ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
ShareChat
click to see wallet page
@myworldcs319
myworldcs319
ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
@myworldcs319
ಈ ಉಸಿರಿಗೆ...ಭರವಸೆ ನೀನಾಗಿರು ...ಅಷ್ಟೇ ❤
ಹೃದಯ ಹಾಡಿದೆ ನಿನ್ನದೇ ರಾಗವ..❗️ ಮನವು ಬಯಸಿದೆ ನಿನ್ನದೇ ನಾದವ..❕️ ಕಂಗಳಿಗೆ ದೂರವಾದರೇನು❓️ ಮನದ ಮನೆಯಲಿ ವಾಸಿಸುವ ನಿನ್ನ ನೆನೆದಾಗ ಕ್ಷಣದಲೇ ಧಾವಿಸಿ ಬಂದು ತುಂಬುವೆ ಅದೇ ಕಂಗಳಲಿ…❕️ ಕರ್ಣಗಳಿಗೆಟುಕದ ದನಿ ನಿನ್ನ ಚಿಮ್ಮಿ❗️ ಮನದ ಮೂಲೆ ಮೂಲೆಗಳಿಂದ ಪ್ರತಿಧ್ವನಿಸಿ ಸೇರುವವು ಹೃದಯ ಮಿಡಿತದೊಳು…❕️ ಮತ್ತೆ ಹಾಡಿದೆ ಹೃದಯ..❗️ ನಿನ್ನ ನೆನೆದು ನೆನೆದು ಮತ್ತೆ ಮುಳುಗಿದೆ ಮನ..❕️ ನೆನಪ ಹನಿಗಳಲಿ ನೆನೆದು…❗️ #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
ಅವಳ ನೆನಪಲ್ಲಿ - ShareChat
00:05
ಒಟ್ಟಿಗೆ ಇರುವುದು ಎಂದರೆ❓ ಕೇವಲ ಒಂದೇ ಮನೆಯಲ್ಲಿ ವಾಸಿಸುವುದು ಆದರೆ❓ ಒಟ್ಟಿಗೆ ಜೀವಿಸುವುದು ಎಂದರೆ❓ ಪರಸ್ಪರರ ಭಾವನೆಗಳು,ಕಷ್ಟ-ಸುಖಗಳನ್ನು ಹಂಚಿಕೊಂಡು,ಪ್ರೀತಿ-ವಿಶ್ವಾಸದಿಂದ ಬದುಕಿನ ಪಯಣವನ್ನು ಸಾಗಿಸುವುದಾಗಿದೆ ಒಟ್ಟಿಗೆ ಇರುವುದು (Co-existing)ದೈಹಿಕ ಸಾಮೀಪ್ಯ: ಕೇವಲ ಒಂದೇ ಛಾವಣಿಯ ಅಡಿಯಲ್ಲಿ ಅಥವಾ ಒಟ್ಟಿಗೆ ಕೆಲಸ ಮಾಡುವ ಜಾಗದಲ್ಲಿ ಇರುವುದು ಯಾಂತ್ರಿಕ ಜೀವನ: ಯಾವುದೇ ಆಳವಾದ ಬಾಂಧವ್ಯವಿಲ್ಲದೆ,ದಿನಚರಿಯನ್ನು ಮುಗಿಸುವ ಔಪಚಾರಿಕತೆ ಸ್ವಾರ್ಥ ಮತ್ತು ಮೌನ: ಪ್ರತಿಯೊಬ್ಬರೂ ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿರುವುದು ಮತ್ತು ಸಮಸ್ಯೆಗಳನ್ನು ಚರ್ಚಿಸದೆ ದೂರ ಉಳಿಯುವುದ ಒಟ್ಟಿಗೆ ಜೀವಿಸುವುದು ಅಂದ್ರೆ❓(Living Together) ಭಾವನಾತ್ಮಕ ಬೆಸುಗೆ: ಪರಸ್ಪರರ ನೋವು-ನಲಿವುಗಳಿಗೆ ಸ್ಪಂದಿಸುವುದು ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು.ಸಹಬಾಳ್ವೆ: ಬಿಟ್ಟುಕೊಡುವ ಮನೋಭಾವ, ಹೊಂದಾಣಿಕೆ ಮತ್ತು ಜೊತೆಯಾಗಿ ಬೆಳೆಯುವ ತುಡಿತ.ಸಂವಹನ: ಯಾವುದೇ ಮುಚ್ಚುಮರೆಯಿಲ್ಲದೆ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದು ಮತ್ತು ಪ್ರತಿಯೊಂದು ಕ್ಷಣವನ್ನು ಸಂಭ್ರಮಿಸುವುದು ಸಾರಾಂಶ:ಒಟ್ಟಿಗೆ ಇರುವುದು ಜನರ ನಡುವಿನ ದೈಹಿಕ ಅಂತರವನ್ನು ಕಡಿಮೆ ಮಾಡುತ್ತದೆ ಆದರೆ❓ ಒಟ್ಟಿಗೆ ಜೀವಿಸುವುದು ಹೃದಯಗಳನ್ನು ಬೆಸೆಯುತ್ತದೆ.ಜೀವನ ಸುಂದರವಾಗಿರಲು ಮತ್ತು ಅರ್ಥಪೂರ್ಣವಾಗಿರಲು ಕೇವಲ ಇರುವುದು ಸಾಕಾಗುವುದಿಲ್ಲ,ಜೊತೆಯಾಗಿ ಜೀವಿಸುವುದು ಅತ್ಯಗತ್ಯ. #ಅವಳ ನೆನಪಲ್ಲಿ #ಮನದ ಮಾತು ಬರಹದಲ್ಲಿ #ಎರಡು ಹೃದಯಗಳು #ಮೌನ ಮನದ ಪ್ರತಿಬಿಂಬ #ನನ್ನ ಪ್ರಪಂಚ ❣️
ಅವಳ ನೆನಪಲ್ಲಿ - ShareChat
00:22
#ನನ್ನ ಪ್ರಪಂಚ ❣️ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ಅವಳ ನೆನಪಲ್ಲಿ
ನನ್ನ ಪ್ರಪಂಚ ❣️ - ShareChat
01:28
ಒಮ್ಮೆಅರ್ಜುನ ಶ್ರೀ ಕೃಷ್ಣನನ್ನು ಕೇಳಿದ.. ಈ ಗೋಡೆಯ ಮೇಲೊಂದು ಸಂದೇಶ ಬರಿ,ಅದು ಹೇಗಿರಬೇಕೆಂದರೆ ❓️ಖುಷಿಯಲ್ಲಿ ಇದ್ದಾಗ ಓದಿದರೆ ದುಃಖವಾಗಬೇಕು.ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದು. ಆಗ ಶ್ರೀ ಕೃಷ್ಣ ಹೇಳುತ್ತಾನೆ. ಈ ಸಮಯ ಕಳೆದು ಹೋಗುತ್ತದೆ. ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರವನ್ನ ನೀಡುತ್ತಾನೆ ಕೃಷ್ಣ. ದುಃಖದಲ್ಲಿರುವವರು ಈ ಸಮಯ ಬೇಗಾ ಕಳೆದು ಹೋಗಲಿ ಎಂದು ಬಯಸಿದರೆ. ಸಂತೋಷದಲ್ಲಿದ್ದವರು ಸಂತೋಷ ಇಷ್ಟು ಬೇಗ ಮುಗಿದು ಹೋಯಿತೇ ಎಂದು ಬೇಸರ ಪಡುತ್ತಾರೆ. ಆದರೆ❓️ ಸಮಯ ಹೇಗಿದ್ದರು ಕಳೆದು ಹೋಗುತ್ತದೆ. ಆದರೆ❓️ ಕಳೆದು ಹೋಗುತ್ತಿರುವ ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಮಾನವನ ಬುದ್ಧಿವಂತಿಕೆಗೆ ಬಿಟ್ಟಿದ್ದು. ಮನುಷ್ಯನಿಗಿರುವ ಸಮಯ ಸ್ವಲ್ಪವಷ್ಟೇ. ಅದರಲ್ಲಿ ಬರೀ ಕೋಪ,ದ್ವೇಷ,ಗುರಿ ಹಿಂದೆ ಓದುವುದರ ಜೊತೆಗೆ. ಜೀವನದ ಸಣ್ಣ ಸಣ್ಣ ಖುಷಿಯನ್ನ ಅನುಭವಸಿಕೊಳ್ಳಿ. ಯಾಕೆಂದರೆ❓️ ಮುಂದೊಂದಿನ ಗುರಿ ತಲುಪಿದ ಮೇಲೆ ಕಳೆದು ಕೊಂಡ ಅನುಭವ,ಖುಷಿಯನ್ನ ಪಡೆದು ಕೊಳ್ಳಲು ಖಂಡಿತ ಸಾಧ್ಯವಿಲ್ಲ. ಯಾವ ವಯಸ್ಸಿನಲ್ಲಿ ಯಾವ ಅನುಭವ ದೊರೆಯಬೇಕು ಅದು ದೊರೆತೆರೇನೇ ಚಂದ. ಮನುಷ್ಯನಗೆ ವಯಸ್ಸು ಹಾಗೆ. ಅದರಿಂದ ಕಳೆದು ಹೋಗುತ್ತಿರುವ ಸಮಯದ ಕುರಿತು ಚಿಂತೆ ಮಾಡುವ ಬದಲು,ಕಳೆದು ಹೋಗುತ್ತಿರುವ ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಸಮಯಕ್ಕೆ ಅರ್ಥ ದೊರೆಯುತ್ತದೆ. ಮನುಷ್ಯನಿಗೆ ಎಲ್ಲವನ್ನ ಖರೀದಿಸುವ ಶಕ್ತಿ ಇದೆ. ಆದರೆ❓️ ಸಮಯವನ್ನಲ್ಲ. ಮನುಷ್ಯನಿಗೆ ಸಮಯವನಂತೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ❓️ ಸಿಕ್ಕಿದ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಸಿಗುವ ಎಲ್ಲವನ್ನು ಅನುಭವಿಸೋದನ್ನ ಕಲಿಯೋಣ. ಎಲ್ಲರನ್ನು ಪ್ರೀತಿಸಲು ಕಲಿಯೋಣ ಸಮಯ ಕಳೆದು ಹೋದಮೇಲೆ ಅಯ್ಯೋ ಕೋಪದಲ್ಲೇ ಜೀವನದ ಪ್ರಮುಖ ಸುಖಗಳನ್ನೇ ಕಳೆದುಕೊಂಡೆನಾ ಎಂದು ದುಃಖ ಪಡುವ ಬದಲು. ಆ ದಿನದ ಪ್ರತಿ ಖುಷಿಯನ್ನ ಅನುಭವಿಸಲು ಕಲಿತರೆ,ಸಮಯ ಕಳೆದುದ್ದಕ್ಕೂ ದುಃಖ ಪಡುವ ಅಗತ್ಯ ಇರುವುದಿಲ್ಲ. ನಿಮ್ಮಲ್ಲಿರೋ ಈ ಕ್ಷಣ ಸಮಯ ಈ ಅಮೂಲ್ಯವಾದ ಸ್ವತ್ತನ್ನ ಸಂಪೂರ್ಣವಾಗಿ ಬಳಸಿಕೊಳ್ಳಿ. ಸತ್ತಮೇಲೆ ಇವುಗಳು ಯಾವುದು ನಮ್ಮ ಬಳಿ ಇರಲ್ಲ🥰 #ನನ್ನ ಪ್ರಪಂಚ ❣️
ನನ್ನ ಪ್ರಪಂಚ ❣️ - ShareChat
00:52
ಜೀವನದ ಕಡಲಲ್ಲಿ ಮೌನದ ಅಲೆಗಳಾಗಿ ಮೀಟುತಿರುವಳು ಅವಳು ಆ ಮೌನದ ಹಾಡಿನಲಿ ರಾಗವಾಗಿ ಬೆರೆಯುವ ಆಸೆ ನನ್ನದು ಹೃದಯದ ಹಾದಿಯಲ್ಲಿ ಒಲವಿನ ಹೂವಾಗಿ ನಗುತಿರುವಳು ಅವಳು ಆ ಹೂವಿನೆದೆಯಲ್ಲಿ ಮಧುವಾಗಿ ಸೇರುವ ಆಸೆ ನನ್ನದು ಮನದ ಮುಗಿಲಿನಲ್ಲಿ ಪ್ರೀತಿಯ ಹನಿ ತುಂಬಿ ಚಲಿಸುವ ಮೇಘ ಅವಳು ಆ ಮೇಘಗಳ ಮಧ್ಯೆ ಮಿಂಚಂತೆ ಬಂದು ಕ್ಷಣವಾದರೂ ಅವಳ ಜೊತೆ ಕಳೆಯುವ ಆಸೆ ನನ್ನದು ಕಣ್ಣುಗಳ ಕಾರಂಜಿಯಲ್ಲಿ ಸವಿ ಕನಸುಗಳಾಗಿ ಕುಣಿಯುತಿರುವಳು ಅವಳು. ಆ ಕನಸುಗಳಿಗೆ ಕಾಮನಬಿಲ್ಲಿನಂತೆ ರಂಗು ಚೆಲ್ಲುವ ಆಸೆ ನನ್ನದು #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
ಅವಳ ನೆನಪಲ್ಲಿ - ShareChat
00:58
ಸಂತೋಷ ಮನಸ್ಸಿನ ಸ್ಥಿತಿಯಾದರೆ ಸುಖ ಭೌತಿಕ ಸೌಲಭ್ಯಗಳಿಂದ ಬರುವುದು ನೆಮ್ಮದಿಯ ಸಾಕ್ಷಾತ್ಕಾರವೇ ನಿಜವಾದ ಸುಖ ಪ್ರೀತಿ ಮತ್ತು ನಗುವಿನಲ್ಲಿಯೇ ನಿಜವಾದ ಸಂತೋಷ ಅಡಗಿದೆ #ನನ್ನ ಪ್ರಪಂಚ ❣️
ನನ್ನ ಪ್ರಪಂಚ ❣️ - ShareChat
00:22