ShareChat
click to see wallet page

ವಿಧಾನಸೌಧ ಮತ್ತು ಸುವರ್ಣ ಸೌಧದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುತ್ತೆ ವಿನಃ ಕಾರ್ಯರೂಪಕ್ಕೆ ಬರುವುದಿಲ್ಲ. ಎಂತಾ ವಿಪರ್ಯಾಸ. ಉತ್ತರ ಕರ್ನಾಟಕ ಎಂದರೆ ಅಷ್ಟೊಂದು ನಿರ್ಲಕ್ಷಣ ಈ ಸರ್ಕಾರಕ್ಕೆ. ರೈತರು ಬೆಳೆದ ಬೆಳೆಗೆ ಸರಿಯಾಗಿ ಬೇಲೆ ಇಲ್ಲ. ಭಾಗಲಕೋಟ್ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗುಹೇಶ್ವರ್ ನಡುಗಡ್ಡೆಯ ರೈತರ ಪರಸ್ಥಿತಿ ಯಾವ ರೈತನಿಗೂ ಬರದೆ ಇರ್ಲಿ. ಯಾಕಂದ್ರೆ ಇಲ್ಲಿ ಈ ಪ್ರದೇಶದಲ್ಲಿ ಬೆಳೆದಂತ್ ಗೋಂಜಾಳ ಗೋಧಿ, ಪ್ರಮುಖವಾದ ಕಬ್ಬು ಬೆಳೆಯನ್ನು ನದಿಯಿಂದ ಕಾರ್ಖಾನೆಗೆ ಸಾಗಿಸಲು ಸರಿಯಾದ ಸೇತುವೇ (ಬ್ರಿಡ್ಜ್ )ಇಲ್ಲಾ. ರೈತರೇ ನಿರ್ಮಿಸಿದ ಎರಡು ಬೋಟ್ ಗಳ ಜೋಡಣೆ ಮಾಡಿಕೊಂಡು. ಕಬ್ಬು ಲೋಡ್ ಮಾಡಿಕೊಂಡು ಸಾಗಿಸುವ ಸಾಹಸ ಹೇಳತೀರದು. ನಿನ್ನೆ ಬೋಟ್ (ನಾವು) ನದಿಯಲ್ಲಿ ಒಡೆದು ನೀರು ತುಂಬಿರುವ ಕಾರಣ. ಅಂಬಿಗನ ಸಮಯ ಪ್ರಜ್ಞೆಯಿಂದ ನದಿಯ ದಡಕ್ಕೆ ಸೇರಿಸಿದ. ಆದರೂ ವಿಧಿಯ ಮುಂದೆ ಕೊನೆಗೂ ನಿರಲ್ಲ್ಲಿ ಕಬ್ಬು ಸಮೇತ ಟ್ರ್ಯಾಕ್ಟರ್ ಮುಳುಗಿ ಹೋಯಿತು. ಇನ್ನು ಮುಂದೆ ಯಾವುದೇ ದೊಡ್ಡ ಅನಾಹುತ ಆಗುವ ಮೊದಲೇ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು. ಅನ್ನದಾತನ ಗೋಳು ಕೇಳುವವರಾರು...? #ಕಂಕಣವಾಡಿ #ಕೃಷ್ಣಾನದಿ #ಟ್ಯಾಕ್ಟರ #ಭೋಟ #ಸೇತುವೆ #Narayanapura Dam: ಕೃಷ್ಣಾ ನದಿ ಆರ್ಭಟಕ್ಕೆ ಲಿಂಗಸುಗೂರು ಶೀಲಹಳ್ಳಿ ಸೇತುವೆ ಮುಳುಗಡೆ..! #ಕೃಷ್ಣಾ ನದಿ ನಮ್ಮ ರಾಯಚೂರು #ಗಂಗಾ ನದಿ 7996314608 #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡

708 ने देखा
11 दिन पहले