ರಾಮಾಯಣ

59 Posts • 245K views
ಕೃಷ್ಣೆ 🦚💙
1K views 9 days ago
#🕉️ ಜೈ ಶ್ರೀ ರಾಮ🙏 #📜ರಾಮಾಯಣ ಟ್ಯಾಗ್🏹 ಸಂಕ್ಷಿಪ್ತ ರಾಮಾಯಣ :- ಶ್ರೀ ಗುರುಭ್ಯೋ ನಮಃ, ಹರಿ: ಓಂ. ಈಶ್ವರ ಉವಾಚ :- ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ ಸಹಸ್ರನಾಮತತ್ತುಲ್ಯಂ ರಾಮನಾಮವರಾನನೆ. ರಾಮನಾಮ ವರಾನನೆ ಓಂ ನಮಃ ಇತಿ, ಕೈಲಾಸದಲ್ಲಿ ಪರಮೇಶ್ವರ ತನ್ನ ಅರ್ಧಾಂಗಿ ಪಾರ್ವತಿಗೆ, ಶ್ರೀರಾಮ ಚಂದ್ರನ ಮಹಿಮೆ ಯನ್ನು ಈ ರೀತಿಯಾಗಿ ವರ್ಣಿಸುತ್ತಿದ್ದಾನೆ. ರಾಮಾಯಣದಂತ ಅದ್ಭುತ ಕಥೆಯನ್ನು ವಾಲ್ಮೀಕಿ ಮುನಿಗಳು ರಾಮನ ಜೀವನ ಚರಿತ್ರೆಯ ಅಂದರೆ ರಾಮ ನಡೆದು ಬಂದ ದಾರಿಯನ್ನೆ 'ರಾಮಾಯಣ' ಎಂಬ ಮಹಾ ಗ್ರಂಥ ರಚಿಸಿ ಲೋಕಕ್ಕೆ ಕೊಟ್ಟಿದ್ದಾರೆ. ರಾಮನ ಪಿತೃ ಭಕ್ತಿ, ಭ್ರಾತೃ ಪ್ರೇಮ, ಸೀತೆ ಯ ಪತಿ ಭಕ್ತಿ, ಇಂಥ ಅನೇಕ ವಿಚಾರಗಳನ್ನು ರಾಮಾಯಣದ ಮೂಲಕ ನಮಗೆ ತಿಳಿಸಿದ್ದಾರೆ. ನಾರದ ಮಹರ್ಷಿಗಳಿಂದ ಪ್ರೇರಿತರಾದ ವಾಲ್ಮೀಕಿಗಳು, ಬ್ರಹ್ಮದೇವ ನಿಂದ ವಿಶೇಷ ದೃಷ್ಟಿ ಪಡೆದವರಾಗಿ, ರಾಮಾಯಣ ಗ್ರಂಥ ವನ್ನು ಬರೆದರು. ಒಂದು ದಿನ ವಾಲ್ಮೀಕಿಗಳು 'ತಮಸಾ' ನದಿಯಲ್ಲಿ ಸ್ನಾನ ಮುಗಿಸಿ ಬರುವಾಗ ಒಂದು ಮರದ ಮೇಲಿದ್ದ ಜೋಡಿ ಕ್ರೌಂಚ ಪಕ್ಷಿಗಳು ಪ್ರೇಮ ವಿಲಾಪದಲ್ಲಿ ಮುಳುಗಿ ದ್ದವು. ಆ ಸಮಯಕ್ಕೆ ಅಲ್ಲಿಗೆ ಬಂದ ಬೇಡ ತನ್ನ ಬಾಣದಿಂದ ಗಂಡು ಪಕ್ಷಿಯನ್ನು ಹೊಡೆಯುತ್ತಾನೆ. ಗಂಡು ಪಕ್ಷಿ ಸತ್ತಿದ್ದನ್ನು ಕಂಡು ಎದೆ ಯೊಡೆದ ಹೆಣ್ಣು ಪಕ್ಷಿ ಪ್ರಾಣ ಬಿಟ್ಟಿತು.ಇದನ್ನು ನೋಡಿದ ವಾಲ್ಮೀಕಿಗಳು ಸಿಟ್ಟಿನಿಂದ ಬೇಡನಿಗೆ ಬೈಯುತ್ತಾರೆ. ಅವರ ಬಾಯಿಂದ ಬಂದ ಬೈಗುಳದ ಮಾತುಗಳು ಛಂದಸ್ಸಿನ ಶ್ಲೋಕ ರೂಪದಲ್ಲಿ ಬಂದಿದ್ದು “ರಾಮಾಯಣ” ಗ್ರಂಥ ರಚನೆಗೆ ಪ್ರೇರಣೆಯಾಯಿತು. ಅಯೋಧ್ಯೆಯ ಮಹಾರಾಜ ದಶರಥನು ಪುತ್ರಕಾಮೇಷ್ಠಿಯಾಗ ಮಾಡಿದಾಗ ತೃಪ್ತ ನಾದ ಅಗ್ನಿದೇವ ಪ್ರತ್ಯಕ್ಷನಾಗಿ ಪಾಯಸ ತುಂಬಿದ ಪಾತ್ರೆಯನ್ನು ದಶರಥನಿಗೆ ಅನು ಗ್ರಹಿಸುತ್ತಾನೆ. ರಾಜನು ಪಾಯಸವನ್ನು ತನ್ನ ಪತ್ನಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಗೆ ಹಂಚುತ್ತಾನೆ. ಇದರ ಫಲವಾಗಿ ದಶರಥನು ತನ್ನ ಮೂರು ಪತ್ನಿಯರಿಂದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರೆಂಬ ನಾಲ್ಕು ಪುತ್ರರನ್ನು ಪಡೆ ಯುತ್ತಾನೆ. ದಶರಥನಿಗೆ ನಾಲ್ಕೂ ಮಕ್ಕಳ ಮೇಲೆ ಅಪಾರವಾದ ಪ್ರೀತಿ. ಅಯೋಧ್ಯೆ ನಿವಾಸಿಗಳಿಗೂ ಅಕ್ಕರೆ. ರಾಮನನ್ನು ಕಂಡರೆ ಎಲ್ಲರಿಗೂ ತುಂಬಾ ಪ್ರೀತಿ. ರಾಮ ನನ್ನು ನೋಡಲು ಮಹಾಮಹಿಮರು ಅಯೋಧ್ಯೆಗೆ ಬರುತ್ತಿದ್ದರು. ಇಂಥ ಪುತ್ರನನ್ನು ಪಡೆದ ದಶರಥ ಆನಂದದಿಂದ ಕಳೆಯುತ್ತಿದ್ದನು. ಕುಲಗುರುಗಳಾದ ವಸಿಷ್ಟ ರಿಂದ ನಾಲ್ಕು ಮಕ್ಕಳಿಗೂ ವಿದ್ಯಾಭ್ಯಾಸ ಆಗುತ್ತದೆ. ಸ್ವತಃ ದಶರಥನು ಮಕ್ಕಳಿಗೆ ಶಸ್ತ್ರಾಭ್ಯಾಸವನ್ನು ಕಲಿಸುತ್ತಾನೆ. ಬಾಲ್ಯಾವಸ್ಥೆ ಕಳೆದು ಬಾಲಕರಾದರು. ಆ ಸಮಯಕ್ಕೆ ವಿಶ್ವಾಮಿತ್ರರು ಅರಮನೆಗೆ ಆಗಮಿಸುತ್ತಾರೆ ಮತ್ತು ದಶರಥನಿಗೆ, ರಾಜ ನಮ್ಮ ಯಜ್ಞ ಯಾಗ ಗಳಿಗೆ ತೊಂದರೆ ಕೊಡುವ ರಾಕ್ಷಸಿ ತಾಟಕಿ ಸಂಹಾರ ಮಾಡಲು, ನಿನ್ನ ಮಕ್ಕಳಾದ ರಾಮ ಮತ್ತು ಲಕ್ಷ್ಮಣನನ್ನು ನನ್ನ ಜೊತೆ ಕಳಿಸಿಕೊಡು ಎಂದು ನಿವೇದನೆ ಮಾಡುತ್ತಾರೆ. ದಶರಥನು ನನ್ನ ಮಕ್ಕಳಿನ್ನು ಚಿಕ್ಕವರು ನಾನೇ ಬರುತ್ತೇ ನೆಂದು ಹೇಳಿದರೂ, ವಿಶ್ವಾಮಿತ್ರರು ಒಪ್ಪಲಿಲ್ಲ. ಆಗ ಕುಲಗುರು ವಸಿಷ್ಠರು ಮುಂದೆ ಬಂದು ದಶರಥನಿಗೆ ನಿನ್ನ ಮಕ್ಕಳನ್ನು ಕಳುಹಿಸಿಕೊಡು 'ವಿಶ್ವಾಮಿತ್ರ'ರಂಥ ತಪಸ್ವಿಗಳ ಜೊತೆ ಕಳಿಸಲು ಯೋಚನೆ ಬೇಡ ಎಂದಾಗ ದಶರಥ ಒಲ್ಲದ ಮನಸ್ಸಿನಿಂದ ರಾಮ-ಲಕ್ಷ್ಮಣರನ್ನು ಕಳುಹಿಸಿದನು. ರಾಮಲಕ್ಷ್ಮಣರನ್ನು ಕರೆದುಕೊಂಡು ಹೊರಟ ವಿಶ್ವಾಮಿತ್ರ ರು, ಅವರಿಗೆ 'ಬಲ-ಅತಿಬಲ' ಎಂಬ ವಿದ್ಯೆಯನ್ನು ಹೇಳಿ ಕೊಟ್ಟರು. ರಾಮ ಲಕ್ಷ್ಮಣರು ತಾಟಕಿ ಯನ್ನು ಸಂಹಾರ ಮಾಡಿದರು. ನಂತರ ರಾಮ-ಲಕ್ಷ್ಮಣರನ್ನು ಮಿಥಿಲೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಗೌತಮರ ಶಾಪದಿಂದ ಕಲ್ಲಾಗಿದ್ದ ಅಹಲ್ಯೆಯ ಶಾಪ ರಾಮನ ಪಾದ ಸ್ಪರ್ಶದಿಂದ ನಿಗ್ರಹವಾಯಿತು. ಆಮೇಲೆ ಮಿಥಿಲಾ ನಗರದ ಜನಕ ಮಹಾರಾಜನ ಆಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಸೀತೆಯ ನ್ನು ರಾಮ ನೋಡುತ್ತಾನೆ. ಸೀತೆ ಶ್ರೀ ಲಕ್ಷ್ಮಿಯೇ ಆಗಿದ್ದಳು. ಶಿವಧನುಸ್ಸನ್ನು ಹೆದೆಯೇರಿಸಿ ಮುರಿದಂಥ ರಾಮನಿಗೆ ಸ್ವಯಂವರದಲ್ಲಿ ಸೀತೆ ವರಮಾಲೆಯನ್ನು ಹಾಕುತ್ತಾಳೆ. ಇದೇ ಸಮಯದಲ್ಲಿ ಇನ್ನುಳಿದ ಮೂರು ಪುತ್ರರು ಲಕ್ಷ್ಮಣ, ಭರತ, ಶತ್ರುಘ್ನ ರೀಗೂ ಅಲ್ಲಿ ವಿವಾಹವಾಗುತ್ತದೆ. ಈ ರೀತಿಯಾಗಿ ನಾಲ್ಕು ಮಕ್ಕಳಿಗೂ ವಿವಾಹವಾಯಿತು. ಅಯೋಧ್ಯಾ ರಾಜ್ಯವನ್ನು ರಾಮನಿಗೆ ಒಪ್ಪಿಸಿದರೆ ರಾಜ್ಯ ಸುರಕ್ಷಿತ ಹಾಗೂ ಸಮೃದ್ಧಿಯಾಗಿರುತ್ತದೆ. ಎಂದು ಯೋಚಿ ಸಿದ ದಶರಥನೆ ಒಂದು ತೀರ್ಮಾನಕ್ಕೆ ಬಂದು, ರಾಮನ ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಾನೆ. ಇದು ಮಂಥರೆ ಕಿವಿಗೆ ತಲುಪಿತು. ಈ ಮಂಥರೆ, ದಶರಥನ ರಾಣಿ ಕೈಕೆಯಿ ಯ ದಾಸಿಯಾಗಿ ಕೈಕೆಯನ್ನು ಪ್ರೀತಿಯಿಂದ ಸಾಕಿ ಬೆಳೆಸಿ ದ್ದಳು. ಈಗ ಇದೇ ಮಂಥರೆ ಕೈಕೇಯಿಗೆ ಚಾಡಿ ಹೇಳಿಕೊಟ್ಟು ಮನಸ್ಸನ್ನು ಕೆಡಿಸುತ್ತಾಳೆ. ನೋಡು, "ರಾಮ ರಾಜನಾದರೆ, ನೀನು ಕೌಸಲ್ಯೆ ಹೇಳಿದಂತೆ ಕೇಳಬೇಕು. ಅದೇ ನಿನ್ನ ಮಗ ಭರತ ರಾಜನಾದರೆ ನೀನು ರಾಣಿಯಾಗುವೆ" ಎಂದು ಚುಚ್ಚಿ ಕೊಡುತ್ತಾಳೆ. ಹಿಂದೆ ದೇವಾಸುರ ಯುದ್ಧದಲ್ಲಿ ದಶರಥ ನಿನಗೆ ಎರಡು ವರಗಳನ್ನು ಕರುಣಿಸಿದ್ದಾನೆ. ಈಗ ಅದನ್ನು ಬಳಸಿಕೊಂಡು ಉಪಯೋಗಿಸಿಕೋ ಎಂದು ದುರ್ಬುದ್ಧಿಯ ನ್ನು ಅವಳ ತಲೆಯೊಳಗೆ ಬಿತ್ತಿದಳು. ಇದನ್ನು ಕೇಳಿದ ಕೈಕೇಯಿ. ದಶರಥನಲ್ಲಿ ವರ ಕೇಳುವ ಸಲುವಾಗಿ ಶೋಕ ಗೃಹಕ್ಕೆ ಹೋಗಿ ಮಲಗುತ್ತಾಳೆ. ವಿಚಾರಿಸಲು ಬಂದ ದಶರಥನಲ್ಲಿ, ಎರಡು ವರ ಕೊಡ ಬೇಕೆಂದು ಕೇಳುತ್ತಾಳೆ. ಮೊದಲನೆಯದು ರಾಮನನ್ನು ಹದಿನಾಲ್ಕು ವರ್ಷ ಕಾಡಿಗೆ ಕಳಿಸಬೇಕು. ಎರಡನೆಯದು ಭರತನಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಕೇಳುತ್ತಾಳೆ. ಇದನ್ನು ಕೇಳಿದ ದಶರಥ ಹುಚ್ಚನಂತಾಗಿ, "ನೋಡು ದಯವಿ ಟ್ಟು ಹೀಗೆ ಕೇಳಬೇಡ, ಅಷ್ಟು ಕ್ರೂರಿಯಾಗಬೇಡ, ಭರತ ನಿಗೆ ಪಟ್ಟಾಭಿಷೇಕ ಮಾಡುತ್ತೇನೆ, ಆದರೆ ರಾಮನನ್ನು ವನವಾಸಕ್ಕೆ ಕಳಿಸಲು ಮಾತ್ರ ಹೇಳಬೇಡ".ಎಂದು ಪರಿ ಪರಿಯಾಗಿ ಬೇಡುತ್ತಾನೆ. ಆದರೆ ಕೈಕೆ ತನ್ನ ಹಠ ಬಿಡಲಿಲ್ಲ ಕೊನೆಗೆ ರಾಮನೇ ಬಂದು ಎಲ್ಲಾ ತಿಳಿದು ತಂದೆಯನ್ನು ಅನುನಯಿಸಿ ಮೂರ್ಛಾವಸ್ಥೆ ಯಲ್ಲಿದ್ದ ತಂದೆಗೆ ನಮಸ್ಕರಿಸಿ ಹೋಗುತ್ತಾನೆ. ತಾಯಿ ಕೌಸಲ್ಯೆ ಆಶೀರ್ವಾದ ಪಡೆದು ಹೊರಡಲು ಅಣಿಯಾಗುತ್ತಾನೆ. ಆಗ ಅವನ ಪತ್ನಿ ಸೀತೆ ಮತ್ತು ಅನುಜ ಲಕ್ಷ್ಮಣ, ನಾವು ಜೊತೆಯಲ್ಲಿ ಬರುತ್ತೇವೆ ಎಂದು ಹೊರಡುತ್ತಾರೆ. ಹೀಗೆ ರಾಮ -ಸೀತೆ -ಲಕ್ಷ್ಮಣ ಅಯೋಧ್ಯೆ ನಿವಾಸಿಗಳನ್ನು ಬಿಟ್ಟು ವನವಾಸಕ್ಕೆ ಹೊರಟಾಗ ಅಯೋಧ್ಯಾ ನಿವಾಸಿಗಳು ಜೊತೆಯಲ್ಲಿ ಕಾಡಿನವರೆಗೂ ಬಂದರು. ದುಃಖ ಸಹಿಸಲಾರದ ದಶರಥನು ಹಾಸಿಗೆ ಹಿಡಿದು ಕೆಲವೇ ದಿನಗಳಲ್ಲಿ ಮರಣ ಹೊಂದುತ್ತಾನೆ. ಹಿಂದೆ ದಶರಥನು ಬೇಟೆಗೆ ಹೋದಾಗ ಪ್ರಾಣಿ ಎಂದು ತಿಳಿದು ಋಷಿಕುಮಾರ ಶ್ರವಣನಿಗೆ ಬಾಣ ಹೊಡೆದು ಆತ ಮರಣ ಹೊಂದುವ ಕೊನೆ ಘಳಿಗೆಯಲ್ಲಿ ಅವನ ಅಂಧ ತಂದೆ ತಾಯಿಗೆ ನೀರು ಕೊಡಲು ಹೇಳಿದನು. ಅಲ್ಲಿಗೆ ಬಂದ ದಶರಥ ಅನಿರೀಕ್ಷಿತವಾಗಿ ಆದ ಅಪಚಾರದಿಂದ ತನ್ನ ತಪ್ಪನ್ನು ಕ್ಷಮಿಸಿಬೇಕೆಂದು ಕೇಳಿದನು. ಆದರೆ ಋಷಿ ದಂಪತಿಗಳು ಕೋಪದಿಂದ ಈ ವಯಸ್ಸಿನಲ್ಲಿ ನಮಗೆ ಪುತ್ರವಿಯೋಗ ಆಗುವಂತೆ ಮಾಡಿರುವ ನೀನು ಸಹ ಕಡೆ ಗಾಲದಲ್ಲಿ ಪುತ್ರವಿಯೊಗದಿಂದ ಮರಣ ಹೊಂದು, ಎಂಬ ಶಾಪದಂತೆ ದಶರಥ ಪುತ್ರವಿಯೋಗದಲ್ಲಿ ಮರಣ ಹೊಂದಿದನು. ಸೀತಾ ರಾಮ, ಲಕ್ಷ್ಮಣ, ಅಯೋಧ್ಯೆಯಿಂದ ಹೊರಟು ಗಂಗಾ ನದಿ ತಟಕ್ಕೆ ಬಂದರು. ನದಿ ದಾಟಿಸುವ ಕೇವಟ ದೋಣಿಯಲ್ಲಿ ಗಂಗಾ ನದಿಯನ್ನು ದಾಟಿಸಿ ದಡ ಸೇರಿಸುತ್ತಾನೆ. ರಾಮ ನು ತನ್ನ ಶ್ರೇಷ್ಠ ಗುಣದಂತೆ, ಕೇವಟನನ್ನು ತನ್ನ ಗೆಳೆಯ ಎಂದು ಅಪ್ಪಿ ಕೊಳ್ಳು ತ್ತಾನೆ. ಅಲ್ಲಿಂದ ಸೀತಾ ಲಕ್ಷ್ಮಣರ ಸಮೇತ ರಾಮನು ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ಕೆಲವು ಕಾಲ ಇದ್ದು ನಂತರ ಅವರ ಆಶೀರ್ವಾದ ಪಡೆದು ಚಿತ್ರಕೂಟ ಪರ್ವತ ಪ್ರದೇಶಕ್ಕೆ ಬರುತ್ತಾರೆ. ಇತ್ತ ದುಃಖ ತಪ್ತನಾಗಿದ್ದ ಭರತನು, ಮಂತ್ರಿ ಸುಮಂತ ಹಾಗೂ ಆಪ್ತರೊಂದಿಗೆ ರಾಮನನ್ನು ಹುಡುಕುತ್ತಾ ಬಂದು, ಅಂಬಿಗ ಗುಹನ ಸಹಾಯದಿಂದ ಚಿತ್ರ ಕೂಟಕ್ಕೆ ಬಂದು ರಾಮನನ್ನು ಅಯೋಧ್ಯೆಗೆ ಬರುವಂತೆ ಬೇಡಿದನು.ಪಿತೃವಾಕ್ಯ ಪರಿಪಾಲಕ ರಾಮನು ಇದಕ್ಕೆ ಒಪ್ಪಲಿಲ್ಲ. ಅನಿವಾರ್ಯವಾಗಿ ರಾಮನ ಪಾದುಕೆಗಳನ್ನು ಪಡೆದು ತನ್ನ ತಲೆ ಮೇಲಿಟ್ಟು ಕೊಂಡು ಅಯೋಧ್ಯೆಗೆ ಬಂದು, ಸಿಂಹಾಸನದಲ್ಲಿ ರಾಮನ ಪಾದುಕೆ ಇಟ್ಟು, ಭರತನು ಅರಮನೆ ವೈಭೋಗ ಜೀವನ ತೊರೆದು ನಂದೀ ಗ್ರಾಮದಲ್ಲಿ, ಋಷಿಮುನಿಗಳಂತೆ ಜೀವನ ಮಾಡತೊಡಗಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇನ್ನು ಮುಂದೆ ತಾನಿರುವ ಜಾಗ ತಿಳಿಯಬಾರದೆಂದು ರಾಮನು ಚಿತ್ರಕೂಟ ತೊರೆದು, ಮುನಿಗಳ ಆಶ್ರಮಕ್ಕೆ ಬಂದರು. ಅತ್ರಿ ಮುನಿಗಳು ಅವರ ಪತ್ನಿ ಅನುಸೂಯಾ ದೇವಿ ಜೊತೆ ಅವರೊಂದಿಗೆ ಧರ್ಮದ ಕುರಿತು ಚರ್ಚಿಸಿ ವಿಷಯಗಳನ್ನು ತಿಳಿದುಕೊಂಡನು. ಋಷಿಮುನಿಗಳ ಸಮಸ್ಯೆಗಳನ್ನು ತಿಳಿದು ಅಲ್ಲಿರುವ ರಾಕ್ಷಸರ ತೊಂದರೆಗಳನ್ನು ನಿವಾರಿಸಿ ಅಲ್ಲಿಂದ ಹೊರಟ ರಾಮ ಸೀತೆ ಲಕ್ಷ್ಮಣರಿಗೆ ಅತ್ರಿ ಮುನಿಗಳು ಅನೇಕ ಸಲಹೆ ಸೂಚನೆ ಕೊಟ್ಟರು. ಸೀತೆಯ ಪಾತಿವ್ರತ್ಯವನ್ನು ಅಭಿನಂದಿಸಿ ಮಾತೆ ಅನುಸೂಯಾ ದೇವಿ, ನಾರು ಮಡಿಯುಟ್ಟು ಬಂದ ಸೀತೆಗೆ ತನ್ನ ಆಭರಣಗಳನ್ನು ತೊಡಿಸುತ್ತಾಳೆ. ಮುಂದೆ ದಂಡಕಾರಣ್ಯಕ್ಕೆ ಬರುತ್ತಾರೆ. ಅಲ್ಲಿ 'ವಿರಾಧ' ಎಂಬ ರಾಕ್ಷಸ ಸೀತೆಯನ್ನು ಅಪಹರಿಸಲು ಯತ್ನಿಸಿದಾಗ, ರಾಮ ಲಕ್ಷ್ಮಣರು ಅವನನ್ನು ಸಂಹರಿಸುತ್ತಾರೆ. ಆ ರಾಕ್ಷಸ 'ತುಂಬುರ' ಎಂಬ ಗಂಧರ್ವನಾಗಿರುತ್ತಾನೆ. ಹಾಗೆ ಖರ-ದೂಷಣ ರೆಂಬ ರಾಕ್ಷಸನನ್ನು ಸಂಹರಿಸಿ ದರು. ನಂತರ ರಾವಣನ ತಂಗಿ ಶೂರ್ಪಿಣಿಕಿ ರಾಮನಿಗೆ ಮರುಳಾಗಿ ‌ತನ್ನನ್ನು ವಿವಾಹವಾಗುವಂತೆ ಕೇಳುತ್ತಾಳೆ. ರಾಮನು ತಮಾಷೆಗಾಗಿ ಲಕ್ಷ್ಮಣನನ್ನು ತೋರಿಸುತ್ತಾನೆ. ಮೋಹಿಸಲು ಬಂದ ಶೂರ್ಪಿಣಿಕೆಯ ಮೂಗನ್ನು ಲಕ್ಷ್ಮಣ ಕತ್ತರಿಸಿದನು. ಈ ವಿಷಯ ರಾವಣನಿಗೆ ತಿಳಿದಾಗ, ರಾಕ್ಷಸ ಮಾರಿಚನನ್ನು ಮಾಯಾ ಜಿಂಕೆ ರೂಪದಲ್ಲಿ ಹೋಗಿ ಸೀತೆಯ ಮನಸ್ಸನ್ನು ಅಪಹರಿಸಲು ಹೇಳಿದನು. ಮಾಯಾ ಜಿಂಕೆಗೆ ಮರುಳಾದ ಸೀತೆ ಜಿಂಕೆ ತರಲು ರಾಮನನ್ನು ಕಳಿಸಿದಳು. ಸ್ವಲ್ಪ ಹೊತ್ತಿಗೆ ಹಾ ಸೀತೆ, ಹಾ ಲಕ್ಷ್ಮಣ, ಚೀತ್ಕರಿಸುವ ರಾಮನ ದ್ವನಿಗೆ ಬೆದರಿದ ಸೀತೆ, ಬಲವಂತವಾಗಿ ಲಕ್ಷ್ಮಣನನ್ನು ಕಳುಹಿಸುತ್ತಾಳೆ, ಇದೇ ಸಮಯ ಸಾಧಿಸಿ ಸನ್ಯಾಸಿ ವೇಷದಲ್ಲಿ ಬಂದ ರಾವಣ ಸೀತೆ ಯನ್ನು ಅಪಹರಿಸುತ್ತಾನೆ. ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುವ ರಾವಣನನ್ನು ನೋಡಿದ ಜಟಾಯುಪಕ್ಷಿ ರಾವಣಗೆ ಬುದ್ಧಿ ಹೇಳಿ, ಅವನೊಡನೆ ಹೋರಾಡಿ ರಾವಣನ ಕತ್ತಿಯ ಏಟಿಗೆ ರೆಕ್ಕೆ ಮುರಿದು ಬೀಳುತ್ತದೆ. ದೇಹ ತ್ಯಾಗ ಮಾಡುವ ಮೊದ ಲು ರಾಮನಿಗೆ ಎಲ್ಲವನ್ನು ತಿಳಿಸಿ ಕಬಂದನನ್ನು ಕಾಣಲು ಹೇಳಿ ಸುಗ್ರೀವನ ಸಖ್ಯವನ್ನು ಬೆಳೆಸಲು ತಿಳಿಸಿ ದೇಹ ತ್ಯಾಗ ಮಾಡುತ್ತದೆ. ರಾಮ ಜಟಾಯು ವಿನ ಸಂಸ್ಕಾರ ಮುಗಿಸಿ ಮಾತಂಗ ಮುನಿಗಳ ಆಶ್ರಮಕ್ಕೆ ಬರುತ್ತಾನೆ. ತನಗಾಗಿ ಕಾದಿದ್ದ ಭಕ್ತೆ ಶಬರಿ ಕೊಟ್ಟ ಹಣ್ಣುಗಳನ್ನು ತಿಂದು ಅವಳಿಗೆ ಮೋಕ್ಷ ಕರುಣಿಸುತ್ತಾನೆ. ಮುಂದೆ ಹನುಮಂತನ ಪರಿಚಯವಾಗುತ್ತದೆ. ವಾಲಿ -ಸುಗ್ರೀವರ ಕದನ ತಿಳಿಯುತ್ತದೆ. ಸುಗ್ರೀವ ರಾಜ್ಯ ತೊರೆದು ಕಿಷ್ಕಿಂದೆಯಲ್ಲಿ ನೆಲೆಸಿದನು. ಸುಗ್ರೀವನ ಮಂತ್ರಿ ಹನುಮಂತ ಮುಂದೆ ರಾಮ ಭಕ್ತನಾದನು. ನಂತರ ರಾಮ, ವಾಲಿ ಸಂಹಾರ ಮಾಡಿ ಸುಗ್ರೀವನಿಗೆ ರಾಜ್ಯ ಕೊಡಿ ಸುತ್ತಾನೆ. ಸುಗ್ರೀವನ ಆಜ್ಞೆಯಂತೆ ಸೀತೆಯನ್ನು ಹುಡುಕಲು ಹೊರಟು ಹನುಮಂತ ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಕಂಡನು ರಾಕ್ಷಸರು ಹಿಂಸೆ ಕೊಡುವುದನ್ನು ನೋಡಿದನು, ಅಣುಗಾತ್ರ ತಾಳಿದ ಹನುಮಂತ ಸೀತೆಯ ಮುಂದೆ ನಿಂತು ವಿದೇಯತೆಯಿಂದ ರಾಮನ ಮುದ್ರೆ ಉಂಗುರ ಕೊಟ್ಟು ರಾಮನ ಭಂಟ ಎಂಬುದನ್ನು ತಿಳಿಸಿ, ಧೈರ್ಯ ಹೇಳಿ ಅವಳು ಕೊಟ್ಟ ಚೋಡಾಮಣಿಯನ್ನು ತೆಗೆದುಕೊಂಡು, ಲಂಕೆಯ ಅರ್ಧ ಭಾಗವನ್ನೆ ಸುಟ್ಟು ಹಾನಿ ಮಾಡಿ ಯುದ್ಧಕ್ಕೆ ಮುನ್ನುಡಿ ಹಾಕಿ ಬರುತ್ತಾನೆ. ರಾಮನಿಗೆ ಲಂಕಾನಗರದ ಪೂರ್ಣ ವಿವರವನ್ನು ತಿಳಿಸಿದನು. ಸೀತೆಯನ್ನು ಕರೆ ತರಲು ಯುದ್ಧಕ್ಕೆ ತಯಾರಿ ನಡೆಸುವ ಮೊದಲು ರಾಮೇಶ್ವರದಲ್ಲಿ ರಾಮ ಶಿವಲಿಂಗ ಪ್ರತಿಷ್ಠಾಪಿಸಿ ಆರಾಧನೆ ಮಾಡಿ ನಂತರ ಸಮುದ್ರಕ್ಕೆ ಸೇತುವೆ ನಿರ್ಮಾಣ ಮಾಡಲು ವಾನರ ಸೈನ್ಯಕ್ಕೆ ಅನುಮತಿ ಕೊಡುತ್ತಾನೆ. ಹನುಮಂತರಾದಿ ಯಾಗಿ ಎಲ್ಲಾ ವಾನರರು ಕಲ್ಲಿನ ಮೇಲೆ ‘ರಾಮ’ ಎಂದು ಹೆಸರು ಬರೆದು, ಶ್ರೀ ರಾಮ್ ಜೈ ರಾಮ್, ಶ್ರೀ ರಾಮ್ ಜೈ ರಾಮ್ ಎಂದು ಘೋಷಣೆ ಕೂಗುತ್ತಾ ಸಮುದ್ರಕ್ಕೆ ಹಾಕಿದರು. ಕಲ್ಲುಗಳೆಲ್ಲ ಮುಳುಗದೆ ತೇಲಿ ಸೇತುವೆ ಯಾಯಿತು. ನಂತರ ರಾವಣನೊಂದಿಗೆ ಯುದ್ಧ ಸಾರಿದರು. ಮೊದಲು ನಾಲ್ಕು ದಿನ ಯುದ್ಧ ಬಿರುಸಾಗಿಯೆ ಸಾಗಿತ್ತು. ರಾವಣನ ಮಗ ಬಲಶಾಲಿ ಮೇಘನಾದ ಮಾಯ ಯುದ್ಧದಿಂದ ನಾಗಾಸ್ತ್ರಗಳನ್ನೇ ಬಿಟ್ಟು ರಾಮ ಲಕ್ಷ್ಮಣರನ್ನು ಮೂರ್ಛೆಗೊಳಿಸಿದನು ಹನುಮಂತ ವಿಭೀಷಣರು ಜಾಗೃತೆಯಿಂದ ರಾಮ ಲಕ್ಷ್ಮಣರನ್ನು ಉಪಚರಿಸಿದರು. ನಂತರ ಮೇಘ ನಾದನನ್ನು ಲಕ್ಷ್ಮಣನು ಸಂಹರಿಸಿದನು. ರಾವಣ ಯುದ್ಧಕ್ಕೆ ಬಂದು ತನ್ನ ಶಕ್ತಿಯುತವಾದ ಶಸ್ತ್ರಗಳಿಂದ ಲಕ್ಷ್ಮಣನನ್ನು ಮೂರ್ಛೆ ಗೊಳಿಸಿದನು. ರಾಮ ಹೆದರಿದಾಗ, ವಿಭೀಷಣನ ಸಲಹೆಯಂತೆ ಲಂಕಾ ನಗರದ ಸುಶೇಣ ಎಂಬ ವೈದ್ಯ ಪಂಡಿತರನ್ನು ಕರೆಸಿ, ಅವರ ಸಲಹೆಯಂತೆ ಸಂಜೀವಿನಿ ಪರ್ವತವನ್ನು ಹನುಮಂತ ಹೊತ್ತು ತಂದು ಗಿಡಮೂಲಿಕೆಗಳ ಚೂರ್ಣವನ್ನು ಕುಡಿಸಿದ ನಂತರ ಲಕ್ಷ್ಮಣ ಬದುಕಿದನು. ಮತ್ತೆ ಮುಂದುವರೆದ ಯುದ್ಧದಲ್ಲಿ ಇಡೀ ರಾವಣನ ಸೈನವನ್ನೆಲ್ಲ ನಾಶ ಮಾಡಿ ಕಡೆಯದಾಗಿ ರಾಮನು ರಾವಣನನ್ನು ಸಂಹಾರ ಮಾಡಿದನು. ಸಂತಸದಿಂದ ಹನುಮಂತ, ಲಕ್ಷ್ಮಣ, ಸೀತೆಯನ್ನು ಬಂಧನದಿಂದ ಬಿಡಿಸಿದರು. ಲೋಕಾಪವಾದ ಬರಬಾರದೆಂದು ರಾಮನ ಆಜ್ಞೆಯಂತೆ ಸೀತೆ ಅಗ್ನಿ ಪ್ರವೇಶ ಮಾಡಿದಾಗ, ಸಾಕ್ಷಾತ್ ಅಗ್ನಿದೇವ ಆಕೆಯ ನ್ನು ತಂದು ಸೀತೆಯ ಪಾವಿತ್ರತೆಯನ್ನು ಲೋಕಕ್ಕೆ ತಿಳಿಸಿ ರಾಮನಿಗೆ ಒಪ್ಪಿಸಿ ದನು. ವಿಭೀಷಣನ ಪುಷ್ಪಕವಿಮಾನದಲ್ಲಿ ಭಾರದ್ವಾಜರ ಆಶ್ರಮಕ್ಕೆ ಬಂದು ಆಶೀರ್ವಾದ ಪಡೆದು ಅಯೋಧ್ಯಾನಗರಕ್ಕೆ ಸೀತಾ- ಲಕ್ಷ್ಮಣ, ಸಮೇತ ಬಂದನು ಶ್ರೀರಾಮ. ಮೊದಲು ನಂದಿ ಗ್ರಾಮಕ್ಕೆ ಬಂದು, ರಾಮನ ಬರುವಿಕೆಗಾಗಿ ಕಾಯುತ್ತಿದ್ದ ಭರತ ನನ್ನು ಸಂತೈಸುತ್ತಾನೆ. ನಂತರ ತನ್ನೆಲ್ಲಾ ಪರಿವಾರ ಸಮೇತನಾಗಿ ಅಯೋಧ್ಯೆಗೆ ಬಂದು ನೆಲೆಸುತ್ತಾನೆ. ರಾಮನು ಪಟ್ಟಾಭಿಷಿಕ್ತನಾಗಿ ಅಯೋಧ್ಯ ದೊರೆಯಾಗುತ್ತಾನೆ. ಅಯೋಧ್ಯ ನಿವಾಸಿಗಳು ಭಕ್ತಿ ಪರವಶ ರಾಗಿ ಶ್ರೀ ರಾಮ ಜಯ ರಾಮ್, ಶ್ರೀ ರಾಮ ಜಯ ರಾಮ್ “ಶ್ರೀರಾಮ ಜಯ ರಾಮ್, ಎಂದು ರಾಮ ನಾಮ ಸ್ಮರಣೆ ಯೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಕೊಂಡಾಡುತ್ತಾ ಶ್ರೀ ರಾಮನ ರಾಮ ರಾಜ್ಯ ದಲ್ಲಿ ಬಹಳ ಕಾಲ ಆನಂದವಾಗಿರುತ್ತಾರೆ. ಶ್ರೀರಾಮಚಂದ್ರ ಕೃಪಾಲು ಭಜಮನ ಹರಣ ಭವಭಯ ದಾರುಣಮ್ ನವಕುಂಜಲೋಚನ ಕಂಜಮುಖ ಕರಕಂಜ ಪದ ಕಂಚಾರುಣಮ್ !! ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
15 likes
1 comment 19 shares