ಶುಭ ಶುಕ್ರ ವಾರ 🌸🌸🌸🌸
285 Posts • 669K views
Ram Ajekar
610 views 11 days ago
ಒಂದು ನೀರಿನ ಹನಿ ಅದೊಂದು ನೀರಿನ ಹನಿ ಮಳೆ ನಿಂತುಹೋಗಿದ್ದರೂ, ಆ ಹನಿಯು ಮರದ ಎಲೆಗಳಿಂದ ಜಾರಿಕೊಂಡು ಫಠಕ್ ಎಂದು ಮನೆಯ ಹಂಚಿನ ಛಾವಣಿಯ ಮೇಲೆ ಬಿತ್ತು. ಮಳೆ ನಿಂತರೂ ಮತ್ತೆ ಸುರಿಯುವ ಆಸೆಯ ಮಳೆಹನಿ ಇನ್ನೊಂದು ಹನಿಯನ್ನು ಹಾಳು ಮಾಡದೆ ಭೂಮಿಗೆ ಸೇರಲು ತವಕಿಸುತ್ತಿತ್ತು. ಸಾಗರವೆಂಬುದು ನೀರಿನ ಹನಿಗಳಿಂದಲೇ ಆಗಿದೆ. ಸಮುದ್ರ, ಕೆರೆ, ನದಿ ಎಲ್ಲವು ನೀರಿನ ಮೂಲಗಳೇ. ಸಕಲ ಪ್ರಾಣಿ–ಪಕ್ಷಿಗಳ ಬದುಕಿಗೆ ಒಂದೇ ಹನಿ ನೀರು ಸಾಕಷ್ಟೆ. ಬದುಕಿನ ವ್ಯತ್ಯಾಸಗಳೂ ಹಾಗೆಯೇ — ನೀರಿನ ಹನಿಗಳಂತೆ. ಒಮ್ಮೆ ಬಿತ್ತು ಹೋದರೆ ಮತ್ತೆ ಮರಳಿ ಬರುವುದಿಲ್ಲ. ಸಮಯ ಕಳೆದುಹೋದರೆ ಸಿಗುವುದಿಲ್ಲ; ಹಾಗೆಯೇ ಬದುಕು ಕೂಡ. ಒಮ್ಮೆ ಯಾವುದೋ ಸನ್ನಿವೇಶದಲ್ಲಿ ತುಂಬಾ ಬಾವುಕನಾಗಿದ್ದೆ. ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. “ಸೋತೆಯಾ?” ಎಂಬ ಪ್ರಶ್ನೆಗೆ ಕಣ್ಣೀರು ಉತ್ತರಿಸಿತ್ತು. ಆದರೆ ಆಗ ಬಂದ ಮಳೆ, ಕಣ್ಣೀರನ್ನು ತೊಳೆದು ತನ್ನ ಹನಿಯೊಂದಿಗೆ ಕಳೆದುಹೋದಿತು. “ಕಣ್ಣೀರಿನ ಜೊತೆ ನಾನಿದ್ದೀನಿ” ಎಂದು ಮಳೆ ಹನಿ ಭರವಸೆ ನೀಡಿದಾಗ, ಹೃದಯದಲ್ಲಿ ಹೊಸ ಖುಷಿ ಭರವಸೆ ಮೂಡಿತ್ತು. ನೋವಿನೊಂದಿಗೆ ಬಂದ ನಾಳೆಯ ಭರವಸೆಗಳು ನಮ್ಮನ್ನು ಇನ್ನಷ್ಟು ಗಟ್ಟಿಯನ್ನಾಗಿಸಿವೆ. ಒಮ್ಮೆ ಬಟ್ಟೆ ಒಗೆದು ಒಣಗಿಸಲು ಸರಿಗೆಯ ಮೇಲೆ ಹಾಕುತ್ತಿದ್ದೆ. ಭಾರಿ ಬಿಸಿಲು ಮೇ ತಿಂಗಳ ಎರಡನೇ ವಾರ. ಬಿಸಿಯ ಕಾವಿನಲ್ಲಿ ಕೆಂಪಿರುವೆಗಳೊಂದು ಸರಿಗೆಯ ಮೇಲಿನಿಂದ ಸಾಗುತ್ತಿದ್ದವು. ಬಿಸಿಗೆ ಬಸವಳಿದಿರಬೇಕು. ನೆಲಕ್ಕೆ ಬಿದ್ದವು. ಆದರೂ ಒಗೆದ ಬಟ್ಟೆಯ ಮೇಲಿನ ನೀರಿನ ಹನಿಗಳು ಕೆಂಪಿರುವೆಗಳ ಮೇಲೆ ಬಿದ್ದು ಅವುಗಳಿಗೆ ಜೀವ ನೀಡಿದವು. ಒಂದು ಹನಿ ನೀರು ಬಿದ್ದಾಗ, “ಅಬ್ಬಾ, ಬದುಕಿದೆ ಬಡ ಜೀವ!” ಎಂದು ಅನಿಸಿದಂತಾಯಿತು. ಅದು ಕೂಡ ಒಂದು ಹನಿ ನೀರು. ಕಣ್ಣೀರಾದರೂ ಅದರಲ್ಲಿದೆ ನೋವಿನ ಮೌಲ್ಯ; ಮಳೆಯಾದರೂ ಅದರಲ್ಲಿದೆ ಪ್ರೀತಿಯ ಮೌಲ್ಯ. ಬಟ್ಟೆ ಒಗೆದ ನೀರಿನ ಹನಿಯೂ ಕೆಂಪಿರುವೆಗೆ ಜೀವ ಉಳಿಸಿದ ಮೌಲ್ಯವಿತ್ತು. . ರಾಂ‌ ಅಜೆಕಾರು ಕಾರ್ಕಳ #ಸ್ಪೂರ್ತಿ ದಾಯಕ ಮಾತು ಗಳು👌👍 #ಶುಕ್ರವಾರ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻
14 likes
6 shares
Ram Ajekar
1K views 18 days ago
#🔯ಶುಕ್ರವಾರದ ವಿಶೇಷ ರಾಶಿಫಲ ಮಣ್ಣಿನ ಗೋಡೆಗೆ ಬಿದಿರಿನ ಗಳಗಳ ಕದ ನಮ್ಮೂರಿನ ಹಳೆಯ ಮನೆಗಳ ಬಾಗಿಲಲ್ಲಿ ಇಂದಿಗೂ ಕೆಲವೆಡೆ ಬಿದಿರಿನ ಗಳಗಳ ಕದ ಕಾಣಸಿಗುತ್ತವೆ. . ಮಣ್ಣಿನ ಗೋಡೆಯ ಮಧ್ಯೆ ನಿಂತಿದ್ದ ಆ ಕದ, ಕೇವಲ ಒಳಗೆ ಹೋಗುವ ಮಾರ್ಗವಲ್ಲ, ಅದು ಒಂದು ಕಾಲದ ಶ್ವಾಸವಿತ್ತು. ಪಶ್ಚಿಮಘಟ್ಟದ ಗುಡ್ಡದ ತುದಿಯಲ್ಲಿ ಮಳೆ, ಗಾಳಿ, ಸಿಡಿಲು ಮಿಂಚುಗಳ ಎಲ್ಲದರ ಮಧ್ಯೆ ನಿಂತ ಆ ಬಿದಿರಿನ ಬಾಗಿಲು ನೂರಾರು ಮಳೆಗಾಲಗಳನ್ನು ಸಹಿಸಿತ್ತು, ನೂರಾರು ಬೆಳಕನ್ನು ಕಂಡಿತ್ತು. ಹಳ್ಳಿ ಹಟ್ಟಿಗಳ ಹೃದಯದಂತಿತ್ತು ಈ ಗಳಗಳ ಕದ. ದನಗಳ ಸುರಕ್ಷತೆ, ಮನೆಯ ನೆಮ್ಮದಿ, ಗಾಳಿಯ ಸಂಚಾರ ಎಲ್ಲವೂ ಅದರ ಮೂಲಕ ಸಾಗುತಿತ್ತು. ದನಗಳು ಸಂಜೆ ಮನೆಗೆ ಬಂದಾಗ, ತಮ್ಮ ಮೈಯನ್ನು ಆ ಕದಕ್ಕೆ ಒರಸಿ ನಿಂತುಕೊಳ್ಳುತ್ತಿದ್ದವು. ಅವರ ಉಸಿರಿನ ಉಷ್ಣತೆ, ಅವರ ಕಣ್ಣುಗಳ ಶಾಂತಿ , ಈ ಎಲ್ಲವೂ ಕದದ ಜೀವವಾಗಿತ್ತು. ಆದರೆ ಒಂದು ರಾತ್ರಿ ಆ ಭರವಸೆಯ ಬಾಗಿಲು ಮೌನವಾಗಿತ್ತು. ಯಾರೋ ಕಳ್ಳರು, ಅದೇ ಕದವನ್ನು ಒಡೆದು, ಅದರ ಆಶ್ರಯದಲ್ಲಿದ್ದ ಹಸುಗಳನ್ನು ಕದ್ದೊಯ್ದರು. ಬೆಳಗ್ಗೆ ಮನೆಯ ಯಜಮಾನ ಕದದ ತುಂಡುಗಳನ್ನು ನೋಡಿ ನಿಶ್ಯಬ್ದರಾದರು. ನಂಬಿಕೆಯ ಚೂರುಗಳಾಗಿತ್ತು. ಆ ದಿನದಿಂದ ಹಟ್ಟಿಯ ಮೌನ ಬದಲಾಯಿತು. ದನಗಳ ಅಳಲು, ವಿಷಾದ ಹಾಡಿತ್ತು . ಆದರೂ, ಮಣ್ಣಿನ ಗೋಡೆಗೆ ಬಿದಿರಿನ ಗಳಗಳ ಕದದ ನೆನಪು ಉಳಿದಿದೆ. ರಾಂ ಅಜೆಕಾರು ಕಾರ್ಕಳ #ಶುಭ ಶುಕ್ರ ವಾರ 🌸🌸🌸🌸 #ಶುಕ್ರವಾರ #🌞ಮುಂಜಾನೆಯ ಶುಭೋದಯಗಳು 🌞☕ #ಶು ಭೋ ದ ಯ
12 likes
6 shares