ಕೃಷ್ಣೆ 🦚💙
495 views
1 days ago
#ದಿನಕ್ಕೊಂದು ಕಥೆ ಪರರ ಸ್ವತ್ತು ಪ್ರಾಣಕ್ಕೆ ಕುತ್ತು :- ಆ ಊರಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವ ಕಳ್ಳನಿದ್ದ. ಅವನು ಕಳ್ಳತನದಿಂದ ಜೀವನ ಮಾಡುತ್ತಿದ್ದ. ಯಾರಿಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ,ಒಟ್ಟಿನಲ್ಲಿ ಮೈಬಗ್ಗಿಸಿ ದುಡಿಯದೆ ಹೊಂಚು ಹಾಕಿ ಉಪಾಯದಿಂದ ಕಳ್ಳತನ ಮಾಡಿ ಜೀವನ ಮಾಡುವುದರಲ್ಲಿ ನಿಸ್ಸೀಮನಾಗಿ ದ್ದ. ಹಗಲೆಲ್ಲ ವೇಷ ಮರೆಸಿ ಕಳ್ಳತನ ಮಾಡುವ ಮನೆಗಳ ಗುರುತು ನಿಖರ ವಾಗಿ ತಿಳಿದುಕೊಂಡು ರಾತ್ರಿ ಹೋಗಿ ಅಲ್ಲಿ ಕಳ್ಳತನ ಮಾಡುತ್ತಿದ್ದ. ಹೀಗೆ ಒಮ್ಮೆ ಕಳ್ಳತನ ಮಾಡಲು ಒಂದು ಊರಿಗೆ ಬಂದನು. ಆದರೆ ಕಳ್ಳತನ ಮಾಡಲು ಹೋದಾಗ ಯಾವ ಮನೆಗೂ ಅಷ್ಟು ಸುಲಭವಾಗಿ ನುಗ್ಗಲು ಆಗಲಿಲ್ಲ. ಕೊನೆಗೆ ಒಂದು ಮನೆಯ ಮುಂದೆ ಕುದುರೆ ಕಟ್ಟಿದ್ದರು. ಯಾರಿಗೂ ಗೊತ್ತಾಗ ದಂತೆ ಅದಕ್ಕೆ ಕಟ್ಟಿದ ಹಗ್ಗ ಬಿಚ್ಚಿ ಅದರ ಮೇಲೆ ಕುಳಿತು ವೇಗವಾಗಿ ಓಡಿಸಿ ಕೊಂಡು ಹೊರಟನು ಮತ್ತೊಂದು ಊರಿಗೆ ಬರುವಷ್ಟರಲ್ಲಿ ಬೆಳಕಾಗಿತ್ತು ಆ ಊರಿನ ಸಂತೆ ಬೀದಿಯಲ್ಲಿ ಕುದುರೆ ಸಮೇತ ಬಂದು ಇಳಿದನು. ಹಣಕ್ಕಾಗಿ ಅವನು ಆ ಕುದುರೆಯನ್ನು ಸಂತೆಯಲ್ಲೇ ಮಾರಲು ಯೋಚಿಸಿದನು. ಕುದುರೆ ನೋಡಲು ಬಹಳ ಮಜಬೂತಾಗಿತ್ತು. ಅದರ ಬೆಲೆ ಕೇಳಿದವರೆಲ್ಲ ಕೊಡಲಾಗದೆ ಕೈ ಚೆಲ್ಲಿ ಹಾಗೆ ಹೋಗುತ್ತಿದ್ದರು. ಏಕೆಂದರೆ ಕುದುರೆಯ ಬೆಲೆ ಐವತ್ತು ಸಾವಿರ ಹೇಳಿದ್ದ ಅದು ಅಷ್ಟೇ ಬೆಲೆ ಬಾಳುತ್ತಿತ್ತು. ಅವನು ಐವತ್ತು ಸಾವಿರದ ಆಸೆಗಾಗಿ ಬಹಳ ಹೊತ್ತು ಕಾದನು. ಯಾರು ಗಿರಾಕಿಗಳು ಸಿಗಲಿಲ್ಲ. ಅವನಿಗೆ ಒಂದೆಡೆ ಹಸಿವು, ಅಷ್ಟು ವೇಗದಲ್ಲಿ ಕುದುರೆ ಓಡಿಸಿಕೊಂಡು ಬಂದ ಆಯಾಸ, ಬಾಯಾರಿಕೆ ಆಗಿ ಹೊಟ್ಟೆ ಚುರುಗುಟ್ಟ ತೊಡಗಿತು. ಹಸಿವಂತು ದೊಡ್ಡ ಶತ್ರು ಇದ್ದ ಹಾಗೆ. ಅವನಿಗೆ ತಡೆಯಲು ಆಗಲೇ ಇಲ್ಲ. ಆ ಹೊತ್ತಿಗೆ ಒಬ್ಬ ಗಿರಾಕಿ ಬಂದನು ಒಂದ ಷ್ಟು ಹೊತ್ತು ಕುದುರೆ ನೋಡಿ, ಕುದುರೆ ಬೆಲೆ ಕೇಳಿದ 50 ಸಾವಿರ ಎಂದ. ಇದನ್ನು ಕೇಳಿ ಛೆ ಛೇ ಇದಕ್ಕೆ 50,000 ಜಾಸ್ತಿ ಆಯಿತು ಬೇರೆ ಕಡೆ ಕುದುರೆ ಬೆಲೆ ಕಡಿಮೆ ಇದೆ. ಎಲ್ಲಾ ಕಡೆ ಹತ್ತು ಸಾವಿರಕ್ಕೆ ಸಿಗುತ್ತದೆ ಎಂದನು. ಕಳ್ಳ ಯೋಚಿಸಲಿಲ್ಲ ಹಸಿವಿನಿಂದ ಬಳಲಿ ಬೆಂಡಾಗಿದ್ದ ಕಾಯಲು ಆಗಲಿಲ್ಲ ಸರಿ 10,000 ಕೊಟ್ಟು ತೆಗೆದುಕೊಳ್ಳಿ ಎಂದನು. ಮತ್ತೆ ಗಿರಾಕಿ ಹೇಳಿದ, ಇಲ್ಲ ಅಷ್ಟೂ ಇಲ್ಲ ಕುದುರೆ ವ್ಯಾಪಾರ ಕುಸಿದು ಎರಡು ಮೂರು ವರ್ಷಗಳಾಯಿತು. ಈಗಿನ ಲೆಕ್ಕದಲ್ಲಿ ಕುದುರೆ ಬೆಲೆ ಐದು ಸಾವಿರಕ್ಕಿಂತ ಒಂದು ರೂಪಾಯಿ ಹೆಚ್ಚಿಗೆ ಕೊಡಲಾರೆ ಕೊಡುವುದಾದರೆ ಕೊಡು ಎಂದನು. ಕುದುರೆ ಕುರಿತಾಗಿ ತಲೆ ಬುಡ ಗೊತ್ತಿಲ್ಲದ ಕಳ್ಳ, ಆಯ್ತಪ್ಪ, 5,000 ನೇ ಕೊಟ್ಟು ಕುದುರೆ ತೆಗೆದುಕೊಂಡು ಹೋಗು ಎಂದನು. ಗಿರಾಕಿ ಕುದುರೆಯನ್ನು ಮುಟ್ಟಿ ಅದರ ಬೆನ್ನು ತಟ್ಟಿ ಹೇಳಿದ ಆಯ್ತು 5,000 ಕೊಡುತ್ತೇನೆ. ಮೊದಲು ಕುದುರೆ ಹೇಗೆ ಓಡುತ್ತದೆ ಎಂದು ಒಂದು ಸುತ್ತು ಹಾಕಿ ನೋಡಿ ಪರೀಕ್ಷಿಸಿದ ಮೇಲೆ ನಿನಗೆ ಹಣ ಕೊಡುವೆ ಎಂದನು. ಈಗಂತೂ ಕಳ್ಳನಿಗೆ ಹಸಿವು - ದಣಿವು ಬಾಯಾರಿಕೆ ಹೆಚ್ಚಾಗಿ ಉಸ್ಸಪ್ಪಾ ಎಂಬಂತಾಗಿತ್ತು. ಆಯ್ತಯ್ಯ ಬೇಗ ಒಂದು ಸುತ್ತು ಹೋಗಿ ಬಾ ಎಂದನು. ಗಿರಾಕಿ ಸರಿಯೆಂದು ಸರ ಸರ ಬಂದು ಕುದುರೆ ಹತ್ತಿದ ಪರೀಕ್ಷೆ ಮಾಡಿ ತರುವೆ ಎಂದ ಕಳ್ಳ ನೋಡು ನೋಡುತ್ತಿದ್ದಂತೆ ಆತ ನಿಂದ ಕುದುರೆಯನ್ನು ಬಹಳ ದೂರ ಓಡಿಸಿಕೊಂಡು ಕಣ್ಮರೆಯಾದ ಮತ್ತೆ ತಿರುಗಿ ಬರಲಿಲ್ಲ. ಕುದುರೆ ಖರೀದಿ ಮಾಡಲು ಬಂದವನು ಕಳ್ಳನ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಬಿಟ್ಟ ಕೊನೆಗೆ ಮೊದಲು ಕುದುರೆಯನ್ನು ಕದ್ದು ತಂದು ಮಾರಲು ಹೊರಟಿದ್ದ ಕಳ್ಳನೇ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲು ಸೇರಿದನು. ಕಳ್ಳನಿಗೆ ಮೋಸ ಮಾಡಿ ಪರಾರಿಯಾದ ಖತರ್ನಾಕ್ ಕಳ್ಳ. ದೌ ಅಂಭಸಿ ನಿವೇಷ್ಟ ವ್ಯೌ ಗಲೇ ಬದ್ಧ್ವಾ ದೃಢಾಂ ಶಿಲಾಂ ! ಧನವಂತಂ ಅದಾತಾರಂ ದರಿದ್ರಂ ಚ ಆತಪಸ್ವಿನಂ !! ಈ ಎರಡು ರೀತಿಯ ಮನುಷ್ಯರನ್ನು ದೊಡ್ಡ ಕಲ್ಲುಗಳಿಂದ ಬಿಗಿದು ನೀರಿಗೆ ಹಾಕಬೇಕು ದನಿಕನಾಗಿಯೂ ದಾನ ಮಾಡದವನು ಮತ್ತು ಬಡವನಾಗಿಯು ಕೆಲಸ ಮಾಡದವನು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ.