#🔱 ಭಕ್ತಿ ಲೋಕ #ಜೈ ಹನುಮಾನ್ #💪ಹನುಮ ಜಯಂತಿ ಶುಭಾಶಯಗಳು🚩 #ಹನುಮ ಜಯಂತಿ ##🌺ಹನುಮ ಜಯಂತಿ ಶುಭಾಶಯಗಳು 🙏
ನಾಳೆ ಹನುಮಾನ್ ಜಯಂತಿ ಅರ್ಥ ಮಾಡಿಕೊಂಡು ಓದಿ ಹನುಮಂತನ ಅನುಗ್ರಹದಿಂದ ಶುಭವಾಗಲಿ
ಶ್ರೀ ಹನುಮಾನ ಚಾಲೀಸಾವನ್ನು ಗೋಸ್ವಾಮಿ ತುಲಸಿದಾಸರು ರಚಿಸಿದ್ದಾರೆ.
ಪ್ರತಿದಿನ ಸ್ನಾನವಾದ ನಂತರ ಸ್ವಚ್ಛ ಮನಸ್ಸಿನಿಂದ ಈ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ನಿಮ್ಮೆಲ್ಲ ನೋವು ಸಂಕಟ ರೋಗಗಳು ದೂರಾಗುತ್ತವೆ.
ಭೂತ ಪ್ರೇತ ಪಿಶಾಚಿಗಳು ನಿಮ್ಮತ್ರ ಸುಳಿಯುವುದಿಲ್ಲ. ಜೊತೆಗೆ ನಿಮ್ಮ ವಿರೋಧಿಗಳು ಶತ್ರುಗಳು ಸರ್ವನಾಶವಾಗುತ್ತಾರೆ.
ಅರ್ಥ ಸಹಿತವಾಗಿ ಹನುಮಾನ ಚಾಲೀಸಾ ಇಂತಿದೆ ;
"ಶ್ರೀ ಗುರು ಚರನ ಸರೋಜ ರಜ ನಿಜ ಮನು ಮುಕುರ ಸುಧಾರಿ |
ಬರನೂ ರಘುಬರ ಬಿಮಲ ಜಸು ಜೋ ದಾಯಕು ಫಲಚಾರಿ ||
(ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು)
ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ |
ಬಲಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲೆಸ ಬಿಕಾರ ||
(ಪವನಕುಮಾರನೇ ನನ್ನನ್ನು ಬುದ್ಧಿಹೀನನೆಂದು ತಿಳಿದು ನನಗೆ ಬಲ ಬುದ್ಧಿ ವಿದ್ಯೆಗಳನ್ನು ನೀಡಿ ನನ್ನಲ್ಲಿರುವ ದೋಷಗಳನ್ನು ಕಷ್ಟಗಳನ್ನು ಪರಿಹರಿಸು)
ಜಯ ಹನುಮಾನ ಜ್ಞಾನ ಗುಣ ಸಾಗರ |
ಜಯ ಕಪೀಸ ತಿಹುಂ ಲೋಕ ಉಜಾಗರ ||
(ಜ್ಞಾನ ಗುಣಸಾಗರನಾದ ಹನುಮಂತನೇ ನಿನಗೆ ಜಯವಾಗಲಿ, ಮೂರು ಲೋಕಗಳನ್ನು ಜ್ಞಾನದಿಂದ ಬೆಳಗುವ ನಿನಗೆ ಜಯವಾಗಲಿ)
ರಾಮದೂತ ಅತುಲಿತ ಬಲಧಾಮಾ |
ಅಂಜನಿಪುತ್ರ ಪವನ ಸುತ ನಾಮಾ ||
(ರಾಮದೂತನೇ ಅಪರಿಮಿತ ಬಲವುಳ್ಳವನೇ ಅಂಜನಿದೇವಿಯ ಪುತ್ರನೇ ಪವನಸುತನೇ)
ಮಹಾಬೀರ ಬಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೆ ಸಂಗೀ ||
(ಮಹಾವೀರನೇ, ವಿಕ್ರಮನೇ ವಜ್ರಾಂಗನೇ, ನೀನು ದುರ್ಬುದ್ಧಿಯನ್ನು ಹೋಗಲಾಡಿಸಿ ಸುಬುದ್ಧಿಯನ್ನು ಕೊಡುವವನು)
ಕಂಚನ ಬರನ ಬಿರಾಜ ಸುಬೇಸಾ |
ಕಾನನ ಕುಂಡಲ ಕುಂಚಿತ ಕೇಸಾ ||
(ನೀನು ಚಿನ್ನದಂತಹ ಮೈಬಣ್ಣವುಳ್ಳವನು, ನಿನ್ನ ಕಿವಿಯಲ್ಲಿ ಕುಂಡಲಗಳು, ನಿನ್ನದು ಗುಂಗುರು ಕೂದಲು, ಉತ್ತಮ ವೇಷ ಧರಿಸಿ ಶೋಭಿಸುತ್ತಿರುವೆ)
ಹಾಥ ಬಜ್ರ ಔ ಧ್ವಜಾ ಬಿರಾಜೈ |
ಕಾಂಧೇ ಮುಂಜಿ ಜನೇಹೂ ಸಾಜೈ ||
(ನಿನ್ನ ಕೈಯಲ್ಲಿ ವಜ್ರಾಯುಧ ಮತ್ತು ಧ್ವಜವು ರಾರಾಜಿಸುತ್ತಿದೆ. ಹೆಗಲಿಂದ ಕೆಳಗೆ ಮೂಂಜಿ ಹಾಗೂ ಜನಿವಾರಗಳಿವೆ)
ಸಂಕರ ಸುವನ ಕೇಸರಿ ನಂದನ |
ತೇಜ ಪ್ರತಾಪ ಮಹಾ ಜಗ ಬಂಧನ ||
(ನೀನು ರುದ್ರಾಂಶ ಸಂಭೂತ ಹಾಗೂ ವಾನರರಸ ಕೇಸರಿಯ ಮಗನು, ತೇಜೋವಂತನಾಗಿ ಪ್ರತಾಪಿಯಾಗಿ ಇಡೀ ಜಗತ್ತಿನಿಂದ ವಂದ್ಯನು)
ವಿದ್ಯಾವಾನ ಗುನೀ ಅತಿ ಚಾತುರ |
ರಾಮ ಕಾಜ ಕರಿಬೇಕೋ ಆತುರ ||
(ನೀನು ಗುಣವಂತನು, ವಿದ್ಯಾವಂತನು ಅತ್ಯಂತ ಚತುರನು, ರಾಮ ಕಾರ್ಯವನ್ನು ಮಾಡಿ ಮುಗಿಸಲು ಸದಾ ಆತುರ ಪಡುವವನು)
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ ||
(ಶ್ರೀರಾಮಚಂದ್ರನ ಚರಿತೆಯನ್ನು ಆಲಿಸುವುದರಲ್ಲಿ ನಿನಗೆ ಆನಂದ. ಶ್ರೀರಾಮ, ಲಕ್ಷ್ಮಣ, ಸೀತೆ ನಿನ್ನ ಮನಸ್ಸಿನಲ್ಲಿ ನೆಲಸಿ ಬಿಟ್ಟಿದ್ದಾರೆ)
ಸೂಕ್ಷ್ಮ ರೂಪ ಧರೀ ಸಿಯಹಿಂ ದಿಖಾವಾ |
ಬಿಕಟ ರೂಪ ಧರಿ ಲಂಕ ಜರಾವಾ ||
(ನೀನು ಸೂಕ್ಷ್ಮ ರೂಪ ಧರಿಸಿಕೊಂಡು ಸೀತೆಗೆ ಕಾಣಿಸಿಕೊಂಡೆ ಅದೇ ಭಯಂಕರ ರೂಪವನ್ನು ಧಾರಣ ಮಾಡಿಕೊಂಡು ಲಂಕೆಯನ್ನು ಸುಟ್ಟೆ)
ಭೀಮರೂಪ ಧರಿ ಅಸುರ ಸಂಹಾರೇ |
ರಾಮಚಂದ್ರ ಕೆ ಕಾಜ ಸಂವಾರೆ ||
(ನೀನು ಬೃಹದಾಕಾರ ಧರಿಸಿ ಅಸುರರನ್ನು ಸಂಹರಿಸಿದೆ, ಶ್ರೀರಾಮ ಚಂದ್ರನ ಕಾರ್ಯವನ್ನು ಸಾಂಗಗೊಳಿಸಿದೆ)
ಲಾಯ್ ಸಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರ ಲಾಯೇ ||
(ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿಕೊಂಡೆ. ಶ್ರೀ ರಘುನಾಥನು ಸಂತಸದಿಂದ ನಿನ್ನನ್ನು ಆಲಂಗಿಸಿಕೊಂಡನು)
ರಘುಪತಿ ಕೀನ್ಹೀ ಬಹುತ ಬಡಾಈ |
ತಾಮ ಮಮ ಪ್ರಿಯ ಭರತ ಹಿ ಸಮ ಭಾಈ ||
(ನೀನು ನನ್ನ ಸೋದರ ಭರತನಷ್ಟೇ ನನಗೆ ಪ್ರಿಯನು ಎಂದು ಶ್ರೀ ರಾಮಚಂದ್ರನು ನಿನ್ನನ್ನು ಬಹುವಾಗಿ ಹೊಗಳಿದ್ದಾನೆ)
ಸಹಸ ಬದನ ತುಮ್ಹರೋ ಜಸಗಾವೈಂ
ಅಸ ಕಹಿ ಶ್ರೀಪತಿ ಕಂಠ ಲಗಾವೈಂ
(ಆದಿಶೇಷನು ಸಹಸ್ರ ಮುಖಗಳಿಂದ ನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಾನೆ ಎನ್ನುತ್ತಾ ಶ್ರೀಪತಿಯ ನಿನ್ನನ್ನು ಆಲಂಗಿಸಿಕೊಳ್ಳುತ್ತಾನೆ)
ಸನಕಾದಿಕ ಬ್ರಹ್ಮಾದಿ ಮುನೀಸಾ |
ನಾರದ ಸಾರದ ಸಹಿತ ಅಹೀಸಾ ||
(ಸನಕಾದಿ ಋಷಿವರ್ಯರು, ಬ್ರಹ್ಮಾದಿಗಳು, ನಾರದರು, ಸರಸ್ವತಿಯೂ ಆದಿಶೇಷನು)
ಜಮ ಕುಬೇರ ದಿಗಪಾಲು ಜಹಾಂತೇ |
ಕಬಿ ಕೋಬಿದ ಕಹಿ ಸಕೆ ಕಹಾಂತೇ ||
(ಯಮನು ಕುಬೇರನು ದಿಕ್ಪಾಲರು ಕವಿಕೋವಿದರು ನಿನ್ನ ಮಹಿಮೆಯನ್ನು ಎಷ್ಟೊಂದು ವರ್ಣಿಸಿದರು)
ತುಮ ಉಪಕಾರ ಸುಗ್ರೀವಹೀಂ ಕೀನ್ಹಾ |
ರಾಮ ಮಿಲಾಯ್ ರಾಜಪದ ದೀನ್ಹಾ ||
(ನೀನು ಸುಗ್ರೀವನಿಗೆ ಉಪಕಾರವನ್ನು ಮಾಡಿದೆ. ರಾಮನ ಸಖ್ಯ ಮಾಡಿಸಿ ಅವನಿಗೆ ರಾಜ್ಯ ಪದವಿ ಸಿಗುವಂತೆ ಮಾಡಿದೆ)
ತುಮ್ಹರೋ ಮಂತ್ರ ವಿಭೀಷನ ಮಾನಾ |
ಲಂಕೇಶ್ವರ ಭವ ಸಬಜಗ ಜಾನಾ ||
(ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು. ಆದರಿಂದಲೇ ಅವನು ಲಂಕಾಧಿಪತಿಯಾದನೆಂಬುದನ್ನು ಇಡೀ ಜಗತ್ತೇ ಬಲ್ಲದು)
ಜುಗ ಸಹಸ್ರ ಜೋಜನ ಪರ್ ಭಾನು |
ಲೀಲ್ಯೋ ತಾಹಿ ಮಧುರ ಫಲ ಜಾನೂ ||
(ಎರಡು ಸಹಸ್ರ ಯೋಜನ ದೂರವಿದ್ದ ಸೂರ್ಯವನ್ನು ಮಧುರ ಫಲವೆಂದು ತಿಳಿದು ಅವನೆಡೆಗೆ ಹಾರಿದೆ)
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ |
ಜಲಧಿ ಲಾಂಘಿ ಗಯೆ ಆಚರಜ್ ನಾಹೀಂ ||
(ಶ್ರೀರಾಮಚಂದ್ರನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದ ಮೇಲೆ ಹಾರುತ್ತಾ ಅದನ್ನು ದಾಟಿದೆ ಅಂದರೆ ಇದರಲ್ಲಿ ಏನೂ ಅಶ್ಚರ್ಯವಿಲ್ಲ)
ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ ||
(ಪ್ರಪಂಚದಲ್ಲಿ ದುರ್ಗಮ ಎನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ)
ರಾಮ ದುಆರೇ ತುಮ ರಖವಾರೇ |
ಹೋತನ ಆಜ್ಞಾ ಬಿನು ಪೈಸಾರೇ ||
(ನೀನು ರಾಮನ ಮನೆಯ ಬಾಗಿಲನ್ನು ಕಾಯುವವನು ನಿನ್ನ ಅನುಮತಿಯಿಲ್ಲದೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ)
ಸಬ್ ಸುಖ ಲಹೈ ತುಮ್ಹಾರೀ ಸರನಾ |
ತುಮ ರಚ್ಛಕ್ ಕಾಹೂ ಕೋ ಡರ್ ನಾ ||
(ನಿನ್ನಲ್ಲಿ ಶರಣು ಬಂದವರಿಗೆ ಸಕಲ ಸುಖಗಳು ಲಭಿಸುತ್ತವೆ. ನೀನೇ ರಕ್ಷಕನಾದರೆ ಯಾರಿಗೂ ಭಯ ಪಡಬೇಕಾದುದಿಲ್ಲ)
ಆಪನ ತೇಜ ಸಮ್ಹಾರೋ ಆಪೈ |
ತೀನೋಂ ಲೋಕ ಹಾಂಕ್ ತೇಂ ಕಾಂಪೈ ||
(ನಿನ್ನ ತೇಜಸ್ಸನ್ನು ನೀನೇ ನಿಗ್ರಹಿಸಿಕೋ ನಿನ್ನ ಒಂದು ಗರ್ಜನೆಯಿಂದ ಮೂರು ಲೋಕಗಳು ನಡುಗುತ್ತವೆ)
ಭೂತ ಪಿಶಾಚ ನಿಕಟ ನಹೀಂ ಆವೈ |
ಮಹಾಬೀರ ಜಬ ನಾಮ್ ಸುನಾವೈ ||
(ನಿನ್ನನ್ನು ಸ್ಮರಿಸಿದ ಮಾತ್ರದಿಂದ ಭೂತ ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ)
ನಾಸೈ ರೋಗ ಹರೈ ಸಬ ಪೀರಾ |
ಜಹತ ನಿರಂತರ ಹನುಮತ ಬೀರಾ ||
(ವೀರನಾದ ಹನುಮಂತನೇ ನಿನ್ನ ನಾಮವನ್ನು ನಿರಂತರ ಜಪಿಸುವುದರಿಂದ ಸಕಲ ರೋಗಗಳು ದೂರಾಗುತ್ತವೆ, ಎಲ್ಲ ಕಷ್ಟಗಳು ಕಳೆಯುತ್ತವೆ.)
ಸಂಕಟ ತೇಂ ಹನುಮಾನ ಛುಡಾವೈ |
ಮನಕ್ರಮ ಬಚನ ಧ್ಯಾನ ಜೋ ಲಾವೈ ||
(ಮನಸಾ ವಾಚಾ ಕರ್ಮಣಾ ಯಾರು ಹನುಮಂತನನ್ನು ಸ್ಮರಿಸುತ್ತಾರೋ ಅವರ ಸಂಕಷ್ಟಗಳನ್ನು ದೂರ ಮಾಡುತ್ತಾನೆ)
ಸಬ ಪರ ರಾಮ ತಪಸ್ವೀ ರಾಜಾ |
ತಿನ ಕೇ ಕಾಜ್ ಸಕಲ ತುಮ ಸಾಜಾ ||
(ಯಾರೇ ಆಗಲಿ ರಾಮನ ಭಕ್ತರಾದರೆ ಅವರ ಕಾರ್ಯಗಳನ್ನು ನೀನೇ ಸಾಂಗಗೊಳಿಸುತ್ತಿಯೇ)
ಔರ ಮನೋರಥ ಜೋ ಕೋಈ ಲಾವೈ |
ಸೋಈ ಅಮಿತ ಜೀವನ ಫಲ ಪಾವೈ ||
(ಇನ್ಯಾವುದೇ ಮನೋರಥವನ್ನು ಹನುಮಂತನಲ್ಲಿ ಹೇಳಿಕೊಂಡರೆ ಅವರಿಗೆ ಜೀವನದ ಎಲ್ಲ ಫಲಗಳು ದೊರಕುತ್ತವೆ)
ಚಾರೋ ಜುಗ ಪರತಾಪ ತುಮ್ಹಾರಾ |
ಹೈ ಪರಸಿದ್ಧ ಜಗ ಉಜಿಯಾರಾ ||
(ನಿನ್ನ ಪ್ರತಾಪವು ಚತುರ್ಯುಗಗಳಲ್ಲಿ ಹರಡಿದೆ. ನಿನ್ನ ಯಶೋ ಕೀರ್ತಿಯು ಜಗತ್ಪ್ರಸಿದ್ಧವಾದುದು)
ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ ||
(ನೀನು ಸಾಧು ಸಂತರ ರಕ್ಷಕನು, ರಾಕ್ಷಸರನ್ನು ಸಂಹರಿಸಿದ ರಾಮ ಪ್ರಿಯನು)
ಅಷ್ಟಸಿದ್ಧಿ ನೌ ನಿಧಿ ಕೇ ದಾತಾ |
ಅಸ ಬರ ದೀನ ಜಾನಕೀ ಮಾತಾ ||
(ಜಾನಕಿಮಾತೆಯು ನೀನು ಅಷ್ಟ ಸಿದ್ಧಿಗಳನ್ನು ನವನಿಧಿಗಳನ್ನು ಕೊಡುವವನಾಗು ಎಂದು ವರವನ್ನು ನೀಡಿದಳು)
ರಾಮ ರಸಾಯನ ತುಮ್ಹಾರೆ ಪಾಸಾ |
ಸದಾ ರಹೋ ರಘುಪತಿ ಕೆ ದಾಸಾ ||
(ರಾಮಭಕ್ತಿ ಎಂಬ ರಸಾಯನ ನಿನ್ನ ಬಳಿಯಿದೆ. ನೀನು ಸದಾ ಕಾಲ ರಘುನಾಥನ ದಾಸನಾಗಿರು)
ತುಮ್ಹಾರೆ ಭಜನ ರಾಮ ಕೋ ಪಾವೈ |
ಜನಮ ಜನಮ ಕೆ ದು:ಖ ಬಿಸರಾವೈ ||
(ನಿನ್ನ ಸ್ಮರಣೆ ಮಾಡಿದರೆ ಶ್ರೀರಾಮನೇ ನಮಗೆ ಲಭ್ಯವಾಗುತ್ತಾನೆ. ಜನ್ಮ ಜನ್ಮಾಂತರಗಳ ದು:ಖವನ್ನು ಮರೆಸುತ್ತಾನೆ)
ಅಂತಕಾಲ ರಘುಬರ ಪುರ ಜಾಈ |
ಜಹಾಂ ಜನ್ಮ ಹರಿ ಭಕ್ತ ಕಹಾಈ ||
(ಅಂತ್ಯಕಾಲ ಬಂದಾಗ ರಘುನಾಥನ ನಗರಿಯಲ್ಲಿ ಜನ್ಮಿಸಿ ಹರಿಭಕ್ತನೆಂಬ ಕೀರ್ತಿಯನ್ನು ಪಡೆಯುತ್ತಾನೆ)
ಔರ ದೇವತಾ ಚಿತ್ತ ನ ಧರ ಈ |
ಹನುಮತ ಸೇಈ ಸರ್ಬ ಸುಖ ಕರ ಈ ||
(ಉಳಿದ್ಯಾವ ದೇವತೆಗಳನ್ನು ಮನಸ್ಸಿಗೆ ತಾರದೆ, ಹನುಮಂತನನ್ನು ಸೇವಿಸಿ ಸಕಲ ಸುಖಗಳನ್ನು ಪಡೆಯುತ್ತಾರೆ)
ಸಂಕಟ ಕಟೈ ಮಿಟೈ ಸಬಪೀರಾ |
ಜೋ ಸುಮಿರೈ ಹನುಮತ ಬಲಬೀರಾ ||
(ಮಹಾವೀರನಾದ ಹನುಮಂತನನ್ನು ಸ್ಮರಿಸುವುದರಿಂದ ಎಲ್ಲ ಸಂಕಷ್ಟಗಳು ನೋವುಗಳು ಪರಿಹಾರವಾಗುತ್ತವೆ)
ಜೈ ಜೈ ಜೈ ಹನುಮಾನ ಗೋಸಾಈ |
ಕೃಪಾಕರಹು ಗುರುದೇವ ಕಿ ನಾಈಂ ||
(ಹನುಮಂತ ದೇವರೇ ನಿನಗೆ ಜಯವಾಗಲಿ. ಗುರುದೇವನಂತೆ ನಮ್ಮಲ್ಲಿ ಕೃಪೆಯಿಡು)
ಜೋ ಸತ ಬಾರ ಪಾಠ ಕರ ಕೋಈ |
ಛೂಟ ಬಂದಿ ಮಹಾ ಸುಖ ಹೋಈ ||
(ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ ಅವರು ಭವ ಬಂಧನಗಳಿಂದ ಬಿಡುಗಡೆ ಹೊಂದಿ ಮಹಾ ಸುಖವನ್ನು ಪಡೆಯುವರು)
ಜೋ ಯಹ ಪಢೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಸಾ ||
(ಈ ಸ್ತೋತ್ರ ಹನುಮಾನ ಚಾಲೀಸಾವನ್ನು ಯಾರು ಪಠಣ ಮಾಡುತ್ತಾರೋ ಅವರಿಗೆ ಸಕಲ ಸಿದ್ಧಿಗಳು ಲಭಿಸುತ್ತವೆ ಎಂಬುದಕ್ಕೆ ಶಂಕರನೇ ಸಾಕ್ಷಿ)
ತುಲಸಿದಾಸ ಹರಿ ಚೇರಾ |
ಕೀಜೈ ನಾಥ್ ಹ್ರದಯ ಮಹಂ ಡೇರಾ ||
(ಈ ಹನುಮಾನ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ ತುಲಸಿದಾಸರು ಎಲೈ ಸ್ವಾಮಿಯೇ ಸದಾ ನನ್ನ ಹೃದಯದಲ್ಲಿ ನೆಲಸು ಎಂದು ಪ್ರಾರ್ಥಿಸುತ್ತಾರೆ)
ಪವನತನಯ ಸಂಕಟ ಹರನ ಮಂಗಲ ಮೂರುತಿ ರೂಪ |
ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ||
(ವಾಯುಪುತ್ರನೇ ಸಂಕಟ ಮೋಚಕನೆ ಮಂಗಳಮಯ ರೂಪ ಹೊಂದಿದ ಮೂರ್ತಿಯೇ ರಾಮಲಕ್ಷಣ ಸಮೇತನಾಗಿ ನನ್ನ ಹೃದಯದಲ್ಲಿ ನೆಲಸು)"
ಮಂಗಳಂ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#ದಿನಕ್ಕೊಂದು ಕಥೆ #🙏 ಓಂ ನಮಃ ಶಿವಾಯ
🙏 ಹರಿಃ ಓಂ 🕉️“ಸದಾಶಿವನೂ ಸಹ ಪರೈಯ ಪಾದಗಳನ್ನು ಪೂಜಿಸುತ್ತಾನೆ.”
ಇದು ಎಲ್ಲಾ ಹೇರಳತೆಯ ಕಲ್ಪನೆಗಳನ್ನು ಉಲ್ಟಾಗೊಳಿಸುತ್ತದೆ. ಸಮೀಪ ಪರಮಾವಸ್ಥೆಯಾದ ಸದಾಶಿವ ತತ್ತ್ವ ಕೂಡ ಪರೈಗೆ ನಮಸ್ಕರಿಸುತ್ತದೆ.
ಪರ್ಯೈ / ಪರೈ ಯಾರು?
ಪರೈ ಎಂದರೆ:
1. ಆದಿ, ನಿಶ್ಶಬ್ದ ನಾದ (ಪ್ರಾಥಮಿಕ ಶಬ್ದರಹಿತ ಶಬ್ದ)
2. ಶಿವನಿಗೂ ಮೂಲವಾದ ತತ್ತ್ವ
3. ಅನಾಹತ ಸ್ಪಂದನ (ಹೃದಯಕ್ಕಿಂತಲೂ ಆಳವಾದ ಶಬ್ದ) – ಅನಾಹತ ನಾದ
4. ತಮಿಳು ಸಿದ್ಧ ಪರಂಪರೆಯಲ್ಲಿ, ಪರೈ ಎಂದರೆ ಸೃಷ್ಟಿಯ ಮಹಾ ನಾದದ ಮೃದಂಗ — ಮೌನದಿಂದಲೇ ಉದ್ಭವಿಸುವ ಸ್ಪಂದನ
ಹೀಗಾಗಿ, ಪರಮ ತತ್ತ್ವವೂ ತನ್ನದೇ ಮೂಲಕ್ಕೆ ನಮಸ್ಕರಿಸುತ್ತದೆ.
ಪ್ರೇಮದಿಂದ
ವೇದಾಂತ ಜ್ಞಾನ
🙏🏻 ಓಂ ತತ್ ಸತ್ 🙏🏻
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#ದಿನಕ್ಕೊಂದು ಕಥೆ #ಶ್ರೀ ಕೃಷ್ಣ
💥 ಮಹಾಭಾರತದ ಒಂದು ಸಣ್ಣ ಮಾಹಿತಿ
ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ ....
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ ..
ಸಹಸ್ರ ಸಹಸ್ರ ಗಂಡಾನೆಗಳ ಭೀಮ ನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ
ಧರ್ಮರಾಜ ನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿ ದ್ದ ಏಕೈಕ
ಸಂಪತ್ತೆಂದರೆ “ ಧರ್ಮ “..!
ಹುಟ್ಟು ಹೆಸರು
ಯುಧಿಷ್ಠಿರ ನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
“ ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು ” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..
ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನ ಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!
ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!
ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣ ವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.
ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:” ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!? ”
ಧರ್ಮರಾಜ ಉತ್ತರಿಸಿದ, “ ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು ”
ಮುಂದೆ ಸಾಗುತ್ತಿದ್ದಂತೆಯೇ
ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣ, ಸಹದೇವನಿಗೇಕೆ ಹೀಗಾಯಿತು? ”
ಧರ್ಮರಾಜ ಉತ್ತರಿಸಿದ: “ ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”
ಮತ್ತೆ ಕುಸಿದವನು ನಕುಲ , ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ” ವಾಯಿತೆಂದು ಧರ್ಮರಾಜ ಉತ್ತರಿಸಿದ.
ಮತ್ತೆ ಮೃತ್ಯುವಿನ ಸರದಿ
ಅರ್ಜುನ ದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:” ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು? ”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”
ಮಹಾಪ್ರಸ್ಥಾನ ಮುಂದುವರೆಯಿತು..
ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮ ನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ? ”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”
ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.
“ ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ “ದ ಧರ್ಮರಾಜ.
“ ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.
ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.
“ ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು. ”
ಚಕಿತನಾದ ಇಂದ್ರ ಹೇಳಿದ, “ ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ “. (Dogs are not allowed..!)
“ ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!
ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?
ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?
ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!
ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!
ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?
ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?
ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?
ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …
*"*" ಭೋಜರಾಜನ ಜೀವನಸಂದೇಶವನ್ನು ಗಮನಿಸಿ:
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||
(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)
*** ಧರ್ಮ ವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು ..!!
...
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#ದಿನಕ್ಕೊಂದು ಕಥೆ
#ಶುಕ್ರಾಚಾರ್ಯ- ಅಸುರ ಗುರು
ಶುಕ್ರಾಚಾರ್ಯ (ಶುಕ್ರ)
ಮಹರ್ಷಿ ಭೃಗು ಮತ್ತು ಕಾವ್ಯಮತರ ಪುತ್ರರಾದ ಗುರು ಶುಕ್ರಾಚಾರ್ಯರು ಹಿಂದೂ ಇತಿಹಾಸದ ಶ್ರೇಷ್ಠ ಋಷಿಗಳಲ್ಲಿ ಒಬ್ಬರು. ಸಪ್ತರ್ಷಿಗಳಂತಹ ಇತರ ಶ್ರೇಷ್ಠ ಋಷಿಗಳಂತೆ , ಶುಕ್ರಾಚಾರ್ಯರು ಸಹ ಅಪಾರ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದ್ದಾರೆ.
ಅವರು ಶಿವನಿಂದ ಅನುಗ್ರಹಿಸಲ್ಪಟ್ಟ, ಬಹಳ ಜ್ಞಾನವುಳ್ಳ ಋಷಿಯಾಗಿದ್ದರೂ, ದೇವತೆಗಳಿಂದ ಅವರಿಗೆ ಸಿಗಬೇಕಾದ ಗೌರವ ಮತ್ತು ಮನ್ನಣೆ ಸಿಗಲಿಲ್ಲ. ಅಗೌರವ ತೋರಿದ ಅವರು, ಅಸುರರ ಗುರು ಮತ್ತು ಮಾರ್ಗದರ್ಶಕರಾಗಲು ಆಯ್ಕೆ ಮಾಡಿಕೊಂಡರು. ಗುರು ಶುಕ್ರಾಚಾರ್ಯರು ಅಸುರರಿಗೆ ಯುದ್ಧ, ರಾಜಕೀಯ ಮತ್ತು ಶಸ್ತ್ರಾಸ್ತ್ರಗಳ ಕೌಶಲ್ಯಗಳನ್ನು ಕಲಿಸಿದರು.
ಮಹಾಭಾರತ ಮಹಾಕಾವ್ಯವು ಶುಕ್ರಾಚಾರ್ಯರು ತಮ್ಮ ಇಡೀ ಜೀವನವನ್ನು ಧ್ಯಾನ ಮಾಡಲು ಮತ್ತು ಸ್ವರ್ಗೀಯ ದೇವರುಗಳನ್ನು ಗೆಲ್ಲಲು ನಿರಂತರ ಪ್ರಯತ್ನಗಳನ್ನು ಮಾಡಲು ಮೀಸಲಿಟ್ಟರು ಎಂದು ಉಲ್ಲೇಖಿಸುತ್ತದೆ. ಇದಲ್ಲದೆ, ಅವರು ಹಲವಾರು ಮಂತ್ರಗಳು, ರಸಗಳು ಮತ್ತು ಔಷಧಿಗಳನ್ನು ರಚಿಸಿದರು, ಅವುಗಳನ್ನು ಅವರು ತಮ್ಮ ಶಿಷ್ಯರಿಗೆ ರವಾನಿಸಿದರು.
ಮಹಾಭಾರತ ಮಹಾಕಾವ್ಯವು ಶುಕ್ರಾಚಾರ್ಯರು ತಮ್ಮ ಇಡೀ ಜೀವನವನ್ನು ಧ್ಯಾನ ಮಾಡಲು ಮತ್ತು ಸ್ವರ್ಗೀಯ ದೇವರುಗಳನ್ನು ಗೆಲ್ಲಲು ನಿರಂತರ ಪ್ರಯತ್ನಗಳನ್ನು ಮಾಡಲು ಮೀಸಲಿಟ್ಟರು ಎಂದು ಉಲ್ಲೇಖಿಸುತ್ತದೆ. ಇದಲ್ಲದೆ, ಅವರು ಹಲವಾರು ಮಂತ್ರಗಳು, ರಸಗಳು ಮತ್ತು ಔಷಧಿಗಳನ್ನು ರಚಿಸಿದರು, ಅವುಗಳನ್ನು ಅವರು ತಮ್ಮ ಶಿಷ್ಯರಿಗೆ ರವಾನಿಸಿದರು.
ವೈದಿಕ ಜ್ಯೋತಿಷ್ಯದಲ್ಲಿ, ಗುರು ಶುಕ್ರಾಚಾರ್ಯರು ನವಗ್ರಹಗಳಲ್ಲಿ (ಗ್ರಹಗಳು) ಒಬ್ಬರು , ಶುಕ್ರ ಗ್ರಹ. ಇದು ವೃಷಭ ಮತ್ತು ತುಲಾ ರಾಶಿಚಕ್ರ ಚಿಹ್ನೆಗಳನ್ನು ಆಳುತ್ತದೆ. ಶುಕ್ರವು ಸ್ತ್ರೀತ್ವ, ಸೌಂದರ್ಯ, ಪ್ರಣಯ, ಸಂತಾನೋತ್ಪತ್ತಿ, ಕಲೆ ಮತ್ತು ಆನಂದವನ್ನು ಪ್ರತಿನಿಧಿಸುತ್ತದೆ.
ಶುಕ್ರಾಚಾರ್ಯರ ಕಥೆಗಳು (ಅಸುರರ/ದೈತ್ಯರ ಗುರು)
ಋಷಿ ಶುಕ್ರಾಚಾರ್ಯರ ತಂದೆ ಮಹರ್ಷಿ ಭೃಗು , ಮತ್ತು ಅವರ ತಾಯಿ ಕಾವ್ಯಮತ ಅಥವಾ ಖ್ಯಾತಿ. ಶಿಕ್ಷಣವನ್ನು ಮುಂದುವರಿಸಲು, ಶುಕ್ರಾಚಾರ್ಯರು ಬೃಹಸ್ಪತಿ (ಋಷಿ ಅಂಗಿರಸರ ಮಗ) ಜೊತೆಗೆ ಮಹಾನ್ ಅಂಗಿರಸ ಋಷಿಯಿಂದ ಕಲಿಯಲು ಪ್ರಾರಂಭಿಸಿದರು. ಆದರೆ ಮಹರ್ಷಿ ಅಂಗಿರಸರು ತನಗಿಂತ ತನ್ನ ಮಗ ಬೃಹಸ್ಪತಿಯನ್ನೇ ಹೆಚ್ಚು ಇಷ್ಟಪಡುತ್ತಾರೆಂದು ಅವರು ಅರಿತುಕೊಂಡರು. ಆದ್ದರಿಂದ, ಅವರು ಆಶ್ರಮವನ್ನು ತೊರೆದು ಗೌತಮ ಋಷಿಯಿಂದ ಕಲಿಯಲು ಪ್ರಾರಂಭಿಸಿದರು .
ಗುರು ಶುಕ್ರಾಚಾರ್ಯರಿಗೆ ಅವರ ಪತ್ನಿ ಊರ್ಜಸ್ವತಿಯಿಂದ ಚಂದ, ಅಮರಕ, ತ್ವಸ್ತ್ರ ಮತ್ತು ಧರಾತ್ರ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ಅವರ ಎರಡನೇ ಪತ್ನಿ ಜಯಂತಿ (ಇಂದ್ರನ ಮಗಳು) ಯಿಂದ ಅವರಿಗೆ ದೇವಯಾನಿ ಎಂಬ ಮಗಳು ಜನಿಸಿದಳು.
ಶುಕ್ರಾಚಾರ್ಯರ ತಾಯಿಯ ಮರಣ
ಮನಸ್ಸಿನಿಂದ ಹುಟ್ಟಿದ ಋಷಿ ಭೃಗುವಿನ ಪತ್ನಿ ಖ್ಯಾತಿ ಒಬ್ಬ ಶಕ್ತಿಶಾಲಿ ತಪಸ್ವಿ. ದೇವಿ ಭಾಗವತ ಪುರಾಣದಲ್ಲಿ ದೇವತೆಗಳು ಮತ್ತು ಅಸುರರ ನಡುವಿನ ಯುದ್ಧವನ್ನು ವಿವರಿಸುವ ಒಂದು ಕಥೆಯಿದೆ. ಆ ಯುದ್ಧದಲ್ಲಿ, ದೇವತೆಗಳು ಅಸುರರನ್ನು ಸೋಲಿಸುತ್ತಿದ್ದರು. ಆದ್ದರಿಂದ, ದೇವತೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಅಸುರರು ಭೃಗು ಋಷಿಯ ಆಶ್ರಮಕ್ಕೆ ಹೋದರು. ಆದರೆ, ಭೃಗು ಋಷಿ ಮತ್ತು ಶುಕ್ರಾಚಾರ್ಯರು ಇರಲಿಲ್ಲ; ಬದಲಾಗಿ, ದೇವಿ ಕಾವ್ಯಮತ ಅಲ್ಲಿದ್ದರು. ಆದ್ದರಿಂದ, ಅಸುರರು ತಮ್ಮನ್ನು ರಕ್ಷಿಸುವಂತೆ ಅವಳನ್ನು ಕೇಳಿಕೊಂಡರು, ಅದನ್ನು ಅವಳು ಸಂತೋಷದಿಂದ ಅತಿಥಿ ಧರ್ಮವೆಂದು ಸ್ವೀಕರಿಸಿದಳು. ಒಂದು ಶಕ್ತಿಶಾಲಿ ಅದೃಶ್ಯ ಶಕ್ತಿಯ ಗುರಾಣಿ ಆಶ್ರಮವನ್ನು ಹೊರಗಿನ ಅಪಾಯದಿಂದ ರಕ್ಷಿಸುತ್ತದೆ, ಅದನ್ನು ದೇವತೆಗಳು ಸಹ ಭೇದಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಕಾವ್ಯಮತದ ಒಂದೇ ನೋಟದಿಂದ, ಎಲ್ಲಾ ದೇವತೆಗಳು ಆಳವಾದ ನಿದ್ರೆಗೆ ಜಾರಿದರು.
ದೇವತೆಗಳ ಎಲ್ಲಾ ಪ್ರಯತ್ನಗಳು ವಿಫಲವಾದವು. ನಂತರ ಅವರು ಸಹಾಯಕ್ಕಾಗಿ ಪರಮಾತ್ಮ ವಿಷ್ಣುವಿನ ಬಳಿಗೆ ಹೋದರು . ಆದ್ದರಿಂದ, ಬ್ರಹ್ಮಾಂಡದ ಸಮತೋಲನವನ್ನು ಕಾಪಾಡಿಕೊಳ್ಳಲು, ವಿಷ್ಣು ತನ್ನ ದೈವಿಕ ಸುದರ್ಶನ ಚಕ್ರವನ್ನು ಆದೇಶಿಸಿದನು, ಅದು ರಕ್ಷಣಾತ್ಮಕ ಗುರಾಣಿಯನ್ನು ಮುರಿದು ಕಾವ್ಯಮತದ ತಲೆಯನ್ನು ಕತ್ತರಿಸಿತು. ಭೃಗು ಋಷಿಗೆ ಈ ಘಟನೆಯ ಬಗ್ಗೆ ತಿಳಿದಾಗ, ಅವರು ವಿಷ್ಣುವನ್ನು ಭೂಮಿಯ ಮೇಲೆ ಮನುಷ್ಯನಾಗಿ ಜನಿಸಿ ನೋವನ್ನು ಸಹಿಸಿಕೊಳ್ಳುವಂತೆ ಮತ್ತು ತನ್ನ ಹೆಂಡತಿಯಿಂದ ಬೇರ್ಪಡುವಿಕೆಯನ್ನು ಅನುಭವಿಸುವಂತೆ ಶಪಿಸಿದರು. ಈ ತಾಯಿಯ ಮರಣದ ಬಗ್ಗೆ ಶುಕ್ರಾಚಾರ್ಯರಿಗೆ ತಿಳಿದಾಗ, ಅವರು ವಿಷ್ಣುವನ್ನು ದ್ವೇಷಿಸಲು ಪ್ರಾರಂಭಿಸಿದರು ಮತ್ತು ಅಸುರರಲ್ಲಿ ವಿಷ್ಣುವಿನ ಆರಾಧನೆಯನ್ನು ನಿಷೇಧಿಸಿದರು.
ಸಂಜೀವಿನಿ ಮಂತ್ರ
ಅಸುರನ ಸೋಲಿನಿಂದ ಕೋಪಗೊಂಡು ಬೇಸತ್ತ ಅಸುರ ಗುರು ಶುಕ್ರಾಚಾರ್ಯರು ದೇವರುಗಳ ಮೇಲೆ ವಿಜಯ ಸಾಧಿಸುವ ಉದ್ದೇಶದಿಂದ ಶಿವನನ್ನು ಮೆಚ್ಚಿಸಲು ತೀವ್ರವಾದ ತಪಸ್ಸು ಮಾಡಿದರು. ಅವರು ಸಾವಿರಾರು ವರ್ಷಗಳ ಕಾಲ ತಲೆಕೆಳಗಾಗಿ ನೇತಾಡುತ್ತಿದ್ದರು. ಶುಕ್ರಾಚಾರ್ಯರ ಕಠಿಣ ಪರಿಶ್ರಮದ ಬಗ್ಗೆ ಕೇಳಿದ ನಂತರ, ಇಂದ್ರನು ತನ್ನ ಮಗಳು ಜಯಂತಿಯನ್ನು ಅವನ ತಪಸ್ಸಿಗೆ ಅಡ್ಡಿಪಡಿಸಲು ಕಳುಹಿಸಿದನು. ಆದರೆ ಋಷಿಯು ಅವಳ ಕಾರ್ಯಗಳಿಗೆ ಪ್ರತಿಕ್ರಿಯಿಸದ ಕಾರಣ ಅವಳು ತನ್ನ ಕಾರ್ಯದಲ್ಲಿ ವಿಫಲಳಾದಳು. ಋಷಿಯ ತೀವ್ರ ತಪಸ್ಸಿನಿಂದ ಸಂತಸಗೊಂಡ ಶಿವನು ಪ್ರತ್ಯಕ್ಷನಾಗಿ ಋಷಿಗೆ ವರವನ್ನು ನೀಡಿದನು. ಶುಕ್ರಾಚಾರ್ಯರು ಸಂಜೀವಿನಿಯ ಜ್ಞಾನವನ್ನು ಕೇಳಿದರು - ಸತ್ತವರನ್ನು ಪುನರುಜ್ಜೀವನಗೊಳಿಸುವ ಮಂತ್ರ. ಆದಾಗ್ಯೂ, ಶಿವನು ಹೊರಡುವ ಮೊದಲು ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಅವನಿಗೆ ಎಚ್ಚರಿಕೆ ನೀಡಿದನು. ಸಂಜೀವಿನಿ ಮಂತ್ರದ ಸಹಾಯದಿಂದ, ರಾಕ್ಷಸನ ಗುರು ದೇವರುಗಳ ವಿರುದ್ಧ ಹೋರಾಡಲು ಸತ್ತ ಅಸುರರನ್ನು ಮತ್ತೆ ಜೀವಂತಗೊಳಿಸುತ್ತಾನೆ.
ಮೊದಲ ಹೆಸರಿನ ಅರ್ಥ ಶಿಕ್ರಾ
ಒಮ್ಮೆ ಅಸುರರು ಮತ್ತು ಶಿವನ ಸೈನಿಕರ ನಡುವೆ ಯುದ್ಧ ನಡೆಯಿತು. ನಂದಿ ಶಿವನ ಸೈನ್ಯದ ಸೇನಾಧಿಪತಿಯಾಗಿದ್ದನು. ಈ ಯುದ್ಧದಲ್ಲಿ ದೇವಲೋಕದ ದೇವತೆಗಳು ಸಹ ಶಿವ ಸೈನ್ಯಕ್ಕೆ ಸಹಾಯ ಮಾಡುತ್ತಿದ್ದರು. ಆದಾಗ್ಯೂ, ಅಸುರರು ಶಿವ ಸೈನ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ವಿಜಯದ ಅಂಚಿನಲ್ಲಿದ್ದರು. ನಂದಿ, ದೇವತೆಗಳೊಂದಿಗೆ ಸಹಾಯಕ್ಕಾಗಿ ಶಿವನ ಬಳಿಗೆ ಹೋದರು. ಶಿವನು ಶುಕ್ರಾಚಾರ್ಯರು ಸಂಜೀವಿನಿ ಮಂತ್ರವನ್ನು ದುರುಪಯೋಗಪಡಿಸಿಕೊಂಡದ್ದನ್ನು ತಿಳಿದಾಗ, ಅದನ್ನು ನುಂಗಿ ತನ್ನ ಹೊಟ್ಟೆಯೊಳಗೆ ಇಟ್ಟುಕೊಂಡನು. ರಾಕ್ಷಸ ಗುರು ಶಿವನ ಹೊಟ್ಟೆಯೊಳಗೆ ಸಾವಿರಾರು ವರ್ಷಗಳ ಕಾಲ ವಾಸಿಸುತ್ತಾ, ಹೊರಬರಲು ದಾರಿ ಹುಡುಕುತ್ತಿದ್ದನು, ಆದರೆ ಅವನು ಅದನ್ನು ಮಾಡಲು ವಿಫಲನಾದನು.
ಕೊನೆಗೆ, ಅವನಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ತನ್ನ ಪಾಪಗಳನ್ನು ಪರಿಹರಿಸಿಕೊಳ್ಳಲು ತಪಸ್ಸು ಮಾಡಲು ಪ್ರಾರಂಭಿಸಿದನು. ಋಷಿಯ ಭಕ್ತಿಯನ್ನು ನೋಡಿದ ಶಿವನು ಅವನನ್ನು ಕ್ಷಮಿಸಿ ವೀರ್ಯದ ರೂಪದಲ್ಲಿ (ಶುಕ್ರ) ಹೊರಹಾಕಿದನು. ಈ ಕಾರಣಕ್ಕಾಗಿ, ಮಹರ್ಷಿಗೆ ಶುಕ್ರಾಚಾರ್ಯ ಎಂದು ಹೆಸರಿಸಲಾಯಿತು. ಶಿವನ ಜನನಾಂಗದಿಂದ ಹೊರಬಂದ ಋಷಿಯು ಶಿವನ ಪುತ್ರರಲ್ಲಿ ಒಬ್ಬನಾದನು.
ಏಕಾಕ್ಷ
ಗುರು ಶುಕ್ರಾಚಾರ್ಯರನ್ನು ಏಕಾಕ್ಷ ಎಂದೂ ಕರೆಯುತ್ತಾರೆ, ಅಂದರೆ ಒಕ್ಕಣ್ಣಿನ ವ್ಯಕ್ತಿ. ಅವರ ಒಂದು ಕಣ್ಣಿನ ಹಿಂದಿನ ಕಥೆಯೆಂದರೆ ಅಸುರರ ಪ್ರಭು, ರಾಜ ಬಲಿ ಮತ್ತು ಶುಕ್ರಾಚಾರ್ಯರು ಭವ್ಯ ಹವನ ನಡೆಸುತ್ತಿದ್ದರು. ಆ ಧಾರ್ಮಿಕ ಸ್ಥಳದಲ್ಲಿ, ವಿಷ್ಣು ಕುಬ್ಜ ಬ್ರಾಹ್ಮಣ ವಾಮನ (ಆರನೇ ಅವತಾರ) ಆಗಿ ಕಾಣಿಸಿಕೊಂಡು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಆದರೆ ದುರದೃಷ್ಟವಶಾತ್, ಋಷಿ ಶುಕ್ರಾಚಾರ್ಯರು ಆ ಯುವ ಬ್ರಾಹ್ಮಣನೇ ವಿಷ್ಣು ಎಂದು ಅರಿತುಕೊಂಡರು. ಆದ್ದರಿಂದ, ಮಹಾಬಲಿಯು ಬ್ರಾಹ್ಮಣನಿಗೆ ಮೂರು ಹೆಜ್ಜೆ ಭೂಮಿಯನ್ನು ನೀಡುವುದನ್ನು ತಡೆಯಲು, ಋಷಿಯು ತನ್ನನ್ನು ಸೂಕ್ಷ್ಮ ರೂಪಕ್ಕೆ ಪರಿವರ್ತಿಸಿಕೊಂಡು ಕಮಂಡಲದ (ನೀರಿನ ಮಡಕೆ) ತೆರೆಯುವಿಕೆಯ ಮೇಲೆ ಕುಳಿತು ನೀರನ್ನು ತಡೆಯುತ್ತಾನೆ.
ಸರ್ವಜ್ಞನಾದ ಭಗವಾನ್ ವಾಮನನು ಶುಕ್ರಾಚಾರ್ಯರಿಗೆ ಈ ಕೃತ್ಯವನ್ನು ಅರ್ಥಮಾಡಿಕೊಂಡನು. ಆದ್ದರಿಂದ, ಭಗವಾನ್ ವಾಮನನು ಮಡಕೆಯ ತೆರೆಯುವಿಕೆಯೊಳಗೆ ಒಂದು ಒಣಹುಲ್ಲನ್ನು ಇಟ್ಟು ಶುಕ್ರಾಚಾರ್ಯರ ಒಂದು ಕಣ್ಣನ್ನು ಚುಚ್ಚಿದನು. ನೋವಿನಿಂದ, ಶುಕ್ರಾಚಾರ್ಯರು ಹೊರಬಂದರು, ನೀರು ಹೊರ ಹರಿಯಿತು, ಮತ್ತು ಮಹಾಬಲಿ ತನ್ನ ದಾನವನ್ನು ಪೂರೈಸಲು ಸಾಧ್ಯವಾಯಿತು. ಆ ಘಟನೆಯಿಂದ, ಶುಕ್ರಾಚಾರ್ಯರ ಒಂದು ಕಣ್ಣು ಶಾಶ್ವತವಾಗಿ ಹಾನಿಗೊಳಗಾಯಿತು ಮತ್ತು ನಂತರ ಅದನ್ನು ಏಕಾಕ್ಷ ಎಂದು ಕರೆಯಲಾಯಿತು.
ಕಚ ಮತ್ತು ಶುಕ್ರಾಚಾರ್ಯರು
ಕಚನು ಬೃಹಸ್ಪತಿ ಋಷಿಯ ಮಗ. ಅವನು ತನ್ನ ಮಗ ಕಚನಿಗೆ ಶುಕ್ರಾಚಾರ್ಯರ ಬಳಿಗೆ ಹೋಗಿ ಸಂಜೀವಿನಿ ಜ್ಞಾನವನ್ನು ಕಲಿಯಲು ಆದೇಶಿಸಿದನು. ಕಚನು ಬೃಹಸ್ಪತಿಯ ಮಗನೆಂದು ತಿಳಿದಿದ್ದ ಶುಕ್ರಾಚಾರ್ಯರು, ಎಲ್ಲಾ ರಾಕ್ಷಸರ ಅಸಮ್ಮತಿಯನ್ನು ಲೆಕ್ಕಿಸದೆ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಜ್ಞಾನವನ್ನು ಪಡೆಯುವಲ್ಲಿ, ಕಚನು ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಪ್ರೀತಿಸಿದನು. ಕಚನ ಮೇಲೆ ದ್ವೇಷ ಹೊಂದಿದ್ದ ಎಲ್ಲಾ ರಾಕ್ಷಸರು ಶುಕ್ರಾಚಾರ್ಯರು ಹೊರಗೆ ಹೋದಾಗ ಅವನನ್ನು ಕೊಂದರು. ದೇವಯಾನಿಗೆ ಕಚನ ಬಗ್ಗೆ ತಿಳಿದಾಗ, ಅವಳು ತನ್ನ ತಂದೆಯಿಂದ ಅವನನ್ನು ಪುನರುಜ್ಜೀವನಗೊಳಿಸಲು ಬೇಡಿಕೊಂಡಳು, ಅವನು ಹಾಗೆಯೇ ಮಾಡಿದನು.
ಆದರೆ, ಕಾಡಿನಲ್ಲಿ ಎರಡನೇ ಬಾರಿಗೆ ಕಚನನ್ನು ಒಂಟಿಯಾಗಿ ಕೊಲ್ಲಲಾಯಿತು. ರಾಕ್ಷಸರು ಅವನ ದೇಹವನ್ನು ಸುಟ್ಟು ಅವನ ಚಿತಾಭಸ್ಮವನ್ನು ವೈನ್ನಲ್ಲಿ ಬೆರೆಸಿ, ಅದನ್ನು ತಮ್ಮ ಗುರುಗಳಿಗೆ ಕುಡಿಯಲು ಕೊಟ್ಟರು. ಮತ್ತೆ, ದೇವಯಾನಿ ತನ್ನ ತಂದೆಯನ್ನು ಬೇಡಿಕೊಂಡನು, ಆದರೆ ಈ ಬಾರಿ ಶುಕ್ರಾಚಾರ್ಯರು ಕಚನ ಮೃತ ದೇಹವನ್ನು ಪುನರುತ್ಥಾನಗೊಳಿಸಲು ತನ್ನ ದೇಹವನ್ನು ತ್ಯಾಗ ಮಾಡಬೇಕಾಯಿತು. ತನ್ನ ಮಗಳ ಮೇಲಿನ ಋಷಿಯ ಅಪರಿಮಿತ ಪ್ರೀತಿಯು ತನ್ನ ಮಗಳ ಪ್ರೀತಿಯನ್ನು ಪುನರುತ್ಥಾನಗೊಳಿಸಲು ತನ್ನ ಪ್ರಾಣವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತು. ಕಚನು ಮತ್ತೆ ಜೀವಕ್ಕೆ ಬಂದಾಗ, ಶುಕ್ರಾಚಾರ್ಯರನ್ನು ಪುನರುತ್ಥಾನಗೊಳಿಸಲು ಅವನು ಅದೇ ಸಂಜೀವನಿ ಮಂತ್ರವನ್ನು ಬಳಸಿದನು. ಈ ಘಟನೆಯ ನಂತರ, ಋಷಿ ಶುಕ್ರಾಚಾರ್ಯರು ಬ್ರಾಹ್ಮಣರು ವೈನ್ ಸೇವಿಸುವುದನ್ನು ನಿಷೇಧಿಸಿದರು ಏಕೆಂದರೆ ಅದು ಅವರ ಶುದ್ಧತೆಯನ್ನು ನಾಶಪಡಿಸುತ್ತದೆ. ಇದಲ್ಲದೆ, ವೈನ್ ಕುಡಿಯುವುದು ಬ್ರಾಹ್ಮಣನನ್ನು ಕೊಲ್ಲುವುದಕ್ಕೆ ಸಮಾನವಾದ ಪಾಪ ಎಂದು ಅವರು ಹೇಳಿದರು.
✍🏻 Narayana Shasthry
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#🙏🏻ಶ್ರೀಕೃಷ್ಣನ ಕಥೆಗಳು📜 #ದಿನಕ್ಕೊಂದು ಕಥೆ #🔱 ಭಕ್ತಿ ಲೋಕ
***ದೇವ ದೇವನಾದ ಶ್ರೀಕೃಷ್ಣನ ಜನಕ ವಸುದೇವ.***
ದಶಾವತಾರಗಳಲ್ಲಿ ಎಂಟನೇ ಅವತಾರವೆನಿಸಿದ ಕೃಷ್ಣಾವತಾರವು ಶ್ರೇಷ್ಠವಾದುದು. ಕೃಷ್ಣನ ಜನನದಿಂದ ಹಿಡಿದು ಪೂತನಿ ಸಂಹಾರ, ಗೋವರ್ಧನೋದ್ದಾರ ಕಾಳಿಯ ಮರ್ಧನ ಮೊದಲಾದ ಬಾಲಲೀಲೆಯ ಸಾಹಸಗಳು ಅವತಾರ ಪುರುಷನಿಗಲ್ಲದೆ ಅನ್ಯಥಾ ಸಾಧ್ಯವಿಲ್ಲ ಅಲ್ಲವೇ? ದುಷ್ಟ ಸಂಹಾರ, ಶಿಷ್ಟ-ರಕ್ಷಣೆ, ಪಾಂಡವ-ಕೌರವ ಯುದ್ಧದಲ್ಲಿ ಪಾಂಡವರ ಪಕ್ಷದಲ್ಲಿದ್ದು ಅರ್ಜುನನ ಸಾರಥ್ಯ, ಇವೆಲ್ಲವುಗಳೂ ಧರ್ಮ ಸಂಸ್ಕೃತಿಯ ಜಾಗೃತಿ, ತತ್ರೋಪದೇಶ, ಲೋಕಕಲ್ಯಾಣಕ್ಕಾಗಿ.
ದುಷ್ಟರು ಮಿತಿ ಮೀರಿದರೆ 'ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ, ಅರ್ಜುನನಿಗೆ ಗೀತೆಯಲ್ಲಿ ಹೇಳಿದ್ದಾನೆ. ಧರ್ಮಸೇತುವಿನ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಅವತರಿಸಿ ಭೂಮಿಯನ್ನು ಬೆಳಗಿಸಿದ ಶ್ರೀಕೃಷ್ಣ ಲೋಕತ್ರಯದ ಉಪಕಾರಕ್ಕಾಗಿ ಆಧ್ಯಾತ್ಮ ಗ್ರಂಥಗಳ ಮುಕುಟ ಮಣಿಯೆನಿಸಿ ಮನುಕುಲದ ವಿಶ್ವಕೋಶವೆನಿಸಿದ ಭಗವದ್ಗೀತೆಯನ್ನು ಉಪದೇಶ ಮಾಡಿದ ದೈವ- ಮಾನವ ಕೃಷ್ಣಃ ಈ ಅವತಾರ ಪುರುಷನಿಗೆ ಜನ್ಮಕೊಟ್ಟವನಾರು? ಆತನೂ ನಮಗೆ ಪ್ರಾತಃ ಸ್ಮರಣೀಯನಲ್ಲವೇ? ಹೌದು; ಸಂಶಯವೇ ಇಲ್ಲ. ಅವನೇ ವಸುದೇವ. ದೇವ ದೇವನಾದ ಶ್ರೀಕೃಷ್ಣನ ಜನಕ. ಇವನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಯದುವಂಶೋತ್ಪನ್ನನಾದ ದೇವಗರ್ಭನ ಮಗ ಶೂರ. ಈತನ ಪತ್ನಿ ಮಾರಿಷೆ ಈ ದಂಪತಿಗಳ ಸುಪುತ್ರನೇ ವಸುದೇವ. ಇವನು ಜನಿಸಿದ ಸಂದರ್ಭದಲ್ಲಿ; ಮಂದೆ ಈತನ ಗೃಹದಲ್ಲಿ ಭಗವಂತನ ಅವತಾರವಾಗುವುದೆಂದು ಯೋಗದೃಷ್ಟಿಯಿಂದ ದೇವತೆಗಳು ತಿಳಿದು ದುಂದುಭಿ ಮೊದಲಾದವುಗಳನ್ನು ಬಾರಿಸಿದರಂತೆ. ಆದುದರಿಂದ ಇವನಿಗೆ ಅನಕದುಂದುಭಿ ಎಂಬ ಹೆಸರಾಯಿತಂತೆ. ಇವನಿಗೆ ಪೌರವಿ, ರೋಹಿಣಿ, ಮದಿರೆ, ಭದ್ರೆ, ವೈಶಾಲಿ, ದೇವಕಿ, ಮೊದಲಾದ ಪತ್ನಿಯರಿದ್ದರು. ಇವರಲ್ಲಿ ರೋಹಿಣಿಗೆ ಬಲಭದ್ರ, ಶಠ, ಸಾರಣ, ದುರ್ಮದ, ಮೊದಲಾದ ಮಕ್ಕಳೂ ವೈಶಾಲಿ ಎಂಬವಳಿಗೆ ಕೌಶಿಕನೂ ದೇವಕಿಗೆ ಕೀರ್ತಿವಂತ, ಸುಷೇಣ, ದಾಯು, ಭದ್ರಸೇನ, ಋಜುದಾಸ, ಭದ್ರದೇವರೆಂಬ ಆರು ಮಂದಿ ಮಕ್ಕಳೂ ಕ್ರಮವಾಗಿ ಹುಟ್ಟಿದರು. ಇವರನ್ನೆಲ್ಲ ಕಂಸನು ಕೊಂದನು.
ಅನಂತರ ಏಳನೆಯ ಗರ್ಭವನ್ನು ಅರ್ಧರಾತ್ರಿಯಲ್ಲಿ ಭಗವತ್ ಪ್ರೇರಿತೆಯಾದ ಯೋಗಮಾಯೆ ಆಕರ್ಷಿಸಿ ರೋಹಿಣಿಯ ಉದರದಲ್ಲಿ ಹಾಕಿದಳು. ಆಕರ್ಷಿಸಿ ಹಾಕಿದುದರಿಂದ ಹುಟ್ಟಿದವನಾದ ಬಲರಾಮನಿಗೆ ಸಂಕರ್ಷನೆಂದು ಹೆಸರಾಯಿತು. ಎಂಟನೆಯ ಗರ್ಭದಲ್ಲಿ ಜನಿಸಿದವನೇ ಶ್ರೀಕೃಷ್ಣ.
ವಸುದೇವನ ತಮ್ಮನಾದ ದೇವಭಾಗನಿಗೆ ಭಕ್ತಾಗ್ರೇಸರನೆನಿಸಿದ ಉದ್ಧವನು ಜನಿಸಿದನು. ಮಹಾವಿದ್ವಾಂಸನೂ ದೇವಸಮಾನವಾದ ಕೀರ್ತಿಶಾಲಿಯೂ ಆದ ಇವನಿಗೆ ದೇವಶ್ರವ ಎಂಬ ಹೆಸರೂ ಇದೆ. ವಸುದೇವನ ಇನ್ನೊಬ್ಬ ತಮ್ಮನಾದ ಅನಾದೃಷ್ಟಿಗೆ ಅಶಕಿ ಎಂಬವಳಲ್ಲಿ ನಿವೃತ್ತ ಶತ್ರು ಎಂಬ ಮಗನಾದನು. ದೇವಶಿವ ಎಂಬ ಸೋದರನಿಗೆ ಶತ್ರುಘ್ನನೆಂಬ ಮಗನು ಹುಟ್ಟಿದನು. ಇವನ ತಂದೆಯು ಯಾವುದೋ ಕಾರಣಕ್ಕಾಗಿ ಅಡವಿಯಲ್ಲಿ ಬಿಟ್ಟು ಅಲ್ಲಿ ಬಿಲ್ಲವರಿಂದ ಪೋಷಿತನಾದುದರಿಂದ ಈತನು ಏಕಲವ್ಯ ಎಂಬ ಹೆಸರಿನಿಂದ ಪ್ರಸಿದ್ದ ಬಿಲ್ಲುಗಾರನಾದನು. ವಸುದೇವನ ಪತ್ನಿ ದೇವಕಿ. ಇವಳು ದೇವಕನ ಮಗಳು. ಕಂಸನ ತಂಗಿ. ದೇವಕಿ ವಿವಾಹ ಸಂದರ್ಭದಲ್ಲಿ, 'ದೇವಕಿಯ ಎಂಟನೆಯ ಗರ್ಭದಿಂದ ಸೊದರ ಮಾವನಾದ ಕಂಸನಿಗೆ ಮರಣ' ಎಂದು ಅಶರೀರವಾಣಿಯಾಯಿತು. ಇದನ್ನಾಲಿಸಿದ ಕಂಸನು ದೇವಕಿಯನ್ನು ಅಲ್ಲಿಯೇ ಕೊಲ್ಲಲು ಮುಂದಾದನು. ಆಗ ವಸುದೇವನು 'ಬೇಡ... ಬೇಡ... ಅವಳನ್ನು ಕೊಲ್ಲಬೇಡ. ಅವಳಿಗೆ ಹುಟ್ಟಿದ ಮಕ್ಕಳನ್ನೆಲ್ಲ ನಿನಗೆ ಒಪ್ಪಿಸುವೆ' ನೆಂದೂ ಭರಸೆಯಿತ್ತು ತಡೆದನು.
ಕಾರಾಗೃಹದಲ್ಲಿರಿಸಿದ ತುಂಬು ಗರ್ಭಿಣಿ ದೇವಕಿಯೊಂದಿಗೆ ವಸುದೇವನನ್ನೂ ಕೂಡಿ ಹಾಕಿಸಿದ್ದ ಕಂಸ. ಶ್ರಾವಣ ಬಹುಳ ಅಷ್ಟಮಿಯಂದು ರೋಹಿಣಿ ನಕ್ಷತ್ರ ನಡುರಾತ್ರಿಯಲ್ಲಿ ಶ್ರೀಕೃಷ್ಣನ ಜನನವಾಯಿತು. 'ನಂದಗೋಕುಲದಲ್ಲಿ ಯಶೋಧೆಗೆ ಹೆಣ್ಣು ಮಗು ಜನಿಸಿದೆ ಅದನ್ನು ಇಲ್ಲಿ ತಂದು ಬಿಡು. ಈ ಮಗುವನ್ನು ಯಶೋದೆ ಬಳಿ ಬಿಡು' ಎಂಬ ಅಶರೀರವಾಣಿ ವಸುದೇವನಿಗೆ ಕೇಳಿಸಿತು. ಪರಮಾಶ್ಚರ್ಯ!! ಅವನಿಗೆ ಕಟ್ಟಿದ್ದ ಕಬ್ಬಿಣ ಸರಪಳಿಗಳೆಲ್ಲವೂ ತನ್ನಿಂತಾನೇ ಬಿಚ್ಚಲ್ಪಟ್ಟವು. ಬಾಗಿಲುಗಳು ತೆರೆದುಕೊಂಡವು . ಈ ಅದ್ಭುತ ದೃಶ್ಯಗಳನ್ನು ಕಂಡ ವಸುದೇವನಿಗೆ; ಈಗ ಜನಿಸಿದ ಮಗುವು ಅವತಾರ ಪುರುಷನೆಂದು ತಿಳಿಯುತ್ತದೆ. ಶಿಶುವನ್ನು ಹೊತ್ತು ಯಮುನಾ ನದಿಯನ್ನು ದಾಟುತ್ತಿರುವಾಗ ಇದ್ದಕ್ಕಿದ್ದಂತೆ ನೀರು ಮೊಣಕಾಲಿನಿಂದ ಕೆಳಗೆ ಬರುತ್ತದೆ. 'ದೇವರೊಲಿದರೆ ಯಾವ ಭಯವೂ ಇಲ್ಲ' ಎಂಬುದಕ್ಕೆ ಈ ಅದ್ಭುತಗಳೆಲ್ಲ ನಿದರ್ಶನಗಳು.
ವಾಸುದೇವನಿಗೆ ತನ್ನ ಮಕ್ಕಳಾದ ಬಲರಾಮ-ಶ್ರೀಕೃಷ್ಣರು ಪ್ರಕೃತಿ-ಪುರುಷ ಸ್ವರೂಪರೆಂದೂ ಸಾಕ್ಷಾತ್ ಈಶ್ವರ ಸ್ವರೂಪರೆಂದೂ ತಿಳಿದಿರುತ್ತದೆ. ಇದರಿಂದಾಗಿ ಮುಂದೆ ಅವರಿಬ್ಬರೂ ದೊಡ್ಡವರಾದ ಮೇಲೆ ಅವರನ್ನು ಪ್ರೇಮಪೂರ್ವಕವಾಗಿ, ಅಭಿನಂದನಾ ಪೂರ್ವಕವಾಗಿ ಮಾತನಾಡಿಸುತ್ತಾನೆ ವಸುದೇವ, ವಸುದೇವನು ಕುರುಕ್ಷೇತ್ರದಲ್ಲಿ ಪರಮ ಧಾರ್ಮಿಕವಾದ ಯಾಗಯಜ್ಞಗಳನ್ನು ಮಾಡುತ್ತಾನೆ. ಕೃಷ್ಣನ ಬಾಲ್ಯದಲ್ಲಿ ಸಾಕಿಸಲಹಿದ ನಂದಗೋಪನನ್ನೂ-ಯಶೋಧೆಯನ್ನೂ ಸನ್ಮಾನಿಸಿಕೊಂಡು ಬಹು ಮೂಲ್ಯವಾದ ಆಭರಣ, ವಸ್ತ್ರ, ಉತ್ತಮೋತ್ತಮವಾದ ಸಾಮಗ್ರಿಗಳನ್ನೂ ನೀಡಿ ಗೌರವಿಸುತ್ತಾನೆ.
ದುಷ್ಕರ ಸಂಹಾರ ಮಾಡಿ ಭೂಭಾರ ಇಳಿಸಲು, ಶಿಷ್ಟರ ರಕ್ಷಣೆಗಾಗಿ ಧರೆಯಲ್ಲಿ ಅವತಾರವೆತ್ತಿದ ದೇವ ದೇವೋತ್ತಮನಾದ ಶ್ರೀಕೃಷ್ಣನ ಜನಕ, ವಸುದೇವನ ಸ್ಮರಣೆ ನಮಗೆ ಸದಾ ಬೇಕಲ್ಲವೇ?
ನಾ ಶ್ರೀಧರ್
ಆನಂದದಾಯಕ ದೈವಿಕ ಆತ್ಮ.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏









