
ಸಾಮ್ರಾಟ್ ಶ೦ಕರ ಅಣ್ಣ
@babasahebambedkar
ಭಾರತ ಭಾಗ್ಯವಿಧಾತ ಬಾಬಾಸಾಹೇಬ ಅ೦ಬೇಡ್ಕರ
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏 #ಮಾತೋಶ್ರೀ_ರಮಾಭಾಯಿ_ಅ೦ಬೇಡ್ಕರ ತ್ಯಾಗಮಯಿ ತಾಯಿಯ ಅವರ ಒಂದು ಐತಿಹಾಸಿಕ ಸ೦ದರ್ಭ #ಕರ್ನಾಟಕದ_ಧಾರವಾಡದಲ್ಲಿ
ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ. ಈ ತಾಯಿ ನಮ್ಮ #ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. #ಬಾಬಾಸಾಹೇಬ್_ಅಂಬೇಡ್ಕರ್ ದುಂಡು ಮೇಜಿನ ಪರಿಷತ್ನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು. ಆಗ ಅಂಬೇಡ್ಕರ್ ರವರ ಹಿತೈಶಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. #ಧಾರವಾಡದ_ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಡಾಕ್ಟರ್ ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ #ಬಾಬಾಸಾಹೇಬ_ಅಂಬೇಡ್ಕರ್ ರವರು ಧಾರವಾಡದಲ್ಲಿ #ಬುದ್ಧರಕ್ಕಿತ_ವಸತಿಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ. ಅಲ್ಲಿ #ಮಕ್ಕಳು_ಊಟವನ್ನು_ಮಾಡಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರ್ಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡಿದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ಈ ನಿಲಯ #ಬಾಬಾಸಾಹೇಬರೂ ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ ಇವರ ತಾಯಿಯಾದ #ರಮಾಯಿ ಅವರು ನಾನು ಹೇಗೆ ಸುಮ್ಮನಿರಲಿ ಎಂದು #ಕೈಗಳಲಿದ್ದ_4_ಬಂಗಾರದ_ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ #ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸಾಧ್ಯವಾಗುತ್ತಿಲ್ಲಸ್ಥೆ ಮಾಡಿ ಎಂದು ನುಡಿದ ಆ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು.
#ತ್ಯಾಗಮಯಿ_ಮಾತೋಶ್ರೀ #ರಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ಧನ್ಯವಾದಗಳು 🙏.
ಜೈ ಭೀಮ್
ನಮೋ ಬುದ್ಧಯಾ
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏 #ಮಾತೋಶ್ರೀ_ರಮಾಬಾಯಿ_ಅಂಬೇಡ್ಕರ್ ಜೀ ಅವರ
128ನೇ ಜಯಂತಿ ನಿಮಿತ್ತ ಭೀಮ ಶುಭಾಶಯಗಳು 🙏
1898 ಫೆಬ್ರವರಿ 7ರಂದು ಜನಿಸಿದ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಹೋರಾಟದ ಹಿಂದೆ ನಿಂತ ಮಹಾನ್ ಶಕ್ತಿ. ಅಪಾರ ಬಡತನ, ವೈಯಕ್ತಿಕ ದುಃಖಗಳು ಮತ್ತು ಅಸಂಖ್ಯಾತ ಸಂಕಷ್ಟಗಳ ನಡುವೆಯೂ, ಬಾಬಾಸಾಹೇಬ್ ಅವರ ಶಿಕ್ಷಣ ಹಾಗೂ ಸಮಸಮಾಜ ನಿರ್ಮಾಣದ ಧ್ಯೇಯಕ್ಕೆ ಅಡ್ಡಿಯಾಗದಂತೆ ತ್ಯಾಗಮಯ ಬದುಕು ನಡೆಸಿದ ಮಹಾಸತಿ ಅವರು.
ಮಕ್ಕಳನ್ನು ಕಳೆದುಕೊಂಡ ನೋವನ್ನೂ ಒಳಗೊಳಗೇ ಸಹಿಸಿಕೊಂಡು, “ಕೋಟ್ಯಾಂತರ ಶೋಷಿತರ ಮಕ್ಕಳು ನಮ್ಮ ಮಕ್ಕಳು” ಎಂಬ ಮಹತ್ತಾದ ಮನೋಭಾವದಿಂದ ಬಾಬಾಸಾಹೇಬ್ ಅವರನ್ನು ಹೋರಾಟದ ದಾರಿಯಲ್ಲಿ ನಿಲ್ಲಿಸಿದ ಮಹಾನ್ ತಾಯಿ ರಮಾಬಾಯಿ. ಸರಳತೆ, ಸ್ವಾಭಿಮಾನ, ಸಹನೆ ಮತ್ತು ತ್ಯಾಗದ ಪ್ರತಿರೂಪವಾಗಿದ್ದ ಅವರ ಜೀವನ ನಮ್ಮೆಲ್ಲರಿಗೂ ದಾರಿದೀಪ.
ರಮಾಬಾಯಿ ಅವರ ತ್ಯಾಗವೇ ಅಂಬೇಡ್ಕರ್ ಅವರ ಶಕ್ತಿ; ಆ ಶಕ್ತಿಯ ಫಲವೇ ಸಮಾನತೆ, ನ್ಯಾಯ ಮತ್ತು ಸಂವಿಧಾನದ ಭಾರತ.
ಈ ಪುಣ್ಯ ದಿನದಲ್ಲಿ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರನ್ನು ಕೃತಜ್ಞತೆಯಿಂದ ಸ್ಮರಿಸೋಣ.
ಅವರ ಚೇತನ ನಮ್ಮ ಬದುಕಿಗೆ ಪ್ರೇರಣೆಯಾಗಲಿ.
#RamabaiAmbedkar #DrBabasahebAmbedkar #JaiBhim #NamoBuddhay
ಜೈ ಭೀಮ್ | ನಮೋ ಬುದ್ಧಾಯ 🙏







