ರಾಧಾಕೃಷ್ಣ 🦚💙
ShareChat
click to see wallet page
@radhe_radhe4723
radhe_radhe4723
ರಾಧಾಕೃಷ್ಣ 🦚💙
@radhe_radhe4723
🌷_ ನಾರಾಯಣಂ ಪರಬ್ರಹ್ಮಂ ಸರ್ವಕಾರಣಕಾರಕಂ _🌷
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ “ಗಂಗೆ ಭೂಮಿಗೆ ಬರಲು ಕಾರಣವೇನು?”, ಶ್ರೀ ರಾಮ ವಿಶ್ವಾಮಿತ್ರರನ್ನು ಕೇಳಿದ. ವಿಶ್ವಾಮಿತ್ರರು: “ಬಹಳ ಹಿಂದೆ ಅಯೋಧ್ಯಾನಗರವನ್ನು ನಿನ್ನ ವಂಶದವನೇ ಆದ ಸಗರನು ಆಳುತಿದ್ದನು. ಅವನಿಗೆ ಕೇಶಿನಿ, ಸುಮತಿಯರೆಂಬ ಇವರು ಪತ್ನಿಯರು. ಸುಮತಿ ಗರುಕ್ಮಂತನ ಸೋದರಿ. ಸಗರ ಪುತ್ರ ಸಂತಾನಕ್ಕಾಗಿ ತನ್ನ ಪತ್ನಿಯರ ಜೊತೆ ಹಿಮಾಲಯದ ಭೃಗು ಪರ್ವತದಲ್ಲಿ 100 ವರ್ಷಗಳ ಕಾಲ ತಪಸ್ಸನ್ನಾಚರಿಸಿದ. ಭೃಗು ಮಹರ್ಷಿಗಳು ಸಂತೋಷಪಟ್ಟು ‘ನಿನ್ನ ಇಬ್ಬರು ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಪುತ್ರ ಜನಿಸುತ್ತಾನೆ, ಮತ್ತೊಬ್ಬಳಿಗೆ 60 ಸಾವಿರ ಮಹಾ ಉತ್ಸಾಹವಂತರಾದ ಪುತ್ರರು ಹುಟ್ಟುತ್ತಾರೆ’ ಎಂದು ವರ ಕೊಟ್ಟರು. ಆದರೆ ಯಾರಿಗೆ ಯಾವ ಮಕ್ಕಳು ಬೇಕೆಂಬುದನ್ನು ಅವರೇ ನಿರ್ಧರಿಸಿಕೊಳ್ಳಲು ಬಿಟ್ಟರು. ಕೌಶಿಕಿ ತನಗೆ ವಂಶೊದ್ಧಾರಕನಾದ ಮಗ ಬೇಕೆಂದು ಕೇಳಿದಳು. ಸುಮತಿ 60 ಸಾವಿರ ಮಕ್ಕಳನ್ನು ಕೇಳಿದಳು. ಅಂತೆಯೇ ಕೌಶಿಕಿಗೆ ಅಸಮಂಜನೆಂಬ ಮಗ ಹುಟ್ಟಿದ. ಸುಮತಿಗೆ ಒಂದು ಸೋರೇಕಾಯಿ ಹುಟ್ಟಿತು. ಅದು ಒಡೆದು ಅದರಿಂದ 60 ಸಾವಿರ ಚಿಕ್ಕ, ಚಿಕ್ಕ ಮಕ್ಕಳು ಬಂದರು. ಅವರನ್ನು ಕುಂಡಲಿಗಳಲ್ಲಿ ಇಟ್ಟು ಬೆಳೆಸಿದರು. ಅವರನ್ನೆಲ್ಲಾ ಸಗರರು ಎಂದು ಕರೆಯುತ್ತಾರೆ. ಅಸಮಂಜನು ನಿತ್ಯ ತನ್ನ ರಾಜ್ಯದಲ್ಲಿನ ಮಕ್ಕಳನ್ನು ಸರಯೂ ನದಿಯಲ್ಲಿ ಬಿಟ್ಟು ಅವರ ಮರಣಕ್ಕೆ ಕಾರಣವಾದ. ಕೆಲ ಸಮಯದಲ್ಲಿ ಆ ವಿಷಯ ರಾಜನಿಗೆ ತಿಳಿಯಿತು. ಏವಂ ಪಾಪ ಸಮಾಚಾರಃ ಸಜ್ಜನ ಪ್ರತಿಬಾಧಕಃ ಪಾರಾಣಾಂ ಅಹಿತೇ ಯುಕ್ತಃ ಪಿತ್ರಾ ನಿರ್ವಾಸಿತಃ ಪುರಾತ್ ತಪ್ಪು ಮಾಡಿದವನು ಮಗನಾದರೂ ಸರಿ, ಅವನಿಂದ ಪ್ರಜೆಗಳಿಗೆ ಕೇಡಾದರೆ ಅವನಿಗೆ ಶಿಕ್ಷೆಯಾಗಬೇಕೆಂದು ಅಸಮಂಜನನ್ನು ರಾಜ್ಯದಿಂದ ಬಹಿಷ್ಕರಿಸಿ, ಅವನ ಪುತ್ರನಾದ ಅಂಶುಮಂತನನ್ನು ತನ್ನ ಬಳಿ ಇಟ್ಟುಕೊಂಡ. ಕೆಲ ಕಾಲದ ನಂತರ ಸಗರನು ಅಶ್ವಮೇಧ ಯಾಗ ಮಾಡಿ ಕುದುರೆಯನ್ನು ಬಿಟ್ಟ. ಆ ಕುದುರೆಯನ್ನು ಇಂದ್ರನು ಅಪಹರಿಸಿದ. ಅಶ್ವದ ರಕ್ಷಣೆ ಹೋಗಿದ್ದ ಅಂಶುಮಂತನು ಈ ವಿಷಯವನ್ನು ಸಗರನಿಗೆ ತಿಳಿಸಿದ. ಅಶ್ವ ಅಪಹರಿಸಲ್ಪಟ್ಟರೆ ಕೆಟ್ಟ ಪರಿಣಾಮಗಳಾಗುತ್ತವೆ ಎಂದು ಯಾಗ ಮಾಡುತ್ತಿದ್ದ ಪಂಡಿತರು ಹೇಳಿದರು. ಸಗರನು ತನ್ನ 60 ಸಾವಿರ ಮಕ್ಕಳನ್ನು ಕರೆಸಿ, ’ಈ ಭೂಮಿ 6೦ ಸಾವಿರ ಯೋಜನಗಳಿವೆ. ಆದ್ದರಿಂದ ನೀವು ಒಬ್ಬೊಬ್ಬರು ಒಂದೊಂದು ಯೋಜನದಂತೆ ಭೂಮಿಯನ್ನು ಪೂರ್ತಿ ಹುಡುಕಿ.’ ಎಂದು ಕಳಿಸಿದ. ಅವರು ಭೂಮಿಯನ್ನು ಅಗಿಯಲು ಪ್ರಾರಂಭಿಸಿದರು. ಅದನ್ನು ಗಮನಿಸಿದ ದೇವತೆಗಳು ಬ್ರಹ್ಮನನ್ನು ಕುರಿತು, ‘ದೇವಾ! ಸಗರರು ಭೂಮಿಯನ್ನು ಅಗಿಯಲು ಪ್ರಾರಂಭಿಸಿದ್ದಾರೆ. ಇದರಿಂದ ಪ್ರಾಣಹಾನಿಯಾಗುತ್ತಿದೆ. ಈಗ ಏನು ಮಾಡಬೇಕು?’ ಎಂದು ಕೇಳುತ್ತಾರೆ. ಆಗ ಬ್ರಹ್ಮದೇವರು, ‘ಕಾಪಿಲಂ ರೂಪಂ ಆಸ್ಥಾಯ ಧಾರಯತ್ಯ ಅನಿಶಂ ಧರಾಂ ತಸ್ಯ ಕೋಪಾಗ್ನಿನಾ ದಗ್ಧಾ ಭವಿಷ್ಯಂತಿ ನೃಪಾತ್ಮಜಾ ನೀವು ಭಯಪಡಬೇಡಿ, ಈ ಭೂಮಿ ಮಹಾವಿಷ್ಣುವಿನದು. ವಿಷ್ಣು ತಾನೇ ರಕ್ಷಿಸಿಕೊಳ್ಳುತ್ತಾನೆ. ಈಗ ಅವನು ಪಾತಾಳ ಲೋಕದಲ್ಲಿ ಕಪಿಲ ಮಹರ್ಷಿಯಾಗಿ ತಪಸ್ಸನ್ನಾಚರಿಸುತ್ತಿದ್ದಾನೆ.’ ಎಂದು ಹೇಳಿ ಕಳಿಸಿದರು. ಆ ಸಗರರು ಎಷ್ಟು ಹುಡುಕಿದರೂ ಅಶ್ವ ಕಾಣಿಸದಾದಾಗ ಸಗರನ ಹತ್ತಿರ ಬಂದು ನಡೆದುದ್ದನ್ನು ನಿವೇದಿಸಿದರು. ಸಗರನು ತನಗೆ ಅಶ್ವ ಖಂಡಿತವಾಗಿ ಬೇಕೆಂದು ಪಾತಾಳವನ್ನು ಹುಡುಕಲು ಹೇಳಿದ. ಅಂತೆಯೇ ಅವರು ಪಾತಾಳವನ್ನು ಅಗೆಯಲು ಪ್ರಾರಂಭಿಸಿದರು. ಹಾಗೆ ಅಗೆಯುತ್ತಿದ್ದ ಅವರಿಗೆ ಭೂಮಿಯ ಪೂರ್ವ ದಿಕ್ಕನ್ನು ಹೊತ್ತಿದ್ದ ದಿಶಾ ಎಂಬ ಒಂದು ಆನೆ ಕಾಣಿಸಿತು. ಆ ಆನೆಗೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ಹೋದಾಗ ದಕ್ಷಿಣ ದಿಕ್ಕಿನಲ್ಲಿ ಅವರಿಗೆ ಮಹಾಪದ್ಮವೆಂಬ ಆನೆ, ಪಶ್ಚಿಮದಲ್ಲಿ ಸೋಮನಸವೆಂಬ ಆನೆ ಮತ್ತು ಉತ್ತರದಲ್ಲಿ ಭದ್ರವೆಂಬ ಆನೆಗಳು ಕಾಣಿಸಿದವು. ಅವಕ್ಕೆಲ್ಲಾ ಪ್ರದಕ್ಷಿಣೆ ಹಾಕಿದರು. ಆದರೆ ಅವರಿಗೆ ನಾಲ್ಕು ದಿಕ್ಕುಗಳಲ್ಲಿ ಅಶ್ವ ಎಲ್ಲಿಯೂ ಕಾಣಿಸಲಿಲ್ಲ. ನಂತರ ಅವರು ಈಶಾನ್ಯದ ಕಡೆ ಅಗೆಯಲು ಪ್ರಾರಂಭಿಸುತ್ತಾರೆ. ಅಲ್ಲಿ ಅವರಿಗೆ ಒಂದು ಆಶ್ರಮದಲ್ಲಿ ಸನಾತನನಾದ ವಿಷ್ಣುವು ಕಪಿಲ ಮಹರ್ಷಿಯಾಗಿ ತಪಸ್ಸನ್ನಾಚರಿಸುತ್ತಾ ಕಾಣಿಸಿದ. ಪಕ್ಕದಲ್ಲೇ ಯಾಗಾಶ್ವವೂ ಕಾಣಿಸಿತು. ಅಶ್ವವನ್ನು ಕಳವು ಮಾಡಿದವನು ಮಹರ್ಷಿಯೇ ಎಂದು ಭಾವಿಸಿದ ಸಗರರು ಅವರನ್ನು ಕೊಲ್ಲಲು ಮುಂದಾದರು. ಮಹರ್ಷಿಗಳು ಒಂದು ಹುಂಕಾರ ಮಾಡಿದಾಕ್ಷಣ 60 ಸಾವಿರ ಮಂದಿಯೂ ಸತ್ತು ಬೂದಿಯಾದರು. ಎಷ್ಟು ದಿನವಾದರೂ ಸಗರರು ಹಿಂತಿರುಗದ ಕಾರಣ ಸಗರನು ಅಂಶುಮಂತನನ್ನು ಹುಡುಕಲು ಕಳಿಸಿದ. ಅವನು ತನ್ನ ಚಿಕ್ಕಪ್ಪಂದಿರು ಹೋದ ದಾರಿಯಲ್ಲಿಯೇ ಪ್ರಯಾಣಿಸಿ ಕಪಿಲ ಮಹರ್ಷಿಯ ಆಶ್ರಮಕ್ಕೆ ಬಂದ. ತನ್ನ ಚಿಕ್ಕಪ್ಪಂದಿರ ಭಸ್ಮವನ್ನು ನೋಡಿ ದುಃಖಪಟ್ಟು, ಅವರ ಉತ್ತರಕ್ರಿಯೆಗಳಿಗಾಗಿ ನೀರನ್ನು ತರಲು ಹೊರಟುನಿಂತಾಗ, ಸಗರರ ಸೋದರಮಾವನಾದ ಗರುಕ್ಮಂತನು ಪ್ರತ್ಯಕ್ಷವಾಗಿ, 'ಈ ಭೂಮಿಯ ಮೇಲಿನ ಯಾವ ನೀರಿನಿಂದ ತರ್ಪಣ ಕೊಟ್ಟರೂ ಸಗರರಿಗೆ ಸ್ವರ್ಗ ಪ್ರಾಪ್ತವಾಗುವುದಿಲ್ಲ. ಅವರಿಗೆ ಸ್ವರ್ಗ ಸಿಗಬೇಕೆಂದರೆ ಸ್ವರ್ಗದಲ್ಲಿ ಪ್ರವಹಿಸುವ ಗಂಗೆಯ ನೀರಿನಿಂದಲೇ ತರ್ಪಣ ಕೊಡಬೇಕು' ಎಂದು ಹೇಳಿದ. ಸರಿ ಎಂದು ಯಾಗಾಶ್ವವನ್ನು ತೆಗೆಕೊಂಡು ಬಂದು ಅಶ್ವಮೇಧವನ್ನು ಪೂರ್ಣಗೊಳಿಸಿದರು. ತನ್ನ ಪುತ್ರರ ಮರಣದಿಂದ ಸಗರನು ಬಹಳ ದುಃಖಿಸಿ, ಸುಮಾರು 30 ಸಾವಿರ ವರ್ಷಗಳು ಜೀವಿಸಿ ತನ್ನ ಪ್ರಾಣ ತ್ಯಾಗ ಮಾಡಿದ. ಅವನ ನಂತರ ಅಂಶುಮಂತನು 32ಸಾವಿರ ವರ್ಷಗಳ ಕಾಲ ತಪಸ್ಸುಮಾಡಿ ಸಾವನ್ನಪ್ಪಿದ. ಅವನ ನಂತರ ದಿಲೀಪನು 30 ಸಾವಿರ ವರ್ಷ ರಾಜ್ಯಭಾರ ಮಾಡಿದರೂ ಗಂಗೆಯನ್ನು ಭೂಮಿಗೆ ತರಲು ಸಾಧ್ಯವಾಗಲಿಲ್ಲ. ಅವನ ನಂತರ ಬಂದ ಭಗೀರಥನು ತನ್ನ ರಾಜ್ಯವನ್ನೆಲ್ಲ ಮಂತ್ರಿಗಳಿಗೆ ಕೊಟ್ಟು ಸಾವಿರ ವರ್ಷಗಳ ಕಾಲ ನಿರಂತರ ತಪಸ್ಸನ್ನಾಚರಿಸಿದಾಗ ಬ್ರಹ್ಮದೇವರು ಪ್ರತ್ಯಕ್ಷವಾದರು. ಅವರನ್ನು ಕುರಿತು ಭಗೀರಥನು, 'ನನಗೆ ಕುಮಾರರಿಲ್ಲ. ಆದ್ದರಿಂದ ನನ್ನ ವಂಶ ಮುಗಿಯದಂತೆ ನನಗೆ ಪುತ್ರ ಸಂತಾನವಾಗುವಂತೆ ಹರಸು ಮತ್ತು ನನ್ನ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ಗಂಗೆಯನ್ನು ಭೂಮಿಗೆ ಕಳಿಸು', ಎಂದು ವರ ಬೇಡಿದರು. ಬ್ರಹ್ಮದೇವರು, 'ನಿನ್ನ ಮೊದಲ ಕೋರಿಕೆಯನ್ನು ಈಡೇರಿಸುತ್ತೇನೆ. ಆದರೆ ಗಂಗೆಯನ್ನು ಭೂಮಿಗೆ ಬಿಟ್ಟರೆ ಅವಳನ್ನು ಹಿಡಿಟ್ಟುಕೊಳ್ಳುವವರು ಶಿವನ ಹೊರತು ಯಾರೂ ಇಲ್ಲ. ಶಿವನನ್ನು ಕುರಿತು ತಪಸ್ಸು ಮಾಡು. ಅವನು ಒಪ್ಪಿಕೊಂಡರೆ ಗಂಗೆಯನ್ನು ಭೂಮಿಗೆ ಬಿಡುತ್ತೇನೆ' ಎಂದು ಹೇಳಿ ಅಂತರ್ಧಾನನಾದರು. ಭಗೀರಥನು ತನ್ನ ಹೆಬ್ಬರಿಳಿನ ಮೇಲೆ ನಿಂತು ಶಿವನಿಗಾಗಿ ಒಂದು ವರ್ಷ ತಪಸ್ಸು ಮಾಡಿದ. ಶಿವನು ಪ್ರತ್ಯಕ್ಷನಾಗಿ, ‘ನಿನ್ನ ಕೋರಿಕೆಯಂತೆ ನಾನು ಗಂಗೆಯನ್ನು ನನ್ನ ಶಿರಸ್ಸಿನ ಮೇಲೆ ಧರಿಸುತ್ತೇನೆ’ ಎಂದು ಹೇಳಿ, ಹಿಮಾಲಯದ ಮೇಲೆ ನಿಂತು, ತನ್ನ ಎರಡೂ ಕೈಗಳನ್ನು ನಡುವಿನ ಮೇಲಿರಿಸಿ, ಕಾಲನ್ನಗಲಿಸಿ, ತನ್ನ ಜಟೆಯನ್ನು ಬಿಡಿಸಿ, ಗಂಗೆಗಾಗಿ ಆಕಾಶದೆಡೆಗೆ ನೋಡಿದ. ಗಂಗೆಯು, ‘ಈ ಶಿವನೇನು ನನ್ನನ್ನು ಹಿಡಿಯಬಲ್ಲನೇ? ಪ್ರವಾಹದೊಂದಿಗೆ ಈ ಶಂಕರನನ್ನು ಪಾತಳದವರೆಗೆ ಕೊಂಡೊಯ್ಯಬಲ್ಲೆನು’ ಎಂದು ಭ್ರಮಿಸಿ, ಆಕಾಶದಿಂದ ಶಿವನ ಜಟೆಯೊಳಕ್ಕೆ ರಭಸವಾಗಿ ಜಾರಿದಳು. ಹಾಗೆ ಗಂಗೆಯು ಒಂದು ವರ್ಷ ಕಳೆಯುವವರೆಗೂ ಬೀಳುತ್ತಿದ್ದಳು. ಆದರೆ ಶಂಕರನ ಶಿರಸ್ಸಿನಿಂದ ಒಂದು ಹನಿಯೂ ಭೂಮಿಯ ಮೇಲೆ ಬೀಳಲಿಲ್ಲ. ಗಂಗೆಯು ಶಿವನ ಜಟೆಯಲ್ಲಿಯೇ ಸೇರಿಕೊಂಡಿದ್ದಳು. ನಂತರ ಭಗೀರಥನು ಶಂಕರನನ್ನು ಪ್ರಾರ್ಥಿಸಲು ಗಂಗೆಯನ್ನು ಬಿಂದು ಸರೋವರದಲ್ಲಿ ಬಿಟ್ಟ. ಆಗ ಗಂಗೆಯು ಹ್ಲಾದಿನಿ, ಪಾವನಿ, ನಳಿನಿ ಎನ್ನುವ ಮೂರು ಭಾಗವಾಗಿ ಪೂರ್ವಕ್ಕೂ, ಸುಚಕ್ಷು, ಸಿಂಧು, ಸೀತಾ, ಎನ್ನುವ ಮೂರುಭಾಗವಾಗಿ ಪಶ್ಚಿಮಕ್ಕೂ ಹರಿದಳು. ಏಳನೇ ಭಾಗವಾಗಿ ಭಗೀರಥನ ಹಿಂದೆ ರಭಸವಾಗಿ ಹೋದಳು. ರಥದಲ್ಲಿ ಭಗೀರಥನು ಮುಂದೆ ನಡೆಯುತ್ತಿದ್ದರೆ ಅವನ ಹಿಂದೆ ಗಂಗೆಯು ವೇಗವಾಗಿ ಹೋದಳು. ಗಂಗೆಯ ಜೊತೆಗೆ ಅದರಲ್ಲಿದ್ದ ಮೊಸಳೆ, ಆಮೆ, ಮೀನು ಮುಂತಾದ ಜಲಚರಗಳೂ ಪ್ರವಹಿಸಿದವು. ಈ ಅಪರೂಪವಾದ ದೃಶ್ಯಕ್ಕೆ ಸಾಕ್ಷಿಯಾಗಿ ದೇವತೆಗಳು ಆಕಾಶದಲ್ಲಿ ನಿಂತರು. ಪಾಪವನ್ನು ಮಾಡಿದವರು ಗಂಗೆಯಲ್ಲಿ ಮುಳುಗಿ ಪಾಪವನ್ನು ಕಳೆದುಕೊಂಡರು. ಇನ್ನೂ ಕೆಲವರು ಶಂಕರನ ಪಾದದ ಬಳಿ ಪ್ರವಹಿಸುತ್ತಿದ್ದ ಗಂಗಾ ಜಲವನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡರು. ಹೀಗೆ ಗಂಗೆಯು ರಭಸದಿಂದ ಹರಿಯುತ್ತಿದ್ದಾಗ ಯಾಗವನ್ನು ಮಾಡುತ್ತಿದ್ದ ಜುಹ್ನುಮಹರ್ಷಿಯ ಆಶ್ರಮವು ಆ ರಭಸಕ್ಕೆ ಕೊಚ್ಚಿ ಹೋಯಿತು. ಕೋಪಿಸಿದ ಜುಹ್ನು ಮಹರ್ಷಿಯು ಗಂಗೆಯನ್ನು ಒಂದೇ ಬಾರಿಗೆ ನುಂಗಿ ಬಿಟ್ಟರು. ಭಗೀರಥನು ಹಿಂತಿರುಗಿ ನೋಡಲು, ಅವಳು ತನ್ನನ್ನು ಅನುಸರಿಸಿ ಬರದಿರುವುದನ್ನು ಕಂಡು, ಜುಹ್ನು ಮಹರ್ಷಿಯ ಕಾಲಮೇಲೆ ಬಿದ್ದು ಬೇಡಿದಾಗ ಋಷಿಯು ತಮ್ಮ ತೊಡೆಯಿಂದ ಗಂಗೆಯನ್ನು ಬಿಟ್ಟರು. ಜುಹ್ನು ಮಹರ್ಷಿಯ ತೊಡೆಯಿಂದ ಹೊರಬಂದ ಕಾರಣದಿಂದ ಗಂಗೆಗೆ ಜಾಹ್ನವಿ ಎಂದೂ ಕರೆಯುತ್ತಾರೆ. ಹೀಗೆ ಗಂಗೆಯು ಭಗೀರಥನನ್ನು ಪಾತಾಳದ ವರೆಗೂ ಹಿಂಬಾಲಿಸಿ, ಆತನ ಪಿತೃ ದೇವತೆಗಳ ಭಸ್ಮದ ಮೇಲೆ ಹರಿದಳು. ಗಂಗೆಯ ಸ್ಪರ್ಶದಿಂದ ಆ ಸಗರರಿಗೆ ಸ್ವರ್ಗ ಪ್ರಾಪ್ತಿಯಾಯಿತು. ಸ್ವರ್ಗದಲ್ಲಿ ಪ್ರವಹಿಸಿದ್ದಕ್ಕಾಗಿ ಗಂಗೆಗೆ ಮಂದಾಕಿನಿ ಎಂದೂ, ಭೂಮಿಯ ಮೇಲೆ ಪ್ರವಹಿಸಿದ್ದಕ್ಕಾಗಿ ಭಾಗೀರಥಿ ಎಂದೂ, ಪಾತಾಳದಲ್ಲಿ ಪ್ರವಹಿಸಿದ್ದಕ್ಕಾಗಿ ಭಗವತಿಯೆಂದೂ ಕರೆಯುತ್ತಾರೆ.” (ಮುಂದುವರಿಯುವುದು) 🙏🏻🙏🏻 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🌹🙏ಶ್ರೀ ಕೃಷ್ಣ ಪರಮಾತ್ಮ🙏🌹 #🙏ಶ್ರೀ ಕೃಷ್ಣ ಪರಮಾತ್ಮ ಉದ್ಧವ ಉದ್ಧವ ಹಿಂದೂ ಧರ್ಮದ ಪುರಾಣಗಳಲ್ಲಿ, ವಿಶೇಷವಾಗಿ ಭಾಗವತ ಪುರಾಣದಲ್ಲಿ ಕಂಡುಬರುವ ಶ್ರೀಕೃಷ್ಣನ ಆತ್ಮೀಯ ಸ್ನೇಹಿತ, ಸೋದರಸಂಬಂಧಿ ಮತ್ತು ಸಲಹೆಗಾರ. ಬೃಹಸ್ಪತಿಯ ಶಿಷ್ಯನಾಗಿದ್ದ ಇವನು ಕೃಷ್ಣನಿಗೆ ದೈಹಿಕವಾಗಿ ಅತೀವ ಹೋಲಿಕೆಯನ್ನು ಹೊಂದಿದ್ದನು. ಕೃಷ್ಣನು ನೇರವಾಗಿ ಯೋಗ ಮತ್ತು ಭಕ್ತಿಯ ಬಗ್ಗೆ ಬೋಧಿಸಿದ ಸಂಭಾಷಣೆಯನ್ನು "ಉದ್ಧವ ಗೀತೆ" ಎಂದು ಕರೆಯಲಾಗುತ್ತದೆ.ಉದ್ಧವನ ಬಗ್ಗೆ ಪ್ರಮುಖ ಮಾಹಿತಿಗಳು:ಹಿನ್ನೆಲೆ: ಇವನು ದೇವಭಾಗನ ಮಗ ಮತ್ತು ಕೃಷ್ಣನ ತಂದೆ ವಸುದೇವನ ಸೋದರಸಂಬಂಧಿ.ವೃಂದಾವನ ಭೇಟಿ: ಕೃಷ್ಣನು ಗೋಪಿಕೆಯರಿಗೆ ತನ್ನ ಸಂದೇಶವನ್ನು ತಲುಪಿಸಲು ಉದ್ಧವನನ್ನು ವೃಂದಾವನಕ್ಕೆ ಕಳುಹಿಸಿದ್ದನು.ಜ್ಞಾನಿ: ಇವನು ಕೃಷ್ಣನ ಪರಮ ಭಕ್ತ ಮತ್ತು ಜ್ಞಾನಿ, ಆದರೆ ಭಕ್ತಿಯ ಮಾರ್ಗವು ಜ್ಞಾನ ಮಾರ್ಗಕ್ಕಿಂತ ಶ್ರೇಷ್ಠವೆಂದು ಗೋಪಿಕೆಯರಿಂದ ತಿಳಿದುಕೊಂಡವನು.ಉದ್ಧವ ಗೀತೆ: ಶ್ರೀಮದ್ಭಾಗವತದ 11ನೇ ಸ್ಕಂಧದಲ್ಲಿ, ಕೃಷ್ಣನು ತನ್ನ ಅವತಾರ ಮುಗಿಸುವ ಮುನ್ನ ಉದ್ಧವನಿಗೆ ನೀಡಿದ ಆಧ್ಯಾತ್ಮಿಕ ಬೋಧನೆಗಳ ಸಾರವೇ ಉದ್ಧವ ಗೀತೆ.ಉದ್ಧವನು ಕೃಷ್ಣನಿಗೆ ಕೇವಲ ಸ್ನೇಹಿತನಲ್ಲದೆ, ಯಾದವರ ಮಂತ್ರಿಯೂ ಆಗಿದ್ದನು ಎಂದು ಮಹಾಭಾರತ ಉಲ್ಲೇಖಿಸುತ್ತದೆ. ಕೆಲವು ಗ್ರಂಥಗಳ ಪ್ರಕಾರ ಉದ್ಧವ ಕೃಷ್ಣನ ಸೋದರಸಂಬಂಧಿಯೂ ಆಗಿದ್ದನು, ದೇವಭಾಗನ ಮಗನಾಗಿದ್ದನು, ಅವನು ಕೃಷ್ಣನ ತಂದೆ ವಾಸುದೇವನ ಸಹೋದರ. ಅವನ ದೈಹಿಕ ನೋಟವು ಕೃಷ್ಣನಂತೆಯೇ ಇತ್ತು, ಕೆಲವು ಸಂದರ್ಭಗಳಲ್ಲಿ, ಅವನು ಎರಡನೆಯವನೆಂದು ತಪ್ಪಾಗಿ ಭಾವಿಸಲಾಗುತ್ತದೆ. ಮಹಾಭಾರತವು ಉದ್ಧವ ವೃಷ್ಣಿಗಳ ಮಂತ್ರಿಯಾಗಿದ್ದನು ಎಂದು ಉಲ್ಲೇಖಿಸುತ್ತದೆ , ಅವರನ್ನು ಅವರೆಲ್ಲರೂ ಗೌರವಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಉದ್ಧವ ಬೃಹಸ್ಪತಿಯ ಶಿಷ್ಯನಾಗಿದ್ದನೆಂದು ಭಾಗವತ ಪುರಾಣವು ಉಲ್ಲೇಖಿಸುತ್ತದೆ . ವೃಂದಾವನಕ್ಕೆ ದೂತ ಭಾಗವತ ಪುರಾಣ ಮತ್ತು ಬ್ರಹ್ಮವೈವರ್ತ ಪುರಾಣದಲ್ಲಿ , ಕೃಷ್ಣನು ಕಂಸನನ್ನು ಸೋಲಿಸಿದ ನಂತರ , ಉದ್ಧವ ಅವನನ್ನು ನೋಡಲು ಬಂದನು, ಅದು ಕೃಷ್ಣನಿಗೆ ತುಂಬಾ ಸಂತೋಷ ತಂದಿತು. ಕೃಷ್ಣನು ಉದ್ಧವನನ್ನು ತನ್ನ ಪರವಾಗಿ ಗೋಪಿಕೆಯರು ಮತ್ತು ಗ್ರಾಮದ ಇತರ ನಿವಾಸಿಗಳಿಗೆ ಸಂದೇಶದೊಂದಿಗೆ ವೃಂದಾವನಕ್ಕೆ ಭೇಟಿ ನೀಡಬೇಕೆಂದು ವಿನಂತಿಸಿದನು, ಅವರು ಅವನ ಸಹವಾಸವನ್ನು ಕಳೆದುಕೊಳ್ಳುತ್ತಿದ್ದರು. ಭೂಮಿಯ ಮೇಲಿನ ತನ್ನ ಕರ್ತವ್ಯಗಳನ್ನು ಪೂರ್ಣಗೊಳಿಸಲು ತನ್ನ ಭಕ್ತರಿಂದ ಮರೆತುಹೋಗಬೇಕಾಗಿರುವುದರಿಂದ ತನ್ನ ಬಗ್ಗೆ ಮರೆತುಬಿಡುವಂತೆ ವೃಂದಾವನದ ಜನರಿಗೆ ಹೇಳುವಂತೆ ಕೃಷ್ಣನು ಉದ್ಧವನನ್ನು ಕೇಳುತ್ತಾನೆ. ರಾಧೆ ಮತ್ತು ಗೋಪಿಕೆಯರು ಕೃಷ್ಣನ ಮೇಲಿನ ಭಕ್ತಿಯಿಂದ ಉದ್ಧವನು ಎಷ್ಟು ಮೋಹಗೊಂಡನೆಂದರೆ, ಅವನು ಮುಂದಿನ ಆರು ತಿಂಗಳು ವೃಂದಾವನದಲ್ಲಿಯೇ ಇದ್ದನು, ಅಲ್ಲಿ ಅವನು ಗೋಪಿಯರನ್ನು ತನ್ನ ಶಿಕ್ಷಕರಾಗಿ ಕೇಳಿಕೊಂಡನು. ಅಕ್ರೂರನು ವೃಂದಾವನಕ್ಕೆ ಬಂದಾಗ, ಅವನು ತಮ್ಮ ಕೃಷ್ಣನನ್ನು ತನ್ನೊಂದಿಗೆ ಕರೆದುಕೊಂಡು ಹೋದನು ಮತ್ತು ಅವನ ನೆನಪುಗಳನ್ನು ಅವರಿಂದ ತೆಗೆದುಹಾಕಲು ಅವನು ಅಲ್ಲಿದ್ದಾನೆಯೇ ಎಂದು ವಾಕ್ಚಾತುರ್ಯದಿಂದ ಕೇಳಿದನು, ಅದಕ್ಕೆ ಉದ್ಧವನು ಮೂಕನಾದನು. ವೃಂದಾವನದ ನಿವಾಸಿಗಳು ಕೇಳಿದಾಗ ಸಂದೇಶದ ವಿಷಯ ಮತ್ತು ಅದರಿಂದ ಉಂಟಾಗುವ ಭಾವನೆಗಳು ಗೌಡಿಯ ವೈಷ್ಣವ ಸಂಪ್ರದಾಯದಲ್ಲಿ ದೇವರ ಪ್ರೀತಿಯ ಅತ್ಯುನ್ನತ ತಿಳುವಳಿಕೆಯನ್ನು ರೂಪಿಸುತ್ತವೆ . ಉದ್ಧವನ ಸನ್ನಿಹಿತ ನಿರ್ಗಮನದ ನಂತರ ಅವನನ್ನು ಸಮಾಧಾನಪಡಿಸಲು ಕೃಷ್ಣನು ಲೋಕವನ್ನು ತೊರೆಯುವ ಸ್ವಲ್ಪ ಸಮಯದ ಮೊದಲು ಉದ್ಧವನಿಗೆ ಉದ್ಧವಗೀತೆಯನ್ನು ( ಹಂಸ ಗೀತೆ ಎಂದೂ ಕರೆಯುತ್ತಾರೆ ) ತಲುಪಿಸಿದನು. ಯದುವಂಶ ಸಮುದಾಯದ ಸನ್ನಿಹಿತವಾದ ವಿನಾಶವನ್ನು ಕಂಡ ನಂತರ ಉದ್ಧವನ ಗೊಂದಲದಿಂದ ಇದು ಪ್ರಾರಂಭವಾಗುತ್ತದೆ, ಅಲ್ಲಿ ಕೃಷ್ಣನು ಕ್ಷತ್ರಿಯನಾಗಿ ಜನಿಸಿದನು . ಉದ್ಧವನು ಕೃಷ್ಣನ ಭಕ್ತ ಮತ್ತು ಆತ್ಮೀಯ ಸ್ನೇಹಿತನಾಗಿ ಪ್ರಸಿದ್ಧನಾಗಿದ್ದನು, ಆದರೆ ಅವನು ವಿನಾಶವನ್ನು ಏಕೆ ತಡೆಯಲಿಲ್ಲ ಎಂದು ಅವನಿಗೆ ಅರ್ಥವಾಗಲಿಲ್ಲ. ಸೃಷ್ಟಿಕರ್ತ ಬ್ರಹ್ಮ ಮತ್ತು ಸ್ವರ್ಗೀಯರು ಕೃಷ್ಣನನ್ನು ತನ್ನ ಅವತಾರದ ಉದ್ದೇಶ ಮುಗಿದ ನಂತರ ತನ್ನ ದೈವಿಕ ನಿವಾಸಕ್ಕೆ ಮರಳಲು ಬೇಡಿಕೊಂಡರು. ನಂತರ ಕೃಷ್ಣನು ಯಾದವರು ಏಕೆ ನಾಶವಾಗಬೇಕಾಯಿತು ಎಂದು ವಿವರಿಸಿದನು, ಅವರ ಪರಾಕ್ರಮ, ವೀರತೆ ಮತ್ತು ಅದೃಷ್ಟದಿಂದ ಉಂಟಾದ ಅಹಂಕಾರದಿಂದಾಗಿ, ಯಾದವರು ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಬಯಸಿದ್ದರು ಎಂದು ಹೇಳಿದನು. ತನ್ನ ಮರಣದ ಮೊದಲು ತನ್ನ ಕುಲವನ್ನು ತನ್ನೊಂದಿಗೆ ಕರೆದೊಯ್ಯದಿದ್ದರೆ ಭೂಮಿಯು ಬಳಲುತ್ತದೆ ಎಂದು ಅವನಿಗೆ ತಿಳಿಸಿದನು. ಇದರಿಂದ ತುಂಬಾ ದುಃಖಿತನಾದ ಉದ್ಧವ ಕೃಷ್ಣನ ಬಳಿಗೆ ಹೋಗಿ ತನ್ನನ್ನೂ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು. ಉತ್ತರವಾಗಿ, ಕೃಷ್ಣನು ಉದ್ಧವಗೀತೆಯನ್ನು ವಿವರಿಸಿದನು. ✍🏻 Narayana Shasthry ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ದಿನಕ್ಕೊಂದು ಕಥೆ - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಗುರು_ಪುಷ್ಯಾ ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಹಾಗೂ ಈ ತಿಂಗಳಲ್ಲಿ ಗುರು ಪುಷ್ಯ ಯೋಗ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ. ಭಾರತೀಯ ಜ್ಯೋತಿಷ್ಯದ ಪ್ರಕಾರ ಕೆಲವು ತಿಥಿ, ನಕ್ಷತ್ರ ಹಾಗೂ ದಿನಗಳ ಸಂಯೋಜನೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಕೆಲವು ಕಾರ್ಯಗಳನ್ನು ಕೈಗೊಂಡರೆ ಅಥವಾ ಹೊಸದನ್ನು ಪ್ರಾರಂಭಿಸಿದರೆ ಶುಭವೆಂದು ಹೇಳಲಾಗುತ್ತದೆ. ಈ ಶುಭ ಸಮಯ ಅಥವಾ ಶುಭ ಮುಹೂರ್ತವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಶುಭ ದಿನದಲ್ಲಿ ಗುರು ಪುಷ್ಯ ಯೋಗವೂ ಒಂದು. ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಹಾಗೂ ಈ ತಿಂಗಳಲ್ಲಿ ಗುರು ಪುಷ್ಯ ಯೋಗ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ. ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ. ಗುರುಗ್ರಹವು ಜ್ಞಾನದ ಸಂಕೇತವಾಗಿದೆ. ಇದಲ್ಲದೇ ಗುರುವನ್ನು ಅತ್ಯಂತ ಶುಭಗ್ರಹವೆಂದು ಕರೆಯುತ್ತಾರೆ. ಇದಲ್ಲದೇ ಪುಷ್ಯಾ ನಕ್ಷತ್ರವನ್ನೂ ಮೃದು ಹಾಗೂ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಹಾನಕ್ಷತ್ರವೆಂದೂ ಕರೆಯುತ್ತಾರೆ. ಈ ಗುರು ಗ್ರಹ ಹಾಗೂ ಪುಷ್ಯಾ ನಕ್ಷತ್ರ ಸೇರಿದಾಗ ಉತ್ತಮ ಅವಧಿ ಪ್ರಾರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಚಟುವಟಿಕೆಯು ಶುಭವಾಗಿ ಪರಿಣಮಿಸುತ್ತದೆ. ಇದೇ ಪುಷ್ಯಾ ನಕ್ಷತ್ರವು ಭಾನುವಾರ ಬಂದರೆ ಅದನ್ನು ರವಿಪುಷ್ಯ ಯೋಗವೆಂದು ಕರೆಯುತ್ತಾರೆ. ಈ ತಿಂಗಳ ಮೇ 21ರಂದು ಗುರುವಾರ ಶುಭಯೋಗವಾದ ಗುರು ಪುಷ್ಯ ಯೋಗ ಉಂಟಾಗಲಿದೆ. . ಯಾವುದೇ ಶುಭ ಕಾರ್ಯವನ್ನು ಈ ದಿನ ಪ್ರಾರಂಭಿಸಬಹುದು. ಆದರೆ ಈ ಶುಭ ಯೋಗದಲ್ಲಿ ಮದುವೆಯ ಆಚರಣೆಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಯೋಗವು ಮದುವೆಯ ವಿಚಾರದಲ್ಲಿ ಶಾಪಗ್ರಸ್ತ ಯೋಗವಾಗಿದೆ. ವಿಶೇಷ ಲಾಭವನ್ನು ಪಡೆಯಲು ಮಾಡುವಂತಹ ಹವನಗಳಿಗೆ ಈ ದಿನ ಅತ್ಯಂತ ಶುಭ ಹಾಗೂ ಫಲದಾಯಕ. ಗುರು ಪುಷ್ಯ ಯೋಗದಂದು ಗುರು ಮಂತ್ರವನ್ನು ಪಠಿಸಬಹುದು. ವ್ಯವಹಾರಕ್ಕೆ ಸಂಬಂಧಪಟ್ಟ ಮಾತುಕತೆಗೂ ಇದು ಶುಭದಿನ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಂತೆ ಶನಿ ಮತ್ತು ಗುರು ಇಬ್ಬರೂ ಈ ಯೋಗದ ಮೇಲೆ ಶುಭ ಪರಿಣಾಮವನ್ನು ಬೀರುತ್ತಾರೆ.ಆದ್ದರಿಂದ ದೀರ್ಘಕಾಲದವರೆಗೆ ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ಈ ಯೋಗದಲ್ಲಿ ಪ್ರಾರಂಭಿಸಬೇಕು ಗುರು ಪುಷ್ಯಯೋಗವು ಈ ಕೆಳಗೆ ಹೇಳಿರುವಂತಹ ಕಾರ್ಯಗಳ ಆರಂಭಕ್ಕೆ ಅತ್ಯಂತ ಶುಭದಿನವಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾಕಲ್ಲು ಹಾಕಲು ಮಂತ್ರ-ತಂತ್ರವನ್ನು ಕಲಿಯಲು ಹಾಗೂ ತಂದೆ, ಅಜ್ಜ, ಗುರುವು ಕಲಿತ ಜ್ಞಾನವನ್ನು ಸಂಪಾದಿಸಲು. ಹೊಸ ಅಂಗಡಿ- ಕಚೇರಿಯ ಉದ್ಘಾಟನೆಗೆ ಚಿನ್ನ ಮತ್ತು ಆಭರಣಗಳ ಖರೀದಿಗೆ ಶುಭ ದಿನ ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆ ಸ್ಥಳಾಂತರಕ್ಕೆ ಶುಭದಿನ ದೊಡ್ಡ ವ್ಯವಹಾರಗಳನ್ನು ಆರಂಭಿಸಲೂ ಗುರು ಪುಷ್ಯ ಯೋಗವು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. #​ಗುರು ಪುಷ್ಯ ಯೋಗದಲ್ಲಿ ಮದುವೆಯು ಅಶುಭ ಯಾಕೆಂದರೆ ?? ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ, ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ. ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ. ಮೇ ತಿಂಗಳಲ್ಲಿ ಗುರು ಮತ್ತು ಶನಿಯ ವಕ್ರ ಚಲನೆಯು ಸ್ವಲ್ಪ ಸಮಾಧಾನಕರವಾಗಿರುತ್ತದೆ. ಅನೇಕ ಸ್ಥಗಿತಗೊಂಡಿರುವ ಯೋಜನೆ ಗಳು ಮತ್ತು ಕಾರ್ಯಗಳು ಆರಂಭಗೊಳ್ಳುವುದು. ವೈದ್ಯಕೀಯ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳು ಸಿಗುವುದು. ಜನರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರ ಪ್ರತಿಫಲವು ಮುಂದಿನ ದಿನಗಳನ್ನು ಉತ್ತಮವಾಗಿರಿಸುವುದು ಶುಭವಾಗಲಿ ಧನ್ಯವಾದಗಳು ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ಗುರುಗಳ ಆಶೀರ್ವಾದ ಪಡೆಯಲು ಗುರುಪುಷ್ತಾ ತ ಯಮೃ; ಯೋಗ 8 ಗುರುಗಳ ಆಶೀರ್ವಾದ ಪಡೆಯಲು ಗುರುಪುಷ್ತಾ ತ ಯಮೃ; ಯೋಗ 8 - ShareChat
#🔱 ಭಕ್ತಿ ಲೋಕ 🙏 ಹರಿಃ ಓಂ 🕉️ ದೇವರಿಗೆ ಕೃತಜ್ಞತೆ ಸಲ್ಲಿಸಲು 10 ವಿಶೇಷ ಕಾರಣಗಳು: 1. ರಸ್ತೆಯ ಮೇಲೆ ಟೈರುಗಳು ಓಡಿದಂತೆ ನಿಧಾನವಾಗಿ ಜೀರ್ಣಿಸುತ್ತವೆ. ಆದರೆ ನಮ್ಮ ಪಾದಗಳ ತಳಭಾಗಗಳು ಜೀವನಪೂರ್ತಿ ನಡೆದರೂ, ಓಡಿದರೂ ಬಹುತೇಕ ಹಾಗೆಯೇ ಇರುತ್ತವೆ. 2. ಮಾನವ ದೇಹದಲ್ಲಿ ಸುಮಾರು 75% ನೀರೇ ಇರುತ್ತದೆ. ಆದರೂ ಲಕ್ಷಾಂತರ ರಂಧ್ರಗಳಿದ್ದರೂ ಒಂದು ಹನಿಯೂ ಹೊರಗೆ ಸೋರಿಬರುವುದಿಲ್ಲ. 3. ಯಾವುದೇ ವಸ್ತುವೂ ಆಧಾರವಿಲ್ಲದೆ ನಿಲ್ಲುವುದಿಲ್ಲ. ಆದರೆ ಮಾನವ ದೇಹ ತನ್ನನ್ನು ತಾನೇ ಸಹಜವಾಗಿ ಸಮತೋಲನದಲ್ಲಿಟ್ಟುಕೊಳ್ಳುತ್ತದೆ. 4. ರೀಚಾರ್ಜ್ ಮಾಡದೆ ಯಾವುದೇ ಬ್ಯಾಟರಿ ಕೆಲಸ ಮಾಡುವುದಿಲ್ಲ. ಆದರೆ ಹೃದಯವು ಹುಟ್ಟಿದ ಕ್ಷಣದಿಂದ ಮರಣದವರೆಗೆ ನಿಲ್ಲದೆ ಬಡಿದುಕೊಳ್ಳುತ್ತಲೇ ಇರುತ್ತದೆ. 5. ಯಾವುದೇ ಪಂಪ್ ಶಾಶ್ವತವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ರಕ್ತವು ಜೀವನಪೂರ್ತಿ ದೇಹದೊಳಗೆ ನಿರಂತರವಾಗಿ ಹರಿಯುತ್ತಲೇ ಇರುತ್ತದೆ. 6. ಜಗತ್ತಿನ ಅತ್ಯಂತ ದುಬಾರಿ ಕ್ಯಾಮೆರಾಗಳಿಗೂ ಮಿತಿಗಳಿವೆ. ಆದರೆ ನಮ್ಮ ಕಣ್ಣುಗಳು ಪ್ರತಿಯೊಂದು ದೃಶ್ಯವನ್ನೂ ಸಾವಿರಾರು ಮೆಗಾಪಿಕ್ಸೆಲ್‌ಗಳಿಗೆ ಸಮಾನವಾದ ಗುಣಮಟ್ಟದಲ್ಲಿ ಕಾಣುತ್ತವೆ. 7. ಯಾವುದೇ ಪ್ರಯೋಗಾಲಯವೂ ಪ್ರತಿಯೊಂದು ರುಚಿಯನ್ನು ಪರೀಕ್ಷಿಸಿಲ್ಲ. ಆದರೆ ನಾಲಿಗೆ ಯಾವುದೇ ಸಾಧನಗಳಿಲ್ಲದೆ ಸಾವಿರಾರು ರುಚಿಗಳನ್ನು ಗುರುತಿಸುತ್ತದೆ. 8. ಅತ್ಯಾಧುನಿಕ ಸೆನ್ಸಾರ್‌ಗಳಿಗೂ ಮಿತಿಗಳಿವೆ. ಆದರೆ ನಮ್ಮ ಚರ್ಮವು ಅತಿ ಸಣ್ಣ ಸ್ಪರ್ಶವನ್ನೂ, ಅನುಭವವನ್ನೂ ಗ್ರಹಿಸಬಲ್ಲದು. 9. ಯಾವುದೇ ಯಂತ್ರವೂ ಎಲ್ಲಾ ಧ್ವನಿಗಳನ್ನು ಸೃಷ್ಟಿಸಲಾರದು. ಆದರೆ ಮಾನವ ಧ್ವನಿ ಸಾವಿರಾರು ವಿಧದ ಸ್ವರಗಳನ್ನು ಉಂಟುಮಾಡಬಲ್ಲದು. 10. ಯಾವುದೇ ಸಾಧನವೂ ಎಲ್ಲಾ ಧ್ವನಿಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾರದು. ಆದರೆ ನಮ್ಮ ಕಿವಿಗಳು ಪ್ರತಿಯೊಂದು ಧ್ವನಿಯನ್ನೂ ಅರ್ಥಪೂರ್ಣವಾಗಿ ಗ್ರಹಿಸಿ, ಅನ್ವಯಿಸಿಕೊಳ್ಳುತ್ತವೆ. ದೇವರು ಪ್ರಸಾದಿಸಿದ ಈ ಅಮೂಲ್ಯ ವರಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು. ದೂರು ಹೇಳಲು ನಮಗೆ ನಿಜವಾಗಿಯೂ ಯಾವುದೇ ಹಕ್ಕಿಲ್ಲ. ಪ್ರತಿ ಬೆಳಿಗ್ಗೆ ನಿದ್ರೆಯಿಂದ ಎಚ್ಚರಗೊಳ್ಳುವುದೇ ಒಂದು ಅದ್ಭುತ! ಆದ್ದರಿಂದ ಪ್ರತಿದಿನವೂ ಸರ್ವಶಕ್ತನಾದ ದೇವರಿಗೆ ಕೃತಜ್ಞತೆ ಸಲ್ಲಿಸಿ. 🙏🌻🌹🌸🪸🌷💐ಕೃತಜ್ಞತೆ 🙏 ವೇದಾಂತ ಜ್ಞಾನ ಯವರಿಂದ
🔱 ಭಕ್ತಿ ಲೋಕ - ShareChat
#🤩ಆಸಕ್ತಿಕರ ಪೋಸ್ಟ್ 🙏 ಹರಿಃ ಓಂ 🕉️ ಹಿಂದೂ ಧರ್ಮಗ್ರಂಥಗಳಲ್ಲಿ ಪೂರ್ವಜನ್ಮದ ಕರ್ಮಫಲವನ್ನು ಅನೇಕ ಮಹಾನುಭಾವರು, ರಾಜರು, ದೇವತೆಗಳು ಹಾಗೂ ಋಷಿಗಳು ಅನುಭವಿಸಿದ ಉದಾಹರಣೆಗಳು ದೊರೆಯುತ್ತವೆ. ಕರ್ಮಸಿದ್ಧಾಂತದ ಪ್ರಕಾರ, ಮಾಡಿದ ಸತ್ಕರ್ಮ–ದುಷ್ಕರ್ಮಗಳ ಫಲ ಯಾವುದೋ ಒಂದು ಕಾಲದಲ್ಲಿ ಅನುಭವಿಸಲೇಬೇಕು ಎಂದು ಹೇಳಲಾಗಿದೆ. 🎙️ಕೆಲವು ಪ್ರಸಿದ್ಧ ಉದಾಹರಣೆಗಳು: 1. ಶ್ರೀರಾಮ ಶ್ರೀರಾಮನು ವಿಷ್ಣುವಿನ ಅವತಾರರಾಗಿದ್ದರೂ, ಮಾನವ ಜೀವನದ ದುಃಖಗಳನ್ನು ಅನುಭವಿಸಿದರು — ಅರಣ್ಯವಾಸ, ಸೀತಾವಿಯೋಗ, ಯುದ್ಧ ಇತ್ಯಾದಿ. ಇದನ್ನು ಲೋಕಕ್ಕೆ ಧರ್ಮ ಮತ್ತು ಕರ್ಮದ ಪಾಠ ನೀಡಲು ನಡೆದ ದೈವಲೀಲೆ ಎಂದು ವಿವರಿಸಲಾಗುತ್ತದೆ. 2. ರಾಜ ಹರಿಶ್ಚಂದ್ರ ಸತ್ಯನಿಷ್ಠನಾದ ಹರಿಶ್ಚಂದ್ರನು ಭಾರಿ ಸಂಕಟಗಳನ್ನು ಅನುಭವಿಸಿದನು. ರಾಜ್ಯ, ಕುಟುಂಬ ಎಲ್ಲವನ್ನೂ ಕಳೆದುಕೊಂಡರೂ ಸತ್ಯವನ್ನು ಬಿಡಲಿಲ್ಲ. ಇದು ಪೂರ್ವಕರ್ಮ ಹಾಗೂ ಸತ್ಯಪರೀಕ್ಷೆಯ ಉದಾಹರಣೆಯಾಗಿ ಹೇಳಲಾಗುತ್ತದೆ. 3. ನಳ ಮಹಾರಾಜ ನಳನು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದನು — ರಾಜ್ಯನಷ್ಟ, ವಿಯೋಗ, ದಾರಿದ್ರ್ಯ. ನಂತರ ಪುಣ್ಯಬಲದಿಂದ ಮತ್ತೆ ಗೌರವವನ್ನು ಪಡೆದನು. 4. ಪಾಂಡವರು ಧರ್ಮನಿಷ್ಠರಾಗಿದ್ದರೂ ಪಾಂಡವರು ಅರಣ್ಯವಾಸ, ಅವಮಾನ, ಯುದ್ಧದ ದುಃಖಗಳನ್ನು ಅನುಭವಿಸಿದರು. ಮಹಾಭಾರತದಲ್ಲಿ ಇದನ್ನು ಕರ್ಮಫಲ ಮತ್ತು ಕಾಲಧರ್ಮವಾಗಿ ವಿವರಿಸಲಾಗಿದೆ. 5. ಅಹಲ್ಯೆ ಅಹಲ್ಯೆ ಶಾಪದಿಂದ ಕಲ್ಲಾಗಿ ಪರಿವರ್ತಿತಳಾದಳು. ನಂತರ ಶ್ರೀರಾಮನ ಸ್ಪರ್ಶದಿಂದ ವಿಮೋಚನೆ ಪಡೆದಳು. ಇದು ಕರ್ಮ, ಪಶ್ಚಾತ್ತಾಪ ಮತ್ತು ದೈವಕೃಪೆಯ ಸಂಕೇತವಾಗಿ ಕಾಣಲಾಗುತ್ತದೆ. 6. ಕರ್ಣ ದಾನಶೂರನಾದ ಕರ್ಣನು ಜೀವನಪೂರ್ತಿ ಅನೇಕ ಅವಮಾನ ಮತ್ತು ಕಷ್ಟಗಳನ್ನು ಅನುಭವಿಸಿದನು. ಅವನ ಜೀವನವನ್ನು ಪೂರ್ವಕರ್ಮ, ವಿಧಿ ಮತ್ತು ನಿಷ್ಠೆಯ ಉದಾಹರಣೆಯಾಗಿ ಹೇಳಲಾಗುತ್ತದೆ. 🎙️ಕರ್ಮಸಿದ್ಧಾಂತದ ಸಾರ ಹಿಂದೂ ತತ್ವಶಾಸ್ತ್ರದ ಪ್ರಕಾರ: 🔅ಸತ್ಕರ್ಮ → ಶುಭಫಲ ನೀಡುತ್ತದೆ. 🔅ದುಷ್ಕರ್ಮ → ದುಃಖದ ಫಲ ನೀಡುತ್ತದೆ. ಫಲವು ತಕ್ಷಣ ಅಥವಾ ಮುಂದಿನ ಜನ್ಮದಲ್ಲಿ ಬರಬಹುದು. ಆದ್ದರಿಂದ ಧರ್ಮ, ದಯೆ, ಸತ್ಯ ಮತ್ತು ಭಕ್ತಿ ಜೀವನದಲ್ಲಿ ಮುಖ್ಯವೆಂದು ಶಾಸ್ತ್ರಗಳು ಬೋಧಿಸುತ್ತವೆ. ಬರಹ 👉 ವೇದಾಂತ ಜ್ಞಾನ ಯವರಿಂದ 🌺 “ಯಥಾ ಕರ್ಮ ತಥಾ ಫಲಂ” — ಹೇಗೆ ಕರ್ಮವೋ ಹಾಗೆಯೇ ಫಲ. 🙏🌸
🤩ಆಸಕ್ತಿಕರ ಪೋಸ್ಟ್ - ಪೂರ್ವ ಜನ್ಶಧ ಫಲ ಪೂರ್ವ ಕಾಲದಲ್ಲಿ ಯಾರು ಯಾರು ಆನುಭವಿಡರು  ವೇದಾಂತ జ్లాన ತರಿಶ್ಚಂದ್ರ Beova| 3. ನಳೆ ಮಹಾರಾಜ 2 రాజ 1 ಸತ್ಯನಿಪ್ತನಾದ ಹರಿಶ್ಚಂದ್ವನು ರಾಜೈ ಕುಟುಂಬ ್ నెళను రాజ్యనెవ్చె; చియగె దారిద్ద్ః ಶ್ರೀರಾಮನು ಆವತಾರ ಪುರುಪರಾಗಿದ್ದರೂ . ಎಲ್ಲವನ್ನೂ ಕಳೆದುಕೊಂಡರೂ ಸತಯವನ್ನು ಆರಣಯವಾಸ ;, ಸೀತಾವಿಯಗ, ಯುದ್ಬ ಮುಂತಾದ . ಮುಂತಾದ ಅನೇಕ ಕಪ್ಟಗಳನ್ನು ಆನುಭವಿಸಿಡನು ' బిడెలిల్ల ಇದು ಪೂರ್ವಕರ್ಮ ಮತ್ತು ನಂತರ ಪುಣಯಬಲದಿಂದ ಮತ್ತೆ ಗೌರವ ಪಡೆಡನು: ದುಃಬಗಳನ್ನು ಅನುಭವಿಸಿಡರು . 33,388egab eucaade8 | 5. ಆಹಲ್ಯೆ  4. ২১০৫১০ 6. ಕರ್ಣ ಅಹಲ್ಯೆ ಶಾಪದಿಂದ ಕಲ್ಹಾಗಿ ಪರಿವಕತತಳಾದಳು . ದಾನಶೂರನಾದ ಕರ್ಣನು ಜೀವನಪೂರ್ತಿ ಅನೇಕ' ಧರ್ಮನಿಪ್ತರಾಗಿದ್ದರೂ ಪಾಂಡವರು ಆರಣ್ಯವಾಸ , ಆವಮಾನ, ಯುಧ್ಚದ ದುಃಜಗಳನ್ನು ` ನಂತರ ಶ್ರೀರಾಮನ ಸ್ತರ್ಶದಿಂದ ವಿಮೋಚನತ ' ఆవెమోనె మెస్తు రెచ్చెగెళన్ను ఆనుభవిసిడెను ಪಡೆಯತು. ಇದು ಕರ್ಮ, ಪಶ್ಚಾತ್ತಾಪ ಮತ್ತು ಇದು ಪೂರ್ವಕರ್ಮ; ವಿಧಿ ಮತ್ತು ನಿಶ್ಟೆಯ ಆನುಭವಿಸಿಡರು. ಇದು ಕರ್ಮಫಲ ಮತ್ತು ದೈವಕೃಪೆಯ ಸಂಕೇತ. ಕಾಲಧರ್ಮ; ಉದಾಹರಣೆ. ಕರ್ಮಸಿದ್ಯಾಂತದ ಸಾರ ` ~3{<٤ ಶುಭಫಲ ನೀಡುತ್ತದೆ   ದುಶ್ತಕರ್ಮ దుఃబదె ఖెల నిడుక్తది: ಫಲವು ತಕ್ತಣ ಆಧವಾ ಮುಂದಿನ ಜನ್ಯದಲ್ಲಿ ಬರಬಹುದು: మొబ్య' ಆದ್ದರಿಂದ ಧರ್ಮ; ದಯ; ಸತ್ಯ ಮತ್ತು ಭಕ್ತಿ ಜೀವನದಲ್ಲಿ ಪೂರ್ವ ಜನ್ಶಧ ಫಲ ಪೂರ್ವ ಕಾಲದಲ್ಲಿ ಯಾರು ಯಾರು ಆನುಭವಿಡರು  ವೇದಾಂತ జ్లాన ತರಿಶ್ಚಂದ್ರ Beova| 3. ನಳೆ ಮಹಾರಾಜ 2 రాజ 1 ಸತ್ಯನಿಪ್ತನಾದ ಹರಿಶ್ಚಂದ್ವನು ರಾಜೈ ಕುಟುಂಬ ್ నెళను రాజ్యనెవ్చె; చియగె దారిద్ద్ః ಶ್ರೀರಾಮನು ಆವತಾರ ಪುರುಪರಾಗಿದ್ದರೂ . ಎಲ್ಲವನ್ನೂ ಕಳೆದುಕೊಂಡರೂ ಸತಯವನ್ನು ಆರಣಯವಾಸ ;, ಸೀತಾವಿಯಗ, ಯುದ್ಬ ಮುಂತಾದ . ಮುಂತಾದ ಅನೇಕ ಕಪ್ಟಗಳನ್ನು ಆನುಭವಿಸಿಡನು ' బిడెలిల్ల ಇದು ಪೂರ್ವಕರ್ಮ ಮತ್ತು ನಂತರ ಪುಣಯಬಲದಿಂದ ಮತ್ತೆ ಗೌರವ ಪಡೆಡನು: ದುಃಬಗಳನ್ನು ಅನುಭವಿಸಿಡರು . 33,388egab eucaade8 | 5. ಆಹಲ್ಯೆ  4. ২১০৫১০ 6. ಕರ್ಣ ಅಹಲ್ಯೆ ಶಾಪದಿಂದ ಕಲ್ಹಾಗಿ ಪರಿವಕತತಳಾದಳು . ದಾನಶೂರನಾದ ಕರ್ಣನು ಜೀವನಪೂರ್ತಿ ಅನೇಕ' ಧರ್ಮನಿಪ್ತರಾಗಿದ್ದರೂ ಪಾಂಡವರು ಆರಣ್ಯವಾಸ , ಆವಮಾನ, ಯುಧ್ಚದ ದುಃಜಗಳನ್ನು ` ನಂತರ ಶ್ರೀರಾಮನ ಸ್ತರ್ಶದಿಂದ ವಿಮೋಚನತ ' ఆవెమోనె మెస్తు రెచ్చెగెళన్ను ఆనుభవిసిడెను ಪಡೆಯತು. ಇದು ಕರ್ಮ, ಪಶ್ಚಾತ್ತಾಪ ಮತ್ತು ಇದು ಪೂರ್ವಕರ್ಮ; ವಿಧಿ ಮತ್ತು ನಿಶ್ಟೆಯ ಆನುಭವಿಸಿಡರು. ಇದು ಕರ್ಮಫಲ ಮತ್ತು ದೈವಕೃಪೆಯ ಸಂಕೇತ. ಕಾಲಧರ್ಮ; ಉದಾಹರಣೆ. ಕರ್ಮಸಿದ್ಯಾಂತದ ಸಾರ ` ~3{<٤ ಶುಭಫಲ ನೀಡುತ್ತದೆ   ದುಶ್ತಕರ್ಮ దుఃబదె ఖెల నిడుక్తది: ಫಲವು ತಕ್ತಣ ಆಧವಾ ಮುಂದಿನ ಜನ್ಯದಲ್ಲಿ ಬರಬಹುದು: మొబ్య' ಆದ್ದರಿಂದ ಧರ್ಮ; ದಯ; ಸತ್ಯ ಮತ್ತು ಭಕ್ತಿ ಜೀವನದಲ್ಲಿ - ShareChat
#🔱 ಭಕ್ತಿ ಲೋಕ ದೀಪದ ಬಗ್ಗೆ ಕಿರುಬೆಳಗು. ಮನಸ್ಸಿಗೆ ಬಂದಂತೆ ದೇವರ ಮನೆಯಲ್ಲಿ ದೀಪವನ್ನು ಜೋಡಿಸ ಬೇಡಿ! ಸರಿಯಾಗಿ ಜೋಡಿಸುವ ವಿಧಾನ ನೋಡಿ ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ, ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿದ್ದಿದ್ದೂ ಇದೆ, ನಾವು ತಸ್ಮಾತ್ ಶಾಸ್ತ್ರ ಪ್ರಮಾಣೇಷು ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳಬಹುದಷ್ಟೆ. ತಿಲ ತೈಲ (ಎಳ್ಳೆಣ್ಣೆ) ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ, ಆ ಇತರ ತೈಲಗಳು ವಾಮ ಪ್ರಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ. ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು, ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ ಮೂರು ಇದ್ದರೆ ಮರಣ ಸೂಚಕ ನಾಲ್ಕು ಇದ್ದರೆ ಗೊಂದಲ ಐದು ದೀಪಗಳು ಆರಾಧನೆಗೆ ಮಾತ್ರ. ಇದರಲ್ಲಿ ಬತ್ತಿಗಳ ಪ್ರಮಾಣ : ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ, ಮೂರು ಬತ್ತಿ ತ್ರಿಶಕ್ತಿ ರೂಪ, ನಾಲ್ಕು ಬತ್ತಿಯು ಉತ್ತಮವಲ್ಲ, ಐದು ಬತ್ತಿಗಳು ಪಂಚಭೂತಗಳ ಸಂಕೇತ, ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಠ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನವಾಗಿರ ಬಾರದು. ಹತ್ತಿ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ. ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು, ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat
#🔱 ಭಕ್ತಿ ಲೋಕ #ಓಂ ನಮಃ ಶಿವಾಯ #ದಿನಕ್ಕೊಂದು ಕಥೆ ಹರ+ಸಾಹಸ ಅಂದರೆ ನಿಮಗೆ ಗೊತ್ತೇ..? #ಶಿವನ ಸಾಹಸ. ಸಾಮಾನ್ಯವಾಗಿ ನಾವೇನಾದರೂ ಯಾವುದಾದರೂ ಕಾರ್ಯವನ್ನು ಬಹಳ ಕಷ್ಟಪಟ್ಟು ಮಾಡಿದರೆ, ಅದನ್ನು “ಹರಸಾಹಸ” ಎನ್ನುತ್ತೇವೆ. ಆದರೆ ಪುರಾಣದಲ್ಲಿ ಇದಕ್ಕೆ ಬಹು ಮುಖ್ಯವಾದ ಒಂದು ಕಥೆ ಇದೆ. ಓದಿ ತಿಳಿದುಕೊಳ್ಳಿ ಬ್ರಹ್ಮನ ಐದನೆ ತಲೆಯನ್ನು ತೆಗೆದ ಶಿವ - ಬ್ರಹ್ಮದೇವರಿಗೆ ಮೊದಲು ಐದು ತಲೆಗಳಿದ್ದವು. ಅವನು ತನ್ನ ಎಲ್ಲಾ ತಲೆಗಳಿಂದಲೂ ವೇದವನ್ನು ಪಾರಾಯಣ ಮಾಡುತ್ತಿದ್ದನು. ಅದರಲ್ಲಿ ಒಂದು ತಲೆಯಲ್ಲಿ ಬೇಕೆಂದೇ ಶ್ರೀಹರಿಯ ಆಜ್ಞೆಯಂತೆ ಅಸುರಜನ ಮೋಹನಾರ್ಥ ತಪ್ಪುತಪ್ಪಾಗಿ ಹೇಳುತ್ತಿದ್ದನು. ಶಿವನು ಇದನ್ನು ಕಂಡು ಕ್ರೋಧಗೊಂಡು ಆ ಐದನೇ ತಲೆಯನ್ನು ಕಡಿದನು. ಇದರಿಂದ ಅವನಿಗೆ ಬ್ರಹ್ಮಹತ್ಯಾ ದೋಷ ಬಂದಿತು ಮತ್ತು ಬ್ರಹ್ಮನ ಕಪಾಲ ಶಿವನ ಕೈಯಲ್ಲಿ ಮೆತ್ತಿಕೊಂಡಿತು. ಅದನ್ನು ಬಿಡಿಸಲು ಬಹಳ ಪ್ರಯತ್ನಪಟ್ಟರೂ ಅದು ಅವನ ಕೈಯಿಂದ ಬಿಡಿಸಲಾಸದ್ಯವಾಯಿತು. ನಂತರ ಶಿವ ಬಹಳ ಕಡೆ ಹೋಗಿ ಕಪಾಳದಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟನು. ೧. ಶಿವನು ಎಲ್ಲಾ ಹತ್ತು ದಿಕ್ಕುಗಳಿಗೂ ಹೋಗಿ ಪ್ರಯತ್ನಿಸಿದರೂ, ಅಲ್ಲಿ ಹರಿ ಸರ್ವೋತ್ತಮ ಪ್ರತಿಪಾದನೆ ಮಾಡಿದರೂ ಆ ಕಪಾಲ ತನ್ನ ಕೈಯಿಂದ ಬಿಡಿಸಲಾಗಲಿಲ್ಲ. ೨. ಬದರೀ ಕ್ಷೇತ್ರಕ್ಕೆ ಹೋಗಿ ಬದರೀ ನಾರಾಯಣನನ್ನು ದರ್ಶನಮಾಡಲು ಪ್ರಯತ್ನಿಸಿದಾಗ, ಅಲ್ಲಿ ದರ್ಶನವಾಗಲಿಲ್ಲ. ೩. ನಂತರ ಯಮುನಾ ನದಿಗೆ ಹೋದರೆ, ಅಲ್ಲಿ ಯಮುನೆಯೇ ಒಣಗಿ ಹೋಯಿತು. ೪. ನಂತರ ಪ್ಲಾಕ್ಷ್ಮ ದ್ವೀಪಕ್ಕೆ ಹೋದನು ೫. ನಂತರ ಪುಷ್ಕರ ಕ್ಷೇತ್ರಕ್ಕೆ ಹೋದನು ೬. ನಂತರ ನೈಮಿಷಾರಣ್ಯಕ್ಕೆ ಹೋದನು ೭. ನಂತರ ಸೈಂಧವಾರಣ್ಯಕ್ಕೂ, ಧರ್ಮಾರಣ್ಯಕ್ಕೂ ಹೋದನು ೮. ನಂತರ ಕುರುಕ್ಷೇತ್ರಕ್ಕೆ ಹೋದನು. ಅಲ್ಲಿ ಶ್ರಿ ಹರಿಯು ಕೇಶವ ರೂಪದಿಂದ ಪ್ರತ್ಯಕ್ಷನಾಗಿ ಅವನ ಬ್ರಹ್ಮ ಹತ್ಯಾದೋಷವನ್ನು ಪರಿಹಾರ ಮಾರ್ಗ‌ಸೂಚಿಸಿದನು. ಆದ್ದರಿಂದ ಇದನ್ನೇ “ಹರಸಾಹಸ”ವೆಂದು ಕರೆಯುತ್ತಾರೆ. ಪರಿಹಾರ ಮಾರ್ಗ ಯಾವುದು ಗೊತ್ತಾ..? ಅನ್ನಪೂರ್ಣೇಶ್ವರಿ ‌ದೇವಿಗೆ ಶರಣಾಗುವುದು , ಅನ್ನಪೂರ್ಣೇಶ್ವರಿ ಎದುರು ತಲೆ ಬಾಗುತ್ತಾನೆ ಶಿವ. ಆಗ ಬುರುಡೆ ತುಂಬಿ, ಶಿವನ ಕೈಯಿಂದ ಬುರುಡೆ ಕೆಳಗೆ ಬೀಳುತ್ತದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ಜಗತ್ತಿನ ತಂದೆ-ತಾಯಿಗಳ ಪ್ರಾರ್ಥನೆ సచదే @dharmasampao ಶ್ಲೋಕವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ Il ಅರ್ಥ: "ಮಾತು ಮತ್ತು ಅದರ ಅರ್ಥವು ಹೇಗೆ ಒಂದಕ್ಕೊಂದು   ಬೆರೆತಿರುತ್ತವೆಯೋ , ಹಾಗೆಯೇ ಪರಸ್ಪರ ಬೇರ್ಪಡಿಸಲಾಗದಂತೆ ಇರುವ, ಜಗತ್ತಿಗೆ ತಂದೆ-ತಾಯಿಗಳಾದ ಪಾರ್ವತಿ ಮತ್ತು ಪರಮೇಶ್ವರದಿಗೆ ನಾನು ವಂದಿಸುತ್ತೈನೆ: " ಜಗತ್ತಿನ ತಂದೆ-ತಾಯಿಗಳ ಪ್ರಾರ್ಥನೆ సచదే @dharmasampao ಶ್ಲೋಕವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ Il ಅರ್ಥ: "ಮಾತು ಮತ್ತು ಅದರ ಅರ್ಥವು ಹೇಗೆ ಒಂದಕ್ಕೊಂದು   ಬೆರೆತಿರುತ್ತವೆಯೋ , ಹಾಗೆಯೇ ಪರಸ್ಪರ ಬೇರ್ಪಡಿಸಲಾಗದಂತೆ ಇರುವ, ಜಗತ್ತಿಗೆ ತಂದೆ-ತಾಯಿಗಳಾದ ಪಾರ್ವತಿ ಮತ್ತು ಪರಮೇಶ್ವರದಿಗೆ ನಾನು ವಂದಿಸುತ್ತೈನೆ: " - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಶ್ರೀಕೃಷ್ಣನಿಗೆ - ಕೃಷ್ಣನೇ ಸಾಟಿ:- ಕುರುಕ್ಷೇತ್ರದ ಧರ್ಮ- ಅಧರ್ಮಗಳ ನಡುವೆ ನಡೆದ ಯುದ್ಧದಲ್ಲಿ, ಘಟಾನುಘಟಿಗಳು, ಮಹಾಮಹಿಮರೆನಿಸಿಕೊಂಡವರೆಲ್ಲಾ, ಸಾವನ್ನಪ್ಪಿದರು.ಇಲ್ಲಿ ಸರಿ-ತಪ್ಪು ಪ್ರಶ್ನೆಗಳು ಬರುವುದಿಲ್ಲ. ಆದರೆ ಮಹಾಭಾರತದ ಈ ಯುದ್ಧದಲ್ಲಿ ಎಲ್ಲರ ಮನಕಲಕುವ ಸಾವು ಎಂದರೆ, ಅರ್ಜುನ ಸುಭದ್ರೆಯರ ಮಗನಾದ ಅಭಿಮನ್ಯುವಿನದು. ಆಡುವ ವಯಸ್ಸು ಮಹಾವೀರ, ಪರಾಕ್ರಮಿ, ಯುದ್ಧ ಕೌಶಲ್ಯವನ್ನು ತಿಳಿದವನು, ಯುದ್ಧದಲ್ಲಿ ಇವನ ಎದರು ನಿಂತರೆ ವೀರಾಧಿ ವೀರರು ಮಣ್ಣುಮುಕ್ಕುವರು. ಕೌರವರ ಸೇನಾಧಿಪತಿ ಗುರು ದ್ರೋಣಾಚಾರ್ಯರು, ಯುಧಿಷ್ಠಿರನನ್ನು ಬಂಧಿಸಿ ವಿಜಯ ಪತಾಕೆಯನ್ನು ಹಾರಿಸುವೆನೆಂದು ದುರ್ಯೋಧನನಿಗೆ ಮಾತುಕೊಟ್ಟಂತೆ, ಯುದ್ಧದ ಹದಿಮೂರನೇ ದಿನ ಚಕ್ರವ್ಯೂಹ ರಚಿಸಿದರು. ಈ ಚಕ್ರವ್ಯೂಹ ಭೇದಿಸುವ ರಹಸ್ಯ ಶ್ರೀಕೃಷ್ಣ ,ಅರ್ಜುನನಿಗೆ ಮಾತ್ರ ಗೊತ್ತಿತ್ತು. ಇದನ್ನು ತಿಳಿದಿದ್ದ ದ್ರೋಣರು ಕೃಷ್ಣ ಮತ್ತು ಅರ್ಜುನರನ್ನು ರಣರಂಗದಿಂದ ದೂರದಲ್ಲಿರುವಂತೆ ವ್ಯವಸ್ಥೆ ಮಾಡಿ ಯಾರೂ ಒಳಗೆ ಬರದಂತೆ ತಡೆಯಲು, ಒಂದು ದಿನದ ಮಟ್ಟಿಗೆ ಸಾವು ಬರದಂತೆ ವರಪಡೆದ ಜಯದ್ರಥನನ್ನು ಚಕ್ರವ್ಯೂಹದ ಹೊರಗೆ ನಿಲ್ಲಿಸಿದರು. ಎಲ್ಲರಿಗೂ ತಿಳಿದಿರುವಂತೆ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಅಡ್ಡ ಬಂದವರನ್ನು ಕಡಿದುರುಳಿಸುತ್ತಾ ಮುಂದೆ ಮುಂದೆ ಹೋಗುತ್ತಾನೆ. ಇವನ ಶೌರ್ಯ, ಪರಾಕ್ರಮದ ಮುಂದೆ ಯಾರು ಉಳಿಯಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವನು ಮಹಾರಥಿಗಳಾದ ದ್ರೋಣಾಚಾರ್ಯರು, ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ, ದುಶ್ಯಾಸನರನ್ನು ಒಂದೇ ಸಲಕ್ಕೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡುವಂತೆ ತಿಳಿಸುತ್ತಾನೆ. ದ್ರೋಣ, ಕೃಪಾ, ಕರ್ಣರು, ಇದು ಯುದ್ಧನೀತಿ ಅಲ್ಲವೆಂದು ತಿಳಿದಿದ್ದರೂ, ಒಟ್ಟಿಗೆ ಒಂದೇ ಸಲಕ್ಕೆ ರಾಕ್ಷಸರಂತೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡಿ ನೆಲಕ್ಕೆ ಬೀಳಿಸುತ್ತಾರೆ. ಯುದ್ಧರಥ, ಕತ್ತಿ ಇಲ್ಲದೆ ನಿರಾಯುಧನಾಗಿದ್ದರೂ, ರಥದ ಚಕ್ರವನ್ನೇ ಕಿತ್ತುಕೊಂಡು ರಕ್ತಸಿಕ್ತ ದೇಹದಿಂದ ಒಬ್ಬಂಟಿಯಾಗಿ ನಿಂತು ಆತಿರಥ ಮಹಾರಥರನ್ನೇ ಎದುರಿಸಿ ಹೋರಾಡುತ್ತಾನೆ. ಆದರೂ ಕೊನೆಗೆ ಮೋಸಕ್ಕೆ ಬಲಿಯಾಗಿ ವೀರ ಮರಣ ಹೊಂದುತ್ತಾನೆ. ಇವುಗಳೆಲ್ಲದರ ಮಧ್ಯೆ ಪಾಪಿಯಾದ ಜಯದ್ರಥನು ತನ್ನ ರಥದಿಂದ ಕೆಳಗಿಳಿದು ಬಂದು ಅಭಿಮನ್ಯವಿನ ಶವವನ್ನು ತನ್ನ ಕಾಲಿನಿಂದ ಒದೆಯುತ್ತಾ ರಾಕ್ಷಸನಗೆ ಬೀರುತ್ತಾ ದೂರ ತಳ್ಳುತ್ತಾನೆ. ಇದನ್ನೆಲ್ಲಾ ತಿಳಿದ ಕೃಷ್ಣ ಮತ್ತು ಅರ್ಜುನರಿಗೆ, ಅಭಿಮನ್ಯು ಸತ್ತಿದ್ದಾನೆ ಎಂಬ ದುಃಖಕ್ಕಿಂತ ಸತ್ತ ಅಭಿಮನ್ಯುವಿನ ಶವವನ್ನು ಜಯದ್ರಥ ಕಾಲಿನಿಂದ ಒದೆಯುತ್ತಾ ದೂರ ತಳ್ಳಿದ್ದು ಅವರಿಬ್ಬರಿಗೂ ಮೈ ಉರಿಯುತ್ತದೆ. ಕೃಷ್ಣನಂತು ಸಿಟ್ಟಿನಿಂದ ಕೊತಕೊತ ಕುದಿಯುತ್ತಾನೆ. ಕೋಪ ,ನೋವು, ಹತಾಶೆ, ಅಸಮಾಧಾನದಿಂದ ಬಂದ ಅರ್ಜುನ ರಣರಂಗದ ಮಧ್ಯೆ ಬಂದು ಕೇಳಿ, ಮೋಸದಿಂದ ನನ್ನ ಮಗನನ್ನು ಕೊಂದಿದ್ದು ಅಲ್ಲದೆ ನೀಚ ಮನಸ್ಸಿನ ಜಯದ್ರಥನು ಸತ್ತ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ್ದಾನೆ. ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಾಳೆ ಸೂರ್ಯಾಸ್ತವಾಗುವುದರೊಳಗೆ ಸಾಯಿಸುತ್ತೇನೆ. ಒಂದು ವೇಳೆ ಅದು ನನ್ನಿಂದ ಆಗದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎಂದು ಶಪಥ ಮಾಡುತ್ತಾನೆ. ಅರ್ಜುನನು ಮಾಡಿದ ಶಪಥ ಎರಡೂ ಪಾಳಯದಲ್ಲಿ ಸಂಚಲನ ಉಂಟು ಮಾಡುತ್ತದೆ. ಕೌರವರಿಗೆ ಜಯದ್ರಥನನ್ನು ಹೇಗಾದರೂ ಮಾಡಿ ಕಾಪಾಡಿಕೊಂಡರೆ, ಅರ್ಜುನ ಅಗ್ನಿ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ಪಾಂಡವರು ಇತಿಶ್ರೀ ಆದಂತೆ ಎಂದು ಖುಷಿಪಡುತ್ತಿದ್ದರೇ, ಜಯದ್ರಥನನ್ನು ಸಂಹರಿಸಲಾಗದೆ, ಅರ್ಜುನ ಅಗ್ನಿ ಪ್ರವೇಶ ಮಾಡಿದರೆ ನಮ್ಮ ಕಥೆ ಮುಗಿದಂತೆ ಎಂದು ಪಾಂಡವರು ಚಿಂತಾಕ್ರಾಂತರಾಗಿ, ಅರ್ಜುನ ಜಯದ್ರಥನನ್ನು ಕೊಲ್ಲಲೇಬೇಕು ಇದರ ಕುರಿತು ಯೋಜನೆಗಳನ್ನು ರೂಪಿಸುತ್ತಾರೆ. ಎಲ್ಲವನ್ನೂ ಬಲ್ಲ ಕೃಷ್ಣ ಮಾತ್ರ ಯಾವ ಮಾತನ್ನೂ ಆಡದೇ, ಒಂದು ವೇಳೆ ಹಾಗಾದರೆ, ಹೀಗಾದರೆ, ಏನು ಮಾಡಬೇಕೆಂಬುದನ್ನು ಮೊದಲೇ ಸಿದ್ಧತೆ ಮಾಡಿಕೊಂಡು ಎಲ್ಲರ ಮಾತುಗಳನ್ನು ಕೇಳುತ್ತಾ, ತನ್ನ ಸೋದರಳಿಯ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ ಜಯದ್ರಥನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದನು. ಮರುದಿನ ಯುದ್ದ ಆರಂಭವಾಗುತ್ತಿದ್ದಂತೆ ರಥದಲ್ಲಿ ಕುಳಿತ ಕೃಷ್ಣ ಮತ್ತು ಅರ್ಜುನರು ಜಯದ್ರಥನನ್ನು ಹುಡುಕಲು ಆರಂಭಿಸುತ್ತಾರೆ. ಈಕಡೆ ಕೌರವರು ಜಯದ್ರಥನ ಸುರಕ್ಷತೆಯ ಜವಾಬ್ದಾರಿಯನ್ನು ಸೇನಾಧಿಪತಿ ದ್ರೋಣಾಚಾರ್ಯರಿಗೆ ಕೊಡುತ್ತಾರೆ. ಮಹಾ ಗುರುಗಳಾದ ದ್ರೋಣಾಚಾರ್ಯರು ಜಯದ್ರಥನನ್ನು ಕಾಪಾಡಲು ಯಾರಿಂದಲೂ ಭೇದಿಸಲಾಗದಂಥ ಯೋಜನೆಯನ್ನೇ ರೂಪಿಸಿದರು. ಮೂರು ಚಕ್ರವ್ಯೂಹ ಗಳನ್ನು ರಚಿಸಿ, ಅತಿರಥ ಮಹಾರಥರಾದ ಕೃಪಾಚಾರ್ಯ, ಅಶ್ವತ್ಥಾಮ, ಕರ್ಣ ಇವರುಗಳನ್ನು ಮೂರು ಚಕ್ರವ್ಯೂಹಗಳಿಗೆ ತಡೆಗೋಡೆಯಾಗಿ ನಿಲ್ಲಿಸುತ್ತಾರೆ. ಪಾಂಡವರು ಚಕ್ರವ್ಯೂಹ ಭೇದಿಸುವ ಹರಸಾಹಸ ಮಾಡಿದರು. ಈ ಭೀಕರ ಕದನದಲ್ಲಿ ಕೌರವರ ಐದು ದೊಡ್ಡ ಸೈನ್ಯದ ತುಕಡಿಗಳು ನಾಶವಾದರೂ ಗುರು ದ್ರೋಣಾಚಾರ್ಯರು ರಚಿಸಿದ ಒಂದೇ ಒಂದು ಚಕ್ರವ್ಯೂಹ ಭೇದಿಸಲು ಪಾಂಡವರಿಂದ ಸಾಧ್ಯವಾಗಲಿಲ್ಲ. ಅರ್ಜುನ ಮತ್ತು ಜಯದ್ರತನ ಮಧ್ಯೆ ಇದ್ದ ಚಕ್ರವ್ಯೂಹ ಭೇದಿಸುವುದು ಇರಲಿ, ಹತ್ತಿರ ಹೋಗಲು ಆಗಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇನ್ನೇನು ಸೂರ್ಯಾಸ್ತದ ಸಮಯ ಬಂದಿತು. ಅರ್ಜುನ ಅಗ್ನಿ ಪ್ರವೇಶ ಮಾಡುವುದನ್ನೇ ಕೌರವರು ಕಾಯುತ್ತಿದ್ದರು. ಪಾಂಡವರು ಹತಾಶರಾಗಿ ಕೈಚೆಲ್ಲಿದ್ದರು. ರಥದಲ್ಲಿ ಕುಳಿತಿದ್ದ ಕೃಷ್ಣ ನೋಡುತ್ತಿದ್ದ. ಅಧರ್ಮದ ಮುಂದೆ ಧರ್ಮ ಸೋಲುವುದನ್ನು ಕೃಷ್ಣನಿಂದ ಸಹಿಸಲಾಗಲಿಲ್ಲ. ತಕ್ಷಣ ಸೂರ್ಯನನ್ನು ಮುಚ್ಚುವಂತೆ ಮೋಡಗಳಿಗೆ ಹೇಳಿದ. ಕತ್ತಲು ಆವರಿಸಿದ್ದನ್ನು ಕಂಡು ಸೂರ್ಯಾಸ್ತವಾಯಿತು ಎಂದು ಭ್ರಮಿಸಿ ಕೌರವರು ಕುಣಿದರು. ಅರ್ಜುನ ಸೂರ್ಯ ಮರೆಯಾದುದನ್ನು ನೋಡಿ, ಭಾರವಾದ ಹೃದಯದಿಂದ ತಲೆಕೆಳಗೆ ಹಾಕಿ, ಗಾಂಡೀವವನ್ನು ಕೈ ಬಿಟ್ಟು ,ರಥದಿಂದ ಕೆಳಗಿಳಿಯುತ್ತಾನೆ. ತನ್ನ ಬಾಣಗಳಿಂದಲೇ ಚಿತೆಯನ್ನು ಮಾಡುತ್ತಾನೆ. ಅರ್ಜುನನು ಪ್ರಾಣತ್ಯಾಗ ಮಾಡುವುದನ್ನು ನೋಡಲು ಕೌರವರೆಲ್ಲ ಸಂತೋಷದಿಂದ ಓಡೋಡಿ ಬಂದು ಅಗ್ನಿ ಮುಂದೆ ನಿಂತರು. ಕೌರವರು ಸಂತೋಷದಿಂದ ಹುಚ್ಚರಾಗಿದ್ದರು. ಪಾಂಡವರ ಮೈಯಲ್ಲಿದ್ದ ಶಕ್ತಿಯೆಲ್ಲಾ ಉಡುಗಿ ಹೋಗಿತ್ತು. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಇಂಥ ಅಮೋಘವಾದ ದೃಶ್ಯ ಮುಂದೆ ಸಿಗುವುದಿಲ್ಲ ಎಂದುಕೊಂಡು ಅರ್ಜುನನನ್ನು ನೋಡಿ ಗೇಲಿಮಾಡಿ ನಗಲು ಚಕ್ರವ್ಯೂಹದೊಳಗೆ ಭದ್ರವಾಗಿದ್ದ ಜಯದ್ರಥನು ಈಚೆ ಬಂದು ಚಿತೆಯ ಮುಂದೆ ನಿಲ್ಲುತ್ತಾನೆ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕೃಷ್ಣನು ಮೋಡಗಳನ್ನು ಸರಿಸಿ ಸೂರ್ಯನನ್ನು ಮುಂದೆ ತರುತ್ತಾನೆ. ಇದ್ದಕ್ಕಿದ್ದಂತೆ ಸೂರ್ಯನ ಕಿರಣಗಳನ್ನು ಕಂಡ ಕೌರವ - ಪಾಂಡವರು ದಂಗಾಗಿಹೋದರು. ಕೃಷ್ಣ ಕೂಗಿ ಹೇಳಿದ "ಏ ಪಾರ್ಥ, ನೋಡು ನಿನ್ನ ಮಗನ ಶವವನ್ನು ಒದ್ದ ಶತ್ರು ನಿನ್ನ ಮುಂದೆ ನಿಂತಿದ್ದಾನೆ. ಮುಂದಿರುವ ಅಗ್ನಿ ದೇವನಿಗೆ ನಮಿಸು, ಗಾಂಡೀವವನ್ನು ಮೇಲೆತ್ತು, ಹೂಡು ನಿನ್ನ ಬಾಣ" ಎಂದು ಆದೇಶ ನೀಡಿದ. ಕ್ಷಣವೂ ತಡಮಾಡದ ಅರ್ಜುನ ಗಾಂಡೀವ ಎತ್ತಿದ, ಬಾಣ ಹೂಡಿ ಓಡುತ್ತಿದ್ದ ಜಯದ್ರಥನ ಶಿರಶ್ಚೇದ ಮಾಡಿದ. ಕ್ಷಣಮಾತ್ರದಲ್ಲಿ ಗುಡುಗು-ಮಿಂಚು ಅಬ್ಬರಿಸಿದಂತೆ ಎಲ್ಲವೂ ನಡೆದು ಹೋಯಿತು. ಜಯದ್ರಥನನ್ನು ಹೊಡೆದು ಜಯ ಸಾಧಿಸಿದ್ದು ಅರ್ಜುನನೇ ಆದರೂ, ಸೇಡಿಗೆ ಸೇಡು, ಎಂಬ ಕೃಷ್ಣನು ಚಾಣಾಕ್ಷತನದಿಂದ ತನ್ನ ಸೋದರಳಿಯ ಅಭಿಮನ್ಯುವನ್ನು ಕೊಂದು ಆ ಶವವನ್ನು ಕಾಲಿನಿಂದ ತಳ್ಳಿದ ಜಯದ್ರಥ ನ ಶಿರಸ್ಸನ್ನು , ಅರ್ಜುನನ ಮೂಲಕ ತಲೆಯಿಂದ ಬೇರೆ ಮಾಡಿಸಿ ಸೇಡು ತೀರಿಸಿಕೊಂಡನು. ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್, ಆಶ್ಚರ್ಯವದ್ವದತಿ ತಥೈವ ಚಾನ್ಯ, ಆಶ್ಚರ್ಯ ವಚ್ಚೈ ನಮನ್ಯ ಶೃಣೋತಿ, ಶ್ರುತ್ವಾ ಪ್ಯೇ ನಂ ವೇದ ನ ಚೈವ ಕಶ್ಚಿತ್! ಒಬ್ಬ ಈತನನ್ನು ಅದ್ಭುತದಂತೆ ಕಾಣುತ್ತಾನೆ. ಮತ್ತೊಬ್ಬ ಅದ್ಭುತದಂತೆ ಹೇಳುತ್ತಾನೆ. ಮಗದೊಬ್ಬ ಅದ್ಭುತದಂತೆ ಕೇಳುತ್ತಾನೆ. ಹೀಗೆ ಕೇಳಿದ ಮೇಲೂ ಯಾರು ಈತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರರು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat
#ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ #ಲಲಿತಾ ಸಹಸ್ರನಾಮ ಶ್ರೀ ಲಲಿತಾ ಸಹಸ್ರನಾಮದ ಸ್ತೋತ್ರ ಮತ್ತು ಅರ್ಥ:- 73-74. ಕಾಮ್ಯಾ, ಕಾಮಕಲಾರೂಪಾ, ಕದಂಬ ಕುಸುಮಪ್ರಿಯಾ | ಕಲ್ಯಾಣೀ ,ಜಗತೀಕಂದಾ , ಕರುಣಾರಸ ಸಾಗರಾ ||73|| ಜಗಜ್ಜನನೀಯು ಕಾಮ್ಯಳು,ಕಾಮಕಲಾ ರೂಪದಲ್ಲಿ ಇರುವವಳು, ಕದಂಬ ಕುಸುಮ ಪ್ರಿಯಳು , ಮಂಗಳ ಸ್ವರೂಪಳು, ಜಗತ್ತಿಗೆ ಮೂಲವಾಗಿರುವವಳು ಕರುಣಾರಸದ ಸಾಗರವಾಗಿರುವವಳು. ಕಲಾವತೀ, ಕಲಾಲಾಪಾ, ಕಾಂತಾ, ಕಾದಂಬರೀಪ್ರಿಯಾ | ವರದಾ, ವಾಮನಯನಾ, ವಾರುಣೀಮದವಿಹ್ವಲಾ ||74|| ಶ್ರೀ ದೇವಿಯು 64 ಕಲಾ ವಿದ್ಯೆಗಳ ಸ್ವರೂಪಳು, ಮಂಜುಳವಾದ ಆಲಾಪ ಉಳ್ಳವಳು, ಕಮನೀಯ, ಸ್ವರೂಪಳು, ಕಾದಂಬರೀ (ಒಂದು ವಿಧದ ಮಾದಕ ದ್ರವ್ಯ) ಪ್ರಿಯಳು, ವರವನ್ನು ಕೊಡುವವಳು, ಸುಂದರವಾದ ಕಣ್ಣುಗಳುಳ್ಳವಳು, ವಾರುಣೀ (ಖರ್ಜೂರ) ಯಿಂದ ಉತ್ಪನ್ನವಾದ ರಸಪಾನದ ಆನಂದದಿಂದ ವಿಹ್ವಲಳಾಗಿರುವವಳು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ - aa aa - ShareChat
#ಅಮ್ಮ ಮಾತೃದೇವೋ ಭವ :- ಒಬ್ಬ ತಾಯಿಗೆ ಮಗನಿದ್ದ. ಬೆಳೆದು ಯುವಕನಾಗಿದ್ದ. ಮನೆಯಲ್ಲಿ ಬಡತನ. ಬೇರೆಯವರ ಮನೆ ಚಾಕರಿ ಮಾಡಿ ಮಗನನ್ನು ಸಾಕಿದ್ದಳು. ಅವಳಿಗೂ ವಯಸ್ಸಾಗಿತ್ತು ಕೆಲಸ ಮಾಡಲು ಸಾಗುತ್ತಿರಲಿಲ್ಲ . ಹೇಗೋ ಮಗ ದೊಡ್ಡವನಾಗಿದ್ದಾನೆ ಒಂದು ಮದುವೆ ಮಾಡಿದರೆ, ಸೊಸೆ ಮನೆಯಲ್ಲಿ ಸುಧಾರಿಸಿಕೊಂಡು ಹೋಗುತ್ತಾಳೆ, ತಾನು ಹಾಯಾಗಿ ಇರಬಹುದು ಎಂದು ಚಿಂತಿಸಿದಳು. ಹೀಗಿರುವಾಗ ಒಂದು ದಿನ ಮಗ ತಾಯಿ ಮುಂದೆ ಬಂದು ಅಮ್ಮ ನನಗೆ ದೇವರನ್ನು ನೋಡಬೇಕೆಂಬ ಆಸೆ ಇದೆ. ನಾನು ಆಗಲೇ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ. ಹೇಗೆ ಕಾಣುವುದು ಅಮ್ಮ ಎಂದು ಕೇಳಿದ. ತಾಯಿಯ ಆಲೋಚನೆ ಮಗನ ಮದುವೆ ಮಾಡಬೇಕೆಂದು, ಮಗನ ಅಪೇಕ್ಷೆ ದೇವರನ್ನು ಕಾಣಬೇಕು ಎಂದು. ಯಾರ ಅಪೇಕ್ಷೆ ಏನಿದಿಯೋ ಯಾರಿಗೆ ಗೊತ್ತು ಎಂದುಕೊಂಡ ತಾಯಿ ಮಗನಿಗೆ ಹೋಗುವುದು ಬೇಡ ಎಂದು ಹೇಳಲು ಮನಸ್ಸು ಬರಲಿಲ್ಲ. ಮಗು ನೀನು ದೇವರನ್ನು ಕಾಣಲು ಹೋಗುತ್ತಿ ರುವೆ ಒಳ್ಳೆಯದು ಹೋಗು ಮಗನೆ ಮುಂಜಾನೆ ಬುತ್ತಿ ಕಟ್ಟಿ ಕೊಡುತ್ತೇನೆ ಹೋಗಿ ಬಾ ಎಂದಳು. ತಾಯಿ ಬೆಳಗ್ಗೆ ಎದ್ದು ಹಿಟ್ಟು ಕಲಸಿರೊಟ್ಟಿ ತಟ್ಟಿ ಎಲೆ ಮೇಲೆಟ್ಟು ರೊಟ್ಟಿ ಮೇಲೆ ಚಟ್ನಿಪುಡಿ ಹಾಕಿ ಹಳೆಯ ಬಟ್ಟೆ ತುಂಡಿನಲ್ಲಿಟ್ಟು ಕಟ್ಟಿ ಮಗನ ಕೈಗೆ ಕೊಟ್ಟಳು ಹಾಗೆಯೇ, ಮಗ ನೀನು ದೇವರನ್ನು ಕಾಣಲು ಹೊರಟಿರುವೆ, ತುಂಬಾ ಒಳ್ಳೆಯ ಯೋಚನೆ, ಎಂತೆಂಥ ಸಾಧು-ಸಂತರೆಲ್ಲ ದೇವರನ್ನು ಕಾಣುವ ಸಲುವಾಗಿ ಪ್ರಯತ್ನಿಸುತ್ತಾರೆ. ನಿನಗೆ ಭಗವಂತನ ದರ್ಶನವಾಗಲಿ ಆದರೆ ನನ್ನ ಒಂದು ಮಾತನ್ನು ನಡೆಸಿಕೊಡು. ನೀನು ದೇವರನ್ನು ಕಂಡ ಮೇಲೆ ಮನೆಗೆ ಬಂದು ದೇವರು ಹೇಗಿದ್ದಾನೆ ಎಂಬುದನ್ನು ನನಗೂ ಹೇಳು ಮಗು ಎಂದಳು. ಆ ಹುಡುಗ ಆಯಿತು ಎಂದು ತಾಯಿಗೆ ಹೇಳಿ ದೇವರನ್ನು ಕಾಣಲು ಹೊರಟ ಹೊರಟು ಬಹಳ ಸಮಯವಾಯಿತು, ಕಾಡೆಲ್ಲ ಸುತ್ತಿದ, ಬೆಟ್ಟ ಗುಡ್ಡ ಹತ್ತಿದ, ಗುಹೆಗಳಲ್ಲಿ ಕುರಿತು ಧ್ಯಾನ ಮಾಡಿದ, ನದಿ ತಟಗಳಲ್ಲಿ ಕುಳಿತು ತಪಸ್ಸು ಮಾಡಿದ. ಆದರೆ ಅವನಿಗೆ ಯಾವ ದೇವರು ದರ್ಶನ ಕೊಡಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.ಇನ್ನು ಸಾಕು ಮನೆಗೆ ಹೋಗೋಣ ಎಂದು ಹೊರಟು ಬಂದ. ಅವನು ಬರುವ ಸಮಯಕ್ಕೆ ಮುಸ್ಸಂಜೆ ಆಗಿತ್ತು . ಗುಡಿಸಲ ಮುಂದೆ ನಿಂತಿದ್ದಾನೆ ಒಳಗೆ ತಾಯಿ ದೇವರ ಮುಂದೆ ದೀಪ ಹಚ್ಚಿ ನನ್ನ ಮಗನಿಗೆ ನಿನ್ನ ದರ್ಶನ ಮಾಡಿಸು ಅವನುನಿನ್ನನ್ನು ನೋಡುವ ಸಲುವಾಗಿ ಹೊರಟಿದ್ದಾನೆ. ಬಹಳ ದಿನಗಳಾಗಿದೆ ಅವನಿಗೆ ನಿನ್ನ ದರ್ಶನ ಭಾಗ್ಯವನ್ನು ಬೇಗ ಕೊಡು ಎಂದು ಕೈಮುಗಿದು ಬೇಡುತ್ತಿದ್ದಳು. ಆ ದೀಪದ ಬೆಳಕು ಅವಳ ಮುಖದ ಮೇಲೆ ಬಿದ್ದು ತಾಯಿಯ ಮುಖದ ಪ್ರಶಾಂತ ತೆಯಿಂದ ದಿವ್ಯವಾದ ತೇಜಸ್ಸು ತುಂಬಿತ್ತು. ದೇವರನ್ನು ಹುಡುಕಲು ಹೊರಟ ಮನೆಗೆ ಬಂದು ದೇವರ ದೀಪದ ಬೆಳಕಿನಲ್ಲಿ ಅಮ್ಮನ ಮಮತೆ ತುಂಬಿದ ಮುಖವನ್ನು ನೋಡಿದ. ಆಗ ಮನಸ್ಸಿನಲ್ಲಿ ಬಂದಿತು ಎಂಥಾ ಕರುಣಾಮಯಿ ದಯಾಮಯಿ ನನ್ನಮ್ಮ. ತಾಯಿಗಿಂತ ಬೇರೆ ದೇವರು ಉಂಟೇ ಆ ಕ್ಷಣವೇ ಅಮ್ಮಾ ಎಂದು ಕೂಗಿದ. ಮಗನ ದೇವರಲ್ಲಿ ಪ್ರಾರ್ಥಿಸುತ್ತಿದ್ದ ತಾಯಿ ಹೊರಗೆ ಓಡಿ ಬಂದಳು ಮಗನನ್ನು ಕಂಡು ಅವನ ತಲೆಯನ್ನು ನೇವರಿಸಿ ಮಗು ಈಗ ಬಂದೆಯಾ ದೇವರನ್ನು ಕಂಡೆಯಾ? ಹೆಂಗಿದ್ದಾನೆ ಎಂದು ಕೇಳಿದಳು? ಮಗ ಹೇಳಿದ ಅಮ್ಮ ನಾನು ದೇವರನ್ನು ಕಂಡೆ ಕಾಡು ಮೇಡುಗಳಲ್ಲಿ, ಪರ್ವತಗಳ ತುದಿಯವರೆಗೂ ಹತ್ತಿದೆ, ನದಿ ತೀರಗಳಲ್ಲಿ ಕುಳಿತು ತಪಸ್ಸು ಮಾಡಿದೆ ಗುಹೆ ಗಳಲ್ಲಿ ಕುಳಿತು ಧ್ಯಾನ ಮಾಡಿದೆ. ಎಲ್ಲಿ ಹುಡುಕಿದರು ದೇವರು ಕಾಣಲಿಲ್ಲ. ಜಗವೆಲ್ಲ ಸುತ್ತಿ ಮನೆಗೆ ಬಂದೆ ದೇವರ ದೀಪದ ಬೆಳಕು ನಿನ್ನ ಮುಖದ ಮೇಲೆ ಬಿದ್ದಿತ್ತು ಅಲ್ಲಿ ದೇವರನ್ನು ಕಂಡೆ ಎಂದು ತಾಯಿಯನ್ನು ಅಪ್ಪಿ ಹಿಡಿದುಕೊಂಡು. ತಾಯಿಗಿಂತ ಬೇರೆ ದೇವರಿಲ್ಲ ಅಮ್ಮಾ ನನ್ನಮ್ಮ ನೀನೇ ನನಗೆಲ್ಲ. ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ನಿನ್ನ ಸಂಗ ಆಡಲೆಂದು ಬಂದೆ ನಾನು!! ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು ಬಣ್ಣದ ಬಣ್ಣದ ಚಿಟ್ಟೆಯನ್ನು ನೀನೇ ನೀನು!! ರೆಕ್ಕೆ ಬಂದ ಹಾರುವೆ ಹಾಗೆ ನಾನು ಅಕ್ಕರೆಯ ತೋರಿ ಎನ್ನ ಅಪ್ಪು ನೀನು!! ಅಮ್ಮಾ!! ಊರು ಬೇಡ ಕೇಳಿ ಬೇಡ ಯಾರು ಬೇಡಾ ಅಮ್ಮ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡಾ ತಾಯಿ ತಂದೆ ಬಂಧು ಬಳಗ ನೀನೆ ಎಲ್ಲಾ ನಿನಗಿಂತ ಬೇರೆ ದೇವರಿಲ್ಲಾ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
ಅಮ್ಮ - Nagabhushana Stories Asho Nagabhushana Stories Asho - ShareChat