ಸಮಸ್ಯೆಗಳು ಹೆಚ್ಚಾಗಿ ಸೃಷ್ಟಿಯಾಗೋದು ವಿಷಯದಿಂದ ಅಲ್ಲ,ನಮ್ಮ ಧ್ವನಿಯ ಉಷ್ಣತೆಯಿಂದ.ಅರ್ಥ ಮಾಡಿಸೋ ಧ್ವನಿ ಇದ್ದರೆ ಜಗಳವೂ ಸಂವಾದ ಆಗುತ್ತೆ.ಆರೋಪ ಮಾಡೋ ಧ್ವನಿ ಇದ್ದರೆ ಪ್ರೀತಿಯ ಮಾತೂ ದೂರ ಮಾಡುತ್ತೆ. ಅದಕ್ಕೆ ತಾನೇ ದೊಡ್ಡವರು ಹೇಳೋದು: *"ನಾಲಿಗೆಗೆ ಮೂಳೆ ಇಲ್ಲ,ಆದ್ರೆ ಮೂಳೆ ಮುರಿಯೋ ಶಕ್ತಿ ಇದೆ"* ಧ್ವನಿ ಬದಲಾದರೆ ಸಂಬಂಧ ಬದಲಾಗುತ್ತೆ.ಸಂಬಂಧ ಬದಲಾದರೆ ಸುತ್ತಲಿನ ಪ್ರಪಂಚವೇ ಬದಲಾಗುತ್ತೆ. ಅದೇ ನಿಮ್ಮ "ಅಸ್ತಿತ್ವದ ಪ್ರಪಂಚ" ಅಲ್ವಾ? ಇವತ್ತು ಯಾರೊಂದಿಗಾದ್ರೂ ಮಾತಾಡುವಾಗ ಒಂದು ಸೆಕೆಂಡ್ ನಿಲ್ಲಿಸಿ, ಧ್ವನಿ ಇಳಿಸಿ ನೋಡಿ. ಪರಿಣಾಮ ನಿಮಗೆ ಗೊತ್ತಾಗುತ್ತೆ. ಏನು ಹೇಳುತ್ತೇವೆ" ಅನ್ನೋದಕ್ಕಿಂತ "ಹೇಗೆ ಹೇಳುತ್ತೇವೆ" ಅನ್ನೋದೇ ಸಂಬಂಧಗಳನ್ನೂ ಕಟ್ಟುತ್ತೆ, ಮುರಿದುಬಿಡುತ್ತೆ. ಒಂದೇ ಮಾತು ಪ್ರೀತಿಯ ಧ್ವನಿಯಲ್ಲಿ ಹೇಳಿದರೆ ಅದು ಧೈರ್ಯವಾಗುತ್ತೆ ಕೋಪದ ಧ್ವನಿಯಲ್ಲಿ ಹೇಳಿದರೆ ಅದು ಗಾಯವಾಗುತ್ತೆ ಅರ್ಥಮಾಡಿಕೊಳ್ಳುವ ಧ್ವನಿಯಲ್ಲಿ ಹೇಳಿದರೆ ಅದು ಪರಿಹಾರವಾಗುತ್ತೆ ಧ್ವನಿ ಅನ್ನೋದು ನಮ್ಮ ಮನಸ್ಸಿನ ಕನ್ನಡಿ. ಅದರಲ್ಲಿ ನಾವು ಏನನ್ನು ಹೊತ್ತಿದ್ದೇವೋ ಅದೇ ಇನ್ನೊಬ್ಬರಿಗೆ ತಲುಪುತ್ತೆ.ಅದಕ್ಕೇ ದೊಡ್ಡ ದೊಡ್ಡ ಜಗಳಗಳು ಕೂಡ ಕೆಲವೊಮ್ಮೆ ಒಂದು ಮೃದುವಾದ "ಸಾರಿ, ಕೇಳಿಸಿಕೊಳ್ಳು" ಅನ್ನೋ ಒಂದೇ ವಾಕ್ಯದಿಂದ ಮುಗಿಯುತ್ತೆ. ಧ್ವನಿ ಬದಲಾದಾಗ ಎದುರಿಗಿರುವವರ ಮುಖಭಾವ ಬದಲಾಗುತ್ತೆ,ಸಂಭಾಷಣೆಯ ದಿಕ್ಕು ಬದಲಾಗುತ್ತೆ, ಕೊನೆಗೆ ನಮ್ಮ ದಿನನಿತ್ಯದ ಬದುಕೇ ಬದಲಾಗುತ್ತೆ. #ನನ್ನ ಪ್ರಪಂಚ ❣️

1K views • 2 days ago
00:00
00:20

ಗೆಳೆತನ ಅಂದ್ರೆ❓ ಮಳೆಯ ಹನಿ,ಬೇಸಿಗೆಯಲ್ಲಿ ತಂಪು ತರುವ ಗಾಳಿ ನಗುವಾಗ ಜೊತೆಗಿರೋ ನೆರಳು,ಅಳುವಾಗ ಕಣ್ಣೊರೆಸೋ ಕೈ ಮಾತಾಡೋಕೆ ವಿಷಯ ಬೇಕಿಲ್ಲ,ಮೌನದಲ್ಲೂ ಅರ್ಥ ಆಗುತ್ತೆ ತಪ್ಪು ಮಾಡಿದ್ರೆ ಗದರಿಸುತ್ತೆ,ಗೆಲುವಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತೆ ದೂರ ಇದ್ರೂ ಹತ್ತಿರ ಇರೋ ಹಾಗೆ,ಕಷ್ಟ ಬಂದಾಗ ಮೊದಲು ನೆನಪಾಗೋ ಹೆಸರು ರಕ್ತ ಸಂಬಂಧ ಅಲ್ಲ,ಆದ್ರೂ,ಜೀವನದ ಪುಟಕ್ಕೆ ಬಣ್ಣ ತುಂಬೋ ಚಿತ್ರ ಗೆಳೆಯ ಅಂದ್ರೆ❔ ಒಂದು ಮನೆ,ಯಾವಾಗ ಬೇಕಾದ್ರೂ ಬಾಗಿಲು ತೆಗೀಬಹುದು ಅಲ್ಲಿ ತೀರ್ಪು ಇರಲ್ಲ ಕೇವಲ"ನಾನಿದೀನಿ" ಅನ್ನೋ ಭರವಸೆ ಇರುತ್ತೆ #ನನ್ನ ಪ್ರಪಂಚ ❣️

637 views • 8 hours ago
00:00
00:13