༺🇻 🇮 🇸 🇭 🇺༻
ShareChat
click to see wallet page
@vishu_chandru
vishu_chandru
༺🇻 🇮 🇸 🇭 🇺༻
@vishu_chandru
ನನಗಿಂತ ಚಿಕ್ಕವನಿಲ್ಲ ಶಿವ ಭಕ್ತರಿಗಿಂತ ದೊಡ್ಡವರಿಲ್ಲ 🔱🕉
https://www.facebook.com/share/v/1aYzctGHUm/ #ಉಪಯುಕ್ತ ಮಾಹಿತಿ
ಉಪಯುಕ್ತ ಮಾಹಿತಿ - ShareChat
२.१ लाख व्ह्यू · ३.३ ह प्रतिक्रिया | ಏರ್ಪೋರ್ಟ್ನಲ್ಲಿ ಈ ಮರ ಕಂಡಾಗ ಹಳೆಯ ಆಟದ ನೆನಪಾಯ್ತು . ಉಚ್ಚೆಕಾಯಿ ಮೊಗ್ಗುಗಳಿಂದ ನೀರು ಚಿಮ್ಮಿಸುವ ಆಟ. ಆದರೆ ಮೊಗ್ಗಿನಲ್ಲಿ ಇಷ್ಟು ನೀರು ಏಕೆ? ಈ ಪ್ರಶ್ನೆ ನನ್ನನ್ನು ಆಫ್ರಿಕಾದ ಕಾಡುಗಳಿಗೆ, ಮೂಜಂಟಿ ಜೇನುಗಳ ಯುದ್ದಕ್ಕೆ, ಮತ್ತು ಸೂರಕ್ಕಿಗಳ ಕಳ್ಳತನಕ್ಕೆ ಕರೆದೊಯ್ತು. Spathodea campanulata - ನೀರುಕಾಯಿ ಮರ - ಮದ್ಯ ಆಫ್ರಿಕಾದಿಂದ ಬಂದ ಮರ. ಅಲ್ಲಿ ಟ್ರಿಗೋನ ಎಂಬ ಮೂಜಂಟಿ ಜೇನುಗಳು ಹೂವು ತೆರೆಯುವ ಮೊದಲೇ ಮೊಗ್ಗಿನಲ್ಲಿ ರಂದ್ರ ಹಾಕಿ ನೆಕ್ಟರ್ ಕದಿಯುತ್ತವೆ. ಇವು ಕುಟುಕಲು ಸಾದ್ಯವಿಲ್ಲ, ಆದರೆ 5 ಚೂಪಾದ ಹಲ್ಲುಗಳಿಂದ ಕಚ್ಚುತ್ತೆ. ಕಾಟ ತಾಳಲಾರದೆ, ಮರ ಒಂದು ಆಯ್ಕೆ ಮಾಡಿತ್ತು - ಮೊಗ್ಗಿನಲ್ಲಿಯೇ ವಿಶ ತುಂಬಿಸುವುದು. ಹಕ್ಕಿಗಳಿಗೆ ಮತ್ತು ಬಾವಲಿಗಳಿಗೆ ಈ ನಂಜು ಏನೂ ಮಾಡದು, ಆದರೆ ಜೇನುಗಳಿಗೆ ಮಾರಕ. ಬ್ರೆಜಿಲ್ನಲ್ಲಿ 96.8% ಜೇನುಗಳು ಮೊದಲ ದಿನದಲ್ಲೇ ಸಾಯುತ್ತವೆ (Castagnino et al. 2024). ಆದರೆ ಬಾರತಕ್ಕೆ ವಲಸೆ ಬಂದ ಮೇಲೆ ಹೊಸ ಸಮಸ್ಯೆ. ನಮ್ಮ ಸೂರಕ್ಕಿಗಳು (sunbird) ಬೇರೆ ತಂತ್ರ ಕಲಿತವು - ಹೂವಿನ ಅಡಿಯಲ್ಲಿ ಕನ್ನ ಹಾಕಿ ಮಕರಂದ ಕದ್ದು ಕುಡಿಯುವುದು. ಹೋದುಂಬಿವಿಕೆ ಆಗುವುದಿಲ್ಲ. ನಾನು ಪರೀಕ್ಷಿಸಿದ 20 ಹೂವುಗಳಲ್ಲಿ ಎಲ್ಲವೂ ರಂದ್ರಗಳಿಂದ ತುಂಬಿದ್ದವು. ಇದು “Red Queen Hypothesis” - ಆಲಿಸ್ ಇನ್ ವಂಡರ್‌ಲ್ಯಾಂಡ್‌ನಲ್ಲಿ ರಾಣಿ ಹೇಳಿದಂತೆ: “ಒಂದೇ ಸ್ತಳದಲ್ಲಿ ಇರಲು ಓಡುತ್ತಾನೇ ಇರ್ಬೇಕು.” ಜೇನುಗಳು ಕದಿಯುತ್ತವೆ → ಮರ ವಿಶ ತುಂಬಿಸುತ್ತದೆ → ಹಕ್ಕಿಗಳು ರಂದ್ರ ಹಾಕುತ್ತವೆ → ಮರ…? ವಿಕಾಸದ ಅಸ್ತ್ರ ಪೋಟಿ ಮುಂದುವರಿಯುತ್ತದೆ (Irwin et al. 2010). ಆದರೆ ಮರ ಬದುಕುತ್ತದೆ, ಹರಡುತ್ತದೆ. ಕೆಲವು ಹಕ್ಕಿಗಳು ಇನ್ನೂ ಸರಿಯಾಗಿ ಹೋದುಂಬಿವಿಕೆ ಮಾಡುತ್ತವೆ. ಕೆಲವೊಮ್ಮೆ ಜೀವನದಲ್ಲಿ ಪರಿಪೂರ್ಣ ಪರಿಹಾರ ಇಲ್ಲ. ಬದುಕುವುದೇ ಗೆಲುವು. ಮೂಲಗಳು : 1. Castagnino et al. (2024). Mortality of stingless bees on Spathodea campanulata. Revista Brasileira de Saúde e Produção Animal 2. Franco et al. (2020). Are native nectar robbers against the alien? Acta Oecologica 3. Irwin, R.E. et al. (2010). Nectar robbing: ecological and evolutionary perspectives. Annual Review of Ecology, Evolution, and Systematics 41:271-292 #ಕುತೂಹುಳ #Kutuhula #KannadaScience #Evolution ​​​​​​​​​​​​​​​​ #redqueen | ಕುತೂಹುಳ kutūhuḷa
ಏರ್ಪೋರ್ಟ್ನಲ್ಲಿ ಈ ಮರ ಕಂಡಾಗ ಹಳೆಯ ಆಟದ ನೆನಪಾಯ್ತು . ಉಚ್ಚೆಕಾಯಿ ಮೊಗ್ಗುಗಳಿಂದ ನೀರು ಚಿಮ್ಮಿಸುವ ಆಟ. ಆದರೆ ಮೊಗ್ಗಿನಲ್ಲಿ ಇಷ್ಟು ನೀರು ಏಕೆ? ಈ ಪ್ರಶ್ನೆ ನನ್ನನ್ನು ಆಫ್ರಿಕಾದ...
https://www.facebook.com/reel/2451471401993341/?sfnsn=wiwspmo&mibextid=6AJuK9 #💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
९.७ ह व्ह्यू · ४३४ प्रतिक्रिया | ಒಮ್ಮೆ ಕೃಷ್ಣ ಮತ್ತು ಬಲರಾಮ ಕಾಡಿನಲ್ಲಿ ನಡೆದು ಹೋಗುತ್ತಿರುತ್ತಾರೆ. ಸಂಜೆಯಾಗಿ ಕತ್ತಲಾದ ಕಾರಣ, ಒಂದು ಮರದ ಕೆಳಗೆ ವಿಶ್ರಾಂತಿ ಪಡೆಯಲು ನಿರ್ಧರಿಸುತ್ತಾರೆ. ಒಬ್ಬರು ನಿದ್ರೆ ಮಾಡುವಾಗ ಇನ್ನೊಬ್ಬರು ಕಾವಲು ಕಾಯಬೇಕೆಂದು ತೀರ್ಮಾನವಾಗುತ್ತದೆ. ಮೊದಲು ಬಲರಾಮ ಕಾವಲು ನಿಲ್ಲುತ್ತಾನೆ, ಕೃಷ್ಣ ನಿದ್ರೆ ಮಾಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಒಂದು ಭಯಾನಕ ರಾಕ್ಷಸ ಬರುತ್ತದೆ. ಅದು ಬಲರಾಮನನ್ನು ನೋಡಿ ಅಟ್ಟಹಾಸದಿಂದ ಕೂಗುತ್ತದೆ. ಬಲರಾಮ ಹೆದರುತ್ತಾನೆ. ಬಲರಾಮ ಎಷ್ಟು ಹೆದರುತ್ತಾನೋ, ಆ ರಾಕ್ಷಸ ಗಾತ್ರದಲ್ಲಿ ಅಷ್ಟು ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ. ರಾಕ್ಷಸನ ಆರ್ಭಟಕ್ಕೆ ಹೆದರಿ ಬಲರಾಮ ಮೂರ್ಛೆ ಹೋಗುತ್ತಾನೆ. ಸ್ವಲ್ಪ ಸಮಯದ ನಂತರ ಕೃಷ್ಣ ಎಚ್ಚರಗೊಂಡು, ಬಲರಾಮ ನಿದ್ರೆ ಮಾಡುತ್ತಿದ್ದಾನೆಂದು ತಿಳಿದು ತಾನು ಕಾವಲು ಕಾಯಲು ಶುರು ಮಾಡುತ್ತಾನೆ. ಈಗ ಅದೇ ರಾಕ್ಷಸ ಕೃಷ್ಣನ ಮುಂದೆ ಬಂದು ಭಯಂಕರವಾಗಿ ಕೂಗುತ್ತದೆ. ಆದರೆ ಕೃಷ್ಣ ಕಿಂಚಿತ್ತೂ ಹೆದರುವುದಿಲ್ಲ. ಬದಲಿಗೆ ಶಾಂತವಾಗಿ ಆ ರಾಕ್ಷಸನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ. ಕೃಷ್ಣ ಧೈರ್ಯವಾಗಿ ಎದುರಿಸಿದಷ್ಟೂ ಆ ರಾಕ್ಷಸನ ಗಾತ್ರ ಚಿಕ್ಕದಾಗುತ್ತಾ ಬರುತ್ತದೆ. ಕೊನೆಗೆ ಅದು ಎಷ್ಟು ಚಿಕ್ಕದಾಗುತ್ತದೆ ಎಂದರೆ, ಕೃಷ್ಣ ಅದನ್ನು ಸುಲಭವಾಗಿ ತನ್ನ ಬಟ್ಟೆಯಲ್ಲಿ ಕಟ್ಟಿ ಹಾಕುತ್ತಾನೆ. ಬೆಳಿಗ್ಗೆ ಎದ್ದ ಬಲರಾಮ, "ಕೃಷ್ಣ, ರಾತ್ರಿ ಇಲ್ಲಿ ಒಂದು ದೊಡ್ಡ ರಾಕ್ಷಸ ಬಂದಿತ್ತು!" ಎಂದು ಗಾಬರಿಯಿಂದ ಹೇಳುತ್ತಾನೆ. ಆಗ ಕೃಷ್ಣ ತನ್ನ ಬಟ್ಟೆಯಲ್ಲಿದ್ದ ಪುಟ್ಟ ಜಂತುವನ್ನು ತೋರಿಸಿ, "ನೀನು ಹೇಳುತ್ತಿರುವುದು ಇದರ ಬಗ್ಗೆಯೇ? ನೀನು ಹೆದರಿದಷ್ಟು ಇದು ದೊಡ್ಡದಾಯಿತು, ನಾನು ಧೈರ್ಯದಿಂದ ಎದುರಿಸಿದಾಗ ಇದು ಚಿಕ್ಕದಾಯಿತು" ಎನ್ನುತ್ತಾನೆ. ಈ ಕಥೆಯ ಸಂದೇಶ: ನಮ್ಮ ಜೀವನದ ಸಮಸ್ಯೆಗಳು ಕೂಡ ಈ ರಾಕ್ಷಸನಂತೆ. ನಮ್ಮ ಭಯ ಮತ್ತು ಆತಂಕಗಳು ಸಮಸ್ಯೆಗಳನ್ನು ಬೆಟ್ಟದಷ್ಟು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ನಾವು ಧೈರ್ಯದಿಂದ ಮತ್ತು ಶಾಂತವಾಗಿ ಸವಾಲುಗಳನ್ನು ಎದುರಿಸಿದಾಗ, ಎಂತಹ ದೊಡ್ಡ ಸಮಸ್ಯೆಯೂ ನಮಗೆ ಚಿಕ್ಕದಾಗಿ ಕಾಣುತ್ತದೆ. | media trend
ಒಮ್ಮೆ ಕೃಷ್ಣ ಮತ್ತು ಬಲರಾಮ ಕಾಡಿನಲ್ಲಿ ನಡೆದು ಹೋಗುತ್ತಿರುತ್ತಾರೆ. ಸಂಜೆಯಾಗಿ ಕತ್ತಲಾದ ಕಾರಣ, ಒಂದು ಮರದ ಕೆಳಗೆ ವಿಶ್ರಾಂತಿ ಪಡೆಯಲು ನಿರ್ಧರಿಸುತ್ತಾರೆ. ಒಬ್ಬರು ನಿದ್ರೆ ಮಾಡುವಾಗ...
#🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸
🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸 - ShareChat
00:36
#📜 ನುಡಿಮುತ್ತು
📜 ನುಡಿಮುತ್ತು - ಭಗದದ್ದೀತೆ అదృష్టదింది బందిదెర్ద ಅಹಂಕಾರ   ಕೊೊಡುತ್ತದೆ. ಉಪಯೋಗಿಸಿ ಬುದ್ದಿ ಕಕ ಸಂಪಾದಿಸಿದ್ದು ಸಂತೋಷ ಕಂೂಡುತ್ತದೆ. ಸಂಪಾದಿಸಿದ್ದು ಪಟ್ಟು ಕಷ್ಠ ಸಂತೃಪ್ತಿ   ಕಂೂಡುತ್ತದೆ ಭಗದದ್ದೀತೆ అదృష్టదింది బందిదెర్ద ಅಹಂಕಾರ   ಕೊೊಡುತ್ತದೆ. ಉಪಯೋಗಿಸಿ ಬುದ್ದಿ ಕಕ ಸಂಪಾದಿಸಿದ್ದು ಸಂತೋಷ ಕಂೂಡುತ್ತದೆ. ಸಂಪಾದಿಸಿದ್ದು ಪಟ್ಟು ಕಷ್ಠ ಸಂತೃಪ್ತಿ   ಕಂೂಡುತ್ತದೆ - ShareChat