ರಾಧಾಕೃಷ್ಣ 🦚💙
16K views
1 months ago
#🕉️ ಜೈ ಶ್ರೀ ರಾಮ🙏 ರಾಮನ ಈ 4 ನಾಮಗಳ ದಿವ್ಯಾರ್ಥ! ‎ ಗರುಡಪುರಾಣದಲ್ಲಿ ಶ್ರೀರಾಮನಿಗೆ ಆನಪದ, ಅನರೂಪಿ, ಅನ್ನಪ್ರದ ಮತ್ತು ಅನ್ನಾದ ಎಂಬ ನಾಲ್ಕು ವಿಶಿಷ್ಟ ನಾಮಗಳನ್ನು ಹೇಳಲಾಗಿದೆ. ಈ ನಾಮಗಳ ಹಿಂದೆ ಆಳವಾದ ಅರ್ಥ ಇದೆ. ‎ ‎ ಶ್ರೀರಾಮನು ಧರ್ಮಾಧಾರಿತ ಆಡಳಿತದಿಂದ ಪ್ರಜೆಗಳಿಗೆ ಅನ್ನ, ವಸನ, ಸೌಕರ್ಯಗಳನ್ನು ನೀಡಿ ಅವರನ್ನು ರಕ್ಷಿಸಿದನು, ಆದ್ದರಿಂದ ಆತ 'ಅನ್ನಪ್ರದ'. ಮಹರ್ಷಿ ದುರ್ವಾಸರಿಗೆ ಕ್ಷಣದಲ್ಲೇ ಅಮೃತಸಮಾನ ಅನ್ನವನ್ನು ಸೃಷ್ಟಿಸಿ ನೀಡಿದನು.. ‎ ‎ಶ್ವೇತರಾಜನ ಹಸಿವೆಯನ್ನು ನೀಗಿಸಿದಾಗ, ಆತನೇ ಅನ್ನಸ್ವರೂಪನಾಗಿ 'ಅನರೂಪಿ' ಎಂಬ ದಿವ್ಯ ರೂಪವನ್ನು ತೋರಿಸಿದನು. ‎ ‎ ಶಬರಿಯ ಭಕ್ತಿಯಿಂದ ನೀಡಿದ ಹಣ್ಣುಗಳನ್ನು ಪ್ರೀತಿಯಿಂದ ಸ್ವೀಕರಿಸಿದ ರಾಮನು 'ಅನ್ನಾದ' ಎನಿಸಿದನು, ಅಂದರೆ ಭಕ್ತಿಯಿಂದ ನೀಡಿದ ಅನ್ನವನ್ನು ಸ್ವೀಕರಿಸುವವನು. ‎ ‎ ಗುಹನ ಭಕ್ತಿಯನ್ನು ಗೌರವಿಸಿ, ಅವನ ಅರ್ಪಣೆಯನ್ನು ಕೃಪೆಯಿಂದ ಸ್ವೀಕರಿಸಿದ ರಾಮನು, ಎಲ್ಲರಲ್ಲೂ ಸಮಾನವಾಗಿ ನೆಲೆಸಿರುವ ದಯಾಮಯನಾದನು.. ‎ ‎ ಭಗವಂತನು ಕೇವಲ ದಾತನಲ್ಲ, ಭಕ್ತಿಯ ರೂಪವಾದ ಅನ್ನವನ್ನೇ ಅನುಗ್ರಹವಾಗಿ ಸ್ವೀಕರಿಸುವವನು.. ಶುದ್ಧ ಭಕ್ತಿ ಇದ್ದರೆ, ಆತನೇ ಅನ್ನವೂ... ಆತನೇ ಆನಂದವೂ! 🙏🌺🙏🌺🙏 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏