#🔱 ಭಕ್ತಿ ಲೋಕ #ಪಾಂಡುರಂಗ ವಿಠ್ಠಲ
ವಿಠ್ಠಲನ ಮಹಾತ್ಮೆ
ಆ ಕಾಲದಲ್ಲಿ ಪಂಡರಾಪುರದಲ್ಲಿ ಒಬ್ಬ ಬಡ ಮೀನುಗಾರ ಪಾಂಡುರಂಗನ ಭಕ್ತನಾಗಿದ್ದ. ಅವನು ನಿತ್ಯ ನದಿ ಕೆರೆಯಂತಹ ನೀರಿನ ತಾಣವಿರುವೆಡೆ ಹೋಗಿ ಗಾಳದಲ್ಲಿ ಮೀನು ಹಿಡಿಯುತ್ತಿದ್ದ. ಒಮ್ಮೊಮ್ಮೆ ಮೀನು ಸಿಗುತ್ತಿರಲಿಲ್ಲ. ಒಂದೆರಡು ಸಿಕ್ಕರೆ ಅದರಲ್ಲೇ ಅವನು ತೃಪ್ತಿ ಹೊಂದಿ ಜೀವನ ನಡೆಸುತ್ತಿದ್ದ. ಅವನಿಗೂಂದು ಆಸೆ ಹೇಗಾದರೂ ಮಾಡಿ ಪಾಂಡುರಂಗನ ದರ್ಶನ ಮಾಡಬೇಕು. ಆದರೆ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗು ವಂತಿಲ್ಲ. ಹಣ್ಣು ಹೂವು- ಹಾಲು, ತಿಂಡಿ ಇದೆಲ್ಲ ಹಣ ಕೊಟ್ಟು ತರುವಷ್ಟು ಅವನಲ್ಲಿ ಇಲ್ಲ. ಆದರೆ ಪಾಂಡುರಂಗನನ್ನು ನೋಡಬೇಕು ಹೇಗೆ? ಎಂಬುದು ಅವನಿಗೆ ತಿಳಿಯುತ್ತಿಲ್ಲ. ಹೀಗೆ ಕಾಲ ಕಳೆಯುತ್ತಿತ್ತು. ಅವನ ಪಾಂಡುರಂಗನನ್ನು ನೋಡುವ ಆಸೆ ಉತ್ಕಟವಾಗಿತ್ತು. ಪಾಂಡುರಂಗನಿಗೂ ಅವನ ಮೊರೆ ಕೇಳಿತ್ತು.
ಒಂದು ದಿನ ಎಂದಿನಂತೆ ಮೀನು ಹಿಡಿಯಲು ನದಿ ಕಡೆ ಹೋದ ಬೆಳಗ್ಗೆಯಿಂದ ಸಂಜೆ ವರೆಗೂ ಕೂತರು ಅವನಿಗೆ ಒಂದೇ ಒಂದು ಮೀನು ಸಿಗಲಿಲ್ಲ. ಅವನು ಮನಸ್ಸಿನಲ್ಲಿ “ಹೇ ಪಾಂಡುರಂಗ ಹೇಗಾದರೂ ಮಾಡಿ ನನಗೆ ಮೀನು ಸಿಗುವಂತೆ ಮಾಡು ಆ ಮೀನನ್ನೇ ನಿನಗೆ ಕೊಟ್ಟು ನಿನ್ನ ದರ್ಶನ ಮಾಡಲು ಬರುವೆ” ಎಂದು ಪ್ರಾರ್ಥಿಸಿದ. ಗಾಳವನ್ನು ಹಾಕಿದ ಪಾಂಡುರಂಗನ ಮಹಿಮೆಯೋ ಎಂಬಂತೆ ಗಾಳ ಅಲುಗಾಡಲು ಶುರುವಾಯಿತು. ಗಾಳ ಎಳೆದು ಎತ್ತುತ್ತಾನೆ ಎರಡು ಪಳ ಪಳ ಚಿನ್ನದಂತೆ ಹೊಳೆಯುವ ದೊಡ್ಡ ದೊಡ್ಡ ಮೀನು ಅವನಿಗೆ ಸಿಕ್ಕಿತು. ಅವನ ಸಂತೋಷ ಮೇರೆ ಮೀರಿತು. ಹೇ ಪಾಂಡುರಂಗ ಕೃಪಾ ನಿಧಿ ಎನ್ನುತ್ತಾ ಎರಡು ಕೈನಲ್ಲೂ ಮೀನು ಹಿಡಿದು ಆನಂದ ದಿಂದ ಕುಣಿಯತೊಡಗಿದ. ಹಾಗೆ ಕೈ ಟ್ಟ ಬಟ್ಟೆಯಲ್ಲೆ ಆ ಎರಡು ಮೀನನ್ನು ಹಿಡಿದುಕೊಂಡು ನೇರವಾಗಿ ಪಾಂಡುರಂಗನ ಮಂದಿರಕ್ಕೆ ಬಂದನು.
ದೇವಸ್ಥಾನದ ಸುತ್ತಮುತ್ತ ನೆರದ ಜನರೆಲ್ಲರೂ ಇವನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದಾರೆ. ಏಕೆಂದರೆ ಎರಡು ಮೀನನ್ನು ಕೈನಲ್ಲಿ ಹಿಡಿದುಕೊಂಡು ಓಡುತ್ತಾ ಬರುವ ರೀತಿ ಕಂಡು ಬೆರಗಾಗಿ, ಇದೇನಿದು ಅನ್ಯಾಯ, ಇವನು ಮೀನು ತೆಗೆದು ಕೊಂಡು ಒಳಗೆ ಹೋಗಿ ಬಿಡುವನು ತಡೆಯಿರಿ ಎಂದು ಕೂಗುತ್ತಾ ಎಲ್ಲರೂ ಬಂದು ಅವನ ಸುತ್ತುಗಟ್ಟಿ ನಿಂತು ತಡೆದು, “ಏಯ್ ನಿನಗೆ ತಲೆ ಕೆಟ್ಟಿದ್ಯಾ, ಯಾರಾದರೂ ಮೀನು ತೆಗೆದು ಕೊಂಡು ಮಂದಿರದೊಳಗೆ ಹೋಗುತ್ತಾರಾ? , ನಿನಗೆ ಅಷ್ಟು ತಿಳಿಯುವುದಿಲ್ಲವೇ? ಎಂದು ತಲೆಗೊಬ್ಬರಂತೆ ಜೋರಾಗಿ ಹೇಳಿದರು. ಪಾಪ ಹೆದರಿದ ಆ ಬಡ ಮೀನುಗಾರ ಹೇಳಿದ, ಸ್ವಾಮಿ ನನ್ನನ್ನು ಬಿಡಿ, ಪಾಂಡುರಂಗನನ್ನು ನೋಡಬೇಕು ಇದು ಎಷ್ಟೋ ದಿನದ ನನ್ನ ಬಯಕೆ. ಪಾಂಡುರಂಗನಿಗೆ ಕೊಡಲು ನನ್ನ ಬಳಿ ಏನು ಇರಲಿಲ್ಲ ಇಷ್ಟು ದಿನ ಕಾದಿದ್ದಕ್ಕೆ ಈ ದಿನ ಎರಡು ಮೀನು ಸಿಕ್ಕಿತು ಭಕ್ತಿಯಿಂದ ಕೊಡಲು ತಂದಿದ್ದೇನೆ ಎಂದು ಒಳಗೆ ಬಿಡುವಂತೆ ಪ್ರಾರ್ಥಿಸಿದ.
ಅಲ್ಲಿದ್ದವರಿಗೆ ಅನ್ನಿಸಿತು ಪಾಪ ಬಡವ ಎಂದುಕೊಂಡು, ನಿಧಾನವಾಗಿ ನೋಡಪ್ಪ ಇದು ದೇವಸ್ಥಾನ, ಹಾಗೆಲ್ಲ ಪಾಂಡುರಂಗನಿಗೆ ಮೀನು- ಮಾಂಸ ಕೊಡಬಾರದು. ಹಣ್ಣು, ಹೂವು, ತುಳಸಿ, ವಸ್ತ್ರ, ಹಾಲು, ಅಥವಾ ತಿನ್ನುವ ಪದಾರ್ಥ, ಕೊಡಬೇಕು;
ಮೀನು ಕೊಡಬಾರದಪ್ಪ ಎಂದು ಒಳ್ಳೆ ಮಾತಿನಲ್ಲಿ ಹೇಳಿದರು. ಆತ ಮತ್ತೆ ಮತ್ತೆ ಎಷ್ಟು ಗೋಗರೆದರು ಅವನನ್ನು ಒಳಗೆ ಬಿಡಲಿಲ್ಲ. ಬೆಸ್ತ ಕೈಯಲ್ಲಿ ಮೀನು ಹಿಡಿದು
ದೇವಸ್ಥಾನದ ಮುಂಭಾಗದಲ್ಲಿ ಹಾಗೆಯೇ ನಿಂತು, ಹೇ ಪಾಂಡುರಂಗ ನಾನು ಎಷ್ಟು ಕಷ್ಟಪಟ್ಟು ನೀನು ತಂದಿದ್ದೇನೆ ಎಂದು ನಿನಗೂ ಗೊತ್ತಲ್ಲವೇ ಈ ಸಲ ನಿನ್ನನ್ನು ನೋಡದಿದ್ದರೆ ನಾನು ಮತ್ತೊಂದು ಬರಲು ಸಾಧ್ಯವಿಲ್ಲ ಏಕೆಂದರೆ ನಾನು ಬಡವ ಅಪರೂಪಕ್ಕೆ ಮೀನು ಸಿಕ್ಕಿದೆ ಸಂತೋಷದಿಂದ ತಂದಿರುವೆ. ಈ ಮೀನನ್ನು
ನೀನು ತಗಳುವತನಕ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಹಾಡುತ್ತಾ ಅಲ್ಲೇ ನಿಂತನು. ಯಾವುದೇ ಮೂಲೆಯಲ್ಲಿ ಕುಳಿತು ಭಕ್ತನು ಒಬ್ಬ ಪ್ರಾರ್ಥಿಸಿದ್ದು ಪಾಂಡುರಂಗನಿಗೆ ತಿಳಿಯುತ್ತದೆ ಹೀಗಿರುವಾಗ ಮಂದಿರದ ಹೊರಗೆ ನಿಂತ ಬೆಸ್ತರವ ನ ಪ್ರಾರ್ಥನೆ ಪಾಂಡುರಂಗನಿಗೆ ಕೇಳಿತು. ಕೇಳಿದ ಮೇಲೆ ಪಾಂಡುರಂಗ ಸುಮ್ಮನೆ ಕೂರುತ್ತಾನೆಯೇ, ಹೊರಗಿನ ವಿದ್ಯಮಾನಗಳನ್ನೆಲ್ಲಾ ನೋಡುತ್ತಿದ್ದ ಪಾಂಡುರಂಗ ನಾನು ನಿಂತಿದ್ದ ಇಟ್ಟಿಗೆ ಮೇಲಿಂದ ಇಳಿದು ನಡೆಯುತ್ತಾ ಗರ್ಭಗು ಡಿಯ ಹೊರಗೆ ನಿಂತಿದ್ದ ಬೆಸ್ತರವನ ಬಳಿ ಬಂದನು. ಬೆಸ್ತರವನ ಕೈಯಲ್ಲಿದ್ದ ಎರಡು ಮೀನನ್ನು ತೆಗೆದುಕೊಂಡು ತನ್ನ ಎರಡು ಕಿವಿಗಳ ಕೆಳಗೆ ಅಂದರೆ ಭುಜದ ಮೇಲೆ ಇಟ್ಟುಕೊಂಡು ಬೆಸ್ತರವನಿಗೆ ಅನುಗ್ರಹಿಸಿದನು. ಪಾಂಡುರಂಗನ ಬಡ ಭಕ್ತ ಮೀನುಗಾರ ಕೊಟ್ಟ ಎರಡು ಮೀನು ಇಂದಿಗೂ ಪಾಂಡುರಂಗನ ಕರ್ಣವನ್ನು ಅಲಂಕರಿಸಿರುವುದನ್ನು ನೋಡಬಹುದು.
ಇಂಥ ಮಹಾಮಹಿಮ ಶ್ರೀ ಕೃಷ್ಣ, ತನ್ನ ಪ್ರೀತಿಯ ಭಕ್ತರನ್ನು ದಿನವೂ ನೋಡುವ ಸಲುವಾಗಿ ಗರ್ಭಗುಡಿಯಲ್ಲಿ ದೇವರಂತೆ ಇರದೆ, ಬರುವ ಭಕ್ತರನ್ನು ನೋಡುತ್ತಾ ಪಂಡರಾಪುರದಲ್ಲಿ ನಿಂತಿದ್ದಾನೆ. ಪಾಂಡು ರಂಗನ ದರ್ಶನಕ್ಕೆ ಬರುವ ಎಲ್ಲಾ ಭಕ್ತರನ್ನು ತನ್ನ ಸಮೀಪಕ್ಕೆ ಕರೆಯುತ್ತಾನಂತೆ. ಹೀಗಾಗಿ ಪಂಡರಾಪುರದಲ್ಲಿ ಪಾಂಡುರಂಗನ ದರ್ಶನಕ್ಕೆ ಬರುವ ಭಕ್ತರು ಜಾತಿ, ವರ್ಣ ವರ್ಗಗಳ ಭೇದವಿಲ್ಲದೆ ಎಲ್ಲರಿಗೂ ಪಾಂಡುರಂಗನ ಪಾದ ಮುಟ್ಟುವ ಅವಕಾಶ ಇಲ್ಲಿ ಬಿಟ್ಟರೆ ಇನ್ನೆಲ್ಲೂ ಸಿಗುವುದಿಲ್ಲ. ಇದು ಪಾಂಡುರಂಗನ ಚಮತ್ಕಾರ.
ಭಕ್ತಿ ಶ್ರದ್ಧೆಯಿಂದ ಯಾರು ನನ್ನನ್ನು ಕರೆಯುತ್ತಾರೋ ಅವರು ಯಾವದೇ ಸ್ಥಿತಿಯಲ್ಲಿ ಯಾವುದೇ ಸ್ಥಳದಲ್ಲಿ ಎಲ್ಲಿ ಬೇಕಾದರೂ ಇರಲಿ ಅಲ್ಲಿಗೆ ನಾನೇ ಓಡಿಬರುವೆ ಎಂದು ಭಕ್ತರಿಗೆ ಮಾತು ಕೊಟ್ಟಿದ್ದಾನೆ. ಭಕ್ತರ ಕರೆಗೆ ಓಗೊಡುವ ಪಾಂಡುರಂಗ ಬಡ ಬೆಸ್ತನ ಭಕ್ತಿ- ಪ್ರೀತಿಗೆ ಸೋತು ಓಡಿಬಂದು ಬೆಸ್ತರವನ ಕೈಗಳಲ್ಲಿದ್ದ ಎರಡು ಮೀನುಗಳನ್ನು ತೆಗೆದುಕೊಂಡು ತನ್ನ ಎರಡು ಕಿವಿಗೆ ಕರ್ಣಕುಂಡಲ ದಂತೆ ಹಾಕಿಕೊಂಡನು. ಬಡ ಬೆಸ್ತ ಕೊಟ್ಟ ಎರಡು ಮೀನುಗಳು ಇಂದಿಗೂ ಪಾಂಡುರಂಗನ ಪ್ರೀತಿಯ ಕರ್ಣಕುಂಡಲವವಾಗಿ ಶೋಭಿಸುತ್ತಿದೆ. ;
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏