#🕉️ ಜೈ ಶ್ರೀ ರಾಮ🙏
ರಾಮನ ಈ 4 ನಾಮಗಳ ದಿವ್ಯಾರ್ಥ!
ಗರುಡಪುರಾಣದಲ್ಲಿ ಶ್ರೀರಾಮನಿಗೆ ಆನಪದ, ಅನರೂಪಿ, ಅನ್ನಪ್ರದ ಮತ್ತು ಅನ್ನಾದ ಎಂಬ ನಾಲ್ಕು ವಿಶಿಷ್ಟ ನಾಮಗಳನ್ನು ಹೇಳಲಾಗಿದೆ. ಈ ನಾಮಗಳ ಹಿಂದೆ ಆಳವಾದ ಅರ್ಥ ಇದೆ.
ಶ್ರೀರಾಮನು ಧರ್ಮಾಧಾರಿತ ಆಡಳಿತದಿಂದ ಪ್ರಜೆಗಳಿಗೆ ಅನ್ನ, ವಸನ, ಸೌಕರ್ಯಗಳನ್ನು ನೀಡಿ ಅವರನ್ನು ರಕ್ಷಿಸಿದನು, ಆದ್ದರಿಂದ ಆತ 'ಅನ್ನಪ್ರದ'. ಮಹರ್ಷಿ ದುರ್ವಾಸರಿಗೆ ಕ್ಷಣದಲ್ಲೇ ಅಮೃತಸಮಾನ ಅನ್ನವನ್ನು ಸೃಷ್ಟಿಸಿ ನೀಡಿದನು..
ಶ್ವೇತರಾಜನ ಹಸಿವೆಯನ್ನು ನೀಗಿಸಿದಾಗ, ಆತನೇ ಅನ್ನಸ್ವರೂಪನಾಗಿ 'ಅನರೂಪಿ' ಎಂಬ ದಿವ್ಯ ರೂಪವನ್ನು ತೋರಿಸಿದನು.
ಶಬರಿಯ ಭಕ್ತಿಯಿಂದ ನೀಡಿದ ಹಣ್ಣುಗಳನ್ನು ಪ್ರೀತಿಯಿಂದ ಸ್ವೀಕರಿಸಿದ ರಾಮನು 'ಅನ್ನಾದ' ಎನಿಸಿದನು, ಅಂದರೆ ಭಕ್ತಿಯಿಂದ ನೀಡಿದ ಅನ್ನವನ್ನು ಸ್ವೀಕರಿಸುವವನು.
ಗುಹನ ಭಕ್ತಿಯನ್ನು ಗೌರವಿಸಿ, ಅವನ ಅರ್ಪಣೆಯನ್ನು ಕೃಪೆಯಿಂದ ಸ್ವೀಕರಿಸಿದ ರಾಮನು, ಎಲ್ಲರಲ್ಲೂ ಸಮಾನವಾಗಿ ನೆಲೆಸಿರುವ ದಯಾಮಯನಾದನು..
ಭಗವಂತನು ಕೇವಲ ದಾತನಲ್ಲ, ಭಕ್ತಿಯ ರೂಪವಾದ ಅನ್ನವನ್ನೇ ಅನುಗ್ರಹವಾಗಿ ಸ್ವೀಕರಿಸುವವನು.. ಶುದ್ಧ ಭಕ್ತಿ ಇದ್ದರೆ, ಆತನೇ ಅನ್ನವೂ... ಆತನೇ ಆನಂದವೂ! 🙏🌺🙏🌺🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏