ಸಿಎಂ ವಿಜಯ್ ಪ್ರಮಾಣ ವಚನದ ವೇಳೆ CSK ಬೌಲರ್ ಹಾಜರ್? ನೆಟ್ಟಿಗರ ಗಮ್ಮತ್ತಿಗೆ ಜೊತೆಯಾದ ಆರ್ ಅಶ್ವಿನ್!
ತಮಿಳುನಾಡು ಸಿಎಂ ವಿಜಯ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭದ್ರತಾ ಅಧಿಕಾರಿಯೊಬ್ಬರು ಸಿಎಸ್ಕೆ ವೇಗಿ ಅನ್ಶುಲ್ ಕಾಂಬೋಜ್ ಅವರಂತೆ ಕಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಲಕ್ನೋ ವಿರುದ್ಧದ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಈ ಚಿತ್ರ ಟ್ರೆಂಡ್ ಆಗುತ್ತಿದ್ದಂತೆ, ಆರ್. ಅಶ್ವಿನ್ ಅವರು "ತಕ್ಷಣ ಕ್ಯಾಬ್ ಹಿಡಿದು ಮೈದಾನಕ್ಕೆ ಬಾ" ಎಂದು ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದರು. ಪ್ರಸ್ತುತ ಐಪಿಎಲ್ನಲ್ಲಿ 19 ವಿಕೆಟ್ ಪಡೆದು ಮಿಂಚುತ್ತಿರುವ ಹರಿಯಾಣದ ಕಾಂಬೋಜ್, ಸಿಎಸ್ಕೆ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ.