ದಿನಕ್ಕೊಂದು ಕಥೆ

40 Posts • 49K views
ರಾಧಾಕೃಷ್ಣ 🦚💙
1K views 3 months ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ 🙏 ಹರಿಃ ಓಂ 🕉️ ಇವು Narada maharshi ನಾರದ ಮಹರ್ಷಿಗಳ ಪ್ರಸಿದ್ಧ ಕಥೆಗಳು — ಭಕ್ತಿ, ಜ್ಞಾನ ಮತ್ತು ಧರ್ಮದ ಸಂದೇಶವನ್ನು ತುಂಬಿಕೊಂಡಿವೆ: --- 📖 1. ನಾರದರು ಮತ್ತು ವಾಲ್ಮೀಕಿ ಮಹರ್ಷಿ ಕಥೆ ಒಮ್ಮೆ ವಾಲ್ಮೀಕಿ ಮೊದಲಿಗೆ ರತ್ನಾಕರ ಎಂಬ ಕಳ್ಳನಾಗಿದ್ದನು. ಅವನು ದರೋಡೆ ಮಾಡಿ ಕುಟುಂಬವನ್ನು ಪಾಲಿಸುತ್ತಿದ್ದನು. ಒಂದು ದಿನ ನಾರದ ಮಹರ್ಷಿಗಳು ಅವನನ್ನು ಭೇಟಿ ಮಾಡಿ ಕೇಳಿದರು: 👉 “ನೀನು ಮಾಡುವ ಪಾಪವನ್ನು ನಿನ್ನ ಕುಟುಂಬದವರು ಹಂಚಿಕೊಳ್ಳುವರಾ?” ರತ್ನಾಕರ ತನ್ನ ಕುಟುಂಬವನ್ನು ಕೇಳಿದಾಗ, ಯಾರೂ ಪಾಪವನ್ನು ಹೊರುವುದಿಲ್ಲ ಎಂದು ತಿಳಿಯಿತು. ಇದರಿಂದ ಅವನು ಮನಸ್ಸು ಬದಲಿಸಿ, ನಾರದರಿಂದ “ರಾಮ” 🙏ನಾಮ ಜಪವನ್ನು ಕಲಿತು 👉 ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನಗೊಂಡನು. 🌠ಪಾಠ: ನಾಮಸ್ಮರಣೆಯ ಶಕ್ತಿ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. --- 📖 2. ನಾರದರು ಮತ್ತು ವಿಷ್ಣುವಿನ ಮಾಯೆ ಒಮ್ಮೆ ನಾರದರು ತಮ್ಮ ಭಕ್ತಿಯ ಮೇಲೆ ಹೆಮ್ಮೆಪಟ್ಟರು. ಆಗ Lord Vishnu ಅವರು ಅವರಿಗೆ ಮಾಯೆಯನ್ನು ತೋರಿಸಲು ನಿರ್ಧರಿಸಿದರು. ನಾರದರು ಒಂದು ಗ್ರಾಮಕ್ಕೆ ಹೋಗಿ: ಮನೆ, ಕುಟುಂಬ, ಮಕ್ಕಳು ಎಲ್ಲವನ್ನು ಹೊಂದಿದರು ಹಲವು ವರ್ಷಗಳು ಜೀವನ ನಡೆಸಿದರು ಆದರೆ ಅಚಾನಕ್ ಒಂದು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡರು. ಅವರು ಅಳುತ್ತಿರುವಾಗ ವಿಷ್ಣು ಪ್ರತ್ಯಕ್ಷವಾಗಿ ಹೇಳಿದರು: 👉 “ಇದು ನನ್ನ ಮಾಯೆ!” 🌠ಪಾಠ: ದೇವರ ಮಾಯೆ ಅತೀ ಮಹತ್ವವಾದುದು; ಅಹಂಕಾರವನ್ನು ಬಿಡಬೇಕು. --- 📖 3. ನಾರದರು ಮತ್ತು ಕೃಷ್ಣ ನಾರದರು ಯಾವ ಭಕ್ತನು ದೊಡ್ಡವನು ಎಂದು ತಿಳಿಯಲು ಬಯಸಿದರು. Lord Krishna ಅವರು ಹೇಳಿದರು: 👉 “ಒಬ್ಬ ರೈತನನ್ನು ನೋಡಿ.” ನಾರದರು ದಿನಪೂರ್ತಿ ರೈತನನ್ನು ಗಮನಿಸಿದರು: ರೈತನು ದಿನದಲ್ಲಿ ಕೇವಲ 2–3 ಬಾರಿ ದೇವರನ್ನು ನೆನಪಿಸುತ್ತಿದ್ದನು ಆದರೆ ಕೃಷ್ಣನು ನಾರದರಿಗೆ ಎಣ್ಣೆ ತುಂಬಿದ ಪಾತ್ರೆಯನ್ನು ಕೊಟ್ಟು, 👉 “ಇದನ್ನು ಸುರಿಯದೆ ತಿರುಗಿ ಬಾ” ಎಂದರು. ನಾರದರು ಗಮನದಿಂದ ಅದನ್ನು ಮಾಡಿದರು, ಆದರೆ ದೇವರನ್ನು ನೆನಪಿಸಲಿಲ್ಲ. ಆಗ ಕೃಷ್ಣನು ಹೇಳಿದರು: 👉 “ಅವನು ಕೆಲಸದ ನಡುವೆ ದೇವರನ್ನು ನೆನಪಿಸುತ್ತಾನೆ, ಅದೇ ನಿಜವಾದ ಭಕ್ತಿ.” 🌠ಪಾಠ: ಜೀವನದ ಕೆಲಸಗಳ ನಡುವೆ ದೇವರನ್ನು ನೆನಪಿಸುವುದೇ ನಿಜವಾದ ಭಕ್ತಿ. --- ಇನ್ನಷ್ಟು Narada ಮಹರ್ಷಿಗಳ ಮನಮುಟ್ಟುವ ಕಥೆಗಳು ಇಲ್ಲಿವೆ — ಇವುಗಳಲ್ಲಿ ಭಕ್ತಿ, ವಿನಯ ಮತ್ತು ಜ್ಞಾನಗಳ ಸಂದೇಶ ತುಂಬಿದೆ: --- 📖 4. ನಾರದರು ಮತ್ತು ಪ್ರಹ್ಲಾದ ಒಮ್ಮೆ Prahlada ಗರ್ಭದಲ್ಲಿದ್ದಾಗಲೇ ನಾರದರು ಅವನ ತಾಯಿಗೆ ವಿಷ್ಣು ಭಕ್ತಿಯನ್ನು ಉಪದೇಶಿಸಿದರು. ಅದರಿಂದ ಪ್ರಹ್ಲಾದನು ಜನಿಸಿದ ಕ್ಷಣದಿಂದಲೇ ಭಕ್ತನಾದನು. ಅವನು ತನ್ನ ತಂದೆ ಹಿರಣ್ಯಕಶಿಪುವಿನ ವಿರೋಧಕ್ಕೂ ಕೂಡ 👉 “ನಾರಾಯಣ” 🙏ನಾಮವನ್ನು ಬಿಡಲಿಲ್ಲ. 🌠ಪಾಠ: ಸತ್ಸಂಗ ಮತ್ತು ಉತ್ತಮ ಉಪದೇಶ ಜೀವನವನ್ನು ಬಾಲ್ಯದಲ್ಲೇ ರೂಪಿಸುತ್ತದೆ. --- 📖 5. ನಾರದರು ಮತ್ತು ತುಳಸಿ ದೇವಿ ಒಮ್ಮೆ ತುಳಸಿ ದೇವಿ ತಪಸ್ಸು ಮಾಡುತ್ತಿದ್ದರು. ನಾರದರು ಅವರಿಗೆ ಧರ್ಮದ ಮಾರ್ಗವನ್ನು ತಿಳಿಸಿ, 👉 ವಿಷ್ಣು ಭಕ್ತಿಯಲ್ಲಿ ಸ್ಥಿರವಾಗುವಂತೆ ಮಾರ್ಗದರ್ಶನ ನೀಡಿದರು. ಇದರಿಂದ ತುಳಸಿ ದೇವಿ ಮಹಾ ಪುಣ್ಯಸ್ಥಳಿಯಾಗಿ ಪ್ರಸಿದ್ಧರಾದರು. 🌠ಪಾಠ: ಸರಿಯಾದ ಮಾರ್ಗದರ್ಶನ ಜೀವನವನ್ನು ಪವಿತ್ರಗೊಳಿಸುತ್ತದೆ. --- 📖 6. ನಾರದರು ಮತ್ತು ಅಹಂಕಾರಿ ರಾಜ ಒಬ್ಬ ರಾಜ ತನ್ನ ಶಕ್ತಿಯ ಮೇಲೆ ತುಂಬಾ ಅಹಂಕಾರ ಹೊಂದಿದ್ದನು. ನಾರದರು ಅವನ ಬಳಿ ಹೋಗಿ, ಅವನ ಅಹಂಕಾರವನ್ನು ಪರೀಕ್ಷಿಸಲು ಪ್ರಶ್ನೆಗಳು ಕೇಳಿದರು. ರಾಜನು ತನ್ನ ಶಕ್ತಿ ಶಾಶ್ವತವಲ್ಲ ಎಂಬುದನ್ನು ಅರಿತು 👉 ವಿನಯವನ್ನು ಅಳವಡಿಸಿಕೊಂಡನು. 🌠ಪಾಠ: ಅಧಿಕಾರ ಮತ್ತು ಶಕ್ತಿ ತಾತ್ಕಾಲಿಕ — ವಿನಯವೇ ಶಾಶ್ವತ. --- 📖 7. ನಾರದರು ಮತ್ತು ಸಂಗೀತ ನಾರದರು ಕೇವಲ ಋಷಿ ಮಾತ್ರವಲ್ಲ, ಅವರು ಮಹಾನ್ ಸಂಗೀತಜ್ಞರೂ ಆಗಿದ್ದರು. ಅವರು ತಮ್ಮ ವೀಣೆಯಿಂದ “ನಾರಾಯಣ… ನಾರಾಯಣ…” ಎಂದು ಕೀರ್ತನೆ ಮಾಡುತ್ತಿದ್ದರು. ಅವರ ಸಂಗೀತದಿಂದ: 🔅ದೇವರುಗಳು ಸಂತೋಷಪಟ್ಟರು 🔅ಭಕ್ತರಲ್ಲಿ ಭಕ್ತಿ ಹೆಚ್ಚಾಯಿತು 🌠ಪಾಠ: ಸಂಗೀತವೂ ದೇವರ ಸಂಪರ್ಕಕ್ಕೆ ಒಂದು ಮಾರ್ಗ. --- ✨ ಸಮಾಪ್ತಿ: 🔅ನಾರದ ಮಹರ್ಷಿಗಳ ಜೀವನ ನಮಗೆ ಹೇಳುವುದು: 🔅ಭಕ್ತಿ + ಜ್ಞಾನ + ವಿನಯ = ಪೂರ್ಣ ಜೀವನ 🔅ಸತ್ಸಂಗ ಮತ್ತು ನಾಮಸ್ಮರಣೆ ಅತ್ಯಂತ ಮುಖ್ಯ 🔅ಅಹಂಕಾರ ಬಿಟ್ಟು ಧರ್ಮದ ಮಾರ್ಗದಲ್ಲಿ ನಡೆಯಬೇಕು --- ಬರಹ 👉 ವೇದಾಂತ ಜ್ಞಾನ ಯವರಿಂದ --- ✨ ಸಾರಾಂಶ: 🔅ನಾರದ ಮಹರ್ಷಿಗಳ ಕಥೆಗಳು ನಮಗೆ ಹೇಳುವುದು: 🔅ಭಕ್ತಿ ಜೀವನವನ್ನು ಬದಲಿಸುತ್ತದೆ 🔅ಅಹಂಕಾರವನ್ನು ತ್ಯಜಿಸಬೇಕು 🔅ಯಾವ ಪರಿಸ್ಥಿತಿಯಲ್ಲಾದರೂ ದೇವನಾಮ ಸ್ಮರಣೆ ಮುಖ್ಯ 2026 ರಲ್ಲಿ, ಇಂದು ನಾರದ ಜಯಂತಿಯನ್ನು ಶನಿವಾರ, ಮೇ 2, 2026 ರಂದು ಆಚರಿಸಲಾಗುತ್ತದೆ..
14 likes
14 shares
ರಾಧಾಕೃಷ್ಣ 🦚💙
1K views 3 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏ತಿರುಪತಿ ತಿಮ್ಮಪ್ಪ #ಶ್ರೀನಿವಾಸ ಕಲ್ಯಾಣ 🌷🙏 ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :- ದ್ವಾಪರ ಯುಗದ ಕೃಷ್ಣನ ತಾಯಿ ಯಶೋದೆಗೂ, ಕಲಿಯುಗದ ಶ್ರೀನಿವಾ ಸನಿಗೂ ಎತ್ತಣಿಂದ ಎತ್ತ ಸಂಬಂಧ ಎಂದು ಯೋಚಿಸ ಹೊರಟರೆ ಇದು ಭಗವಂತನ ಸಂಕಲ್ಪ. ಕೃಷ್ಣನ ವರದಿಂದ ಕಾರಣ ಜನ್ಮಳಾದಳು ಬಕುಳಾದೇವಿ. ಕಾರ್ಯಕಾರಣಕ್ಕಾಗಿ ಭೃಗು ಮಹರ್ಷಿಯ ನಿಮಿತ್ತ ಶಾಪದಿಂದ ಮಹಾ ವಿಷ್ಣು,ತನ್ನ ಪತ್ನಿ ಮಹಾಲಕ್ಷ್ಮಿಯನ್ನು ಹುಡುಕುವ ಸಲುವಾಗಿ ತನ್ನ ದಿವ್ಯ ರೂಪ ವನ್ನು ವೈಕುಂಠದಲ್ಲಿ ಬಿಟ್ಟು ಮಾನವ ಶರೀರದಿಂದ ಶ್ರೀನಿವಾಸನಾಗಿ ಧರೆಯಲ್ಲಿ ಅವತರಿಸಿದನು. ಧರೆಗಿಳಿದ ಕಾರಣ ಮಾನವ ಸಹಜ ವಾಗಿ ಹಸಿವು ನೀರಡಿ ಕೆ ಗಳಿಂದ ಬಳಲಿ ಒಂದು ಮರದ ಕೆಳಗಿನ ಹುತ್ತದಲ್ಲಿ ಸೇರಿದನು. ತ್ರಿಲೋಕ ಸಂಚಾರಿ ಆದ ನಾರದರು, ಶ್ರೀನಿವಾಸನ ಹಸಿವು- ಬಾಯಾರಿಕೆ- ಬಳಲಿಕೆ ಗಳನ್ನು ತಿಳಿಸುವ ಸಲುವಾಗಿ ಕೊಲ್ಲಾಪುರಕ್ಕೆ ನಡೆದರು. ಪತಿಯ ಮೇಲಿನ ಕೋಪದಿಂದ ವೈಕುಂಠವನ್ನು ತೊರೆದು ಭೂಲೋಕದ ಕೊಲ್ಲಾಪುರ ದಲ್ಲಿ ನೆಲೆಯಾಗಿದ್ದ ಮಹಾಲ ಕ್ಷ್ಮಿಗೆ ಶ್ರೀನಿವಾಸ ಪಡುತ್ತಿದ್ದ ಕಷ್ಟವನ್ನು ತಿಳಿಸಿದರು ತನ್ನ ಪತಿ ಹಸಿವು ಬಳಲಿಕೆಯಿಂದ ಇರುವುದನ್ನು ತಿಳಿದು ಲಕ್ಷ್ಮಿಗೆ ಸಹಿಸಲಾಗ ಲಿಲ್ಲ. ಆಕೆಯ ಸಿಟ್ಟು ಇನ್ನೂ ಹೋಗಿರದ ಕಾರಣ ಅವಳು ಶ್ರೀನಿವಾಸ ಇದ್ದಲ್ಲಿಗೆ ಬರಲಿಲ್ಲ. ಆದರೆ, ದೇವಲೋಕದ ಬ್ರಹ್ಮ ಮತ್ತು ಶಿವನಲ್ಲಿ ಮೊರೆ ಹೋದಳು. ಆಲಿಸಿದ ಬ್ರಹ್ಮನು ಧೇನುವಾಗಿ, ಶಿವನು ಕರುವಾಗಿ ಭೂಮಿಗೆ ಬಂದು ಚೋಳರಾಜನ ಗೋ ಶಾಲೆ ಸೇರಿದರು. ಆ ನಂತರ ಗೋಶಾಲೆಯ ಹಸುಗಳ ಗುಂಪಿನಲ್ಲಿ ಸೇರಿಕೊಂಡು ಶ್ರೀನಿವಾಸನ ಆಶ್ರಯ ತಾಣವಾದ ಹುತ್ತದ ಬಳಿಗೆ ಬಂದ ಕಾಮಧೇನು ಹಾಲು ತುಂಬಿದ ಕೆಚ್ಚಲಿನಿಂದ ಶ್ರೀನಿವಾಸನ ಬಾಯಿಗೆ ಬೀಳುವಂತೆ ಹಾಲು ಸುರಿಸಿ ಹಸಿವು ತಣಿಸಿತು. ಆದರೆ ಒಂದೆರಡು ದಿನದೊಳಗೆ ಈ ವಿಷಯ ಚೋಳ ರಾಜನಿಗೆ ತಿಳಿದು ಅವನು ಗೋ ಶಾಲೆಯ ಗೋಪಾಲಕನಿಗೆ ಪರೀಕ್ಷಿಸಲು ಹೇಳಿದನು. ಗೋಪಾಲಕನು ಹುತ್ತದೊಳಗೆ ಹಾಲು ಸುರಿಸುತ್ತಿದ್ದ ಕಾಮಧೇನುವನ್ನು ಕಂಡ ಸಿಟ್ಟಿನಿಂದ ಹಸುವಿಗೆ ಹೊಡೆಯಲು ಕೈಲಿದ್ದ ಕೋಲನ್ನು ಅದರ ಕಡೆಗೆ ಗುರಿ ಯಿಟ್ಟು ಬೀಸಿ ಒಗೆದನು ಬೀಸಿ ಬಂದ ಕೋಲಿನ ಪೆಟ್ಟು ಕಾಮಧೇನು ವಿಗೆ ಬೀಳದಂತೆ ಶ್ರೀನಿವಾಸ ತನ್ನ ತಲೆಯನ್ನು ಅಡ್ಡ ಹಿಡಿದನು. ಆ ದೊಣ್ಣೆ ಯ ಪ್ರಹಾರದ ಪೆಟ್ಟು ಅವನ ಹಣೆಗೆ ಬಡಿಯಿತು. ಶ್ರೀನಿವಾಸನ ಹಣೆಗೆ ಬಲ ವಾದ ಪೆಟ್ಟು ಬಿದ್ದು ರಕ್ತ ಸುರಿಯಿತು. ನೋವಿನಿಂದ ನರಳ ತೊಡಗಿದ. ಈ ವಿಚಾರ ದೇವಲೋಕದಲ್ಲಿ ತಿಳಿದು ಚರ್ಚೆಯಾಯಿತು. ಅಲ್ಲಿದ್ದ ಗುರು ಬೃಹಸ್ಪತಿ ಗಳು ತಾವೇ ಶ್ರೀನಿವಾಸನಿಗೆ ಆರೈಕೆ ಮಾಡುವುದಾಗಿ ಹೊರಟ ಸಮಯದಲ್ಲಿ ನಾರದರು ಆಗಮಿಸಿ ಅವರೊಂದು ಸಲಹೆ ಕೊಟ್ಟರು. ಬೃಹಸ್ಪತಿಗಳೇ ನೀವು ಹೋಗಿ ಔಷಧಿ ಕೊಡಿ ಆದರೆ ಶ್ರೀನಿವಾಸನಿಗೆ ಆರೈಕೆ ಮಾಡಲು ಅಲ್ಲೊಬ್ಬ ತಾಯಿ ಕಾದಿದ್ದಾಳೆ. ಅವಳು ಶ್ರೀನಿವಾಸನ ಆರೈಕೆ ಪ್ರೀತಿಯಿಂದ ಮಾಡುತ್ತಾಳೆ ಆ ಜವಾಬ್ದಾರಿಯನ್ನು ಅವಳಿಗೆ ಬಿಡಿ ಎಂದರು. ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾಗಿ ಇದೇನು ಶ್ರೀನಿವಾಸನಿಗೆ ತಾಯಿಯೇ ಯಾರು ಆಕೆ ?ಎಂದಾಗ, ನಾರದರು ದ್ವಾಪರ ಯುಗದ ನೆನಪು ಮಾಡಿ ದರು. ಮೂರು ಸಾವಿರ ವರ್ಷಗಳ ಹಿಂದೆ ಮಥುರಾ ನಗರದಲ್ಲಿ ವಸುದೇವ ದೇವಕಿಗೆ ಹುಟ್ಟಿದ ಮಗು ಕೃಷ್ಣನನ್ನು,‌ ಕಂಸನದೃಷ್ಟಿಯಿಂದ ತಪ್ಪಿಸಲು, ವಿಷ್ಣುವಿನ ಆದೇಶದಂತೆ, ವಸುದೇವನು ಆಗ ತಾನೇ ಹುಟ್ಟಿದ ಹಸು ಗೂಸನ್ನು ಬುಟ್ಟಿಯಲ್ಲಿ ಹೊತ್ತು ತಂದು ಗೋಕುಲದ ಯಶೋಧ -ನಂದರ ಮನೆಯಲ್ಲಿ ಬಿಡುತ್ತಾನೆ. ಮುಂದೆ ಕೃಷ್ಣನು, ತಾಯಿ ಯಶೋಧೆಯ ಮುದ್ದಿನ ಆರೈಕೆಯಲ್ಲಿ ಬೆಳೆಯುತ್ತಾನೆ. ಇತ್ತ ಮಧುರಾದಲ್ಲಿ ಕೃಷ್ಣನ ಸೋದರ ಮಾವ ಕಂಸನು ಕೃಷ್ಣನನ್ನು ಸಂಹರಿಸಲು ತಂತ್ರರೂಪಿಸಿ ಕೃಷ್ಣ - ಬಲರಾಮರನ್ನು ಮಥುರಾಕ್ಕೆ ಕರೆಸುವ ಸಲುವಾಗಿ ಕುಸ್ತಿ ಕಾಳಗ ಸ್ಪರ್ಧೆ ಏರ್ಪಡಿಸಿ ಅವರಿಗೆ ಬರಲು ಆಹ್ವಾನ ಕೊಟ್ಟು ಕರೆ ತರಲು ಅಕ್ರೂರನನ್ನು ಕಳಿಸಿದನು. ಕಂಸನ ಕುತಂತ್ರವನ್ನು ಬಲ್ಲ ಕೃಷ್ಣನು ಮಧುರಾಕ್ಕೆ ಬೇಕೆಂದೆ ಹೋಗಿ ಅಲ್ಲಿ ಕಂಸನ ಸಂಹಾರ ಮಾಡಿ ಹೆತ್ತವರಾದ ವಸುದೇವ - ದೇವಕಿಯರನ್ನು ಬಂಧಮುಕ್ತ ಗೊಳಿಸಿದನು. ಆನಂತರ ಮತ್ತೆ ಅವನೆಂದೂ ಗೋಕುಲಕ್ಕೆ ಬರಲೇ ಇಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುವುದೇ ಆಯಿತು. ಎಷ್ಟೋ ವರ್ಷಗಳು ಕಳೆದ ಮೇಲೆ ಒಮ್ಮೆ ಯಶೋಧಾ ತಾಯಿ ಕೃಷ್ಣನ ಅರಮನೆಗೆ ಬಂದಾಗ ಅಷ್ಟಮಹಿಷಿಯರಲ್ಲದೆ ಅದರ ಮೇಲೆ ಮತ್ತೆ 16,000 ಕನ್ಯೆಯರನ್ನು ವಿವಾಹವಾದ ವಿಷಯ ತಿಳಿದು ಯಶೋಧ ತಾಯಿಗೆ ಬೇಸರವಾಯಿತು. ಕೃಷ್ಣನ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿ ಆ ಸಂಭ್ರಮವನ್ನು ಕಣ್ತುಂಬಿ ಕೊಳ್ಳುವ ಕನಸನ್ನು ಕಂಡಿದ್ದಳು. ಬೇಸರದಿಂದ ನೀನು ನನಗೆ ತಿಳಿಸದೆ ಮದುವೆಯಾಗಿರುವೆ ನಿನ್ನ ವಿವಾಹ ನೋಡುವ ಭಾಗ್ಯವನ್ನು ನನಗೆ ಕರುಣಿಸಲಿಲ್ಲ ಎಂದು ಕೃಷ್ಣನಿಗೆ ಹೇಳಿದಾಗ ಕೃಷ್ಣನು ಬೇಸರ ಪಡಬೇಡ ಮುಂದಿನ ಕಲಿಯುಗದಲ್ಲಿ ನಿನ್ನ ಕೈಯಾರೆ ನನ್ನ ವಿವಾಹವನ್ನು ಸಂಭ್ರಮ ದಿಂದ ಮಾಡುವೆ ಎಂದು ತಾಯಿ ವರ ಕೊಟ್ಟಿದ್ದ. ಅದರಂತೆ ಕಲಿಯುಗ ಕಾಲಿಟ್ಟಾಗ ಯಶೋದೆ ಸಪ್ತಗಿರಿಯಲ್ಲಿ ಬಕುಳಾ ದೇವಿಯಾಗಿ ಅವತರಿಸಿ ವರಾಹನದಿ ತಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬರುತ್ತಿರುವ ಆಕೆಯನ್ನು ನಾರದರು ದೇವಲೋಕದ ಸಭೆಯಲ್ಲಿದ್ದವರಿಗೆ ತೋರಿಸಿದರು. ಇತ್ತ ಪೆಟ್ಟು ತಿಂದು ರಕ್ತ ಸುರಿಯುತ್ತಿದ್ದ ಶ್ರೀನಿವಾಸ ಒಬ್ಬನೇ ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತಿದ್ದನು. ಆಗತಾನೆ ಸ್ನಾನ ಮುಗಿಸಿ ಬಂದ ಬಕುಳಾ ದೇವಿ ಆತನನ್ನು ನೋಡಿ ಯಾರಪ್ಪ ನೀನು? ಎಲ್ಲಿಂದ ಬಂದಿರುವೆ? ಏನಿ ದು ನಿನ್ನ ಗಾಯ? ಎಂದೆಲ್ಲಾ ಕೇಳಿದಾಗ ಶ್ರೀನಿವಾಸನು ಅಮ್ಮಾ ಎಂದು ಕರೆಯುತ್ತಿದ್ದಂತೆ, ಬಕುಳಾ ದೇವಿಗೆ ಅಮ್ಮಾ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದ ಹಾಗೆ ತಾಯಿಯ ಕರುಳು ಚುರುಕ್ ಎಂದಿತು. ಅಮ್ಮಾ ನನ್ನ ಹೆಸರು ಶ್ರೀನಿ ವಾಸ ಸ್ವಲ್ಪ ಪೆಟ್ಟು ಬಿದ್ದಿದೆ ಎಂದನು ತಾಯಿ ಕರುಳು ಕೇಳಬೇಕಲ್ಲವೇ? ಇದೇನು ಸಣ್ಣ ಗಾಯವೇ? ಎಷ್ಟೊಂದು ರಕ್ತ ಸುರಿಯುತ್ತಿದೆ ಎಂದು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಹಣೆಗೆ ಕಟ್ಟಲು ಹೊರಟಾಗ ಅಮ್ಮ ತಡೆಯಿರಿ ಎಂದು ಧ್ವನಿ ಕೇಳಿದಾಗ ತಿರುಗಿ ನೋಡಿದಳು, ಕೈಯಲ್ಲಿ ಔಷಧಿ ಹಿಡಿದು ಧನ್ವಂತರಿಯಂತೆ ಒಬ್ಬ ವ್ಯಕ್ತಿ ನಿಂತಿದ್ದನು. ಆತ ಬೇರೆ ಯಾರೊ ಆಗಿರದೇ ದೇವಗುರು ಬೃಹಸ್ಪತಿ. ಆ ಔಷಧಿ ಯನ್ನು ಬಕುಳಾದೇವಿ ಕಟ್ಟಲು ಹಿಡಿದಿದ್ದ ಸೀರೆಯ ತುಂಡಿನೊಳಗೆ ಹಾಕಿ ಈಗ ಇದನ್ನು ಕಟ್ಟಿ ಎಂದನು. ಬಕುಳಾದೇವಿ ಔಷಧಿ ತುಂಬಿದ ಸೆರಗಿನ ಅಂಚನ್ನು ಶ್ರೀನಿವಾಸನ ಹಣೆಗೆ ಕಟ್ಟಿ, ಬಂದ ವ್ಯಕ್ತಿಯ ಕಡೆ ತಿರುಗಿ ಸಮಯಕ್ಕೆ ಸರಿಯಾಗಿ ಬಂದಿರುವೆಯಲ್ಲ ಇದು ಯಾವ ಜನ್ಮದ ಸಂಬಂಧವೂ ನಾಕಾಣೆ ಇವನು ಅಮ್ಮ ಎಂದು ಕರೆದಾಗಲೇ ನನಗೆ ನನ್ನ ಮಗ ಎಂದು ಅನಿಸುತ್ತಿದೆ. ಹೀಗೆ ಆರೈಕೆ ಮಾಡು ತ್ತಲೇ ಶ್ರೀನಿವಾಸನಿಗೆ ಯಾರಪ್ಪ ನೀನು ಎಲ್ಲಿಂದ ಬಂದಿರುವೆ ನಿನ್ನ ತಂದೆ ತಾಯಿ ಬಂಧು ಬಳಗ ಎಲ್ಲಿರುವರು ಎಂದು ಕೇಳಿದಾಗ ಅಮ್ಮ ನನಗೆ ಯಾರು ಇಲ್ಲ ನೀನೇ ನನ್ನ ತಾಯಿ ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತಾಯಿಯ ಮಮತೆ ಉಕ್ಕಿಬಂದು ಈ ರೀತಿ ಪೆಟ್ಟು ಮಾಡಿದವರು ಯಾರು ಅಂತ ಹೇಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಳು. ಹೋಗಲಿ ಬಿಡಮ್ಮ ಕಳೆದು ಹೋದ ವಿಚಾರ ಬೇಡ ಈಗ ನನಗೆ ಹಸಿವಾಗುತ್ತಿದೆ ಅಮ್ಮ ಹೇಳು ಅಮ್ಮ ಹೇಳು ನಿನ್ನ ಮನೆ ಎಲ್ಲಿದೆ? ನೀನು ಯಾರ ಜೊತೆ ಇರುವೆ ಎಂದನು ಬಕುಳಾದೇವಿ ನನಗೂ ಯಾರು ಇಲ್ಲ ನಾನು ಒಬ್ಬಂಟಿಯಾಗಿರುವೆ ಎಂದಳು. ಶ್ರೀನಿವಾಸ ಹೇಳಿದ ಯಾರೂ ಇಲ್ಲ ಎಂದು ಏಕೆ ಹೇಳುವೆ, ಭಗವಂತ ನಿನ್ನ ಜೊತೆಗಿರುತ್ತಾನೆ. ಏಕಾಂಗಿ ಯಾಗಿ ಯಾರು ಇರುವು ದಿಲ್ಲ ಇನ್ನು ಮುಂದೆ ನಾನೇ ನಿನ್ನ ಮಗ ನೀನೇ ನನಗೆ ಅಮ್ಮ ಎಂದನು. ಈ ರೀತಿಯಾಗಿ ಅಮ್ಮ ಮಗನ ಬಾಂಧವ್ಯ ಮುಂದುವರೆಯಿತು. ತಾಯಿಯ ಆರೈಕೆಯಲ್ಲಿ ಶ್ರೀನಿವಾಸ ಚೇತರಿಸಿ ಕೊಂಡನು. ಮುಂದೆ ಆಕಾಶ ರಾಜನ ಮಗಳಾದ ಪದ್ಮಾವತಿ ಯೊಂದಿಗೆ ಮಗ ಶ್ರೀನಿವಾಸನ ಮದುವೆಯನ್ನು ಬಕುಳಾದೇವಿಯೇ ಮುಂದೆ ನಿಂತು, ಹಿಂದೆ ಅಂತ ಮದುವೆ ಯಾಗಿಲ್ಲ ಮುಂದೆ ಆಗುವುದಿಲ್ಲ ಅನ್ನುವ ಹಾಗೆ, ಶ್ರೀನಿವಾಸನು ತನ್ನ ಮದುವೆಗಾಗಿ ಕುಬೇರನ ಹತ್ತಿರ ಸಾಲ ಮಾಡಿ ಬಾರಿ ಮದುವೆಯನ್ನು ಸಂಭ್ರಮ ಸಡಗರದಿಂದ ಮಾಡಿ ಕೊಂಡನು. ಅಂತಹ ಶ್ರೀನಿವಾಸ ಪದ್ಮಾವತಿ ರ ಕಲ್ಯಾಣಕ್ಕೆ ಸಾಕ್ಷಿಯಾಗಿ ದ್ವಾಪರದ ಯಶೋದೆ ಕಲಿಯುಗದಲ್ಲಿ ಬಕುಳಾದೇವಿಯಾಗಿ ಆ ಸಂಭ್ರಮವನ್ನು ಕಣ್ತುಂಬಿ ಕೊಂಡಳು. ( ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆಯ ಬದಲಿಗೆ ಅಲ್ಲಿ ‘ವೇದವತಿ’ ಇದ್ದು, ರಾಮ ರಾವಣರ ಯುದ್ಧವೆಲ್ಲ ಮುಗಿದ ನಂತರ ರಾಮನು ವೇದವತಿಗೆ ಏನು ವರ ಬೇಕು ಎಂದು ಕೇಳಿದಾಗ ನೀನು ನನ್ನನ್ನು ವಿವಾಹ ಆಗಬೇಕು ಎಂದಳಂತೆ ರಾಮ ಆಗ ಏಕ ಪತ್ನಿ ವ್ರತಸ್ಥ ನಾದುದರಿಂದ ಮುಂದಿನ ಯುಗದಲ್ಲಿ ಶ್ರೀನಿವಾಸನಾಗಿ ಬಂದು ನಿನ್ನನ್ನು ವಿವಾಹ ಆಗಬೇಕು ಎಂದು ಮಾತು ಕೊಟ್ಟಿದ್ದನಂತೆ ಅದರಂತೆ ವೇದವತಿಯೇ ಪದ್ಮಾವತಿಯಾಗಿ ಜನಿಸಿ ರಾಮನೆ ಶ್ರೀನಿವಾಸನಾಗಿ ಅವಳ ಇಚ್ಛೆಯಂತೆ ವಿವಾಹವಾದನು. ಮುಂದೆ ಲಕ್ಷ್ಮಿಗೂ ಮತ್ತು ಪದ್ಮಾವತಿ ಸರಿ ಬರದೆ ಶ್ರೀನಿವಾಸ ತಿರುಪತಿಯಲ್ಲಿ ಕಲ್ಲಾದ ಎನ್ನುವ ಕಥೆಯು ಇದೆ.) ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ! ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ
11 likes
18 shares
ರಾಧಾಕೃಷ್ಣ 🦚💙
784 views 3 months ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಕಟುಕನ ಬಾಯಲ್ಲಿ ಹರಿ ಶ್ರೀಮನ್ನಾರಾಯಣ :- ಗುಜರಾತ್ ರಾಜ್ಯದ ಒಂದು ಗ್ರಾಮದಲ್ಲಿ "ದಾರುಬ್ರಹ್ಮ" ಎಂಬ ವ್ಯಕ್ತಿಯು ಮಾಂಸದ ವ್ಯಾಪಾರ ಮಾಡುತ್ತಿದ್ದನು. ತುಂಬಾ ಪ್ರಾಮಾಣಿಕ ವ್ಯಕ್ತಿ. ಅವನು ಮಹಾವಿಷ್ಣುವಿನ ಪರಮ ಭಕ್ತನಾಗಿದ್ದನು. ಅವನು ಬೆಳಿಗ್ಗೆಯಿಂದ ರಾತ್ರಿ ಮಲಗುವ ತನಕ ಹಾಗೂ ಮಾಂಸದ ವ್ಯಾಪಾರ ಮಾಡುವಾಗ ಭಗವಂತನ ನಾಮಸ್ಮರಣೆ ಮಾಡುತ್ತಿದ್ದನು. ಸದಾ ಅವನ ಬಾಯಲ್ಲಿ, "ಶ್ರೀಮನ್ನಾರಾಯಣ ಹರಿ, ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ" ಎಂದು ಪುಂಖಾನುಪುಂಕವಾಗಿ ಅವನ ಬಾಯಲ್ಲಿ ಬರುತ್ತಿತ್ತು. ಇದು ಅಲ್ಲಿ ಬರುವ ಎಲ್ಲಾ ವ್ಯಾಪಾರಿಗಳಿಗೂ, ಸುತ್ತುಮುತ್ತು ಇರುವವರಿಗೂ ತಿಳಿದಿತ್ತು. ಅವರೆಲ್ಲರೂ ದಾರುಬ್ರಹ್ಮನ ಕುರಿತು ಮಾತನಾಡುತ್ತಿದ್ದರು. ಅವನು ನಾರಾಯಣನ ಪರಮಭಕ್ತ. ವ್ಯಾಪಾರ ಮಾಡುವಾಗ ಹಣ ಎಷ್ಟು ಕೊಟ್ಟರು ಎಂದು ನೋಡುವುದಿಲ್ಲ, ಮತ್ತು ಮಾಂಸದ ವ್ಯಾಪಾರ ಮಾಡುತ್ತಾನೆ. ಆದರೆ ತಾನು ತಿನ್ನುವುದಿಲ್ಲ. ಅವನ ಭಕ್ತಿಗೋ, ಒಳ್ಳೆಯತನಕ್ಕೋ, ಮುಗ್ಧತೆಗೋ, ಯಾವುದೇ ಗಿರಾಕಿಗಳು ಅವನಿಗೆ ಎಂದೂ ಮೋಸ ಮಾಡುತ್ತಿರಲಿಲ್ಲ. ಗಿರಾಕಿಗಳು ಅರ್ದ ಕಿಲೋ ಕೊಡು ಎಂದರೆ, ಈಗ್ಲೇ ಕೊಡುತ್ತೀನಿ, ಜೈ ಶ್ರೀ ಹರಿ ಎಂದು, ಅವರಿಂದ ಹಣ ತೆಗೆದುಕೊಳ್ಳುವಾಗ, ಚಿಲ್ಲರೆ ಕೊಡುವಾಗ, ಜೈ ಶ್ರೀ ಹರಿ, ಎಂದು ಹೇಳುತ್ತಿದ್ದನು. ಅಂಗಡಿಯ ಸುತ್ತಮುತ್ತಲು ಭಕ್ತಿಯ ವಾತಾವರಣ ತುಂಬಿತ್ತು. ಒಂದು ದಿನ ಅವನು ಮನೆಯಿಂದ ಅಂಗಡಿಗೆ ಬರುತ್ತಿರುವಾಗ, ದಾರಿಯಲ್ಲಿ ಒಂದು ಕಲ್ಲು ಎಡವಿದನು. ಬಗ್ಗಿ ಕಲ್ಲನ್ನು ಎತ್ತಿ ಬದಿಗೆ ಹಾಕಲು ಹೊರಟಿದ್ದನು. ಆದರೆ ಅವನ ಕಣ್ಣಿಗೆ ಕಲ್ಲು ಆಕರ್ಷಣೀಯವಾಗಿ ಕಂಡಿತು. ಖುಷಿಯಾದ ಅವನು ವಾಹ್ ಗೋಲಾಕಾರದ ಈ ಕಪ್ಪನೆಯ ಕಲ್ಲು ಎಷ್ಟು ಚೆನ್ನಾಗಿದೆ ಹಾಗೂ ದೊಡ್ಡದಾಗಿದೆ. ಅಂಗಡಿಯಲ್ಲಿ ಯಾವುದಾದರೂ ಕೆಲಸಕ್ಕೆ ಬರುತ್ತದೆ. ಎಂದು ಕೊಂಡು ಅಂಗಡಿಗೆ ತಂದನು. ಅದೇ ವೇಳೆಗೆ ವ್ಯಾಪಾರಿಯೊಬ್ಬ ಬಂದು, ಒಂದು ಕಿಲೋ ಮಟನ್ ಕೊಡಲು ಹೇಳಿದ. ದಾರುಬ್ರಹ್ಮ ತೂಗು ತಕ್ಕಡಿಯಲ್ಲಿ ತನಗೆ ಸಿಕ್ಕ ಕಲ್ಲು ಇಟ್ಟನು. ಇನ್ನೊಂದು ಬದಿ ಮಟನ್ ಹಾಕಿದ. ಅದು ಒಂದು ಕಿಲೋ ತೂಗಿತು. ಆಗ ದಾರು ಅಂದುಕೊಂಡ, ಓಹೋ ಈ ಕಲ್ಲು ಒಂದು ಕಿಲೋ ತೂಗುತ್ತದೆ ಎಂದು. ಅದಾಗಲೇ ಮತ್ತೊಬ್ಬ ಬಂದು, ಅರ್ಧ ಕಿಲೋ ಕೊಡು ಎಂದು ಕೇಳಿದ. ತೂಕದ ತಕ್ಕಡಿಗೆ ಮಟನ್ ಹಾಕಿದ, ಆ ಕಲ್ಲು ಅರ್ದ ಕಿಲೋ ತೂಕ ತೋರಿಸಿತು. ತುಂಬಾ ಆಶ್ಚರ್ಯವಾಯಿತು. ಮೊದಲೇ ಬಂದಿದ್ದ ಗಿರಾಕಿ, ಈ ಕಲ್ಲು ಜಾದು ಮಾಡುತ್ತದೆ. ಆಗ ನನಗೆ ಕೇಳಿದಾಗ 1 ಕಿಲೋ ತೋರಿಸಿತು, ಇವನು ಅರ್ಧ ಕಿಲೋ ಕೇಳಿದ ಅದು ಈಗ ಅರ್ಧ ಕಿಲೋ ತೂಕ ತೋರಿಸುತ್ತಿದೆ. ತಕ್ಷಣ ದಾರುಬ್ರಹ್ಮ 5 ಕೆಜಿ ಮಟನ್ ಹಾಕಿದ. ಕಲ್ಲು ಸಹ 5 ಕೆಜಿ ತೂಕ ತೋರಿಸಿತು. ಇದಂತೂ ತುಂಬಾ ಆಶ್ಚರ್ಯವಾದ ವಿಚಾರ. ಒಬ್ಬರಿಂದ ಒಬ್ಬರಿಗೆ ಹೋಗಿ ಊರೆಲ್ಲ ಹರಡಿ ಎಲ್ಲರೂ ಈ ವಿಚಿತ್ರವನ್ನು ನೋಡಲು ಬಂದರು, ಮತ್ತು ಬರುತ್ತಲೇ ಇದ್ದರು. ಅಂಗಡಿಯ ಸುತ್ತಮುತ್ತ ಜಾತ್ರೆಯಂತೆ ಜನ ಸೇರುತ್ತಿದ್ದರು. ದಾರುಬ್ರಹ್ಮ ಕಲ್ಲನ್ನು ನೋಡಿ, ಇದು ನಿಜವಾಗಿ ಜಾದು ಕಲ್ಲು, ರಸ್ತೆಯಲ್ಲಿ ಬಿದ್ದಿತ್ತು ನನಗೆ ಸಿಕ್ಕಿತು. ಈ ಕಲ್ಲು ಬಂದ ಮೇಲೆ ನನಗೆ ವ್ಯಾಪಾರ ಹೆಚ್ಚಳವಾಗಿದೆ. ಶ್ರೀಮನ್ನಾರಾಯಣ ತಂದೆ ಎಲ್ಲಾ ನಿನ್ನ ಕರುಣೆ ಎಂದನು. ಕೆಲವು ಜನರು ಕಲ್ಲಿನ ಚಮತ್ಕಾರಿ ವಿಚಾರವನ್ನು ಹಳ್ಳಿಯಲ್ಲಿದ್ದ ದೇವಸ್ಥಾನದ ಮುಖ್ಯ ಪುರೋಹಿತರಿಗೆ ತಿಳಿಸಿದರು. ದೇವಸ್ಥಾನದಲ್ಲಿದ್ದ ಅರ್ಚಕರಿಗೆ ಆ ಕಲ್ಲನ್ನು ನೋಡಬೇಕೆಂದು ಕುತೂಹಲವಾಯಿತು. ಅವನ ಅಂಗಡಿಗೆ ಬಂದು, ಅಂಗಡಿಯಿಂದ ದೂರದಲ್ಲಿ ನಿಂತು ನೋಡಿದರು. ಅವನು ಹರಿಭಜನೆ ಮಾಡುತ್ತಾ, ಮಾಂಸ ಕತ್ತರಿಸುವುದನ್ನು, ತೂಕ ಮಾಡಿ ಮಾರುವುದನ್ನು, ಎಲ್ಲಾ ನೋಡಿದರು. ಅವನು ಕಲ್ಲನ್ನು ತೆಗೆಯದೆ. ಎಷ್ಟು ಬೇಕು ಎಂದು ಹಾಕಿದರೆ ಆ ಕಲ್ಲು ಅಷ್ಟೇ ತೂಗುತ್ತಿತ್ತು. ಈ ಚಮತ್ಕಾರವನ್ನು ನೋಡಿದ ದೇವಾಲಯದ ಅರ್ಚಕರಿಗೆ ಮೈ ರೋಮಾಂಚನವಾಯಿತು. ಭಾವುಕರಾದ ಅವರು, ಕಸಾಯಿ ದಾರುಬ್ರಹ್ಮ ನ ಅಂಗಡಿ ಸಮೀಪ ಬಂದರು. ತನ್ನ ಕೆಲಸದಲ್ಲಿಯೇ ನಿರತನಾಗಿದ್ದ ದಾರುಬ್ರಹ್ಮ ಪಕ್ಕನೆ ತಿರುಗಿ ದೇವಸ್ಥಾನದ ಮುಖ್ಯಸ್ಥರನ್ನು ನೋಡಿ ಆಶ್ಚರ್ಯವಾಯಿತು. ಓಡಿಬಂದು, ಬ್ರಾಹ್ಮಣ ದೇವ, ಕಸಾಯಿ ಅಂಗಡಿಯಲ್ಲಿ, ನೀವು? ಗಾಬರಿಯಿಂದ ನನ್ನಿಂದ ಏನಾಗಬೇಕು? ಏನಾದರೂ ತಪ್ಪಾಯಿತೆ ಎಂದು ಕೈಮುಗಿದು ಕೇಳಿದ. ದಾರು, ನಿನ್ನ ಅಂಗಡಿಯಲ್ಲಿ ಒಂದು ಚಮತ್ಕಾರಿ ಕಲ್ಲು ಇದೆ ಎಂದು ಜನ ಹೇಳಿದರು. ಅದನ್ನು ನೋಡಲು ಬಂದಿದ್ದೆ, ದೂರದಿಂದಲೇ ನಿಂತು ನಾನು ನೋಡಿದೆ ಅದು ಸಾಧಾರಣ ಕಲ್ಲಲ್ಲ. ಭಗವಾನ್ ವಿಷ್ಣುವಿನ ಅಂಶವಾದ ಸಾಲಿಗ್ರಾಮ. ಅಂತಹ ಪವಿತ್ರವಾದ ಮಹಾವಿಷ್ಣುವಿನ ವಾಸವಿರುವ ಸಾಲಿಗ್ರಾಮವನ್ನು ಇಂಥ ಮಲಿನ ಜಾಗದಲ್ಲಿ ಇಟ್ಟುಕೊಳ್ಳಬಾರದು ಮಹಾಪಾಪ ಎಂದರು. ಅರ್ಚಕರು ಹೇಳಿದುದನ್ನು ಕೇಳಿದ ದಾರುಬ್ರಹ್ಮ ನು ಸ್ವಾಮಿ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿಲ್ಲದೆ ಭಗವಾನ್ ಮಹಾವಿಷ್ಣುವಿನ ಸಾಲಿಗ್ರಾಮವನ್ನು ನನ್ನ ಕಸಾಯಿಖಾನೆ ಅಂಗಡಿಯಲ್ಲಿ ಇಟ್ಟುಕೊಂಡು ಘೋರ ಅಪರಾಧ ಎಸಗಿದ್ದೇನೆ. ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ನನ್ನನ್ನು ಕ್ಷಮಿಸು ತಂದೆ ಎಂದು ಬಹಳ ನೊಂದುಕೊಂಡು, ಬ್ರಾಹ್ಮಣ ದೇವ, ನೀವು ಮಂದಿರದಲ್ಲಿ ಭಗವಂತನ ಪೂಜೆ ಮಾಡುವವರು. ಈ ವಿಷ್ಣುವಿನ ಕಲ್ಲನ್ನು ನೀವೇ ತೆಗೆದುಕೊಂಡು ಹೋಗಿ, ಪೂಜೆ ಮಾಡಿ ನನ್ನನ್ನು ಅನುಗ್ರಹಿಸಿ ಎಂದು ಕೈಮುಗಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆಗ ಅರ್ಚಕರು, ದಾರುಬ್ರಹ್ಮ ನಿನ್ನದೇನೂ ತಪ್ಪಿಲ್ಲ . ನಿನಗೆ ಸಾಲಿಗ್ರಾಮ ಎಂದು ತಿಳಿಯದು. ಅದಕ್ಕೆ ಹಾಗಾಗಿದೆ ಇನ್ನು ಮುಂದೆ, ಭಗವಾನ್ ಮಹಾವಿಷ್ಣು ವಾಸವಿರುವ ಸಾಲಿಗ್ರಾಮವನ್ನು ಮಂದಿರದಲ್ಲಿಟ್ಟು ಅಭಿಷೇಕ, ಪೂಜೆ, ಅರ್ಚನೆ ನೈವೇದ್ಯ , ಮಂಗಳಾರತಿ ಮಾಡುವೆ. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಿನಗೂ ಒಳ್ಳೆಯದಾಗುತ್ತದೆ ಎಂದರು. ದಾರು ಭಕ್ತಿಯಿಂದ ಸಾಲಿಗ್ರಾಮವನ್ನು ಅರ್ಚಕರಿಗೆ ಕೊಟ್ಟನು. ಅವರು ಅದನ್ನು ಶ್ರದ್ಧಾಭಕ್ತಿಂದ ತೆಗೆದುಕೊಂಡು ಹೋಗಿ ಗರ್ಭಗುಡಿಯಲ್ಲಿಟ್ಟು ಭಕ್ತಿ ಹಾಗೂ ಸಂತೋಷದಿಂದ ಪೂಜೆ ಅರ್ಚನೆ ಮಾಡುತ್ತಾ ಬಂದರು. ಕೆಲವು ದಿನಗಳೇ ಕಳೆಯಿತು. ಒಂದು ರಾತ್ರಿ ಅರ್ಚಕರಿಗೆ ಕನಸು ಬಿತ್ತು. ಅರ್ಚಕರು ಶೇಷಶಾಯಿಯಾದ ಮಹಾವಿಷ್ಣುವಿನ ಮುಂದೆ ನಿಂತಿದ್ದರು. ಹೇ ಬ್ರಾಹ್ಮಣೋತ್ತಮ , ಕಸಾಯಿಖಾನೆಯವನು ಕೊಟ್ಟ ಸಾಲಿಗ್ರಾಮವನ್ನು ನೀನು ಚೆನ್ನಾಗಿ ಪೂಜೆ ಅರ್ಚನೆ ಮಾಡುತ್ತಿರುವೆ ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ ನನಗೆ ಕಸಾಯಿಖಾನೆಯ ದಾರು ಬ್ರಹ್ಮನ ಮುಗ್ಧ ಭಕ್ತಿ, ನಿತ್ಯ ವೂ ನನ್ನನ್ನು ವರ್ಣನೆ ಮಾಡಿ ಆನಂದಿಸುವುದು, ದಿನದ ಪ್ರತಿ ಕ್ಷಣವೂ ನನ್ನ ನಾಮಸ್ಮರಣೆ ಮಾಡುವುದು, ಅವನ ಅನಂತವಾದ ಭಕ್ತಿ ಶ್ರದ್ಧೆ ಪ್ರೀತಿ ಇವು ನನಗೆ ಬಹಳ ಇಷ್ಟ. ಆದುದರಿಂದ ಕಸಾಯಿಖಾನೆಯವನಿಗೆ ಸಾಲಿಗ್ರಾಮವನ್ನು ಕೊಡು ಎಂದನು. ಬ್ರಾಹ್ಮಣನು ಹೆದರಿ, ಹೇ ಮಹಾವಿಷ್ಣು ನಾನು ಮಾಡುವ ಪೂಜೆಯಲ್ಲಿ ಲೋಪ ವಾಯಿತೇ, ನನಗೆ ತಿಳಿದ ಮಟ್ಟಿಗೆ ನಾನು ಶ್ರದ್ಧೆಯಿಂದ ಮಾಡಿದೆ ಹೇ ಭಗವಂತ ನನ್ನನ್ನು ಕ್ಷಮಿಸು ತಂದೆ ಎನ್ನುತ ಕೈ ಮುಗಿದು ಅಳುತ್ತಾ ಭಗವಂತನ ಪಾದಕಮಲಗಳನ್ನು ಕಣ್ಣೀರಿನಿಂದ ತೋಯಿಸಿದನು. ಪರಮಾತ್ಮನು ಬ್ರಾಹ್ಮಣನನ್ನು ಮೇಲೆತ್ತಿ, ಬ್ರಾಹ್ಮಣೋತ್ತಮ ನಿನ್ನ ಪೂಜೆ ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ, ಕಸಾಯಿಖಾನೆಯ ದಾರುಬ್ರಹ್ಮ ಮಾಡುವ ನಾಮಸ್ಮರಣೆ ನನಗೆ ಕೇಳುವುದು ತುಂಬಾ ಇಷ್ಟ. ಆದ್ದರಿಂದ ಸಾಲಿಗ್ರಾಮ ಅವನಿಗೆ ಕೊಡು ಎಂದನು. ಬ್ರಾಹ್ಮಣನಿಗೆ ಎಚ್ಚರವಾಯಿತು. ತಕ್ಷಣ ಸಾಲಿಗ್ರಾಮವನ್ನು ತೆಗೆದುಕೊಂಡು ಕಸಾಯಿಖಾನೆಯವನ ಅಂಗಡಿಗೆ ಹೋಗಿ, ದಾರುಬ್ರಹ್ಮ, ಭಗವಾನ್ ಮಹಾವಿಷ್ಣುವಿಗೆ ನೀನು ಅಂತರಾಳದಿಂದ ಮಾಡುವ ನಾಮಸ್ಮರಣೆಯೇ ಅವನಿಗೆ ಬೇಕಂತೆ, ಅವನು ನಿನ್ನ ಬಾಯಿಂದ ಬರುವ ನಾಮಸ್ಮರಣೆ ಹಿತವಂತೆ. ಎಂತೆಂಥ ತಪಸ್ಸು ಮಾಡಿದ ಋಷಿಮುನಿಗಳಿಗೆ ಅಲಭ್ಯವಾಗಿರುವ ಶ್ರೀಮನ್ನಾರಾಯಣನಿಗೆ ನಿನ್ನ ಅಂತರಂಗದ ಭಕ್ತಿಯೇ ಇಷ್ಟ. ಆದುದರಿಂದ ಸಾಲಿಗ್ರಾಮವನ್ನು ನೀನೇ ಅಂಗಡಿಯಲ್ಲಿ ಇಟ್ಟುಕೋ ಎಂದು ಕೊಟ್ಟನು. ದಾರುಬ್ರಹ್ಮ ಸಾಲಿಗ್ರಾಮವನ್ನು ತೆಗೆದುಕೊಂಡು ಆನಂದಭಾಷ್ಪ ಸುರಿಸುತ್ತಾ ಎದೆಗೊತ್ತಿಕೊಂಡು ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಎಂದು ಮೈಮರೆತನು. ಮತ್ತೆ ದಾರು ಬ್ರಹ್ಮಮಾಡುವ ಭಗವಂತನ ನಾಮಸ್ಮರಣೆಯ ತರಂಗಗಳು ಅಲೆ ಅಲೆ ಯಾಗಿ ಎಲ್ಲೆಡೆ ವ್ಯಾಪಿಸಿತು. ನಾರಾಯಣ ನಾರಾಯಣ ಜಯ ಗೋವಿಂದ ಹರೇ ನಾರಾಯಣ ನಾರಾಯಣ ಜಯ ಗೋವಿಂದ ಹರೇ ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ ಘನನೀರದಸಂಕಾಶ ಕೃತಕಲಿ ಕಲ್ಮಶ ನಾಶನ ನಾರಾಯಣ ಯಮುನಾ ತೀರ ವಿಹಾರ ! ಧೃತ ಕೌಸ್ತುಭ ಮಣಿಹಾರ ನಾರಾಯಣ ಪಿತಾಂಬರ ಪರಿಧಾನ ಸುರ ಕಲ್ಯಾಣ ವಿಧಾನ ನಾರಾಯಣ! ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಭಜಮನ ಶ್ರೀಮನ್ನಾರಾಯಣ ಭಜಮನ ಶ್ರೀಮನ್ನಾರಾಯಣಾಅಅಅ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
11 likes
13 shares