Anthoniraj
572 views
2 days ago
ಪರ್ಷಿಯನ್ ಸಾಮ್ರಾಜ್ಯದ ಅಧೀನದಲ್ಲಿದ್ದರೂ ಗ್ರೀಕ್ ಸಂಸ್ಕೃತಿಯನ್ನು ಹೊಂದಿದ್ದ ಹ್ಯಾಲಿಕಾರ್ನಾಸಸ್ (ಇಂದಿನ ಟರ್ಕಿ) ಎಂಬಲ್ಲಿ ಕ್ರಿ.ಪೂ. 484 ರಲ್ಲಿ ಜನಿಸಿದ "ಹೆರೊಡೋಟಸ್" ಯುವಕರಾಗಿದ್ದಾಗ ಅಲ್ಲಿನ ಸ್ಥಳೀಯ ಆಡಳಿತ ಮತ್ತು ಕುಟುಂಬದ ರಾಜಕೀಯ ಸಂಘರ್ಷದ ಕಾರಣಗಳಿಂದ ನಗರ ತೊರೆಯಬೇಕಾಗಿ ಬಂದರೂ ಜಗತ್ತಿನ ಬಹುಭಾಗವನ್ನು ಸುತ್ತುವ ಅವಕಾಶ ಪಡೆದರು. ಹೀಗೆ ಪ್ರವಾಸ ಹೊರಟು ಈಜಿಪ್ಟ್‌ಗೆ ಭೇಟಿ ನೀಡಿದಾಗ ಅವರು ಅಲ್ಲಿನ ಸುಡುವ ಮರುಭೂಮಿಯ ಮಧ್ಯೆ ಸಮೃದ್ಧವಾಗಿ ಹರಿಯುತ್ತಿದ್ದ ನೈಲ್ ನದಿಯನ್ನು ಕಂಡು ಬೆರಗಾದರು. ಬೇಸಿಗೆಯಲ್ಲಿ ಈ ನೀರು ಎಲ್ಲಿಂದ ಬರುತ್ತದೆ ಎಂಬ ಅವರ ಪ್ರಶ್ನೆಗೆ ಪುರೋಹಿತರೊಬ್ಬರು "ಇದು ದೇವರ ಕೊಡುಗೆ, ಪಾತಾಳದಿಂದ ಬರುತ್ತದೆ" ಎಂದಿದ್ದರು.!" ಆದರೆ ಸೂರ್ಯನ ಶಾಖ, ಮಂಜುಗಡ್ಡೆ ಕರಗುವಿಕೆ ಇತ್ಯಾದಿಗಳ ಬಗ್ಗೆ ಅರಿವಿದ್ದ ಹೆರೊಡೋಟಸ್ ಆ ಕಾಲದಲ್ಲಿ ಒಬ್ಬ ವಿಜ್ಞಾನಿಯಂತೆ ನೈಲ್ ನದಿಯನ್ನು ಅಧ್ಯಯನ ಮಾಡಿದರು. ನೈಲ್ ನದಿ ಎಲ್ಲಿಂದ ಹುಟ್ಟುತ್ತದೆ ಎಂಬ ಸತ್ಯವನ್ನು ತಿಳಿಯಲು ಅವರು ಈಜಿಪ್ಟಿನ ದಕ್ಷಿಣ ಗಡಿಯವರೆಗೂ ಸಾವಿರಾರು ಕಿ. ಮೀ. ಪ್ರಯಾಣ ಬೆಳೆಸಿದರು. ಆ ಸಮಯದಲ್ಲಿ ನೈಲ್ ನದಿಯ ಪ್ರವಾಹವು ಅಲ್ಲಿನ ಜನರ ಆರ್ಥಿಕತೆ ಮತ್ತು ನಂಬಿಕೆಯನ್ನು ಹೇಗೆ ರೂಪಿಸಿದೆ ಎಂಬುದನ್ನು ಅವರು ವಿವರವಾಗಿ ದಾಖಲಿಸಿದ್ದಾರೆ. ನೈಲ್ ನದಿಯು ಪ್ರತಿ ವರ್ಷ ತನ್ನೊಂದಿಗೆ ತರುವ ಕಪ್ಪು ಮಣ್ಣು ಮರಳುಗಾಡನ್ನು ಫಲವತ್ತಾದ ಭೂಮಿಯನ್ನಾಗಿ ಮಾಡುತ್ತದೆ ಮತ್ತು ನದಿಯ ಪ್ರವಾಹ ಇಳಿದ ನಂತರ ರೈತರು ಯಾವುದೇ ನೇಗಿಲು ಬಳಸದೆ ಸುಲಭವಾಗಿ ಬಿತ್ತನೆ ಮಾಡುತ್ತಿದ್ದನ್ನು ಅವರು ವಿವರಿಸಿದ್ದಾರೆ. ನದಿಯ ನೀರಿನ ಮಟ್ಟವನ್ನು ಅಳೆಯಲು ಈಜಿಪ್ಟಿನವರು ಬಳಸುತ್ತಿದ್ದ ತಂತ್ರಜ್ಞಾನವನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನೀಡಿದ "ಈಜಿಪ್ಟ್ ನೈಲ್ ನದಿಯ ಕೊಡುಗೆ" ಎಂಬ ಹೇಳಿಕೆ ಇಂದಿಗೂ ಜಗತ್ಪ್ರಸಿದ್ಧವಾಗಿದೆ. ಇತಿಹಾಸವೆಂದರೆ ಕೇವಲ ರಾಜರ ಪುರಾಣ ಕಥೆಗಳಲ್ಲ, ಅದು ಸತ್ಯ ಘಟನೆಗಳ ಸಂಶೋಧನೆ ಮತ್ತು ಜಗತ್ತಿನ ಇತಿಹಾಸದ ಮೇಲೆ ಮಾನವನ ನಿರ್ಧಾರಗಳು ಮತ್ತು ಭೌಗೋಳಿಕ ಪರಿಸರವು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟವರು ಹೆರೊಡೋಟಸ್. ದಿ ಹಿಸ್ಟರೀಸ್' ಎನ್ನುವುದು ಹೆರೊಡೋಟಸ್ ಬರೆದ ವಿಶ್ವದ ಅತ್ಯಂತ ಪ್ರಮುಖ ಮತ್ತು ಮೊದಲ ಪ್ರಸಿದ್ಧ ಇತಿಹಾಸ ಗ್ರಂಥವಾಗಿದೆ. ಇದು ಪಾಶ್ಚಿಮಾತ್ಯ ಸಾಹಿತ್ಯದ ಮೊದಲ ಗದ್ಯ ಲೇಖನವೆಂದು ಪರಿಗಣಿಸಲ್ಪಟ್ಟಿದೆ. ಈ ಗ್ರಂಥವನ್ನು ಒಟ್ಟು ಒಂಬತ್ತು ಪುಸ್ತಕಗಳಾಗಿ ವಿಂಗಡಿಸಲಾಗಿದೆ ಮಾನವ ನಾಗರಿಕತೆಯ ಬೆಳವಣಿಗೆಯಲ್ಲಿ ಕಾಲ್ಪನಿಕ ಕಥೆಗಳಿಗಿಂತ ವಾಸ್ತವ ಘಟನೆಗಳಿಗೆ ಮಹತ್ವ ನೀಡಿ, ಘಟನೆಗಳನ್ನು ಕೇವಲ ಕಥೆಗಳಂತೆ ಹೇಳದೆ, ಅವುಗಳ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಿದ ಕಾರಣ ಇವರನ್ನು "ಇತಿಹಾಸದ ಪಿತಾಮಹ" ಎಂದು ಕರೆಯಲಾಗುತ್ತದೆ. ಹೆರೊಡೋಟಸ್ ಇತಿಹಾಸವನ್ನು ಒಂದು ಶಿಸ್ತುಬದ್ಧ ಅಧ್ಯಯನವನ್ನಾಗಿ ರೂಪಿಸಿದರು. ಮಾನವನ ಸಾಧನೆಗಳು ಕಾಲಕ್ರಮೇಣ ಮರೆತುಹೋಗಬಾರದು ಎಂಬ ಕಾರಣದಿಂದ ಪ್ರತ್ಯಕ್ಷವಾಗಿ ಸ್ಥಳಗಳಿಗೆ ಭೇಟಿ ನೀಡಿ, ಜನರ ಸಂದರ್ಶನ ಮಾಡಿ ಮಾಹಿತಿ ಪಡೆಯುವ ಪದ್ಧತಿಯನ್ನು ಆರಂಭಿಸಿದರು. ಇತಿಹಾಸದ ಜೊತೆಗೆ ಅವರು ಭೇಟಿ ನೀಡಿದ ದೇಶಗಳ ಸಂಪ್ರದಾಯ, ಆಹಾರ ಪದ್ಧತಿ ಮತ್ತು ಭೂಗೋಳದ ಬಗ್ಗೆಯೂ ಅದ್ಭುತವಾಗಿ ವರ್ಣಿಸಿದ್ದಾರೆ ಹೆರೊಡೋಟಸ್ ಹಿಸ್ಟರೀಸ್ ನಲ್ಲಿ ಭಾರತದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಭಾರತವು ಜನಸಂಖ್ಯೆಯಲ್ಲಿ ಬಹಳ ದೊಡ್ಡ ದೇಶವೆಂದು ಮತ್ತು ಇಲ್ಲಿನ ಜನರು ಅತ್ಯಂತ ಕಷ್ಟಜೀವಿಗಳೆಂದು ಬಣ್ಣಿಸಿದ್ದಾರೆ. ಭಾರತದ ಚಿನ್ನ ಮತ್ತು ಇಲ್ಲಿನ ವಿಚಿತ್ರ ಪ್ರಾಣಿಗಳ ಬಗ್ಗೆಯೂ ಅವರು ವಿವರಗಳನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಪರ್ಷಿಯನ್ ಸಾಮ್ರಾಜ್ಯದ ಅಂಚೆ ವ್ಯವಸ್ಥೆಯನ್ನು ಕಂಡು ಹೆರೊಡೋಟಸ್ ಹೀಗೆ ಬರೆದಿದ್ದರು: "ಮಳೆ ಬರಲಿ, ಬಿಸಿಲಿರಲಿ ಅಥವಾ ಕತ್ತಲಿರಲಿ, ಈ ಸವಾರರು ತಮ್ಮ ಗುರಿ ತಲುಪುವುದನ್ನು ಯಾರೂ ತಡೆಯಲಾರರು.!" ಈ ವಾಕ್ಯವು ಎಷ್ಟು ಪ್ರಸಿದ್ಧವಾಯಿತೆಂದರೆ, ಇಂದು ಅಮೆರಿಕದ ಅಂಚೆ ಇಲಾಖೆ ಇದನ್ನು ತನ್ನ ಧ್ಯೇಯವಾಕ್ಯದಂತೆ ಬಳಸುತ್ತದೆ. ಇತಿಹಾಸವನ್ನು ಪುರಾಣದಿಂದ ಬೇರ್ಪಡಿಸಿ ಬರೆಯುವ ಪ್ರಯತ್ನ 2500 ವರ್ಷಗಳ ಹಿಂದೆಯೇ ಆರಂಭವಾಯಿತು ಎನ್ನುವುದು ಆಶ್ಚರ್ಯ ಎನಿಸಿದರೂ ಇಂದು ನಮಗೆ ಪಿರಮಿಡ್ ನಿರ್ಮಾಣದ ಬಗ್ಗೆ, ಮಮ್ಮಿಗಳ (ಶವ ಸಂರಕ್ಷಣಾ ಪದ್ಧತಿ) ಬಗ್ಗೆ, ನೈಲ್ ಈಜಿಪ್ಟ್ ನ ಜೀವನದಿ ಎಂಬ ಬಗ್ಗೆ, ಮ್ಯಾರಥಾನ್ ಬಗ್ಗೆ, 300 ಸ್ಪಾರ್ಟಾ ಸೈನಿಕರ ವೀರಗಾಥೆ ಸೇರಿದಂತೆ ಹೊರ ಜಗತ್ತಿನ ಹತ್ತು ಹಲವು ವಿಷಯಗಳ ಬಗ್ಗೆ ತಿಳಿದಿರಲು ಮುಖ್ಯ ಕಾರಣ ಹೆರೊಡೋಟಸ್ ರಚಿಸಿದ ಹಿಸ್ಟರೀಸ್ ಗ್ರಂಥವೇ ಎನ್ನುವುದು ವಾಸ್ತವ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್