ರಾಧಾಕೃಷ್ಣ 🦚💙
ShareChat
click to see wallet page
@radhe_radhe4723
radhe_radhe4723
ರಾಧಾಕೃಷ್ಣ 🦚💙
@radhe_radhe4723
🌷_ ನಾರಾಯಣಂ ಪರಬ್ರಹ್ಮಂ ಸರ್ವಕಾರಣಕಾರಕಂ _🌷
#🔱 ಭಕ್ತಿ ಲೋಕ ದೀಪದ ಬಗ್ಗೆ ಕಿರುಬೆಳಗು. ಮನಸ್ಸಿಗೆ ಬಂದಂತೆ ದೇವರ ಮನೆಯಲ್ಲಿ ದೀಪವನ್ನು ಜೋಡಿಸ ಬೇಡಿ! ಸರಿಯಾಗಿ ಜೋಡಿಸುವ ವಿಧಾನ ನೋಡಿ ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ, ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿದ್ದಿದ್ದೂ ಇದೆ, ನಾವು ತಸ್ಮಾತ್ ಶಾಸ್ತ್ರ ಪ್ರಮಾಣೇಷು ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳಬಹುದಷ್ಟೆ. ತಿಲ ತೈಲ (ಎಳ್ಳೆಣ್ಣೆ) ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ, ಆ ಇತರ ತೈಲಗಳು ವಾಮ ಪ್ರಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ. ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು, ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ ಮೂರು ಇದ್ದರೆ ಮರಣ ಸೂಚಕ ನಾಲ್ಕು ಇದ್ದರೆ ಗೊಂದಲ ಐದು ದೀಪಗಳು ಆರಾಧನೆಗೆ ಮಾತ್ರ. ಇದರಲ್ಲಿ ಬತ್ತಿಗಳ ಪ್ರಮಾಣ : ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ, ಮೂರು ಬತ್ತಿ ತ್ರಿಶಕ್ತಿ ರೂಪ, ನಾಲ್ಕು ಬತ್ತಿಯು ಉತ್ತಮವಲ್ಲ, ಐದು ಬತ್ತಿಗಳು ಪಂಚಭೂತಗಳ ಸಂಕೇತ, ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಠ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನವಾಗಿರ ಬಾರದು. ಹತ್ತಿ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ. ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು, ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat
#🔱 ಭಕ್ತಿ ಲೋಕ #ಓಂ ನಮಃ ಶಿವಾಯ #ದಿನಕ್ಕೊಂದು ಕಥೆ ಹರ+ಸಾಹಸ ಅಂದರೆ ನಿಮಗೆ ಗೊತ್ತೇ..? #ಶಿವನ ಸಾಹಸ. ಸಾಮಾನ್ಯವಾಗಿ ನಾವೇನಾದರೂ ಯಾವುದಾದರೂ ಕಾರ್ಯವನ್ನು ಬಹಳ ಕಷ್ಟಪಟ್ಟು ಮಾಡಿದರೆ, ಅದನ್ನು “ಹರಸಾಹಸ” ಎನ್ನುತ್ತೇವೆ. ಆದರೆ ಪುರಾಣದಲ್ಲಿ ಇದಕ್ಕೆ ಬಹು ಮುಖ್ಯವಾದ ಒಂದು ಕಥೆ ಇದೆ. ಓದಿ ತಿಳಿದುಕೊಳ್ಳಿ ಬ್ರಹ್ಮನ ಐದನೆ ತಲೆಯನ್ನು ತೆಗೆದ ಶಿವ - ಬ್ರಹ್ಮದೇವರಿಗೆ ಮೊದಲು ಐದು ತಲೆಗಳಿದ್ದವು. ಅವನು ತನ್ನ ಎಲ್ಲಾ ತಲೆಗಳಿಂದಲೂ ವೇದವನ್ನು ಪಾರಾಯಣ ಮಾಡುತ್ತಿದ್ದನು. ಅದರಲ್ಲಿ ಒಂದು ತಲೆಯಲ್ಲಿ ಬೇಕೆಂದೇ ಶ್ರೀಹರಿಯ ಆಜ್ಞೆಯಂತೆ ಅಸುರಜನ ಮೋಹನಾರ್ಥ ತಪ್ಪುತಪ್ಪಾಗಿ ಹೇಳುತ್ತಿದ್ದನು. ಶಿವನು ಇದನ್ನು ಕಂಡು ಕ್ರೋಧಗೊಂಡು ಆ ಐದನೇ ತಲೆಯನ್ನು ಕಡಿದನು. ಇದರಿಂದ ಅವನಿಗೆ ಬ್ರಹ್ಮಹತ್ಯಾ ದೋಷ ಬಂದಿತು ಮತ್ತು ಬ್ರಹ್ಮನ ಕಪಾಲ ಶಿವನ ಕೈಯಲ್ಲಿ ಮೆತ್ತಿಕೊಂಡಿತು. ಅದನ್ನು ಬಿಡಿಸಲು ಬಹಳ ಪ್ರಯತ್ನಪಟ್ಟರೂ ಅದು ಅವನ ಕೈಯಿಂದ ಬಿಡಿಸಲಾಸದ್ಯವಾಯಿತು. ನಂತರ ಶಿವ ಬಹಳ ಕಡೆ ಹೋಗಿ ಕಪಾಳದಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟನು. ೧. ಶಿವನು ಎಲ್ಲಾ ಹತ್ತು ದಿಕ್ಕುಗಳಿಗೂ ಹೋಗಿ ಪ್ರಯತ್ನಿಸಿದರೂ, ಅಲ್ಲಿ ಹರಿ ಸರ್ವೋತ್ತಮ ಪ್ರತಿಪಾದನೆ ಮಾಡಿದರೂ ಆ ಕಪಾಲ ತನ್ನ ಕೈಯಿಂದ ಬಿಡಿಸಲಾಗಲಿಲ್ಲ. ೨. ಬದರೀ ಕ್ಷೇತ್ರಕ್ಕೆ ಹೋಗಿ ಬದರೀ ನಾರಾಯಣನನ್ನು ದರ್ಶನಮಾಡಲು ಪ್ರಯತ್ನಿಸಿದಾಗ, ಅಲ್ಲಿ ದರ್ಶನವಾಗಲಿಲ್ಲ. ೩. ನಂತರ ಯಮುನಾ ನದಿಗೆ ಹೋದರೆ, ಅಲ್ಲಿ ಯಮುನೆಯೇ ಒಣಗಿ ಹೋಯಿತು. ೪. ನಂತರ ಪ್ಲಾಕ್ಷ್ಮ ದ್ವೀಪಕ್ಕೆ ಹೋದನು ೫. ನಂತರ ಪುಷ್ಕರ ಕ್ಷೇತ್ರಕ್ಕೆ ಹೋದನು ೬. ನಂತರ ನೈಮಿಷಾರಣ್ಯಕ್ಕೆ ಹೋದನು ೭. ನಂತರ ಸೈಂಧವಾರಣ್ಯಕ್ಕೂ, ಧರ್ಮಾರಣ್ಯಕ್ಕೂ ಹೋದನು ೮. ನಂತರ ಕುರುಕ್ಷೇತ್ರಕ್ಕೆ ಹೋದನು. ಅಲ್ಲಿ ಶ್ರಿ ಹರಿಯು ಕೇಶವ ರೂಪದಿಂದ ಪ್ರತ್ಯಕ್ಷನಾಗಿ ಅವನ ಬ್ರಹ್ಮ ಹತ್ಯಾದೋಷವನ್ನು ಪರಿಹಾರ ಮಾರ್ಗ‌ಸೂಚಿಸಿದನು. ಆದ್ದರಿಂದ ಇದನ್ನೇ “ಹರಸಾಹಸ”ವೆಂದು ಕರೆಯುತ್ತಾರೆ. ಪರಿಹಾರ ಮಾರ್ಗ ಯಾವುದು ಗೊತ್ತಾ..? ಅನ್ನಪೂರ್ಣೇಶ್ವರಿ ‌ದೇವಿಗೆ ಶರಣಾಗುವುದು , ಅನ್ನಪೂರ್ಣೇಶ್ವರಿ ಎದುರು ತಲೆ ಬಾಗುತ್ತಾನೆ ಶಿವ. ಆಗ ಬುರುಡೆ ತುಂಬಿ, ಶಿವನ ಕೈಯಿಂದ ಬುರುಡೆ ಕೆಳಗೆ ಬೀಳುತ್ತದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ಜಗತ್ತಿನ ತಂದೆ-ತಾಯಿಗಳ ಪ್ರಾರ್ಥನೆ సచదే @dharmasampao ಶ್ಲೋಕವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ Il ಅರ್ಥ: "ಮಾತು ಮತ್ತು ಅದರ ಅರ್ಥವು ಹೇಗೆ ಒಂದಕ್ಕೊಂದು   ಬೆರೆತಿರುತ್ತವೆಯೋ , ಹಾಗೆಯೇ ಪರಸ್ಪರ ಬೇರ್ಪಡಿಸಲಾಗದಂತೆ ಇರುವ, ಜಗತ್ತಿಗೆ ತಂದೆ-ತಾಯಿಗಳಾದ ಪಾರ್ವತಿ ಮತ್ತು ಪರಮೇಶ್ವರದಿಗೆ ನಾನು ವಂದಿಸುತ್ತೈನೆ: " ಜಗತ್ತಿನ ತಂದೆ-ತಾಯಿಗಳ ಪ್ರಾರ್ಥನೆ సచదే @dharmasampao ಶ್ಲೋಕವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ Il ಅರ್ಥ: "ಮಾತು ಮತ್ತು ಅದರ ಅರ್ಥವು ಹೇಗೆ ಒಂದಕ್ಕೊಂದು   ಬೆರೆತಿರುತ್ತವೆಯೋ , ಹಾಗೆಯೇ ಪರಸ್ಪರ ಬೇರ್ಪಡಿಸಲಾಗದಂತೆ ಇರುವ, ಜಗತ್ತಿಗೆ ತಂದೆ-ತಾಯಿಗಳಾದ ಪಾರ್ವತಿ ಮತ್ತು ಪರಮೇಶ್ವರದಿಗೆ ನಾನು ವಂದಿಸುತ್ತೈನೆ: " - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಶ್ರೀಕೃಷ್ಣನಿಗೆ - ಕೃಷ್ಣನೇ ಸಾಟಿ:- ಕುರುಕ್ಷೇತ್ರದ ಧರ್ಮ- ಅಧರ್ಮಗಳ ನಡುವೆ ನಡೆದ ಯುದ್ಧದಲ್ಲಿ, ಘಟಾನುಘಟಿಗಳು, ಮಹಾಮಹಿಮರೆನಿಸಿಕೊಂಡವರೆಲ್ಲಾ, ಸಾವನ್ನಪ್ಪಿದರು.ಇಲ್ಲಿ ಸರಿ-ತಪ್ಪು ಪ್ರಶ್ನೆಗಳು ಬರುವುದಿಲ್ಲ. ಆದರೆ ಮಹಾಭಾರತದ ಈ ಯುದ್ಧದಲ್ಲಿ ಎಲ್ಲರ ಮನಕಲಕುವ ಸಾವು ಎಂದರೆ, ಅರ್ಜುನ ಸುಭದ್ರೆಯರ ಮಗನಾದ ಅಭಿಮನ್ಯುವಿನದು. ಆಡುವ ವಯಸ್ಸು ಮಹಾವೀರ, ಪರಾಕ್ರಮಿ, ಯುದ್ಧ ಕೌಶಲ್ಯವನ್ನು ತಿಳಿದವನು, ಯುದ್ಧದಲ್ಲಿ ಇವನ ಎದರು ನಿಂತರೆ ವೀರಾಧಿ ವೀರರು ಮಣ್ಣುಮುಕ್ಕುವರು. ಕೌರವರ ಸೇನಾಧಿಪತಿ ಗುರು ದ್ರೋಣಾಚಾರ್ಯರು, ಯುಧಿಷ್ಠಿರನನ್ನು ಬಂಧಿಸಿ ವಿಜಯ ಪತಾಕೆಯನ್ನು ಹಾರಿಸುವೆನೆಂದು ದುರ್ಯೋಧನನಿಗೆ ಮಾತುಕೊಟ್ಟಂತೆ, ಯುದ್ಧದ ಹದಿಮೂರನೇ ದಿನ ಚಕ್ರವ್ಯೂಹ ರಚಿಸಿದರು. ಈ ಚಕ್ರವ್ಯೂಹ ಭೇದಿಸುವ ರಹಸ್ಯ ಶ್ರೀಕೃಷ್ಣ ,ಅರ್ಜುನನಿಗೆ ಮಾತ್ರ ಗೊತ್ತಿತ್ತು. ಇದನ್ನು ತಿಳಿದಿದ್ದ ದ್ರೋಣರು ಕೃಷ್ಣ ಮತ್ತು ಅರ್ಜುನರನ್ನು ರಣರಂಗದಿಂದ ದೂರದಲ್ಲಿರುವಂತೆ ವ್ಯವಸ್ಥೆ ಮಾಡಿ ಯಾರೂ ಒಳಗೆ ಬರದಂತೆ ತಡೆಯಲು, ಒಂದು ದಿನದ ಮಟ್ಟಿಗೆ ಸಾವು ಬರದಂತೆ ವರಪಡೆದ ಜಯದ್ರಥನನ್ನು ಚಕ್ರವ್ಯೂಹದ ಹೊರಗೆ ನಿಲ್ಲಿಸಿದರು. ಎಲ್ಲರಿಗೂ ತಿಳಿದಿರುವಂತೆ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಅಡ್ಡ ಬಂದವರನ್ನು ಕಡಿದುರುಳಿಸುತ್ತಾ ಮುಂದೆ ಮುಂದೆ ಹೋಗುತ್ತಾನೆ. ಇವನ ಶೌರ್ಯ, ಪರಾಕ್ರಮದ ಮುಂದೆ ಯಾರು ಉಳಿಯಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವನು ಮಹಾರಥಿಗಳಾದ ದ್ರೋಣಾಚಾರ್ಯರು, ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ, ದುಶ್ಯಾಸನರನ್ನು ಒಂದೇ ಸಲಕ್ಕೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡುವಂತೆ ತಿಳಿಸುತ್ತಾನೆ. ದ್ರೋಣ, ಕೃಪಾ, ಕರ್ಣರು, ಇದು ಯುದ್ಧನೀತಿ ಅಲ್ಲವೆಂದು ತಿಳಿದಿದ್ದರೂ, ಒಟ್ಟಿಗೆ ಒಂದೇ ಸಲಕ್ಕೆ ರಾಕ್ಷಸರಂತೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡಿ ನೆಲಕ್ಕೆ ಬೀಳಿಸುತ್ತಾರೆ. ಯುದ್ಧರಥ, ಕತ್ತಿ ಇಲ್ಲದೆ ನಿರಾಯುಧನಾಗಿದ್ದರೂ, ರಥದ ಚಕ್ರವನ್ನೇ ಕಿತ್ತುಕೊಂಡು ರಕ್ತಸಿಕ್ತ ದೇಹದಿಂದ ಒಬ್ಬಂಟಿಯಾಗಿ ನಿಂತು ಆತಿರಥ ಮಹಾರಥರನ್ನೇ ಎದುರಿಸಿ ಹೋರಾಡುತ್ತಾನೆ. ಆದರೂ ಕೊನೆಗೆ ಮೋಸಕ್ಕೆ ಬಲಿಯಾಗಿ ವೀರ ಮರಣ ಹೊಂದುತ್ತಾನೆ. ಇವುಗಳೆಲ್ಲದರ ಮಧ್ಯೆ ಪಾಪಿಯಾದ ಜಯದ್ರಥನು ತನ್ನ ರಥದಿಂದ ಕೆಳಗಿಳಿದು ಬಂದು ಅಭಿಮನ್ಯವಿನ ಶವವನ್ನು ತನ್ನ ಕಾಲಿನಿಂದ ಒದೆಯುತ್ತಾ ರಾಕ್ಷಸನಗೆ ಬೀರುತ್ತಾ ದೂರ ತಳ್ಳುತ್ತಾನೆ. ಇದನ್ನೆಲ್ಲಾ ತಿಳಿದ ಕೃಷ್ಣ ಮತ್ತು ಅರ್ಜುನರಿಗೆ, ಅಭಿಮನ್ಯು ಸತ್ತಿದ್ದಾನೆ ಎಂಬ ದುಃಖಕ್ಕಿಂತ ಸತ್ತ ಅಭಿಮನ್ಯುವಿನ ಶವವನ್ನು ಜಯದ್ರಥ ಕಾಲಿನಿಂದ ಒದೆಯುತ್ತಾ ದೂರ ತಳ್ಳಿದ್ದು ಅವರಿಬ್ಬರಿಗೂ ಮೈ ಉರಿಯುತ್ತದೆ. ಕೃಷ್ಣನಂತು ಸಿಟ್ಟಿನಿಂದ ಕೊತಕೊತ ಕುದಿಯುತ್ತಾನೆ. ಕೋಪ ,ನೋವು, ಹತಾಶೆ, ಅಸಮಾಧಾನದಿಂದ ಬಂದ ಅರ್ಜುನ ರಣರಂಗದ ಮಧ್ಯೆ ಬಂದು ಕೇಳಿ, ಮೋಸದಿಂದ ನನ್ನ ಮಗನನ್ನು ಕೊಂದಿದ್ದು ಅಲ್ಲದೆ ನೀಚ ಮನಸ್ಸಿನ ಜಯದ್ರಥನು ಸತ್ತ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ್ದಾನೆ. ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಾಳೆ ಸೂರ್ಯಾಸ್ತವಾಗುವುದರೊಳಗೆ ಸಾಯಿಸುತ್ತೇನೆ. ಒಂದು ವೇಳೆ ಅದು ನನ್ನಿಂದ ಆಗದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎಂದು ಶಪಥ ಮಾಡುತ್ತಾನೆ. ಅರ್ಜುನನು ಮಾಡಿದ ಶಪಥ ಎರಡೂ ಪಾಳಯದಲ್ಲಿ ಸಂಚಲನ ಉಂಟು ಮಾಡುತ್ತದೆ. ಕೌರವರಿಗೆ ಜಯದ್ರಥನನ್ನು ಹೇಗಾದರೂ ಮಾಡಿ ಕಾಪಾಡಿಕೊಂಡರೆ, ಅರ್ಜುನ ಅಗ್ನಿ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ಪಾಂಡವರು ಇತಿಶ್ರೀ ಆದಂತೆ ಎಂದು ಖುಷಿಪಡುತ್ತಿದ್ದರೇ, ಜಯದ್ರಥನನ್ನು ಸಂಹರಿಸಲಾಗದೆ, ಅರ್ಜುನ ಅಗ್ನಿ ಪ್ರವೇಶ ಮಾಡಿದರೆ ನಮ್ಮ ಕಥೆ ಮುಗಿದಂತೆ ಎಂದು ಪಾಂಡವರು ಚಿಂತಾಕ್ರಾಂತರಾಗಿ, ಅರ್ಜುನ ಜಯದ್ರಥನನ್ನು ಕೊಲ್ಲಲೇಬೇಕು ಇದರ ಕುರಿತು ಯೋಜನೆಗಳನ್ನು ರೂಪಿಸುತ್ತಾರೆ. ಎಲ್ಲವನ್ನೂ ಬಲ್ಲ ಕೃಷ್ಣ ಮಾತ್ರ ಯಾವ ಮಾತನ್ನೂ ಆಡದೇ, ಒಂದು ವೇಳೆ ಹಾಗಾದರೆ, ಹೀಗಾದರೆ, ಏನು ಮಾಡಬೇಕೆಂಬುದನ್ನು ಮೊದಲೇ ಸಿದ್ಧತೆ ಮಾಡಿಕೊಂಡು ಎಲ್ಲರ ಮಾತುಗಳನ್ನು ಕೇಳುತ್ತಾ, ತನ್ನ ಸೋದರಳಿಯ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ ಜಯದ್ರಥನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದನು. ಮರುದಿನ ಯುದ್ದ ಆರಂಭವಾಗುತ್ತಿದ್ದಂತೆ ರಥದಲ್ಲಿ ಕುಳಿತ ಕೃಷ್ಣ ಮತ್ತು ಅರ್ಜುನರು ಜಯದ್ರಥನನ್ನು ಹುಡುಕಲು ಆರಂಭಿಸುತ್ತಾರೆ. ಈಕಡೆ ಕೌರವರು ಜಯದ್ರಥನ ಸುರಕ್ಷತೆಯ ಜವಾಬ್ದಾರಿಯನ್ನು ಸೇನಾಧಿಪತಿ ದ್ರೋಣಾಚಾರ್ಯರಿಗೆ ಕೊಡುತ್ತಾರೆ. ಮಹಾ ಗುರುಗಳಾದ ದ್ರೋಣಾಚಾರ್ಯರು ಜಯದ್ರಥನನ್ನು ಕಾಪಾಡಲು ಯಾರಿಂದಲೂ ಭೇದಿಸಲಾಗದಂಥ ಯೋಜನೆಯನ್ನೇ ರೂಪಿಸಿದರು. ಮೂರು ಚಕ್ರವ್ಯೂಹ ಗಳನ್ನು ರಚಿಸಿ, ಅತಿರಥ ಮಹಾರಥರಾದ ಕೃಪಾಚಾರ್ಯ, ಅಶ್ವತ್ಥಾಮ, ಕರ್ಣ ಇವರುಗಳನ್ನು ಮೂರು ಚಕ್ರವ್ಯೂಹಗಳಿಗೆ ತಡೆಗೋಡೆಯಾಗಿ ನಿಲ್ಲಿಸುತ್ತಾರೆ. ಪಾಂಡವರು ಚಕ್ರವ್ಯೂಹ ಭೇದಿಸುವ ಹರಸಾಹಸ ಮಾಡಿದರು. ಈ ಭೀಕರ ಕದನದಲ್ಲಿ ಕೌರವರ ಐದು ದೊಡ್ಡ ಸೈನ್ಯದ ತುಕಡಿಗಳು ನಾಶವಾದರೂ ಗುರು ದ್ರೋಣಾಚಾರ್ಯರು ರಚಿಸಿದ ಒಂದೇ ಒಂದು ಚಕ್ರವ್ಯೂಹ ಭೇದಿಸಲು ಪಾಂಡವರಿಂದ ಸಾಧ್ಯವಾಗಲಿಲ್ಲ. ಅರ್ಜುನ ಮತ್ತು ಜಯದ್ರತನ ಮಧ್ಯೆ ಇದ್ದ ಚಕ್ರವ್ಯೂಹ ಭೇದಿಸುವುದು ಇರಲಿ, ಹತ್ತಿರ ಹೋಗಲು ಆಗಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇನ್ನೇನು ಸೂರ್ಯಾಸ್ತದ ಸಮಯ ಬಂದಿತು. ಅರ್ಜುನ ಅಗ್ನಿ ಪ್ರವೇಶ ಮಾಡುವುದನ್ನೇ ಕೌರವರು ಕಾಯುತ್ತಿದ್ದರು. ಪಾಂಡವರು ಹತಾಶರಾಗಿ ಕೈಚೆಲ್ಲಿದ್ದರು. ರಥದಲ್ಲಿ ಕುಳಿತಿದ್ದ ಕೃಷ್ಣ ನೋಡುತ್ತಿದ್ದ. ಅಧರ್ಮದ ಮುಂದೆ ಧರ್ಮ ಸೋಲುವುದನ್ನು ಕೃಷ್ಣನಿಂದ ಸಹಿಸಲಾಗಲಿಲ್ಲ. ತಕ್ಷಣ ಸೂರ್ಯನನ್ನು ಮುಚ್ಚುವಂತೆ ಮೋಡಗಳಿಗೆ ಹೇಳಿದ. ಕತ್ತಲು ಆವರಿಸಿದ್ದನ್ನು ಕಂಡು ಸೂರ್ಯಾಸ್ತವಾಯಿತು ಎಂದು ಭ್ರಮಿಸಿ ಕೌರವರು ಕುಣಿದರು. ಅರ್ಜುನ ಸೂರ್ಯ ಮರೆಯಾದುದನ್ನು ನೋಡಿ, ಭಾರವಾದ ಹೃದಯದಿಂದ ತಲೆಕೆಳಗೆ ಹಾಕಿ, ಗಾಂಡೀವವನ್ನು ಕೈ ಬಿಟ್ಟು ,ರಥದಿಂದ ಕೆಳಗಿಳಿಯುತ್ತಾನೆ. ತನ್ನ ಬಾಣಗಳಿಂದಲೇ ಚಿತೆಯನ್ನು ಮಾಡುತ್ತಾನೆ. ಅರ್ಜುನನು ಪ್ರಾಣತ್ಯಾಗ ಮಾಡುವುದನ್ನು ನೋಡಲು ಕೌರವರೆಲ್ಲ ಸಂತೋಷದಿಂದ ಓಡೋಡಿ ಬಂದು ಅಗ್ನಿ ಮುಂದೆ ನಿಂತರು. ಕೌರವರು ಸಂತೋಷದಿಂದ ಹುಚ್ಚರಾಗಿದ್ದರು. ಪಾಂಡವರ ಮೈಯಲ್ಲಿದ್ದ ಶಕ್ತಿಯೆಲ್ಲಾ ಉಡುಗಿ ಹೋಗಿತ್ತು. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಇಂಥ ಅಮೋಘವಾದ ದೃಶ್ಯ ಮುಂದೆ ಸಿಗುವುದಿಲ್ಲ ಎಂದುಕೊಂಡು ಅರ್ಜುನನನ್ನು ನೋಡಿ ಗೇಲಿಮಾಡಿ ನಗಲು ಚಕ್ರವ್ಯೂಹದೊಳಗೆ ಭದ್ರವಾಗಿದ್ದ ಜಯದ್ರಥನು ಈಚೆ ಬಂದು ಚಿತೆಯ ಮುಂದೆ ನಿಲ್ಲುತ್ತಾನೆ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕೃಷ್ಣನು ಮೋಡಗಳನ್ನು ಸರಿಸಿ ಸೂರ್ಯನನ್ನು ಮುಂದೆ ತರುತ್ತಾನೆ. ಇದ್ದಕ್ಕಿದ್ದಂತೆ ಸೂರ್ಯನ ಕಿರಣಗಳನ್ನು ಕಂಡ ಕೌರವ - ಪಾಂಡವರು ದಂಗಾಗಿಹೋದರು. ಕೃಷ್ಣ ಕೂಗಿ ಹೇಳಿದ "ಏ ಪಾರ್ಥ, ನೋಡು ನಿನ್ನ ಮಗನ ಶವವನ್ನು ಒದ್ದ ಶತ್ರು ನಿನ್ನ ಮುಂದೆ ನಿಂತಿದ್ದಾನೆ. ಮುಂದಿರುವ ಅಗ್ನಿ ದೇವನಿಗೆ ನಮಿಸು, ಗಾಂಡೀವವನ್ನು ಮೇಲೆತ್ತು, ಹೂಡು ನಿನ್ನ ಬಾಣ" ಎಂದು ಆದೇಶ ನೀಡಿದ. ಕ್ಷಣವೂ ತಡಮಾಡದ ಅರ್ಜುನ ಗಾಂಡೀವ ಎತ್ತಿದ, ಬಾಣ ಹೂಡಿ ಓಡುತ್ತಿದ್ದ ಜಯದ್ರಥನ ಶಿರಶ್ಚೇದ ಮಾಡಿದ. ಕ್ಷಣಮಾತ್ರದಲ್ಲಿ ಗುಡುಗು-ಮಿಂಚು ಅಬ್ಬರಿಸಿದಂತೆ ಎಲ್ಲವೂ ನಡೆದು ಹೋಯಿತು. ಜಯದ್ರಥನನ್ನು ಹೊಡೆದು ಜಯ ಸಾಧಿಸಿದ್ದು ಅರ್ಜುನನೇ ಆದರೂ, ಸೇಡಿಗೆ ಸೇಡು, ಎಂಬ ಕೃಷ್ಣನು ಚಾಣಾಕ್ಷತನದಿಂದ ತನ್ನ ಸೋದರಳಿಯ ಅಭಿಮನ್ಯುವನ್ನು ಕೊಂದು ಆ ಶವವನ್ನು ಕಾಲಿನಿಂದ ತಳ್ಳಿದ ಜಯದ್ರಥ ನ ಶಿರಸ್ಸನ್ನು , ಅರ್ಜುನನ ಮೂಲಕ ತಲೆಯಿಂದ ಬೇರೆ ಮಾಡಿಸಿ ಸೇಡು ತೀರಿಸಿಕೊಂಡನು. ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್, ಆಶ್ಚರ್ಯವದ್ವದತಿ ತಥೈವ ಚಾನ್ಯ, ಆಶ್ಚರ್ಯ ವಚ್ಚೈ ನಮನ್ಯ ಶೃಣೋತಿ, ಶ್ರುತ್ವಾ ಪ್ಯೇ ನಂ ವೇದ ನ ಚೈವ ಕಶ್ಚಿತ್! ಒಬ್ಬ ಈತನನ್ನು ಅದ್ಭುತದಂತೆ ಕಾಣುತ್ತಾನೆ. ಮತ್ತೊಬ್ಬ ಅದ್ಭುತದಂತೆ ಹೇಳುತ್ತಾನೆ. ಮಗದೊಬ್ಬ ಅದ್ಭುತದಂತೆ ಕೇಳುತ್ತಾನೆ. ಹೀಗೆ ಕೇಳಿದ ಮೇಲೂ ಯಾರು ಈತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರರು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat
#ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ #ಲಲಿತಾ ಸಹಸ್ರನಾಮ ಶ್ರೀ ಲಲಿತಾ ಸಹಸ್ರನಾಮದ ಸ್ತೋತ್ರ ಮತ್ತು ಅರ್ಥ:- 73-74. ಕಾಮ್ಯಾ, ಕಾಮಕಲಾರೂಪಾ, ಕದಂಬ ಕುಸುಮಪ್ರಿಯಾ | ಕಲ್ಯಾಣೀ ,ಜಗತೀಕಂದಾ , ಕರುಣಾರಸ ಸಾಗರಾ ||73|| ಜಗಜ್ಜನನೀಯು ಕಾಮ್ಯಳು,ಕಾಮಕಲಾ ರೂಪದಲ್ಲಿ ಇರುವವಳು, ಕದಂಬ ಕುಸುಮ ಪ್ರಿಯಳು , ಮಂಗಳ ಸ್ವರೂಪಳು, ಜಗತ್ತಿಗೆ ಮೂಲವಾಗಿರುವವಳು ಕರುಣಾರಸದ ಸಾಗರವಾಗಿರುವವಳು. ಕಲಾವತೀ, ಕಲಾಲಾಪಾ, ಕಾಂತಾ, ಕಾದಂಬರೀಪ್ರಿಯಾ | ವರದಾ, ವಾಮನಯನಾ, ವಾರುಣೀಮದವಿಹ್ವಲಾ ||74|| ಶ್ರೀ ದೇವಿಯು 64 ಕಲಾ ವಿದ್ಯೆಗಳ ಸ್ವರೂಪಳು, ಮಂಜುಳವಾದ ಆಲಾಪ ಉಳ್ಳವಳು, ಕಮನೀಯ, ಸ್ವರೂಪಳು, ಕಾದಂಬರೀ (ಒಂದು ವಿಧದ ಮಾದಕ ದ್ರವ್ಯ) ಪ್ರಿಯಳು, ವರವನ್ನು ಕೊಡುವವಳು, ಸುಂದರವಾದ ಕಣ್ಣುಗಳುಳ್ಳವಳು, ವಾರುಣೀ (ಖರ್ಜೂರ) ಯಿಂದ ಉತ್ಪನ್ನವಾದ ರಸಪಾನದ ಆನಂದದಿಂದ ವಿಹ್ವಲಳಾಗಿರುವವಳು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ - aa aa - ShareChat
#ಅಮ್ಮ ಮಾತೃದೇವೋ ಭವ :- ಒಬ್ಬ ತಾಯಿಗೆ ಮಗನಿದ್ದ. ಬೆಳೆದು ಯುವಕನಾಗಿದ್ದ. ಮನೆಯಲ್ಲಿ ಬಡತನ. ಬೇರೆಯವರ ಮನೆ ಚಾಕರಿ ಮಾಡಿ ಮಗನನ್ನು ಸಾಕಿದ್ದಳು. ಅವಳಿಗೂ ವಯಸ್ಸಾಗಿತ್ತು ಕೆಲಸ ಮಾಡಲು ಸಾಗುತ್ತಿರಲಿಲ್ಲ . ಹೇಗೋ ಮಗ ದೊಡ್ಡವನಾಗಿದ್ದಾನೆ ಒಂದು ಮದುವೆ ಮಾಡಿದರೆ, ಸೊಸೆ ಮನೆಯಲ್ಲಿ ಸುಧಾರಿಸಿಕೊಂಡು ಹೋಗುತ್ತಾಳೆ, ತಾನು ಹಾಯಾಗಿ ಇರಬಹುದು ಎಂದು ಚಿಂತಿಸಿದಳು. ಹೀಗಿರುವಾಗ ಒಂದು ದಿನ ಮಗ ತಾಯಿ ಮುಂದೆ ಬಂದು ಅಮ್ಮ ನನಗೆ ದೇವರನ್ನು ನೋಡಬೇಕೆಂಬ ಆಸೆ ಇದೆ. ನಾನು ಆಗಲೇ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ. ಹೇಗೆ ಕಾಣುವುದು ಅಮ್ಮ ಎಂದು ಕೇಳಿದ. ತಾಯಿಯ ಆಲೋಚನೆ ಮಗನ ಮದುವೆ ಮಾಡಬೇಕೆಂದು, ಮಗನ ಅಪೇಕ್ಷೆ ದೇವರನ್ನು ಕಾಣಬೇಕು ಎಂದು. ಯಾರ ಅಪೇಕ್ಷೆ ಏನಿದಿಯೋ ಯಾರಿಗೆ ಗೊತ್ತು ಎಂದುಕೊಂಡ ತಾಯಿ ಮಗನಿಗೆ ಹೋಗುವುದು ಬೇಡ ಎಂದು ಹೇಳಲು ಮನಸ್ಸು ಬರಲಿಲ್ಲ. ಮಗು ನೀನು ದೇವರನ್ನು ಕಾಣಲು ಹೋಗುತ್ತಿ ರುವೆ ಒಳ್ಳೆಯದು ಹೋಗು ಮಗನೆ ಮುಂಜಾನೆ ಬುತ್ತಿ ಕಟ್ಟಿ ಕೊಡುತ್ತೇನೆ ಹೋಗಿ ಬಾ ಎಂದಳು. ತಾಯಿ ಬೆಳಗ್ಗೆ ಎದ್ದು ಹಿಟ್ಟು ಕಲಸಿರೊಟ್ಟಿ ತಟ್ಟಿ ಎಲೆ ಮೇಲೆಟ್ಟು ರೊಟ್ಟಿ ಮೇಲೆ ಚಟ್ನಿಪುಡಿ ಹಾಕಿ ಹಳೆಯ ಬಟ್ಟೆ ತುಂಡಿನಲ್ಲಿಟ್ಟು ಕಟ್ಟಿ ಮಗನ ಕೈಗೆ ಕೊಟ್ಟಳು ಹಾಗೆಯೇ, ಮಗ ನೀನು ದೇವರನ್ನು ಕಾಣಲು ಹೊರಟಿರುವೆ, ತುಂಬಾ ಒಳ್ಳೆಯ ಯೋಚನೆ, ಎಂತೆಂಥ ಸಾಧು-ಸಂತರೆಲ್ಲ ದೇವರನ್ನು ಕಾಣುವ ಸಲುವಾಗಿ ಪ್ರಯತ್ನಿಸುತ್ತಾರೆ. ನಿನಗೆ ಭಗವಂತನ ದರ್ಶನವಾಗಲಿ ಆದರೆ ನನ್ನ ಒಂದು ಮಾತನ್ನು ನಡೆಸಿಕೊಡು. ನೀನು ದೇವರನ್ನು ಕಂಡ ಮೇಲೆ ಮನೆಗೆ ಬಂದು ದೇವರು ಹೇಗಿದ್ದಾನೆ ಎಂಬುದನ್ನು ನನಗೂ ಹೇಳು ಮಗು ಎಂದಳು. ಆ ಹುಡುಗ ಆಯಿತು ಎಂದು ತಾಯಿಗೆ ಹೇಳಿ ದೇವರನ್ನು ಕಾಣಲು ಹೊರಟ ಹೊರಟು ಬಹಳ ಸಮಯವಾಯಿತು, ಕಾಡೆಲ್ಲ ಸುತ್ತಿದ, ಬೆಟ್ಟ ಗುಡ್ಡ ಹತ್ತಿದ, ಗುಹೆಗಳಲ್ಲಿ ಕುರಿತು ಧ್ಯಾನ ಮಾಡಿದ, ನದಿ ತಟಗಳಲ್ಲಿ ಕುಳಿತು ತಪಸ್ಸು ಮಾಡಿದ. ಆದರೆ ಅವನಿಗೆ ಯಾವ ದೇವರು ದರ್ಶನ ಕೊಡಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.ಇನ್ನು ಸಾಕು ಮನೆಗೆ ಹೋಗೋಣ ಎಂದು ಹೊರಟು ಬಂದ. ಅವನು ಬರುವ ಸಮಯಕ್ಕೆ ಮುಸ್ಸಂಜೆ ಆಗಿತ್ತು . ಗುಡಿಸಲ ಮುಂದೆ ನಿಂತಿದ್ದಾನೆ ಒಳಗೆ ತಾಯಿ ದೇವರ ಮುಂದೆ ದೀಪ ಹಚ್ಚಿ ನನ್ನ ಮಗನಿಗೆ ನಿನ್ನ ದರ್ಶನ ಮಾಡಿಸು ಅವನುನಿನ್ನನ್ನು ನೋಡುವ ಸಲುವಾಗಿ ಹೊರಟಿದ್ದಾನೆ. ಬಹಳ ದಿನಗಳಾಗಿದೆ ಅವನಿಗೆ ನಿನ್ನ ದರ್ಶನ ಭಾಗ್ಯವನ್ನು ಬೇಗ ಕೊಡು ಎಂದು ಕೈಮುಗಿದು ಬೇಡುತ್ತಿದ್ದಳು. ಆ ದೀಪದ ಬೆಳಕು ಅವಳ ಮುಖದ ಮೇಲೆ ಬಿದ್ದು ತಾಯಿಯ ಮುಖದ ಪ್ರಶಾಂತ ತೆಯಿಂದ ದಿವ್ಯವಾದ ತೇಜಸ್ಸು ತುಂಬಿತ್ತು. ದೇವರನ್ನು ಹುಡುಕಲು ಹೊರಟ ಮನೆಗೆ ಬಂದು ದೇವರ ದೀಪದ ಬೆಳಕಿನಲ್ಲಿ ಅಮ್ಮನ ಮಮತೆ ತುಂಬಿದ ಮುಖವನ್ನು ನೋಡಿದ. ಆಗ ಮನಸ್ಸಿನಲ್ಲಿ ಬಂದಿತು ಎಂಥಾ ಕರುಣಾಮಯಿ ದಯಾಮಯಿ ನನ್ನಮ್ಮ. ತಾಯಿಗಿಂತ ಬೇರೆ ದೇವರು ಉಂಟೇ ಆ ಕ್ಷಣವೇ ಅಮ್ಮಾ ಎಂದು ಕೂಗಿದ. ಮಗನ ದೇವರಲ್ಲಿ ಪ್ರಾರ್ಥಿಸುತ್ತಿದ್ದ ತಾಯಿ ಹೊರಗೆ ಓಡಿ ಬಂದಳು ಮಗನನ್ನು ಕಂಡು ಅವನ ತಲೆಯನ್ನು ನೇವರಿಸಿ ಮಗು ಈಗ ಬಂದೆಯಾ ದೇವರನ್ನು ಕಂಡೆಯಾ? ಹೆಂಗಿದ್ದಾನೆ ಎಂದು ಕೇಳಿದಳು? ಮಗ ಹೇಳಿದ ಅಮ್ಮ ನಾನು ದೇವರನ್ನು ಕಂಡೆ ಕಾಡು ಮೇಡುಗಳಲ್ಲಿ, ಪರ್ವತಗಳ ತುದಿಯವರೆಗೂ ಹತ್ತಿದೆ, ನದಿ ತೀರಗಳಲ್ಲಿ ಕುಳಿತು ತಪಸ್ಸು ಮಾಡಿದೆ ಗುಹೆ ಗಳಲ್ಲಿ ಕುಳಿತು ಧ್ಯಾನ ಮಾಡಿದೆ. ಎಲ್ಲಿ ಹುಡುಕಿದರು ದೇವರು ಕಾಣಲಿಲ್ಲ. ಜಗವೆಲ್ಲ ಸುತ್ತಿ ಮನೆಗೆ ಬಂದೆ ದೇವರ ದೀಪದ ಬೆಳಕು ನಿನ್ನ ಮುಖದ ಮೇಲೆ ಬಿದ್ದಿತ್ತು ಅಲ್ಲಿ ದೇವರನ್ನು ಕಂಡೆ ಎಂದು ತಾಯಿಯನ್ನು ಅಪ್ಪಿ ಹಿಡಿದುಕೊಂಡು. ತಾಯಿಗಿಂತ ಬೇರೆ ದೇವರಿಲ್ಲ ಅಮ್ಮಾ ನನ್ನಮ್ಮ ನೀನೇ ನನಗೆಲ್ಲ. ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ನಿನ್ನ ಸಂಗ ಆಡಲೆಂದು ಬಂದೆ ನಾನು!! ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು ಬಣ್ಣದ ಬಣ್ಣದ ಚಿಟ್ಟೆಯನ್ನು ನೀನೇ ನೀನು!! ರೆಕ್ಕೆ ಬಂದ ಹಾರುವೆ ಹಾಗೆ ನಾನು ಅಕ್ಕರೆಯ ತೋರಿ ಎನ್ನ ಅಪ್ಪು ನೀನು!! ಅಮ್ಮಾ!! ಊರು ಬೇಡ ಕೇಳಿ ಬೇಡ ಯಾರು ಬೇಡಾ ಅಮ್ಮ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡಾ ತಾಯಿ ತಂದೆ ಬಂಧು ಬಳಗ ನೀನೆ ಎಲ್ಲಾ ನಿನಗಿಂತ ಬೇರೆ ದೇವರಿಲ್ಲಾ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
ಅಮ್ಮ - Nagabhushana Stories Asho Nagabhushana Stories Asho - ShareChat
#🔱 ಭಕ್ತಿ ಲೋಕ ***ಪುರುಷೋತ್ತಮ ಮಾಸ / ಅಧಿಕ ಮಾಸ / ಮಲಮಾಸ 2026* *ಯಾವಾಗ ಶುರುವಾಗುತ್ತದೆ?*** ಮೇ 17, 2026 ಭಾನುವಾರದಿಂದ ಶುರುವಾಗಿ ಜೂನ್ 15, 2026 ಸೋಮವಾರಕ್ಕೆ ಮುಗಿಯುತ್ತದೆ. ಒಟ್ಟು 30 ದಿನಗಳು. ಮೊದಲ ದಿನ ಮೇ 17ರಂದು ಉಪವಾಸ ಮಾಡುವುದು ತುಂಬಾ ವಿಶೇಷ. ಈ ದಿನದ ವ್ರತ ಪಾಪಗಳಿಂದ ಮುಕ್ತಿ ಕೊಡುತ್ತದೆ ಎಂಬ ನಂಬಿಕೆ ಇದೆ. *ಮಲಮಾಸ ಅಂದರೆ ಏನು?* ಹಿಂದೂ ಪಂಚಾಂಗದಲ್ಲಿ ಸೂರ್ಯ ಸಂಕ್ರಾಂತಿ ಇಲ್ಲದ ಚಾಂದ್ರ ಮಾಸಕ್ಕೆ "ಅಧಿಕ ಮಾಸ" ಅಂತಾರೆ. ಯಾವ ದೇವತೆಯೂ ಇದನ್ನು ಆಳಲು ಒಪ್ಪದಿದ್ದಾಗ ವಿಷ್ಣು ಈ ಮಾಸವನ್ನು ಸ್ವೀಕರಿಸಿದ. ತನ್ನ ಹೆಸರಾದ "ಪುರುಷೋತ್ತಮ" ಎಂದು ಕರೆದ. ಅದಕ್ಕೆ ಇದಕ್ಕೆ ವಿಷ್ಣು ಅಧಿಪತಿ. *ಈ ಮಾಸದಲ್ಲಿ ಏನು ಮಾಡಬೇಕು?* - *ವಿಷ್ಣು ಪೂಜೆ*: ವಿಷ್ಣು ಸಹಸ್ರನಾಮ, ಸತ್ಯನಾರಾಯಣ ಪೂಜೆ ಮಾಡಿ - *ಉಪವಾಸ/ವ್ರತ*: ವಿಶೇಷವಾಗಿ ಮೊದಲ ದಿನ ಮತ್ತು ಏಕಾದಶಿ ದಿನಗಳು - *ದಾನ*: ಅನ್ನದಾನ, ವಸ್ತ್ರದಾನ, ಗೋಸೇವೆ ಮಾಡಿ - *ಗ್ರಂಥ ದಾನ*: ರಾಮಾಯಣ, ಭಗವದ್ಗೀತೆ, ಭಾಗವತ ದಾನ ಮಾಡಿದರೆ ಹೆಚ್ಚು ಪುಣ್ಯ - *ಜಪ-ತಪ*: ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಜಪಿಸಿ - *ದೀಪ ದಾನ*: ವಿಷ್ಣು ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ ಈ ಮಾಸದಲ್ಲಿ ಮಾಡುವ ಭಕ್ತಿಗೆ ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚು ಫಲ ಸಿಗುತ್ತದೆ ಅನ್ನೋದು ವಿಷ್ಣುವಿನ ವರ. *ಏನು ಮಾಡಬಾರದು?* ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಯಾಕೆಂದರೆ ಫಲ ಸಿಗುವುದಿಲ್ಲ ಎಂಬ ನಂಬಿಕೆ: - ಮದುವೆ, ನಿಶ್ಚಿತಾರ್ಥ - ಗೃಹಪ್ರವೇಶ, ವಾಸ್ತು ಪೂಜೆ - ನಾಮಕರಣ, ಚೌಲ, ಉಪನಯನ - ಹೊಸ ವ್ಯಾಪಾರ/ಕೆಲಸ ಶುರು - ಆಸ್ತಿ ಖರೀದಿ, ಗೃಹ ನಿರ್ಮಾಣ ಆರಂಭ *ಗಮನಿಸಿ*: ಸಾವು-ಸಂಬಂಧಿತ ಕಾರ್ಯಗಳು, ನಿತ್ಯ ಪೂಜೆ, ಶ್ರಾದ್ಧ ಇವುಗಳಿಗೆ ನಿಷೇಧ ಇಲ್ಲ.
🔱 ಭಕ್ತಿ ಲೋಕ - rald rald - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಓಂ ನಮಃ ಶಿವಾಯ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಯಾರು ಶಿರದಲ್ಲಿ ರುಮಾಲನ್ನು ಧರಿಸಿರುವನೋ ಯಾರು ಬೆಟ್ಟಗಳಲ್ಲಿ ಸದಾ ಅಲೆದಾಡುತ್ತಿರುವನೋ, ಯಾರು ಜಮೀನುದಾರರ ಅಧಿಪತಿ ಯೋ ಅಂತಹ ರುದ್ರನೇ ನಿನಗೆ ನಮಸ್ಕಾರಗಳು. ಅವನು ರುಮಾಲನ್ನು ಧರಿಸಿರುವುದು ಅವನ ಗುರುತನ್ನು ಮರೆಮಾಚಿಸಲಿಕ್ಕೆ. ಪರ್ವತಗಳಲ್ಲಿ ಯೋಗಿಗಳು ತಪಸ್ಸನ್ನು ಆಚರಿಸುತ್ತಾರೆ. ಅವರ ರಕ್ಷಣೆಗೆ ರುದ್ರನು ಪರ್ವತಗಳಲ್ಲಿ ಸಂಚರಿಸುತ್ತಾನೆ. ಮೇಲಿನ ಮಂತ್ರಗಳು ಆಂದರೆ ಮೊದಲನೇ ಮಂತ್ರದಿಂದ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಮಂತ್ರಗಳ ವರೆಗೆ ರಹಸ್ಯ ವಾದ ಅರ್ಥಗಳನ್ನು ಹೇಳಿದ್ದರೂ, ವೇದಗಳ ಕಾಲದಲ್ಲೂ, ಕಳ್ಳರು, ರಾತ್ರಿ ಕಳ್ಳರು, ಡಕಾಯಿತರು, ದರೋಡೆಕೋರರು, ಮೋಸ ವಂಚನೆ ಮಾಡುವವರು, ಕೊಲೆಗಡುಕರು ಇದ್ದರು ಎನ್ನುವುದು ತಿಳಿಯುತ್ತದೆ. ಆದರೆ ಅವರು ನಾಗರಿಕ ಸಮಾಜದಿಂದ ದೂರ ಉಳಿದಿದ್ದರು ಆದರೆ ಈಗ ಇಂತಹವರ ಸಂಖ್ಯೆ ಹೆಚ್ಚಿ ಅವರು ನಾಗರಿಕ ಸಮಾಜದ ಮಧ್ಯೆಯೇ ಇರುವುದಷ್ಟೇ ಅಲ್ಲದೆ, ನಮ್ಮನ್ನು ಆಳುವವರ ಮಧ್ಯೆಯೂ ಸೇರಿ ಹೋಗಿದ್ದು ಅಂಥವರನ್ನು ಶಿಕ್ಷಿಸಲು ರುದ್ರನು ತನ್ನ ಆಧುನಿಕ ಬಿಲ್ಲು ಬಾಣಗಳನ್ನು ಉಪಯೋಗಿಸುವಂತೆ ಬೇಡಿಕೊಂಡು, ಆ ರುದ್ರನಿಗೆ ನಮಸ್ಕಾರಗಳು. ನಮ ಇಷುಮದ್ಭ್ಯೋ ಧನ್ವಾವಿಭ್ಯಷ್ಚ ವೋ ನಮಃ ಯಾರು ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವವರೋ ಅವರಿಗೆ ನಮಸ್ಕಾರಗಳು. ಇಲ್ಲಿಯೂ ಸಹಾ ರುದ್ರಗಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ ನಮ ಅತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮಃ ಯಾರ್ಯಾರು ಬಿಲ್ಲಿನ ಎರಡೂ ತುದಿಗಳಿಗೆ ಹಗ್ಗವನ್ನು ಕಟ್ಟಿ ಆ ಬಿಲ್ಲಿಗೆ ಬಾಣವನ್ನು ಹೂಡುತ್ತಾರೋ ಅಂತಹವರಿಗೆ ಅಂದರೆ ರುದ್ರಗಣಗಳಿಗೆ ನಮಸ್ಕಾರಗಳು ಈ ಮಂತ್ರವು ಶಿಲ್ಪ ಕಲಾವಿದರನ್ನು ಅಂದರೆ ಇಂದ್ರ ಮತ್ತು ಅವನ ಸಹಾಯಕರನ್ನು ಕುರಿತು ಹೇಳಲಾಗಿದೆ ಎಂದು ಸಹಾ ಒಂದು ಅಭಿಪ್ರಾಯವಿದೆ. ಇಂದ್ರನೂ ಸೇರಿದಂತೆ ಈ ಎಲ್ಲಾ ದೇವತೆಗಳು, ರುದ್ರಗಣಗಳೂ ಸಹಾ ರುದ್ರನ ನೇರ ನಿಯಂತ್ರಣ ದಲ್ಲಿವೆ. ನಮ ಆಯಚ್ಚಭ್ಯೋ ವಿಸೃಜದ್ಭ್ಯಶ್ಚ ವೋ ನಮಃ ಯಾರು ಬಿಲ್ಲನ್ನು ಬಗ್ಗಿಸಿ ಅದರಿಂದ ಬಾಣವನ್ನು ಬಿಡುತ್ತಾರೋ ಅವರಿಗೆ ನಮಸ್ಕಾರಗಳು ಬಿಲ್ಲನ್ನು ಬಗ್ಗಿಸಿ ಬಾಣ ಬಿಡುವುವರನ್ನು ಶ್ರಮಿಕ ವರ್ಗಕ್ಕೆ ಅನ್ವಯಿಸಿ ಶ್ರಮಿಕ ವರ್ಗದವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳನ್ನು ಹೇಳಲಾಗಿದೆ. ನಮೋ ಸದ್ಭ್ಯೋ ವಿಧ್ಯದ್ಬ್ಯಶ್ಚ ವೋ ನಮಃ ಬಾಣಗಳಿಂದ ಗುರಿಗೆ ಹೊಡೆಯುತ್ತಿರುವವರಿಗೆ ಮತ್ತು ಗುರಿಯನ್ನು ಬೇಧಿಸುತ್ತಿರುವವರಿಗೆ ನಮಸ್ಕಾರಗಳು. ಬಿಲ್ಲುಗಾರರಲ್ಲಿ ಎರಡು ವಿಧ, ಒಂದು ಬಗೆಯವರು ಗುರಿಗೆ ಬಾಣವನ್ನು ಬಿಡುವಂತಹವರಾದರೆ, ಮತ್ತೊಂದು ಬಗೆಯವರು ಗುರಿಯನ್ನು ಬೇಧಿಸಿ ಮುಂದೆ ಹೋಗುವಂತೆ ಬಾಣವನ್ನು ಬಿಡುವಂತಹವರು. ಈ ಯೋಧರ ರೂಪ ದಲ್ಲಿರುವ ರುದ್ರನಿಗೆ ನಮಸ್ಕಾರಗಳು ನಮ ಆಸೀನೇಭ್ಯಃ ಶ್ಯನಾಭ್ಯಶ್ಚ ವೋ ನಮಃ / ಶ್ಯನೇಭ್ಯಶ್ಚ ವೋ ನಮಃ ಆಸನದಲ್ಲಿ ನೇರವಾಗಿ ಕುಳಿತಿರುವವರಿಗೂ ಹಿಂದೆ ಒರಗಿಕೊಂಡು ಕುಳಿತಿರುವವರಿಗೂ ನಮಸ್ಕಾರಗಳು ಅಂದಿನ ಕಾಯಕ ಯೋಗವನ್ನು ಮುಗಿಸಿ ಆಸನದಲ್ಲಿ ನೇರವಾಗಿಯೋ ಅಥವಾ ಒರಗಿಕೊಂಡೋ ವಿಶ್ರಾಂತಿ ಪಡೆಯುತ್ತಿರುವವರ ರೂಪದಲ್ಲಿ ತೋರುತ್ತಿರುವ ರುದ್ರನಿಗೆ ನಮಸ್ಕಾರಗಳು. ವೇದಕಾಲದ ಸಮಾಜದಲ್ಲಿ ಅವರವರ ಪಾಲಿಗೆ ಬಂದ ಕಾಯಕವನ್ನು ಮಾಡುವುದನ್ನು ಕಾಯಕ ಯೋಗ ಎಂದು ಕರೆಯಲಾಗಿದೆಯಲ್ಲದೆ, ಈ ಕಾಯಕ ಮಾಡುವವರಲ್ಲಿ ರುದ್ರನನ್ನೇ ಕಂಡು ನಮಸ್ಕರಿಸುವ ಸಂಸ್ಕಾರ ವಿತ್ತು ಎಂಬುದನ್ನು ಈ ಮಂತ್ರದ ಮೂಲಕ ಹೇಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಅವರವರ ಪಾಲಿಗೆ ಬಂದ ಕಾಯಕ ಗಳನ್ನು ಮಾಡಲೇ ಬೇಕಾದ್ದು ಅನಿವಾರ್ಯ ಮತ್ತು ಅವಶ್ಯಕ ಎಂಬ ಅರಿವು ವೇದ ಕಾಲದ ಸಮಾಜದಲ್ಲಿಯೇ ಇತ್ತು. ಇದು ಹೊಸದಾಗಿ ಇತ್ತೀಚಿಗೆ ಬಂದದ್ದೇನೂ ಅಲ್ಲ ಎನ್ನುವುದಕ್ಕೆ ಈ ಮಂತ್ರ ಪುರಾವೆ ಒದಗಿಸುತ್ತದೆ. ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮಃ ನಿದ್ರೆ ಮಾಡುತ್ತಿರುವವರಿಗೆ ಮತ್ತು ಜಾಗೃತಾವಸ್ಥೆ ಯಲ್ಲಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು. ಭೂಮಿಯ ಒಂದು ಭಾಗದ ಜನ ನಿದ್ರೆ ಮಾಡುತ್ತಿದ್ದರೆ ಮತ್ತೊಂದು ಭಾಗದ ಜನ ಜಾಗೃತ ರಾಗಿರುತ್ತಾರೆ. ಅಂದರೆ ಭೂಮಿಯು ಗುಂಡಾಗಿದೆ ಅನ್ನುವ ತಿಳಿವಳಿಕೆ ವೇದ ಕಾಲದಲ್ಲೇ ಇತ್ತು ಎನ್ನಲು ಈ ಮಂತ್ರಕ್ಕಿಂತ ಬೇರೆ ಪುರಾವೆ ಬೇಕಿಲ್ಲಾ. ಇದು ಆಳವಾದ ತಪಸ್ಸಿನಲ್ಲಿ ಮಗ್ನರಾಗಿ ಸಮಾಧಿ ಸ್ಥಿತಿ ತಲುಪಿರುವ ಒಂದು ವರ್ಗವನ್ನೂ ಹಾಗೂ ತಮ್ಮ ಕರ್ಮ ಯೋಗ ದಲ್ಲಿ ಅಂದರೆ ಕಾಯಕ ಯೋಗದಲ್ಲಿ ನಿರತರಾಗಿರುವ ಮತ್ತೊಂದು ವರ್ಗವನ್ನು ಕುರಿತ ಮಂತ್ರ ಎಂತಲೂ ಭಾವಿಸ ಬಹುದು. ನಮಸ್ತಿಷ್ಟದ್ಭ್ಯೋ ಧಾವದ್ಬ್ಯಶ್ಚ ವೋ ನಮಃ ನಿಂತಿರುವವರ ಮತ್ತು ಓಡುತ್ತಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು ಇಲ್ಲಿ ಜಡ ಮತ್ತು ಚೇತನಗಳ ಬಗ್ಗೆ ಹೇಳಿದ್ದು ರುದ್ರನು ಜಡರೂಪದಲ್ಲೂ ಚೇತನ ರೂಪದಲ್ಲೂ ಇದ್ದು ಅವನು ಸರ್ವವ್ಯಾಪಿ ಎಂದು ಮತ್ತೊಮ್ಮೆ ಹೇಳಲಾಗಿದೆ. ನಮಃ ಸಭಾಭ್ಯಃ ಸಭಾಪತಿಭ್ಶಶ್ಚ ವೋ ನಮಃ ಸಭೆಯಲ್ಲಿ ಭಾಗವಹಿಸಿರುವವರೂ ಸಬೆಯ ಅಧ್ಯಕ್ಷನೂ ಆದ ರುದ್ರನಿಗೆ ನಮಸ್ಕಾರಗಳು. ಸಭೆಗಳು ಅಂದರೆ ಆಧ್ಯಾತ್ಮಿಕ, ಧಾರ್ಮಿಕ ಸಭೆಗಳು. ಇಂತಹ ಸಭೆಗಳಲ್ಲಿ ಭಾಗವಹಿಸುವವರಲ್ಲಿಯೂ ಪ್ರವಚನ ನೀಡುವವರಲ್ಲಿಯೂ ಇರುವವನು ಒಬ್ಬನೇ. ಅವನು ರುದ್ರ. ಗುರುವಿನ ರೂಪ ದಲ್ಲಿಯೂ ಶಿಷ್ಯನ ರೂಪದಲ್ಲಿಯೂ ತಾನೇ ಆಗಿರುವ ರುದ್ರನಿಗೆ ನಮಸ್ಕಾರಗಳು ನಮೋ ಅಶ್ವೇಭ್ಯೋs ಶ್ವಪತಿಭ್ಯಶ್ಚ ವೋ ನಮಃ ಅಶ್ವಗಳಿಗೂ ಅಶ್ವಗಳ ಅಧಿಪತಿಯಾದ ರುದ್ರನಿಗೂ ನಮಸ್ಕಾರಗಳು. ವೇದಗಳಲ್ಲಿ ಅಶ್ವ ಎನ್ನುವ ಪದವನ್ನು ಬಹಳ ಆಳವಾದ ಅರ್ಥದಲ್ಲಿ ಉಪಯೋಗಿಸಲಾಗಿದೆ. ಇದು ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿ. ಈ ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿಯೂ ತಾನೇ ಆಗಿ, ಈ ಶಕ್ತಿಯ ಅಧಿಪತಿಯೂ ತಾನೇ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು. ಶುಭವಾಗಲಿ ಧನ್ಯವಾದಗಳು
🔱 ಭಕ್ತಿ ಲೋಕ - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಪಂಚಗವ್ಯ ದೀಪ......!! ಜನ್ಮ ಮತ್ತು ಸಂಚಾರಕ್ಕೆ ಅನುಗುಣವಾಗಿ ಗ್ರಹ ದೋಷಗಳನ್ನು ಹೊಂದಿರುವವರು ಈ ದೀಪವನ್ನು ಪ್ರತಿದಿನ ಪೂಜಿಸಿ ದೋಷಗಳಿಂದ ಮುಕ್ತರಾಗುತ್ತಾರೆ. ಯತ್ತ್ವಗಷ್ಠಿ ಗತಂ ಪಾಪಂ ದೇಹೇ ತಿಷ್ಠತಿ ಮಮಕೇ! ಪ್ರಸನಂ ಪಂಚಗವ್ಯಸ್ಯ ದನ್ಹತ್ಯಾಗ್ನಿರಿವೇಂಧನಂ!! ಅಂದರೆ, ನಮ್ಮ ದೇಹ, ಮೂಳೆಗಳು ಮತ್ತು ಕೀಲುಗಳಿಗೆ ಅಂಟಿಕೊಂಡಿರುವ ಯಾವುದೇ ದೋಷಗಳು, ಉರುವಲು ಸುಟ್ಟುಹೋದಂತೆ ಪಂಚಗವ್ಯಗಳನ್ನು ಆನಂದಿಸುವುದರಿಂದ ನಾಶವಾಗುತ್ತವೆ. ನಿಮ್ಮ ಮನೆಯಲ್ಲಿ ಮಂಡಲ (48 ದಿನಗಳು) ಪಂಚಗವ್ಯ ದೀಪವನ್ನು ಬೆಳಗಿಸುವ ಮೂಲಕ, ನೀವು ಯಜ್ಞದ ಫಲಿತಾಂಶಗಳನ್ನು ಪಡೆಯುತ್ತೀರಿ. ಗೋಕ್ಷೀರ - ಹಸುವಿನ ಹಾಲು ಗೋಘೃತಂ - ಹಸುವಿನ ತುಪ್ಪ ಗೋದಾಧಿ - ಹಸುವಿನ ಮೊಸರು ಗೋಮೂತ್ರ - ಹಸುವಿನ ಮೂತ್ರ ಗೋಮಯಂ - ಹಸುವಿನ ಸಗಣಿ 1) ಚಂದ್ರ ಹಸಿ ಹಾಲಿನಲ್ಲಿ ವಾಸಿಸುತ್ತಾನೆ, 2) ಮೊಸರಿನಲ್ಲಿ ವಾಯು ದೇವರು, 3) ಹಸುವಿನ ಮೂತ್ರದಲ್ಲಿ ವರುಣ, 4) ಹಸುವಿನ ತುಪ್ಪದಲ್ಲಿ ಅಗ್ನಿ ದೇವರು, 5) ಹಸುವಿನ ತುಪ್ಪದಲ್ಲಿ ಸೂರ್ಯನು ವಾಸಿಸುತ್ತಾನೆ ಇವೆಲ್ಲವನ್ನೂ ದೇವಾಲಯಗಳ ಪವಿತ್ರೀಕರಣ, ಅಭಿಷೇಕ ಮತ್ತು ಗೃಹಪ್ರವೇಶದ ಸಮಯದಲ್ಲಿ ಬಳಸಲಾಗುತ್ತದೆ. ಈ ವಿಶೇಷ ಪಂಚಗವ್ಯ ವಸ್ತುಗಳಿಂದ ಮಾಡಿದ ಈ ಪಂಚಗವ್ಯ ದೀಪವನ್ನು ಬೆಳಗಿಸಿ ಮನೆಯಲ್ಲಿ ಪೂಜೆ ಮಾಡುವುದು ತುಂಬಾ ಒಳ್ಳೆಯದು. ಈ ಪಂಚಗವ್ಯ ದೀಪವನ್ನು ಮನೆಯಲ್ಲಿ ಬೆಳಗಿಸಿದಾಗ, ಅದರಿಂದ ಬರುವ ಹೊಗೆ ಇಡೀ ಮನೆಯನ್ನು ದೈವತ್ವದಿಂದ ತುಂಬುತ್ತದೆ, ದೋಷಗಳು, ದೋಷಗಳನ್ನು ನಿವಾರಿಸುತ್ತದೆ ಮತ್ತು ಮನೆಯಲ್ಲಿರುವ ಜನರ ಮನಸ್ಸು ಮತ್ತು ದೈಹಿಕ ಕಾಯಿಲೆಗಳನ್ನು ಗುಣಪಡಿಸುತ್ತದೆ. ಈ ಪಂಚಗವ್ಯ ದೀಪವನ್ನು ನಿಮ್ಮ ಮನೆಯಲ್ಲಿ ಮಂಡಲಕ್ಕಾಗಿ (48 ದಿನಗಳು) ಬೆಳಗಿಸುವ ಮೂಲಕ, ನೀವು ಯಜ್ಞದ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರತಿದಿನ ಬೆಳಿಗ್ಗೆ 6 ರಿಂದ 7 ಗಂಟೆಯ ನಡುವೆ ಈ ದೀಪವನ್ನು ಹಸುವಿನ ಸಗಣಿ ಅಥವಾ ಎಳ್ಳೆಣ್ಣೆಯಿಂದ ಬೆಳಗಿಸಿ. ದೇವಿಯ ಆಶೀರ್ವಾದಕ್ಕಾಗಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಪಂಚಗವ್ಯ ದೀಪವನ್ನು ಬೆಳಗಿಸಿ ಪೂಜಿಸುವುದರಿಂದ ಸಾಲದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್ @everyone ಶುಭ ಶುಕ್ರವಾರ ಸುದಿನಮಸ್ತು
🔱 ಭಕ್ತಿ ಲೋಕ - C Cow Ghee Dung Cow < Cow Milk V Gomutra Cow Curd C Cow Ghee Dung Cow < Cow Milk V Gomutra Cow Curd - ShareChat
#🔱 ಭಕ್ತಿ ಲೋಕ ನಾರಾಯಣಂ ಸಕಮಲಂ ಸಕಲಮರೇಂದ್ರಮ್ । ವೈಖಾನಸಂ ಮಾಮಗುರುಂ ನಿಗಮಾಗೇಂದ್ರಮ್ ॥ ಭೃಗುವತ್ರಿಕಸ್ಯಪಮರೀಚಿ ಮುಖಂ ಮುನೀಂದ್ರನ್ । ಸರ್ವಾಣಾಹಂ ಕುಲಗುರುಂ ಪ್ರಣಮಾಮಿ ಮೂರ್ಧ್ನಾ ॥ ಲಕ್ಷ್ಮೀದೇವಿಯಿಂದ ಕೂಡಿದ ಸಕಲ ದೇವತೆಗಳ ಭಗವಂತನಾದ ಶ್ರೀಮನ್ನಾರಾಯಣನಿಗೆ; ವೇದಗಳು ಮತ್ತು ವೇದಾಂಗಗಳಲ್ಲಿ ಪಾರಂಗತರಾದ ನನ್ನ ಗುರುಗಳಾದ ಶ್ರೀ ವಿಖಾನಸ ಮಹರ್ಷಿಗಳಿಗೆ; ಅವರ ಮುಖ್ಯ ಶಿಷ್ಯರಾದ ಭೃಗು, ಅತ್ರಿ, ಕಶ್ಯಪ, ಮರೀಚಿ ಮತ್ತು ಇತರ ಮುನೀಂದ್ರರಿಗೆ - ನಾನು ನನ್ನ ಗುರುಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಈ ಶ್ಲೋಕವು ವೈಖಾನಸ ಸಂಪ್ರದಾಯದ "ಗುರು ಪರಂಪರಾ" ವನ್ನು ಸ್ಮರಿಸುವ ಪವಿತ್ರ ಪ್ರಾರ್ಥನೆಯಾಗಿದೆ. ಅದರಲ್ಲಿ, ವೈಖಾನಸ ಶಾಸ್ತ್ರವು ದೇವರಿಂದ ಮಾನವೀಯತೆಯನ್ನು ಹೇಗೆ ತಲುಪಿತು ಎಂಬುದು ಸ್ಪಷ್ಟವಾಗಿದೆ. ಮೊದಲಿಗೆ, ಈ ಶ್ಲೋಕವು ಸೃಷ್ಟಿಯ ಮೂಲನಾದ ಶ್ರೀಮನ್ನಾರಾಯಣನನ್ನು (ಮೂಲ ಗುರು) ಸ್ಮರಿಸುವ ಮೂಲಕ ಪ್ರಾರಂಭವಾಗುತ್ತದೆ. ನಂತರ, ಅದು ದೇವರ ಅಂಶವಾಗಿ ಅವತರಿಸಿದ ಮತ್ತು ವೈಖಾನಸ ಸೂತ್ರಗಳನ್ನು ಜಗತ್ತಿಗೆ ನೀಡಿದ ಶ್ರೀ ವಿಖಾನಸ ಋಷಿಗಳ ಬಗ್ಗೆ ಉಲ್ಲೇಖಿಸುತ್ತದೆ. ಭಗವಾನ್ ವಿಖಾನಸ ಮಹರ್ಷಿ ಕೇವಲ ಋಷಿಯಲ್ಲ, ಅವರು ವೇದಗಳು (ನಿಗಮ) ಮತ್ತು ಆಗಮಗಳ ಗುರು. ನಂತರ, ಭಗವಾನ್ ವಿಖಾನಸ ಮಹರ್ಷಿಗಳ ಅಡಿಯಲ್ಲಿ ಅಧ್ಯಯನ ಮಾಡಿ ವೈಖಾನಸ ಭಗವಚ್ಛಾಸ್ತ್ರವನ್ನು ನಾಲ್ಕು ಲಕ್ಷ ಪುಸ್ತಕಗಳಾಗಿ ವಿಸ್ತರಿಸಿದ ನಾಲ್ಕು ಮುಖ್ಯ ಶಿಷ್ಯರನ್ನು (ಭೃಗು, ಅತ್ರಿ, ಕಶ್ಯಪ ಮತ್ತು ಮರೀಚಿ) ಉಲ್ಲೇಖಿಸುತ್ತದೆ. ಅವರಿಂದ ನೀಡಲ್ಪಟ್ಟ ಜ್ಞಾನವು ಇಂದಿಗೂ ತಿರುಮಲದಂತಹ ಪವಿತ್ರ ಸ್ಥಳಗಳಲ್ಲಿ ಪೂಜಾ ಪದ್ಧತಿಗಳ ಆಧಾರವಾಗಿದೆ. ಈ ಶ್ಲೋಕದ ಮುಖ್ಯ ಉದ್ದೇಶವೆಂದರೆ, ಅವರ ವಂಶಾವಳಿ ಮತ್ತು ಶಿಕ್ಷಣದ ಮೂಲಪುರುಷರಾದ ಈ ಎಲ್ಲ ಜನರನ್ನು ಭಕ್ತಿಯಿಂದ ಸ್ಮರಿಸುವುದು. ಶ್ರೀ ವೈಖಾನಸ ಗುರುಪರಂಪರಾನುಸಂಧಾನಂ ಅನನ್ತರಂ ಸ್ವಾಚಾರ್ಯಮಾರಾಭ್ಯಾ, ಶ್ರೀಮನ್ನಾರಾಯಣ ಪರ್ಯನ್ತಂ ನಿಜ ಗುರುಪರಂಪರಾನುಸಂಧಾನಂ ಕುರ್ಯಾತ್ ತತ್ಪ್ರಕಾರಮ್ ॥ ವಂದೇ ಶ್ರೀ ರಾಘವಾಚಾರ್ಯಂ ಶ್ರೀರಂಗರ್ಯಾ ಮತಃ ಪರಮ್ ॥ ಶ್ರೀ ವಿವಾಸಂ ನರಹರಿಂ ಗೋವಿನ್ದರ್ಯಾಂ ವಸಂತಕಮ್ ಅನಂತಕೃಷ್ಣ ಭಟ್ಟರಾಯಾಂ ಶ್ರೀಮತ್ಸುಂದರಾಜಕಮ್ ನೃಸಿಂಹ ಭಟ್ಟವರ್ಯಂಚ ಭಾಸ್ಕರಂ ವಾಜಪೇಯ್ನಮ್ ವರದಂ ವೆಂಕಟಂ ರಂಗಂ ಕೃಷ್ಣಂ ಗೋವಿನ್ದ ನಾಮಕಮ್ ರಾಮಾಚಾರ್ಯಂ ರಾಘವಾಂಚ ನರಸಿಂಹಂಚ ಕೇಶವಂ ನಾರಾಯಣಂ ಭೃಗುಮುನಿಂ ಮರೀಚಿಂ ಚತ್ರಿ ಕಶ್ಯಪೌ ವೈಖಾನಸಂ ಶ್ರಿಯಂ ವನ್ದೇ ಶ್ರೀಸಂ ಗುರುಪರಮ್ ಶ್ರೀ ವಿಷ್ಣು ಶ್ರೀಮಹೀಯುಕ್ತಂ ಸನ್ತಂ ಶೇಷಂ ಖಗಧಿಪಮ್ ಸುದರ್ಶನಾದ್ಯಯುಧಾನಿ ಸಮಸ್ಥಾನಿ ನಮಾಮ್ಯಹಮ್ ॥ ಶ್ರೀಯಸಮೇತ ಶ್ರೀಪರಮ ಹಂಸ ಸ್ವರೂಪಿಣೇ ಶ್ರೀಮತೇ ನಾರಾಯಣಾಯನಮಃ ॥ ಏವಂ ಗುರುಪರಂ ಧ್ಯಾತ್ವಾ ಶ್ರೀ ರಾಘವಾಚಾರ್ಯರಿಗೆ ಮತ್ತು ಅವರಿಗಿಂತ ಶ್ರೇಷ್ಠರಾದ ಶ್ರೀರಂಗಾಚಾರ್ಯರಿಗೆ ನಾನು ನಮಸ್ಕರಿಸುತ್ತೇನೆ. ಶ್ರೀನಿವಾಸ ದೀಕ್ಷಿತ್, ನರಹರಿ ಆಚಾರ್ಯ, ಗೋವಿಂದಾಚಾರ್ಯ, ಮತ್ತು ವಸಂತಾಚಾರ್ಯ ಎಂಬ ಗುರುಗಳಿಗೆ ನಮನಗಳು. ಅನಂತಕೃಷ್ಣ ಭಟ್ಟಾಚಾರ್ಯರಿಗೆ ಮತ್ತು ಪೂಜ್ಯ ಸುಂದರರಾಜ ಆಚಾರ್ಯರಿಗೆ ನಮನಗಳು. ಪೂಜ್ಯ ನರಸಿಂಹ ಭಟ್ಟಾಚಾರ್ಯರಿಗೆ ಮತ್ತು ವಾಜಪೇಯ ಯಾಗವನ್ನು ನೆರವೇರಿಸಿದ ಭಾಸ್ಕರಾಚಾರ್ಯರಿಗೆ ನಮನಗಳು. ವರದಾಚಾರ್ಯ, ವೆಂಕಟಾಚಾರ್ಯ, ರಂಗಾಚಾರ್ಯ, ಕೃಷ್ಣಾಚಾರ್ಯ ಮತ್ತು ಗೋವಿಂದಾಚಾರ್ಯ ಎಂದು ಪ್ರಸಿದ್ಧರಾದ ಮಹಾನ್ ಗುರುಗಳಿಗೆ ನಮಸ್ಕಾರಗಳು. ರಾಮಾಚಾರ್ಯ, ರಾಘವಾಚಾರ್ಯ, ನರಸಿಂಹಾಚಾರ್ಯ ಮತ್ತು ಕೇಶವಾಚಾರ್ಯ ಎಂಬ ಗುರುಗಳಿಗೆ ನಾನು ನಮಸ್ಕರಿಸುತ್ತೇನೆ. ನಿಜವಾದ ಭಗವಾನ್ ನಾರಾಯಣನಿಗೆ ಮತ್ತು ಅವರಿಂದ ಉಪದೇಶ ಪಡೆದ ಭೃಗು, ಮರೀಚಿ, ಅತ್ರಿ ಮತ್ತು ಕಶ್ಯಪ ಋಷಿಗಳಿಗೆ ನಾನು ನಮಸ್ಕರಿಸುತ್ತೇನೆ. ವೈಖಾನಸ ಸಂಪ್ರದಾಯದ ಸ್ಥಾಪಕರಾದ ಭಗವಾನ್ ವಿಖಾನಸ, ಲಕ್ಷ್ಮಿ ದೇವತೆ ಮತ್ತು ಈ ಗುರುಗಳ ಸಾಲಿನಲ್ಲಿ ಶ್ರೀಮನ್ನಾರಾಯಣ (ಶ್ರೀಶಂ) ಋಷಿಗಳಿಗೆ ನಾನು ನಮಸ್ಕರಿಸುತ್ತೇನೆ. ಶ್ರೀದೇವಿ ಮತ್ತು ಭೂದೇವಿ, ಮಹಾವಿಷ್ಣು, ವಿಶ್ವಕ್ಸೇನ, ಆದಿಶೇಷ ಮತ್ತು ಪಕ್ಷಿಗಳ ರಾಜ ಗರುತ್ಮಾನ ಜೊತೆಗಿದ್ದಾರೆ. ಸುದರ್ಶನ ಚಕ್ರ ಸೇರಿದಂತೆ ಭಗವಂತನ ಕೈಯಲ್ಲಿರುವ ಎಲ್ಲಾ ಆಯುಧಗಳಿಗೆ ನಾನು ನಮಸ್ಕರಿಸುತ್ತೇನೆ. ಮಹಾಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿರುವ ಪರಮಹಂಸದ (ಜ್ಞಾನ) ಸಾಕಾರವಾಗಿರುವ ಶ್ರೀಮನ್ನಾರಾಯಣನಿಗೆ ನಮಸ್ಕಾರಗಳು. ಆಹ್ನಿಕಾಮೃತಂ ಧನ್ಯವಾದಗಳು ಶ್ರೀಮತಿ ನಿರ್ಮಲರಾಜೇಶ್
🔱 ಭಕ್ತಿ ಲೋಕ - ShareChat
#🔱 ಭಕ್ತಿ ಲೋಕ ಉಪನಿಷತ್ತುಗಳ ಉಮಾ ಯಾರು? ಸ್ಕಂದ ಪುರಾಣ 1.1.11.59-60 ಸ್ಪಷ್ಟವಾಗಿ ಭಗವತಿ ಪರಂಬ ಲಕ್ಷ್ಮಿಯನ್ನು ಕೇನ ಸಿದ್ಧಾಂತ ಯುಕ್ತ (ಬ್ರಹ್ಮನಿಗೆ ಸಂಬಂಧಿಸಿದವರು-ಕೇನೋಪನಿಷದ್‌ನಲ್ಲಿ ಹೇಳಲಾದ ತತ್ವಗಳು) ಎಂದು ಕರೆಯುತ್ತದೆ. "ನಿರ್ಮಥ್ಯಮಾನದುದಧೇಸ್ತದಾಸೀತ್ಸಾ ದಿವ್ಯ ಲಕ್ಷ್ಮೀರ್ಭುವನಾಯಿಕನಾಥಾ । ತಥಾ ಚಾನ್ಯೇ ಮೂಲವಿದ್ಯಾಂ ಘೃಣಂತಿ ಬ್ರಹ್ಮವಿದ್ಯಾಂ ಕೇಚಿದಾಹುಃ ಸಮರ್ಥಃ ॥ ಯಾಂ ವೈಷ್ಣವೀಂ ಯೋಗಿನಃ । ಕೇಚಿದಾಹುಸ್ತಥಾ ಚ ಮಾಯಾಂ ಮಾಯಿನೋ ನಿತ್ಯಯುಕ್ತಾಃ ವದಂತಿ ಸರ್ವೇ ಕೇನಸಿದ್ಧಾಂತಯುಕ್ತಾಂ ಯಾಂ ಯೋಗಾಯಮ್ ॥ ಜ್ಞಾನಶಕ್ತ್ಯಾನ್ವಿತಾ ಯೇ || ಸಾಗರವು ಮತ್ತೊಮ್ಮೆ ಮಂಥನವಾಗುತ್ತಿದ್ದಂತೆ, ಲೋಕಗಳ ಏಕೈಕ ರಕ್ಷಕಳಾದ ಆ ದಿವ್ಯ ಲಕ್ಷ್ಮಿಯು ಅದರಿಂದ ಮೇಲೆದ್ದಳು. ಬ್ರಹ್ಮನ ಬಲ್ಲವರು ಅವಳನ್ನು ಅನ್ವಿಕ್ಷಿಕಿ (ಮೆಟಾಫಿಸಿಕ್ಸ್) ಎಂದು ಕರೆಯುತ್ತಾರೆ. ಇತರರು ಅವಳನ್ನು ಮೂಲವಿದ್ಯೆ ಎಂದು ಹೊಗಳುತ್ತಾರೆ. ಕೆಲವು ಸಮರ್ಥ ವ್ಯಕ್ತಿಗಳು ಅವಳನ್ನು ಬ್ರಹ್ಮವಿದ್ಯೆ ಎಂದು ಕರೆಯುತ್ತಾರೆ. ಕೆಲವರು ಅವಳನ್ನು ಸಿದ್ಧಿ (ಯಶಸ್ಸು), ರ್ದ್ಧಿ (ಸಮೃದ್ಧಿ), ಆಜ್ಞಾ (ಆಜ್ಞೆ) ಮತ್ತು ಆಶಾ (ಭರವಸೆ) ಎಂದು ಕರೆಯುತ್ತಾರೆ. ಕೆಲವು ಯೋಗಿಗಳು ಅವಳನ್ನು ವೈಷ್ಣವಿ ಎಂದು ಕರೆಯುತ್ತಾರೆ. ಕೆಲವು ಯೋಗಾಭ್ಯಾಸದಲ್ಲಿ ಸದಾ ತೊಡಗಿರುವ ಮಾಯೆಯ ಪ್ರತಿಪಾದಕರು ಅವಳನ್ನು ಮಾಯಾ ಎಂದು ಕರೆಯುತ್ತಾರೆ. ಎಲ್ಲಾ ಜನರು ಅವಳನ್ನು ಕೇನಸಿದ್ಧಾಂತಯುಕ್ತಾ (ಕೇನೋಪನಿಷತ್ತಿನಲ್ಲಿ ಹೇಳಲಾದ ಬ್ರಹ್ಮ ತತ್ವಕ್ಕೆ ಸಂಬಂಧಿಸಿದವಳು) ಎಂದು ಕರೆಯುತ್ತಾರೆ. ಜ್ಞಾನದ ಶಕ್ತಿಯಿಂದ ಸಜ್ಜಾಗಿರುವವರು ಅವಳನ್ನು ಯೋಗಮಾಯಾ ಎಂದು ಕರೆಯುತ್ತಾರೆ. ಸ್ಕಂದ ಪುರಾಣದ ಲಕ್ಷ್ಮಿ ಸಹಶ್ರಣದಲ್ಲಿ ಹರಿಪ್ರಿಯ ಮಹಾಲಕ್ಷ್ಮಿಯ ಹೆಸರುಗಳು - ದಾರಿದ್ರ್ಯಧ್ವಂಸಿನೀ ನಾಮ ಕೇನ ವಿದ್ಯಾ ಪ್ರಕೀರ್ತಿತಾ । ಕೇನ ವಾ ಬ್ರಹ್ಮವಿದ್ಯಾಪಿ ಕೇನ ಮೃತ್ಯುವಿನಾಶಿನೀ ॥ ೬ ॥ ಸರ್ವಸಾಂ ಸಾರಭೂತೈಕಾ ವಿದ್ಯಾನಾಂ ಕೇನ್ ಕೀರ್ತಿತಾ ಪ್ರತ್ಯಕ್ಷಸಿದ್ಧಿದಾ ಬ್ರಹ್ಮನ್ ತಾಮಾಶ್ಚಕ್ ೭ ॥ "ಈ ವಿದ್ಯೆಯನ್ನು (ಪವಿತ್ರ ಜ್ಞಾನ) ಕೇನ ಉಪನಿಷತ್ತು ಬಡತನದ ನಾಶಕ ಎಂದು ಘೋಷಿಸುತ್ತದೆ. ಇದನ್ನು ಕೇನ ಉಪನಿಷತ್ತು ಬ್ರಹ್ಮವಿದ್ಯೆ (ಅಂತಿಮ ವಾಸ್ತವದ ಜ್ಞಾನ) ಎಂದು ಘೋಷಿಸುತ್ತದೆ, ಮತ್ತು ಕೇನ ಉಪನಿಷತ್ತು ಮರಣದ ನಾಶಕ ಎಂದು ಘೋಷಿಸುತ್ತದೆ." ​ಶ್ಲೋಕ 7 ಅನುವಾದ: "ಇದನ್ನು ಕೇನ ಉಪನಿಷತ್ತು ಎಲ್ಲಾ ವಿದ್ಯೆಗಳ ಏಕ ಸಾರವೆಂದು ವೈಭವೀಕರಿಸಿದೆ, ಇದು ನೇರ ಮತ್ತು ಗೋಚರ ಯಶಸ್ಸನ್ನು ನೀಡುತ್ತದೆ. ಓ ಬ್ರಹ್ಮನನ್ನು ತಿಳಿದವನೇ, ಓ ಕರುಣಾ ಸಾಗರನೇ, ದಯವಿಟ್ಟು ಅದನ್ನು ನನಗೆ ಬಹಿರಂಗಪಡಿಸಿ." ಸಂಗ್ರಹ ಮಾಹಿತಿ ಶುಭಸಂಜೆ ಧನ್ಯವಾದಗಳು ಶ್ರೀಮತಿ ನಿರ್ಮಲರಾಜೇಶ್
🔱 ಭಕ್ತಿ ಲೋಕ - @iAkankshaP  @iAkankshaP - ShareChat