
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
ಹತ್ತಲು ಯಾವಾಗಲೂ ಇನ್ನೊಂದು ಮೆಟ್ಟಿಲು ಇದ್ದೇ ಇದೆ. ಜೀವನವು ಜೀವಿಸಲು ಅರ್ಹವಾಗಿರುವುದು ಅದಕ್ಕೇ.
#sadhguru #SadhguruKannada #dailyquotes #sadhguruquotes #Kannada
"ಅತ್ಯಧಿಕ ಶಕ್ತಿಯುಳ್ಳ ಎಲೆಗಳು
ಬೇವು ಮತ್ತು ಬಿಲ್ವ ಪತ್ರೆಯ ಮಹತ್ವದ ಕುರಿತು ಮಾತನಾಡುವ ಸದ್ಗುರುಗಳು, ಅವುಗಳ ಅನನ್ಯ ಗುಣಗಳು, ಶಕ್ತಿಯನ್ನು ಸಂಗ್ರಹಿಸುವ ಹಾಗೂ ಹೊರಹೊಮ್ಮಿಸುವ ಸಾಮರ್ಥ್ಯ ಮತ್ತು ಶಿವನೊಂದಿಗಿನ ಅವುಗಳ ವಿಶೇಷ ಸಂಬಂಧದ ಬಗ್ಗೆ ವಿವರಿಸುತ್ತಾರೆ.
ಸಂಪೂರ್ಣ ವಿಡಿಯೋವನ್ನು Sadhguru Kannada ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಿ.
#IshaMahashivratri2026 #SadhguruKannada #shiva #Bilva #Neem
"ಶಿವನನ್ನು ಅವನ ಕುತ್ತಿಗೆಯ ಸುತ್ತ ಹೆಡೆ ಎತ್ತಿದ ಸರ್ಪದೊಂದಿಗೆ ವರ್ಣಿಸಲಾಗುತ್ತದೆ. ಇದು ಪ್ರಾಣಶಕ್ತಿಗಳು ಉತ್ತುಂಗವನ್ನು ತಲುಪಿರುವುದರ ಸೂಚಕವಾಗಿದೆ. -ಸದ್ಗುರು
#shiva #naga #IshaMahashivratri2026 #sadhguru #SadhguruKannada
ಸಂಗೀತವು ಒಂದು ಪರಿಶೋಧನೆಯಾಗಬೇಕು, ಜೀವನವನ್ನು ಶ್ರೀಮಂತವಾಗಿಸಬೇಕು. ಅದು ಯಾಂತ್ರಿಕವಾದರೆ, ಯಂತ್ರಗಳೇ ಅದನ್ನು ಮಾಡುವುವು – ಅವು ಯಾವತ್ತಿದ್ದರೂ ಯಾಂತ್ರಿಕವಾದುದನ್ನು ನಮಗಿಂತ ಚೆನ್ನಾಗಿ ಮಾಡಬಲ್ಲವು.
#sadhguru #SadhguruKannada #sadhguruquotes #dailyquotes #Kannada
"ಶಿವನ ಕಾರ್ಯಗಳು ಪಾರ್ವತಿಗೆ ಏಕೆ ಗೊಂದಲವುಂಟುಮಾಡಿದವು?
#IshaMahashivratri2026 #sadhguru #shiva #spirituality #SadhguruKannada
"ಪ್ರಾಣಶಕ್ತಿಯಲ್ಲಿ ಸಹಜ ಉತ್ಕರ್ಷವಿರುವ ರಾತ್ರಿಯಾದ ಮಹಾಶಿವರಾತ್ರಿಯಂದು ನೀಡಲಾಗುವ ಮಹಾ ಅನ್ನದಾನವು ಸಾತ್ತ್ವಿಕ ಆಹಾರದ ಅರ್ಪಣೆಯಾಗಿದೆ. ಸ್ವಯಂಸೇವಕರು ಭಕ್ತಿಯಿಂದ ಸಿದ್ಧಪಡಿಸುವ ಅಡುಗೆಯಿಂದ, ಸಾವಿರಾರು ಸಾಧಕರು, ಸ್ವಯಂಸೇವಕರು ಮತ್ತು ಅತಿಥಿಗಳು ಈ ಮಂಗಳಕರ ರಾತ್ರಿ ಹಾಗೂ ಅದರ ಸಂಭ್ರಮಾಚರಣೆಯ ಸಮಯದಲ್ಲಿ ಪೋಷಣೆ ಪಡೆಯುತ್ತಾರೆ. ಮಹಾ ಅನ್ನದಾನಕ್ಕೆ ನೆರವು ನೀಡಿ.
ದೇಣಿಗೆ ನೀಡಿ/ಸ್ವಯಂಸೇವೆ ಮಾಡಿ : sadhguru.co/annam
#mahashivratri #Adiyogi #IshaMahashivratri2026 #Mahannadanam2026 #sadhguru
ನಿಮಗೆ ಕಾಳಜಿಯಿರುವುದನ್ನು ಮಾಡಲು ನೀವು ನಿಜವಾಗಿಯೂ ಬದ್ಧರಾಗಿದ್ದರೆ, ಇಡೀ ಜಗತ್ತು ನಿಮಗೆ ಬೆಂಬಲವನ್ನು ನೀಡುವುದು.
#sadhguru #SadhguruKannada #dailyquotes #sadhguruquotes #Kannada
ನಿಮ್ಮ ಪ್ರಜ್ಞಾಶಕ್ತಿಯು ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದರೆ, ನೀವು ನಿಮ್ಮೊಳಗೆ ತೊಳಲಾಟವನ್ನು ಉಂಟುಮಾಡಿಕೊಳ್ಳುತ್ತಿರಲಿಲ್ಲ. ನಿಮ್ಮೊಳಗೆ ನೀವು ಅತ್ಯುತ್ತಮವಾದ ಸ್ಥಿತಿಯನ್ನು ಉಂಟುಮಾಡಿಕೊಳ್ಳುತ್ತಿದ್ದಿರಿ, ಮತ್ತು ಹೊರಗಡೆ ನಿಮ್ಮ ಕೈಲಾದಷ್ಟನ್ನು ಮಾಡುತ್ತಿದ್ದಿರಿ.
#sadhguru #SadhguruKannada #sadhguruquotes #dailyquotes #Kannada
"ಸದ್ಗುರುಗಳಿಂದ ಶಂಭೋ ಪಠಣ | ಸೌಂಡ್ಸ್ ಆಫ್ ಈಶ
ಶಂಭೋ - ಈ ಪಠಣವು ನಿಮ್ಮೊಳಗಿನ ಪರಮೋನ್ನತ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂಭವಿಸಬಹುದಾದ ಅತ್ಯಂತ ಮಂಗಳಕರ ಸಂಗತಿಯನ್ನು ಸಂಕೇತಿಸುತ್ತದೆ.
ಫೆಬ್ರವರಿ 15 ರಂದು ನಡೆಯಲಿರುವ ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಆನ್ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ.
#SadhguruKannada #chant #shiva #IshaMahashivratri2026 #sadhguru
ಜಗತ್ತಿನಲ್ಲಿ ನಾವು ಏನಾಗಿದ್ದೇವೆ ಎಂಬುದು ನಾವಿರುವ ಕಾಲಮಾನ ಮತ್ತು ಸನ್ನಿವೇಶಗಳಿಂದ ರೂಪಿಸಲ್ಪಡುತ್ತದೆ. ಆದರೆ ನಮ್ಮ ಅಂತರಂಗದಲ್ಲಿ ನಾವು ಏನಾಗಿದ್ದೇವೆ ಎಂಬುದು ಎಂದಿಗೂ ಈ ವಿಷಯಗಳಿಂದ ರೂಪಿಸಲ್ಪಡಬಾರದು.
#sadhguru #SadhguruKannada #dailyquotes #sadhguruquotes #Kannada







