ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ.
#sadhguru #SadhguruKannada #ಸದ್ಗುರು #dailyquotes #Kannada
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ.
#amavasya #hunnime #dhyanalinga #isha foundation #sadhguru
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಇದು ಐಕ್ಯತೆ, ಸರ್ವರನ್ನೂ ಒಳಗೊಳ್ಳುವಿಕೆ ಮತ್ತು ಮುಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಉಚಿತವಾಗಿ ನೋಂದಾಯಿಸಿ : sadhguru.co/ym
#IshaMahashivratri2026YLMA #IshaMahashivratri2026 #Mahashivratri2026 #SadhguruKannada #sadhguru
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು.
#sadhguru #SadhguruKannada #dailyquotes #ಸದ್ಗುರು #Kannada
"ಪುರಾಣಗಳ ಪ್ರಕಾರ, ಚಂದ್ರನು ಕ್ಷೀಣಿಸಿ ಇಲ್ಲವಾಗುವಂತೆ ಶಾಪಗ್ರಸ್ತನಾಗಿದ್ದನು. ಶಿವನು ಮಧ್ಯಪ್ರವೇಶಿಸಿ, ಚಂದ್ರನನ್ನು ರಕ್ಷಿಸಲು ಅವನನ್ನು ತನ್ನ ತಲೆಯ ಮೇಲೆ ಧರಿಸಿದ ಮತ್ತು ಆ ಮೂಲಕ ಶಿವ ಸೋಮೇಶ್ವರನಾದ: ಅವನು ಶಾಪವನ್ನಾಗಲೀ ಅಥವಾ ಪ್ರಕೃತಿಯ ನಿಯಮವನ್ನಾಗಲೀ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಬದಲಿಗೆ ಅದರ ತೀವ್ರತೆಯನ್ನು ತಗ್ಗಿಸುತ್ತಾನೆ. ಅರ್ಧಚಂದ್ರನನ್ನು ಧರಿಸುವ ಮೂಲಕ, ಶಿವ, ಚಂದ್ರನ ನಿಧಾನಗತಿಯ ಕ್ಷೀಣಿಸುವಿಕೆಯನ್ನು ನವೋಲ್ಲಾಸದ ಆವರ್ತನವನ್ನಾಗಿ (ಚಂದ್ರನ ಆವರ್ತನಗಳು) ಬದಲಿಸಿದ.
#shiva #moon #beautiful #IshaMahashivratri2026 #SadhguruKannada
ಜೀವನವು ಅದರ ಗುರಿಯಲ್ಲಿಲ್ಲ. ಜೀವನ ಇರುವುದು ಅದರ ಪ್ರಕ್ರಿಯೆಯಲ್ಲಿ – ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ ಅನುಭವಿಸುತ್ತಿದ್ದೀರಿ ಎಂಬುದರಲ್ಲಿ.
#sadhguru #SadhguruKannada #ಸದ್ಗುರು #dailyquotes #kanada
"ನಂದಿ ಕಿವಿಯಲ್ಲಿ ಮಾತಾಡೋದು ಸರಿಯಾ?
#nandi #shiva #IshaMahashivratri2026 #sadhguru #Kannada
ಹೊಸ ಸನ್ನಿವೇಶಗಳು ಎದುರಾದಾಗ, ಅವು ನಿಮಗೆ ಇಷ್ಟವಿಲ್ಲದಿದ್ದರೂ, ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮಲ್ಲಿ ಪ್ರತಿರೋಧ ಕಡಿಮೆಯಾದಷ್ಟೂ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತೀರಿ.
#sadhguru #SadhguruKannada #ಸದ್ಗುರು #dailyquotes #Kannada
ಜನವರಿ 18, ಅಮಾವಾಸ್ಯೆಯ ಪವಿತ್ರ ದಿನದಂದು ಕವರನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀದೇವಮ್ಮನವರನ್ನು ಪಲ್ಲಕ್ಕಿಯಲ್ಲಿ ಸದ್ಗುರು ಸನ್ನಿಧಿಗೆ ಕರೆತಂದರು.
ಊರಿನ ಜನರೆಲ್ಲರೂ ಒಗ್ಗೂಡಿ, ಯೋಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಪ್ರದಾಯ ಮತ್ತು ಭಕ್ತಿಯ ಈ ಅದ್ಭುತ ಸಂಗಮವನ್ನು ತಪ್ಪದೇ ಕಣ್ತುಂಬಿಕೊಳ್ಳಿ 🙏
#gramadevathe #yogeshwaralinga #isha foundation chikkaballapur #SadhguruSannidhi #bengaluru
ಸಮೃದ್ಧತೆಯು ನಿಮ್ಮ ಬಟ್ಟೆಬರೆ, ಮನೆ, ಅಥವಾ ಕಾರ್ಗೆ ಸಂಬಂಧಿಸಿದುದಲ್ಲ. ನೀವು ಸಂತೋಷ, ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ.
#sadhguru #SadhguruKannada #ಸದ್ಗುರು #dailyquotes #Kannada









