ShareChat
click to see wallet page

ನಿನ್ನೆ ದಿನ ಶಂಕರಗಿರಿಯ ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಪ್ರಬೋಧಿನಿ ಶ್ರೀರಾಮ ಭಕ್ತಮಂಡಳಿ ವತಿಯಿಂದ 48 ನೆ ವರ್ಷದ ದೀಪೋತ್ಸವ ಸಂಪನ್ನವಾಯಿತು. ಅಲ್ಲಿ ನಾನು ಕಂಡಂತಹ ಕೆಲವು ವಿಶೇಷಗಳು 1) ನಾಲ್ಕು ಹನಿ ಮಳೆ ಬಂದಿದ್ದು ಇಲ್ಲಿ ಶ್ರೀರಾಮ ಭಕ್ತಮಂಡಳಿಯ ದೀಪೋತ್ಸವದ ದಿನ ಮಳೆ ಹನಿ ಬೀಳುವ ವಾಡಿಕೆ ಈ ವರ್ಷವೂ ನಿಜವಾಯಿತು. 2) ಅಲ್ಲಿ ಬರುವ ಭಕ್ತರು ಸಿಬ್ಬಂದಿಗಳ ಸೂಚನೆಯಂತೆ ನಿರ್ಧಿಷ್ಟ ಸ್ಥಳದಲ್ಲಿ ತಮ್ಮ ಪಾದರಕ್ಷೆಗಳನ್ನು ಸಾಲಿನಲ್ಲಿ ಬಿಟ್ಟು ಬರುತ್ತಿದ್ದದ್ದು 3) ಬಂದವರನ್ನು ಅಲ್ಲಿನ ಸಿಬ್ಬಂದಿ ನಗುಮೊಗದಿಂದ ಸ್ವಾಗತಿಸುತ್ತಿದ್ದದ್ದು 4) ಶ್ರೀ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಿಹೋಗುವ ಯಾತ್ರಿಗಳಿಗೆ ಅನುಕೂಲವಾಗುವಂತಹ ಸ್ಥಳ ಅವಕಾಶವನ್ನು ಬಿಟ್ಟು ಒಂದು ಪಾರ್ಶ್ವದಲ್ಲಿ ಕುಳಿತು ಭಜನೆ ಮಾಡುತ್ತಿದ್ದ ಭಕ್ತಜನರು. 5) ದೀಪವನ್ನು ಹಚ್ಚುವಾಗ ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬ ನಾಮಸ್ಮರಣೆ ಸಾಮೂಹಿಕವಾಗಿ ಮಾಡಿದ್ದು 6) ಪ್ರಸಾದವಿನಿಯೋಗಕ್ಕೆ ಸರತಿ ಸಾಲಿನಲ್ಲಿ ಬಂದು, ನಂತರ ಪೇಪರ್ ತಟ್ಟೆಯನ್ನು ನಿಗದಿತ ಸ್ಥಳದಲ್ಲಿಯೇ ಹಾಕಿ ಶಂಕರಗಿರಿಯ ಸ್ವಚ್ಚತೆಗೆ ಎಲ್ಲರೂ ಸಹಕರಿಸಿದ್ದು. ಉಭಯ ಜಗದ್ಗುರು ಮಹಾಸ್ವಾಮಿಗಳವರ ಪೂರ್ಣಾನುಗ್ರಹದೊಂದಿಗೆ ಆಡಳಿತಾಧಿಕಾರಿಗಳ ಮಾರ್ಗದರ್ಶನ ಅಲ್ಲಿನ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು. ಗೌತಮ್ ಶಾಸ್ತ್ರೀ, ಮಾನಗಾರು, ಶೃಂಗೇರಿ *********************************************************** ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾಲೋ ಬಟನ್ ಒತ್ತಿ ವಾಟ್ಸಪ್ ನಲ್ಲಿ *ಶೃಂಗೇರಿ ನಮ್ಮೂರ* ಬಳಗಕ್ಕೆ ಸೇರಿಕೊಳ್ಳಿ. ಉಪಯುಕ್ತ ಮಾಹಿತಿಯನ್ನು ನಿಮ್ಮ ವಾಟ್ಸಪ ನಲ್ಲಿ ಪ್ರತಿದಿನ ಪಡೆಯಿರಿ Follow *Sringeri Nammuru - ಶೃಂಗೇರಿ ನಮ್ಮೂರು* WhatsApp channel for special updates of Sringeri, through this link #🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #🙏 ಭಕ್ತಿ ವಿಡಿಯೋಗಳು 🌼

788 ने देखा
8 दिन पहले