ಕೃಷ್ಣೆ 🦚💙
573 views
1 days ago
#ದೇವಾಲಯ ಚಂಪಕಧಾಮ ದೇವಸ್ಥಾನ:- ಬೆಂಗಳೂರಿನ ಸಮೀಪ ಬನ್ನೇರುಘಟ್ಟದಲ್ಲಿರುವ ಬೃಹತ್ ಏಕಶಿಲಾ ಬೆಟ್ಟದ ಮೇಲೆ ಪುರಾಣ ಪ್ರಸಿದ್ಧವಾದ ಐತಿಹಾಸಿಕ ಹಿನ್ನೆಲೆಯುಳ್ಳ ಏಳು ಅಂತಸ್ತಿನ ರಾಜಗೋಪುರ ದ ‘ಚಂಪಕಧಾಮ’ ದೇವಸ್ಥಾನವಿದೆ. ಗೋಪುರದ ಮೇಲೆ ವಿಷ್ಣುವಿನ ದಶಾವತಾರ ದ ಸುಂದರ ಕೆತ್ತನೆಗಳಿವೆ. ‘ಚಂಪಕ’ ಎಂಬ ಹೆಸರಿನ ಕಾರಣ, ಇಲ್ಲಿನ ಪರಿಸರದ ಸುತ್ತಮುತ್ತ “ಕೆಂಡಸಂಪಿಗೆ” ಹೂವು ( ಹಿಂದೆ) ಬೆಳೆಯುತ್ತಿತ್ತು. ಈಗಲೂ ಸಹ ಹಳೆಯ ಮನೆಯ ಹಿಂಭಾಗದಲ್ಲಿ ಸಂಪಿಗೆ ಮರಗಳಿವೆ. ಆದ್ದರಿಂದ ಇದಕ್ಕೆ “ಚಂಪಕ ಧಾಮ” ಎಂಬ ಹೆಸರು ಬಂದಿತು. (ಇಲ್ಲಿ ಸಾಕಷ್ಟು ಮಂಗಗಳಿದ್ದ ವು) ಗರ್ಭಗುಡಿ ಯಲ್ಲಿ ಶ್ರೀದೇವಿ ಭೂದೇವಿ ಸಹಿತ ಮಹಾವಿಷ್ಣುವಿನ ಸನ್ನಿಧಾನವಿದೆ ಸ್ವಾಮಿ ಯನ್ನು “ಚಂಪಕಧಾಮ” ಎಂದು ಕರೆಯುತ್ತಾರೆ. ಇದು ಋಷಿಮುನಿಗಳು ತಪಸ್ಸು ಮಾಡಿದ ತಾಣನಾದ್ದರಿಂದ ಚಂಪಕಾರಣ್ಯ ಎಂದು ಕರೆಯುತ್ತಿದ್ದರು. ಹಾಗೆ ತಿರುಪತಿಯ ತಿಮ್ಮಪ್ಪ ಸಪ್ತಗಿರಿಯಲ್ಲಿ ನೆಲೆಸುವ ಮುನ್ನ ಈ ಬೆಟ್ಟದಲ್ಲಿ ತನ್ನ ಪಾದ ಊರಿದ್ದಾನೆ ಎಂಬುದಕ್ಕೆ ಹೆಜ್ಜೆ ಗುರುತಿದೆ. 12ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾಗಿದೆ ಎಂಬ ಐತಿಹ್ಯವಿದೆ. ಬೆಂಗಳೂರಿನ ಅತಿ ಪುರಾತನ ದೇವಾಲಯಗಳಲ್ಲಿ ಇದು ಒಂದಾಗಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಒಂಬತ್ತು ದಿನಗಳು ಬ್ರಹ್ಮರಥೋತ್ಸವ ನಡೆಯುತ್ತದೆ. ರಥೋತ್ಸವದ ವಿಶೇಷ ಎಂದರೆ ಈ ಉತ್ಸವದಲ್ಲಿ ಕರಗಗಳು ನಡೆಯುತ್ತದೆ. ಚಂಪಕಧಾಮ ಸ್ವಾಮಿಗೆ ಮಂಗಳಮುಖಿ ಯರು ವಿಶೇಷವಾಗಿ ನಡೆದುಕೊಳ್ಳುತ್ತಾರೆ. ಬನ್ನೇರುಘಟ್ಟದ ಸುತ್ತಮುತ್ತ ಮಂಗಳಮುಖಿಯರು ಹೆಚ್ಚು ಇದ್ದಾರೆ. ಈ ದೇವಾಲಯದ ಹಿಂಭಾಗದಲ್ಲಿ ವೈಹ್ನಿಗಿರಿ ಎಂಬ ಏಕಶಿಲಾ ಬೆಟ್ಟವಿದೆ. ತುಂಬಾ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಈ ಬೆಟ್ಟದಲ್ಲಿ ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಸಂಪಂಗಿರಾಮ ದೇವಾಲಯವಿದೆ. ಬೆಟ್ಟದ ಮೇಲೆ ನಿಂತರೆ ಬೆಂಗಳೂರು ನಗರ ವೀಕ್ಷಿಸಬಹುದು ಹಾಗೆ ಸಾವನದುರ್ಗ- ಶಿವಗಂಗೆ- ಹೊಸೂರು- ರಾಮನಗರ ಹಾಗೂ ಕನಕಪುರ ಬೆಟ್ಟ ಕಾಣುತ್ತದೆ. ಸೂರ್ಯಾಸ್ತ ಮತ್ತು ಸೂರ್ಯೋದಯ ವೀಕ್ಷಣೆ ಮಾಡಲು ಹೇಳಿ ಮಾಡಿಸಿದ ಜಾಗ. ಬೆಟ್ಟದಿಂದ ಎರಡು ಕಿಲೋಮೀಟರ್ ಕಾಲುದಾರಿಯಲ್ಲಿ ನಡೆದು ಹೋದರೆ “ಸುವರ್ಣಮುಖಿ” ನದಿಯ ಉಗಮ ಸ್ಥಾನವಾದ ವಿಶಾಲವಾದ ಕಲ್ಯಾಣಿ ತೀರ್ಥವಿದೆ. ಇದಕ್ಕೆ ಪಾಪನಾಶಿನಿ ಕಲ್ಯಾಣಿ ಎಂದು ಕರೆಯುತ್ತಾರೆ. ಹಾಗೆ ಇಲ್ಲಿನ ಬೆಟ್ಟದಲ್ಲಿ ಪುಟ್ಟ ಪುಟ್ಟ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೆ ಒಂದು ಜೋಡಿಸಿ ಮನದಾಸೆಯನ್ನು ಹೇಳಿಕೊಂಡರೆ ಈಡೇರು ತ್ತದೆ ಹಾಗೂ ಮನೆ ಕಟ್ಟುವವರು ಹರಕೆ ಹೇಳಿಕೊಂಡರೆ ಬೇಗ ನೆರವೇರುತ್ತದೆ ಎನ್ನುತ್ತಾರೆ. ಮೂರು ಹುಣ್ಣಿಮೆ ಮೂರು ಅಮಾವಾಸ್ಯೆಗಳು ಸುವರ್ಣಮುಖಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ “ಚಂಪಕಧಾಮ” ನ ದರ್ಶನ ಮತ್ತು ಸೇವೆ ಮಾಡಿ ದರೆ, ಸಕಲ ಪಾಪಗಳು- ರೋಗ- ರುಜಿನಿ, ಆದಿ -ವ್ಯಾದಿಗಳೆಲ್ಲ ಕಳೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಹುಣ್ಣಿಮೆ ಅಮಾವಾಸ್ಯೆ ಈ ಕಲ್ಯಾಣಿಯಲ್ಲಿ ಸ್ನಾನ ಮಾಡಲು ದೂರ ದೂರದಿಂದ ನೂರಾರು ಭಕ್ತರು ಆಗಮಿಸುತ್ತಾರೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಮಳೆಗಾಲದಲ್ಲಿ ಈ ಕಲ್ಯಾಣಿ ಭರ್ತಿಯಾಗಿ ತುಂಬಿ ತುಳುಕಿ ಕಾಲುವೆಯಂತೆ ಸುವರ್ಣಮುಖಿ ನದಿಯಾಗಿ ಹರಿದು ಅರ್ಕಾವತಿಗೆ ಸೇರಿಕೊಂಡು ಕಾವೇರಿ ನದಿಗೆ ಸೇರುತ್ತದೆ. ಸುವರ್ಣಮುಖಿ ನದಿಯ ಕುರಿತು ಮಹಾಭಾರತದ ಒಂದು ಕಥೆ ಇದೆ. ದ್ವಾಪರ ಯುಗದ ಅಂತ್ಯ. ಮಹಾಭಾರತದಲ್ಲಿ ಪಾಂಡವರು ಕೃಷ್ಣನ ಅವಸಾನದ ನಂತರ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡರು. ಕೃಷ್ಣನಿಲ್ಲದ ಬದುಕು ಬೇಡ ಎಂದು “ಮಹಾಪ್ರಸ್ಥಾನ” ದ ತೀರ್ಮಾನ ಮಾಡಿದರು. ಮಹಾಪ್ರಸ್ಥಾನಕ್ಕೆ ಹೊರಡುವ ಮೊದಲು ಇವರ ವಂಶದ ಕುಡಿ ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ ನನ್ನು ಸಿಂಹಾಸನದ ಮೇಲೆ ಕೂರಿಸಿ ರಾಜ್ಯ ಭಾರ ವಹಿಸಿ ಹೊರಟರು. ಪರೀಕ್ಷಿತನ ಆಡಳಿತ ಚೆನ್ನಾಗಿ ಸಾಗಿತ್ತು ಆದರೆ ಪ್ರಮಾದ ವಶಾತ್ ಮುನಿಪುಂಗವನ ಶಾಪಕ್ಕೆ ಗುರಿಯಾದನು. ಇದರ ಪರಿಣಾಮ ಪರೀಕ್ಷಿತ ಮಹಾರಾಜನನ್ನು ‘ತಕ್ಷಕ’ ಎಂಬ ಹಾವು ಕಚ್ಚಿ ಸತ್ತು ಹೋಗುತ್ತಾನೆ. ಪರೀಕ್ಷಿತನಿಗೆ- ಜನಮೇಜಯನೆಂಬ ಮಗನಿದ್ದು ಅವನು ಸಿಂಹಾಸನ ಏರಿ ಆಡಳಿತ ವಹಿಸಿಕೊಂಡನು. ಆ ಸಮಯದಲ್ಲಿ ತನ್ನ ತಂದೆ ತಕ್ಷಕನಿಂದ ಮರಣ ಹೊಂದಿದ ವಿಚಾರ ತಿಳಿದು ಸರ್ಪ ಕುಲದ ಮೇಲೆ ಅವನಿಗೆ ದ್ವೇಷ ಭಾವ ಹುಟ್ಟಿತು. ಅವುಗಳ ಸರ್ವನಾಶ ಮಾಡಲು ತಯಾರಿ ಮಾಡಿಕೊಂಡು ಸರ್ಪಯಾಗ ಮಾಡಿಸಿದನು. ಆ ಯಾಗ ಕುಂಡಕ್ಕೆ ತಾವಾಗಿಯೇ ಸರ್ಪಗಳು ಬಂದು ಬಿದ್ದು ಅಗ್ನಿಗೆ ಆಹುತಿ ಆಗುತ್ತಿದ್ದವು. ಹೀಗೆ ಸರ್ಪಗಳನ್ನು ಕೊಂದ ಕಾರಣ ಅವನಿಗೆ ಚರ್ಮವ್ಯಾಧಿ ಬರುತ್ತದೆ. ಇದರ ಪರಿಹಾರಕ್ಕಾಗಿ ಸಲಹೆ ಪಡೆದ ಅವನು ದೇಶದ ಉದ್ದಗಲಕ್ಕೂ ಸಂಚರಿಸಿ ಹೋದ ಕಡೆಯಲ್ಲೆಲ್ಲ ತೀರ್ಥ ಸ್ನಾನ ಮಾಡಿ ಅಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಿ ಬರುತ್ತಿದ್ದನು. ಎಷ್ಟು ಕಡೆ ಹೋಗಿ ಬಂದರೂ ಅವನ ಚರ್ಮರೋಗ ನಿವಾರಣೆ ಆಗಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಬೆಂಗಳೂರಿನ ಬನ್ನೇರು ಘಟ್ಟದ ಸಮೀಪ ಇರುವ “ಚಂಪಕಧಾಮ” ಕ್ಷೇತ್ರಕ್ಕೆ ಬಂದನು. ಆ ಸಮಯದಲ್ಲಿ ಅವನ ಜೊತೆಯೇ ಬರುತ್ತಿದ್ದ ನಾಯಿ ತಾಪ ತಾಳಲಾರದೆ ಬಂದಿದ್ದೆ ನೀರಿನ ಕೊಳದಲ್ಲಿ ಮುಳುಗಿ ತಂಪಾದ ಮೇಲೆ ಹೊರಗೆ ಬಂದು ತನ್ನ ಮೈ ಕೊಡ್ಹವಿ ಕೊಂಡಿತು. ಆಗ ಅದರ ಮೈ ಯಿಂದ ಹಾರಿದ ನೀರು ಜನಮೇಜಯನ ಮೈಗೆ ಸಿಡಿಯಿತು. ಆ ಕೂಡಲೇ ಅವನ ಮೈ ಮೇಲಿದ್ದ ಚರ್ಮರೋಗವು ಗುಣವಾಯಿತು. ಇಷ್ಟೇ ಅಲ್ಲದೆ ರಾಜನ ಮೈಬಣ್ಣ ಬಂಗಾರ ವರ್ಣವಾಗುತ್ತದೆ. ತಕ್ಷಣ ಅವನು ಸುವರ್ಣ ಮುಖಿ ನದಿಯಲ್ಲಿ ಸ್ನಾನ ಮಾಡಿದನು. ಅವನ ಮೈ ಬಂಗಾರದಂತೆ ಹೊಳೆಯುತ್ತಿತ್ತು. ಜನಮೇಜಯನು ಅವನಿಗೆದ್ದ ಚರ್ಮ ವ್ಯಾದಿ ಗುಣವಾಗಿದ್ದಕ್ಕೆ ಸಂತೋಷಗೊಂಡ ಆ ಕೊಳದ ಸುತ್ತ ಸುಂದರವಾದ ಪಾವಟಿಕೆಗ ಳನ್ನು ಕಟ್ಟಿಸಿ ಅಚ್ಚುಕಟ್ಟಾಗಿ ಸುಸಜ್ಜಿತವಾದ ಪುಷ್ಕರಣಿಯನ್ನಾಗಿ ಮಾಡಿದನು. ಈ ಕೊಳವೆ “ಸುವರ್ಣಮುಖಿ” ಅಂದರೆ ಚಿನ್ನದ ನೀರಿನ ಕೊಳವಾಯಿತು. ನಂತರ ಜನಮೇಜಯ ಈ ಬೆಟ್ಟದಲ್ಲಿ ಶ್ರೀದೇವಿ ಭೂದೇವಿ ಸಹಿತ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ “ಚಂಪಕಧಾಮ” ಎಂಬ ಹೆಸರಿಟ್ಟನು. ಮತ್ತು ಆ ಪವಿತ್ರ ಜಲ ತುಂಬಿದ ಆ ಕೊಳಕ್ಕೆ ಸುವರ್ಣಮುಖಿ ಎಂಬ ಹೆಸರು ಬರುತ್ತದೆ. ಕಲ್ಯಾಣಿಯ ಕೆಳಭಾಗದಲ್ಲಿ ಆಂಜನೇಯನ ವಿಗ್ರಹವನ್ನು ಕೆತ್ತಲಾಗಿದೆ. ವರ್ಷಕ್ಕೊಂದು ಸಲ ಕಲ್ಯಾಣಿ ನೀರನ್ನೆಲ್ಲಾ ಖಾಲಿ ಮಾಡಿ ಆಂಜನೇಯ ನಿಗೆ ಪೂಜೆ ಸಲ್ಲಿಸುತ್ತಾರೆ. ಮತ್ತೆ ನೀರಿನ ಒರತದಿಂದ ಕಲ್ಯಾಣಿ ತುಂಬುತ್ತದೆ. ಅಂದಿ ನಿಂದ “ಸುವರ್ಣಮುಖಿ” ಪುಷ್ಕರಣಿ ನೀರು ಸಕಲ ರೋಗಗಳಿಗೂ ರಾಮಬಾಣ ವಾಗಿದೆ ಮತ್ತು ಸುವರ್ಣಮುಖಿ ಪುಷ್ಕರಣಿ ಸುತ್ತಮುತ್ತ ಮಾವು ಬೇವು ಹಲಸು, ನೀಲಗಿರಿ, ಅತ್ತಿ, ಮತ್ತಿ, ದೇವಧಾರ ಶ್ರೀಗಂಧ ಮುಂತಾದ ಔಷಧಯುಕ್ತ ಸಸ್ಯ ಮರ-ಗಿಡಗಳಿಂದ ತುಂಬಿದ್ದು ಔಷಧಿಯುಕ್ತವಾದ ತಾಣವಾಗಿದೆ. ಪುಷ್ಕರಣಿಯ ಸುತ್ತಮುತ್ತ ಗಣಪತಿ, ಶಿವ, ಪಾರ್ವತಿ, ಲಕ್ಷ್ಮಿ, ಆಂಜನೇಯ, ‌ ಸುಬ್ರಮಣ್ಯ ಹೀಗೆ ದೇವರುಗಳಿಗೆ ಪುಟ್ಟ ಪುಟ್ಟ ಗುಡಿಗಳಿವೆ. ಮತ್ತು ಚಂಪಕಧಾಮ ದೇವಸ್ಥಾನ ಎದುರಿನಿಂದಲೇ ಅಗ್ರಹಾರದಂತ ರಸ್ತೆ ಇದ್ದು ಒಂದಷ್ಟು ಸಾಗಿದ ಮೇಲೆ ಚಂಪಕಧಾಮ ದೇವಸ್ಥಾನ ಎದುರು ಭಾಗದಲ್ಲಿ ಎತ್ತರದ ಆಂಜನೇಯನ ದೇವಸ್ಥಾನವಿದೆ. ರಾಮನವಮಿ, ಹನುಮ ಜಯಂತಿ, ಶನಿವಾರ ಈ ಸಮಯದಲ್ಲಿ ಹೋಗಬೇಕು ಅಲ್ಲಿ ಬಾಳೆಹಣ್ಣಿನ ರಸಾಯನದ ಪ್ರಸಾದ ಚೆನ್ನಾಗಿರುತ್ತದೆ. ದೇವಸ್ಥಾನದಿಂದ ಮುಂದೆ ಹೋದರೆ “ ಬನ್ನೇರ್ಘಟ್ಟ ನ್ಯಾಷನಲ್ ಪಾರ್ಕ್” ರಾಷ್ಟ್ರೀಯ ಉದ್ಯಾನವನ ಪೂರ್ತಿ ವೀಕ್ಷಿಸಲು ಮೂರ್ನಾಲ್ಕು ಸಾರಿಯಾದರೂ ಹೋಗಬೇಕು ಅಷ್ಟು ದೊಡ್ಡದಿದೆ. ಇದರಿಂದ ಸ್ವಲ್ಪ ದೂರದಲ್ಲಿ ಬಣ್ಣ ಬಣ್ಣದ “ಚಿಟ್ಟೆ” ಗಳು ಹಾರಾಡುವ ಸುಂದರ ಉದ್ಯಾನವನವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಒಟ್ಟಾರೆ ಬನ್ನೇರುಘಟ್ಟ ಸುತ್ತಮುತ್ತಲು ಹಲವಾರು ಪುರಾತನ ದೇವಾಲಯಗಳು ಎಂದು ಪ್ರಸಿದ್ಧ ಚಂಪಕಧಾಮ ದೇವಸ್ಥಾನ ದರ್ಶನ, ಸುವರ್ಣ ಮುಖಿ ತೀರ್ಥ ಸ್ನಾನ, “ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್” ನೋಡಲು ಒಮ್ಮೆಯಾದರೂ ಹೋಗಿ ಬರಬೇಕು. ಅನಘಂ ವಾಮನಂ ಶೌರಿಂ! ಗೋವಿಂದಂ ಪುರುಷೋತ್ತಮಂ! ವಾಸುದೇವಂ ಋಷಿಕೇಶಂ ಮಾಧವಂ ಮಧುಸೂದನಂ!! ದಾಮೋದರಂ ಪದ್ಮನಾಭಂ ಕೇಶವಂ ಗರುಡಧ್ವಜಂ ಗೋವಿಂದಂ ಅಚ್ಚುತಂ ಕೃಷ್ಣಂ ಅನಂತಂ ಅಪರಾಜಿತಂ!! ಅಧೋಕ್ಷಷಜಂ ಜಗದ್ಬೀಜಂ ಸರ್ಗ ಸ್ಥಿತ್ಯಂತ ಕಾರಿಣಮ್ ಅನಾದಿ ನಿಧನಂ ವಿಷ್ಣುಂ ದೇವ ದೇವಂ ತ್ರಿವಿಕ್ರಮಮ್ !! ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ! ಪ್ರಣತ: ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ!! ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏