#ರಮಾಬಾಯಿ ಅಂಬೇಡ್ಕರ್ ಜಯಂತಿ 🙏 #ಮಾತೋಶ್ರೀ_ರಮಾಭಾಯಿ_ಅ೦ಬೇಡ್ಕರ ತ್ಯಾಗಮಯಿ ತಾಯಿಯ ಅವರ ಒಂದು ಐತಿಹಾಸಿಕ ಸ೦ದರ್ಭ #ಕರ್ನಾಟಕದ_ಧಾರವಾಡದಲ್ಲಿ
ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ. ಈ ತಾಯಿ ನಮ್ಮ #ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. #ಬಾಬಾಸಾಹೇಬ್_ಅಂಬೇಡ್ಕರ್ ದುಂಡು ಮೇಜಿನ ಪರಿಷತ್ನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು. ಆಗ ಅಂಬೇಡ್ಕರ್ ರವರ ಹಿತೈಶಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. #ಧಾರವಾಡದ_ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಡಾಕ್ಟರ್ ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ #ಬಾಬಾಸಾಹೇಬ_ಅಂಬೇಡ್ಕರ್ ರವರು ಧಾರವಾಡದಲ್ಲಿ #ಬುದ್ಧರಕ್ಕಿತ_ವಸತಿಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ. ಅಲ್ಲಿ #ಮಕ್ಕಳು_ಊಟವನ್ನು_ಮಾಡಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರ್ಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡಿದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ಈ ನಿಲಯ #ಬಾಬಾಸಾಹೇಬರೂ ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ ಇವರ ತಾಯಿಯಾದ #ರಮಾಯಿ ಅವರು ನಾನು ಹೇಗೆ ಸುಮ್ಮನಿರಲಿ ಎಂದು #ಕೈಗಳಲಿದ್ದ_4_ಬಂಗಾರದ_ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ #ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸಾಧ್ಯವಾಗುತ್ತಿಲ್ಲಸ್ಥೆ ಮಾಡಿ ಎಂದು ನುಡಿದ ಆ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು.
#ತ್ಯಾಗಮಯಿ_ಮಾತೋಶ್ರೀ #ರಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ಧನ್ಯವಾದಗಳು 🙏.
ಜೈ ಭೀಮ್
ನಮೋ ಬುದ್ಧಯಾ