#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ
ಎರಡನೇ ಅಧ್ಯಾಯ..
ಎಲೈ ಮುನಿಗಳಿರಾ...! ಶ್ರೀ ಸಂಕಷ್ಟಹರ ಗಣಪತಿ ವ್ರತದ ಮಹಾತ್ಮೆಯನ್ನು ಇನ್ನೂ ಕೇಳಿರಿ ; ಹಿಂದೆ ರಾವಣನು ಅಖಿಲಬಲಸಂಪ್ರಾಪ್ತಿಗಾಗಿ ಈ ವ್ರತವನ್ನು ಶ್ರದ್ಧೆಯಿಂದ ಮಾಡಿದ್ದನು..
ಸೀತಾದೇವಿಯಿಂದ ವಿಯೋಗವಾದ ಕಾಲದಲ್ಲಿ ಸ್ವಯಂ ಶ್ರೀ ರಾಮಚಂದ್ರ ಸ್ವಾಮಿಯಿಂದಲೂ ಈ ವ್ರತವು ಆಚರಿಸಲ್ಪಟ್ಟಿತ್ತು.
ಹಿಂದೆ ಸುಬ್ರಮಣ್ಯ ನಾದ ನಾನೂ ಕೂಡ ಕಾರಣಾಂತರಗಳಿಂದ ಅದೃಷ್ಯನಾಗಿದ್ದಾಗ ಪರಮೇಶ್ವರನ ಉಪದೇಶದಂತೆ ಪುತ್ರವಿಯೋಗದಿಂದ ಚಿಂತಿತಳಾದ ಪಾರ್ವತಿ ದೇವಿಯು ನಾಲ್ಕು ತಿಂಗಳ ಕಾಲ ಈ ವ್ರತವನ್ನು ಆಚರಿಸಿ ಐದನೇಯ ತಿಂಗಳಲ್ಲಿ ಸ್ಕಂದನಾದ ನನ್ನನ್ನು ಪಡೆದಳು.
ಅಗಸ್ತ್ಯ ಮಹರ್ಷಿಗಳು ತಾವು ಸಮುದ್ರಪಾನ ಮಾಡುವ ಮೊದಲು ಈ ವ್ರತಾಚರಣೆಯನ್ನು ಮಾಡಿ ಅದರಿಂದ ಪ್ರಭಾವಿತರಾಗಿ ಕಾರ್ಯಸಾಧನೆ ಮಾಡಿದರು.
ಎಲೈ ಯೋಗಿಂದ್ರರೇ ಹಿಂದೆ ಆರು ತಿಂಗಳ ಕಾಲ ಈ ವ್ರತಾಚರಣೆಯನ್ನು ಮಾಡಿ ಅದರಿಂದ ಪ್ರಭಾವಿತಳಾಗಿ ಕಾರ್ಯ ಸಾಧನೆ ಮಾಡಿದ ದಮಯಂತಿಯು ಗಣೀಶಾನುಗ್ರಹದಿಂದ ಪುನಃ ನಳನನ್ನು ಪಡೆದಳು. ಅದರಂತೆ ಅನಿರುದ್ದನನ್ನು ಬಾಣಾಸುರನ ನಗರಕ್ಕೆ ಶತ್ರುಗಳಿಂದ ಒಯ್ಯಲ್ಪಡಲು ಆಗ ಸ್ವಯಂ ಶ್ರೀ ಕೃಷ್ಣನಿಂದಲೇ ಈ ವ್ರತಾಚರಣೆಯು ಆಚರಿಸಲ್ಪಟ್ಟಿತ್ತು.ಆದರಿಂದಲೆ ಅನಿರುದ್ದನನ್ನು ಪುನಃ ಪಡೆಯಲು ಸಾಧ್ಯವಾಯಿತು.
ಇಷ್ಟೇ ಅಲ್ಲ ಈ ಸಂಕಷ್ಟನಾಶಕ ವ್ರತವನ್ನು ದೇವತೆಗಳೂ , ಅಸುರರೂ , ಋಷಿಗಳೂ , ಮನುಷ್ಯರು ಆಚರಿಸಿ ತಮ್ಮ ಇಷ್ಟ ಸಿದ್ದಿ ಪಡೆದರು.
ಆದುದರಿಂದ ಆಪತ್ಕಾಲದಲ್ಲಿಯೂ ರೋಗಾದಿಗಳಿಂದ , ಪೀಡಿತರಾಗಿರುವಾಗಲೂ ಸುಖ ಸೌಖ್ಯಗಳನ್ನು ಪಡೆಯಲು ಸರ್ವೇಷ್ಟಾರ್ಥ ಸಿದ್ದಿಯುಂಟು ಮಾಡುವ ಈ ವ್ರತವನ್ನು ಆಚರಿಸಬೇಕು.ಇದಕ್ಕೆ ಸಮನಾದ ಬೇರೊಂದು ವ್ರತವಿಲ್ಲ.. ಆಯಾ ಕಾಮ್ಯ ಕರ್ಮಗಳ ತಾರತಮ್ಯಕ್ಕೆ ಅನುಸಾರವಾಗಿ ಸಾಧ್ಯವಾದಷ್ಟು ಅಧಿಕ ಮಾಸಗಳ ಕಾಲ ಈ ವ್ರತವನ್ನು ಭಕ್ತಿಯಿಂದ ಅನುಷ್ಟಾನ ಮಾಡಬೇಕು. ಉತ್ತಮೋತ್ತಮವಾದ ಈ ವ್ರತವನ್ನು ಅನರ್ಹರಿಗೆಲ್ಲಾ ಉಪಡೇಶಿಸದೆ ಗೋಪ್ಯವಾಗಿಟ್ಟುಕೊಂಡು ಸಿದ್ದ ಜನರಿಗೆ ಮಾತ್ರ ಉಪದೇಶಿಸಬೇಕು.. ಶ್ರೀ ಸಂಕಷ್ಟಹರ ಗಣೇಶ್ವರನು ಸ್ವತಃ ತಾನು ಪ್ರಸನ್ನನಾದಾಗ ಲೋಕದ ಜನರಿಗೆ ಬೇರೆ ಯಾವ ಉಪಭೋಗ್ಯ ವಸ್ತುಗಳಲ್ಲಿಯೂ ಆಸಕ್ತಿ ಉಂಟಾಗದು. ಸಂತುಷ್ಟನಾದ ಆ ಸಂಕಷ್ಟಹರ ಗಣಪತಿಯ ಭಕ್ತರ ಸರ್ವಾರ್ಥ ಸಿದ್ದಿಯನ್ನು ಉಂಟುಮಾಡುವುದರಲ್ಲಿ ಸಂಶಯವೇ ಇಲ್ಲ ಎಂಬಲ್ಲಿಗೆ "ಸಂಕಷ್ಟಹರ ಗಣೇಶ್ವರ ವ್ರತಕಥೆಯ ಎರಡನೇ ಭಾಗ ಸಮಾಪ್ತಿ ".
" ಶ್ರೀ ಸಂಕಷ್ಟಹರ ಗಣೇಶ್ವರಾರ್ಪಣ ಮಸ್ತು "
ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏