"ಸದ್ಗುರುಗಳು ಮತ್ತು ಆದಿಯೋಗಿಯ ಸಾನ್ನಿಧ್ಯದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿ. ಈಗಲೇ ಈ ದಿನಾಂಕವನ್ನು ಕಾಯ್ದಿರಿಸಿ: 15 ಫೆಬ್ರವರಿ 2026.
ಈ ವರ್ಷ, ಮೊಟ್ಟಮೊದಲ ಬಾರಿಗೆ, ಮಹಾಶಿವರಾತ್ರಿಯ ಪವಿತ್ರ ರಾತ್ರಿಯಂದು, ಸದ್ಗುರುಗಳು 'ಯೋಗೇಶ್ವರ ಲಿಂಗ ಮಹಾ ಅಭಿಷೇಕ'ವನ್ನು ಅರ್ಪಿಸಲಿದ್ದಾರೆ. ಇದು ಶಕ್ತಿಯುತ ಪಠಣಗಳು ಮತ್ತು ಅರ್ಪಣೆಗಳನ್ನು ಒಳಗೊಂಡ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಂಡು ಇದರ ಅನುಭೂತಿ ಪಡೆಯಬಹುದು.
#IshaMahashivratri2026 #Mahashivratri2026 #shiva #sadhguru #SadhguruKannada
ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೊರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ನೀವು ಮೀರಿ ಹೋದರೆ, ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ನಿರಾಳತೆಯನ್ನು ಹೊಂದುವುದು.
#sadhguru #SadhguruKannada #ಸದ್ಗುರು #dailyquotes #Kannada
"ಭಕ್ತಿಯ ಪವಿತ್ರ ಅರ್ಪಣೆ: ಮಹಾ ಅನ್ನದಾನ
ಮಹಾಶಿವರಾತ್ರಿಯ ಪವಿತ್ರ ರಾತ್ರಿಯಲ್ಲಿ ನೈಸರ್ಗಿಕವಾಗಿ ಜೀವಶಕ್ತಿಯ ಉತ್ಕರ್ಷವುಂಟಾಗುತ್ತದೆ; ಅಂತಹ ಶುಭ ಘಳಿಗೆಯಲ್ಲಿ ಸಾತ್ವಿಕ ಆಹಾರವನ್ನು ಅರ್ಪಿಸುವ ಮೂಲಕ ಚೈತನ್ಯವನ್ನು ಪೋಷಿಸುವುದೇ ಮಹಾ ಅನ್ನದಾನ. ಈ ಪವಿತ್ರ ರಾತ್ರಿಯ ಸಂಭ್ರಮಾಚರಣೆಯಲ್ಲಿ ಸಾವಿರಾರು ಅನ್ವೇಷಕರು ಮತ್ತು ಅತಿಥಿಗಳು ಪೋಷಣೆ ಪಡೆಯುವಂತಾಗಲು, ಸ್ವಯಂಸೇವಕರು ರಾತ್ರಿಯಿಡೀ ಅತೀವ ತನ್ಮಯತೆ ಹಾಗೂ ಸಮರ್ಪಿತ ಭಾವದಿಂದ ಸೇವೆಯಲ್ಲಿ ತೊಡಗುತ್ತಾರೆ. ಈ ಮಹಾ ಅನ್ನದಾನವನ್ನು ಬೆಂಬಲಿಸುವ ಮೂಲಕ ಧನ್ಯತೆಯನ್ನು ಅನುಭವಿಸಿ.
ದೇಣಿಗೆ ನೀಡಿ/ಸ್ವಯಂಸೇವಕರಾಗಿ : sadhguru.co/annam
#IshaMahashivratri2026 #Mahashivratri2026 #annadana #food #SadhguruKannada
ನೀವು ಸಿಟ್ಟು, ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ, ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ.
#sadhguru #SadhguruKannada #ಸದ್ಗುರು #dailyquotes #Kannada
ವಿಜಿ ಅಮ್ಮನವರ ಸಮಾಧಿಯ ಬಳಿ ಸದ್ಗುರುಗಳು. 29 ವರ್ಷಗಳ ಹಿಂದೆ, ತೈಪೂಸಂ ದಿನದಂದು ವಿಜಿ ಅಮ್ಮನವರು ಮಹಾಸಮಾಧಿಯನ್ನು ಹೊಂದಿದರು.
#SadhguruKannada #sadhguru #vijjimaa #Mahasamadhi #isha foundation
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ ಸದ್ಗುರುಗಳು ಅರ್ಪಿಸುತ್ತಿರುವ ಯೋಗೇಶ್ವರ ಲಿಂಗದ ಮಹಾ ಅಭಿಷೇಕವು ಒಂದು ಶಕ್ತಿಯುತ ಆಧ್ಯಾತ್ಮಿಕ ಸಾಧ್ಯತೆಯಾಗಿದೆ.
ಉಚಿತವಾಗಿ ನೋಂದಾಯಿಸಿ: sadhguru.co/ym
#mahaabhishekam #IshaMahashivratri2026YLMA #IshaMahashivratri2026 #Mahashivratri2026 #ಸದ್ಗುರು
ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ ಉದಾರವಾದುದು. ಯಾರು ಈ ಸ್ವೀಕೃತಿಯ ಪರಾಕಾಷ್ಠೆಯನ್ನು ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು ತೆರೆದುಕೊಳ್ಳುವಂತಾಗಲಿ.
#sadhguru #SadhguruKannada #ಸದ್ಗುರು #dailyquotes #Kannada
"ಶಿವ - ದೇವರೋ ಅಥವಾ ಮಿಥ್ಯೆಯೋ?
#SadhguruKannada #IshaMahashivratri2026 #shiva #god #sadhguru
"ಶಿವನ ಬಳಿ ಏನನ್ನು ಬೇಡಬೇಕು?
#IshaMahashivratri2026 #Mahashivratri2026 #SadhguruKannada #sadhguru #shiva
"ಶಿವನ ಮೃತ್ಯುಂಜಯ ರೂಪವು, ಆತ “ಮರಣವನ್ನು ಜಯಿಸಿದವ” ಎನ್ನುವುದನ್ನು ಪ್ರತಿನಿಧಿಸುತ್ತದೆ. ಇದು ಭೌತಿಕ ದೇಹದಲ್ಲಿ ಶಾಶ್ವತವಾಗಿ ಬದುಕುವುದರ ಬಗ್ಗೆಯಲ್ಲ; ಇದು ಭೌತಿಕ ಆಯಾಮವನ್ನು ಸಂಪೂರ್ಣವಾಗಿ ಮೀರುವ ಮೂಲಕ ಮರಣದ ಭಯವನ್ನು ಜಯಿಸುವುದರ ಬಗ್ಗೆಯಾಗಿದೆ.
#IshaMahashivratri2026 #SadhguruKannada #shiva #mahamrityunjayamantra #sadhguru







