ಇತರರ ಮಾತು,ನಿರ್ಧಾರ,ಮನಸ್ಥಿತಿ ಇವೆಲ್ಲ ನಮ್ಮ ಕೈಯಲ್ಲಿ ಇಲ್ಲ.
ಆದರೆ❓ಆ ಕ್ಷಣದಲ್ಲಿ ನಾವು ಏನು ಮಾಡಬೇಕು ಅಂತ ನಿರ್ಧರಿಸುವ ಶಕ್ತಿ ಮಾತ್ರ ನಮ್ಮಲ್ಲಿದೆ.
ಕೋಪ,ನೋವು ಬಂದಾಗ ತಕ್ಷಣ ರಿಯಾಕ್ಟ್ ಮಾಡೋ ಬದಲು ಒಂದು ಕ್ಷಣ ನಿಲ್ಲೋದು
ಅವರು ಹೇಗೆ ನಡೆದುಕೊಂಡರೂ,ನಾವು ಹೇಗೆ ಇರಬೇಕು ಅಂತ ನಾವು ನಿರ್ಧರಿಸುವುದು
ಎಲ್ಲವನ್ನೂ ಬದಲಾಯಿಸಲು ಹೋಗದೆ,ನಮ್ಮ ಶಾಂತಿ ಉಳಿಸಿಕೊಳ್ಳಲು ಏನು ಬೇಕು ಅಂತ ನೋಡೋದು
ಜೀವನದಲ್ಲಿ ಸಾಕಷ್ಟು ಶಕ್ತಿ ಉಳಿಯೋದೇ ಇಲ್ಲಿ.ಇತರರನ್ನ ಬದಲಾಯಿಸಲು ಪ್ರಯತ್ನಿಸೋದ್ರಲ್ಲಿ ವ್ಯರ್ಥ ಮಾಡೋ ಬದಲು,ನಮ್ಮ ಪ್ರತಿಕ್ರಿಯೆಯನ್ನ ಆಯ್ಕೆ ಮಾಡಿದಾಗ ನಮಗೆ ನಿಯಂತ್ರಣ ಸಿಗುತ್ತೆ.
ಈ ಆಲೋಚನೆ ನಮ್ಮನ್ನು ಪರಿಸ್ಥಿತಿಯ ಗುಲಾಮರನ್ನಾಗಿ ಮಾಡದೆ, ನಮ್ಮ ಮನಸ್ಸಿನ ಯಜಮಾನರನ್ನಾಗಿ ಮಾಡುತ್ತದೆ.ಸರಳವಾಗಿ ಹೇಳುವುದಾದರೆ, ಬೇರೆಯವರು ಕಲ್ಲು ಎಸೆದಾಗ ಅದನ್ನು ತಿರುಗಿ ಎಸೆಯುವ ಬದಲು, ಅದರಿಂದ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಳ್ಳುವುದೇ ಬುದ್ಧಿವಂತಿಕೆ.
#ನನ್ನ ಪ್ರಪಂಚ ❣️