ವಿಷ್ಣು ಪ್ರಿಯ 🦚💙
1.1K views
3 days ago
#ದಿನಕ್ಕೊಂದು ಕಥೆ ಹೀಗೊಂದು ಕಥೆ ಓದಿ ಸಮಯ ಇದ್ದರೆ ದೇವಲೋಕದಲ್ಲಿ ಎಲ್ಲಾ ಪ್ರಾಣಿ ಪಕ್ಷಿಗಳು ಒಟ್ಟಾಗಿ ಬಂದು ಬ್ರಹ್ಮ ವಿಷ್ಣು ಮಹೇಶ್ವರರ ಹತ್ತಿರ ಹೋಗಿ...🐓🐃🐅🦅🐀🐍🦚🐄🦡🐇🕊️🦔🐙🐌🐕‍🦺🐛🐊🦀🐢🦎🦂🐶🐱🦇🐗 ಹೇ ದೇವಾ...ಮಹಾದೇವ ನಮ್ಮನ್ನು ಈ ಮನುಷ್ಯರಿಂದ ರಕ್ಷಿಸು ರಕ್ಷಿಸು...ಎಂದು ಬೇಡಿಕೊಂಡವು... ಆಗ ತ್ರಿಮೂರ್ತಿಗಳು ಕೂಡಲೇ ಮಹಾಸಭೆ ಕರೆದರು. ಆ ಸಭೆಗೆ ಋರ್ಷಿಮುನಿಗಳನ್ನು ,ನಾರದರನ್ನು ಕರೆಸಿದರು. ಆಗ ಎಲ್ಲಾ ಜೀವಿಗಳು ತಮ್ಮ ಅಳಲನ್ನು ತೋಡಿಕೊಂಡವು. ಆಗ ಹಸು🐄 ಮುಂದೆ ಬಂದು..ದೇವ ಭೂಮಂಡಲದಲ್ಲಿ ಎಲ್ಲಾ ಚರಾಚರ ಜೀವಿಗಳಿಗೂ ನೀನೇ ರಕ್ಷಕ... ಆದರೆ ನೀನೇ ಸೃಷ್ಟಿಸಿದ ಈ ಮನುಷ್ಯ ಜೀವಿ ಎಗ್ಗಿಲ್ಲದೆ ನಮ್ಮನ್ನು ಕೊಂದು ತನಗೆ ಬೇಕಾದ ಹಾಗೆ ನಡೆಸಿಕೊಳ್ಳುತ್ತಿದ್ದಾನೆ. ಸೃಷ್ಟಿಕರ್ತ ದೇವರು ಒಬ್ಬ ಮೇಲಿದ್ದಾನೆ ಎಂಬುದು ಮರೆತು ಆತನೇ ಸೃಷ್ಟಿಕರ್ತ ಎಂಬಂತೆ ಯಾರ ಭಯ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾನೆ. ನೀನೇ ನನ್ನನ್ನು ಸೃಷ್ಟಿ ಮಾಡಿ ಕಾಮಧೇನು ಎಂದು ಭೂಮಿ ಮೇಲೆ ಕಳಿಸಿದೆ. ಆದರೆ ಮನುಷ್ಯ ನನ್ನ ಹಾಲು ಕುಡಿದು ನನ್ನನ್ನೇ ಕೊಂದು ತಿನ್ನುತ್ತಿದ್ದಾರೆ ಎಂದು ಹೇಳಿ ಕಣ್ಣಿರಿಟ್ಟಿತ್ತು.. ನಂತರ ಕೋಳಿ 🐓ಮುಂದೆ ಬಂದು ಹೇ ದೇವಾ...ದುಡ್ಡಿನ ಆಸೆಗಾಗಿ ನನಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಬೇಗ ಬೆಳೆಯುವಂತೆ ಮಾಡಿ ತಿಂದು ಮುಗಿಸುತ್ತಿದ್ದಾರೆ.. ನಂತರ ನಾಗರಹಾವು🐍 ಮುಂದೆ ಬಂದು..ಹೇ ಶಿವನೇ ನೀನು ನನ್ನನ್ನು ಉಳಿಸಲು ನಿನ್ನ ಕೊರಳಿಗೇ ಸುತ್ತಿಕೊಂಡಿದ್ದಿ.. ನಿನ್ನಿಂದ ನನ್ನನ್ನೂ ಕೂಡ ಪೂಜೆ ಮಾಡುತ್ತಿದ್ದಾರೆ.ಆದರೆ ಕೆಲವು ಮನುಷ್ಯರು ನನ್ನ ಎಲ್ಲಾ ವಂಶವನ್ನು ತಿಂದು ನಿರ್ನಾಮ ಮಾಡುತ್ತಿದ್ದಾರೆ... ದೇವಾ ಭರತಖಂಡದಲ್ಲಿ ಈ ರೀತಿ ಸಿಕ್ಕ ಸಿಕ್ಕ ಪ್ರಾಣಿ ಪಕ್ಷಿಗಳನ್ನು ತಿನ್ನಬಾರದು ಎಂದು ಒಂದೊಂದು ಪ್ರಾಣಿ ಪಕ್ಷಿಗಳನ್ನು ತಿನ್ನಬಾರದೆಂದು ಒಂದೊಂದು ದೇವರಿಗೆ ಒಂದೊಂದು ಪ್ರಾಣಿಗಳನ್ನು ವಾಹನವಾಗಿ ಮಾಡಿದ್ದೀರಿ. ಅದರಂತೆ ನವಿಲನ್ನು🦚 ಷಣ್ಮಗನಿಗೂ.. ಇಲಿಯನ್ನು🐀 ಗಣಪತಿಗೂ.. ಕೋಣವನ್ನು ಯಮನಿಗೂ,ಸಿಂಹವನ್ನು🐅 ದುರ್ಗಾ ದೇವಿಗೂ, ಕಾಗೆಯನ್ನು🦅 ಶನಿದೇವರಿಗೂ ನೀಡಿದ್ದೀರಿ... ಹಾಗೆ ಪ್ರಕೃತಿಯನ್ನು ಹಾಳು ಮಾಡಬಾರದೆಂದು ಭೂಮಿ, ಅಗ್ನಿ,ವಾಯು, ಅನ್ನವನ್ನು ದೇವರೆಂದು‌ ಹೇಳಿ ಎಲ್ಲದರಲ್ಲೂ ದೇವರಿದ್ದಾನೆ ಎಂದು ಮುಕ್ಕೋಟಿ ದೇವರನ್ನು ಸೃಷ್ಟಿಸಿದ್ದಿರಿ.. ಆಗ ಮನುಷ್ಯರು ಭಯ ಭಕ್ತಿಯಿಂದ ಬದುಕುತ್ತಿದ್ದರು.ಆದರೆ ಈ ಮನುಷ್ಯ ತಪಸ್ಸು ಮಾಡಿ ನಿಮ್ಮಿಂದಲೇ ಆಯುಷ್ಯ ಐಶ್ವರ್ಯ ಬುದ್ದಿಶಕ್ತಿ ಪಡೆದು ಅದನ್ನೇ ಬಳಸಿ ಶಕ್ತಿವಂತರಾಗಿ ಕ್ರಿಮಿ ಕೀಟವನ್ನೂ ಬಿಡದೇ ಹಸಿ ಹಸಿಯಾಗಿ ಜೀವಂತವಾಗಿ ರಾಕ್ಷಸರಿಗಿಂತಲೂ ಕೆಟ್ಟದಾಗಿ ಸಂಹರಿಸಿ ತಿಂದು ತೇಗುತ್ತಿದ್ದಾನೆ...ಇವರಿಂದ ನಮ್ಮೆಲ್ಲರನ್ನೂ ನೀವೇ ಉಳಿಸಬೇಕು ಪ್ರಭು. ಎಂದವು.. ಆಗ ನಾರದರು ಮುಂದೆ ಬಂದು.ದೇವ..ಈ ಮನುಷ್ಯರು ತುಂಬಾ ಶಕ್ತಿ ಶಾಲಿ ಆಗಿದ್ದಾನೆ. ಇವನ ಅಹಂಕಾರಕ್ಕೆ ಬುದ್ಧಿ ಕಲಿಸಲು ನೀವೇ ಅಖಾಡಕ್ಕೆ ಇಳಿಯಬೇಕು.. ಏಕೆಂದರೆ ಅಗ್ನಿ ದೇವರಿಗೆ 🔥ಕಳಿಸಿದರೆ ಅಗ್ನಿಯನ್ನೇ ಫೈಯರ್ ಫೈಟರ್ ನಿಂದ ಬಂಧಿಸುತ್ತಾನೆ. ವರುಣ ದೇವರನ್ನು ಕಳಿಸಿ ಸುನಾಮಿ 🌊ಸೃಷ್ಟಿಸಿದರೂ ಅದನ್ನು ಮೊದಲೇ ತಿಳಿದುಕೊಂಡು ಓಡಿಹೋಗಿರುತ್ತಾನೆ. ಮಳೆ ಬರದಂತೆ ಮಾಡಿದರೆ ಮೋಡ ಬಿತ್ತನೆ🌧️ ಮಾಡುತ್ತಾನೆ.. ದೊಡ್ಡ ದೊಡ್ಡ ಡ್ಯಾಮ್ ಕಟ್ಟಿ ಬೇಕಾದಂತೆ ಬಳಸುತ್ತಾನೆ.. ಸೂರ್ಯ ನಿಗೇ ಸವಾಲು ಹಾಕಿ💥 ಕತ್ತಲಲ್ಲೂ ಬೆಳಕು ತರಿಸುತ್ತಾನೆ. ಯಮನಿಗೇ ಚಾಲೆಂಜ್ ಮಾಡಿ ಎಷ್ಟೇ ಖಾಯಿಲೆ ಬಂದರೂ ಮನುಷ್ಯ ಸಾಯುವುದೇ ಇಲ್ಲ. ಮರ ಗಿಡಗಳನ್ನು ಕಡಿದು ಕಾಡನ್ನು ನಾಶ ಮಾಡಿ ಕಾಂಕ್ರೀಟ್ ನಾಡನ್ನು🏩🏫🏪🏨🏗️✈️🚖🛥️🚛 ಮಾಡಿ ಪ್ರಾಣಿ ಪಕ್ಷಿಗಳಿಗೆ ಬದುಕಲು ಜಾಗ ಇಲ್ಲದಂತೆ ಮಾಡಿದ್ದಾನೆ ಎಂದಾಗ ಶಿವ ನಕ್ಕುಹೇಳಿದ.ನೀವು ಯಾರೂ ಹೆದರಬೇಡಿ ನಾವೇ ಹುಟ್ಟಿಸಿದ ಮನುಕುಲ.ನಮಗೆ ಕಂಟ್ರೋಲ್ ಮಾಡಲು ಬರುವುದಿಲ್ವೇ.... ಮನುಷ್ಯ ಎಷ್ಟೇ ಶಕ್ತಿವಂತ ಆದರೂ ನಾವುಗಳು ಈ ಮನುಷ್ಯರ ಪಾಪದ ಕೊಡ ತುಂಬಲಿ ಎಂದು ಕಾಯುತ್ತಿದ್ದೆವು. ಈಗ ಅವನ ಪುಣ್ಯದ ಕೆಲಸ ಕಡಿಮೆ ಆಗಿ ಪಾಪದ ಕೊಡ ತುಂಬಿದೆ.ನಾವೆಲ್ಲರೂ ಸೇರಿ ಮನುಷ್ಯನಿಗೆ ಬುದ್ಧಿ ಕಲಿಸುತ್ತೇವೆ ಎಂದಾಗ ನಾರದರು ಹೇಳಿದರು..ಹೇ ದೇವರೇ ಈ ಮನುಷ್ಯರಿಗೆ ಬುದ್ಧಿ ಕಲಿಸುವಾಗ ತಪ್ಪು ಮಾಡದ ಈ ಪ್ರಾಣಿ ಪಕ್ಷಿಗಳಿಗೆ ಹಾಗು ಪ್ರಕೃತಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದಾಗ. ಆಗ ಶಿವ ಹೇಳಿದ .ಸರಿ ಹಾಗೇ ಆಗಲಿ...ಆದರೆ ಕಲಿಯುಗದಲ್ಲಿ ಮೊದಲಿನಂತೆ ಅವತಾರ ಎತ್ತಲು ಆಗುವುದಿಲ್ಲ. ಅದರ ಬದಲು ಎಲ್ಲಾ ದೇವತೆಗಳ ಶಕ್ತಿಯನ್ನು ಸೇರಿಸಿ ಕಣ್ಣಿಗೆ ಕಾಣದಂತಾ ಒಂದು ಅಸ್ತ್ರವನ್ನು ರೆಡಿ ಮಾಡಿ ಅದನ್ನು ಮನುಷ್ಯನೇ ಮನುಷ್ಯನ ಮೇಲೆ ಪ್ರಯೋಗಿಸುವಂತೆ ಮಾಡುತ್ತೇನೆ.ಆ ಆಯುಧದ ಹೆಸರೇ ಕರೋನಾಸ್ತ್ರ...👹 ಈ ಅಸ್ತ್ರ👹 ಪ್ರಯೋಗ ಮಾಡಿದಾಗ ಅದನ್ನು ತಡೆಯಲು ಮನುಷ್ಯನ ಯಾವ ಬುದ್ಧಿಶಕ್ತಿ, ಐಶ್ವರ್ಯಾ ಯಾವುದೂ ಇದನ್ನು ತಡೆಯಲು ಆಗುವುದಿಲ್ಲ.ಆದರೆ ಇದು ನಮ್ಮ ಮತ್ತು ಮನುಷ್ಯನ ನಡುವೆ ನಡೆಯುವ ಯುದ್ದ ಆದ್ದರಿಂದ ಈ ಅಸ್ತ್ರ ಯಾವುದೇ ಪ್ರಾಣಿ ಪಕ್ಷಿಗಳಿಗೆ ಪ್ರಕೃತಿಗೆ ಹಾನಿ ಮಾಡುವುದಿಲ್ಲ. ಈ ಕರೋನಾಸ್ತ್ರ 👹 ಒಮ್ಮೆ ಪ್ರಯೋಗಿದರೆ ಮನುಷ್ಯ ಉಸಿರುಗಟ್ಟಿ ಸಾಯುತ್ತಾನೆ. ರಕ್ತಬೀಜಾಸುರನಂತೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕಾಯಿಲೆಯಂತೆ ಹರಡಿ ಸಾಯಿಸುತ್ತಾನೆ.ಆಗ ಜೀವ ಭಯದಲ್ಲಿ ಮನುಷ್ಯ ಸಾಯುತ್ತಿದ್ದರೂ🤒🤧🤮🤕 ಬೇರೆ ಮನುಷ್ಯ ಸಹಾಯಕ್ಕೆ ಬರುವುದಿಲ್ಲ ಎಂದರು.. ಆಗ ಅಲ್ಲಿಯೇ ಇದ್ದ ಋಷಿ ಮುನಿಗಳು. ಹೇ ದೇವಾ.. ಮನುಷ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ.. ಆದ್ದರಿಂದ ಎಲ್ಲಾ ಮನುಷ್ಯರಿಗೂ ತೊಂದರೆ ಆಗುವುದು ಬೇಡ. ಇದಕ್ಕೆ ಏನಾದರೂ ಪರಿಹಾರ ಹೇಳಬೇಕು ಎಂದಾಗ ಸರಿ ಹಾಗಾದರೆ ಯಾರು ಈ ಯುದ್ಧ ನಡೆಯುವಾಗ ಮನೆಯಲ್ಲೇ 😷ಇರುವರೋ ಅವರಿಗೆ ಈ ಕರೋನಾಸ್ತ್ರ ಏನು ಮಾಡುವುದಿಲ್ಲ .. ಅವರವರ ಸಂಸಾರ ಒಟ್ಟಾಗಿ ತಮ್ಮ ಎಲ್ಲಾ ಜಂಜಾಟದಿಂದ ದೂರವಾಗಿ ತಮ್ಮ ಸಂಸಾರದ ಜೊತೆ ಸಂತೋಷದಿಂದ 21ದಿನ ಹಾಯಾಗಿ ಕಳೆಯಬಹುದು ಎಂದರು.. ಆಗ.. ಎಲ್ಲಾ ಪ್ರಾಣಿ ಪಕ್ಷಿಗಳು ಒಟ್ಟಾಗಿ ದೇವರುಗಳಿಗೆ ಜೈಜೈಕಾರ ಹಾಕಿದೆವು...🦔🐿️🐀🕊️🐇🦝🦨🦡🦦🦥🐁🦩🦢🦜🦚🦃🐓🐈🐕‍🦺🦌🐐🦙🐑🐏🐫🦒🦘🐃🐂🐄🐎🐖🦛🐘🦧🦍🦓🐆🐠🐟🐊🐅🦀🦐🦑🐙🐢🦎🐍🐌🐗🦇🦉🦅🐥 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏