ಒಮ್ಮೆಅರ್ಜುನ ಶ್ರೀ ಕೃಷ್ಣನನ್ನು ಕೇಳಿದ..
ಈ ಗೋಡೆಯ ಮೇಲೊಂದು ಸಂದೇಶ ಬರಿ,ಅದು ಹೇಗಿರಬೇಕೆಂದರೆ ❓️ಖುಷಿಯಲ್ಲಿ ಇದ್ದಾಗ ಓದಿದರೆ ದುಃಖವಾಗಬೇಕು.ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದು.
ಆಗ ಶ್ರೀ ಕೃಷ್ಣ ಹೇಳುತ್ತಾನೆ.
ಈ ಸಮಯ ಕಳೆದು ಹೋಗುತ್ತದೆ.
ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರವನ್ನ ನೀಡುತ್ತಾನೆ ಕೃಷ್ಣ.
ದುಃಖದಲ್ಲಿರುವವರು ಈ ಸಮಯ ಬೇಗಾ ಕಳೆದು ಹೋಗಲಿ ಎಂದು ಬಯಸಿದರೆ.
ಸಂತೋಷದಲ್ಲಿದ್ದವರು ಸಂತೋಷ ಇಷ್ಟು ಬೇಗ ಮುಗಿದು ಹೋಯಿತೇ ಎಂದು ಬೇಸರ ಪಡುತ್ತಾರೆ.
ಆದರೆ❓️
ಸಮಯ ಹೇಗಿದ್ದರು ಕಳೆದು ಹೋಗುತ್ತದೆ.
ಆದರೆ❓️
ಕಳೆದು ಹೋಗುತ್ತಿರುವ ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಮಾನವನ ಬುದ್ಧಿವಂತಿಕೆಗೆ ಬಿಟ್ಟಿದ್ದು.
ಮನುಷ್ಯನಿಗಿರುವ ಸಮಯ ಸ್ವಲ್ಪವಷ್ಟೇ.
ಅದರಲ್ಲಿ ಬರೀ ಕೋಪ,ದ್ವೇಷ,ಗುರಿ ಹಿಂದೆ ಓದುವುದರ ಜೊತೆಗೆ.
ಜೀವನದ ಸಣ್ಣ ಸಣ್ಣ ಖುಷಿಯನ್ನ ಅನುಭವಸಿಕೊಳ್ಳಿ.
ಯಾಕೆಂದರೆ❓️
ಮುಂದೊಂದಿನ ಗುರಿ ತಲುಪಿದ ಮೇಲೆ ಕಳೆದು ಕೊಂಡ ಅನುಭವ,ಖುಷಿಯನ್ನ ಪಡೆದು ಕೊಳ್ಳಲು ಖಂಡಿತ ಸಾಧ್ಯವಿಲ್ಲ.
ಯಾವ ವಯಸ್ಸಿನಲ್ಲಿ ಯಾವ ಅನುಭವ ದೊರೆಯಬೇಕು ಅದು ದೊರೆತೆರೇನೇ ಚಂದ.
ಮನುಷ್ಯನಗೆ ವಯಸ್ಸು ಹಾಗೆ.
ಅದರಿಂದ ಕಳೆದು ಹೋಗುತ್ತಿರುವ ಸಮಯದ ಕುರಿತು ಚಿಂತೆ ಮಾಡುವ ಬದಲು,ಕಳೆದು ಹೋಗುತ್ತಿರುವ ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಸಮಯಕ್ಕೆ ಅರ್ಥ ದೊರೆಯುತ್ತದೆ.
ಮನುಷ್ಯನಿಗೆ ಎಲ್ಲವನ್ನ ಖರೀದಿಸುವ ಶಕ್ತಿ ಇದೆ.
ಆದರೆ❓️
ಸಮಯವನ್ನಲ್ಲ.
ಮನುಷ್ಯನಿಗೆ ಸಮಯವನಂತೂ ನಿಲ್ಲಿಸಲು ಸಾಧ್ಯವಿಲ್ಲ.
ಆದರೆ❓️
ಸಿಕ್ಕಿದ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿದೆ.
ಸಿಗುವ ಎಲ್ಲವನ್ನು ಅನುಭವಿಸೋದನ್ನ ಕಲಿಯೋಣ.
ಎಲ್ಲರನ್ನು ಪ್ರೀತಿಸಲು ಕಲಿಯೋಣ
ಸಮಯ ಕಳೆದು ಹೋದಮೇಲೆ
ಅಯ್ಯೋ ಕೋಪದಲ್ಲೇ ಜೀವನದ ಪ್ರಮುಖ ಸುಖಗಳನ್ನೇ ಕಳೆದುಕೊಂಡೆನಾ ಎಂದು ದುಃಖ ಪಡುವ ಬದಲು.
ಆ ದಿನದ ಪ್ರತಿ ಖುಷಿಯನ್ನ ಅನುಭವಿಸಲು ಕಲಿತರೆ,ಸಮಯ ಕಳೆದುದ್ದಕ್ಕೂ ದುಃಖ ಪಡುವ ಅಗತ್ಯ ಇರುವುದಿಲ್ಲ.
ನಿಮ್ಮಲ್ಲಿರೋ ಈ ಕ್ಷಣ ಸಮಯ ಈ ಅಮೂಲ್ಯವಾದ ಸ್ವತ್ತನ್ನ ಸಂಪೂರ್ಣವಾಗಿ ಬಳಸಿಕೊಳ್ಳಿ.
ಸತ್ತಮೇಲೆ ಇವುಗಳು ಯಾವುದು ನಮ್ಮ ಬಳಿ ಇರಲ್ಲ🥰
#ನನ್ನ ಪ್ರಪಂಚ ❣️