CATHOLIC BIBLE VERSE
1.2K views
3 days ago
#✝ಯೇಸು ವಾಕ್ಯಗಳು📖 #📖ಬೈಬಲ್ ನುಡಿಗಳು✝ #✝️ Jesus #📚 ಬೈಬಲ್✝️ #🙏ಭಕ್ತಿ ಸ್ಟೇಟಸ್ *"ಡೋರ್ನಹಳ್ಳಿ ಸಂತ ಅಂತೋಣಿಯವರ ಸ್ವರೂಪ ಸಿಕ್ಕ ನೖೆಜ ಕಥೆ"* 🙏 °°°°°°°°°°°°°°°°°°°°°°°°°°°°°°°°°°°°°°°°°° ✍️ *ಮಥಿಯಾಸ್ ಕುಮಾರ್* ಮೖೆಸೂರು. °°°°°°°°°°°°°°°°°°°°°°°°°°°°°°°°°°°°°°°°°° ಸುಮಾರು 220 ವರ್ಷಗಳ ಹಿಂದೆ, ಡೋರ್ನಹಳ್ಳಿ ಗ್ರಾಮದ ಒಬ್ಬ ರೈತ ತನ್ನ ರಾಗಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ, ನೇಗಿಲಿಗೆ ಯಾವುದೋ ವಸ್ತು ತಗುಲಿತು. ಕುತೂಹಲದಿಂದ ಅಗೆದು ನೋಡಿದಾಗ, ಸುಮಾರು ಒಂದೂವರೆ ಅಡಿ ಎತ್ತರದ ಮರದ ಸ್ವರೂಪ (ಪ್ರತಿಮೆ) ಸಿಕ್ಕಿತು. ಅದನ್ನು ಸಾಮಾನ್ಯ ಗೊಂಬೆಯೆಂದು ಭಾವಿಸಿ ಮನೆಗೆ ತೆಗೆದುಕೊಂಡು ಹೋದನು. ಆದರೆ ಆ ರಾತ್ರಿ ರೈತನಿಗೆ ಕನಸಿನಲ್ಲಿ ಒಬ್ಬ ಪವಿತ್ರ ವ್ಯಕ್ತಿ ಕಾಣಿಸಿಕೊಂಡು, *"ಇದು ಸಾಮಾನ್ಯ ಗೊಂಬೆಯಲ್ಲ; ಇದನ್ನು ಗೌರವದಿಂದ ಇಡು"* ಎಂದು ಸೂಚನೆ ನೀಡಿದರೆಂದು ಸಂಪ್ರದಾಯ ಹೇಳುತ್ತದೆ. ರೈತ ಮೊದಲಿಗೆ ಅದನ್ನು ನಿರ್ಲಕ್ಷಿಸಿದನು. ನಂತರ ಅವನ ಕುಟುಂಬದಲ್ಲಿ ಕೆಲವು ಕಷ್ಟಗಳು ಎದುರಾದವು. ಆಗ ಅವನಿಗೆ ಆ ಕನಸು ನೆನಪಾಯಿತು. ಮತ್ತೊಮ್ಮೆ ದೈವಿಕ ಸೂಚನೆ ದೊರೆತ ನಂತರ, ರೈತನು ಸ್ವರೂಪ ಸಿಕ್ಕ ಸ್ಥಳದಲ್ಲೇ ಒಂದು ಚಿಕ್ಕ ಗುಡಿಸಲಿನಂತ ದೇವರ ಮಂದಿರವನ್ನು ನಿರ್ಮಿಸಿ ಪ್ರಾರ್ಥನೆ ಆರಂಭಿಸಿದನು. ನಂತರ ಅವನ ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಿತು ಎಂದು ಹೇಳಲಾಗುತ್ತದೆ. ಕೆಲವು ವರ್ಷಗಳ ಬಳಿಕ ಮೈಸೂರಿನ ಒಬ್ಬ ಕ್ರೈಸ್ತ ಯಾಜಕರು ಆ ಸ್ವರೂಪವನ್ನು ನೋಡಿ, ಅದು *"ಪಾದ್ವದ ಸಂತ ಅಂತೋಣಿ"* (Saint Anthony of Padua) ಅವರ ಪ್ರತಿಮೆಯೆಂದು ಗುರುತಿಸಿದರು. ಆ ನಂತರ ಅಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು ಮತ್ತು ಅನೇಕ ಅನುಗ್ರಹಗಳು ದೊರಕಿದವು ಎಂಬ ನಂಬಿಕೆ ಹರಡಿದೆ. ಈ ಚಿಕ್ಕ ಭಕ್ತಿಕೇಂದ್ರವೇ ಕ್ರಮೇಣ ಬೆಳೆದು ಇಂದಿನ *St. Anthony's Basilica Dornahalli* ಆಗಿ ರೂಪುಗೊಂಡಿದೆ. 2019ರಲ್ಲಿ ಇದಕ್ಕೆ *"Minor Basilica"* ಗೌರವವೂ ಲಭಿಸಿತು. 💐 ಡೋರ್ನಹಳ್ಳಿಯ ಭಕ್ತರ ಪ್ರಸಿದ್ಧ ನುಡಿ: *"ಸಂತ ಅಂತೋಣಿಯವರಲ್ಲಿ ಭಕ್ತಿಯಿಂದ ಬೇಡಿಕೊಂಡರೆ, ದೇವರು ಅವರ ಮಧ್ಯಸ್ಥಿಕೆಯಿಂದ ಅನುಗ್ರಹಗಳನ್ನು ನೀಡುತ್ತಾರೆ."* ಜೂನ್ 13ರಂದು ನಡೆಯುವ ಡೋರ್ನಹಳ್ಳಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದು ಈ ಪವಿತ್ರ ಸ್ವರೂಪದ ಮೇಲಿನ ಜನರ ಭಕ್ತಿಗೆ ಸಾಕ್ಷಿಯಾಗಿದೆ.., *"ಡೋರ್ನಳ್ಳಿ ಮಾ಼ಸಂತ ಅಂತೋಣಿಯವರೇ ಭೂಲೋಕ ಹೆಸರಾಂತ ಅಂತೋಣಿಯವರೇ ನಮಗಾಗಿ ಪ್ರಾರ್ಥಿಸಿರಿ."* Sent from WhatsApp wa.me/919900446483?source=exsh