True News Karnataka
604 views
#👆🏻ನನ್ನ ಮೊದಲ ಪೋಸ್ಟ್💥 ಗೋಕಾಕ: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಕ್ಷೇತ್ರ ಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ದೊಡ್ಡ ಗುಂಡಿಗಳು, ಕಲ್ಲುಗಳು ಹಾಗೂ ಮಳೆ ನೀರು ನಿಂತಿರುವುದರಿಂದ ವಾಹನ ಸಂಚಾರ ಬಹಳ ಕಷ್ಟಕರವಾಗಿದೆ.
ಪ್ರತಿ ದಿನ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೂ, ರಸ್ತೆ ಸಮಸ್ಯೆಯಿಂದಾಗಿ ಹಿರಿಯರು, ಮಕ್ಕಳು ಮತ್ತು ಎರಡು ಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವಡೆ ಜಾರಿ ಬಿದ್ದು ಗಾಯಗಳಾಗುವ ಅಪಾಯವೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
#gokak #breaking news
#YellammaDevi
#KolladaRoad
#RoadProblem
#PublicIssue
#DevoteesProblem
12 likes
1 comment • 16 shares