕುಳಿತು, ಹಕ್ಕಿಗಳ ಚಿಲಪಿಲಿ ಮತ್ತು ತಂಪು, ಶುದ್ದ ಗಾಳಿಯನ್ನು ಅನುಭವಿಸಬೇಕು. 5. ನನ್ನಲ್ಲಿ ನನ್ನನೆ ಸದಾ ಕಾಣುವುದು. 6. ನನ್ನ ಭಾವನೆಗಳಿಗೆ ಮೊದಲ ಸ್ಥಾನ 7. ನನ್ನಿಂದ ಬೇರೆಯವರ ಮುಖದಲ್ಲಿ ನಗು,ಜೀವನದಲ್ಲಿ ಸಂತೋಷ 8. ನನ್ನ ಯಶಸ್ಸು ನನ್ನ ಕುಟುಂಬಕ್ಕೆ ಹೆಸರು ತರುವಲ್ಲಿ 9. ಸದಾ ಒಳ್ಳೆಯ ಯೋಚನೆ 10. ನಗು, ಸಹಾಯ, ದಾನ ಧರ್ಮ ನನ್ನ ಆಸ್ತಿ ಆಗುವಂತಹ ಅನುಭವ ಕ್ವೋರದಲ್ಲಿ ಏಕೆ ಉತ್ತರ ಗೊತ್ತಿಲ್ಲದಿದ್ದರು ಉತ್ತರ ಕೊಡುತ್ತಾರೆ? ಮನುಷ್ಯನಿಗೆ ಕಣ್ಣಿಗೆ ಕಾಣಿಸದ ವಸ್ತು ಮನಸ್ಸು ಮತ್ತು ಆತ್ಮ, ಆದರೆ ಮೆದುಳು ಕಣ್ಣಿಗೆ ಕಾಣುವ ವಸ್ತು ಇವುಗಳಲ್ಲಿ ಯಾವುದು ಹೆಚ್ಚು? ಕಣ್ಣಿಗೆ ಕಾಣವ ಮತ್ತು ಕಾಣಿಸದ ಎರಡು ರೀತಿಯ ವಿಚಾರಗಳು ಮೊದಲಿನಿಂದಲೂ ಇದೆ. ಅದನ್ನು ಗೊಚರ & ಅಗೋಚರ ಎನ್ನಲಾಗುತ್ತದೆ. ಉದಾ - ನಾವು ಫೋನ್ ನಲ್ಲಿ ಮಾತನಾಡುತ್ತೇವೆ. ನಮಗೆ ಧ್ವನಿ ತರಂಗದ ಅಲೆಗಳ ಮೂಲಕ ಕೇಳುತ್ತದೆ. ಅದು ಮ್ಯೂಜಿಕ್ , ರೇಡಿಯೋ, ಮಾತು, ಏನೆಲ್ಲ ಆದರೂ ಶಬ್ದದ ತರಂಗಗಳ ಮೂಲಕ ಕೇಳುತ್ತದೆ. ಇಂಟರ್ನೆಟ್ ಮೂಲಕ ನೀವು ಕಳಿಸಿದ ಒಂದು ಫೋಟೋ ಕೂಡ ಸಾವಿರಾರು ತುಂಡುಗಳಾಗಿ ವಿಂಗಡಿಸಿ, ನಂತರ ನಮ್ಮ ಮೊಬೈಲ್ ನಲ್ಲಿ ಒಂದು ರೂಪವನ್ನು ಪಡೆದುಕೊಳ್ಳುತ್ತದೆ. ಇದು ಬಾಹ್ಯ ಜಗತ್ತಿನಲ್ಲಿ ವಿಸ್ತಾರಗೊಳ್ಳುವ ಮೊದಲು ವಿಜ್ಞಾನಿಗಳ ಮನದಲ್ಲಿ , ಅವರ ಆಂತರಿಕ ಜಗದೊಳಗೆ ಕಾಡಲ್ಪಡುತ್ತದೆ. ಅದನ್ನೇ ಅವರು ತಂತ್ರಜ್ಞಾನದ ಮೂಲಕ ಸಾಭೀತುಪಡಿಸುವುದು. ಅದೇನೆ ಇರಲಿ, ಮನಸ್ಸು ಮತ್ತು ಆತ್ಮ ಇವು ಕಣ್ಣಿಗೆ ಕಾಣುವುದಿಲ್ಲ, ಆದರೆ ಮೆದುಳಿನ ಕಣ್ಣಿಗೆ ಕಾಣುತ್ತವೆ. ಇವುಗಳಲ್ಲಿ ಯಾವುದು ಹೆಚ್ಚು, ಮನಸ್ಸು ಹೆಚ್ಚೆಂದೇನೂ ಅಲ್ಲ, ಅಥವಾ ಕಡಿಮೆ ಅಂತಲೂ ಅಲ್ಲ, ಮನಸ್ಸಿಗೆ ೨ ಮುಖಗಳಿವೆ. ಒಂದು ಆಂತರಿಕ ಮತ್ತೊಂದು ಬಾಹ್ಯ. ನಾವೀಗ ಅದರೋಟ್ಟಿಗೆ ಬದುಕುತ್ತಿದ್ದರೆ ಅದು ಬಾಹ್ಯ ದಲ್ಲಿ , ಬಾಹ್ಯದ ಮನಸ್ಸು ನಿರಂತರ ವ್ಯವಹಾರಿಕವಾಗಿರುತ್ತದೆ, ಅದುಲೆಕ್ಕಾಚಾರದ್ದು, ನೀವೆಷ್ಟು ಸಂಪಾದಿಸಿದ್ದೀರಿ, ಕೂಡಿಡುವಿರಿ, ಖರ್ಚು, ವೆಚ್ಚ, ಆದಾಯ ಲಾಭ ನಷ್ಟ, ಇಂತದ್ದರಬಗ್ಗೆ ಅತಿಹೆಚ್ಚು ಚಿಂತೆ. ನಿಮ್ಮನ್ನ ವಾಸ್ತವದಲ್ಲಿ ನೀವಾಗಿರಲು ಬಿಡುವುದಿಲ್ಲ, ಹೆಚ್ಚೆಂದರೆ ಸಂಸಾರದಲ್ಲಿ ಒಂದಷ್ಟು ಖುಃಷಿಯನ್ನು ನೀಡಿ ಮತ್ತೆ ಕಸಿದುಕೊಳ್ಳುತ್ತದೆ.ಇದನ್ನೇ ಮನಸ್ಸಿನ ಹಿಡಿತದಲ್ಲಿ ನಾವಿದ್ದೀವಿ ಎನ್ನುವುದರ ಅರ್ಥ ಮತ್ತು ಮನಸ್ಸಿನ ಒಂದು ಮುಖ ಇದಾಗಿದೆ. ಎರಡನೇಯದ್ದು ಆಂತರಿಕ ಮನಸ್ಸು, ಅದು ನಿಮ್ಮ ಹತೋಟಿಯಲ್ಲಿ ಇರುತ್ತದೆ. ಕಾರಣ ನೀವು ನಿಮ್ಮ ಇಂದ್ರೀಯಗಳನ್ನು ನಿಗ್ರಹಿಸಿರುವಿರಿ, ಸಂಪೂರ್ಣವಾಗಿ ಅಲ್ಲದಿದ್ದರೂ ಕನಿಷ್ಠ , ಸ್ವಲ್ಪ ಮಟ್ಟಿಗೆ ಆದರೂ ನಿಮಗೆ ಇದು ಸಹಕಾರಿ ಆಗುತ್ತದೆ. ಹೇಗೆಂದರೆ ನೀವು ನಿಮ್ಮ ಆಲೋಚನೆಗಳನ್ನು ನಿಮ್ಮ ಇತಿ ಮಿತಿಯಲ್ಲಿ ಇರಿಸುವಿರಿ, ಬೇಡದ ವಿಚಾರದಲ್ಲಿ ತಲೆಹಾಕುವುದಿಲ್ಲ. ಮನಸ್ಸು ನೂರಾರು ವಿಚಾರವನ್ನು ತಂದೊಡ್ಡಿದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮಗೆ ಏನು ಬೇಕೋ, ಎಷ್ಟು ಬೇಕೋ, ಯಾವುದು ಅಗತ್ಯವೋ ಅದನ್ನು ಮಾತ್ರ ಮಾಡುವಿರಿ. ನಂತರ ನೀವು ಧ್ಯಾನದಲ್ಲಿ ನಿರತರಾಗಿದ್ದರೆ, ನಿಮಗೆ ಸೂಕ್ಷ್ಮ ಶರೀರದ ಅನುಭವಗಳು ಆಗುತ್ತದೆ, ಹಾಗೆ ನಿಮ್ಮ ಮನಸ್ಸಿನ ಸೂಕ್ಷ್ಮ ಭಾವನೆ , ನಿಮ್ಮ ಫ್ಯೂಚರ್, ಫಾಸ್ಟ್, ಪ್ರಸೆಂಟ್ ಗಳ ಬಗ್ಗೆ ಅರಿವಾಗುತ್ತದೆ. ನಿಮ್ಮ ಆತ್ಮದ ದರ್ಶನ ಕೂಡ ಆಗುತ್ತದೆ. ಈಗ ನೀವೇ ಯೋಚಿಸಿ, ಯಾವುದು ಮುಖ್ಯ. ಯಾವುದು ಹೆಚ್ಚು. ಯಾವುದು ಬೇಕು ಎಂದು. ಹೆಚ್ಚು ಸಂಪಾದಿಸುವವರಿಗೆ ಹೆಚ್ಚು ಗೌರವ ಎಂಬುದು ಸರಿಯೇ? ಈ ಸಮಾಜದ ವ್ಯವಸ್ಥೆಗೆ ಪರ್ಯಾಯವೇನು? ಲಾಭ ಮಾಡುತ್ತಿದ್ದ ಕನ್ನಡಿಗರ ವಿಜಯಾ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಮುಂತಾದವುಗಳನ್ನು ಬೇರೆ ನಷ್ಟದಲ್ಲಿರುವ ಬ್ಯಾಂಕ್ ಗಳ ಜೊತೆಗೆ ವಿಲೀನ ಮಾಡಿ ಅನ್ಯಾಯ ಮಾಡಲಾಯಿತೇ? ಬಕ್ರೀದ್ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಮರನ್ನು ಉದ್ದೇಶಿಸಿ "ಮತ್ತೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು" ಎಂದು ಹೇಳಿದ್ದಾರೆ. ಆದರೆ ಇಸ್ಲಾಂ ನಲ್ಲಿ ಇದಕ್ಕೆ ಅನುಮತಿ ಇದೆಯೇ ? ವರ್ಮ್‌ಹೋಲ್ ಮತ್ತು ಕಪ್ಪು ಕುಳಿಯ ನಡುವಿನ ವ್ಯತ್ಯಾಸವೇನು? ಚಾಣಕ್ಯನ ನಿಧನ ಹೇಗಾಯಿತು? ನೀವು ದೇವರಿದ್ದಾನೆ ಎಂದು ಹೇಗೆ ನಂಬುತ್ತಿರಾ? ಕೊರೊನ (ಕೊರೊನ -21) ಬಗ್ಗೆ ಜನರ ನಿರ್ಲಕ್ಷ್ಯವೇಕೆ? ದೇವಸ್ಥಾನಗಳಲ್ಲಿ ಹಣ ಪಡೆದು ಶೀಘ್ರದರ್ಶನಕ್ಕೆ ಅನುವು ಮಾಡಿಕೊಡುವುದು ಸರಿ ಎಂದು ನಿಮಗೆ ಅನಿಸುತ್ತದೆಯೇ? ಯಾಕೆ ನಾನು ಇದ್ದಕ್ಕಿದ್ದಂತೆ ಕೋಟಿ ಸಿಕ್ಕರೆ ಏನು ಮಾಡಬೇಕು ಎಂದು ಚಿಂತಿಸುತ್ತೇನೆ? ಕೃಷ್ಣನ ಸೋದರಮಾವನ ಹೆಸರನ್ನು ಆವರಣ ಚಿಹ್ನೆಗೆ () ಏಕೆ ಇಟ್ಟಿದ್ದಾರೆ? ನಾವು ಸಣ್ಣವರಿದ್ದಾಗ ಹೃದಯಾಘಾತ 60 ವರ್ಷದವರ ಮೇಲ್ಪಟ್ಟವರಿಗೆ ಆಗುತಿತ್ತು, eಗ ಸಣ್ಣ ವಯಸ್ಸಿನವರಿಗೂ ಹೃದಯಾಘಾತ ಆಗುತ್ತಿರುವುದೆಕೆ ? ಪಾಡ್ದನ ಎಂದರೇನು? ಈ ಸಂಸ್ಕೃತಿ ಎಲ್ಲಿ ಕಂಡು ಬರುತ್ತದೆ?
#😏ಇದೇ ಪ್ರಪಂಚ ಶ್ರೀ ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಭಗವದ್ಗೀತೆ, ಉಪನಿಷತ್ತು, ಬ್ರಹ್ಮ ಸೂತ್ರಗಳಿಂದ ಬ್ರಹ್ಮಾಂಡದ ಮೂಲವಾದ ಒಬ್ಬ ಪರಮಾತ್ಮನ ಬಗ್ಗೆ ಬೋಧಿಸಿದಾಗ ಜನರಿಗೆ ದೇವರ ಬಗ್ಗೆ ಏಕೆ ಗೊಂದಲವಿದೆ? ಇಲ್ಲಿ ಎಲ್ಲರ ಮಾರ್ಗಗಳು ಬೇರೆ ಬೇರೆಯಾದರು ಅವರೆಲ್ಲರು ಹೇಳುತ್ತಿರುವ ಪ್ರಮುಖ ಅಂಶ ದೇವರು ಕುರಿತು ಆಗಿದೆ. ಜನರಿಗೆ ಗೊಂದಲ ಯಾವಾಗ ಉಂಟು ಆಗುತ್ತದೆ ಎಂದರೆ,ಆಯ್ಕೆ ಗಳು ಅಧಿಕವಾಗಿ ಇರುವಲ್ಲಿ ಈ ರೀತಿಯಾಗುವುದು ಸಹಜ. ನಿಮಗೆ ಬೇಕಿಗಿರುವುದನ್ನು ಒಂದೇ ಆಯ್ಕೆ ಯಲ್ಲಿ ಕೊಟ್ಟರೆ ಅದನ್ನು ನೀವು ಯಾವುದೇ ವಿಚಾರ ಮಾಡದೇ ಸುಮ್ಮನೆ ತೆಗದುಕೊಳ್ಳುತ್ತಿರಿ ಅಲ್ಲವೇ ಇದು ಅಗೆಯೇ. ನೀವು ಗೊಂದಲಕ್ಕೆ ಒಳಗಾಗಬಾರದು ಎಂದರೆ ಕೂಡುವವನಲ್ಲಿ ಒಂದೇ ಆಯ್ಕೆ ಇರ್ಬೇಕು ಇಲ್ಲವೇ ಪಡೆದುಕೊಳ್ಳುವವನ ಇಚ್ಛೆ ಆಯ್ಕೆ ಒಂದೇ ಆಗಿರ್ಬೇಕು.ಆಗಿದ್ದಾಗ ಗೊಂದಲ ಇರುವುದಿಲ್ಲ. ಇದನ್ನು ಉದಾಹರಣೆ ಮೂಲಕ ನೋಡುವುದು ಆದರೆ ನಿಮಗೆ ಒಂದು ಬೈಕ್ ನ್ನು ತಗೆದುಕೊಳ್ಳುವ ಆಯ್ಕೆಯನ್ನು ಒಂದು ಕಂಪನಿ ನಿಮ್ಗೆ ನೀಡಿದೆ ಅಂದುಕೊಳ್ಳಿ ಅವರು ನಮ್ಮ ಕಂಪನಿಯ ಬೈಕ್ ನ್ನೇ ತೆಗೆದುಕ್ಕೊಳ್ಳಿ ಅಂದಾಗ ನ ಅಲೋವೆರಾದಲ್ಲಿ ಇರುವ ಪೌಷ್ಟಿಕ ಅಂಶಗಳು ಯಾವವು? ನೀವು ದೊಡ್ಡ ಠೇವಣಿ ಮಾಡಿದಾಗ ಬ್ಯಾಂಕುಗಳು ನಿಮ್ಮನ್ನು ವಿಭಿನ್ನವಾಗಿ ಪರಿಗಣಿಸುತ್ತವೆಯೇ? ಮೃತ್ಯು ಹೊಂದಿದ ಮಾನವನ ಆತ್ಮ ಪುನರ್ಜನ್ಮ ಹೊಂದುವುದು ಅನ್ನುವದಾದರೆ ಪಿತೃಪಕ್ಷದಂದು ಏಕೆ ಆತ್ಮಗಳಿಗೆ ಪೂಜೆ ಮಾಡುತ್ತರೆ ಮತ್ತು ಪುನರ್ಜನ್ಮ ಹೊಂದಿದ ಆತ್ಮವು ಆ ದಿನ ಬರುವುದು ಹೇಗೆ ಸಾಧ್ಯ? ಶಾಸ್ತ್ರ / ಪುರಾಣಗಳ ಪ್ರಕಾರ ಇದಕ್ಕೆ ಅದರದ್ದೇ ಆದ ನಂಬಿಕೆಯಿದೆ ಎನ್ನುತ್ತೇವೆ, ವೈಜ್ಞಾನಿಕವಾಗಿ ಇವುಗಳನ್ನು ಸಾಬೀತುಪಡಿಸಲು ಸಾದ್ಯವಿಲ್ಲ. ಆಧ್ಯಾತ್ಮಿಕವಾಗಿ ಪ್ರತಿಯೊಂದು ಜೀವಿಯೂ ಸತ್ತ ನಂತರ ಮತ್ತೆ ಪುನರ್ಜನ್ಮ ಪಡೆಯಲೇ ಬೇಕು. ಎಲ್ಲಾ ಜೀವರಾಶಿಗಳು ಮುಗಿದ ನಂತರ ಅಂತಿಮವಾಗಿ ಮನುಷ್ಯನ ಜನ್ಮವಿದೆ , ಮನುಷ್ಯ ಜನ್ಮದಲ್ಲಿ ನೀವು ೧೧೨ ಜನ್ಮ ಮನುಷ್ಯನಾಗೆ ಜನಿಸಬೇಕಿದೆ. ೧೧೨ ಜನ್ಮದಲ್ಲಿ ನೀವು ೮೦,೯೦, ೧೦೦ ಜನ್ಮ ಮನುಷ್ಯರಾಗಿ ಹುಟ್ಟಿದರೆ ದುರ್ಲಭ, ನಾನು ಕಂಡಂತೆ ಸಾಕಷ್ಟು ಜೀವಾತ್ಮಗಳು ಹೆಚ್ಚಾಗಿ ೮೭,೯೦,೯೮, ಜನ್ಮಗಳೇ ಹೆಚ್ಚು. ಬಹುಶಃ ನಿಮಗಿದು ಅರ್ಥ ವಾಗುತ್ತದೋ ಇಲ್ಲವೋ ನನಗೆ ತಿಳಿದಿಲ್ಲ, ೧೧೨, ಶ್ರೀ ಕೃಷ್ಣ ನ ಅವತಾರ, ೧೧೧, ಬುದ್ದ, ೧೧೦, ಪತಂಜಲಿ, ೧೦೯, ಗೋರಕ್ನಾಥ್, ೧೦೮, ಓಶೋ, ಇಂತಹ ವ್ಯಕ್ತಿಗಳು ಸಾವಿರಾರು ವರ್ಷ ಆತ್ಮಗಳ ರೂಪದಲ್ಲಿ ಸುತ್ತುತ್ತಿರುತ್ತಾರೆ. ಇವರು ಜನ್ಮ ತಾಳಲು ಸೂಕ್ತ ಗರ್ಭಗಳು ಬೇಕು, ಅವು ಹೆಚ್ಚು ಪ್ರತಿಭಾವಂತ, ಪ್ರಭಾವಶಾಲಿ ಗರ್ಭಗಳಾಗಿರಬೇಕು. ಉದಾ- ನೀವು ಕೇಳಿರಬೇಕು,ತಾಯಿಯ ಗರ್ಭದಲ್ಲಿದ್ದಾಲೇ ಸಾಕಷ್ಟು ಮಕ್ಕಳು ಸಾಯುತ್ತವೆ. ಕಾರಣ ಮಗು ಅತ್ಯಂತ ಪ್ರಭಾವಶಾಲಿ ಆತ್ಮವುಳ್ಳದ್ದು. ಅದರ ಬಗ್ಗೆ ಜನರಿಗೆ ಅಷ್ಟು ಅರಿವಿರುವುದಿಲ್ಲ. ಭೂಮಿಯ ಪಾಸಿಟೀವ್ ಎನರ್ಜಿ ನಿಮ್ಮನ್ನು ಹೆಚ್ಚು ಮನುಷ್ಯ ಜನ್ಮದಲ್ಲಿ ಸಾಗಿಹಾಕಲು ಇಚ್ಚಿಸುವುದಿಲ್ಲ, ಅದು ಹೆಚ್ಚೆಂದರೆ ನಿಮ್ಮನ್ನು ೧೦೦ ಜನ್ಮದ ಒಳಗೆ ನಿಮ್ಮ ಬದುಕಿಗೆ ಅಂತ್ಯ ಆಡಿಸುತ್ತದೆ. ನೀವು ಅರ್ಹಸತ್ವರೋ, ಭೋದಿಸತ್ವರೋ ಒಟ್ಟಿನಲ್ಲಿ ನಿವೊಬ್ಬ ಗುರುವಾದ ನಂತರ ನಿಮ್ಮನ್ನು ಈ ಡೈಮೆನ್ಷನ್ ನಿಂದ ಮುಂದಿನ ಡೈಮೆನ್ಷನ್ಗೆ ಕಳಿಸಿಬಿಡುತ್ತದೆ. ಅತಿಹೆಚ್ಚು ಪಾಸಿಟೀವ್ ಎನರ್ಜಿ ಇರುವಂತ ಆತ್ಮಗಳು, ಅವು ಸಾವಿರಾರು ವರ್ಷ ರೀ ಬರ್ತ್ ಆಗಲು ಕಾಯುತ್ತವೆ, ಉದಾ- ನಿಮಗೆ ೩ನೇ ಕಣ್ಣು , ಇಂಗ್ಲಿಷ್ ನಲ್ಲಿ ಥರ್ಡ್‌ ಐ ಎಂದು ಕರೆಯಲಾಗುತ್ತದೆ. ಇದು ಸಿದ್ದಿಯಾದ ನಂತರ ನೀವು ಮೃತರಾದರೆ , ನೀವು ದೇವತೆಗಳ ಗುಂಪಿನಲ್ಲಿ ಸೇರುವಿರಿ, ನಿಮಗಿದು ಆಶ್ಚರ್ಯವಾಗಬಹುದು, ಆದರೆ ಇದು ಸತ್ಯ. ನೀವು ಬೇಡುತ್ತಿರುವುದು, ಬಯಸಿದ್ದು ತಕ್ಷಣ ಈಡೇರಿದರೆ ನಿಮಗೆ ಸಂತೋಷ ವಾಗುತ್ತದೆ, ಕಾರಣ ಮನುಷ್ಯ ನೋರ್ವ ದೇವತೆಗಳ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ, ಶಾಸ್ತ್ರಗಳು ಇದನ್ನು ಅಸ್ತು ದೇವತೆ ಎನ್ನುತ್ತಾರೆ. ಇಂತಹ ವ್ಯಕ್ತಿಗಳೇ ಸಾವಿರಾರು ವರ್ಷಗಳ ನಂತರ ಜೀನಿಸುವುದು. ಪುನರ್ಜನ್ಮ ಹೊಂದಿದ ನಂತರ ಯಾವ ವ್ಯಕ್ತಿಗಳು ಆತ್ಮಗಳಾಗಿ ನಿಮ್ಮ ಪಿತೃಪಕ್ಷದ ಸೇವೆ ಸ್ವೀಕರಿಸಲು ಬರವುದಿಲ್ಲ, ಕಾರಣ ಮನುಷ್ಯ ಆತ್ಮವನ್ನು ಹೊತ್ತು ದೇಹ ಸೇರುತ್ತಾನೆ. ದೇಹ ಇರುವುದು ಆತ್ಮದ ಸಲುವಾಗಿಯೇ, ನಾನು ತಿಳಿದ ಕೆಲವು ಸೀಕ್ರೆಟ್ ಗಳಲ್ಲಿ ಇದು ಒಂದು. ತೀರಾ ಸಾಮಾನ್ಯ ಜನರು ಮೃತರಾದ ೨೪ ಗಂಟೆಯ ಒಳಗೆ ಗರ್ಭದರಿಸಿರುವ ಸ್ತ್ರೀ ಒಬ್ಬಾಕೆಯ ದೇಹ ಸೇರುತ್ತವೆ, ಮಧ್ಯಮ ವರ್ಗದ ಆತ್ಮಗಳು ಮೃತವಾದ ೪೮ ದಿನದ ಒಳಗೆ ದೇಹ ಸೇರುತ್ತವೆ. ಆದರೆ ಶಕ್ತಿಶಾಲಿ ಆತ್ಮಗಳು, ಪ್ರಭಾವಿ ಶಾಲಿ ಆತ್ಮಗಳು ನೂರಾರು ಸಾವಿರಾರು ವರ್ಷಗಳ ನಂತರ ದೇಹವನ್ನು ಸೇರುತ್ತವೆ. ನಿಮಗೆ ಹೆಚ್ಚು ಹೇಳಿದರೆ ತಲೆನೋಯಬಹುದು. ನಿಮಗೆ ಬೇಕಿರುವುದು ಪಿತೃಪಕ್ಷ , ನನ್ನ ಅನುಭವದ ಪ್ರಕಾರ ಇದೊಂದು ಸಾಂಪ್ರದಾಯಿಕ ಭಾವನೆಯಷ್ಟೆ. ನಿಮ್ಮ ಅಂತರಾಳದಲ್ಲಿ ನಿಮ್ಮ ಕುಟುಂಬದವರಿಗೆ ನೀವು ಪ್ರೀತಿನೀಡಿದರೆ/ ನೀಡದಿದ್ದರೆ ಮುಂದೆ ಆಗುವ ಪರಿಣಾಮ ಹೇಗಿರುತ್ತದೆ ಎಂದು ಯೋಚಿಸಿ. ಕನಿಷ್ಟ ಇದ್ದಾಗ ನೀವು ಅವರನ್ನು ಪ್ರೀತಿಯಿಂದ ನೋಡಿಕೊಂಡರೆ ಅವರ ಆತ್ಮದ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ, ನೀವು ಅಸಭ್ಯ ವಾಗಿ ವರ್ತಿಸಿದರೆ, ಕೇವಲವಾಗಿ, ಕೆಟ್ಟದಾಗಿ ನಡೆದುಕೊಂಡರೆ ಆಗ ಅದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನೇ ಪಿತೃ ಪಕ್ಷ ಎನ್ನುವುದು. ನಿಮಗದು ಕರ್ಮದರೂಪದಲ್ಲಿ ಕಾಡುತ್ತೆ. ಮಾನಸಿಕ ಹಿಂಸೆಯಂತೆ ಭಾದಿಸುತ್ತೆ. ಅದರ ಪ್ರಭಾವ ನಿಮ್ಮ ನೆಮ್ಮದಿಯನ್ನು ಹಾಳುಮಾಡುತ್ತದೆ. ಪ್ರತಿಯೊಬ್ಬರಿಗೂ ಬದುಕಿದ್ದಾಗ ಅವರದ್ದೇ ಆದ ಭಾವನೆ, ಬಯಕೆಗಳಿರುತ್ತೆ. ಅವುಗಳನ್ನು ಅರ್ಥ ಮಾಡಿಕೊಂಡು ನಡೆದರೆ ಅವು ಈಡೇರಿದರೆ, ಆಗ ತೃಪ್ತಿ/ ನೆಮ್ಮದಿ ಯಾಗುತ್ತದೆ. ಇಲ್ಲವಾದರೆ ಅದು ಅತೃಪ್ತಿ ಭಾಸವನ್ನು ನೀಡುತ್ತದೆ. ಸತ್ತಾಗ ನೀವು ಪಿತೃಪಕ್ಷದಲ್ಲಿ ನಿಮ್ಮ ತಂದೆ / ತಾತನಿಗಾಗಿ ಪೂಜೆಯವೇಳೆಯಲ್ಲಿ ಸ್ಕಾಚ್ ವಿಸ್ಕಿ ಯನ್ನೇ ತನ್ನಿ ೪೦ ರೂ, ಗಳ ರಾಜಾ ಪಾಕೇಟ್ ಅನ್ನೇ ತನ್ನಿ ಅವರು ಕುಡಿಯುತ್ತಾರೆ ಎನ್ನುವ ಭಾವನೆ ನಿಮಗಿದೆಯೇ!? ನನಗಂತೂ ಇಲ್ಲ, ನಾನು ಇದನ್ನು ನಂಬುವುದೂ ಇಲ್ಲ. ನೀವು ಏನೆ ಮಾಡಿ ಬದುಕಿದ್ದಾಗ ಪ್ರೀತಿಸಿ ಚೆನ್ನಾಗಿ ನೋಡಿಕೊಳ್ಳಿ. BXO ಸಮಸ್ಯೆ ಅಪಾಯವೇ? ದೇವರ ಅಸ್ತಿತ್ವದ ಪುರಾವೆಗಳ ಅವಶ್ಯಕತೆಯಿಂದ ಮುಳುಗಿರುವವರು, ವಿಜ್ಞಾನವು ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಬಹುದಾದರೂ, ಅನೇಕರು ಸೃಷ್ಟಿ ಮತ್ತು ದೇವರ ಅಸ್ತಿತ್ವದ ಬಗ್ಗೆ ನಂಬಲಾಗದವರಾಗಿಯೇ ಇರುತ್ತಾರೆ, ನೀವು ಒಪ್ಪುವುದಿಲ್ಲವೇ? ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವಷ್ಟು ಸರ್ವಜ್ಞರು ನಾವಲ್ಲ ನಾವಂತು ಇಂತವರ ಪ್ರಶ್ನೆಯನ್ನು ಕಸದಬುಟ್ಟಿಗೆ ಹಾಕುವವರು. ವಿಜ್ಞಾನವು ಎಷ್ಟೆ ಮುಂದುವರಿದರು ಮಣ್ಣಿನಿಂದಾಗಲಿ ಇಥವಾ ಇನ್ಯಾವುದೆ ವಸ್ತುವಿನಿಂದ ಎಲ್ಲರೀತಿಯ ಜೀವಿಗಳನ್ನು ಸೃಷ್ಟಿಸುವುದು ಅಸಾಧ್ಯ ದೇವರು ಸೃಷ್ಟಿಸಿದಂತೆ ತದ್ರೂಪವನ್ನು ಸೃಷ್ಟಿಸಿದರು ಅದರಲ್ಲಿ ದೇವರು ಸೃಷ್ಟಿಸಿದ ಮನುಷ್ಯನ ರೂಪಕ್ಕೆ ಬುದ್ದಿಮತ್ತೆಗೆ ಕಾರ್ಯವಿಧಾನಕ್ಕೆ ಸಮನಾಗಲಾರವು ಯಂತ್ರಗಳಾಗಲಿ ಮಣ್ಣಿನ ಮುದ್ದೆಯಾಗಲಿ ತಮ್ಮ ಸಂಕುಲವನ್ನು ವೃದ್ದೀಮಾಡುವ ಕೆಲಸ ಅದರಿಂದ ಆಗದು ಅದು ದೇವರು ಸೃಷ್ಟಿಸಿದ ಜೀವಿಗಳಲ್ಲಿ ಮಾತ್ರ ಮುಂದುವರೆಯುವಂತಾದ್ದು. ಇಷ್ಟೆಲ್ಲಾ ಪುರಾವೆ ಇದ್ದರು ಮನುಷ್ಯ ದೇವರನ್ನು ನಂಬದೆ ಕುಚೋದ್ಯದ ಪ್ರಶ್ನೆ ಕೇಳುವುದು ಮೋರ್ಖತನವೋ ಅಹಂಕಾರವೊ ಅನುಮಾನವೋ ಅಥವಾ ಅಪನಂಬಿಕೆಯೋ ಗೊತ್ತಿಲ್ಲ ನಾವು ಕೆಲವು ವಿಮೆಗಳಿಗೆ ಕಟ್ಟಿದ ಹಣವನ್ನು ನಾವು ಎಂದಿಗೂ ಹಿಂದೆ ಕೇಳುವುದಿಲ್ಲ. ಆಗ ಆ ಹಣ ಎಲ್ಲಿಗೆ ಹೋಗುತ್ತದೆ? ಉದಾಹರಣೆಗೆ: ವಾಹನ ವಿಮೆ ಜೀವನದ ಕೆಲವು ಕಟು ಸತ್ಯಗಳು ಯಾವುವು? ಜೀವನದಲ್ಲಿ ಕಟುಸತ್ಯಗಳು ಅಥವಾ ಕಠಿಣ ಸತ್ಯಗಳು ಹಲವಾರು ಇರಬಹುದು. ಇವು ವ್ಯಕ್ತಿಗಳಿಗೆ ಅನುಭವಿಸಬಹುದಾದ ಕಠಿಣ ಸತ್ಯಗಳಾಗಿವೆ: 1. ಮರಣ: ಸತ್ಯಾಂಶವೇನೆಂದರೆ ನಾವು ಎಂದೆಂದಿಗೂ ಬದುಕುತ್ತಿರುವುದೆಂದಲ್ಲ. ನಮ್ಮಲ್ಲಿ ಒಂದು ದಿನ ಬದುಕುವ ಕೊನೆಯ ಸಮಯವನ್ನು ಅನುಭವಿಸಬೇಕು. 2. ಸಹನಶೀಲತೆ: ಸಮಸ್ಯೆಗಳು ಮತ್ತು ಕಠಿಣತೆಗಳು ನಮ್ಮ ಜೀವನದ ಒಂದು ಅವಶ್ಯಕ ಭಾಗವಾಗಿವೆ. ನಾವು ಅವುಗಳನ್ನು ಸಹನೆಯಿಂದ ಎದುರಿಸಬೇಕಾಗುತ್ತದೆ. 3. ಸಹಜವಾದ ಬದಲಾವಣೆ: ಬದಲಾವಣೆ ಜೀವನದ ಸ್ವಭಾವವಾಗಿದೆ. ಯಾವುದೇ ಸ್ಥಿತಿ ಅಥವಾ ಸ್ಥಿತಿ ಸ್ಥಿತಿಗೆ ಬದಲಾಗುತ್ತದೆ. 4. ಸ್ವಾರ್ಥತೆ ಮತ್ತು ಅಸತ್ಯ: ಸತ್ಯವನ್ನು ಮರೆಯುವುದು ಮತ್ತು ಸ್ವಾರ್ಥತೆ ಅಥವ ಮಿಥ್ಯಾಪ್ರಮಾಣಗಳನ್ನು ಅನುಸರಿಸುವುದು ನಮ್ಮ ಜೀವನಕ್ಕೆ ಕಟುಸತ್ಯಗಳಾಗಬಹುದು. 5. ಸಂಕಟ ಮತ್ತು ದುಃಖ: ಜೀವನದಲ್ಲಿ ಸಂಕಟ ಮತ್ತು ದುಃಖಗಳು ಅನಿವಾರ್ಯ ಭಾಗಗಳು. ಇವು ಎದುರಿಸುವುದು ಮತ್ತು ಅವುಗಳಿಂದ ಪಾಠ ಕಲಿಯುವುದು ಆವಶ್ಯಕ. 6. ಮೃತ್ಯುವಿಗೆ ಸಿದ್ಧನಾಗುವುದು: ಜೀವನದಲ್ಲಿ ಯಾವುದೇ ಸಮಯದಲ್ಲಿ ಮೃತ್ಯು ನಮಗೆ ಕರಾರುವಾಗಬಹುದು. ಇದು ಅನಿವಾರ್ಯ ಸತ್ಯ. 7. ನಿಷ್ಕಳಂಕ ಸ್ನೇಹ: ಎಲ್ಲ ಸ್ಥಿತಿಗಳಲ್ಲಿಯೂ ನಿಷ್ಕಳಂಕ ಸ್ನೇಹವು ಕಠಿಣ ಸತ್ಯವಾಗಬಹುದು. ಸ್ನೇಹವು ತಲುಪುವುದು ಮತ್ತು ನಿಭಾನುಭವಿಸುವುದು ಕೂಡ ಅತ್ಯಂತ ಪ್ರಮುಖ. ಭಗವದ್ಗೀತೆ, ರಾಮಾಯಣ ಎಲ್ಲಾ ಸುಳ್ಳು ಎನ್ನುವ ಬುದ್ಧಿಜೀವಿಗಳು, ಕುರಾನ್, ಬೈಬಲ್ ಸುಳ್ಳು ಎಂದೇಕೆ ಹೇಳುವುದಿಲ್ಲ? ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಜನರು ಇನ್ನೂ ಮೌಢ್ಯತೆಯಲ್ಲಿ ಜೀವಿಸುತ್ತಿರುವರು ಎಂದು ಅನಿಸುವುದಿಲ್ಲವೇ? ಬೇರೆಯವರ ಮನೆಯಲ್ಲಿ ಅಥವಾ ಹೊರಗಡೆ ಸಿಗುವ ಊಟ ಏನಾದರೂ ಮಾಡಿದರೆ ಅದರ ಅನ್ನದ ಋಣ ನಮ್ಮ ಮೇಲೆ ಇರುತ್ತದೆಯೇ ದಯವಿಟ್ಟು ಇದರ ಬಗ್ಗೆ ತಿಳಿಸಿಕೊಡಿ ನಮ್ಮ ಅಮ್ಮ ಅವಾಗವಾಗ ಹೇಳಿ ತಿನ್ನಬೇಡ ಎಂದು ಬೈಯುತ್ತಿರುತ್ತಾರೆ? ತಿಳಿದಿರುವವರು ಹೇಳಿ ಅಸಭ್ಯ ಬರಹ ಬೇಡ ಮನುಷ್ಯನ ಚಿಂತೆಯನ್ನು ಹೇಗೆ ತೆಗೆದುಹಾಕಬಹುದು? ಜೀವನದ ಮುಖ್ಯ ಉದ್ದೇಶವೇನು? ಅಂಬೇಡ್ಕರ್ ಬಗ್ಗೆ ಓಶೋನ ಅಭಿಪ್ರಾಯ ಏನಾಗಿತ್ತು? ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು? ಬಾಣಂತಿಯರಿಗೆ ಯಾವ ಆಹಾರ ಕೊಟ್ಟರೆ ಹೊಳ್ಳೆಯದು? ಭಾರತದಲ್ಲಿ ದೇವರ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವವರು ಯಾರು ಯಾರು? ನಮ್ಮ ಮನಸ್ಸು ಏಕೆ ವರ್ತಮಾನದಿಂದ ಓಡಿಹೋಗುತ್ತದೆ? ನಾಲ್ಕು ವೇದಗಳಲ್ಲಿ ಅತ್ಯಂತ ಪ್ರಾಚೀನ ವೇದ ಯಾವುದು?