ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಕ್ತರು ಧ್ಯಾನಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ನಂತರ ಈ ಪವಿತ್ರ ಹಾಲನ್ನು ಹತ್ತಿರದ ಬುಡಕಟ್ಟು ಹಳ್ಳಿಗಳಲ್ಲಿ ಪ್ರೀತಿಯಿಂದ ವಿತರಿಸಲಾಗುತ್ತದೆ.
#amavasya #hunnime #dhyanalinga #isha foundation #sadhguru
ಈ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ. ಈ ಶಕ್ತಿಯುತ ಪ್ರಕ್ರಿಯೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಆದಿಯೋಗಿಯ ಯೋಗೇಶ್ವರ ರೂಪದೊಂದಿಗೆ ಸಂಪರ್ಕ ಸಾಧಿಸಲು ಒಂದು ಅಪರೂಪದ ಅವಕಾಶವಾಗಿದ್ದು, ಇದು ಐಕ್ಯತೆ, ಸರ್ವರನ್ನೂ ಒಳಗೊಳ್ಳುವಿಕೆ ಮತ್ತು ಮುಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಉಚಿತವಾಗಿ ನೋಂದಾಯಿಸಿ : sadhguru.co/ym
#IshaMahashivratri2026YLMA #IshaMahashivratri2026 #Mahashivratri2026 #SadhguruKannada #sadhguru
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು.
#sadhguru #SadhguruKannada #dailyquotes #ಸದ್ಗುರು #Kannada
"ಪುರಾಣಗಳ ಪ್ರಕಾರ, ಚಂದ್ರನು ಕ್ಷೀಣಿಸಿ ಇಲ್ಲವಾಗುವಂತೆ ಶಾಪಗ್ರಸ್ತನಾಗಿದ್ದನು. ಶಿವನು ಮಧ್ಯಪ್ರವೇಶಿಸಿ, ಚಂದ್ರನನ್ನು ರಕ್ಷಿಸಲು ಅವನನ್ನು ತನ್ನ ತಲೆಯ ಮೇಲೆ ಧರಿಸಿದ ಮತ್ತು ಆ ಮೂಲಕ ಶಿವ ಸೋಮೇಶ್ವರನಾದ: ಅವನು ಶಾಪವನ್ನಾಗಲೀ ಅಥವಾ ಪ್ರಕೃತಿಯ ನಿಯಮವನ್ನಾಗಲೀ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಬದಲಿಗೆ ಅದರ ತೀವ್ರತೆಯನ್ನು ತಗ್ಗಿಸುತ್ತಾನೆ. ಅರ್ಧಚಂದ್ರನನ್ನು ಧರಿಸುವ ಮೂಲಕ, ಶಿವ, ಚಂದ್ರನ ನಿಧಾನಗತಿಯ ಕ್ಷೀಣಿಸುವಿಕೆಯನ್ನು ನವೋಲ್ಲಾಸದ ಆವರ್ತನವನ್ನಾಗಿ (ಚಂದ್ರನ ಆವರ್ತನಗಳು) ಬದಲಿಸಿದ.
#shiva #moon #beautiful #IshaMahashivratri2026 #SadhguruKannada
ಜೀವನವು ಅದರ ಗುರಿಯಲ್ಲಿಲ್ಲ. ಜೀವನ ಇರುವುದು ಅದರ ಪ್ರಕ್ರಿಯೆಯಲ್ಲಿ – ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ ಅನುಭವಿಸುತ್ತಿದ್ದೀರಿ ಎಂಬುದರಲ್ಲಿ.
#sadhguru #SadhguruKannada #ಸದ್ಗುರು #dailyquotes #kanada
"ನಂದಿ ಕಿವಿಯಲ್ಲಿ ಮಾತಾಡೋದು ಸರಿಯಾ?
#nandi #shiva #IshaMahashivratri2026 #sadhguru #Kannada
ಹೊಸ ಸನ್ನಿವೇಶಗಳು ಎದುರಾದಾಗ, ಅವು ನಿಮಗೆ ಇಷ್ಟವಿಲ್ಲದಿದ್ದರೂ, ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮಲ್ಲಿ ಪ್ರತಿರೋಧ ಕಡಿಮೆಯಾದಷ್ಟೂ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತೀರಿ.
#sadhguru #SadhguruKannada #ಸದ್ಗುರು #dailyquotes #Kannada
ಜನವರಿ 18, ಅಮಾವಾಸ್ಯೆಯ ಪವಿತ್ರ ದಿನದಂದು ಕವರನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀದೇವಮ್ಮನವರನ್ನು ಪಲ್ಲಕ್ಕಿಯಲ್ಲಿ ಸದ್ಗುರು ಸನ್ನಿಧಿಗೆ ಕರೆತಂದರು.
ಊರಿನ ಜನರೆಲ್ಲರೂ ಒಗ್ಗೂಡಿ, ಯೋಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಪ್ರದಾಯ ಮತ್ತು ಭಕ್ತಿಯ ಈ ಅದ್ಭುತ ಸಂಗಮವನ್ನು ತಪ್ಪದೇ ಕಣ್ತುಂಬಿಕೊಳ್ಳಿ 🙏
#gramadevathe #yogeshwaralinga #isha foundation chikkaballapur #SadhguruSannidhi #bengaluru
ಸಮೃದ್ಧತೆಯು ನಿಮ್ಮ ಬಟ್ಟೆಬರೆ, ಮನೆ, ಅಥವಾ ಕಾರ್ಗೆ ಸಂಬಂಧಿಸಿದುದಲ್ಲ. ನೀವು ಸಂತೋಷ, ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ.
#sadhguru #SadhguruKannada #ಸದ್ಗುರು #dailyquotes #Kannada
"ಶಿವನು ಈ ಭೂಮಿಯ ಮೇಲಿರುವ ಅತ್ಯಂತ ಚೈತನ್ಯಶೀಲ ಮತ್ತು ಪುರುಷತತ್ತ್ವದಿಂದ ಕೂಡಿರುವ ದೇವರು. ಅದರ ಜೊತೆಜೊತೆಗೆ, ಅವನನ್ನು “ಅರ್ಧನಾರಿ” ಎಂದೂ ಕರೆಯಲಾಗುತ್ತದೆ, ಅಂದರೆ ಅವನ ಅರ್ಧಭಾಗವು ಸ್ತ್ರೀ ಎಂದು ಅರ್ಥ. ನಿಮ್ಮಲ್ಲಿ ಪುರುಷತತ್ತ್ವ ಮತ್ತು ಸ್ತ್ರೀ ತತ್ತ್ವಗಳೆರಡೂ ಸಂಪೂರ್ಣವಾಗಿ ವಿಕಸನಗೊಂಡು ಸಮತೋಲನದಲ್ಲಿದ್ದಾಗ ಮಾತ್ರ ನೀವು ಒಬ್ಬ ಪರಿಪೂರ್ಣ ಮನುಷ್ಯನಾಗುತ್ತೀರಿ ಎಂಬುದನ್ನು ಇದು ಸಂಕೇತಿಸುತ್ತದೆ. ನಿಮ್ಮ ಮನಸ್ಸಿನ ಸ್ತರದಲ್ಲಿ ಇದರ ಅರ್ಥವೇನೆಂದರೆ, ನಿಮ್ಮ ತಾರ್ಕಿಕ ಮತ್ತು ಅಂತರ್ಬೋಧೆಯ ಆಯಾಮಗಳು ಸಮತೋಲನದಲ್ಲಿರುವುದಾಗಿದೆ. - ಸದ್ಗುರು
ಈಶ ಯೋಗ ಕೇಂದ್ರದಲ್ಲಿ ಫೆಬ್ರವರಿ 15 ರಂದು, ಸಂಜೆ 6 ರಿಂದ ನಡೆಯುವ ಮಹಾಶಿವರಾತ್ರಿ ಆಚರಣೆಗಳಲ್ಲಿ ಆನ್ಲೈನ್ ಮೂಲಕ ನೇರಪ್ರಸಾರದಲ್ಲಿ, ಅಥವಾ ಖುದ್ದಾಗಿ ಪಾಲ್ಗೊಳ್ಳಿ.
#sadhguru #IshaMahashivratri2026 #Adiyogi #Ardhanari #Kannada "








