
ಸಂಜು ( ಸಂಜಯ್ ಚಂದ್ರ . 🙂🙂🙂 )
@63033207
Motivator
Paid Promotion is Available
#ಕರುನಾಡುನಮ್ಮ ಬಂಗಾರದ ಬೀಡು #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜
#ಕರುನಾಡುನಮ್ಮ ಬಂಗಾರದ ಬೀಡು #🌅Good Morning🍵 #🌄 ಮೂಡುತಿದೆ ಮುಂಜಾವು 🥰 #📖Morning motivation #🙏ನಮಸ್ಕಾರ
#ಕರುನಾಡುನಮ್ಮ ಬಂಗಾರದ ಬೀಡು
#ಭಕ್ತರ_ಸಲಹುವ_ವಡಗೆರೆ_ಬಿದ್ದಾಂಜನೇಯ
#ಬಿಳಿಗಿರಿ_ರಂಗನ_ಬೆಟ್ಟದ_ಬುಡದಲ್ಲೂ_ಉಂಟು_ಈ_ದೇವಾಲಯ
🙏🙏
#ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನಬೆಟ್ಟ.
ಈ ಬೆಟ್ಟದ ತಪ್ಪಲಿನಲ್ಲಿರುವ ವಡಗೆರೆ ಗ್ರಾಮದ ಗುಡ್ಡದ ಬಳಿಯೂ ಬಿದ್ದಾಂಜನೇಯ ಸ್ವಾಮಿ ಹೆಸರಿನ ದೇಗುಲವಿದೆ.
ಇದು ಅನಾದಿ ಕಾಲದಿಂದಲೂ ಹನುಮ ಭಕ್ತರ ಪಾಲಿನ ಮೆಚ್ಚಿನ ದೇಗುಲವಾಗಿ ಖ್ಯಾತಿ ಗಳಿಸಿದೆ.
#ಮುತ್ತುಗದ_ಮರದ ಕೆಳಗೆ ಇದ್ದ ಉದ್ಭವಮೂರ್ತಿಗೆ ಕ್ರಿ.ಶ.1842 ರಲ್ಲಿ ಮೈಸೂರು ಅರಸರು ದೇಗುಲ ನಿರ್ಮಿಸಿಕೊಟ್ಟರು ಎನ್ನುವ #ಐತಿಹ್ಯವಿದೆ.
ಇಲ್ಲಿನ ಮೂರ್ತಿ ಕೆತ್ತನೆ ಮಾಡಿದ್ದಲ್ಲ.
ಇದು ತನ್ನ ಉಬ್ಬುತಗ್ಗುಗಳಿಂದಲೇ ಆಂಜನೇಯನ ಮುಖ ಹಾಗೂ ದೇಹವನ್ನು ಹೋಲುತ್ತದೆ.
ಮಲಗಿರುವ ಕಾಯಹೊಂದಿರುವ ಈ ಮೂರ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವ ವಾಡಿಕೆ ಇದೆ.
🌳🌳🌳
#ಪುರಾಣ_ಐತಿಹ್ಯ
ದೇಗುಲದ ಅನತಿ ದೂರದಲ್ಲೇ ಒಂದು ಗುಡ್ಡವಿದೆ. ಅದರಲ್ಲಿರುವ ಗುಹೆಯಲ್ಲಿ #ಕಿವಿಮೂಲ ಎಂಬ ರಾಕ್ಷಸನಿದ್ದನಂತೆ.
ಅಲ್ಲಿದ್ದ ಮತ್ತೂಂದು ಗುಹೆಯಲ್ಲಿ #ವಸಿಷ್ಠ ಮುನಿಗಳು ತಪಸ್ಸು ಮಾಡುತ್ತಿದ್ದರಂತೆ.
ಈ ರಾಕ್ಷಸನಿಂದ ಸದಾ ಕಿರುಕುಳ ಅನುಭಸುತ್ತಿದ್ದ ವಸಿಷ್ಠರು ಇದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದರು.
ಈ ಸಂದರ್ಭದಲ್ಲಿ ತಿರುಪತಿಯಿಂದ ಗಿಡಮೂಲಿಕೆಗಳನ್ನು ಹುಡುಕಿಕೊಂಡು #ವೆಂಕಟೇಶ್ವರ ಸ್ವಾಮಿ,
ತನ್ನ ವಾಹನವಾದ #ಗರುಡ ಪಕ್ಷಿಯನ್ನು ಬಿಟ್ಟು ಹನುಮಂತನ ಹೆಗಲೇರಿ ಬರುತ್ತಿದ್ದನಂತೆ.
ಈ ವೇಳೆ ವಸಿಷ್ಠರು ಇವರನ್ನು ತಡೆದು, ತಮಗೆ ಕಿವಿಮೂಲ ರಾಕ್ಷಸನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮನವರಿಕೆ ಮಾಡಿಕೊಟ್ಟರಂತೆ.
ಆಗ ತನಗೆ ಮತ್ತೂಂದು ತುರ್ತಿನ ಕೆಲಸ ಇರುವುದಾಗಿ ಋಷಿಗಳಿಗೆ ಹೇಳಿ ವಿಷ್ಣು, ಆಂಜನೇಯನನ್ನು ರಾಕ್ಷಸ ಸಂಹಾರಕ್ಕೆ ಬಿಟ್ಟು ತಾನು ಬರುವವರೆಗೂ ಇಲ್ಲೇ ಇರುವಂತೆ ಆದೇಶ ನೀಡಿದನಂತೆ.
ನಂತರ #ಆಂಜನೇಯನು ವಿಷ್ಣುದೇವರ ಆದೇಶವನ್ನು ಶಿರಸಾವಹಿಸಿ ಪಾಲಿಸಲು ಮೂರೇ ಹೆಜ್ಜೆಗೇ ಬಿಳಿಗಿರಿ ರಂಗನಬೆಟ್ಟಕ್ಕೆ ತೆರಳಿದರಂತೆ.
ಇಲ್ಲೇ ಇದ್ದ ರಾಕ್ಷಸನನ್ನು ಸಂಹಾರ ಮಾಡಿದ ಹನುಮಂತ ವಸಿಷ್ಠರ ಮೆಚ್ಚುಗೆಗೆ ಪಾತ್ರನಾದರಂತೆ.
ಆದರೆ, ವೆಂಕಟೇಶ್ವರ ಸ್ವಾಮಿ ಎಷ್ಟು ಹೊತ್ತು ಕಾದರು ಬರಲಿಲ್ಲ.
ಅವರಿಗಾಗಿ ಕಾದು ಕಾದು ಸಾಕಾಗಿ ಗುಡ್ಡದ ಕೆಳಗಿರುವ ಸ್ಥಳಕ್ಕೆ ಬಂದು ಹನುಮ ಮಲಗುತ್ತಾನೆ.
ಆ ಸ್ಥಳವೇ ಆಂಜನೇಯ ಬಿದ್ದ ಸ್ಥಳವಾಯಿತು ಎನ್ನುತ್ತದೆ ಪುರಾಣ.
🌴🌴
#ಸೋಲಿಗರ_ಕತೆಯೇ_ಬೇರೆ
ಬಿಳಿಗಿರಿರಂಗನಬೆಟ್ಟದ ಮೂಲನಿವಾಸಿಗಳಾದ ಸೋಲಿಗರ ಪ್ರಕಾರ ಬಿದ್ದಾಂಜನೇಯನನ್ನು ಕುರಿತು, ಇನ್ನೊಂದು ರೀತಿಯ ಕತೆ ಇದೆ. #ಬಿಳಿಗಿರಿರಂಗನಾಥಸ್ವಾಮಿ ಆಹಾರಕ್ಕೆ ಬಂದಾಗ ಆತನೊಂದಿಗೆ ಬರುವ ಹನುಮಂತನು ತನ್ನ ಚೇಷ್ಟೆಗಳಿಂದ ಸ್ವಾಮಿಯ ಕೋಪಕ್ಕೆ ತುತ್ತಾದನಂತೆ.
ಈ ಸಂದರ್ಭದಲ್ಲಿ ಸಿಟ್ಟಾದ ರಂಗನಾಥಸ್ವಾಮಿ ಹನುಮಂತನ ಕೆನ್ನೆಗೆ ಜೋರಾಗಿ ಹೊಡೆದದ್ದರಿಂದ ಆತ ಈ ಸ್ಥಳದಲ್ಲಿ ಬಿದ್ದನು
ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡಿ
#kannadaviral #kannadareels #kannadamotivationalwords #kannadamotivation #kannadaquotesandsayings #kannadaquotes #facebookreelsviral #trendingreels #trendingreelsvideo #ᴋᴀɴɴᴀᴅᴀsᴏɴɢs
#🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #💪 ಜೈ ಹನುಮಾನ್ 🚩 #🙏ಭಕ್ತಿ ಸ್ಟೇಟಸ್
#ಕರುನಾಡುನಮ್ಮ ಬಂಗಾರದ ಬೀಡು #📜ಸ್ಟೇಟಸ್ ದುನಿಯಾ #😥 ಭಾವನಾತ್ಮಕ ಘಟನೆಗಳು #😎 Attitude ಸ್ಟೇಟಸ್ #💓ಮನದಾಳದ ಮಾತು
#ಕರುನಾಡುನಮ್ಮ ಬಂಗಾರದ ಬೀಡು #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🔴ನಮ್ಮ ಕರ್ನಾಟಕ🟡 #🖊ಬದುಕಿನ ಕೋಟ್ಸ್📜
#✍ಟ್ರೆಂಡಿಂಗ್ ಕೋಟ್ಸ್📜 #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ
#🙏 ಮಹಾತ್ಮ ಗಾಂಧಿ ಪುಣ್ಯ ಸ್ಮರಣೆ🌺 #ಕರುನಾಡುನಮ್ಮ ಬಂಗಾರದ ಬೀಡು #ಹುತಾತ್ಮರ ದಿನ
#ಕರುನಾಡುನಮ್ಮ ಬಂಗಾರದ ಬೀಡು
#ವರ_ನೀಡುವ_ಗೊರವನಹಳ್ಳಿ ಲಕ್ಷ್ಮಿ
🙏🙏🙏
ಭಾರತೀಯ ಧಾರ್ವಿುಕ ಪರಂಪರೆಯಲ್ಲಿ ಕೋಟ್ಯಂತರ ದೇವತೆಗಳ ಪ್ರಸ್ತಾಪಗಳಿವೆ.
ಒಂದೊಂದು ವರ್ಗದವರು ಒಂದೊಂದು ಪರಂಪರೆಯ ದೇವರನ್ನು ಪೂಜಿಸುತ್ತಾರೆ.
ಆದರೆ ಮಹಾಲಕ್ಷ್ಮಿಯನ್ನು ಪೂಜಿಸದವರು ಅತ್ಯಂತ ವಿರಳ. ಮಹಾಲಕ್ಷ್ಮಿ ಎಂದರೆ #ಐಶ್ವರ್ಯದಾಯಿನಿ ಎಂಬುದೇ ಇದಕ್ಕೆ ಕಾರಣ.
ಐಶ್ವರ್ಯಪ್ರದಾಯಿನಿ ಮಹಾಲಕ್ಷ್ಮಿದೇವಿ ನೆಲೆಸಿರುವ #ಗೊರವನಹಳ್ಳಿ ಕ್ಷೇತ್ರದಲ್ಲಿ ಭಕ್ತಿಯಿಂದ ಬೇಡಿದರೆ ಅವಿವಾಹಿತ ಯುವತಿಯರಿಗೆ ‘ವರ’ ದಯಪಾಲಿಸುತ್ತಾಳೆಂಬುದು ಕುತೂಹಲವೆನಿಸಿದರೂ ಸತ್ಯ.
ಕೋಟ್ಯಂತರ ದೇವತೆಗಳನ್ನು ನಂಬುವ ನಮ್ಮ ಪರಂಪರೆಯಲ್ಲಿ ಮಾತೆ ಲಕ್ಷಿ್ಮಯನ್ನು ಅಷ್ಟಸಿದ್ಧಿ ಪ್ರದಾಯಿನಿ ಎಂದೂ ಕರೆಯಲಾಗುತ್ತದೆ.
ಇದಕ್ಕೆ ಪೂರಕವೆಂಬಂತೆ ಗೊರವನಹಳ್ಳಿ ಮಹಾಲಕ್ಷಿ್ಮಯನ್ನು ಭಕ್ತಿಯಿಂದ ಭಜಿಸುವ ಲಕ್ಷಾಂತರ ಅವಿವಾಹಿತರಿಗೆ ಕಂಕಣಬಲ ಕೂಡಿಬರುತ್ತದೆ.
ಈ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಆಶೀರ್ವಾದ ಮಾಡಿದ #ಕರಿಮಣಿಯನ್ನು ನೀಡುವ ವಿಶೇಷ ಪದ್ಧತಿ ಇದೆ.
#ಅವಿವಾಹಿತೆಯರು ಹೀಗೆ ನೀಡಿದ ಕರಿಮಣಿಯನ್ನು ಮನೆಗೆ ಕೊಂಡೊಯ್ದು ಪೂಜಿಸಿದರೆ ಉತ್ತಮ ವರ ದೊರೆಯುತ್ತಾನೆ.
ವರನ ತಾಯಿ ಪೂಜೆ ಮಾಡಿದರೆ ಉತ್ತಮ ಸೊಸೆ ಬರುತ್ತಾಳೆಂಬ ನಂಬಿಕೆಯಿದೆ. ಹೀಗೆ ಪೂಜಿಸಿ ಫಲ ಪಡೆದ ಸಹಸ್ರಾರು ಉದಾಹರಣೆಗಳಿವೆ.
ಗೊರವನಹಳ್ಳಿಯ ಇತಿಹಾಸ
ಈ ದೇವಾಲಯವನ್ನು ಸ್ಥಾಪಿಸಿದವರು ಲಕ್ಷ್ಮೀದೇವಿಯನ್ನು #ಉಪಾಸಕರಾಗಿದ್ದ_ಕಮಲಮ್ಮ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಯಮಂಗಲಿ ನದಿಯ ದಡದಲ್ಲಿರುವ ಈ ಕ್ಷೇತ್ರ ರೋಚಕ ಇತಿಹಾಸ ಹೊಂದಿದೆ.
#ಅಬ್ಬಯ್ಯ ಎಂಬ ವ್ಯಕ್ತಿ ಹಸು ಮೇಯಿಸಲು ಕೆರೆಯ ಬಳಿ ಹೋದಾಗ ‘ನಾನು ನಿನ್ನೊಂದಿಗೆ ಬರುತ್ತೇನೆ ಕರೆದುಕೊಂಡು ಹೋಗು’ ಎಂಬ ಹೆಣ್ಣಿನ ಧ್ವನಿ ಕೇಳಿಸುತ್ತಿತ್ತು.
ಆತ ತನ್ನ ತಾಯಿಯ ಸಲಹೆಯಂತೆ ‘ದೇವತೆಯಾದರೆ ಕರೆದೊಯ್ಯುತ್ತೇನೆ, ದುಷ್ಟಶಕ್ತಿಯಾದರೆ ಕರೆದೊಯ್ಯಲಾರೆ’ ಎಂದು ನೆಲದ ಮೇಲೆ ತನ್ನ ಶಲ್ಯವನ್ನು ಹಾಸಿ ಪ್ರಾರ್ಥಿಸಿದಾಗ; ಶಂಕಚಕ್ರ ಗದಾಹಸ್ತೆಯಾದ ಮಹಾಲಕ್ಷ್ಮಿ ಶಿಲಾಮೂರ್ತಿಯ ರೂಪದಲ್ಲಿ ಬಂದಳು.
ಆ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸತೊಡಗಿದ. ನಂತರ ಅಷ್ಟೆ ೖಶ್ವರ್ಯ ಹೊಂದಿ ದಾನ-ಧರ್ಮ ಮಾಡುತ್ತ ಪ್ರಸಿದ್ಧನಾದ.
ವರ್ಷಗಳು ಕಳೆದಂತೆ ವಯೋವೃದ್ಧನಾದ ಅಬ್ಬಯ್ಯ ತನ್ನ ಬಳಿಕ ಪೂಜೆ ಮುಂದುವರಿಯಬೇಕೆಂದು ಲಕ್ಷ್ಮೀಯ ಮೂರ್ತಿಯನ್ನು ಊರಿನಲ್ಲಿ ಪ್ರತಿಷ್ಠಾಪಿಸಿದ.
ಆತನ ನಂತರ ಪೂಜೆ ಪುನಸ್ಕಾರಗಳು ನಿಂತು ದೇವಾಲಯದ ಸುತ್ತ ಗಿಡಮರಗಳು ಬೆಳೆದವು.
ಇದಾಗಿ ಶತಮಾನಗಳೇ ಕಳೆದ ನಂತರ ಗ್ರಾಮದ ಶಾನುಭೋಗರ ಮನೆಯ ಕಮಲಮ್ಮನವರಿಗೂ ಲಕ್ಷಿ್ಮೕವಾಣಿ ಕೇಳಿಸಿತು. ಅದರಂತೆ ಕಮಲಮ್ಮನವರು ಆ ಪ್ರದೇಶವನ್ನು ಸ್ವಚ್ಛಗೊಳಿಸಿ ನೋಡಿದರೆ ಅಲ್ಲಿ ಮಹಾಲಕ್ಷ್ಮಿ ಮೂರ್ತಿಯಿತ್ತು.
ಅಲ್ಲಿ ಕಮಲಮ್ಮನವರು ಪುನಃ ಪೂಜೆ ಪ್ರಾರಂಭಿಸಿದರು.
12 ಮನೆಗಳಿದ್ದ ಆ ಪುಟ್ಟ ಗ್ರಾಮ ಇಂದು ಪ್ರತಿಷ್ಠಿತ ಕ್ಷೇತ್ರವಾಗಿ ಬೆಳೆದಿದೆ.
#ಅಷ್ಟಸಿದ್ಧಿಯ_ಜಾಗೃತಕ್ಷೇತ್ರ
ಮಹಾಲಕ್ಷ್ಮಿಯನ್ನು ಧನಲಕ್ಷ್ಮಿ , ಧಾನ್ಯಲಕ್ಷ್ಮಿ ಇತ್ಯಾದಿ ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸಲಾಗುತ್ತದೆ.
ಗೊರವನಹಳ್ಳಿ ಲಕ್ಷ್ಮೀಯನ್ನು ಭಕ್ತಿಯಿಂದ ಪೂಜಿಸಿದರೆ ಅಷ್ಟಸಿದ್ಧಿಗಳು ಲಭಿಸುತ್ತವೆ ಎಂಬುದು ಕಮಲಮ್ಮನವರ ಮೊಮ್ಮಗಳಾದ ಶ್ರೀಲಕ್ಷ್ಮಿಯವರ ಮಾತು.
ಕ್ಷೇತ್ರಕ್ಕೆ ಬಂದು ಯಾವುದೇ ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡುವ ಭಕ್ತರು ಸಂಕಲ್ಪ ಈಡೇರುವವರೆಗೂ ಪ್ರತಿದಿನ ಮನೆಯಲ್ಲಿ ಲಕ್ಷ್ಮೀಯನ್ನು ನೆನೆದು ಒಂದು ಹಿಡಿ ಅಕ್ಕಿಯನ್ನು ಎತ್ತಿಡಬೇಕು.
ಸಂಕಲ್ಪ ಈಡೇರಿದ ಮೇಲೆ ಆ ಅಕ್ಕಿಯನ್ನು ತಂದು ಗೊರವನಹಳ್ಳಿ ದೇವಾಲಯಕ್ಕೆ ಅರ್ಪಿಸಬೇಕು.
ಅದನ್ನು ಇಲ್ಲಿನ ಭಕ್ತರ ದಾಸೋಹಕ್ಕೆ ಬಳಸಲಾಗುತ್ತದೆ. ಇದು ಇಲ್ಲಿನ ಅತ್ಯಂತ ಪ್ರಸಿದ್ಧ ಸೇವೆ.
🙏🙏�
ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡಿ
#kannadaviral #kannadareels #kannadamotivationalwords #kannadamotivation #kannadaquotesandsayings #kannadaquotes #facebookreelsviral #trendingreels #trendingreelsvideo #ᴋᴀɴɴᴀᴅᴀsᴏɴɢs
#🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #🙏ಭಕ್ತಿ ಸ್ಟೇಟಸ್ #🙏ಲಕ್ಷ್ಮಿ ದೇವಿ🌸
#ಕರುನಾಡುನಮ್ಮ ಬಂಗಾರದ ಬೀಡು #🕉️ ಶುಭ ಶುಕ್ರವಾರ #🌄 ಮೂಡುತಿದೆ ಮುಂಜಾವು 🥰 #📖Morning motivation #🌅Good Morning🍵
#ಕರುನಾಡುನಮ್ಮ ಬಂಗಾರದ ಬೀಡು #😍 ನನ್ನ ಸ್ಟೇಟಸ್ #📜ಲೈಫ್ ಮೆಸೇಜ್ #👌ಜೀವನದ ಮಾತು #🤔ಜೀವನದ ಪಾಠಗಳು












