#🕉️ ಜೈ ಶ್ರೀ ರಾಮ🙏
ಚೈತ್ರ ನವರಾತ್ರಿ ಪರ್ವಕಾಲ!!!
ಶ್ರೀ. ರಾಮ ನಾಮದಿಂದ ಸಂಪೂರ್ಣ ಶರಣಾಗತಿ !!!
"ॐ ಶ್ರೀರಾಮ ಜಯರಾಮ ಜಯ ಜಯ ರಾಮ" ಅಂತ ಬಾಯಲ್ಲಿ ಹೇಳುತ್ತಾ, ಮನಸ್ಸಿನಲ್ಲಿ ಸ್ಮರಿಸುತ್ತಾ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ನಮ್ಮ ಅನೂಕೂಲ ಸಮಯದಲ್ಲಿ ಬರೆಯಲಿಕ್ಕೆ ಪ್ರಾರಂಭಿಸಲು , ನವರಾತ್ರಿ ಪರ್ವಕಾಲ. ಸಜ್ಜನರು, ಜಾಣರು ಇಂತಹ ಸಂಧರ್ಭಗಳ ಸದುಪಯೋಗ ಮಾಡಿಕೊಳ್ಳುತ್ತಾರೆ.
ಶ್ರೀರಾಮ ಕೋಟಿ ಎಂಬುದು ಶ್ರೀರಾಮನ ಪ್ರಸಾದವೇ ಆಗಿದ್ದು ರಾಮನಾಮ ಜಪ ಮತ್ತು ನಾಮಾವಳಿಯಲ್ಲಿನ ನಾಮ ಸಂಕೀರ್ತನೆಯಾಗಿದೆ.
ಶ್ರೀರಾಮ ನಾಮವನ್ನು ಬರೆಯುವುದಕ್ಕೆ ಲಿಖಿತ ಜಪವನ್ನುತ್ತಾರೆ. ಇದು ಸಂಪೂರ್ಣ ಶರಣಾಗತಿಯ ಭಾವನೆಯನ್ನು ಮನದಲ್ಲಿ ತುಂಬುತ್ತದೆ.
ರಾಮನಾಮವನ್ನು ಯಾವುದೇ ಭಾಷೆಯಲ್ಲಿಯಾದರೂ ಬರೆಯಬಹುದು. ಇದು ಜೀವಾತ್ಮ ಮತ್ತು ಪರಮಾತ್ಮನೊಂದಿಗೆ ಸೇರಿಸುವ ತಂತುವಾಗಿದೆ.
ಹಿಂದಿನ ಕಾಲಗಳಲ್ಲಿ ಶ್ರೀ ರಾಮನಾಮವನ್ನು ಪುಸ್ತಕದಲ್ಲಿ ಬರೆದು, ಅವುಗಳನ್ನು ದೇವಾಲಯಗಳ ನಿರ್ಮಾಣ ಸಂದರ್ಭಗಳಲ್ಲಿ ತಳಪಾಯಲಗಳಲ್ಲಿ ಇಟ್ಟು ದೇವಾಲಯಗಳನ್ನು ಕಟ್ಟುತ್ತಿದ್ದರು. ಇದರಿಂದ ದೇವಾಲಯಗಳಿಗೆ ಮತ್ತಷ್ಟು ದಿವ್ಯತೆ ಮತ್ತು ಭದ್ರತೆಯನ್ನು ಕೊಡುತ್ತವೆಂಬುದಾಗಿ ತಿಳಿಯುತ್ತಿದ್ದರು.
ಶ್ರೀರಾಮನಾಮವನ್ನು ಸ್ಮರಿಸುವವರಿಗೆ ಶಾಂತತೆ, ಜ್ಞಾನದ ಪ್ರಖರತೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತದೆ. ಉದಾಹರಣೆಗೆ: ಸಂತ ತುಳಸೀದಾಸರು, ತ್ಯಾಗರಾಜಸ್ವಾಮಿಗಳು, ಸಂತ ಕಬೀರ.. ಹೀಗೆ ಅನೇಕರನ್ನು ಸ್ಮರಿಸಬಹುದು.
ಸೂರ್ಯನು ಕತ್ತಲೆಯನ್ನು ಹೋಗಲಾಡಿಸುವಂತೆ ಶ್ರೀರಾಮನಾಮ ಜಪವು ಮನದ ಕತ್ತಲೆ, ಜೀವನದ ಅಜ್ಞಾನವನ್ನು ಹೋಗಲಾಡಿಸುವಂತಹುದು. ಅಂತಹ ಶಕ್ತಿ ಶ್ರೀರಾಮನಾಮದಲ್ಲಿದೆ.
ಶ್ರೀ. ರಾಮ ನಾಮದಿಂದ ಸಂಪೂರ್ಣ ಶರಣಾಗತಿ !!!
"ॐ ಶ್ರೀರಾಮ ಜಯರಾಮ ಜಯ ಜಯ ರಾಮ"
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏