ದಿನಕ್ಕೊಂದು ಕಥೆ

36 Posts • 35K views
ಕೃಷ್ಣೆ 🦚💙
520 views 2 days ago
#ದಿನಕ್ಕೊಂದು ಕಥೆ 🙏 ಹರಿಃ ಓಂ 🕉️ ಆಚಾರ್ಯ ಸದ್ಬೋಧನೆ.. ➖➖➖ ಮನಸ್ಸು ಆರೋಗ್ಯವಾಗಿದ್ದರೆ, ಮನುಷ್ಯನು ಆರೋಗ್ಯವಾಗಿರುತ್ತಾನೆ. ಮನಸ್ಸು ಆರೋಗ್ಯವಾಗಿರಬೇಕಾದರೆ, ಕಳೆದ ಕಾಲದ ಬಗ್ಗೆ ಕಡಿಮೆ ಯೋಚಿಸು. ಭವಿಷ್ಯವನ್ನು ಹೆಚ್ಚು ಪ್ರೀತಿಸು. ➖➖➖ ಸಾಧಿಸಬೇಕು ಎಂಬ ತಪನ ಇದ್ದರೆ, ಯಾರೂ ಪ್ರೋತ್ಸಾಹಿಸಬೇಕಾಗಿಲ್ಲ. ➖➖➖ ಯಾರೂ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವಿಲ್ಲ. ಯಾರೂ ನಮ್ಮ ಹಿಂದೆ ನಡೆದು ಪ್ರತಿಯೊಂದು ಹೆಜ್ಜೆಯಲ್ಲೂ ಹೊಗಳಬೇಕಾಗಿಲ್ಲ. ➖➖➖ ಯಾರು ನಿನ್ನ ಜೊತೆ ನಿಂತರೂ, ನಿಂತಿರದರೂ, ನಿನ್ನ ಗುರಿಯ ಕಡೆಗೆ ಮಾತ್ರ ನಿನ್ನ ಹೆಜ್ಜೆಗಳು ಸಾಗಿದರೆ, ನಿನ್ನ ಜೀವನ ವಿಭಿನ್ನವಾಗಿರುತ್ತದೆ. ➖➖➖ ವ್ಯಕ್ತಿತ್ವವನ್ನು ಖರೀದಿಸಲು ಸಾಧ್ಯವಿಲ್ಲ. ಅದು ತಾಯಿ-ತಂದೆಗಳು ಕಲಿಸಿದರೆ ಬರುತ್ತದೆ. ಗುರುಗಳಿಂದ ಕಲಿತರೆ ಬರುತ್ತದೆ. ಕೆಲವರಿಗೆ ಜನ್ಮಸಿದ್ಧವಾಗಿಯೂ ಬರುತ್ತದೆ. ➖➖➖ ಒಮ್ಮೆ ಬಂದರೆ ಅದು ಸಾಯುವ ತನಕ ನಿನ್ನ ನೆರಳಾಗಿ, ನಿನ್ನ ಜೊತೆ, ನಿನ್ನೊಳಗೆ ಇರುತ್ತದೆ. ➖➖➖ ಅದು ಬಿಸಿಲಿಗೆ ಒಣಗುವುದಿಲ್ಲ. ಮಳೆಯಿಗೆ ತೋಯುವುದಿಲ್ಲ. ಹಣದ ಪ್ರಲೋಭನಕ್ಕೆ ಬಲಿಯಾಗುವುದಿಲ್ಲ. ➖➖➖ ಸರಿಯಾದ ವ್ಯಕ್ತಿಗೆ ವ್ಯಕ್ತಿತ್ವವೇ ಆಸ್ತಿ, ಆಭರಣ..! ➖➖➖ ಬರಹ 👉 ವೇದಾಂತ ಜ್ಞಾನ ಯವರಿಂದ ಸರ್ವಂ ಶ್ರೀಕೃಷ್ಣಾರ್ಪಣಮಸ್ತು 🌷🙏🌷
13 likes
12 shares
ಕೃಷ್ಣೆ 🦚💙
535 views 2 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶಿವ ಶಕ್ತಿಯರ ‘ಗೌರಿ’ ತವರೂರು ಗುಮ್ಮಳಾಪುರ:- ಬೆಂಗಳೂರಿನ ಹೊರಬಾಗದ ಆನೇಕಲ್ ತಾಲೂಕಿನ ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯ ಸಮೀಪ ಗುಮ್ಮಳಾಪುರ ಎಂಬ ಗ್ರಾಮವಿದೆ. ಈ ಗ್ರಾಮವನ್ನು ಗೌರಿ ದೇವಿಯ ತವರೂರು ಎನ್ನುತ್ತಾರೆ. ಒಮ್ಮೆ ಶಿವನು ಗೌರಿಯನ್ನು ಕರೆದು ಕೊಂಡು ಹೋಗಲು ಬಂದಿದ್ದ ಎಂಬುದಕ್ಕಾಗಿ ಇದನ್ನು ‘ಕೈಲಾಸ ಪುರಿ’ ‘ ಭೂ ಕೈಲಾಸ’ ಅಂತಲೂ ಕರೆಯುತ್ತಾರೆ. ಇಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸಂಪತ್ತು ಹೇರಳವಾಗಿದೆ. ಈ ಗುಮ್ಲಾ ಪುರದಲ್ಲಿ ಪುರಾತನ ಕಾಲದಿಂದ ಪ್ರಸಿದ್ಧವಾದ ‘ಗೌರಿ ದೇವಿಯ’ ದೇವಸ್ಥಾನವಿದೆ. ವಿಶೇಷ ಎಂದರೆ ಎಲ್ಲಾ ದೇವಾಲಯಗಳಂತೆ ನಿತ್ಯ ಪೂಜೆ ನಡೆಯುವುದಿಲ್ಲ. ವರ್ಷದಲ್ಲಿ ಒಂದು ತಿಂಗಳು ಮಾತ್ರ ದೇವಾಲಯದ ಬಾಗಿಲು ತೆಗೆದಿದ್ದು ಭರಪೂರ ಭಕ್ತರನ್ನು ಆಕರ್ಷಿಸುವ ದೇವಾಲಯ ಆಗಿದೆ.‌ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬಾಗಿಲು ತೆಗೆದು ತದಿಗೆ ದಿನ ಬರುವ ಗೌರಿ ಗಣೇಶ ಹಬ್ಬದಲ್ಲಿ,‌ ಮಣ್ಣಿನಿಂದ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಒಂದು ತಿಂಗಳು ತವರು ಮನೆಯ ಆತಿಥ್ಯ ಎಂದು ಗೌರಿಗೆ ವಿಶೇಷ ಪೂಜೆ ನೈವೇದ್ಯ ಮಾಡುತ್ತಾರೆ. ಒಂದು ತಿಂಗಳು ಅಂದರೆ, ಮಹಾಲಯ ಅಮಾವಾಸ್ಯೆ ನಂತರ ಬರುವ ಗುರುವಾರದ ತನಕ ಪೂಜೆ- ಭಜನೆ- ವಿಶೇಷ ಅಲಂಕಾರಗಳನ್ನು ಮಾಡಿ, ಜಾತ್ರೆ ನಡೆಸಿ ಗೌರಮ್ಮನಿಗೆ ಮಡಿಲು ತುಂಬಿ ತವರು ಮನೆಯಿಂದ‌ ಗಂಡನ ಮನೆ ಕೈಲಾಸಕ್ಕೆ ಕಳುಹಿಸುವ ಕೊಡುವ ಆಚರಣೆ ನಡೆಸುತ್ತಾರೆ. ಪ್ರತಿ ವರ್ಷ ತವರೂರಿಗೆ ಬಂದ ಗೌರಿ ಒಂದು ತಿಂಗಳು ತವರಿನ ಲ್ಲಿದ್ದು ಉಳಿದ 11 ತಿಂಗಳು ಗಂಡನ ಮನೆ ಕೈಲಾಸದಲ್ಲಿ ಇರುತ್ತಾಳೆ ಎಂಬ ಪ್ರತೀತಿ ಇದೆ. ಈ ಗ್ರಾಮದಲ್ಲಿ 770 ಶಿವಶರಣರು ವಾಸವಾಗಿದ್ದರು. ಇಲ್ಲಿನ ಗುರುಕುಲದಲ್ಲಿ ಊರ ಮಕ್ಕಳು, ನೆರೆಹೊರೆ ಗ್ರಾಮ ಹಳ್ಳಿಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ರು. ಪ್ರತಿ ವರ್ಷ ನಡೆವ ಜಾತ್ರೆಗೆ ಊರಿನ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬರುವ ಪದ್ಧತಿ ಇತ್ತು. ಆ ವರ್ಷವು ಗೌರಿ ಹಬ್ಬ ಬಂದಿತು ಗುರುಕುಲದಲ್ಲಿ ಓದುತ್ತಿದ್ದ ಗಂಡು ಮಕ್ಕಳು ಗೌರಿ ಹಬ್ಬ ಬಂದ ಕೂಡಲೇ ರಜಾ ತೆಗೆದುಕೊಳ್ಳುತ್ತಿದ್ದರು. ಶಿವಶರಣರ ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು ಇರಲಿಲ್ಲ. ಆ ಮನೆಯ ಹುಡುಗ ಗುರುಕುಲಕ್ಕೆ ಬರುತ್ತಿದ್ದ. ಎಲ್ಲಾ ಹುಡುಗರು ರಜೆ ತೆಗೆದುಕೊಂಡಿದ್ದು ನೋಡಿ ಅವನು ಕೇಳಿದ ಹಬ್ಬಕ್ಕೆ ನನಗೂ ರಜಾ ಬೇಕು ಎಂದು. ಯಾಕೋ ನಿನಗೆ ರಜಾ, ಅಕ್ಕ ಇಲ್ಲ- ತಂಗಿ ಇಲ್ಲ ನಿಮ್ಮ ಮನೆಯಲ್ಲಿ ಹಬ್ಬವೇ ಇಲ್ಲ. ರಜ ಏಕೆ ಎಂದ ಗುರುಗಳ ಮಾತಿಗೆ, ಉಳಿದ ಹುಡುಗರೆಲ್ಲ ಜೋರಾಗಿ ನಕ್ಕರು. ಇದು ಆ ಹುಡುಗ ಅವಮಾನ ಎಂದು ಭಾವಿಸಿದ. ಮನೆಗೆ ಬಂದು ತಾಯಿ ಹತ್ತಿರ ಅಮ್ಮ ನನಗೆ ಈಗಲೇ ಅಕ್ಕ ಬೇಕು ತಂದು ಕೊಡು ಎಂದು ಹಠ ಮಾಡಿದ. ಎಷ್ಟೇ ಸಮಾಧಾನ ಮಾಡಿದರು ಕೇಳಲಿಲ್ಲ. ಇಲ್ಲದ ಅಕ್ಕನನ್ನು ನಿನಗೆ ಎಲ್ಲಿಂದ ತಂದುಕೊಡಲಿ ಎಂದ ತಾಯಿಗೆ,‌ ಹಾಗಾದರೆ ನಾನೇ ಅಕ್ಕನನ್ನು ಕರೆತರುವೆ ನನಗೆ ಬುತ್ತಿ ಕಟ್ಟಿ ಕೊಡು ಎಂದ. ಸದ್ಯ ಹಠ ನಿಂತರೆ ಸಾಕೆಂದು ತಾಯಿ ಬುತ್ತಿ ಕಟ್ಟಿ ಕೊಟ್ಟಳು. ಹುಡುಗ ಬುತ್ತಿ ಕಟ್ಟಿಕೊಂಡು ಊರು -ಕೇರಿ- ಕಾಡು - ಮೇಡು ಎಲ್ಲಾ ಕಡೆ ಎಲ್ಲಾ ಕಡೆ ಅಕ್ಕ ಬಾ, ಎಲ್ಲಿರುವೆ ಅಕ್ಕ ಮನೆಗೆ ಬಾ ಎಂದು ಕೂಗುತ್ತಿದ್ದ, ಎಲ್ಲಿ ಹುಡುಕಿದರೂ ಅಕ್ಕ ಸಿಗಲಿಲ್ಲ. ಬೇಸತ್ತ ಹುಡುಗ ಎಷ್ಟು ಕರೆದರೂ ಅಕ್ಕಾ ನೀನು ಬರುತ್ತಿಲ್ಲ ನಿನ್ನನ್ನು ಕರೆದುಕೊಂಡು ಬರುವುದಾಗಿ ಅಮ್ಮನಿಗೆ ಹೇಳಿ ಬಂದಿದ್ದೆ, ಈಗ ಮನೆಗೆ ಹೋಗಿ ಏನು ಹೇಳಲಿ? ನಾನು ಮನೆಗೆ ಹೋಗುವುದಿಲ್ಲ ಈ ಬೆಟ್ಟದಿಂದ ಹಾರಿ ಪ್ರಾಣ ಬಿಡುವೆ ಎಂದು ಹಾರಲು ಹೊರಟಿದ್ದ. ಅದು ಮುಸ್ಸಂಜೆ ಸಮಯ. ಶಿವ ಪಾರ್ವತಿಯರು ಆಕಾಶ ಮಾರ್ಗದಲ್ಲಿ ಸಂಚರಿ ಸುತ್ತಾ ಭೂಲೋಕದ ಸ್ಥಿತಿಗತಿಗಳನ್ನು ವೀಕ್ಷಿಸುತ್ತಿದ್ದರು.‌ ಹಾಗೆ ಹೋಗುತ್ತಿದ್ದಾಗ “ಅಕ್ಕಾ ಬಾ, ಅಕ್ಕ ಎಲ್ಲಿದ್ದರೂ ಬಾ, ನೀನು ಬರದಿದ್ದರೆ ನಾನು ಬೆಟ್ಟದಿಂದ ಹಾರು ತ್ತೇನೆ” ಎಂಬ ಕೂಗು ಕೇಳಿ ಪಾರ್ವತಿಯ ಮಾತೃ ಹೃದಯ ಕರಗಿತು, ಆಕೆ ಶಿವನಿಗೆ ಹೇಳಿದಳು. ಯಾರೋ ಬಾಲಕ ನನ್ನನ್ನು ಕೂಗುತ್ತಿದ್ದಾನೆ ನೋಡಿ ಬರುತ್ತೇನೆ ಎಂದಳು. ಜಗತ್ತಿನ ತಂದೆ ಯಾದ ಶಿವನು ಅನುಮತಿಸುತ್ತಾನೆ. ಪಾರ್ವತಿ ಕೂಗು ಬಂದತ್ತ ಬಂದಳು, ನೋಡುತ್ತಾಳೆ, “ಅಕ್ಕಾ ಇವತ್ತು ನೀನು ಬರದಿದ್ದರೆ ನಾನು ಬೆಟ್ಟದ ಕೆಳಗೆ ಬೀಳುವೆ ಎಂದು ಕೂಗುತ್ತಾ ಬಾಲಕ ಹಾರಿದ ಸಮಯಕ್ಕೆ ಬಂದ ಪಾರ್ವತಿ ತನ್ನ ಸೆರಗನ್ನು ಹಾಸಿ ಬಾಲಕನನ್ನು ಹಿಡಿದುಕೊಂಡಳು. ಹುಡುಗನಿಗೆ ಏಕೆ ಹಾರಲು ಹೊರಟಿದ್ದೆ ಎಂದು ಗೌರಿ ಕೇಳಿದಾಗ, ನನಗೆ ಅಕ್ಕ -ತಂಗಿ ಇಲ್ಲ .ನಮ್ಮೂರಿ ನಾ ಜಾತ್ರೆಗೆ ಎಲ್ಲರ ಮನೆಯಲ್ಲೂ ಅಕ್ಕ-ತಂಗಿಯರು ಬರುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಬ್ಬ ಇಲ್ಲ ಎಂದವನೇ, ‌ಅಕ್ಕ ಹೇಗೋ ನೀನು ಬಂದೆಯಲ್ಲ ಈ ವರ್ಷ ಎಲ್ಲರ ಮನೆಯಂತೆ ನಾವು ಹಬ್ಬ ಮಾಡೋಣ ಬಾ ಅಕ್ಕ ನನಗೆ ಅಕ್ಕ ಸಿಕ್ಕೇಬಿಟ್ಟಳು ಎಂದು ಸಂತೋಷದಿಂದ ಕುಣಿಯುತ್ತಾ ,ಬಾ ಅಕ್ಕ ಮನೆಗೆ ಹೋಗೋಣ ಅಮ್ಮ ಕಾಯುತ್ತಿದ್ದಾಳೆ ಎಂದು ಅಕ್ಕನನ್ನು ಕರೆದುಕೊಂಡು ಮನೆಗೆ ಬಂದ. ಅಕ್ಕ ಪಾರ್ವತಿ ಮನೆಗೆ ಬಂದು ಹೊಸಿಲು ದಾಟುತ್ತಿದ್ದಂತೆ. ಮನೆಯಲ್ಲಿ ಸಂಭ್ರಮ ವೈಭವ ತುಂಬಿತು. ಅಕ್ಕನ ಜೊತೆ ಜಾತ್ರೆಯಲ್ಲಿ ಓಡಾಡಿದ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲ. ಮನೆಗೆ ಬಂದ ಗೌರಿಯನ್ನು ದೇವರು ಕೊಟ್ಟ ಮಗಳು ಎಂದೇ ಉಪಚರಿಸುತ್ತಿದ್ದರು. (ಕೈಲಾಸದ ಶಿವನ ಪತ್ನಿ ಗೌರಿ ಬರುವುದು ಎಂದರೆ ಸಾಮಾನ್ಯ ವಲ್ಲ. ಆಕೆ ಬರುವಾಗ 101 ದೇವತೆಗಳು ಹಾಗೆ ಕೆರೆ,‌ ಕುಂಟೆ, ಬಾವಿ, ಶಿವಲಿಂಗ, ಬಿಲ್ವಪತ್ರೆ ಮರ,‌ (ಎಲ್ಲಾ 101 ) ಗಳು ಜೊತೆಯಲ್ಲಿ ಬಂದು ನೆಲೆಸಿದರು ಎಂಬ ಪ್ರತೀತಿ ಇದೆ. ಈಗಲೂ ಇದೆ ಎನ್ನುತ್ತಾರೆ) ಗೌರಿ ದೇವಿ ಊರಿನ ಕೆರೆ ದಡದ ಮೇಲೆ ಕುಳಿತಿದ್ದಳು ಶಿವಶರಣೆಯರು ಹೋಗಿ ಆರತಿ ಮಾಡಿ ಆಕೆಯನ್ನು ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಮಾತಿದೆ. ತವರಿನ ಪ್ರೀತಿಯ ಉಪಚಾರದಲ್ಲಿ ಮೈಮರೆತ ಗೌರಿಗೆ ಒಂದು ತಿಂಗಳು ಕಳೆದದ್ದು ತಿಳಿಯಲಿಲ್ಲ. ಅದಕ್ಕಾಗಿ ಇಲ್ಲಿನ ಜನರು “ಉಂಡ ಗೌರಮ್ಮ ಹರಸುತ್ತಾಳೆ ನಮ್ಮನ್ನು” ಎನ್ನುತ್ತಾರೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತವರಿಗೆ ಹೋದ ಗೌರಿ ಒಂದು ತಿಂಗಳಾಯಿತು ಇನ್ನು ಬಂದಿಲ್ಲ ಎಂದು ಶಿವ ಯೋಚಿಸಿದ. ನಂತರ ದೇವಿಯನ್ನು ಕರೆ ತರಲು ‘ನಂದಿ’ಯನ್ನು ಕಳಿಸುತ್ತಾನೆ. ನಂದಿ ಬಂದಿದ್ದು ಸೋಮವಾರ.‌ ಆ ದಿನ ಬಸವಣ್ಣನ ಜಾತ್ರೆ ಮಾಡಿ, ಕೆಂಡೋತ್ಸವ ಮಾಡುತ್ತಾರೆ. ನಂದಿ ಸಂತೋಷದಿಂದ ಒಂದು ತಿಂಗಳು ಇದ್ದ ಎನ್ನುತ್ತಾರೆ. ಪಾರ್ವತಿ ಇನ್ನೂ ಬರದೇ ಇದ್ದ ಕಾರಣ, ವೀರಭದ್ರನನ್ನು ಕಳಿಸುತ್ತಾನೆ. ಮಂಗಳವಾರ ಬೆಳಗ್ಗೆ ಕೆರೆ ದಂಡೆಯಲ್ಲಿ ಕುಳಿತ ವೀರಭದ್ರನನ್ನು ನೋಡಿದ ಹುಡುಗರು ಹೋಗಿ ಕರೆತರು ವಾಗ ಹೆಜ್ಜೆ ಹೆಜ್ಜೆ ಗೂ ತೆಂಗಿನಕಾಯಿ ಒಡೆಯುತ್ತಾರೆ. ಆತನೀಗೂ ಕೆಂಡೋತ್ಸವ ಸೇವೆ ಮಾಡಿಸಿದಾಗ ವೀರಭದ್ರ ಕೋಪ ಬಿಟ್ಟು ಸದ್ದಿಲ್ಲದೆ ಅಲ್ಲೇ ಕುಳಿತು ಬಿಡು ತ್ತಾನೆ. ಒಂದು ಬುಧವಾರ ದೇವತೆಗಳೆಲ್ಲ ಸಭೆ ಸೇರಿ ಗೌರಿಯನ್ನು ಕರೆತರಲು ಪಂಚಾಯಿತಿ ನಡೆಸಿ ಭೂಲೋಕಕ್ಕೆ ಬಂದರು. ಆಗ ಒಂದು ತಿಂಗಳಾಗಿತ್ತು. ಗೌರಿಯನ್ನು ಗಂಡನ ಮನೆಗೆ ಕಳಿಸುವುದು ಗುರುವಾರ ಎಂದಾಗಿತ್ತು. ಗೌರಿಯನ್ನು ತವರಿಗೆ ಕರೆತರಲು ನಾಲ್ಕಾರು ಜನ ಹೋಗಿ ಸ್ವಾಗತಿಸಿ ಕರೆತರುತ್ತಾರೆ. ಇಲ್ಲಿಂದ ಕಳಿಸಿಕೊಡುವಾಗ 300- 400 ಜನರು ಗೌರಿ ಕೂರಿಸಿದ ಪಲ್ಲಕ್ಕಿ ಯನ್ನು ತಲೆಯ ಮೇಲೆ ಹೊತ್ತು ಗಂಡನ ಮನೆ ಕೈಲಾಸಕ್ಕೆ ಕಳಿಸಲು ಕೆರೆ ನೀರಿನಲ್ಲಿ ವಿಸರ್ಜಿಸಿ ಬರುತ್ತಾರೆ. (ಅವಳ ಜೊತೆ ನೂರ ಒಂದು ದೇವತೆಗಳು ಇರುತ್ತಾರೆ ) ಗೌರಿ ಗಣಪತಿಯರನ್ನು ವಿಸರ್ಜನೆ ಮಾಡಲು ಕರೆದೊಯ್ಯುವ ರಥದಲ್ಲಿ 101 ದೇವತಾ ಸಮೂಹ ಇದ್ದು, ರಥ ಎಳೆಯಲು 300 ರಿಂದ 400 ಜನರು ಇರುತ್ತಾರೆ. ರಥ ಬರುವಾಗ ಎಷ್ಟು ಭಾರ ಇರುತ್ತೋ ಅಷ್ಟೇ ಭಾರ ಇರುತ್ತದೆ. ರಥ ತುಂಬಾ ಭಾರ ಆಗುತ್ತದೆ ಎಂದು ಬರುವಾಗ ಬಂದ ನೂರಾ ಒಂದು ದೇವತೆಗಳು ಗುಮ್ಲಾಪು ರದಲ್ಲೇ ನೆಲೆಸಿದರು ಎಂಬ ಐತಿಹ್ಯವಿದೆ. ಒಂದು ತಿಂಗಳು ಸಂಭ್ರಮದ ಜಾತ್ರೆ ನಡೆಸಿ, ಗೌರಿ- ಗಣೇಶನನ್ನು ಊರಿನ ಕೆರೆಯಲ್ಲಿ ವಿಸರ್ಜಿಸಿದರು. ಆಶ್ಚರ್ಯ ಎಂದರೆ, ಗೌರಮ್ಮನ ಪೂಜೆ ಮಾಡುವಾಗ ಮಂಗಳದ್ರವ್ಯಗಳಾದ ಮಾಂಗಲ್ಯ ,‌ಕೈಗೆ ಹಾಕಿದ ಬಳೆ ಅರಿಶಿನ ಕುಂಕುಮ ಬಟ್ಟಲು ಎಲ್ಲ ನೀರಲ್ಲಿ ವಿಸರ್ಜನೆ ಮಾಡಿ ಬಂದಿರುತ್ತಾರೆ.ಮರುದಿನ ಬೆಳಿಗ್ಗೆ ಕರಿಮಣಿ ಮಾಂಗಲ್ಯ, ಬಳೆ, ಗೌರಿ ಪೀಠ ಹೂವಿನ ಪ್ರಸಾದ ತೇಲುವುದನ್ನು ದನ ಕಾಯುವ ಹುಡುಗರು ನೋಡಿ ಗೌರಿದೇವಿ ಪ್ರಸಾದ ಎಂದು ತಂದರು. ಮರು ವರ್ಷದಿಂದ ಅದೇ ಕೆರೆಯ ಮಣ್ಣನಿಂದ ಗೌರಿದೇವಿ- ಗಣಪತಿ ವಿಗ್ರಹ ಮಾಡಿ ಪೂಜೆ, ಜಾತ್ರೆ ಎಲ್ಲ ಮಾಡುತ್ತಾ ಪದ್ಧತಿಯಾಗಿ ಬಂದಿದೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಗೌರಮ್ಮನ ಜಾತ್ರೆ ಸಮಯದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ದೂರ ದೂರದಿಂದ ಬಂದು, ತವರಿಗೆ ಬಂದ ಗೌರಮ್ಮನಿಗೆ ಮಡಿಲು ( ಮಡ್ಲಕ್ಕಿ) ತುಂಬುತ್ತಾರೆ. ಇದು ಅಲ್ಲಿನ ಪದ್ಧತಿಯಾಗಿದೆ.‌ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು- ಆಂಧ್ರಪ್ರ ದೇಶ- ಮಹಾರಾಷ್ಟ್ರಗಳಿಂದ ಹೆಂಗಸರು ಕುಟುಂಬ ಸಮೇತ ಸಂಭ್ರಮದಿಂದ ಬಂದು ಜಾತ್ರೆಯನ್ನು ಕಣ್ತುಂಬಿಕೊಂಡು ಪತಿ ಮಕ್ಕಳು ಕುಟುಂಬ ಚೆನ್ನಾಗಿರಲಿ ಎಂದು ಜಗಜ್ಜನನಿಯನ್ನು ಪ್ರಾರ್ಥಿಸಿ ಮಡ್ಲು ತುಂಬುತ್ತಾರೆ. ಇಲ್ಲಿನ ಗೌರಮ್ಮನಿಗೆ ಹಸಿರು- ಕೆಂಪು ಬಳೆಗಳನ್ನು ಅರ್ಪಿಸುತ್ತಾರೆ. ಜಾತ್ರೆ ಮುಗಿದ ಮೇಲೆ ಗೌರಿ ಗಣೇಶನನ್ನು ಕೆರೆಯಲ್ಲಿ ಬಿಟ್ಟು ಕೈಲಾಸಕ್ಕೆ ಕಳುಹಿಸುತ್ತಾರೆ ಆಗ ಶಿವ ಪಾರ್ವತಿಯನ್ನು ಕರೆದೊಯ್ಯಲು ಅತ್ತೆ ಮನೆ ಗುಮ್ಲಾಪುರಕ್ಕೆ ಬರುತ್ತಾನೆ, ಎಂಬ ಭಾವದಿಂದ ಗೌರಿಯನ್ನು, ಮಾಂಗಲ್ಯ ಸರ, ಮೂಗುತಿ ಮತ್ತು ಅಲಂಕರಿಸಿದ ಪೀಠದ ಸಮೇತ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಹಬ್ಬದ ಸಮಯದಲ್ಲಿ ಮೂಗುತಿ ಮಾಂಗಲ್ಯ ಪೀಠದ ಸಮೇತ ಕೆರೆಯಲ್ಲಿ ಮೇಲೆ ಕಾಣಿಸುತ್ತವೆ. ಅಲ್ಲಿಗೆ ಬರುವ ದನ ಕಾಯುವ ಹುಡುಗರಿಗೆ ಸಿಗುತ್ತದೆ. ಆ ಹುಡುಗರು ತಂದು ಗೌರಮ್ಮನ ಜಾತ್ರೆ ಮಾಡುತ್ತಾ ಬಂದರು.‌ ಈ ಒಂದು ತಿಂಗಳು ಮಾತ್ರ ಗೌರಿ ದೇವಸ್ಥಾನ ತೆರೆದಿದ್ದು ಜಾತ್ರೆ ಉತ್ಸವ ನಡೆಯುತ್ತದೆ. ಗುಂಮ್ಲಾಪುರದ ವಿಶೇಷತೆಯಾದ ಸುತ್ತಮುತ್ತ 101 ದೇವತೆಗಳು, ಹಾಗೆ ಕೆರೆ- ಕುಂಟೆ, ಕಲ್ಪವೃಕ್ಷ - ಬಿಲ್ವಪತ್ರೆ ಮರ, ಗುಹೆ, ಎಲ್ಲವೂ 101 ಇರುವುದು ಗೌರಿಯ ವರಪ್ರಸಾದವೆಂದೆ ಭಾವಿಸಿದ್ದಾರೆ. ಈ ಕ್ಷೇತ್ರವು ಕಲಿಯುಗದ ಆರಂಭದಿಂದಲೂ ಶಿವಶರಣರ ನೆಲೆಯಾಗಿದೆ ಎಂಬ ಉಲ್ಲೇಖವಿದೆ || ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಿಕೇ ದೇವಿ ನಾರಾಯಣಿ ನಮೋಸ್ತು ತೇ| ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
12 likes
15 shares
ಕೃಷ್ಣೆ 🦚💙
1K views 2 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ತಾಂಬೂಲಂ ಪ್ರತಿಗೃಹ್ಯತಾಮ್ :- 'ಕರ್ಪೂರ ಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ್' ಭಗವಂತನ ನೈವೇದ್ಯಕ್ಕೆ ಅಡುಗೆ ಭಕ್ಷಗಳನ್ನು ಅರ್ಪಿಸಿ, ವಿಳ್ಳೆದೆಲೆ ಅಡಿಕೆಯ ಜೊತೆ ಹಣ್ಣು ಹಂಪಲು ಗಳನ್ನು ಇಟ್ಟು ನಿವೇದನೆ ಮಾಡಿ 'ತಾಂಬೂಲಂ ಪ್ರತಿ ಗೃಹ್ಯತಾಮ್' ಎಂದು ವಿಳ್ಳೇದೆಲೆ ತುದಿ ಚಿವುಟಿ ಬದಿಯಲ್ಲಿ ಹಾಕಿ ಮೇಲೆ ಉದ್ಧರಣೆ ನೀರು ಹಾಕಿದರೆ ಭಗವಂತ ಹಣ್ಣನ್ನು ಸವಿದು, ತಾಂಬೂಲ ತಿಂದು ಸಂತುಷ್ಟನಾಗಿದ್ದಾನೆ ಎಂಬ ಭಾವದಿಂದ ಮಾಡಿದ ಪೂಜೆ ಸಂಪನ್ನ ವಾಗುತ್ತದೆ. ಹಾಗೆ ಮನೆಗೆ ಕರೆದ ಅತಿಥಿಗಳಿಗೂ ಊಟವಾದ ನಂತರ ಜೋಡಿಸಿದ ವಿಳ್ಳೆದೆಲೆ, ಅಡಿಕೆ- ಸುಣ್ಣ, ಜೊತೆಗೆ ಸಕ್ಕರೆ,(ಹೊಸ ಸುಣ್ಣವಾಗಿ ನಾಲಿಗೆ ಸುಟ್ಟರೆ ಹಾಕಿಕೊಳ್ಳಲು) ಒಣ ಕೊಬ್ಬರಿ ಚೂರುಗಳು, ಇಡುತ್ತಾರೆ. ಅತಿಥಿಗಳು ಎಲೆ- ಸುಣ್ಣ- ಅಡಿಕೆ- ಎಲ್ಲಾ ಸೇರಿಸಿ ತಾಂಬೂಲ ಬಾಯಿಗೆ ಹಾಕಿ ಸವಿದು ಹೋಗಿ ಬರುತ್ತೇವೆ ಎಂದು ತೃಪ್ತಿಯಿಂದ ಹೇಳಿ ಹೊರಟರೆ ಅವರ ಆಶೀರ್ವಾದ ದೊರೆತಿದೆ ಎಂಬುದು ಗುರುವಾಣಿ. ಆ ಮನೆಯವರಿಗೆ ಸಾಕ್ಷಾತ್ ಭಗವಂತನೇ ಅನುಗ್ರಹ ಮಾಡುತ್ತಾನೆ. ಇಂಥ ವಿಳ್ಳೇದೆಲೆಯ ಮಹತ್ವಕ್ಕೆ ಪುರಾಣ ಹಿನ್ನೆಲೆ ಇದೆ. ಶ್ರೀ ರಾಮ ಸೀತಾ ಲಕ್ಷ್ಮಣ ಸಮೇತ ವನವಾಸಕ್ಕೆ ಹೋದಾಗ ರಾವಣ ಸೀತೆ ಯನ್ನು ಅಪಹರಿಸಿ ಅಶೋಕ ವನದಲ್ಲಿ ಇಡುತ್ತಾನೆ, ಹನುಮಂತ ಲಂಕಾ ನಗರಕ್ಕೆ ಬಂದು ಸೀತೆ ಯನ್ನು ಹುಡುಕಿ, ಆಕೆ ಹೆದರ ಬಹುದು ಎಂದು ಮೊದಲು ಮರದ ಮೇಲೆ ಕುಳಿತು ರಾಮನ ಗುಣಗಾನದ ಹಾಡ ನ್ನು ಹೇಳಿ, ಅವಳು ನಂಬಿದ ಮೇಲೆ, ತನ್ನ ಗಾತ್ರ ವನ್ನು ಕಿರಿದಾಗಿಸಿ ಸೀತೆಗೆ ಕಾಣಿಸಿ ಕೊಂಡು ನಮಸ್ಕರಿಸಿ, ತಾನು ರಾಮನ ಭಂಟ ಹನುಮಂತ ಎಂದು ಪರಿಚಯಿಸಿ ಕೊಂಡು, ರಾಮನೇ ಕೊಟ್ಟ ರಾಮ ಮುದ್ರಿಕೆ ಉಂಗುರ ಸೀತೆಗೆ ಕೊಡುತ್ತಾನೆ. ಸೀತೆಗೆ ಸಂತೋಷ ವಾಯಿತು ಹಾಗೆ ರಾಮ ತನ್ನನ್ನು ಹುಡುಕಲು ಹತ್ತಿರವೇ ಬಂದಿದ್ದಾನೆಂದು ತಿಳಿದು ಅವಳ ಆತ್ಮಸ್ಥೈರ್ಯ ಹೆಚ್ಚುತ್ತದೆ. ಹನುಮಂತ ಅವಳೊಂದಿಗೆ ಮಾತನಾಡಿ ಲಂಕಾ ನಗರದ ಬಹಳಷ್ಟು ಭಾಗ ದಹನ ಮಾಡಿ, ಹೊರಡುವ ಮುನ್ನ ಸೀತೆಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಹನುಮಂತ ಮೇಲಿ ನ ಅಭಿಮಾನ- ಪ್ರೀತಿ- ಪುತ್ರ ವಾತ್ಸಲ್ಯದಿಂದ ಅವನಿಗೆ ಆಶೀರ್ವಾದ ಮಾಡಿ ಏನು ಕೊಡಲಿ ಎಂದು ಸೀತೆಗೆ ತಿಳಿಯಲಿಲ್ಲ. ಆಗ ಕಂಡಿದ್ದೆ ಅಶೋಕವನ ದಲ್ಲಿ ಸೊಂಪಾಗಿ ಬೆಳೆದಿದ್ದ ವಿಳ್ಳೆದೆಲೆ ಬಳ್ಳಿ ಅವಳು ಎಲೆಗಳನ್ನು ಕೊಯ್ದು ಹಾರ ಮಾಡಿ ಹನುಮಂತಗೆ ಹಾಕುತ್ತಾಳೆ. ಸೀತಾ ಮಾತೆ ಆಶೀರ್ವದಿಸಿ ಹಾಕಿದ ಹಾರ ಹನುಮಂತನಿಗೆ ಪಾರಿತೋಷಕ ಪಡೆದಷ್ಟೇ ಸಂತೋಷವಾಗಿ ಸೀತೆ ಯಿಂದ ಬೀಳ್ಕೊಂಡನು, ಆ ದಿನದಿಂದಲೇ ಭಕ್ತರಿಗಾಗಿ ಆಂಜನೇಯ ಒಂದು ವರ ಕೊಟ್ಟನು. ಮುಂದೆ ಯಾರೇ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ನನಗೆ ವಿಳ್ಳೆದೆಲೆ ಹಾರವನ್ನು ಹಾಕಿ ಪ್ರಾರ್ಥಿಸಿದರೆ ಅವರಿಗೆ ಅನುಗ್ರಹಿಸುವೆ ಎಂದು ವಚನ ಕೊಡುತ್ತಾನೆ. ಇದೇ ಕಾರಣದಿಂದ ಭಕ್ತರು ತಮ್ಮ ಇಷ್ಟಾ ರ್ಥ ಸಿದ್ಧಿಗಾಗಿ ಮಂಗಳವಾರ ಅಥವಾ ಶನಿವಾರ ಆಂಜನೇಯನನ್ನು ಪ್ರಾರ್ಥಿಸಿ ಚಿಗುರು ವಿಳ್ಳೇದೆಲೆ ಹಾರವನ್ನು ಭಕ್ತಿಯಿಂದ ಅರ್ಪಿಸಿ ಬೇಡಿ ಕೊಳ್ಳುತ್ತಾರೆ.16, 48,ಅಥವಾ 108, ವಿಳ್ಳೇದೆಲೆಗಳ ಹಾರ ಕಟ್ಟಿ ಆಂಜನೇಯಗೆ ಅರ್ಪಿಸಬೇಕು. ಮನೆಯ ಲ್ಲಿಯೂ ಹಾಕಿ ಪೂಜಿಸಬಹುದು. ನಂತರ ಎಲೆಗಳನ್ನು ಮನೆಯವರೇ ಸೇವಿಸಬೇಕು ಅಥವಾ ಮುತ್ತೈದೆ ಯಾ ಬ್ರಾಹ್ಮಣನಿಗೆ ಅಡಿಕೆ- ದಕ್ಷಿಣೆ ಸಹಿತ ಕೊಡಬೇಕು. ತಿನ್ನುವವರೆಗೆ ಎಲೆ ಜೊತೆ ಅಡಿಕೆ ಇಟ್ಟು ಕೊಡಬೇಕು. ವೀಳ್ಯೆದೆಲೆ ಹಾರ ಹಾಕುವುದರಿಂದ ದೋಷಗಳ ನಿವಾರಣೆ ಯಾಗುತ್ತದೆ, ಮಾಟ -ಮಂತ್ರ- ದೋಷ ಅನುಮಾನಗಳಿದ್ದರೆ ಅವುಗಳ ಪ್ರಭಾವ ನಾಶ ವಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿ, ಶುಭಕಾರ್ಯಗಳು ನೆರವೇರುತ್ತದೆ. ಹಾಗೆ ವೀಳ್ಯದೆಲೆ ಮೇಲೆ ಅರಿಶಿನ- ಕುಂಕುಮ ಹಾಕಿ ಎರಡು ತುಪ್ಪದ ದೀಪ ಹಚ್ಚಿಟ್ಟರೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳಿಗೆ ಬಾಲಗ್ರಹ, ಬೆದರುವುದು, ಬೆಚ್ಚುವುದು, ದೃಷ್ಟಿ ದೋಷ, ಭಯ, ಕುಮುಟಿ ಬೀಳುವುದು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ವೀಳ್ಯದೆಲೆ ಹಾರ ಹಾಕು ವುದರಿಂದ ಕಷ್ಟ ನಿವಾರಣೆ, ಶುಭ ಸಂಕೇತ. ಇದರಂತೆ ಆಂಜನೇಯನಿಗೆ ಹರಕೆ ಹೊತ್ತವರು ಅಂಬಡೆ, ಉದ್ದಿನವಡೆ ,ಚಕ್ಕುಲಿ, ಹಾರಗಳನ್ನು ಹಾಕುತ್ತಾರೆ. ವೀಳ್ಯದೆಲೆ ಹಾರವನ್ನು ಈಶ್ವರ, ಪಾರ್ವತಿ, ಗಣೇಶ. ಶುಕ್ರವಾರ ಲಕ್ಷ್ಮಿಗೆ, ದುರ್ಗಾ ಪರಮೇಶ್ವರಿಗೆ ಹಾಕುತ್ತಾರೆ. ಎಲ್ಲಾ ದೇವರುಗಳಿಗೆ- ಗುರು ಗಳಿಗೂ ಶ್ರೇಷ್ಟವಾದದ್ದು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ವಿಳ್ಳೇದೆಲೆ ಬಹಳಷ್ಟು ಉಳಿದರೆ, ಶ್ರಾವಣ,ಭಾದ್ರಪದ, ಅಶ್ವಿಜಮಾಸ ಹಬ್ಬ- ಹುಣ್ಣಿಮೆ, ಮದುವೆ, ಉಪನಯನ ಗೃಹ ಪ್ರವೇಶ,ಅಥವಾ ಮನೆಗಳಲ್ಲಿ ಜಾಸ್ತಿ ಬಿಟ್ಟರೆ, ಸ್ವಲ್ಪ ಬಾಡಿದ್ದರೂ ಪರವಾಗಿಲ್ಲ ಅದರ ತೊಟ್ಟು, ತುದಿಯನ್ನು ತೆಗೆದು ಅಡಿಕೆಯನ್ನು ಪುಡಿ ಮಾಡಿ ಅಡಿಕೆ ಜೊತೆ, ಏಲಕ್ಕಿ,‌ ಸಕ್ಕರೆ, ಒಂದೆ ರಡು ಲವಂಗ ಸೇರಿಸಿ ಹಾಗೂ ಎಲ್ಲಾ ಎಲೆಗಳನ್ನು ಹಾಕಿ ತರಬರಕಲಾಗಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟು (ಹೊರಗು ಇಡಬಹು ದು) 15 ದಿನ ತಿಂಗಳು ಇರುತ್ತದೆ. ಒಂದು ಚಮಚ ತಿಂದರೆ ತಾಂಬೂಲ ತಿಂದಂತೆ ಆಗುತ್ತದೆ, ಪ್ರವಾಸಕ್ಕೆ ತೆಗೆದು ಕೊಂಡು ಹೋದರೆ ನಾವು ತಿಂದು ಅಕ್ಕ ಪಕ್ಕದವರಿಗೂ ಕೊಡಬಹುದು. ವೀಳ್ಯೆದೆಲೆ ಮಹತ್ವ:-ವಿಳ್ಳೇದೆಲೆ ಲಕ್ಷ್ಮಿಯ ವಾಸಸ್ಥಾನ. ಕುಂಕುಮಾರ್ಚನೆ ಮಾಡುವಾಗ ಎರಡು ವೀಳ್ಯದೆಲೆ ಅಡಿಕೆ ಒಂದು ನಾಣ್ಯ ಇಟ್ಟು, ಇದರ ಮೇಲೆ ಕುಂಕುಮ ಹಾಕಿ ಒಂದೊಂದು ನಾಮಕ್ಕೂ ಅರ್ಚನೆ ಮಾಡುತ್ತಾರೆ. ಹಣ, ಚಿನ್ನದಷ್ಟೇ ವೀಳ್ಯದೆಲೆ ಪವಿತ್ರವಾದದ್ದು. ಕೈಜಾರಿ ಬಿದ್ದರೆ, ಮದುವೆ ಮನೆಗಳಲ್ಲಿ ಕೆಳಗೆ ಕಂಡರೆ ಎತ್ತಿ ಕಣ್ಣಿಗೊತ್ತಿ ಬದಿಗೆ ಇಡಬೇಕು. ಎಲ್ಲಾ ದೇವಾನು ದೇವತೆಗಳು ಇದ್ದು, ಬಲದಲ್ಲಿ ಬ್ರಹ್ಮ ,ಮಧ್ಯೆ ಸರಸ್ವತಿ ಎಡಕ್ಕೆ ಪಾರ್ವತಿ, ಕೊನೆಯಲ್ಲಿ ಗೌರಿ, ದಂಟಿನಲ್ಲಿ ವಿಷ್ಣು, ಹಿಂದೆ ಚಂದ್ರ, ಎಲ್ಲಾ ಮೂಲೆಯಲ್ಲೂ ಪರಮೇಶ್ವರ ಇದ್ದಾನೆ. ಮೃದು ಮಧ್ಯದಲ್ಲಿ ಮನ್ಮಥ ನಿದ್ದಾನೆ. ಹೀಗಾಗಿ ವಿದ್ಯಾರ್ಥಿಗಳು ವೀಳ್ಯೆದೆಲೆ ತಿನ್ನಬಾರದು ಮದುವೆ ಯಾದ ದಂಪತಿ ತಾಂಬೂಲ ಸೇವನೆ ಮಾಡಬೇಕು. ವೀಳ್ಯೆದೆಲೆ ತುದಿಯಲ್ಲಿ ಮೃತ್ಯುದೇವತೆ ಇರುತ್ತಾಳೆ. ಆದ್ದರಿಂದ ತುದಿಯನ್ನು ಕಿತ್ತು ಬಿಸಾಕುತ್ತಾರೆ. ಜೇಷ್ಠಾಲಕ್ಷ್ಮಿ, ಅಹಂಕಾರ ದೇವತೆ ಇರುವ ತೊಟ್ಟನ್ನು ಮುರಿದು ಹಾಕುತ್ತಾರೆ. ವೀಳ್ಳೆದೆಲೆ ಶುಭ ಸಮಾರಂಭ ಮದುವೆ, ಉಪನಯನ, ಹೋಮ ಹವನ ದಲ್ಲಿ ಬೇಕು. ನಿಶ್ಚಿತಾರ್ಥದಲ್ಲಿ ವೀಳ್ಯದೆಲೆ ಸಾಕ್ಷಿಯಾಗುತ್ತದೆ. ಅಂದರೆ ಮದುವೆ ಮಂಗಳ ಕಾರ್ಯಗಳನ್ನು ನಿಶ್ಚಯ ಮಾಡುವಾಗ, ವೀಳ್ಯದೆಲೆ ತೆಂಗಿನಕಾಯಿ ಮುಟ್ಟಿ ‌ ಒಪ್ಪಿಗೆ ಕೊಡುತ್ತಾರೆ. ವೀಳ್ಯದೆಲೆ ಗೌರವ ಸೂಚಕ. ಕೆಲವೆಡೆ ಮದು ಮಕ್ಕಳಿಗೆ ಉಡುಗೊರೆ ಕೊಟ್ಟವರಿಗೆ ಮರ್ಯಾದೆ ಎಂದು ಮಂಟಪದಲ್ಲೇ ವಿಳ್ಳೇದೆಲೆ ಅಡಿಕೆ ಇಟ್ಟ ತಟ್ಟೆಯನ್ನು ಮುಟ್ಟಿಸಿ ಕೈ ಮುಗಿದು ಊಟ ಮಾಡಿ ಹೋಗಿ ಎನ್ನುತ್ತಾರೆ. ಆಮೇಲೆ ಮರೆತು ಹೋಗಬಹುದು. ಬಂದವರು ಬೇಗ ಹೊರಡಬಹುದು. ಹೇಳಿ ಹೋಗಲು ಆಗದೇ ಇರಬಹು ದು, ಈ ಕಾರಣಗಳು. ಒಂಟಿ ಎಲೆ ಕೊಡಬಾರದು, ಎರಡು ಎಲೆ- ಎರಡು ಅಡಿಕೆ ಅಥವಾ ಎರಡು ಚೂರು ಅಡಿಕೆ ಹಾಕಿ ದಕ್ಷಿಣೆ ಅಥವಾ ಹಣ್ಣು, ಖರ್ಜೂರ, ಸಹಿತ ಕೊಡಬೇಕು. ಅಪ್ಪಿ ತಪ್ಪಿ ಯಾರಿಗಾದರೂ ಮೂರು ವಿಳ್ಳೇದೆಲೆ ಬಂದರೆ ಅವರಿಗೆ ಶುಭ ಶಕುನ. ಹಸ್ತ ದಾಕಾರ ಇರುವ ಎಲೆ ಒಳ್ಳೆಯದು. ವೀಳ್ಯದೆಲೆಯನ್ನು ಮನೆ ಔಷಧಿ ಯಾಗಿ ಬಳಸುತ್ತಾರೆ. ಕಫ ಕರಗಲು, ವಿಳ್ಳೆದೆಲೆ ಶುಂಠಿ ರಸಕ್ಕೆ ಜೇನುತುಪ್ಪ ಬೆರೆಸಿ ಕೊಡುತ್ತಾರೆ. ಗಂಟಲು ನೋವಿಗೆ, ಅಜೀರ್ಣಕ್ಕೆ ಮೆಣಸಿನ ಕಾಳು, ಉಪ್ಪು ಹಾಕಿ ಸುತ್ತಿ ಕೊಡುತ್ತಾರೆ. ಮಕ್ಕಳಿಗೆ ಹೊಟ್ಟೆ ಉಬ್ಬರಿಸಿ ಗಟ್ಟಿಯಾದಾಗ, ವಿಳ್ಳೆದೆಲೆಗೆ ಹರಳೆಣ್ಣೆ ಸವರಿ ಹಣತೆ ದೀಪಕ್ಕೆ ಹಿಡಿದು ಸ್ವಲ್ಪ ಬಿಸಿ ಮಾಡಿ, ಹೊಟ್ಟೆಯ ಮೇಲೆ ತೆಳುಮಲ್ ಬಟ್ಟೆ ಹಾಕಿ ಮೇಲೆ ಹೌದು ಅಲ್ಲೋ ಅನ್ನುವಷ್ಟು ಬಿಸಿ ಮಾಡಿದ ವೀಳ್ಯದೆಲೆ ಹಗುರವಾಗಿ ಒತ್ತುತ್ತಾರೆ. ಚಿಗುರು ವಿಳ್ಳೆದೆಲೆಯಲ್ಲಿ ತಂಬುಳಿ ಚಟ್ನಿ ಮಾಡ ಬಹುದು. ವೀಳ್ಯೆದೆಲೆ ಬಳ್ಳಿಯನ್ನು ತುಳಸಿ ಗಿಡದಂತೆ ಕಾಪಾಡಬೇಕು. ಮುಟ್ಟಾದವರು ಹತ್ತಿರ ಹೋಗಬಾರದು. ವೀಳ್ಯದೆಲೆ ಕೊಯ್ಯುವ ಮೊದಲು ಗಿಡಕ್ಕೆ ಒಂದು ತಂಬಿಗೆ ನೀರು ಹಾಕಿ ಎಲೆ ಕೊಯ್ಯ ಬೇಕು. ಸಂಜೆಯ ಹೊತ್ತು ಕೀಳ ಬಾರದು ಮಂಗಳ- ಶುಕ್ರವಾರ, ಬೇರೆ ದಿನಗಳಲ್ಲಿ 12 ಗಂಟೆಯ ನಂತರ ಎಲೆ ಕೀಳುವುದು ಗಿಡ ಕತ್ತರಿಸಬಾರದು. ಹೊರಗೆ ಹಾಕಬಾರದು. ತಾಂಬೂಲ ಅಂದರೆ ವಿಳ್ಯದೆಲೆ ಅಡಿಕೆ ಇದರ ಜೊತೆಗೆ ಕಾಯಿ ಹಣ್ಣು ದಕ್ಷಿಣೆ ಉಡುಗೊರೆ ಇಟ್ಟು ಕೊಡುವುದು ಗೌರವದ ಸಂಕೇತವಾಗಿದೆ. ಅಕ್ಷರಂ ವಿಪ್ರಹಸ್ತೇನ, ಮಾತೃ ಹಸ್ತೇನ ಭೋಜನಂ! ಬಾರ್ಯಾ ಹಸ್ತೇನ ತಾಂಬೂಲಂ, ರಾಜಹಸ್ತೇನ ಕಂಕಣಂ!! ವಿದ್ಯೆಯನ್ನು ವಿಪ್ರನಿಂದ, ಆಹಾರವನ್ನು ತಾಯಿಯ ಕೈಯಿಂದ, ತಾಂಬೂಲದ ಎಲೆಯನ್ನು ಪತ್ನಿಯ ಕೈಯಿಂದ ಮತ್ತು ರಾಜನಿಂದ ಮನ್ನಣೆಯನ್ನು ಪಡೆಯಬೇಕು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
31 likes
1 comment 24 shares