Anthoniraj
ShareChat
click to see wallet page
@anthoniraj4671
anthoniraj4671
Anthoniraj
@anthoniraj4671
ಐ ಲವ್ ಶೇರ್ ಚಾಟ್
ಭೀಷ್ಮಾಚಾರ್ಯರು_ಹುಟ್ಟಿದ_ಕಥೆ ಅಮರ ಸಿಂದೂದ್ಭವ, ಗಂಗೆಯನ್ನು ಮುಟ್ಟಿದರೇನೆ ಪಾವಿತ್ರ್ಯ ಅಂಥಾ ಗಂಗೆಯಲ್ಲಿ ಹಟ್ಟಿದವನು ಗಂಗೆಯಪುತ್ರನಾದವರು “ಭೀಷ್ಮಾಚಾರ್ಯರು”.. ಮೃತ್ಯುವನ್ನು ತಾನಾಗಿಯೇ ಬಾ ಎಂದು ಕರೆದರೇ ಬರುತ್ತಿತ್ತು ಮೃತ್ಯು….. ಇಂಥಾ ಶಕ್ತಿಸಂಪನ್ನನಾದವರು ಯಾಕೆ ಕೊನೆಗಾಲದಲ್ಲಿ ಅಂದರೇ ಸಾಯುವ ಸಂಧರ್ಭದಲ್ಲಿ ” ಬಾಣಗಳ ಮೇಲೆ ಮಲ್ಕೊಂಡು, ಎಷ್ಟೋ ತಿಂಗಳು ಗಾಯಗಳ ನೋವನ್ನು ಅನುಭವಿಸುತ್ತ ಮಲಗಿಬಿಟ್ಟರಲ್ಲ….” ಎಂದು ನಮಗೆಲ್ಲ ಅನ್ನಿಸಬಹುದು. ಅವರು ನಿಜವಾಗಿಯೂ ಒಳ್ಳೆಯವರಾಗಿದ್ರೇ ಈ ದುರಾವಸ್ಥೆಯಲ್ಲಿ ಯಾಕೆ ಪ್ರಾಣ ಬಿಡಬೇಕಾಗಿತ್ತು….? (ಇದಕ್ಕೆ ಕೆಲವರು ಉತ್ತರಾಯಣ ಬರಲಿ ಎಂದು ಕಾಯುತ್ತಿದ್ದರು ಎಂದು ಹೇಳುವುದುಂಟು ಇರಬಹುದು, ಆದರೇ ನಿಜವಾದ ಕಥೆ ಏನು ಎನ್ನುವುದೇ ಮುಂದಿನ ಕಥೆ ಓದಿ…) ಬ್ರಹ್ಮನ ಆಸ್ಥಾನ, ಎಲ್ಲ ಋಷಿಗಳು ಕುಳಿತುಕೊಂಡಿದ್ದಾರೆ ( ಋಷಿಗಳು ಎಂದರೇ ಬ್ರಹ್ಮ ಲೋಕದಲ್ಲಿ ಕುಳಿತುಕೊಳ್ಳುವಂತಹ ಮಹಾ ತಪಸ್ವಿಗಳಾದ ದೊಡ್ಡ ದೊಡ್ಡ ಋಷಿಗಳು) ಆ ಆಸ್ಥಾನಕ್ಕೆ ಗಂಗೆ ಬಂದಳು, ಗಂಗೆ ಬಂದಾಗ ಸ್ವಲ್ಪ ಗಾಳಿ ಬಿಸಿತು, ಗಾಳಿ ಜೋರಾಗಿ ಬೀಸಿದಾಗ, ಆಕೆಯ ಸೀರೆ ಸ್ವಲ್ಪ ಅಸ್ತವ್ಯಸ್ತವಾಯಿತು. ಅಲ್ಲಿ "ಮಹಾಭಿಷಿಕ್" ಎನ್ನುವಂತಹ ಒಬ್ಬ ರಾಜ (ಋಷಿ) ಅಚಾತುರ್ಯದಿಂದ ನೋಡಿದ, ಆಗ ಬ್ರಹ್ಮದೇವರು:- “ನನ್ನ ಸಭೆಗೆ ಬರಬೇಕಾದರೇ ಕೆಲವು ಯೋಗ್ಯತೆಗಳು ಇರಬೇಕು, ಸಂಸ್ಕೃತಿಯ ಆಕಾರವನ್ನು ಹೊಂದಿ ಬರಬೇಕು, ಸಭ್ಯತೆಯನ್ನು ಕಲಿತಿರಬೇಕು, ಯಾವುದೇ ಕಾರಣದಿಂದಲೂ ಆ ಸಮಯದಲ್ಲಿ ನೋಡಬಾರದು, ನೋಡಿದ್ದಿಯಾ ಆದ್ದರಿಂದ ನಿನಗೆ ಚಾಪಲ್ಯವಿದೆ ಅಂತ ಅರ್ಥ. ಹಾಗಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಕಷ್ಟವನ್ನ ಅನುಭವಿಸು…” ಹಾಗೆ ಗಂಗೆಯನ್ನೂ ನೋಡಿ… ಬ್ರಹ್ಮ:- “ನೀನೂ ನನ್ನ ಸಭೆಯಲ್ಲಿ ಇರುವುದಕ್ಕೆ ಯೋಗ್ಯತೆಯವಳಲ್ಲ. ಆದ್ದರಿಂದ ನೀನೂ ಭೂಲೋಕದಲ್ಲಿ ಹುಟ್ಟು ಎಂದು ಶಾಪ ಕೊಟ್ಟರು…” ಹೀಗಾಗಿ ಗಂಗೆ ಕೆಳಗೆ ಇಳಿದು ಬರುತ್ತಿರುವಾಗ ಪಕ್ಕದಲ್ಲಿ ಎಂಟು ಜನ ವಸುಗಳೂ ಇಳಿದು ಬರುತ್ತಿದ್ದರು. ಅವರನ್ನೆಲ್ಲ ನೋಡಿದ ಗಂಗೆಯು:- “ಯಾಕೆ ಅಷ್ಟವಸುಗಳು (ದೇವತೆಗಳು) ಕೆಳಗೆ ಬೀಳ್ತಿದ್ದೀರ…?” ಎಂದು ಅವರನ್ನೆಲ್ಲ ಕೇಳಿದಳು. ಆಗ ಅವರು ತಮ್ಮ ಕಥೆಯನ್ನು ಹೇಳಿದರು…. "ನಾವೆಲ್ಲರೂ ( ಅಷ್ಟವಸುಗಳು) ನಮ್ಮ ಹೆಂಡತಿಯ ಜೊತೆ ವನವಿಹಾರಕ್ಕೆ ಹೋಗಿದ್ದೆವು. "ವಸಿಷ್ಠಮಹರ್ಷಿ"ಗಳ ಆಶ್ರಮಕ್ಕೆ ಹೋದೆವು. ಅಲ್ಲಿ ನಂದಿನಿ ಎನ್ನುವ ಹಸು ಓಡಾಡುತ್ತಿದ್ದುದನ್ನು ಕಂಡು, “ನನಗೆ ಭೂಲೋಕದಲ್ಲಿ ಒಬ್ಬ ಸ್ನೇಹಿತೆ ಇದ್ದಾಳೆ. ಉಷಿನರ ಮಗಳು ಅವಳು, ನಾನು ಅಮರಳಾಗಿದ್ದೇನೆ, ವಸಿಷ್ಠರ ಆಶ್ರಮದಲ್ಲಿ ಇರುವ “ನಂದಿನಿ” ಎಂಬ ಹಸುವಿನ ಹಾಲನ್ನು ನನ್ನ ಸ್ನೇಹಿತೆ ಕುಡಿದರೇ ಅಮರಳಾಗುವುದಿಲ್ಲ, ಆದರೇ ಸುಮಾರು “ಹತ್ತುಸಾವಿರ ವರ್ಷಗಳು” ಬದುಕಬಲ್ಲಳು. ಹಾಗಾಗಿ ಹಸುವನ್ನೋ ಅಥವಾ ಅದರ ಹಾಲನ್ನಾದರೂ ತೆಗೆದುಕೊಂಡು ಬನ್ನಿ” ಅಂತ. ಹೀಗೆ ನಮ್ಮಲ್ಲಿ ” ದ್ಯೂ” ಎನ್ನುವ ವಸುವಿನ ಹೆಂಡತಿ ಕೇಳಿಕೊಂಡಳು… (ಹೆಂಡತಿಯ ಮಾತಿಗೆ ಒಲಿಯದ ಗಂಡ ಯಾರಿದ್ದಾರೆ…?) ದ್ಯೂ ಅವನ ಸಹೋದರರ ಜೊತೆಗೆ ವಸಿಷ್ಠರ ಆಶ್ರಮಕ್ಕೆ ಹೋಗಿ, ಸ್ವಲ್ಪವೂ ಸಭ್ಯತೆ ಇಲ್ಲದೇನೆ ಮತ್ತು ವಸಿಷ್ಠರನ್ನ ಒಂದು ಮಾತು ಕೇಳದೇನೆ, ನಂದಿನಿಯ ಕೊರಳಿಗೆ ಹಗ್ಗವನ್ನ ಕಟ್ಟಿ ಎಳೆದೊಯ್ದರು... ವಸಿಷ್ಠರು ಆಶ್ರಮಕ್ಕೆ ಬಂದಾಗ ಹಸು ಕಾಣಿಸಲಿಲ್ಲ ಕಣ್ಣುಮುಚ್ಚಿ ತಪಃಶಕ್ತಿಯಿಂದ ನೋಡಿದರು, ಎಲ್ಲ ಗೊತ್ತಾಯ್ತು ಆಗ, ವಸಿಷ್ಠರು:- “ನೀವು ನನ್ನ ಹಸುವನ್ನ ಕದ್ದಿದ್ದೀರಾಗಿ ಯಥಾ ಪ್ರಕಾರ ಮನುಷ್ಯರಾಗಿ ಹುಟ್ಟಿ” ಎಂದು ಶಾಪ ಕೊಟ್ಟರು… ( ಮನುಷ್ಯರಾಗಿ ಹುಟ್ಟಬೇಕು ಎಂದರೇ ಕಷ್ಟಪಡಬೇಕು ಎಂದು ಅರ್ಥ) ಅಷ್ಟ ವಸುಗಳು ಋಷಿಗಳ ಕಾಲಿಗೆ ಬಿದ್ದು ” ನಮ್ಮದು ತಪ್ಪಾಯಿತು ದಯಮಾಡು ಕ್ಷಮಿಸಿ ಶಾಪವನ್ನ ಹಿಂದಕ್ಕೆ ಪಡೆದುಕೊಳ್ಳಿ” ಎಂದು ಬೇಡಿಕೊಂಡರು…. ವಸಿಷ್ಠರು:- “ಹಾಗಾದರೇ ಒಂದು ವಿಷಾಪವನ್ನ ಕೊಡುತ್ತಿದ್ದೇನೆ. ನೀವು ಯಾರು ಎಷ್ಟು ಬೇಗ ಸಾಯುತ್ತೀರೋ ಅಷ್ಟು ಬೇಗ ವಾಪಾಸು ಬಂದುಬಿಡ್ತೀರ, ನೀವು ಯಾಕೆ ಹುಟ್ಟುತ್ತಿದ್ದೀರ ಅಂದ್ರೇ ಸಾಯಲಿಕ್ಕೆ ಹುಟ್ಟತ್ತಿದ್ದೀರಿ, ಆದರೇ ಒಬ್ಬನು ಮಾತ್ರ ಹಾಗೆ ಬರುವುದಕ್ಕೆ ಆಗುವುದಿಲ್ಲ, ಯಾರೆಂದರೇ ಅವನು “ದ್ಯೂ”. ಯಾಕೆಂದರೇ ತನ್ನ ಹೆಂಡತಿಯ ಮಾತನ್ನು ಕೇಳಿ ಕದ್ದನಲ್ಲ ಮತ್ತು ಎಳೆದುಕೊಂಡು ಹೋಗುವಾಗ “ತುಂಬಾ ಮುಳ್ಳಿರುವ ಒಂದು ದೊಣ್ಣೆಯಿಂದ ಹೊಡೆದ” ಆದ್ದರಿಂದ ಅವನು ಮುಳ್ಳಿನ ಅಭಾಸವನ್ನು ಅನುಭವಿಸುವ ವರೆಗೂ ವಾಪಾಸು ಬರುವಹಾಗಿಲ್ಲ.. “ಅಮ್ಮಾ, ಹೇಗಿದ್ದರೂ ನೀನು ಭೂಮಿಗೆ ಇಳಿತಾ ಇದ್ದಿಯ. ಹಾಗಾಗಿ ದಯವಿಟ್ಟು ನಿನ್ನ ಹೊಟ್ಟೆಯಲ್ಲಿ ನಾವು ಹುಟ್ಟುವುದಕ್ಕೆ ಒಪ್ಪಿಕೊ ಮತ್ತು ನಾವು ಹುಟ್ಟಿದಾಗಲೇ ನಮ್ಮನ್ನ ಸಾಯಿಸು ನಾವು ವಾಪಾಸು ಹೋಗುತ್ತೇವೆ. ಆದರೇ ಒಬ್ಬನನ್ನ ಮಾತ್ರ ಹಾಗೆ ಸಾಯಿಸಬಾರದು ಅದು ಯಾರೆಂದರೇ ದ್ಯೂ” ಎಂದು ಬೇಡಿಕೊಂಡರು. ಗಂಗೆ ಒಪ್ಪಿಕೊಂಡಳು, ಭೂಮಿಗೆ ಬಂದಳು. ಶಂತನು ಗಂಗೆಯನ್ನು ನೋಡಿದ, ಮದುವೆಯಾಗಲು ಕೇಳಿದ. ಗಂಗೆ:- “ನೀನು ನನ್ನ ಮದುವೆಯಾಗಬೇಕೆಂದರೇ ನಾನು ಮಾಡತಕ್ಕಂತಹ ಯಾವುದೇ ಕೆಲಸಕ್ಕೆ ನೀನು ಇಲ್ಲ ಎನ್ನಬಾರದು, ನೀನು ಇಲ್ಲ ಎಂದರೇ ನಾನುಬಿಟ್ಟು ಹೋಗುತ್ತೇನೆ” ಎಂದಳು. ಪ್ರೇಮದ ಶಿಖರದಲ್ಲಿದ್ದ ಶಂತನು “ಹೂ, ಹೌದು” ಎಂದು ಮದುವೆಯಾದ. ನಂತರ… ಮೊದಲನೆಯ ಮಗು ಹುಟ್ಟಿತು ಗಂಗೆ ನದಿಯಲ್ಲಿ ಹಾಕಿದಳು, ಎರಡನೆಯದು ಹುಟ್ಟಿತು ಮತ್ತೆ ನೀರಿನಲ್ಲಿ ಹಾಕಿದಳು, ಮೂರನೆಯದು, ನಾಲ್ಕನೆಯದು, ಐದು, ಆರು, ಏಳನೆಯದು ಮಗು ಹುಟ್ಟಿತು ಒಬ್ಬೊಬ್ಬರನ್ನೇ ನೀರಲ್ಲಿ ಹಾಕಿದಳು. ಶಂತನು ಇದನ್ನೆಲ್ಲ ನೋಡ್ತಾ ಇದ್ದವನು ಮನಸ್ಸಿಗೆ ಸಮಾಧಾನವಾಗದೇ ಎಂಟನೆಯದು ಹುಟ್ಟಿದಾಗ ಗಂಗೆ ನದಿಯಲ್ಲಿ ಹಾಕುವ ಸಮಯದಲ್ಲಿ, ಗಂಗೆಯ ಕೈ ಹಿಡಿದು, “ಒಬ್ಬನನ್ಬಾದರೂ ನನಗೆ ಬಿಟ್ಟುಕೊಡು” ಎಂದು ಕೇಳಿದ. ಗಂಗೆ:- “ಸರಿ ತೆಗೆದುಕೋ” ಎಂದು ಕೊಟ್ಟಳು. ಗಂಗೆ ಕಾಣದೆ ಹೋದಳು. ಕೊನೆಗೆ ಹುಟ್ಟಿರುವ ಮಗನೆ “ದೇವವ್ರತ” ಅವನೆ ಮುಂದೆ ಭೀಷ್ಮನಾದ…. ಆ ಭೀಷ್ಮ ಭೀಷ್ಮಾಚಾರ್ಯರಾಗಿ ಹತ್ತು ದಿನಗಳವರೆಗೆ ಯುದ್ಧ ಮಾಡಿದ ಮೇಲೆ ಶರಶಯ್ಯೆಯಲ್ಲಿ ಮಲಗಿದ್ದಾರೆ ಎಂದರೇ, ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಕ್ಕೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ... ( ಈ ಜನ್ಮದಲ್ಲಿ ಏನು ಮಾಡುತ್ತಿದ್ದೀರ ಎನ್ನುವುದಕ್ಕೆ ಮುಂದಿನ ಜನ್ಮ ಹೇಗೆ ಎನ್ನುವುದು ನಿರ್ಣಯವಾಗುತ್ತದೆ ಅಥವಾ ಬದುಕು ಹೇಗೆ ಎಂದು ನಿರ್ಣಯವಾಗುತ್ತದೆ. ಆದ್ದರಿಂದ ಭೀಷ್ಮಾಚಾರ್ಯರು ಬಹಳ ದೊಡ್ಡ ವ್ಯಕ್ತಿ ಆಗಿದ್ದರೂ, ಆವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಕ್ಕೆ ಈಗಿನ ಜನ್ಮದಲ್ಲಿ ಶರಶಯ್ಯೆಯಲ್ಲಿ ಮಲಗಬೇಕಾಯಿತು..) ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ShareChat
❤️🌷❤️ ಜೀಮೂತ ವಾಹನ ❤️🌷❤️ ಹಿಮಾಲಯದ ಪರ್ವತ ತಪ್ಪಲಿನ 'ಕಾಂಚನ ಪುರ'ದಲ್ಲಿ 'ವಿದ್ಯಾಧರ' ಎಂಬ ರಾಜ್ಯವಿದ್ದು, ಇದನ್ನು ಅಪ್ರತಿಮನು, ಬಲಾಡ್ಯನು, ಧರ್ಮಿಷ್ಠನು, ದಯಾ ಪರನು ಆಗಿದ್ದ 'ಜೀಮೂತಕೇತು' ಎಂಬ ರಾಜನು ಆಳುತ್ತಿದ್ದನು. ಈ ರಾಜ್ಯವು ಸುಖ ಸಮೃದ್ಧಿಯಿಂದ ತುಂಬಿತ್ತು. ಅದಕ್ಕೆ ಕಾರಣವೂ ಇತ್ತು ಜೀಮೂತ ಕೇತುವಿನ ಹತ್ತಿರ 'ಕಲ್ಪವೃಕ್ಷ' ವಿತ್ತು. ಅವನಿಗೆ ಬೇಕಾದದ್ದನ್ನೆಲ್ಲ ಕಲ್ಪವೃಕ್ಷ ವನ್ನು ಕೇಳಿ ಪಡೆಯುತ್ತಿದ್ದನು. ಇಷ್ಟೆಲ್ಲ ಇದ್ದರೂ ಜಿಮೂತಕೇತುಗೆ ಮಕ್ಕಳಿರಲಿಲ್ಲ. ಒಂದು ದಿನ ಶುದ್ಧ ಮನಸ್ಸಿನಿಂದ ಕಲ್ಪವೃಕ್ಷದ ಹತ್ತಿರ ಕೈಜೋಡಿಸಿ ನನಗೆ ವೀರ, ಧೀರ, ಪರಾಕ್ರಮಿ, ಗುಣವಂತ ನಾಗಿರುವ ಹಾಗೂ ಕರುಣಾಳುವಾದ ದಯಾಳುವಾದ, ಬೋಧಿಸತ್ವ ಗುಣವುಳ್ಳ ಗಂಡು ಮಗು ಬೇಕು ಎಂದು ಕೇಳಿದ. ಕಲ್ಪವೃಕ್ಷ ಅವನ ಕೇಳಿದಂಥ ಮಗುವನ್ನು ಕೊಟ್ಟಿತು. ಅವನಿಗೆ 'ಜೀಮೂತ ವಾಹನ' ಎಂದು ಹೆಸರಿಡಲಾಯಿತು. ಅವನು ಬೆಳೆದು ದೊಡ್ಡವನಾದ ರಾಜನು ಬಯಸಿದಂತಹ ಎಲ್ಲಾ ಗುಣಗಳು ಅವನಲ್ಲಿ ಎದ್ದು ಕಾಣುತ್ತಿತ್ತು. ಬೆಳೆದು ನಿಂತ ಮಗ ದೇಶ ಪರ್ಯಟನೆ ಮಾಡಿ ರಾಜ್ಯಕ್ಕೆ ಬಂದನು. ಅವನು ನೋಡಿದ ಎಲ್ಲಾ ರಾಜ್ಯಗಳಿಗಿಂತ ತನ್ನ ತಂದೆಯ ರಾಜ್ಯ ಸುಭಿಕ್ಷವಾಗಿತ್ತು. ಬೇರೆ ರಾಜ್ಯಗಳಲ್ಲಿ ಬಡತನ, ರೋಗ, ನೋವು, ಹೀಗೆ ಹಲವು ತೊಂದರೆಗಳು ಇದ್ದವು. ಅವನು ತಂದೆಯ ಅನುಮತಿ ಪಡೆದು 'ಕಲ್ಪವೃಕ್ಷದ' ಹತ್ತಿರ ಹೋಗಿ "ಹೇ ಕಲ್ಪವೃಕ್ಷವೇ ಈ ಜಗತ್ತನ್ನೇ ನಿನಗೆ ನಾನು ದಾನ ಕೊಟ್ಟಿದ್ದೇನೆ. ಜಗತ್ತಿನ ಕಷ್ಟಕಾರ್ಪಣ್ಯಗಳೆಲ್ಲ ನಾಶವಾಗಿ ಜಗತ್ತು ಸುಭೀಕ್ಷ ವಾಗಿರಬೇಕು" ಎಂದು ಕಲ್ಪವೃಕ್ಷವನ್ನು ಕೇಳಿಕೊಂಡನು. ಕಲ್ಪವೃಕ್ಷವು ಅವನ ಆಸೆಯಂತೆ ಇಡೀ ಜಗತ್ತಿಗೆ ಬಂಗಾರದ ಮಳೆ ಸುರಿಸಿತು. ನಂತರ ಕಲ್ಪವೃಕ್ಷ ದೇವಲೋಕಕ್ಕೆ ಮರಳಿತು. ಪ್ರಜೆಗಳು ಜಿಮೂತವಾಹನ ಹಾಗೂ ಅವನ ತಂದೆಯನ್ನು ಹಾಡಿಹೊಗಳಿದರು. ಪ್ರತಿಯೊಬ್ಬ ಪ್ರಜೆಯು ತಮಗೆಷ್ಟು ಬೇಕೋ ಅಷ್ಟು ಬಂಗಾರವನ್ನು ಆರಿಸಿಕೊಂಡು ಮನೆಯಲ್ಲಿಟ್ಟು ಶ್ರೀಮಂತರಾದರು. ರಾಜ್ಯದಲ್ಲಿ ಈಗ ಕಲ್ಪವೃಕ್ಷ ಇಲ್ಲವೆಂದು ಗೊತ್ತಾಗುತ್ತಿದ್ದಂತೆ, ಇಲ್ಲಿವರೆಗೂ, ಬಾಯಿಮುಚ್ಚಿಕೊಂಡು ತೆಪ್ಪಗಿದ್ದ ಜೀಮೂತವಾಹನನ ಚಿಕ್ಕಪ್ಪ, ದೊಡ್ಡಪ್ಪ, ಸೇರಿಕೊಂಡು ಇವರ ರಾಜ್ಯದ ಮೇಲೆ ದಂಗೆ ಏಳಲು ಹೊರಟರು. ಇದನ್ನು ತಿಳಿದ ತಂದೆ ಜೀಮೂತ ಕೇತು ಯುದ್ಧದ ತಯಾರಿ ಮಾಡಲು ಹೊರಟರು. ಆಗ ಜೀಮೂತವಾಹನ ಬಂದು, ಅಪ್ಪ ರಾಜ್ಯಕ್ಕಾಗಿ ಯಾಕಿಷ್ಟು ಹೋರಾಟ, ರಕ್ತಪಾತ, ಕೊಲೆ, ಸುಲಿಗೆ, ಇದಕ್ಕೆಲ್ಲ ಯುದ್ಧ ಬೇಕೇ? ನನಗಂತೂ ಈ ರಾಜ್ಯಕೋಶ ಯಾವುದು ಬೇಡ. ನಾನು ಕಾಡಿಗೆ ಹೋಗುತ್ತೇನೆ ಎಂದನು.ಆಗ ತಂದೆಯೂ ಸಹ ಮಗನೇ ನಿನಗೆ ಬೇಡವಾದ ಮೇಲೆ ನಮಗೆ ಏಕೆ ಬೇಕು ಎಂದು ಜೀಮೂತವಾಹನನ ಜೊತೆ ರಾಜಾ-ರಾಣಿಯು, ತಮ್ಮ ರಾಜ್ಯ ಅಧಿಕಾರ ಎಲ್ಲವನ್ನು ಬಿಟ್ಟು ಕಾಡಿಗೆ ಹೊರಟರು. ಮಲಯ ಪರ್ವತ ತಪ್ಪಲಿಗೆ ಬಂದು ಒಂದು ಗುಡಿಸಲನ್ನು ಕಟ್ಟಿಕೊಂಡು ಋಷಿ ಮುನಿಗಳ ತರ ನೆಮ್ಮದಿ ಜೀವನ ನಡೆಸುತ್ತಿದ್ದರು. ಪರ್ವತದ ಪಕ್ಕದಲ್ಲಿ 'ಸಿದ್ಧರಾಜ್ಯ' ವಿತ್ತು. ಅಲ್ಲಿಯ ರಾಜಕುಮಾರ ಮಲಯಕೇತು ಹಾಗೂ ಅವನ ತಂಗಿ ರಾಜಕುಮಾರಿ ಮಲಯವತಿ. ರಾಜಕುಮಾರ ಮಲಯಕೇತುವೀಗೂ, ಜೀಮೂತವಾಹನನೀಗೂ ಪರಿಚಯವಾಗಿ ಸಮಾನ ಮನಸ್ಕರಾದ ಇಬ್ಬರು ಸ್ನೇಹಿತರಾದರು. ಇಂಥ ಒಳ್ಳೆಯ ಸ್ನೇಹಿತನಿಗೆ ತನ್ನ ತಂಗಿಯನ್ನು ಕೊಡಬಾರದೇಕೆ? ಎಂದು ಯೋಚಿಸಿ ಮಲಯವತಿಯನ್ನು ಕೇಳುತ್ತಾನೆ. ಆಕೆಗೆ ಮೊದಲೇ ಗೌರಿ ದೇವಿಯ ವರವಿತ್ತು . ಅವಳು ಸಂತೋಷದಿಂದ ಒಪ್ಪಿ, ಜೀಮೂತವಾಹನ ಹಾಗೂ ರಾಜಕುಮಾರಿ ಮಲಯವತಿಯ ಮದುವೆ ನೆರವೇರಿತು. ತಾನು ರಾಜಕುಮಾರಿ ಎಂಬ ಹಮ್ಮು ಇಲ್ಲದೆ ಗಂಡನ ಮನೆ ಗುಡಿಸಲಿಗೆ ಬಂದು ಅತ್ತೆ ಮಾವ ಗಂಡನ ಸೇವೆ ಮಾಡಿಕೊಂಡಿರುತ್ತಾಳೆ. ಮಲಯಕೇತು, ಜೀಮೂತವಾಹನ ಒಂದು ದಿನ ಹೊರಗೆ ತಿರುಗಾಡಿ ಕೊಂಡು ಗೋಕರ್ಣೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಜಿಮೂತವಾಹನ ಪರಿಸರ ಪ್ರೇಮಿ. ಒಂದು ಕಡೆ ಹಚ್ಚ ಹಸಿರು ತುಂಬಿದೆ, ಮತ್ತೊಂದು ಕಡೆ ಸಮುದ್ರ , ಮಗದೊಂದು ಕಡೆ ಸೂರ್ಯನ ಬಂಗಾರದ ಹೊಂಗಿರಣ, ಪಕ್ಕದಲ್ಲಿ ಬೆಳ್ಳಿಬೆಟ್ಟ ವಿತ್ತು. ಇದನ್ನು ನೋಡಿ ಸ್ನೇಹಿತನನ್ನು ಇದೇನು? ಇಲ್ಲಿ ಹಿಮಪರ್ವತ ಎಂದನು. ಆಗ, ಮಲಯಕೇತು , ಗೆಳೆಯ ನೀನು ಹೇಳಿದ್ದು ಸರಿ ಅದು ಬೆಳ್ಳಿಯ ಬೆಟ್ಟ ಹೌದು, ಆದರೆ ಅದು ಹಿಮಪರ್ವತದ ಬೆಟ್ಟವಲ್ಲ. ಮೂಳೆಗಳ ರಾಶಿ ಎಂದನು. ಜೀಮೂತವಾಹನ ಗಾಬರಿಯಿಂದ ಯಾವ ಮೂಳೆ ಅದು ಎಂದು ಕೇಳಲು, ಗರುಡನು ನಾಗಗಳನ್ನು ತಿಂದು ಹಾಕಿದ ಮೂಳೆಗಳು ಹೀಗೆ ಪರ್ವತಾಕಾರವಾಗಿ ನಿಂತಿದೆ ಎಂದು ಸ್ನೇಹಿತ ಅದರ ಕುರಿತಾಗಿ ಕಥೆ ಹೇಳಿದ. ಗರುಡನಿಗೆ ನಾಗಗಳಿಂದ ತುಂಬಾ ಅನ್ಯಾಯವಾಗಿತ್ತು. ಸಿಟ್ಟಿಗೆದ್ದ ಗರುಡ ತಪಸ್ಸುಮಾಡಿ ವಿಷ್ಣುವನ್ನು ಒಲಿಸಿಕೊಂಡು ನಾಗ ಸರ್ಪಗಳನ್ನೆ ಆಹಾರವಾಗಿ ವರ ಪಡೆದುಕೊಂಡ. ಆನಂತರ ನಾಗಲೋಕದ ಮೇಲೆ ಗರುಡನು ದಾಳಿ ಮಾಡಿ ನಾಗ ಲೋಕವನ್ನೇ ಧ್ವಂಸ ಮಾಡತೊಡಗಿದ. ಅಲ್ಲಿದ್ದ ಆದಿಶೇಷ ಬಂದು ಕೈಮುಗಿದು ಗರುಡ ನಮ್ಮಿಂದ ನಿನಗೆ ಅನ್ಯಾಯವಾಗಿದೆ ನಿಜ, ಆದರೆ ಈ ರೀತಿ ನಾಗಲೋಕಕ್ಕೆ ಬಂದು ಧ್ವಂಸ ಮಾಡಿದರೆ ನಾಗಗಳ ಸಂತತಿ ನಾಶವಾಗುತ್ತದೆ ಜೊತೆಗೆ ನಿನಗೆ ಆಹಾರ ಇಲ್ಲವಾಗುತ್ತೆ ಇದಕ್ಕಾಗಿ ಒಂದು ಒಪ್ಪಂದ ಮಾಡಿಕೊಳ್ಳೋಣ. ಇಬ್ಬರಿಗೂ ಒಳ್ಳೆಯದು.ಆ ಪ್ರಕಾರ ನಿತ್ಯವೂ ಒಂದೊಂದು ನಾಗಗಳನ್ನು ನಿನಗೆ ಆಹಾರವಾಗಿ ಕಳಿಸುತ್ತೇವೆ. ನೀನು ಅದನ್ನು ತಿಂದು ತೃಪ್ತಿಯಾಗಿರು. ನಿನಗೂ ನೆಮ್ಮದಿ, ನಾವು ಬದುಕುತ್ತೇವೆ ಎಂದನು. ಈ ಪ್ರಕಾರ ಗೋಕರ್ಣ ದೇವಸ್ಥಾನ ಅದರ ಮಧ್ಯೆ ಕೋಡುಗಲ್ಲಿದೆ. ಅದರ ಮೇಲೆ ಪ್ರತಿನಿತ್ಯ ಗರುಡನ ಆಹಾರಕ್ಕಾಗಿ ಒಂದು ನಾಗ ಮಲಗಿರುತ್ತದೆ. ಗರುಡನು ಅದನ್ನು ಕಚ್ಚಿ ತಿಂದು ಮೂಳೆಯನ್ನು ಅಲ್ಲಿ ಬಿಸಾಕುತ್ತಾನೆ. ಅದು ಪರ್ವತದಂತೆ ಆಗಿದೆ. ಜೀಮೂತವಾಹನ ಮೊದಲೇ ಕರುಣಾಮಯಿ. ಇದನ್ನು ಕೇಳಿದ ಮೇಲಂತೂ ಅವನ ಹೃದಯ ಕರಗಿ ನೀರಾಯಿತು. ನಾಗರಾಜ ಆದಿಶೇಷನ ಮೇಲೆ ಬೇಸರ ಬಂತು. ಆದಿಶೇಷನಿಗೆ ಸಾವಿರ ನಾಲಿಗೆ ಇದೆ. ಮೊದಲು ನನ್ನನ್ನು ತಿನ್ನು ಆಮೇಲೆ ಪ್ರಜೆಗಳನ್ನು ತಿನ್ನು ಅಂತ ಹೇಳಬಹುದಿತ್ತು ಪ್ರಜೆಗಳನ್ನೇ ಬಲಿ ಕೊಟ್ಟು ತಾನು ಆರಾಮವಾಗಿದ್ದಾನೆ ಇವನೆಂಥ ರಾಜ ಎಂದನು. ಮಲಯಕೇತುವಿಗೆ ಈ ವಿಚಾರ ಬೇಡವಾಗಿತ್ತು. ಆ ವೇಳೆಗೆ ಅರಮನೆ ಯಿಂದ ಅವನಿಗೆ ಕರೆಬಂದಿತು. ನೀನು ಬರುವೆಯಾ?ಎಂದು ಜೀಮೂತ ವಾಹನನ್ನು ಕೇಳಿದ್ದಕ್ಕೆ "ನೀನು ಹೋಗು ನಾನು ದೇವಸ್ಥಾನಕ್ಕೆ ಹೋಗುವೆ" ಎಂದನು. ಮಲಯಕೇತು ಅರಮನೆಗೆ ಬಂದನು. ಜೀಮೂತವಾಹನ ದೇವಸ್ಥಾನಕ್ಕೆ ಹೋದಾಗ ಒಬ್ಬ ವೃದ್ಧೆ ದುಃಖದಿಂದ ಅಳುತ್ತಿದ್ದಳು. ಅವಳ ಜೊತೆ ತರುಣನು ಇದ್ದನು. ಜೀಮೂತವಾಹನ ಅವಳ ಹತ್ತಿರ ಹೋಗಿ ಕಾರಣವೇನು ಎಂದು ಕೇಳಿದಾಗ ಆ ವೃದ್ಧೆ, ಇಂದು ನನ್ನ ಮಗ ಶಂಖಚೂಡ ಗರುಡಗೆ ಆಹಾರವಾಗಬೇಕು. ನನಗೆ ಒಬ್ಬನೇ ಮಗ ಎಂದು ಅಳತೊಡಗಿದಳು. ಆಗ ಜೀಮೂತವಾಹನ ಅಳಬೇಡಿ ತಾಯಿ ನಿಮ್ಮ ಮಗನ ಬದಲಿಗೆ ನಾನು ಹೋಗುತ್ತೇನೆ ಎಂದನು. ಆಗ ಮುದುಕಿಯು ನೀನು ವಿದ್ಯಾಧರ ರಾಜ್ಯದ ವಜ್ರ. ನನ್ನ ಮಗ ಶಂಖಚೂಡ ಒಂದು ಗಾಜು ಇದ್ದಹಾಗೆ, ಸಾಮಾನ್ಯ ಗಾಜಿಗಾಗಿ ವಜ್ರವನ್ನು ಕಳೆದುಕೊಳ್ಳುತ್ತಾರೆಯೇ? ಆದ್ದರಿಂದ ನೀನು ಹೊರಡು ನನ್ನಮಗನೇ ಗರುಡನಿಗೆ ಆಹಾರವಾಗುತ್ತಾನೆ. ಶಂಖ ಚೂಡನು ಬಲಿಪೀಠಕ್ಕೆ ಹೋಗುವ ಮುನ್ನ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಪ್ರದಕ್ಷಿಣೆ ಹಾಕಲು ಹೊರಟನು. ಆಗ ಜಿಮೂತವಾಹನ ಏನೂ ಹೇಳದೆ, ನಾನೇ ಗರುಡಗೆ ಬಲಿಯಾಗಬೇಕು ಎಂದು ಹೊರಗಡೆ ಬಂದನು. ಅಲ್ಲೊಂದು ಕೆಂಪುಬಟ್ಟೆ ಕಾಣಿಸಿತು. ಅವನು ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಲಿಪೀಠದ ಮೇಲೆ ಮಲಗಿ ಮುಸುಕು ಹಾಕಿಕೊಂಡನು. ಆಹಾರ ಕ್ಕಾಗಿ ಬಂದ ಗರುಡಗೆ ಕೆಂಪುಬಟ್ಟೆ ಮುಸುಕಿ ನಿಂದಾಗಿ ಜೀಮೂತವಾಹನ ಎಂಬುದು ತಿಳಿಯದೆ, ಕುಕ್ಕೀ ಕುಕ್ಕೀ ಅವನನ್ನು ತಿನ್ನುತ್ತಿದ್ದನು. ಆಗ ಆತನ ದೇಹದಿಂದ ರಕ್ತ ಸೋರುತ್ತಿತ್ತು ಅದರ ಜೊತೆ ಜೀಮೂತವಾಹನನ ಕುತ್ತಿಗೆ ಯಲ್ಲಿದ್ದ ಪದಕವು ಕೆಳಗೆ ಬಿದ್ದಿತ್ತು. ಆಗ ಪದಕ ಜೀಮೂತವಾಹನನ ಮನೆಯಲ್ಲಿ ಮಲಯವತಿ ಕುಳಿತಲ್ಲಿಗೇ ಬಿದ್ದು ಅವಳಿಗೆ ಸಿಕ್ಕಿತು. ಅವಳು ಗಾಬರಿಯಿಂದ ಪದಕದ ಗುರುತು ಹಿಡಿದು ಅಲ್ಲಿಗೆ ಬಂದಳು. ಗರುಡನು ಮತ್ತೆ ಮತ್ತೆ ಕುಕ್ಕಿ ತಿನ್ನುತ್ತಿದ್ದ. ಆಕಾಶದಿಂದ ಪುಷ್ಪವೃಷ್ಟಿಯಾ ಯಿತು. ಶಂಖಚೂಡಗೆ ವಿಷಯ ತಿಳಿಯಿತು. ಅವನು ಓಡಿ ಬಂದು, ಗರುಡ ಅದು ನಾನಲ್ಲ ವಿದ್ಯಾಧರ ರಾಜ ಜೀಮೂತವಾಹನ ಎಂದು ಕೂಗಿ ಹೇಳಿದ. ಗಾಬರಿಯಿಂದ ಗರುಡ ತಿನ್ನುವುದನ್ನು ನಿಲ್ಲಿಸಿದ. ಗರುಡನಿಗೆ ಮೊದಲೇ ಅನುಮಾನವಿತ್ತು .ತಡೆಯಲಾರದಷ್ಟು ದುಃಖವಾಯಿತು. ಈ ಸಮಯ ಕ್ಕಾಗಿ ಕಾಯುತ್ತಿದ್ದ ಜೀಮೂತವಾಹನ ಗರುಡನ ಕೈಯಲ್ಲಿ ಇನ್ನು ಮುಂದೆ ನಾಗಗಳನ್ನು ತಿನ್ನುವುದಿಲ್ಲ ಎಂಬ ಮಾತನ್ನು ತೆಗೆದುಕೊಂಡನು. ಗರುಡನು ಅಗ್ನಿಗೆ ಹಾರಲು ಪ್ರದಕ್ಷಿಣೆ ಹೋಗುತ್ತಿದ್ದ. ಆಗ ಶಂಖಚೂಡನು, ಗರುಡ ಮೊದಲು ದೇವಲೋಕಕ್ಕೆ ಹೋಗಿ ಅಮೃತ ತಂದು ಬದುಕಿಸು ಎಂದು ಕೂಗಿ ಹೇಳಿದ. ಗರುಡನು ದೇವಲೋಕಕ್ಕೆ ಹೋಗಿ ಅಮೃತ ತಂದು ಜೀಮೂತವಾ ಹನನ್ನ ಬದುಕಿಸಿದ. ಬರುವಾಗ ಅಮೃತದ ಬಿಂದುಗಳು ಮಳೆಯಂತೆ ಹನಿಸಿ ನಾಗಗಳ ಮೂಳೆ ರಾಶಿಯ ಮೇಲೆ ಬಿದ್ದಿತ್ತು. ಆಗ ನಾಗಗಳೆಲ್ಲ ಬದುಕಿದವು. ರಾಜಕುಮಾರಿ ಮಲಯವತಿ ದುಃಖದಿಂದ ಅಗ್ನಿ ಪ್ರವೇಶ ಮಾಡಲು ಹೊರ ಟಿದ್ದಳು. ಗೌರಿ ದೇವಿ ಪ್ರತ್ಯಕ್ಷಳಾಗಿ ನಿನಗೆ ಯಾವುದೇ ಅನ್ಯಾಯವಾಗುವು ದಿಲ್ಲ. ನನ್ನ ಆಶೀರ್ವಾದ ನಿನ್ನ ಮೇಲೆ ಇದೆ. ಜೀಮೂತವಾಹನ ಇದ್ದಲ್ಲಿಗೆ ಹೋಗು ಎಂದಳು. ಮಲಯವತಿ ಬರುವ ಸಮಯಕ್ಕೆ‌‌ ಜೀಮೂತವಾಹನ ಎದ್ದು ಕುಳಿತಿದ್ದನು. ಆ ಸಮಯಕ್ಕೆ ರಾಜ್ಯದ ಪ್ರಜೆಗಳು ಬಂದು ಜೀಮೂತ ವಾಹನಿಗೆ, ವಿದ್ಯಾಧರ ರಾಜ್ಯದ ಚಕ್ರವರ್ತಿ ನೀವೇ ಆಗಬೇಕು ಎಂದು ಹೇಳಿ ದರು. ಎಲ್ಲವೂ ಸುಖಾಂತ್ಯವಾಗಿ, ಗೌರಿ ದೇವಿಯ ವರದಂತೆ ಜೀಮೂತ ವಾಹನ ವಿದ್ಯಾಧರ ರಾಜ್ಯಕ್ಕೆ ಚಕ್ರವರ್ತಿ ಆದನು. ಮಲಯವತಿ ಚಕ್ರವರ್ತಿ ನಿಯಾದಳು. ಜೀಮೂತವಾಹನ ತನ್ನ ತ್ಯಾಗ ಬಲಿದಾನದಿಂದ ಮೂರು ಲೋಕದಲ್ಲೂ ಪ್ರಸಿದ್ಧಿಯಾದನು. ತನ್ನ ಕುಟುಂಬದೊಂದಿಗೆ ಸಾವಿರಾರು ವರ್ಷಗಳ ಕಾಲ ರಾಜ್ಯಭಾರ ಮಾಡಿ ಪ್ರಸಿದ್ಧನಾದನು. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - she oga * ae she oga * ae - ShareChat
ಲವ_ಕುಶರ_ಕಥೆ****** ಇಕ್ಷ್ವಾಕು ವಂಶವನ್ನು ರಾಜ ಇಕ್ಷ್ವಾಕು ಕಟ್ಟಿದ್ದಾನೆಂದು ರಾಮ ಹೇಳುತ್ತಾನೆ. ಇಕ್ಷ್ವಾಕು ಎಂದರೆ 'ಕಬ್ಬು' ಎಂದರ್ಥ. ಈ ವಂಶವನ್ನು ಸೂರ್ಯವಂಶವೆಂದು ಕರೆಯುತ್ತಾರೆ. ಇಕ್ಷ್ವಾಕು ವಿವಸ್ವನನ ಮೊಮ್ಮಗ ಹಾಗೂ ಮನುವಿನ ಮಗ. ಇವರು ಕೋಸಲ ರಾಜ್ಯವನ್ನು ಆಳಿದವರು. ಪ್ರಸ್ತುತ ಇದನ್ನು 'ಅವಧಾ'ಎಂದು ಕರೆಯಲಾಗುತ್ತದೆ. ಇದು ಉತ್ತರಪ್ರದೇಶದ ಸರಯೂ ಮತ್ತು ಸಾಕೇತ ಎಂಬ ನದಿಗಳ ತಟದಲ್ಲಿದೆ. ಪ್ರಸ್ತುತ ಅಯೋಧ್ಯೆಯು ಇದರ ರಾಜಧಾನಿಯಾಗಿದೆ.ಹಿಂದೂ ಧರ್ಮದ ಧರ್ಮಶಾಸ್ತ್ರ ಅಥವಾ ಮನುಸ್ಮೃತಿಯನ್ನು ರಚಿಸಿದವರು ಇಕ್ಷ್ವಾಕು ರಾಜನ ತಂದೆ ಮನು. ಸತ್ಯಯುಗ ಅಥವಾ ಪ್ರಥಮ ಯುಗದ ಆರಂಭದಲ್ಲಿ ಇದೆ ಇಕ್ಷ್ವಾಕು ರಾಜನಾಗಿ ಆಳಿದ್ದನು. ಲವ ಕುಶರ ಹುಟ್ಟು ಒಮ್ಮೆ ರಾಮನು ತನ್ನ ಪತ್ನಿಯಾದ ಸೀತೆಯ ಪಾತಿವ್ರತ್ಯದ ಬಗ್ಗೆ ಲೋಕದ ಅಪವಾದವನ್ನು ಎದುರಿಸುವ ಪ್ರಸಂಗ ಎದುರಾಗುತ್ತದೆ. ಇದರಿಂದ ನೋವುಂಡ ಸೀತೆ ತನ್ನ ಪಾತಿವ್ರತ್ಯವನ್ನು ಪರೀಕ್ಷಿಸಲು ಅಗ್ನಿಪ್ರವೇಶ ಮಾಡಲು ಮುಂದಾಗುತ್ತಾಳೆ. ಇದನ್ನು ಕೇಳಿದ ರಾಮ ದುಃಖಿತನಾಗುತ್ತಾನೆ. ಆದರೆ ತಾನೊಬ್ಬ ಆದರ್ಶ ರಾಜನೆಂಬುವುದನ್ನು ಸಾಬೀತುಪಡಿಸಲು ಶ್ರೀರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಕಾಡಿನಲ್ಲಿ ತನಗೊದಗಿದ ದುಸ್ಥಿತಿಗೆ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಯು ತನ್ನ ಆಶ್ರಮಕ್ಕೆ ಕರೆದೊಯ್ದು ಸಂತೈಸುತ್ತಾನೆ. ನಂತರ ಸೀತೆಯು ವಾಲ್ಮೀಕಿಯ ಆಶ್ರಮದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವಳಿ ಗಂಡು ಮಕ್ಕಳಿಗೆ ವಾಲ್ಮೀಕಿಯು ಹರ್ಷದಿಂದ ಲವ ಮತ್ತು ಕುಶ ಎಂದು ನಾಮಕರಣ ಮಾಡುತ್ತಾರೆ. ನಂತರ ಇಬ್ಬರೂ ಮಕ್ಕಳು ಆಶ್ರಮದಲ್ಲಿ ವಾಲ್ಮೀಕಿಯ ಆಶ್ರಯದಲ್ಲಿ ಬೆಳೆಯುತ್ತಾರೆ. ಸೀತಾರಾಮರ ಮಕ್ಕಳಿಗೆ ಲವ-ಕುಶರೆಂಬ ಹೆಸರು ಬಂದಿದ್ದು ಹೀಗೆ ಅವಳಿ ಮಕ್ಕಳ ಜನನವಾದ ನಂತರ ಮಹರ್ಷಿಯ ಶಿಷ್ಯರು ಮಕ್ಕಳನ್ನು ಪಿಶಾಚಿ ಮತ್ತು ರಾಕ್ಷಸರಿಂದ ರಕ್ಷಿಸಬೇಕಾಗಿದೆ ಎಂಬ ಮಾಹಿತಿಯನ್ನು ನೀಡುತ್ತಾರೆ. ಆದ್ದರಿಂದ ವಾಲ್ಮೀಕಿ ಮಹರ್ಷಿಯು ಒಂದು ಹುಲ್ಲನ್ನು (ಕುಶ) ಎರಡೂ (ಲವ)ಭಾಗಗಳಾಗಿ ಕತ್ತರಿಸಿ ಮಂತ್ರಗಳಿಂದ ಪವಿತ್ರಗೊಳಿಸುತ್ತಾರೆ. ನಂತರ ಒಬ್ಬ ವೃದ್ದ ಹೆಂಗಸಿಗೆ ಹೇಳಿ ಹುಲ್ಲಿನ ಮೇಲಿನ ಭಾಗವನ್ನು ದೊಡ್ಡ ಮಗುವಿಗೂ, ಹುಲ್ಲಿನ ಕೆಳ ಭಾಗವನ್ನು ಸಣ್ಣ ಮಗುವಿನ ದೇಹಕ್ಕೂ ಉಜ್ಜುವಂತೆ ಹೇಳುತ್ತಾನೆ. ಈ ರೀತಿಯ ಪ್ರಕ್ರಿಯೆಯಿಂದಾಗಿ ಸೀತಾ ದೇವಿಯ ಈ ಅವಳಿ ಮಕ್ಕಳಿಗೆ ಲವ ಮತ್ತು ಕುಶ ಎಂಬ ಹೆಸರು ಬರುತ್ತದೆ. ಲವ ಕುಶರ ಶಿಕ್ಷಣ ಲವ ಕುಶರು ಆಶ್ರಮದಲ್ಲಿ ಶ್ರೀರಾಮನ ಪ್ರತಿರೂಪದಂತೆ, ಆತನ ಸಚ್ಛಾರಿತ್ರ್ಯ, ಗುಣ, ನಡತೆಯಂತೆ ಬಾಳುತ್ತಾರೆ. ವಾಲ್ಮೀಕಿ ಮಹರ್ಷಿಯು ಕೂಡಾ ಅವರಿಬ್ಬರನ್ನು ತನ್ನ ಸ್ವಂತ ಮಕ್ಕಳಂತೆ ಜತನದಿಂದ ಬೆಳೆಸುತ್ತಾರೆ. ವಾಲ್ಮೀಕಿಯು ಈ ಮುದ್ದಾದ ಮಕ್ಕಳಿಗೆ ವೇದಗಳನ್ನೂ ಕಲಿಸುತ್ತಾನೆ. ವಾಲ್ಮೀಕಿ ರಾಮಾಯಣವು ರಾಮನ ಪಟ್ಟಾಭಿಷೇಕದೊಂದಿಗೆ ಕೊನೆಗೊಳ್ಳುತ್ತದೆ. ನಂತರ ಉಳಿದ ಕಥೆಯನ್ನು ವಾಲ್ಮೀಕಿಯು ಬರೆದಿಲ್ಲ. ಲವ ಕುಶರಿಗೆ 12 ವರ್ಷವಾದಾಗ ಸ್ವತಃ ವಾಲ್ಮೀಕಿ ಮಹರ್ಷಿಯೇ ಉಪನಯನವನ್ನು ನೆರವೇರಿಸುತ್ತಾರೆ. ಈ ಮುಖಾಂತರ ಈ ಅವಳಿ ಮಕ್ಕಳಿಗೆ ವೇದಗಳ ಶಾಸ್ತ್ರವನ್ನು ಅಭ್ಯಸಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಬಿಲ್ಲು ಬಾಣದ ವಿದ್ಯೆಯನ್ನು ಕಲಿಸಲಾಗುತ್ತದೆ. ಹೀಗಾಗಿ ಲವಕುಶರು ಆಶ್ರಮದಲ್ಲಿ ವೇದ ಪಾರಂಗತರಾಗಿಯೂ, ಬಿಲ್ವಿದ್ಯೆಯಲ್ಲೂ ಮೇಲುಗೈ ಸಾಧಿಸುತ್ತಾರೆ. ನಂತರ ವಾಲ್ಮೀಕಿಯು ತನ್ನ ತಪಸ್ಸಿನ ಅತೀಂದ್ರಿಯ ಶಕ್ತಿಯೊಂದಿಗೆ ಬಾಲಕರಿಗೆ ಕತ್ತಿ ಹಾಗೂ ಗುರಾಣಿಗಳನ್ನು ಒದಗಿಸುತ್ತಾನೆ.ಒಮ್ಮೆ ವಾಲ್ಮೀಕಿ ಮಹರ್ಷಿಗಳಿಗೆ ಸಮುದ್ರ ದೇವರಾದ ವರುಣನಿಂದ‌ ಕರೆ ಬರುತ್ತದೆ. ಆಗ ವಾಲ್ಮೀಕಿಯು ಲವ ಕುಶವನ್ನು ಕರೆದು ಆಶ್ರಮವನ್ನು ಜತನದಿಂದ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾರೆ. ಲವ ಕುಶ ಮತ್ತು ರಾಮನ ಭೇಟಿ ರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯು ಪ್ರವರ್ಧಮಾನಕ್ಕೆ ಬಂದಂತಹ ಸಂದರ್ಭ ರಾಮನಿಗೆ ಮುಂದಿನ ಉತ್ತರಾಧಿಕಾರಿ ಯಾರೆಂಬುವುದರ ಬಗ್ಗೆ ಬಹಳ ಚಿಂತೆಯಾಗುತ್ತದೆ ಮತ್ತು ಸೀತಾದೇವಿಯ ನೆನಪು ರಾಮನನ್ನು ಬಿಡದೆ ಕಾಡಲಾರಂಭಿಸಿ ಚಿಂತಾಕ್ರಾಂತನಾಗುತ್ತಾನೆ. ಹೀಗಿರುವಾಗ ರಾಮ ಅಶ್ವಮೇಧಯಾಗವನ್ನು ಮಾಡುತ್ತಾನೆ. ಯಾಗವನ್ನು ನೆರವೇರಿಸಿದ ನಂತರ ಕುದುರೆಯನ್ನು ರಾಜ್ಯ ಸುತ್ತಲು ಬಿಡುತ್ತಾರೆ. ಆ ಕುದುರೆ ಸುತ್ತಿದ ಊರುಗಳಲ್ಲಾ ರಾಜರ ಅಧೀನಕ್ಕೆ ಬರುತ್ತದೆ. ಯಾರಾದರೂ ಒಂದು ವೇಳೆ ಆ ಕುದುರೆಯನ್ನು ಸೋಲಿಸಿದರೆ ಆ ರಾಜ್ಯ ಅವರಿಗೆ ಸೇರುತ್ತದೆ. ಹೀಗಾಗಿ ರಾಮನು ಅಶ್ವಮೇಧ ಯಾಗವನ್ನು ಮಾಡಿ ಕುದುರೆಯನ್ನು ಬಿಡುತ್ತಾನೆ. ಆ ಅಶ್ವಮೇಧದ ಕುದುರೆಯು ಬೇರೆ ಬೇರೆ ರಾಜ್ಯಕ್ಕೆ ಕಾಲಿಡುತ್ತದೆ. ಆದರೆ ಎಲ್ಲಾ ರಾಜ್ಯದ ರಾಜರು ರಾಮನಿಗೆ ಗೌರವವನ್ನು ಕೊಟ್ಟು ರಾಮನ ವಂಶಕ್ಕೆ ಸೇರಿಕೊಳ್ಳುತ್ತಾರೆ ಮತ್ತು ಅಶ್ವಮೇಧದ ಕುದುರೆಯು ಅಯೋಧ್ಯೆಗೆ ಹಿಂದಿರುಗುತ್ತದೆ. ಹಿಂತಿರುಗಿ ಬರುವ ವೇಳೆ ಈ ಕುದುರೆಯು ಮಹರ್ಷಿಯ ಆಶ್ರಮಕ್ಕೆ ಬರುತ್ತದೆ. ಸುತ್ತಲೂ ಸೊಂಪಾದ ಹಸಿರು ಹುಲ್ಲನ್ನು ಕಂಡು ಅದರ ಮೇಲೆ ನಡೆಯಲಾರಂಭಿಸಿತು. ಆ ವೇಳೆ ಲವನು ಆ ಕುದುರೆಯನ್ನು ನೋಡಿ ಕುದುರೆಯ ಪಕ್ಕ ಬಂದು ಅದರ ಹಣೆಯ ಮೇಲಿರುವ ಚಿನ್ನದ ಫಲಕವನ್ನು ನೋಡುತ್ತಾನೆ. ಅದರ ಮೇಲೆ ಬರೆದಿರುವ ಶಾಸನವನ್ನು ಓದಿ ಕುಪಿತಗೊಳ್ಳುತ್ತಾ‌ನೆ. ಕೌಸಲ್ಯನ ಮಗ ರಾಮ ಒಬ್ಬನೇ ನಾಯಕನೇ? ಹಾಗಾದರೆ ನಾನು ಸೀತೆಯ ಮಗನಾಗಿ ಏನು ಉಪಯೋಗ..! ಎಂದು ಯೋಚಿಸಿ ಕುದುರೆಯನ್ನು ಮರಕ್ಕೆ ಕಟ್ಟಿ ಹಾಕುತ್ತಾನೆ. ತದನಂತರ ಕುದುರೆಯನ್ನು ಮರಕ್ಕೆ ಕಟ್ಟಿದುದನ್ನು ಕಂಡು ಅಲ್ಲಿಗೆ ಸೈನಿಕರು ಆಗಮಿಸಿ ಬರುತ್ತಾರೆ. ತಮ್ಮ ಅಶ್ವಮೇಧದ ಕುದುರೆಯನ್ನು ಮರಕ್ಕೆ ಕಟ್ಟಿಹಾಕಿದುದನ್ನು ಕಂಡು ಸಿಟ್ಟಿಗೇಳುತ್ತಾರೆ ಮತ್ತು ಕುದುರೆಯನ್ನು ಕಟ್ಟಿದ ಲವನೆಡೆಗೆ ನೋಡಿ ಕುದುರೆಯನ್ನು ಬಿಚ್ಚುವಂತೆ ಆದೇಶಿಸುತ್ತಾರೆ. ಆದರೆ ಲವ ಕುದುರೆಯನ್ನು ಬಿಚ್ಚಲು ನಿರಾಕರಿಸುತ್ತಾನೆ. ಆದರೆ ಸೈನಿಕ ಬಂದು ಕುದುರೆಯನ್ನು ಬಿಚ್ಚಿದಾಗ ಸಿಟ್ಟಿಗೆದ್ದ ಲವ ಆತನೆಡೆಗೆ ಬಾಣ ಹೂಡುತ್ತಾನೆ. ಇದರಿಂದ ಕುಪಿತಗೊಂಡ ಸೈನಿಕರು ಪ್ರತಿದಾಳಿ ಮಾಡುತ್ತಾರೆ. ಕೊನೆಗೆ ಶತ್ರುಘ್ನನ ದಾಳಿಯಿಂದ ಲವನು ಗಾಯಗೊಳ್ಳುತ್ತಾನೆ. ಆದರೂ ಲವನು ಶತ್ರುಘ್ನನನ್ನು ಗಾಯಗೊಳಿಸಿ ರಥವನ್ನು ಅಯೋಧ್ಯೆಗೆ ಕಳುಹಿಸುತ್ತಾನೆ. ಸುದ್ದಿ ತಿಳಿದ ಕುಶನು ರಥವನ್ನು ಹಿಂಬಾಲಿಸಿ ಮತ್ತೆ ಯುದ್ದಕ್ಕೆ ಇಳಿಯುತ್ತಾನೆ. ಈ ವಿಚಾರವು ಶ್ರೀರಾಮನಿಗೆ ತಲುಪುತ್ತದೆ. ಶತ್ರುಘ್ನನು ಇಬ್ಬರು ಬಾಲಕರಿಂದ ಗಾಯಗೊಂಡಿದ್ದಾನೆ ಎಂಬ ವಿಚಾರ ಕೇಳಿ ತತ್ತರಿಸಿ ಹೋಗುತ್ತಾನೆ. ನಂತರ ಸಹಾಯಕ್ಕಾಗಿ ಲಕ್ಷ್ಮಣನನ್ನು ಕಳುಹಿಸುತ್ತಾನೆ. ಲಕ್ಷ್ಮಣನೊಂದಿಗೆ ಕಾದಾಡಿದ ಕುಶನು ಲಕ್ಷ್ಮಣನನ್ನು ಸೋಲಿಸುತ್ತಾನೆ. ಆ ವೇಳೆ ಜನರು ಸೀತಾದೇವಿಯನ್ನು ಅನ್ಯಾಯವಾಗಿ ಕಾಡಿಗೆ ಕಳುಹಿಸಿದ ಪರಿಣಾಮ ಇದು ಶಾಪವೇ ಆಗಿರಬಹುದು ಎಂದು ಮತ್ತೆ ತಮ್ಮೊಳಗೆ ತಾವು ಮಾತನಾಡಿಕೊಳ್ಳುತ್ತಾರೆ.ಇದನ್ನು ಗಮನಿಸಿದ ಶ್ರೀರಾಮನು ಮತ್ತೆ ಭಯಗೊಳ್ಳುತ್ತಾನೆ.ತದನಂತರ ಭರತ, ಹನುಮಂತ, ಜಾಂಬಾವಂತರೂ ಲವಕುಶರೊಂದಿಗೆ ಕಾದಾಡಿ ಸೋಲುತ್ತಾರೆ. ವಾಲ್ಮೀಕಿಯ ಬಾಣ ವಿದ್ಯೆ ಹಾಗೂ ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡ ಲವಕುಶರು ಬಹಳ ಧೈರ್ಯಶಾಲಿಗಳಾಗಿ ಸೆಣಸಾಡುತ್ತಾರೆ. ವಾಲ್ಮೀಕಿ ಮಹರ್ಷಿ ಆಶ್ರಮದಲ್ಲಿ ಯುದ್ದ ನಡೆಯುತ್ತಿರುವ ವಿಚಾರ ಕೇಳಿ ವಾಲ್ಮೀಕಿಯು ಓಡೋಡಿ ಬಂದು ಪ್ರಜ್ಞೆ ತಪ್ಪಿ ಬಿದ್ದವರನ್ನು ಉಪಚರಿಸುತ್ತಾರೆ. ನಂತರ ವಾಲ್ಮೀಕಿಯು " ಅಯ್ಯಾ... ರಾಜನೇ ನೀನು ಹೃದಯವಂತ. ಕಷ್ಟದಲ್ಲಿರುವವರನ್ನು ರಕ್ಷಿಸುವವನು. ಆದರೆ ದಯವಿಟ್ಟು ಕೋಪಗೊಳ್ಳಬೇಡಿ ಈ ಎರಡೂ ಮಕ್ಕಳು ನಿನ್ನ ಸುಪುತ್ರರು. ಇವರು ನಿಮ್ಮ ಪತ್ನಿ ಸೀತಾದೇವಿಗೆ ಜನಿಸಿದವರು. ನಾನು ಆಶ್ರಮದಲ್ಲಿ ಇಲ್ಲದ ವೇಳೆ ಈ ಅರಿಯದ ಕಂದಮ್ಮಗಳು ಒಂದು ದೊಡ್ಡ ತಪ್ಪಿಗೆ ಕೈ ಹಾಕಿದ್ದಾರೆ. ಅವರನ್ನು ದಯವಿಟ್ಟು ಕ್ಷಮಿಸಿ" ಎನ್ನುತ್ತಾನೆ. ಲವಕುಶರಿಂದ ರಾಮಾಯಣ ಪಠಣ ನಂತರ ವಾಲ್ಮೀಕಿಯು ಲವಕುಶರನ್ನು ಸಮಾಧಾನಿಸಿ ಆಶ್ರಮಕ್ಕೆ ಕಳುಹಿಸುತ್ತಾನೆ. ನಂತರ ಒಂದು ವೀಣೆಯನ್ನು ತರಿಸಿ ರಾಮಾಯಣವನ್ನು ಹಾಡಲು ಹೇಳುತ್ತಾನೆ. ಇದರಿಂದ ಸಂತೋಷಗೊಂಡ ರಾಮನು ತನ್ನಿಬ್ಬರು ಮಕ್ಕಳನ್ನು ಅರಮನೆಗ ಕರೆದೊಯ್ಯಲು ನಿರ್ಧರಿಸುತ್ತಾನೆ ಮತ್ತು ಸೀತಾದೇವಿಯಲ್ಲಿ ಕ್ಷಮೆಯನ್ನು ಕೇಳಿ ತನ್ನೊಂದಿಗೆ ಬರುವಂತೆ ಸೂಚಿಸುತ್ತಾನೆ. ಆಗ ಸೀತೆಯು " ತನ್ನ ಮಕ್ಕಳು ಅವರ ತಂದೆಯೊಂದಿಗೆ ಕ್ಷೇಮವಾಗಿರುವುದನ್ನು ನೋಡಲು ಬಯಸುತ್ತೇನೆ ಎನ್ನುತ್ತಾಳೆ,ನಾನು ನನ್ನ ತಾಯ್ನಾಡಿಗೆ ಮರಳಲು ಬಯಸುತ್ತೇನೆ" ಎನ್ನುತ್ತಾಳೆ. ನಂತರ ತಾನು ತನ್ನ ಮೇಲಿರುವ ಕಳಂಕದಿಂದ ದೂರವಾಗಲು ಸೀತೆಯು ಭೂದೇವಿಯಲ್ಲಿ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎನ್ನುತ್ತಾಳೆ. ಎಲ್ಲರೂ ನೋಡುತ್ತಿದ್ದಂತೆಯೇ ಸೀತೆಯು ತಾಯಿಯಾದ ಭೂದೇವಿಯನ್ನು ಅಪ್ಪಿಕೊಂಡು ಭೂಮಿಯೊಳಗೆ ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಮಹಾಭಾರತ ನಡೆದಿದ್ದು ನಿಜವೆಂದು ಸಾಬೀತುಪಡಿಸಲು ಇಲ್ಲಿದೆ ಪುರಾವೆಗಳು..! ಲವ ಕುಶರ ಸಾಮ್ರಾಜ್ಯ ಸೀತೆಯು ಭೂಗರ್ಭವನ್ನು ಸೇರಿದ ನಂತರ ರಾಮ ಅಯೋಧ್ಯೆಯನ್ನು 11000 ವರ್ಷಗಳವರೆಗೆ ಆಳುತ್ತಾನೆ (ಅಂದರೆ ಆತನ ಸಂಪೂರ್ಣ ಅಧಿಕಾರದ ಅವಧಿಯವರೆಗೆ) ಆತನ ನಿರ್ನಾಮದ ಸಮಯ ಹತ್ತಿರವಾಗುತ್ತಿದ್ದಂತೆ ಆತ ವಿಷ್ಣು ಸ್ವರೂಪವನ್ನು ತಾಳುತ್ತಾನೆ. ನಂತರ ಈ ಜಗತ್ತನ್ನು ತೊರೆದು ವೈಕುಂಠದಲ್ಲಿ ಭಗವತಿ ಲಕ್ಷ್ಮಿಯೊಂದಿಗೆ ಸರಯೂ ನದಿಯಲ್ಲಿ ಮುಳುಗುತ್ತಾನೆ. ಲವ ಮತ್ತು ಕುಶರು ಉತ್ತರಕ್ಕೆ ಹೊರಟು ಅಲ್ಲಿ ಎರಡು ನಗರಗಳನ್ನುಕಂಡುಕೊಳ್ಳುತ್ತಾರೆ ಲಾಹೋರ್ (ಲವ ಈ ನಗರವನ್ನು ಕಂಡುಕೊಂಡಿದ್ದ ರಿಂದ ಈ ಹೆಸರು ಬಂತು) ಕಸೂರ್ ( ಕುಶ ಈ ನಗರವನ್ನು ಕಂಡುಕೊಂಡಿದ್ದರಿಂದ ಈ ಹೆಸರು ಬಂತು)ಲಾಹೋರ್ ಈಗಿನ ಪಾಕಿಸ್ತಾನದ ಒಂದು ಭಾಗ. ಪಾಕಿಸ್ತಾನದ ಲಾಹೋರ್ ನ ಶಾಹಿ ಕಿಲಾದದ ಒಳಗೆ ಲವನಿಗೆ ಸಂಬಂಧಿಸಿದ ಒಂದು ದೇವಾಲಯವಿದೆ. ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶನು ನಾಗ ರಾಜಕುಮಾರಿ ಕುಮುದತ್ತಿಳ ಸಹೋದರಿಯನ್ನು ವಿವಾಹವಾಗುತ್ತಾನೆ. ಜೊತೆಗೆ ದಕ್ಷಿಣದ ಮೇಲೆ ತನ್ನ ಹಿಡಿತವನ್ನು ಆತ ಸಾಧಿಸುತ್ತಾನೆ. ಅದು ಈಗಿನ ಛತ್ತಿಸ್ಗಡ್ ಆಗಿದೆ. ಸೂರ್ಯವಂಶದ ರಜಪೂತ ವಂಶಸ್ತರು ಅಪಘಾನಿಸ್ತಾನ, ರಾಜಸ್ಥಾನ ಮತ್ತು ಪಾಕಿಸ್ತಾನದಲ್ಲಿ ಚದುರಿ ಹೋಗಿದ್ದಾರೆ. ಅವರು ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಚದುರಿಹೋದ ರಾಜಪುತ ಸೂರ್ಯವಂಶಸ್ಥರಾಗಿದ್ದರು. ಅಂತಿಮವಾಗಿ ಅವರು ರೋಹ್ತಾಸ್‌ನಲ್ಲಿ ನೆಲೆಸಿದರು. ಪಾಟಲಿಪುತ್ರದ ನಂದ ವಂಶದ ಕೊನೆಯ ರಾಜ ಪದವನಂದ ಹಾಗೂ ಆತನ ನೇರ ವಂಶಸ್ಥನಾದ ಪರೀಕ್ಷಿತ (ಅರ್ಜುನನ ಮೊಮ್ಮಗ), ಕುಶ ಇವರೆಲ್ಲರೂ ಸೂರ್ಯ ವಂಶದವರು. ಶ್ರೀರಾಮನಂತೆ ಆತನ ಮಕ್ಕಳಾದ ಲವ ಮತ್ತು ಕುಶರೆಂಬ ಇಬ್ಬರು ದಿಗ್ಗಜರಿಂದ ಆಳಲ್ಪಟ್ಟ ಸೂರ್ಯವಂಶ ಮಹೋನ್ನತಿಯನ್ನು ಸಾಧಿಸಿದರೂ ಅನಂತರ ಸೂರ್ಯವಂಶದಲ್ಲಿ ಅಂತಹ ಮಹಾತ್ಮರು ಆಳ್ವಿಕೆ ನಡೆಸಿದ ಬಗೆಗೆ ಮಾಹಿತಿಗಳಿಲ್ಲ. ಅಲ್ಲದೆ ಕೆಲವು ಪುರಾಣಗಳು, ಮಹಾಭಾರತದ ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟ ಕುಶನಿಂದ ಹಿಡಿದು ಬೃಹಂದ್ಬಲನವರೆಗೆ ವಂಶಾವಳಿಯ ಪಟ್ಟಿಯನ್ನು ನೀಡುತ್ತದೆ. ಈ ಪಟ್ಟಿಯನ್ನು ರಘುವಂಶದಿಂದ ಅಗ್ನಿವರ್ಣದವರೆಗೆ ದೃಢೀಕರಿಸಲಾಗಿದೆ. ಹಾಗೆಯೇ ಪುರಾಣಗಳು ಬೃಹಂದಳನಿಂದ ಹಿಡಿದು ಕೊನೆಯ ರಾಜನಾದ ಸುಮಿತ್ರನವರೆಗೆ ರಾಜರುಗಳ ಪಟ್ಟಿಯನ್ನು ಕೂಡ ನೀಡುತ್ತದೆ. ಆದರೆ ಈ ಪಟ್ಟಿಯಲ್ಲಿ ಶಕ್ಯ, ಸಿದ್ಧಾರ್ಥ ಮತ್ತು ರಾಹುಲರನ್ನು ಸಂಜಯ, ಪ್ರಸೇನಜಿತನ ನಡುವೆ ವೈಯಕ್ತಿಕವಾಗಿ ಗುರುತಿಸಲ್ಪಡುತ್ತದೆ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - 00 00 - ShareChat
***ಧರ್ಮವೆಂಬ_ಪರಮಪದ*** ಬಡಬ್ರಾಹ್ಮಣನೊಬ್ಬ ಧನವನ್ನೇ ಅಪೇಕ್ಷಿಸಿ ಕಾಮ್ಯಯಜ್ಞವೊಂದನ್ನು ಮಾಡಲು ನಿರ್ಧರಿಸಿದ. ಆದರೆ ಯಜ್ಞಮಾಡುವಷ್ಟು ಧನವೂ ಅವನ ಬಳಿ ಇರಲಿಲ್ಲ. ಅದಕ್ಕಾಗಿ ಶ್ರದ್ಧಾಭಕ್ತಿಯಿಂದ ಶುದ್ಧಮನಸ್ಸಿನಿಂದ ದೇವತೆಗಳನ್ನು ಪ್ರಾರ್ಥಿಸಿದ. ಆದರೆ ಯಾವುದೇ ದೇವತೆಯಿಂದ ಅವನಿಗೆ ಧನಪ್ರಾಪ್ತಿಯಾಗಲಿಲ್ಲ. ಆಗ ಬ್ರಾಹ್ಮಣನು ಮನುಷ್ಯರಿಂದ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ದೇವತೆಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ದೇವತೆಯು ನನಗೆ ಬೇಗ ಪ್ರಸನ್ನವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವಾಗ ‘ಕುಂಡಧಾರ’ ಎಂಬ ದೇವತೆಗಳ ಅನುಚರನು ಕಾಣಿಸಿಕೊಳ್ಳುತ್ತಾನೆ. ಅವನನ್ನೇ ಧ್ಯಾನಿಸುತ್ತ ಸರ್ವಸೇವೆಗಳಿಂದ ಪ್ರಸನ್ನಗೊಳಿಸಿದ ಬ್ರಾಹ್ಮಣನಿಗೆ ಆ ದಿನ ಕನಸೊಂದು ಉಂಟಾಯಿತು. ಉತ್ತಮಕರ್ಮಗಳನ್ನು ಮಾಡಿದ ಯಾಚಕರಿಗೆ ದೇವತೆಗಳು ಅವರು ಅಪೇಕ್ಷಿಸಿದ ರಾಜ್ಯ-ಸಂಪತ್ತನ್ನು ಅನುಗ್ರಹಿಸುತ್ತಿದ್ದರು ಹಾಗೂ ಕೆಟ್ಟಕರ್ಮಗಳ ಫಲವನ್ನು ಅನುಭವಿಸುವ ಸಂದರ್ಭದಲ್ಲಿ ತಾವು ಹಿಂದೆ ಅನುಗ್ರಹಿಸಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಕುಂಡಧಾರನು ಗಮನಿಸಿ ತನ್ನ ಮಿತ್ರನಾದ ಬ್ರಾಹ್ಮಣನು ಕ್ಷಣಿಕ ಧನಾಪೇಕ್ಷೆಗೆ ಒಳಗಾಗದೇ ಶಾಶ್ವತವಾದ ಶರೀರಕ್ಲೇಶಗಳಿಂದ ರಹಿತವಾದ ಧರ್ಮದ ಫಲವನ್ನು ಅನುಭವಿಸುತ್ತ ಸದಾ ಧಾರ್ಮಿಕನಾಗಿರಲೆಂದೂ ಮತ್ತು ಅವನ ಬುದ್ಧಿಯು ಧರ್ಮದಲ್ಲೇ ಸ್ಥಿರವಾಗಿರುವಂತೆ ಅನುಗ್ರಹಿಸಲು ದೇವತೆಗಳಲ್ಲಿ ಕೇಳಿಕೊಂಡ. ದೇವತೆಗಳು ಸುಪ್ರೀತರಾಗಿ “ಅಸ್ತು” ಎಂದು ನುಡಿದರು. ತಕ್ಷಣ ಕನಸಿನಿಂದ ಎಚ್ಚರಗೊಂಡ ಬ್ರಾಹ್ಮಣನ ಪಕ್ಕದಲ್ಲಿ ನಾರುಬಟ್ಟೆಗಳು ಕಾಣಿಸಿದವು. ಅದನ್ನು ನೋಡಿದವನಿಗೆ ಕುಂಡಧಾರನೂ ನನ್ನ ತಪಸ್ಸಿಗೆ ಒಲಿಯಲಿಲ್ಲ ಎಂದು ಭಾವಿಸಿ ವೈರಾಗ್ಯದಿಂದ ಇನ್ನೂ ಹೆಚ್ಚಿನ ತಪಸ್ಸಾಧನೆಗಾಗಿ ಕಾಡಿಗೆ ಹೊರಟ. ಅನ್ನಾಹಾರಗಳನ್ನು ತ್ಯಜಿಸಿ, ವಾಯುಭಕ್ಷನಾಗಿ ಅತ್ಯಂತ ಕಠೋರ ವ್ರತನಿಷ್ಠನಾಗಿ ತಪಸ್ಸಿಗೆ ತೊಡಗಿದ. ಕಾಲಾನಂತರದಲ್ಲಿ ಅವನಿಗೆ ದಿವ್ಯದೃಷ್ಟಿಯುಂಟಾಯಿತು. ಅವನು ಮನಸ್ಸಿನಲ್ಲಿ ಯೋಚಿಸಿದ ಸಂಕಲ್ಪವು ಸಿದ್ಧಿಸುವಂತಹ, ಹೇಳಿದ ಮಾತು ಸತ್ಯವಾಗುವ ವಿಶೇಷ ಸಿದ್ಧಿಯು ಒಲಿಯಿತು. ಇದರಿಂದ ಬ್ರಾಹ್ಮಣನಿಗೆ ಸಂತೋಷವಾಯಿತು. ತಾನು ಅನುಗ್ರಹಿಸಿದವರಿಗೆ ರಾಜ್ಯ-ಸಂಪತ್ತು ಸಿಗುವಂತಹ ಸಿದ್ಧಿ ಅದು. ಅದೇ ಸಮಯಕ್ಕೆ ಕುಂಡಧಾರನೇ ಸಾಕ್ಷಾತ್ತಾಗಿ ಕಾಣಿಸಿಕೊಂಡು “ವಿಪ್ರಶ್ರೇಷ್ಠನೇ, ಧನಸಂಪತ್ತಿನ ಅಪೇಕ್ಷಿಯಾಗಿ ನೀನು ದೇವತೆಗಳನ್ನು ಆರಾಧಿಸಿದೆ. ನಿನಗೀಗ ದಿವ್ಯದೃಷ್ಟಿ ಪ್ರಾಪ್ತವಾಗಿದೆ. ರಾಜ್ಯ-ಕೋಶ-ಸಂಪತ್ತಿನಿಂದ ಮೆರೆದ ರಾಜರೆಲ್ಲ ಈಗ ಹೇಗಿದ್ದಾರೆ, ಅವರೆಲ್ಲ ಯಾವ ಲೋಕಗಳಿಗೆ ಹೋಗಿದ್ದಾರೆ ಎಂಬುದನ್ನು ನೋಡು” ಎಂದು ಹೇಳಿದ. ಬ್ರಾಹ್ಮಣನು ಅದೇ ರೀತಿಯಲ್ಲಿ ನೋಡಲಾಗಿ ಅನೇಕ ರಾಜರ ನರಕದಲ್ಲಿ ಬಿದ್ದಿರುವುದನ್ನು ಕಂಡ. ಕುಂಡಧಾರನು ಶಾಂತದನಿಯಲ್ಲಿ ಬ್ರಾಹ್ಮಣನಿಗೆ “ವಿಪ್ರೋತ್ತಮ, ದಿವ್ಯದೃಷ್ಟಿಯಿಂದ ರಾಜರ ದುರವಸ್ಥೆಯನ್ನು ಪುನಃ ನೋಡು, ಯಾರು ಧನವನ್ನೂ, ಲೌಕಿಕ ಆಸೆಗಳನ್ನು ಅಪೇಕ್ಷಿಸುವರೋ ಅಂತಹವರಿಗೆ ಸ್ವರ್ಗದ ಬಾಗಿಲು ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ನೀನು ನನ್ನನ್ನು ಪೂಜಿಸಿದ ಕೂಡಲೇ ನಾನು ನಿನಗೆ ಧನವನ್ನು ಅನುಗ್ರಹಿಸಿದ್ದರೆ ನಿನ್ನ ಗತಿಯೂ ಇದಕ್ಕೆ ಹೊರತಾಗಿರಲಿಲ್ಲ. ಭೋಗವನ್ನು ಬಯಸುವವರನ್ನು ಕಾಮ, ಕ್ರೋಧ, ಲೋಭ, ಭಯ, ಮದ, ನಿದ್ರೆ, ತೂಕಡಿಕೆ, ಆಲಸ್ಯವೇ ಮೊದಲಾದ ಶತ್ರುಗಳು ಆಕ್ರಮಿಸುತ್ತವೆ. ದೇವತೆಗಳಿಗೆ ಯಾವಾಗಲೂ ಮಾನವರು ತಪಸ್ಸು ಮಾಡಿ ದೈವತ್ವಕ್ಕೆ ಏರುತ್ತಾರೆಂಬ ಭಯವಿದೆ. ಆದ್ದರಿಂದಲೇ ಕಾಮ-ಕ್ರೋಧಾದಿಗಳನ್ನು ಹುಟ್ಟಿಸಿ ಮನುಷ್ಯನು ಮಾಡುವ ತಪಸ್ಸಿಗೆ, ಧರ್ಮಕಾರ್ಯಗಳಿಗೆ ಎಲ್ಲಾ ರೀತಿಯಿಂದಲೂ ತೊಡಕನ್ನು ಉಂಟುಮಾಡುತ್ತವೆ. ಆದರೆ ಧರ್ಮಾತ್ಮನಾಗಲೆಂದೇ ದೇವತೆಗಳಿಂದ ಅನುಗೃಹೀತನಾದವನು ನೀನು. ನಿನ್ನ ತಪೋಬಲದಿಂದ ಯಾಚಕರಿಗೆ ರಾಜ್ಯವನ್ನು, ಧನವನ್ನೂ ಅನುಗ್ರಹಿಸುವ ಸಾಮರ್ಥ್ಯವನ್ನು ಪಡೆದಿರುವೆ. ಇದರಿಂದ ಲೋಕಕ್ಕೆ ಕಲ್ಯಾಣವಾಗುವ ಕಾರ್ಯಗಳನ್ನೇ ಮಾಡು” ಎಂದಾಗ ಬ್ರಾಹ್ಮಣನಿಗೆ ತಾನೆಣಿಸಿದ್ದು ತಪ್ಪು ಎಂಬುದು ತಿಳಿಯಿತು. ಕುಂಡಧಾರನಿಗೆ ಸಾಷ್ಟಾಂಗವೆರಗಿ “ ದೇವಾ, ಧನಾಪೇಕ್ಷಿಯಾದ ನನಗೆ ದೇವತೆಗಳಿಂದ ಅನುಗ್ರಹಿಸಲ್ಪಟ್ಟಿದ್ದ ಧನಾಗಮವನ್ನು ನೀನು ತಪ್ಪಿಸಿದೆ ಎಂದು ನಿನ್ನನ್ನು ಅನ್ಯತಾ ಭಾವಿಸಿದೆ. ಆದರೆ ನೀನು ನನ್ನ ನಿಜವಾದ ಮಿತ್ರನು. ನನಗೆ ಮಹಾನುಗ್ರಹವನ್ನೇ ಮಾಡಿರುವೆ” ಎಂದಾಗ ಕುಂಡಧಾರನು ಅವನನ್ನು ಆತ್ಮೀಯವಾಗಿ ಅಪ್ಪಿಕೊಂಡು ಸಂತೈಸಿ ಹರಸಿ ಹೊರಟುಹೋದನು. ಮುಂದೆ ಬ್ರಾಹ್ಮಣೋತ್ತಮನು ತನ್ನ ತಪಸ್ಸಿದ್ಧಿಯಿಂದ ಧರ್ಮಾಚರಣೆಯಿಂದ ಸತ್ಕಾರ್ಯಗಳನ್ನು ನಡೆಸುತ್ತಾ ಲೋಕಕ್ಕೆ ಹಿತವಾದ ಕಾರ್ಯಗಳಲ್ಲಿ ತೊಡಗಿಕೊಂಡನು. ದೇವತೆಗಳು, ಬ್ರಾಹ್ಮಣರು, ಸತ್ಪುರುಷರು, ಎಲ್ಲರೂ ಜಗತ್ತಿನಲ್ಲಿ ಧಾರ್ಮಿಕರನ್ನು ಮಾತ್ರವೇ ಪೂಜಿಸುತ್ತಾರೆ. ಕಾಮೋಪಭೋಗಿಗಳನ್ನು ಯಾರೂ ಪೂಜಿಸುವುದಿಲ್ಲ. ಧನದಲ್ಲಿನ ಸುಖವು ಕ್ಷಣಿಕ, ಧರ್ಮಮಾರ್ಗದಲ್ಲಿನ ಸುಖವೇ ಶ್ರೇಷ್ಠ ಮತ್ತು ಶಾಶ್ವತ!! ಯಾಕೆ ಎಲ್ಲರೂ ಪರಮಪದವನ್ನು ಪಡೆಯಲು ಅಥವಾ ಪರಮಾತ್ಮನಲ್ಲಿ ಒಂದಾಗಲು ಸಾಧ್ಯವಿಲ್ಲ? ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವ ಒಂದು ಮಾತನ್ನು ಗಮನಿಸಿ. ಸಾಮಾನ್ಯವಾಗಿ ಮನುಷ್ಯರು ತಮ್ಮ ಐಹಿಕಸುಖಾಂಕ್ಷಿಗಳಾಗಿಯೇ ದೇವರನ್ನು ಆರಾಧಿಸುತ್ತಾರೆ, ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಕ್ಷಾತ್ ಪರಮಾತ್ಮನನ್ನೇ ಹೊಂದುವ ಸಾಧನೆಯನ್ನು ತೊಡಗಿರುತ್ತಾರೆ. ಯರ‍್ಯಾರು ಲೌಕಿಕ ವಸ್ತುಗಳನ್ನು ಬಯಸುತ್ತಾರೋ ಅವರಿಗೆ ಭಗವಂತ ಅವರು ಬಯಸಿದ್ದನ್ನು ಮಾತ್ರವೇ ಕೊಡುತ್ತಾನೆ. ಯಾರು ಅವನಲ್ಲೇ ಶರಣಾಗತಿ ಹೊಂದಿ ಅನವರತ ಅವನನ್ನೇ ಧ್ಯಾನಿಸುತ್ತಾರೋ ಅಂತಹವರಿಗೆ ಮಾತ್ರವೇ ತನ್ನಲ್ಲಿ ಸೇರಿಸಿಕೊಳ್ಳುತ್ತಾನೆ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ವಿಮಲ್ ನ್ಯೂಟ್ರಿಷನ್ ಸೆಂಟರ್ ನಿಂತಾಗ , ಮನೆಯಲ್ಲಿ ని ೈವೇದ . 3 0 ದೇವರು ತಾನೇ ಹುಡುಗನ ಬಂದು ಭಕ್ತನ ಕೈಯಿಂದ ರೂಪದಲ್ಲಿ ೧ ಪಡೆದದ್ದು బిల్ల' ಭಕ್ತ ಪರಾಧೀನ" 0 1 ಎಂಬ ಮಾತನ್ನು : ನೆನಪಿಸುತ್ತದೆ . ವಿಮಲ್ ನ್ಯೂಟ್ರಿಷನ್ ಸೆಂಟರ್ ನಿಂತಾಗ , ಮನೆಯಲ್ಲಿ ని ೈವೇದ . 3 0 ದೇವರು ತಾನೇ ಹುಡುಗನ ಬಂದು ಭಕ್ತನ ಕೈಯಿಂದ ರೂಪದಲ್ಲಿ ೧ ಪಡೆದದ್ದು బిల్ల' ಭಕ್ತ ಪರಾಧೀನ" 0 1 ಎಂಬ ಮಾತನ್ನು : ನೆನಪಿಸುತ್ತದೆ . - ShareChat
***ಧರ್ಮವೆಂಬ_ಪರಮಪದ*** ಬಡಬ್ರಾಹ್ಮಣನೊಬ್ಬ ಧನವನ್ನೇ ಅಪೇಕ್ಷಿಸಿ ಕಾಮ್ಯಯಜ್ಞವೊಂದನ್ನು ಮಾಡಲು ನಿರ್ಧರಿಸಿದ. ಆದರೆ ಯಜ್ಞಮಾಡುವಷ್ಟು ಧನವೂ ಅವನ ಬಳಿ ಇರಲಿಲ್ಲ. ಅದಕ್ಕಾಗಿ ಶ್ರದ್ಧಾಭಕ್ತಿಯಿಂದ ಶುದ್ಧಮನಸ್ಸಿನಿಂದ ದೇವತೆಗಳನ್ನು ಪ್ರಾರ್ಥಿಸಿದ. ಆದರೆ ಯಾವುದೇ ದೇವತೆಯಿಂದ ಅವನಿಗೆ ಧನಪ್ರಾಪ್ತಿಯಾಗಲಿಲ್ಲ. ಆಗ ಬ್ರಾಹ್ಮಣನು ಮನುಷ್ಯರಿಂದ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ದೇವತೆಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ದೇವತೆಯು ನನಗೆ ಬೇಗ ಪ್ರಸನ್ನವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವಾಗ ‘ಕುಂಡಧಾರ’ ಎಂಬ ದೇವತೆಗಳ ಅನುಚರನು ಕಾಣಿಸಿಕೊಳ್ಳುತ್ತಾನೆ. ಅವನನ್ನೇ ಧ್ಯಾನಿಸುತ್ತ ಸರ್ವಸೇವೆಗಳಿಂದ ಪ್ರಸನ್ನಗೊಳಿಸಿದ ಬ್ರಾಹ್ಮಣನಿಗೆ ಆ ದಿನ ಕನಸೊಂದು ಉಂಟಾಯಿತು. ಉತ್ತಮಕರ್ಮಗಳನ್ನು ಮಾಡಿದ ಯಾಚಕರಿಗೆ ದೇವತೆಗಳು ಅವರು ಅಪೇಕ್ಷಿಸಿದ ರಾಜ್ಯ-ಸಂಪತ್ತನ್ನು ಅನುಗ್ರಹಿಸುತ್ತಿದ್ದರು ಹಾಗೂ ಕೆಟ್ಟಕರ್ಮಗಳ ಫಲವನ್ನು ಅನುಭವಿಸುವ ಸಂದರ್ಭದಲ್ಲಿ ತಾವು ಹಿಂದೆ ಅನುಗ್ರಹಿಸಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಕುಂಡಧಾರನು ಗಮನಿಸಿ ತನ್ನ ಮಿತ್ರನಾದ ಬ್ರಾಹ್ಮಣನು ಕ್ಷಣಿಕ ಧನಾಪೇಕ್ಷೆಗೆ ಒಳಗಾಗದೇ ಶಾಶ್ವತವಾದ ಶರೀರಕ್ಲೇಶಗಳಿಂದ ರಹಿತವಾದ ಧರ್ಮದ ಫಲವನ್ನು ಅನುಭವಿಸುತ್ತ ಸದಾ ಧಾರ್ಮಿಕನಾಗಿರಲೆಂದೂ ಮತ್ತು ಅವನ ಬುದ್ಧಿಯು ಧರ್ಮದಲ್ಲೇ ಸ್ಥಿರವಾಗಿರುವಂತೆ ಅನುಗ್ರಹಿಸಲು ದೇವತೆಗಳಲ್ಲಿ ಕೇಳಿಕೊಂಡ. ದೇವತೆಗಳು ಸುಪ್ರೀತರಾಗಿ “ಅಸ್ತು” ಎಂದು ನುಡಿದರು. ತಕ್ಷಣ ಕನಸಿನಿಂದ ಎಚ್ಚರಗೊಂಡ ಬ್ರಾಹ್ಮಣನ ಪಕ್ಕದಲ್ಲಿ ನಾರುಬಟ್ಟೆಗಳು ಕಾಣಿಸಿದವು. ಅದನ್ನು ನೋಡಿದವನಿಗೆ ಕುಂಡಧಾರನೂ ನನ್ನ ತಪಸ್ಸಿಗೆ ಒಲಿಯಲಿಲ್ಲ ಎಂದು ಭಾವಿಸಿ ವೈರಾಗ್ಯದಿಂದ ಇನ್ನೂ ಹೆಚ್ಚಿನ ತಪಸ್ಸಾಧನೆಗಾಗಿ ಕಾಡಿಗೆ ಹೊರಟ. ಅನ್ನಾಹಾರಗಳನ್ನು ತ್ಯಜಿಸಿ, ವಾಯುಭಕ್ಷನಾಗಿ ಅತ್ಯಂತ ಕಠೋರ ವ್ರತನಿಷ್ಠನಾಗಿ ತಪಸ್ಸಿಗೆ ತೊಡಗಿದ. ಕಾಲಾನಂತರದಲ್ಲಿ ಅವನಿಗೆ ದಿವ್ಯದೃಷ್ಟಿಯುಂಟಾಯಿತು. ಅವನು ಮನಸ್ಸಿನಲ್ಲಿ ಯೋಚಿಸಿದ ಸಂಕಲ್ಪವು ಸಿದ್ಧಿಸುವಂತಹ, ಹೇಳಿದ ಮಾತು ಸತ್ಯವಾಗುವ ವಿಶೇಷ ಸಿದ್ಧಿಯು ಒಲಿಯಿತು. ಇದರಿಂದ ಬ್ರಾಹ್ಮಣನಿಗೆ ಸಂತೋಷವಾಯಿತು. ತಾನು ಅನುಗ್ರಹಿಸಿದವರಿಗೆ ರಾಜ್ಯ-ಸಂಪತ್ತು ಸಿಗುವಂತಹ ಸಿದ್ಧಿ ಅದು. ಅದೇ ಸಮಯಕ್ಕೆ ಕುಂಡಧಾರನೇ ಸಾಕ್ಷಾತ್ತಾಗಿ ಕಾಣಿಸಿಕೊಂಡು “ವಿಪ್ರಶ್ರೇಷ್ಠನೇ, ಧನಸಂಪತ್ತಿನ ಅಪೇಕ್ಷಿಯಾಗಿ ನೀನು ದೇವತೆಗಳನ್ನು ಆರಾಧಿಸಿದೆ. ನಿನಗೀಗ ದಿವ್ಯದೃಷ್ಟಿ ಪ್ರಾಪ್ತವಾಗಿದೆ. ರಾಜ್ಯ-ಕೋಶ-ಸಂಪತ್ತಿನಿಂದ ಮೆರೆದ ರಾಜರೆಲ್ಲ ಈಗ ಹೇಗಿದ್ದಾರೆ, ಅವರೆಲ್ಲ ಯಾವ ಲೋಕಗಳಿಗೆ ಹೋಗಿದ್ದಾರೆ ಎಂಬುದನ್ನು ನೋಡು” ಎಂದು ಹೇಳಿದ. ಬ್ರಾಹ್ಮಣನು ಅದೇ ರೀತಿಯಲ್ಲಿ ನೋಡಲಾಗಿ ಅನೇಕ ರಾಜರ ನರಕದಲ್ಲಿ ಬಿದ್ದಿರುವುದನ್ನು ಕಂಡ. ಕುಂಡಧಾರನು ಶಾಂತದನಿಯಲ್ಲಿ ಬ್ರಾಹ್ಮಣನಿಗೆ “ವಿಪ್ರೋತ್ತಮ, ದಿವ್ಯದೃಷ್ಟಿಯಿಂದ ರಾಜರ ದುರವಸ್ಥೆಯನ್ನು ಪುನಃ ನೋಡು, ಯಾರು ಧನವನ್ನೂ, ಲೌಕಿಕ ಆಸೆಗಳನ್ನು ಅಪೇಕ್ಷಿಸುವರೋ ಅಂತಹವರಿಗೆ ಸ್ವರ್ಗದ ಬಾಗಿಲು ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ನೀನು ನನ್ನನ್ನು ಪೂಜಿಸಿದ ಕೂಡಲೇ ನಾನು ನಿನಗೆ ಧನವನ್ನು ಅನುಗ್ರಹಿಸಿದ್ದರೆ ನಿನ್ನ ಗತಿಯೂ ಇದಕ್ಕೆ ಹೊರತಾಗಿರಲಿಲ್ಲ. ಭೋಗವನ್ನು ಬಯಸುವವರನ್ನು ಕಾಮ, ಕ್ರೋಧ, ಲೋಭ, ಭಯ, ಮದ, ನಿದ್ರೆ, ತೂಕಡಿಕೆ, ಆಲಸ್ಯವೇ ಮೊದಲಾದ ಶತ್ರುಗಳು ಆಕ್ರಮಿಸುತ್ತವೆ. ದೇವತೆಗಳಿಗೆ ಯಾವಾಗಲೂ ಮಾನವರು ತಪಸ್ಸು ಮಾಡಿ ದೈವತ್ವಕ್ಕೆ ಏರುತ್ತಾರೆಂಬ ಭಯವಿದೆ. ಆದ್ದರಿಂದಲೇ ಕಾಮ-ಕ್ರೋಧಾದಿಗಳನ್ನು ಹುಟ್ಟಿಸಿ ಮನುಷ್ಯನು ಮಾಡುವ ತಪಸ್ಸಿಗೆ, ಧರ್ಮಕಾರ್ಯಗಳಿಗೆ ಎಲ್ಲಾ ರೀತಿಯಿಂದಲೂ ತೊಡಕನ್ನು ಉಂಟುಮಾಡುತ್ತವೆ. ಆದರೆ ಧರ್ಮಾತ್ಮನಾಗಲೆಂದೇ ದೇವತೆಗಳಿಂದ ಅನುಗೃಹೀತನಾದವನು ನೀನು. ನಿನ್ನ ತಪೋಬಲದಿಂದ ಯಾಚಕರಿಗೆ ರಾಜ್ಯವನ್ನು, ಧನವನ್ನೂ ಅನುಗ್ರಹಿಸುವ ಸಾಮರ್ಥ್ಯವನ್ನು ಪಡೆದಿರುವೆ. ಇದರಿಂದ ಲೋಕಕ್ಕೆ ಕಲ್ಯಾಣವಾಗುವ ಕಾರ್ಯಗಳನ್ನೇ ಮಾಡು” ಎಂದಾಗ ಬ್ರಾಹ್ಮಣನಿಗೆ ತಾನೆಣಿಸಿದ್ದು ತಪ್ಪು ಎಂಬುದು ತಿಳಿಯಿತು. ಕುಂಡಧಾರನಿಗೆ ಸಾಷ್ಟಾಂಗವೆರಗಿ “ ದೇವಾ, ಧನಾಪೇಕ್ಷಿಯಾದ ನನಗೆ ದೇವತೆಗಳಿಂದ ಅನುಗ್ರಹಿಸಲ್ಪಟ್ಟಿದ್ದ ಧನಾಗಮವನ್ನು ನೀನು ತಪ್ಪಿಸಿದೆ ಎಂದು ನಿನ್ನನ್ನು ಅನ್ಯತಾ ಭಾವಿಸಿದೆ. ಆದರೆ ನೀನು ನನ್ನ ನಿಜವಾದ ಮಿತ್ರನು. ನನಗೆ ಮಹಾನುಗ್ರಹವನ್ನೇ ಮಾಡಿರುವೆ” ಎಂದಾಗ ಕುಂಡಧಾರನು ಅವನನ್ನು ಆತ್ಮೀಯವಾಗಿ ಅಪ್ಪಿಕೊಂಡು ಸಂತೈಸಿ ಹರಸಿ ಹೊರಟುಹೋದನು. ಮುಂದೆ ಬ್ರಾಹ್ಮಣೋತ್ತಮನು ತನ್ನ ತಪಸ್ಸಿದ್ಧಿಯಿಂದ ಧರ್ಮಾಚರಣೆಯಿಂದ ಸತ್ಕಾರ್ಯಗಳನ್ನು ನಡೆಸುತ್ತಾ ಲೋಕಕ್ಕೆ ಹಿತವಾದ ಕಾರ್ಯಗಳಲ್ಲಿ ತೊಡಗಿಕೊಂಡನು. ದೇವತೆಗಳು, ಬ್ರಾಹ್ಮಣರು, ಸತ್ಪುರುಷರು, ಎಲ್ಲರೂ ಜಗತ್ತಿನಲ್ಲಿ ಧಾರ್ಮಿಕರನ್ನು ಮಾತ್ರವೇ ಪೂಜಿಸುತ್ತಾರೆ. ಕಾಮೋಪಭೋಗಿಗಳನ್ನು ಯಾರೂ ಪೂಜಿಸುವುದಿಲ್ಲ. ಧನದಲ್ಲಿನ ಸುಖವು ಕ್ಷಣಿಕ, ಧರ್ಮಮಾರ್ಗದಲ್ಲಿನ ಸುಖವೇ ಶ್ರೇಷ್ಠ ಮತ್ತು ಶಾಶ್ವತ!! ಯಾಕೆ ಎಲ್ಲರೂ ಪರಮಪದವನ್ನು ಪಡೆಯಲು ಅಥವಾ ಪರಮಾತ್ಮನಲ್ಲಿ ಒಂದಾಗಲು ಸಾಧ್ಯವಿಲ್ಲ? ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವ ಒಂದು ಮಾತನ್ನು ಗಮನಿಸಿ. ಸಾಮಾನ್ಯವಾಗಿ ಮನುಷ್ಯರು ತಮ್ಮ ಐಹಿಕಸುಖಾಂಕ್ಷಿಗಳಾಗಿಯೇ ದೇವರನ್ನು ಆರಾಧಿಸುತ್ತಾರೆ, ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಕ್ಷಾತ್ ಪರಮಾತ್ಮನನ್ನೇ ಹೊಂದುವ ಸಾಧನೆಯನ್ನು ತೊಡಗಿರುತ್ತಾರೆ. ಯರ‍್ಯಾರು ಲೌಕಿಕ ವಸ್ತುಗಳನ್ನು ಬಯಸುತ್ತಾರೋ ಅವರಿಗೆ ಭಗವಂತ ಅವರು ಬಯಸಿದ್ದನ್ನು ಮಾತ್ರವೇ ಕೊಡುತ್ತಾನೆ. ಯಾರು ಅವನಲ್ಲೇ ಶರಣಾಗತಿ ಹೊಂದಿ ಅನವರತ ಅವನನ್ನೇ ಧ್ಯಾನಿಸುತ್ತಾರೋ ಅಂತಹವರಿಗೆ ಮಾತ್ರವೇ ತನ್ನಲ್ಲಿ ಸೇರಿಸಿಕೊಳ್ಳುತ್ತಾನೆ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ShareChat
ಹಿಂದೂ ಋಷಿಗಳು - ಋಷಿ, ಮುನಿ, ಸಾಧು ಮತ್ತು ಸನ್ಯಾಸಿಗಳ ಮಹತ್ವ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಋಷಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಋಷಿಗಳು ಮತ್ತು ಮುನಿಗಳನ್ನು ಸದಾಚಾರದ ಮಾರ್ಗದರ್ಶಕರೆಂದು ಪರಿಗಣಿಸಲಾಗುತ್ತದೆ; ಅವರು ಯಾವಾಗಲೂ ತಮ್ಮ ಜ್ಞಾನ ಮತ್ತು ಅಭ್ಯಾಸದಿಂದ ಜನರು ಮತ್ತು ಸಮಾಜದ ಕಲ್ಯಾಣವನ್ನು ಮಾಡುತ್ತಿದ್ದಾರೆ. ಇಂದಿಗೂ ಸಹ, ಕಾಡುಗಳಲ್ಲಿ ಅಥವಾ ಯಾವುದೇ ತೀರ್ಥಯಾತ್ರೆಯ ಸ್ಥಳಗಳಲ್ಲಿ ಋಷಿಗಳು, ಮುನಿಗಳು, ಸಾಧುಗಳು ಮತ್ತು ಸನ್ಯಾಸಿಗಳು ಇದ್ದಾರೆ. ಅವರು ಯಾವಾಗಲೂ ತಮ್ಮ ಜ್ಞಾನವನ್ನು ತಪಸ್ಸು, ಅಭ್ಯಾಸ ಮತ್ತು ಚಿಂತನೆಯ ಮೂಲಕ ಪರಿಷ್ಕರಿಸುತ್ತಾರೆ. ಅವರು ಸಾಮಾನ್ಯವಾಗಿ ಭೌತಿಕ ಸುಖಗಳನ್ನು ತ್ಯಜಿಸುತ್ತಾರೆ, ಆದರೂ ಅವರಲ್ಲಿ ಕೆಲವರು ಗೃಹಸ್ಥ ಜೀವನವನ್ನು ನಡೆಸುತ್ತಾರೆ. ರಾಮಚರಿತಮಾನಸದಲ್ಲಿ ಮತ್ತು ಸಾಮಾನ್ಯವಾಗಿ ಜೀವನದಲ್ಲಿಯೂ ಸಹ, ನೀವು ಋಷಿ, ಮುನಿ, ಸಾಧು, ಸನ್ಯಾಸಿ, ಪಂಡಿತ, ಪುರೋಹಿತ, ಪೂಜಾರಿ, ಆಚಾರ್ಯ, ಬ್ರಾಹ್ಮಣ ಮತ್ತು ಗುರು ಎಂಬ ಪದಗಳನ್ನು ನೋಡುತ್ತೀರಿ. ಈ ಪದಗಳನ್ನು ಮತ್ತು ಅವುಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಮಯ ಮತ್ತು ಸೃಷ್ಟಿಯ ಆರಂಭದಿಂದಲೇ ಪ್ರಾರಂಭಿಸೋಣ. ಹಿಂದೂ ಧರ್ಮದ ಪ್ರಕಾರ ಭಗವಾನ್ ನಾರಾಯಣನು ಬ್ರಹ್ಮಾಂಡದ ಸೃಷ್ಟಿಗೆ ಕಾರಣ . ಅನಂತ ವಿಶ್ವಗಳು ಎಲ್ಲಾ ಸಮಯದಲ್ಲೂ ಭಗವಾನ್ ನಾರಾಯಣನ ಇಚ್ಛೆಯಿಂದ ಮಾಯಾ ಅಥವಾ ಶಕ್ತಿ ಅಥವಾ ಜಗದಂಬಾ ಎಂದು ಕರೆಯಲ್ಪಡುವ ತನ್ನ ಭೌತಿಕ ಶಕ್ತಿಯ ಮೂಲಕ ರೂಪುಗೊಳ್ಳುತ್ತವೆ ಮತ್ತು ನಾಶವಾಗುತ್ತವೆ. ಪ್ರತಿಯೊಂದು ವಿಶ್ವವು ತ್ರಿಮೂರ್ತಿಗಳಿಂದ ನಡೆಸಲ್ಪಡುತ್ತದೆ - ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಸಂರಕ್ಷಕ) ಮತ್ತು ಶಿವ (ವಿನಾಶಕ). ಬ್ರಹ್ಮ ದೇವರು ಅನೇಕ ಋಷಿಗಳು, ಮುನಿಗಳು ಮತ್ತು ಮೊದಲ ಮಾನವ ದಂಪತಿಗಳನ್ನು ಸೃಷ್ಟಿಸಿದ್ದಾರೆ, ಅವರಿಗೆ ಈ ಭೂಮಿಯ ಮೇಲೆ ಮಾನವ ಜೀವವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸಮಾಜದ ಕಲ್ಯಾಣ ಋಷಿಗಳು, ಮುನಿಗಳು, ಸಾಧುಗಳು ಅಥವಾ ಸನ್ಯಾಸಿಗಳು ಎಲ್ಲರೂ ಧರ್ಮಕ್ಕೆ ಮೀಸಲಾದ ಜನರು, ಅವರು ಲೌಕಿಕ ಬಾಂಧವ್ಯದ ಬಂಧನದಿಂದ ದೂರವಿರುವ ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ತಮ್ಮ ಜ್ಞಾನವನ್ನು ಪರಿಷ್ಕರಿಸುತ್ತಾರೆ ಮತ್ತು ಪರಮ ದೈವಿಕ ಜ್ಞಾನವನ್ನು ಪಡೆಯಲು ತಪಸ್ಸು, ಸಾಧನೆ, ಧ್ಯಾನ ಇತ್ಯಾದಿಗಳನ್ನು ಮಾಡುತ್ತಾರೆ. ಅವರು ಭೂಮಿಯ ಮೇಲೆ ಮಾತ್ರವಲ್ಲದೆ ಇತರ ಎಲ್ಲಾ ಲೋಕಗಳಲ್ಲಿರುವ ಎಲ್ಲಾ ಜೀವಿಗಳ ಧರ್ಮದ ಸ್ಥಾಪನೆ, ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ, ಸಂತೋಷಕ್ಕಾಗಿ ನಿರಂತರವಾಗಿ ಸರ್ವಶಕ್ತನನ್ನು ಪ್ರಾರ್ಥಿಸುತ್ತಾರೆ. ಈ ಕಲಿಯುಗದ ಯುಗದಲ್ಲಿ ಸಾಮಾನ್ಯ ಮನುಷ್ಯ ಏನು ಮಾಡಬೇಕು? ಕಲಿಯುಗದಲ್ಲಿ, ಮನುಷ್ಯರು ಇಷ್ಟೊಂದು ತಪಸ್ಸು, ತಪಸ್ಸು, ಯಜ್ಞ ಇತ್ಯಾದಿಗಳನ್ನು ಮಾಡುವುದು ತುಂಬಾ ಕಷ್ಟ. ರಾಮಚರಿತಮಾನಸದ ಪ್ರಕಾರ ಕಲಿಯುಗದಲ್ಲಿ ಜನರಿಗೆ ಇರುವ ಏಕೈಕ ಪರಿಹಾರವೆಂದರೆ ಭಗವಂತನ (ರಾಮ, ಕೃಷ್ಣ, ಹರಿ, ನಾರಾಯಣ, ಶಿವ ಇತ್ಯಾದಿ) ನಾಮ ಜಪಿಸುವುದು. ಭಗವಂತನ ನಾಮ ಜಪದಿಂದಾಗುವ ಶಕ್ತಿಯು ಶ್ರೀ ರಾಮಚರಿತಮಾನಸದ ಈ ಚೌಪಾಯಿಗಳಲ್ಲಿ ಸುಂದರವಾಗಿ ವ್ಯಕ್ತವಾಗಿದೆ: ಚಹುँ ಜುಗ ತೀನಿ ಕಾಲ ತಿಹುँ ಲೋಕಾ। ಭಏ ನಾಮ ಜಪಿ ಜೀವ ಬಿಸೋಕಾ॥ ಬೇಡ ಪುರಾಣ ಸಂತ ಮತ ಎಹೂ. ಸಕಲ ಸುಕೃತ ಫಲ ರಾಮ್ ಸನೇಹೂ॥1॥ ನಾಲ್ಕು ಯುಗಗಳಲ್ಲಿ (ಸತ್ಯುಗ್, ತ್ರೇತಾಯುಗ್, ದ್ವಾಪರಯುಗ್ ಮತ್ತು ಕಲಿಯುಗ್), ಮೂರು ಕಾಲಗಳಲ್ಲಿ (ವರ್ತಮಾನ, ಭೂತ ಮತ್ತು ಭವಿಷ್ಯತ್) ಮತ್ತು ಮೂರು ಲೋಕಗಳಲ್ಲಿ (ಸ್ವರ್ಗ ಲೋಕ ಅಥವಾ ಸ್ವರ್ಗ, ಭೂ ಲೋಕ ಅಥವಾ ಭೂಮಿ ಮತ್ತು ಪಾತಾಳ ಲೋಕ ಅಥವಾ ಭೂಗತ ಪ್ರದೇಶ), ಭಗವಂತನ ನಾಮವನ್ನು ಜಪಿಸುವ ಮೂಲಕ ಎಲ್ಲಾ ಜೀವಿಗಳು ತಮ್ಮ ದುಃಖಗಳಿಂದ ಮುಕ್ತರಾಗುತ್ತಾರೆ. ವೇದಗಳು, ಪುರಾಣಗಳು ಮತ್ತು ಸಂತರ ದೃಢ ನಂಬಿಕೆಯೆಂದರೆ, ಎಲ್ಲಾ ಶುಭಗಳ ಫಲವು ಭಗವಾನ್ ರಾಮನ ನಾಮ ಮತ್ತು ರೂಪದ ಬಗ್ಗೆ ಬೇಷರತ್ತಾದ ಪ್ರೀತಿಯನ್ನು ಹೊಂದುವುದರಿಂದ ಬರುತ್ತದೆ. ಧ್ಯಾನು ಪ್ರಥಮ ಜುಗ್ ಮಖ ವಿಧಿ ದೂಜೆಂ. ದ್ವಾಪರ ಪರಿತೋಷತ ಪ್ರಭು ಪೂಜೆಂ॥ ಕಲಿ ಕೇವಲ ಮಲ ಮೂಲ ಮಲೀನಾ. ಪಾಪ ಪಯೋನಿಧಿ ಜನ ಮನ ಮೀನಾ॥2॥ ಸತ್ಯಯುಗದಲ್ಲಿ ಭಗವಂತನನ್ನು ಧ್ಯಾನಿಸುವ ಮೂಲಕ, ತ್ರೇತಾಯುಗದಲ್ಲಿ ವಿವಿಧ ರೀತಿಯ ತಪಸ್ಸು ಅಥವಾ ಯಜ್ಞಗಳನ್ನು ಮಾಡುವ ಮೂಲಕ, ದ್ವಾಪರಯುಗದಲ್ಲಿ ಕೇವಲ ಪೂಜೆ ಮಾಡುವ ಮೂಲಕ, ಭಗವಂತನನ್ನು ಸಂಪೂರ್ಣವಾಗಿ ತೃಪ್ತಗೊಳಿಸಬಹುದು. ಆದರೆ ಕಲಿಯುಗ ಮಾತ್ರ ಎಲ್ಲಾ ಕಲ್ಮಶಗಳ ನೆಲೆಯಾಗಿದೆ ಮತ್ತು ಜನರ ಮನಸ್ಸನ್ನು ಪಾಪಗಳ ಸಾಗರದಲ್ಲಿ ನಿರಂತರವಾಗಿ ಈಜುವ ಮೀನುಗಳಿಗೆ ಹೋಲಿಸಲಾಗುತ್ತದೆ (ಹೀಗಾಗಿ ಕಲಿಯುಗದಲ್ಲಿ ಜನರು ಧ್ಯಾನ ಮಾಡುವುದು, ತಪಸ್ಸು ಮಾಡುವುದು ಅಥವಾ ಸರಿಯಾಗಿ ಪೂಜಿಸುವುದು ತುಂಬಾ ಕಷ್ಟ). ನಾಮ ಕಾಮತರು ಕಾಲ ಕರಾಲಾ. ಸುಮಿರತ ಸಮನ ಸಕಲ ಜಗ ಜಾಲಾ॥ ರಾಮ್ ನಾಮ ಕಲಿ ಅಭಿಮತ ದಾತಾ. ಹಿತ ಪರಲೋಕ ಲೋಕ ಪಿತು ಮಾತಾ॥3॥ ಈ ಭಯಾನಕ ಕಲಿಯುಗದಲ್ಲಿ, ಭಗವಂತನ ನಾಮವು ಆಸೆಗಳನ್ನು ಪೂರೈಸುವ ಕಲ್ಪವೃಕ್ಷ ಎಂಬ ಸ್ವರ್ಗೀಯ ವೃಕ್ಷದಂತಿದೆ. ಕೇವಲ ನಾಮವನ್ನು ಧ್ಯಾನಿಸುವುದರಿಂದ, ಜೀವನದ ಎಲ್ಲಾ ಭೌತಿಕ ಜಾಲಗಳು ನಾಶವಾಗುತ್ತವೆ. ರಾಮನ ನಾಮವು ಭಕ್ತನಿಗೆ ಅವನ ಹೃದಯ ಬಯಸುವ ಎಲ್ಲವನ್ನೂ ಒದಗಿಸುತ್ತದೆ. ಭಗವಂತನ ನಾಮವು ಈ ಲೋಕದಲ್ಲಿ ತಾಯಿ ಮತ್ತು ತಂದೆಯಂತೆ ಭಕ್ತನನ್ನು ನೋಡಿಕೊಳ್ಳುತ್ತದೆ ಮತ್ತು ಅದು ಅವನ ನಿವಾಸದಲ್ಲಿ ಭಕ್ತನ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಋಷಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಋಷಿಗಳು ಮತ್ತು ಮುನಿಗಳನ್ನು ಸದಾಚಾರದ ಮಾರ್ಗದರ್ಶಕರೆಂದು ಪರಿಗಣಿಸಲಾಗುತ್ತದೆ; ಅವರು ಯಾವಾಗಲೂ ತಮ್ಮ ಜ್ಞಾನ ಮತ್ತು ಅಭ್ಯಾಸದಿಂದ ಜನರು ಮತ್ತು ಸಮಾಜದ ಕಲ್ಯಾಣವನ್ನು ಮಾಡುತ್ತಿದ್ದಾರೆ. ಇಂದಿಗೂ ಸಹ, ಕಾಡುಗಳಲ್ಲಿ ಅಥವಾ ಯಾವುದೇ ತೀರ್ಥಯಾತ್ರೆಯ ಸ್ಥಳಗಳಲ್ಲಿ ಋಷಿಗಳು, ಮುನಿಗಳು, ಸಾಧುಗಳು ಮತ್ತು ಸನ್ಯಾಸಿಗಳು ಇದ್ದಾರೆ. ಅವರು ಯಾವಾಗಲೂ ತಮ್ಮ ಜ್ಞಾನವನ್ನು ತಪಸ್ಸು, ಅಭ್ಯಾಸ ಮತ್ತು ಚಿಂತನೆಯ ಮೂಲಕ ಪರಿಷ್ಕರಿಸುತ್ತಾರೆ. ಅವರು ಸಾಮಾನ್ಯವಾಗಿ ಭೌತಿಕ ಸುಖಗಳನ್ನು ತ್ಯಜಿಸುತ್ತಾರೆ, ಆದರೂ ಅವರಲ್ಲಿ ಕೆಲವರು ಗೃಹಸ್ಥ ಜೀವನವನ್ನು ನಡೆಸುತ್ತಾರೆ. ರಿಷಿ ಭಾರತವು ಯಾವಾಗಲೂ ಋಷಿಗಳ ಭೂಮಿಯಾಗಿದೆ. ನಮ್ಮ ಸಮಾಜದಲ್ಲಿ ಋಷಿ ಸಂಪ್ರದಾಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇಂದಿಗೂ ನಮ್ಮ ಸಮಾಜ ಮತ್ತು ಕುಟುಂಬಗಳನ್ನು ಕೆಲವು ಋಷಿಗಳ ವಂಶಸ್ಥರು ಎಂದು ಪರಿಗಣಿಸಲಾಗುತ್ತದೆ. ಋಷಿ ಎಂಬ ಪದವು ವೈದಿಕ ಗ್ರಂಥಗಳಲ್ಲಿ ಪಾಂಡಿತ್ಯ ಪಡೆದ ಜನರನ್ನು ಉಲ್ಲೇಖಿಸಲು ಬಳಸಲಾಗುವ ವೈದಿಕ ಸಂಪ್ರದಾಯದಿಂದ ಬಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತನ್ನ ವಿಶಿಷ್ಟ ಏಕಾಗ್ರತೆಯ ಬಲದಿಂದ ವೈದಿಕ ಸಂಪ್ರದಾಯವನ್ನು ಅಧ್ಯಯನ ಮಾಡಿ ವಿಶಿಷ್ಟ ಪದಗಳನ್ನು ನೋಡಿದ, ಅವುಗಳ ಅಸ್ಪಷ್ಟ ಅಥವಾ ರಹಸ್ಯ ಅರ್ಥಗಳನ್ನು ತಿಳಿದಿದ್ದ ಮತ್ತು ಜೀವಿಗಳ ಕಲ್ಯಾಣಕ್ಕಾಗಿ ಮಾತ್ರ ಬರೆಯುವ ಮೂಲಕ ಆ ಜ್ಞಾನವನ್ನು ವ್ಯಕ್ತಪಡಿಸಿದ ವ್ಯಕ್ತಿಯನ್ನು ಋಷಿಗಳು ಎಂದು ಕರೆಯಲಾಗುತ್ತದೆ. ಋಷಿಗಳನ್ನು ಆ ಯುಗದ ಜ್ಞಾನೋದಯ ಪಡೆದ ದ್ರಷ್ಟಾರರೆಂದು ಪರಿಗಣಿಸಲಾಗುತ್ತದೆ. ಅವರ ಯೋಗಬಲದಿಂದ ಪರಮಾತ್ಮನ ಜ್ಞಾನವು ಅವರಿಗೆ ಲಭ್ಯವಿದೆ ಮತ್ತು ಅವರು ವಸ್ತು ಮತ್ತು ಜಾಗೃತ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಋಷಿಗಳ ವಿಧಗಳು ಅಮರಸಿಂಹ ಸಂಗ್ರಹಿಸಿದ ಪ್ರಸಿದ್ಧ ಸಂಸ್ಕೃತ ಸಮಾನಾರ್ಥಕ ನಿಘಂಟಿನ ಪ್ರಕಾರ, ಏಳು ವಿಧದ ಋಷಿಗಳಿದ್ದಾರೆ, ಬ್ರಹ್ಮರ್ಷಿ (ಅವರು ಅತ್ಯುನ್ನತ ದೈವಿಕ ಜ್ಞಾನ, ಅನಂತ ಜ್ಞಾನ/ಸರ್ವಜ್ಞತೆ ಮತ್ತು ಆತ್ಮಜ್ಞಾನವನ್ನು ಪಡೆದಿದ್ದಾರೆ), ದೇವರ್ಷಿ, ಮಹರ್ಷಿ, ಪರಮರ್ಷಿ, ಕಂದರ್ಶಿ, ಶ್ರುತರ್ಷಿ ಮತ್ತು ರಾಜರ್ಷಿ. ಸಪ್ತ (ಏಳು) ಋಷಿಗಳು ತ್ರಿಮೂರ್ತಿಗಳು ಮಹಾನ್ ಋಷಿಗಳಿಗೆ ತಮ್ಮ ಸ್ವರ್ಗೀಯ ದೇಹಗಳನ್ನು ಉಡುಗೊರೆಯಾಗಿ ನೀಡಿದ್ದಾರೆ, ಅವುಗಳ ಮೇಲೆ ಈ ಋಷಿಗಳು ಅಧ್ಯಕ್ಷತೆ ವಹಿಸುತ್ತಾರೆ. ಆಕಾಶದಲ್ಲಿರುವ ಏಳು ಪ್ರಮುಖ ನಕ್ಷತ್ರಗಳನ್ನು ಉರ್ಸಾ ಮೇಜರ್ ಅಥವಾ ಗ್ರೇಟ್ ಬೇರ್ ನಕ್ಷತ್ರಪುಂಜ ಎಂದೂ ಕರೆಯುತ್ತಾರೆ, ಇದು ಅಂತಹ ಒಂದು ಉದಾಹರಣೆಯಾಗಿದೆ. ಈ ಆಕಾಶಕಾಯಗಳು ಮತ್ತು ಅವುಗಳ ಅಧ್ಯಕ್ಷತೆ ವಹಿಸುವ ಋಷಿಗಳನ್ನು ಕೇತು, ಪುಲ, ಪುಲತ್ಸ್ಯ, ಅತ್ರಿ, ಅಂಗಿರ, ವಸಿಷ್ಠ ಮತ್ತು ಭೃಗು ಎಂದು ಕರೆಯಲಾಗುತ್ತದೆ. ಅದೇ ರೀತಿ, ಕೌತ್ಸ, ಗೌತಮ, ಕಶ್ಯಪ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜರನ್ನು ಸಹ ಸಪ್ತ ಋಷಿಗಳಾಗಿ ಸೇರಿಸಲಾಗಿರುವ ಕೆಲವು ಇತರ ಪಟ್ಟಿಗಳು ಅಸ್ತಿತ್ವದಲ್ಲಿವೆ. ಮುನಿ ಮುನಿಗಳು ಸಹ ಋಷಿಗಳಾಗಿದ್ದರು, ಆದರೆ ಅವರಲ್ಲಿ ಕೋಪ ಮತ್ತು ದ್ವೇಷದ ಕೊರತೆಯಿತ್ತು. ಭಗವದ್ಗೀತೆಯಲ್ಲಿ ದುಃಖದಿಂದ ಮನಸ್ಸು ವಿಚಲಿತವಾಗದ, ಸುಖವನ್ನು ಬಯಸದ ಮತ್ತು ಮೋಹ, ಭಯ ಮತ್ತು ಕ್ರೋಧದಿಂದ ಮುಕ್ತರಾದ ಋಷಿಗಳ ಬಗ್ಗೆ ಹೇಳಲಾಗಿದೆ, ಅಂತಹ ಕಳಂಕವಿಲ್ಲದ ಬುದ್ಧಿಶಕ್ತಿಯನ್ನು ಹೊಂದಿರುವ ಸಂತರನ್ನು ಮುನಿಗಳು ಎಂದು ಕರೆಯಲಾಗುತ್ತದೆ. ಮುನಿ ಎಂಬ ಪದವು ಮೌನಿಯಿಂದ ಬಂದಿದೆ, ಇದರರ್ಥ ಮಾತನಾಡದ ಅಥವಾ ಮೌನವಾಗಿ ಮಾತನಾಡುವವನು. ಮೌನ ಪ್ರತಿಜ್ಞೆ ಮಾಡಿದ ಅಥವಾ ನಿರ್ದಿಷ್ಟ ಅವಧಿಗೆ ಬಹಳ ಕಡಿಮೆ ಮಾತನಾಡಿದ ಅಂತಹ ಋಷಿಗಳನ್ನು ಮುನಿಗಳು ಎಂದು ಕರೆಯಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ, ಮೌನವನ್ನು ಒಂದು ಸಾಧನೆ ಅಥವಾ ತಪಸ್ಸು ಎಂದು ಪರಿಗಣಿಸಲಾಗಿತ್ತು. ಅನೇಕ ಋಷಿಗಳು ಈ ಸಾಧನೆಯನ್ನು ಮಾಡುತ್ತಿದ್ದರು ಮತ್ತು ಮೌನವಾಗಿರುತ್ತಿದ್ದರು. ಮುನಿ ಎಂಬ ಪದವನ್ನು ಅಂತಹ ಋಷಿಗಳಿಗೆ ಮಾತ್ರ ಬಳಸಲಾಗುತ್ತಿತ್ತು. ನಾರದ ಮುನಿ (ಅವರನ್ನು ಭಗವಾನ್ ನಾರಾಯಣನ ಶ್ರೇಷ್ಠ ಭಕ್ತ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರನ್ನು ಬ್ರಹ್ಮ ದೇವರು ಸೃಷ್ಟಿಸಿದ್ದಾರೆ) ನಂತಹ ಯಾವಾಗಲೂ ದೇವರನ್ನು ಜಪಿಸಿ ನಾರಾಯಣನನ್ನು ಧ್ಯಾನಿಸುತ್ತಿದ್ದ ಕೆಲವು ಋಷಿಗಳಿಗೂ ಮುನಿ ಎಂಬ ಪದವನ್ನು ಬಳಸಲಾಗಿದೆ. ಜೈನ ಗ್ರಂಥಗಳಲ್ಲಿಯೂ ಮುನಿಗಳ ಬಗ್ಗೆ ಚರ್ಚಿಸಲಾಗಿದೆ. ಯಾರ ಆತ್ಮವು ಸಂಯಮದಿಂದ ಸ್ಥಿರವಾಗಿರುತ್ತದೆ, ಲೌಕಿಕ ಆಸೆಗಳಿಂದ ಮುಕ್ತವಾಗಿರುತ್ತದೆ, ಜೀವಿಗಳಿಗೆ ರಕ್ಷಣೆಯ ಭಾವನೆಯನ್ನು ಹೊಂದಿರುತ್ತದೆ, ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಭಾಷೆ, ಆಹಾರ ಶುದ್ಧೀಕರಣ ಮತ್ತು ಧಾರ್ಮಿಕ ಉಪಕರಣಗಳ ನಿರ್ವಹಣೆಯಲ್ಲಿ ಶುದ್ಧೀಕರಣವನ್ನು ಹೊಂದಿರುತ್ತದೆ. ಸಾಧು ಯಾವುದೇ ವಿಷಯದ ಸಾಧನೆ (ಅಭ್ಯಾಸ) ಮಾಡುವ ವ್ಯಕ್ತಿಯನ್ನು ಸಾಧು ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಸಾಧು ಎಂಬ ಪದವನ್ನು ಒಳ್ಳೆಯ ಮತ್ತು ಕೆಟ್ಟ ಜನರ ನಡುವೆ ವ್ಯತ್ಯಾಸವನ್ನು ತೋರಿಸಲು ಬಳಸಲಾಗುತ್ತದೆ. ಇದಕ್ಕೆ ಕಾರಣವೆಂದರೆ ಸಕಾರಾತ್ಮಕ ಆಧ್ಯಾತ್ಮಿಕ ಅಭ್ಯಾಸ ಮಾಡುವ ವ್ಯಕ್ತಿಯು ಯಾವಾಗಲೂ ಸರಳ, ನೇರ ಮತ್ತು ಜನರಿಗೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾನೆ. ಸದ್ ಎಂದರೆ ನೇರ ಮತ್ತು ದುಷ್ಟತನದಿಂದ ಮುಕ್ತ. ಸಂಸ್ಕೃತದಲ್ಲಿ ಸಾಧು ಎಂಬ ಪದವು ಸಜ್ಜನ ಎಂದರ್ಥ. ಸಾಧು ಎಂಬ ಪದದ ಅರ್ಥಗಳಲ್ಲಿ ಒಂದು ತನ್ನ ಆರು ದುರ್ಗುಣಗಳನ್ನು ತ್ಯಜಿಸಿದ ವ್ಯಕ್ತಿ: ಕಾಮ, ಕೋಪ, ದುರಾಸೆ, ಸುಳ್ಳು ಹೆಮ್ಮೆ, ಅಹಂಕಾರ ಮತ್ತು ಬಾಂಧವ್ಯ. ಸನ್ಯಾಸಿ ಸನ್ಯಾಸಿ ಎಂಬ ಪದವು ಸನ್ಯಾಸದಿಂದ ಬಂದಿದೆ, ಇದರರ್ಥ ತ್ಯಜಿಸುವುದು. ಆದ್ದರಿಂದ, ತ್ಯಜಿಸುವವರನ್ನು ಸನ್ಯಾಸಿ ಎಂದು ಕರೆಯಲಾಗುತ್ತದೆ. ಸನ್ಯಾಸಿ ಆಸ್ತಿ, ಗೃಹಸ್ಥ ಜೀವನವನ್ನು ತ್ಯಜಿಸುತ್ತಾನೆ ಅಥವಾ ಅವಿವಾಹಿತನಾಗಿ ಉಳಿಯುತ್ತಾನೆ, ಸಮಾಜ ಮತ್ತು ಲೌಕಿಕ ಜೀವನವನ್ನು ತ್ಯಜಿಸುತ್ತಾನೆ ಮತ್ತು ಯೋಗ ಧ್ಯಾನವನ್ನು ಅಭ್ಯಾಸ ಮಾಡುವ ಮೂಲಕ ತನ್ನ ಪ್ರೀತಿಯ ದೇವರಿಗೆ ಭಕ್ತಿಯಲ್ಲಿ ಮಗ್ನನಾಗುತ್ತಾನೆ. ಆದಿ ಶಂಕರಾಚಾರ್ಯರನ್ನು ಹಿಂದೂ ಧರ್ಮದಲ್ಲಿ ಶ್ರೇಷ್ಠ ಸನ್ಯಾಸಿ ಎಂದು ಪರಿಗಣಿಸಲಾಗಿದೆ. ಪರಮಹಂಸ ಸನ್ಯಾಸಿಗಳು ತಪಸ್ವಿಗಳ ಅತ್ಯುನ್ನತ ವರ್ಗ. ವಾಸ್ತವವಾಗಿ, ಸನ್ಯಾಸಿ ಎಂದರೆ ಯಾವುದೇ ಸಂದರ್ಭ ಅಥವಾ ವ್ಯಕ್ತಿಯಿಂದ ಪ್ರಭಾವಿತನಾಗದ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಸ್ಥಿರವಾಗಿರುವ ವ್ಯಕ್ತಿ. ಅವನು ಸಂತೋಷದಿಂದ ಆನಂದವನ್ನು ಪಡೆಯುವುದಿಲ್ಲ ಅಥವಾ ದುಃಖದಿಂದ ಖಿನ್ನತೆಯನ್ನು ಪಡೆಯುವುದಿಲ್ಲ. ಹೀಗಾಗಿ ಯಾವುದೇ ಪಕ್ಷಪಾತವಿಲ್ಲದೆ ದೈವಿಕ ಮತ್ತು ಆತ್ಮಜ್ಞಾನ ಎರಡನ್ನೂ ಬಯಸುವ ಮತ್ತು ಲೌಕಿಕ ಬಾಂಧವ್ಯದಿಂದ ಬೇರ್ಪಟ್ಟ ವ್ಯಕ್ತಿಯನ್ನು ಸನ್ಯಾಸಿ ಎಂದು ಕರೆಯಲಾಗುತ್ತದೆ. ವೈದಿಕ ಜೀವನ ವಿಧಾನವು ಒಬ್ಬ ವ್ಯಕ್ತಿಯು ಯೌವನದಿಂದ ವೃದ್ಧಾಪ್ಯಕ್ಕೆ ಸಾಗಬೇಕಾದ ನಾಲ್ಕು ಹಂತಗಳ ಬಗ್ಗೆ ಮಾತನಾಡುತ್ತದೆ. ಜೀವನದಲ್ಲಿ ನಾಲ್ಕು ಹಂತಗಳು ಬ್ರಹ್ಮಚಾರಿ (ಯೌವನ), ಗೃಹಸ್ಥ (ಗೃಹಸ್ಥ), ವಾನಪ್ರಸ್ಥ (ನಿರ್ಬಂಧ ಮತ್ತು ಹೆಚ್ಚುತ್ತಿರುವ ಏಕಾಂತತೆ) ಮತ್ತು ಸನ್ಯಾಸ (ತಪಸ್ವಿ). ವೃದ್ಧಾಪ್ಯದಲ್ಲಿ ಒಬ್ಬ ವ್ಯಕ್ತಿಯು ಸನ್ಯಾಸಿಯಾಗಬೇಕೆಂದು ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಒಬ್ಬರು ಯಾವುದೇ ವಯಸ್ಸಿನಲ್ಲಿ ಸನ್ಯಾಸವನ್ನು ಅಳವಡಿಸಿಕೊಳ್ಳಬಹುದು ಮತ್ತು ಇದಕ್ಕೆ ಹಲವು ನಿದರ್ಶನಗಳಿವೆ. ಭಕ್ತಿಯನ್ನು ಆಚರಿಸಲು ಬೇರೆ ಯಾವುದಾದರೂ ಮಾರ್ಗಗಳಿವೆಯೇ? ಭಕ್ತಿಗೆ ಮುಖ್ಯವಾಗಿ ಎರಡು ಮಾರ್ಗಗಳಿವೆ: ಭಕ್ತಿ ಮಾರ್ಗ (ಶುದ್ಧ ಭಕ್ತಿಯ ಮಾರ್ಗ) ಮತ್ತು ಜ್ಞಾನ ಮಾರ್ಗ (ಜ್ಞಾನದ ಮಾರ್ಗ). ಶುದ್ಧ ಭಕ್ತಿಯ ಮಾರ್ಗ ಸರಳವಾಗಿದ್ದರೂ, ಜ್ಞಾನದ ಮಾರ್ಗವನ್ನು ಅನುಸರಿಸುವುದು ತುಂಬಾ ಕಷ್ಟ. ಋಷಿಗಳು ಮತ್ತು ಮುನಿಗಳಂತಹ ಹೆಚ್ಚಿನ ಋಷಿಗಳು ಜ್ಞಾನ ಮಾರ್ಗದ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ, ಇದು ಎಲ್ಲರಿಗೂ, ವಿಶೇಷವಾಗಿ ಇಂದಿನ ನಮ್ಮಂತಹ ಜನರಿಗೆ ತಿಳಿದಿಲ್ಲ. ಆದ್ದರಿಂದ ಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಭಗವಂತನ ನಾಮವನ್ನು ನಿಯಮಿತವಾಗಿ ಜಪಿಸುವುದು ಶಿಫಾರಸು ಮಾಡಲಾಗಿದೆ, ಇದಕ್ಕಾಗಿ ನಾವೆಲ್ಲರೂ ನಮ್ಮ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ ಸುಲಭವಾಗಿ ಸಮಯವನ್ನು ಕಂಡುಕೊಳ್ಳಬಹುದು. ಪೂಜಾರಿ, ಪಂಡಿತ, ಪುರೋಹಿತ, ಬ್ರಾಹ್ಮಣ, ಗುರು ಮತ್ತು ಆಚಾರ್ಯರ ನಡುವಿನ ವ್ಯತ್ಯಾಸ ಇವು ಹಿಂದೂ ಧರ್ಮದಲ್ಲಿನ ವಿಶೇಷ ಸ್ಥಾನಗಳ ಹೆಸರುಗಳಾಗಿದ್ದು, ಇವು ಯಾವುದೇ ನಿರ್ದಿಷ್ಟ ಜಾತಿಗೆ ಸಂಬಂಧಿಸಿಲ್ಲ. ಈ ಪದಗಳನ್ನು ಬಳಸುವಾಗ ಜಾಗರೂಕರಾಗಿರಲು ಮೇಲಿನ ಪದಗಳ ಅರ್ಥಗಳನ್ನು ಈಗ ಅನ್ವೇಷಿಸೋಣ. ಪುರೋಹಿತ್ ಪುರೋಹಿತ ಎಂಬ ಪದವು ಎರಡು ಪದಗಳಿಂದ ಕೂಡಿದೆ:- 'ಪರ್' ಮತ್ತು 'ಹಿತ', ಅಂದರೆ ಇತರರ ಕಲ್ಯಾಣಕ್ಕಾಗಿ ಕಾಳಜಿ ವಹಿಸುವ ವ್ಯಕ್ತಿ. ಪ್ರಾಚೀನ ಕಾಲದಲ್ಲಿ, ಶಿಕ್ಷಣವನ್ನು ನೀಡಲಾಗುತ್ತಿದ್ದ ಆಶ್ರಮದ ಮುಖ್ಯಸ್ಥರನ್ನು ಪುರೋಹಿತ ಎಂದು ಕರೆಯಲಾಗುತ್ತಿತ್ತು. ಧಾರ್ಮಿಕ ಕಾರ್ಯಗಳನ್ನು ನೋಡಿಕೊಳ್ಳಲು ಅವರನ್ನು ರಾಜಮನೆತನದಲ್ಲಿಯೂ ನೇಮಿಸಲಾಗುತ್ತಿತ್ತು. ಯಾಗವನ್ನು ಮಾಡುವ ಮತ್ತು ಎಲ್ಲಾ ರೀತಿಯ ವಿಧಿಗಳನ್ನು ನಡೆಸುವ ಪ್ರಮುಖ ವ್ಯಕ್ತಿಯನ್ನು ಪುರೋಹಿತ ಎಂದೂ ಕರೆಯುತ್ತಾರೆ. ಪೂಜಾರಿ ಈ ಪದದ ಅರ್ಥ ಪೂಜೆ ಮತ್ತು ಪಠಣಕ್ಕೆ ಸಂಬಂಧಿಸಿದೆ. ಅಂದರೆ, ದೇವಾಲಯ ಅಥವಾ ಯಾವುದೇ ಇತರ ಸ್ಥಳದಲ್ಲಿ ದೇವತೆಗಳನ್ನು ಪಠಿಸುವ ಮತ್ತು ಪೂಜಿಸುವ ಪುರೋಹಿತರನ್ನು ಪೂಜಾರಿ ಎಂದು ಕರೆಯಲಾಗುತ್ತದೆ. ಪಂಡಿತ್ ಪಾಂಡ ಎಂದರೆ ಬುದ್ಧಿವಂತಿಕೆ. ನಿರ್ದಿಷ್ಟ ಜ್ಞಾನದಲ್ಲಿ ಪ್ರವೀಣನಾಗಿರುವುದನ್ನು ಪಂಡಿತ ಎಂದು ಕರೆಯಲಾಗುತ್ತದೆ. ಪ್ರಾಚೀನ ಭಾರತದಲ್ಲಿ, ವೇದಗಳು, ಶಾಸ್ತ್ರಗಳು ಇತ್ಯಾದಿಗಳನ್ನು ತಿಳಿದಿದ್ದವರನ್ನು ಪಂಡಿತ ಎಂದು ಕರೆಯಲಾಗುತ್ತಿತ್ತು. ಈ ಪಂಡಿತನನ್ನು ಪಾಂಡಯೆ, ಪಾಂಡೆ ಅಥವಾ ಪಾಂಡ್ಯ ಎಂದೂ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹೆಸರು ಬ್ರಾಹ್ಮಣರ ಉಪನಾಮವೂ ಆಗಿದೆ. ಪಂಡಿತನ ಹೆಂಡತಿಯನ್ನು ಪಂಡಿತೈನೆ ಎಂದು ಕರೆಯಲಾಗುತ್ತದೆ. ಗುರು ಗು ಎಂದರೆ ಕತ್ತಲೆ ಮತ್ತು ರು ಎಂದರೆ ಬೆಳಕು. ಆದ್ದರಿಂದ ನಿಮ್ಮನ್ನು ಕತ್ತಲೆಯಿಂದ ಬೆಳಕಿಗೆ ಕರೆದೊಯ್ಯುವ ವ್ಯಕ್ತಿ ಗುರು. ಶೈಕ್ಷಣಿಕ ಶಿಕ್ಷಕ ಮತ್ತು ಆಧ್ಯಾತ್ಮಿಕತೆ ಮತ್ತು ಧರ್ಮದ ಕುರಿತು ಪ್ರವಚನ ನೀಡುವ ಗುರುಗಳ ನಡುವೆ ಅಗಾಧ ವ್ಯತ್ಯಾಸವಿದೆ. ಪ್ರತಿಯೊಬ್ಬ ಗುರುವೂ ಸಂತ, ಆದರೆ ಪ್ರತಿಯೊಬ್ಬ ಸಂತನು ಗುರುವಾಗುವುದು ಅನಿವಾರ್ಯವಲ್ಲ. ಕೆಲವೇ ಸಂತರು ಮಾತ್ರ ಗುರುವಾಗಲು ಅರ್ಹತೆ ಹೊಂದಿರುತ್ತಾರೆ. ಗುರುವಿನ ಅರ್ಥ ಬ್ರಾಹ್ಮಣ ಜ್ಞಾನದ ಮಾರ್ಗದರ್ಶಿ. ಆಚಾರ್ಯ ಆಚಾರ್ಯ ಎಂದರೆ ವೇದ ಮತ್ತು ಶಾಸ್ತ್ರಗಳ ಜ್ಞಾನವನ್ನು ಹೊಂದಿರುವವರು ಮತ್ತು ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ಕೆಲಸವನ್ನು ಮಾಡುವವರು. ಆಚಾರ್ಯರು ನೀತಿಶಾಸ್ತ್ರ, ತತ್ವಗಳು ಇತ್ಯಾದಿಗಳಲ್ಲಿ ಚೆನ್ನಾಗಿ ಪರಿಣತಿ ಹೊಂದಿರುತ್ತಾರೆ ಮತ್ತು ಅದರ ಬಗ್ಗೆ ಇತರರಿಗೆ ಕಲಿಸುತ್ತಾರೆ. ಅವರು ಆಚರಣೆಗಳಲ್ಲಿಯೂ ಚೆನ್ನಾಗಿ ಪರಿಣತಿ ಹೊಂದಿದ್ದಾರೆ ಮತ್ತು ಯಾಗಗಳಲ್ಲಿ ಪ್ರಧಾನ ಅರ್ಚಕರ ಕೆಲಸವನ್ನು ನಿರ್ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಆಚಾರ್ಯರನ್ನು ಕಾಲೇಜಿನ ಪ್ರಧಾನ ಅಧಿಕಾರಿ ಮತ್ತು ಶಿಕ್ಷಕರಿಗೂ ಬಳಸಲಾಗುತ್ತದೆ. ಬ್ರಾಹ್ಮಣ ಬ್ರಾಹ್ಮಣ ಎಂಬ ಪದವು ಬ್ರಾಹ್ಮಣನಿಂದ ಬಂದಿದೆ. ಬ್ರಹ್ಮ (ದೇವರು) ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸದವನನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಸ್ಮೃತಿ ಪುರಾಣಗಳಲ್ಲಿ, ಬ್ರಾಹ್ಮಣರ 8 ವ್ಯತ್ಯಾಸಗಳ ವಿವರಣೆಯಿದೆ - ಮಾತ್ರ, ಬ್ರಾಹ್ಮಣ, ಶ್ರೋತ್ರಿಯ, ಅನುಚನ, ಭ್ರೂಣ, ಋಷಿಕಲ್ಪ, ಋಷಿ ಮತ್ತು ಮುನಿ. ಇದರ ಹೊರತಾಗಿ, ವಂಶಾವಳಿ, ಶಿಕ್ಷಣ ಮತ್ತು ಸದ್ಗುಣಗಳನ್ನು ಮೀರಿದ ಬ್ರಾಹ್ಮಣರನ್ನು 'ತ್ರಿಶುಕ್ಲ' ಎಂದು ಕರೆಯಲಾಗುತ್ತದೆ. ಬ್ರಾಹ್ಮಣರನ್ನು ವಿಪ್ರ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ ಮತ್ತು ದ್ವಿಜ (ಎರಡು ಬಾರಿ ಜನಿಸಿದವರು) ಎಂದೂ ಕರೆಯುತ್ತಾರೆ, ಅವರಿಗೆ ಯಾವುದೇ ಜಾತಿ ಅಥವಾ ಸಮಾಜದೊಂದಿಗೆ ಯಾವುದೇ ಸಂಬಂಧವಿಲ್ಲ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್
✍️ ಮೋಟಿವೇಷನಲ್ ಕೋಟ್ಸ್ - ShareChat
ಗೆಳೆಯರೇ,ಕೃಷ್ಣ ಕುಚೇಲನ ಕಥೆ ಎಲ್ಲರಿಗೂ ಗೊತ್ತು. ಬಾಲ್ಯ ಸ್ನೇಹಿತ ಕುಚೇಲನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಸತ್ಕರಿಸುತ್ತಾನೆ ಶ್ರೀಕೃಷ್ಣ. ಅಂತಹದೇ ಒಂದು ಕಥಾ ಪ್ರಸಂಗ ರಾಮಾಯಣದಲ್ಲೂ ನಡೆಯಿತು ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ವಸಿಷ್ಠ ಮಹರ್ಷಿಗಳ ಆಶ್ರಮದಲ್ಲಿ ಶ್ರೀರಾಮಚಂದ್ರ ಮತ್ತವನ ಸೋದರರು ಅಧ್ಯಯನ ಮಾಡುತ್ತಿರುತ್ತಾರೆ. ಅಲ್ಲಿ ಅನಂತನೆಂಬಾತ ಕಡುಬಡವ ಇರುತ್ತಾನೆ. ಆತ ವಸಿಷ್ಠ ಮಹರ್ಷಿಗಳ ಸೇವೆಯನ್ನು ಚಾಚೂತಪ್ಪದೆ ಮಾಡುತ್ತಿರುತ್ತಾನೆ. ಅವನಿಗೆ ಶ್ರೀರಾಮನೆಂದರೆ ಬಲು ಅಕ್ಕರೆ. ರಾಮನ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿರುತ್ತಾನೆ. ಅವರೀರ್ವರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಇರಲಿಕ್ಕೆ ಆಗುತ್ತಿರುವುದಿಲ್ಲ. ತಿಂಗಳಿಗೊಮ್ಮೆ ಅನಂತ ದಟ್ಟಾರಣ್ಯದೊಳಗೆ ದರ್ಭೆಯನ್ನು ಕಿತ್ತು ತರಲು ಹೋಗುತ್ತಿರುತ್ತಾನೆ. ಅಲ್ಲಿಂದ ಮರಳಿ ಬರಲು ಕನಿಷ್ಠ ಪಕ್ಷ ಹತ್ತು ದಿನವಾದರೂ ಬೇಕಿರುತ್ತದೆ. ಒಮ್ಮೆ ಅನಂತ ಕಾಡಿಗೆ ಹೋದ ಸಂದರ್ಭದಲ್ಲಿ ರಾಮ, ಲಕ್ಷ್ಮಣರು ವಿಶ್ವಾಮಿತ್ರರ ಜತೆಗೂಡಿ ಅಯೋಧ್ಯೆಗೆ ಮರಳುತ್ತಾರೆ. ಇತ್ತ ಆಶ್ರಮಕ್ಕೆ ಮರಳಿದ ಅನಂತ ರಾಮಚಂದ್ರ ಕಾಣದೇ ಚಡಪಡಿಸುತ್ತಾನೆ. ರಾಮನನ್ನು ಹುಡುಕಿಕೊಂಡು ಕಾಡಿನೊಳಗೆ ಮತ್ತೆ ಹೋಗುತ್ತಾನೆ. ರಾಮಾ ರಾಮಾ ಎಂದು ಕೂಗುತ್ತಲೇ ಮುಂದಡಿಯಿಡುತ್ತಾನೆ. ಎಲ್ಲಿ ಹುಡುಕಿದರೂ ರಾಮ ಕಾಣದೇ ಬಸವಳಿದು ಅಲ್ಲೊಂದು ಸ್ಥಳದಲ್ಲಿ ಹಾಗೇಯೇ ಕುಳಿತು ಬಿಡುತ್ತಾನೆ. ಹೀಗೇ ದಿನಗಳು, ವರ್ಷಗಳು ಉರುಳುತ್ತವೆ. ಅನಂತ ಮಾತ್ರ ಕೂತ ಜಾಗ ಬಿಟ್ಟು ಕದಲುವುದಿಲ್ಲ. ರಾಮಾ ರಾಮಾ ಎನ್ನುತ್ತಲೇ ಇರುತ್ತಾನೆ. ಅವನ ಸುತ್ತ ಇರುವೆಯ ಗೂಡು ಬೆಳೆಯುತ್ತದೆ. ಇತ್ತ ರಾಮಾಯಣದ ಪ್ರಸಂಗಗಳೆಲ್ಲವೂ ಮುಗಿದು ಶ್ರೀರಾಮ ಪಟ್ಟಾಭಿಷೇಕದ ಮುಹೂರ್ತ ಬಂದಿರುತ್ತದೆ. ಶ್ರೀರಾಮನ ಪಟ್ಟಾಭಿಷೇಕಕ್ಕೆ ದೂರದೂರಿನಿಂದ ರಾಜರು, ಸಾಧು, ಸನ್ಯಾಸಿಗಳು ಆಗಮಿಸಲಾರಂಭಿಸಿರುತ್ತಾರೆ. ಅಲ್ಲೊಂದು ಸನ್ಯಾಸಿಗಳ ಗುಂಪು ಕಾಡಿನೊಳಗೆ ಬರುವಾಗ ಅವರ ಕಣ್ಣಿಗೆ ಇರುವೆಯ ಗೂಡೊಂದು ಗೋಚರಿಸುತ್ತದೆ. ಅದರಿಂದ ಮನುಷ್ಯನ ಧ್ವನಿ ಕೇಳಿ ಚಕಿತರಾಗಿ ನೋಡುತ್ತಾರೆ. ಮಾಸಲು ಬಟ್ಟೆಯುಟ್ಟ, ಮೈಯೆಲ್ಲಾ ಧೂಳಾದ ಅನಂತನನ್ನು ಕಾಣುತ್ತಾರೆ. ಅನಂತನಿಗೆ ತಾವು ರಾಮನ ಪಟ್ಟಾಭಿಷೇಕಕ್ಕೆ ಹೋಗುತ್ತಿರುವ ವಿಷಯ ತಿಳಿಸುತ್ತಾರೆ. ತಮ್ಮೊಡನೆ ಅನಂತನನ್ನೂ ಕರೆದುಕೊಂಡು ಹೋಗುತ್ತಾರೆ. ಅಯೋಧ್ಯೆಯ ಅರಮನೆಯನ್ನು ಪ್ರವೇಶಿಸಿದ ಕೂಡಲೇ ಶ್ರೀರಾಮನನ್ನು ಅನಂತ ಗುರುತಿಸುತ್ತಾನೆ. ಹೇ ರಾಮ ನನ್ನನ್ನು ಮರೆತೆಯಾ? ನನ್ನನ್ನು ಬಿಟ್ಟು ಏಕೆ ಹೊರಟೆ? ಎಂದು ಚೀರುತ್ತಾನೆ. ಕೂಡಲೇ ರಾಮನಿಗೆ ಅನಂತನ ಗುರುತು ಹತ್ತುತ್ತದೆ. ಯಾರೊಬ್ಬರ ಬಿಸು ಮಾತುಗಳನ್ನು ಲೆಕ್ಕಿಸದೇ ಶ್ರೀರಾಮ ಅನಂತನ ಬಳಿಗೆ ಬರುತ್ತಾನೆ. ಅವನ ಮೈ ಧೂಳು, ಮಣ್ಣಿನಿಂದ ಆವರಿಸಿದೆ ಎಂಬುದನ್ನು ಮರೆತು ಆಲಂಗಿಸಿಕೊಳ್ಳುತ್ತಾನೆ. ಅನಂತ ಚಿಕ್ಕಂದಿನಲ್ಲಿ ನಿನಗೆ ಹೇಳದೇ ಆಶ್ರಮದಿಂದ ಹೊರಟು ಬಂದುದಕ್ಕೆ ಕ್ಷಮಿಸು ಎಂದು ಕಂಬನಿಗೆರೆಯುತ್ತಾನೆ. ನಂತರ ಶ್ರೀರಾಮ ಹನುಮಂತನನ್ನು ಉದ್ದೇಶಿಸಿ ನಿನ್ನಂತೆಯೇ ಈತನೂ ನನ್ನ ಪರಮ ಭಕ್ತ. ಅವನನ್ನು ಹೇಗೆ ಗೌರವಿಸಲಿ ಎಂದು ಕೇಳುತ್ತಾನೆ. ಆಗ ಹನುಮ, ಪ್ರಭು ಶ್ರೀರಾಮಚಂದ್ರ ಅನಂತನೊಡನೆ ಮಾತನಾಡುವಾಗ ಆತನನ್ನು ನಿನ್ನ ತಂದೆಯ ಸಮಾನ ಎಂದು ಹೇಳಿದೆ. ಆ ಕಾರಣ ನೀನು ಸಿಂಹಾಸನವನ್ನು ಏರುವ ಮುನ್ನ ಅನಂತನನ್ನು ಸಿಂಹಾಸನದಲ್ಲಿ ಕುಳ್ಳಿರಿಸು ಎಂದು ಸಲಹೆ ನೀಡುತ್ತಾನೆ. ಹನುಮನ ಸಲಹೆಗೆ ಶ್ರೀರಾಮ ತಲೆದೂಗುತ್ತಾನೆ. ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಲ್ಲದ ಅನಂತನನ್ನು ಬಲವಂತವಾಗಿ ಶ್ರೀರಾಮ ಕೂಡಿಸುತ್ತಾನೆ. ಅಘ್ರ್ಯಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ನೀತಿ : ನಾಮ ಜಪ ಮಾಡುವವರನ್ನು ಭಗವಂತ ವಿಶೇಷವಾಗಿ ಆದರಿಸಿ ಸತ್ಕರಿಸುತ್ತಾನೆ. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ShareChat
ಹೋಳಿ ಹಬ್ಬದ ಕಥೆಗಳು..... ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಸ್ವಾರಸ್ಯಕರ ಪೌರಾಣಿಕ, ಹಾಗೂ ಜಾನಪದ ಕಥೆಗಳಿವೆ. ಅಂತೆಯೇ ಹೋಳಿ ಹಬ್ಬದ ವಿಷಯದಲ್ಲೂ ಅನೇಕ ಕಥೆಗಳಿವೆ ಈಗ ಹೋಳಿ ಹಬ್ಬದ ಕಥೆಗಳನ್ನು ನೋಡೋಣ. ಹೋಳಿ, ಹೋಲಾಕಾ, ಹೋಲಿಕಾ, ಹೂಲಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬವು, ಸಂಭ್ರಮದಿಂದ ಜನರು ಮಾಡುವ ಹಾ ಹಾ ಹೂ ಹೂ ಹೋ ಹೋ ಎಂಬೆಲ್ಲಾ ಉದ್ಗಾರಗಳಿಂದ ಈ ಪದಗಳು ಬಂದಿವೆಯೆಂದು ಹೇಳುತ್ತಾರೆ. ಭವಿಷ್ಯೋತ್ತರ ಪುರಾಣದ ಕಥೆಯೊಂದರ ಪ್ರಕಾರ, ಮಾಲಿ ಎಂಬ ರಾಕ್ಷಸನಿಗೆ ಢೋಂಡಾ ಅಥವಾ ಢೂಂಡಾ ಎಂಬ ಮಗಳಿದ್ದಳು. ಅವಳು ಶಿವನನ್ನು ಕುರಿತು ತಪಸ್ಸು ಮಾಡಿ ತಾನು ಮನುಷ್ಯರಿಂದಲೂ ರಾಕ್ಷಸರಿಂದಲೂ ದೇವತೆಗಳಿಂದಲೂ ಯಾವುದೇ ಆಯುಧಗಳಿಂದಲೂ ಯಾವುದೇ ಋತುವಿನಲ್ಲೂ ಹಗಲು ಅಥವಾ ರಾತ್ರಿಯಲ್ಲೂ ಮನೆಯ ಒಳಗೂ ಅಥವಾ ಹೊರಗೂ ಸಾಯಬಾರದೆಂದು ವರ ಪಡೆದಳು. ಶಿವನು ಅವಳಿಗೆ ಆ ವರವನ್ನು ನೀಡಿ ಒಂದು ಎಚ್ಚರಿಕೆ ಕೊಟ್ಟನು. ಅದೇನೆಂದರೆ, ಜನರು ಸಂಭ್ರಮದಿಂದ ಅವಳಿಗೆ ಕೆಟ್ಟ, ಅಶ್ಲೀಲ ಮಾತುಗಳನ್ನು ಆಡಿ ನಿಂದಿಸಿದರೆ ಅವಳು ಕುಗ್ಗಿ ಸತ್ತುಹೋಗುವಳೆಂಬುದು! ಶಿವನ ವರದಿಂದ ಕೊಬ್ಬಿದ ಆ ರಾಕ್ಷಸಿಯು ಜನರನ್ನು, ಮುಖ್ಯವಾಗಿ ಮಕ್ಕಳನ್ನೂ ಯುವಕರನ್ನೂ ಪೀಡಿಸತೊಡಗಿದಳು! ಅವಳು ' ಅಡಾಡಾ ' ಎಂದು ಕಿರುಚುತ್ತಾ ಜನರ ಮೇಲೆ ದಾಳಿ ಮಾಡುತ್ತಿದ್ದಳು! ಆ ಸಮಯದಲ್ಲಿ ರಘು ಎಂಬ ರಾಜನು ಆಳುತ್ತಿದ್ದನು.‌ಅವನು ಅವಳನ್ನು ಆಯುಧಗಳಿಂದಾಗಲೀ ಮಂತ್ರಗಳಿಂದಾಗಲೀ ಯಾರಿಂದಲೂ ಕೊಲ್ಲಲಾಗದೆಂದು ಮನಗಂಡು ಇದಕ್ಕೆ ಪರಿಹಾರವೇನೆಂದು ಕುಲಗುರುಗಳಾದ ವಸಿಷ್ಠರನ್ನು ಕೇಳಿದನು. ಆಗ ವಸಿಷ್ಠರು ಅವಳ ರಹಸ್ಯವನ್ನು ಬಿಚ್ಚಿಟ್ಟು ," ಫಾಲ್ಗುಣ ಮಾಸದ ಶುಕ್ಲಪಕ್ಷದ ಪೂರ್ಣಿಮೆಯ ದಿನದಂದು ಒಣಗಿದ ಕಟ್ಟಿಗೆಗಳನ್ನೂ ಒಣ ಹುಲ್ಲನ್ನೂ ಪೇರಿಸಿ ಬೆಂಕಿ ಹಾಕಿ, ಎಲ್ಲಾ ಕಿರಿಯರೂ ಯುವಕರೂ ಸೇರಿ ರಕ್ಷೋಘ್ನ ಮಂತ್ರಗಳನ್ನು ಪಠಿಸಿ ಆ ಅಗ್ನಿಯನ್ನು ಸುತ್ತುತ್ತಾ ನಗುತ್ತಾ ಚಪ್ಪಾಳೆ ತಟ್ಟುತ್ತಾ ಗ್ರಾಮ್ಯ ಭಾಷೆಯಲ್ಲಿ ಅಶ್ಲೀಲ ಹಾಡುಗಳನ್ನು ಹಾಡಬೇಕು! ಅದರಿಂದ ಆ ರಾಕ್ಷಸಿ ದುರ್ಬಲಗೊಂಡು ಸಾಯುತ್ತಾಳೆ!" ಎಂದರು. ಜನರು ಅದರಂತೆ ಮಾಡಲು ಆ ರಾಕ್ಷಸಿ ದುರ್ಬಲಗೊಂಡು ಸತ್ತಳು! ಇದನ್ನು ನೆನಪಿಸಿಕೊಳ್ಳಲು ಹುಣ್ಣಿಮೆಯ ರಾತ್ರಿ ಬೆಂಕಿ ಹಾಕಿ ಹಾಡಿ, ಕುಣಿದು, ಮರುದಿನ ಬಣ್ಣದ ಓಕುಳಿಯಾಡುತ್ತಾರೆ. ಹೋಳಿಯ ಹಬ್ಬದಂದು ಅತಿಶೃಂಗಾರದ, ಅಶ್ಲೀಲವೂ ಆಗಿರುವ ಗೀತೆಗಳನ್ನು ಹಾಡಲು ಇದೇ ಕಾರಣ. ಇಡೀ ವರ್ಷ ಸಂಯಮದಿಂದ ಇದ್ದುದಕ್ಕಾಗಿ ಇದೊಂದು ಮನಸ್ಸನ್ನು ಹಗುರಗೊಳಿಸುವ ಆಚರಣೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿಯ ಆಚರಣೆಗಳು ಕಾಣುತ್ತವೆ. ಉದಾಹರಣೆಗೆ ದೀಪಾವಳಿಯ ರಾತ್ರಿ ಜೂಜಾಡಬೇಕೆಂಬ ಪದ್ಧತಿಯಿದೆ. ಹಾಗೆಯೇ ಎಲ್ಲಾ ಹಬ್ಬಗಳಲ್ಲೂ ಸಿಹಿತಿಂಡಿಗಳನ್ನು ಸೇವಿಸುವ ಪರಿಪಾಠ ಇದೆ. ಹೀಗೆ ಯಾವುದನ್ನು ಸದಾ ಮಾಡಿದರೆ ತೊಂದರೆಯೋ ಅದಕ್ಕೂ ಒಂದು ದಿನ ಅವಕಾಶವಿತ್ತರೆ ಅದು ಮನಸ್ಸಿನಿಂದ ಹೋಗಿ ಅನಂತರ ಸಂಯಮದಿಂದ ಇರಬಹುದೆಂಬುದು ನಮ್ಮ ಹಿರಿಯರ ಆಲೋಚನೆಯಾಗಿತ್ತು. ಅಲ್ಲದೇ ಇವನ್ನು ಹಬ್ಬದ ಸಂದರ್ಭದಲ್ಲಿ ಮಾಡುವುದರಿಂದ ಇತಿ ಮಿತಿಯಲ್ಲಿರುತ್ತದೆ ಹಾಗೂ ವಿನೋದಕ್ಕಾಗಿ ಮತ್ತು ಸ್ನೇಹವರ್ಧನೆಗಾಗಿ ಇರುತ್ತದೆಯೇ ಹೊರತು ದುರುದ್ದೇಶಪೂರಿತವಾಗಿರುವುದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಇತಿಮಿತಿಯಲ್ಲಿ ವಿನೋದಕ್ಕಾಗಿ ಜೂಜಾಡುವುದರಿಂದ, ಹಾಗೂ ಹೋಳಿ ಹಬ್ಬದಲ್ಲಿ ಗೆಳೆಯ, ಗೆಳತಿಯರು, ಸ್ತ್ರೀ, ಪುರುಷರು ಒಟ್ಟಿಗೆ ಸ್ವಲ್ಪ ಹೊತ್ತು ಬಣ್ಣ ಎರಚಿಕೊಂಡು, ಹಾಡಿ,ಕುಣಿಯುವುದರಿಂದ ಸ್ನೇಹ, ಬಾಂಧವ್ಯಗಳು ಹೆಚ್ಚುತ್ತವೆ. ಹೋಳಿ ಹಬ್ಬ ವಸಂತಕಾಲದ ಆಗಮನವನ್ನೂ ಸೂಚಿಸುತ್ತದೆ. ಹುಣ್ಣಿಮೆಯ ಮರುದಿನದಂದು ಕಾಮನ ಪೂಜೆಯನ್ನೂ ಮಾಡುವುದರಿಂದ ಪ್ರೇಮ, ಸಂತಾನ, ಸೃಷ್ಟಿಗಳ ಸಂಭ್ರಮಾಚರಣೆಯೂ ಇರುತ್ತದೆ. ಒಬ್ಬರ ಮೇಲೆ ಒಬ್ಬರು ಬಣ್ಣವನ್ನು ಎರಚುವುದು ಮರಗಳಲ್ಲಿ ಹೊಸ ಪುಷ್ಪಗಳು ಅರಳಿರುವುದನ್ನು ಸೂಚಿಸುತ್ತದೆ. ಇನ್ನೊಂದು ಕಥೆಯ ಪ್ರಕಾರ, ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾ ಎಂಬ ರಾಕ್ಷಸಿಯಿದ್ದಳು. ಅವಳು ಅಗ್ನಿಯಿಂದ ಸುಡಬಾರದೆಂದು ಅವನಿಂದಲೇ ವರ ಪಡೆದಿದ್ದಳು. ಹಿರಣ್ಯಕಶಿಪುವು ಹರಿದ್ವೇಷಿಯಾಗಿದ್ದರೆ, ಅವನ ಮಗ ಪ್ರಹ್ಲಾದನು ಹರಿಭಕ್ತನಾಗಿದ್ದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ಬಹಳ ಪ್ರಯತ್ನಪಟ್ಟನು. ಆದರೆ ಶ್ರೀನ್ನಾರಾಯಣನ ದಯೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹಿರಣ್ಯಕಶಿಪುವು ತನ್ನ ತಂಗಿ ಹೋಲಿಕಾಳಿಗೆ ಪ್ರಹ್ಲಾದನನ್ನು ಬೆಂಕಿಯಲ್ಲಿ ಕೂರಿಸಿಕೊಂಡು ಅವನನ್ನು ಸುಡಿಸಲು ಹೇಳಿದನು. ಅವಳು ಅದರಂತೆ ಬಾಲಕ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಚಿತೆಯೇರಿದಳು. ಆದರೆ ಪುನಃ ವಿಷ್ಣುವಿನ ಕೃಪೆಯಿಂದ ಪ್ರಹ್ಲಾದನು ಕೂದಲೂ ಕೊಂಕದೇ ಪಾರಾದರೆ, ಹೋಲಿಕಾಳೇ ಅಗ್ನಿಯಲ್ಲಿ ಸುಟ್ಟುಹೋದಳು! ಅವಳ ವರ ಅವಳಿಗೇ ತಿರುಗಿಬಿತ್ತು! ಇದರದೇ ಇನ್ನೊಂದು ಕಥೆಯ ಪ್ರಕಾರ, ಹೋಲಿಕಾ ಒಂದು ಮಾಯಾ ಹೊದಿಕೆಯನ್ನು ಹೊದ್ದುಕೊಂಡಿದ್ದಳು. ಅದು ಅವಳನ್ನು ಬೆಂಕಿಯು ಸುಡದಂತೆ ರಕ್ಷಿಸುತ್ತಿತ್ತು. ಆಗ ಗಾಳಿಯು ಬೀಸಿ, ಅವಳ ಹೊದಿಕೆ ಹಾರಿ ಪ್ರಹ್ಲಾದನ ಮೇಲೆ ಬಿದ್ದಿತು. ಅದರಿಂದ ಅವನು ಸುಡದೇ ಅವಳೇ ಸುಟ್ಟುಹೋದಳು! ಈ ಘಟನೆಯನ್ನು ನೆನಪಿಸಿಕೊಳ್ಳಲು ಹೋಲಿಕಾದಹನ ಎಂಬ ಆಚರಣೆಯಲ್ಲಿ ಹಳೆಯ ಕಟ್ಟಿಗೆ, ಎಲೆಗಳು ಇತ್ಯಾದಿಗಳನ್ನು ಹಾಕಿ ಬೆಂಕಿ ಹಾಕುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಹೋಲಿಕಾಳ ಬೊಂಬೆ ಮಾಡಿ ದಹಿಸುತ್ತಾರೆ ಮತ್ತು ಅನಂತರ, ಹೋಲಿಕಾಳನ್ನು ಪೂಜಿಸುತ್ತಾರೆ ಕೂಡ. ಇದಕ್ಕೆ ಕಾರಣವೆಂದರೆ, ದುಷ್ಟರು ಸಾಧುಗಳ ಸಂಪರ್ಕಕ್ಕೆ ಬಂದಮೇಲೆ ಅವರೂ ಸಾಧುಗಳಾಗುತ್ತಾರೆ. ಹೋಲಿಕಾಳು ಪ್ರಹ್ಲಾದನ ಸಂಪರ್ಕಕ್ಕೆ ಬಂದು ಸುಟ್ಟು ಸತ್ತ ಬಳಿಕ, ಅವಳಿಗೂ ಮುಕ್ತಿ ಸಿಕ್ಕಿತು. ಹಾಗಾಗಿ ಅವಳನ್ನು ಸುಟ್ಟು ಪುನಃ ಪೂಜಿಸುವ ಅರ್ಥ, ದುಷ್ಟತನ ದಮನವಾಗಿ ಒಳ್ಳೆಯದು ಉಳಿಯಲಿ ಎಂಬುದು.ಅಂತೆಯೇ ಇದು, ಹಳೆಯ, ಜೀರ್ಣವಾದುದೆಲ್ಲಾ ಹೋಗಿ ಹೊಸದು ಬರಲಿ ಎಂಬ ಸೃಷ್ಟಿ, ಸ್ಥಿತಿ, ಲಯಗಳ ತತ್ವವೇ ಆಗಿರುತ್ತದೆ. ಈ ದಿನವೇ ಶಿವನು ಕಾಮದೇವನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟನೆಂಬ ಕಥೆಯಿದೆ. ಶಿವನ ಪುತ್ರನಿಂದಲೇ ತನಗೆ ಮರಣ ಬರಬೇಕೆಂದು ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ವರ ಪಡೆದು ಲೋಕಕಂಟಕನಾಗಿದ್ದನು. ಶಿವನ ಪತ್ನಿ ಸತಿಯು ತನ್ನ ತಂದೆ ದಕ್ಷನಿಂದ ಶಿವನಿಗೆ ಅವಮಾನವಾಯಿತೆಂದು ಯೋಗಾಗ್ನಿಯಿಂದ ಭಸ್ಮಗೊಂಡಿದ್ದಳು. ಹೆಂಡತಿಯಿಲ್ಲದೇ ಮಗನು ಹೇಗೆ ಹುಟ್ಟುವನೆಂಬ ತರ್ಕದಿಂದ ತಾರಕಾಸುರನು ಶಿವನ ಮಗನಿಂದಲೇ ಮರಣ ಬರಲೆಂದು ವರ ಪಡೆದಿದ್ದನು. ಇದರಿಂದ ತನಗೆ ಮರಣವೇ ಇಲ್ಲವೆಂದು ಅವನು ಬಗೆದಿದ್ದನು. ಈಗ ಸತಿಯು ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಅವನ ಮೇಲಿನ ಪ್ರೇಮದಿಂದ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಶಿವನಾದರೋ ಪ್ರೀತಿ, ಪ್ರೇಮಗಳಿಂದ ದೂರವಾಗಿ ತಪಸ್ಸಿನಲ್ಲಿ ಮುಳುಗಿದ್ದನು. ಹಾಗಾಗಿ ಅವನನ್ನು ತಪೋವಿಮುಖನನ್ನಾಗಿಸಿ ಪಾರ್ವತಿಯಲ್ಲಿ ಪ್ರೇಮವುಂಟಾಗಿ ಅವಳನ್ನು ವರಿಸಿದರೆ, ಅವನಿಗೆ ಮಗನು ಹುಟ್ಟಿ ಅವನು ತಾರಕಾಸುರನನ್ನು ಸಂಹರಿಸುತ್ತಾನೆಂದು ದೇವತೆಗಳು ಬ್ರಹ್ಮನೊಂದಿಗೆ ಸಮಾಲೋಚಿಸಿ, ಅವನ ಆಣತಿಯಂತೆ ಶಿವನನ್ನು ತಪೋವಿಮುಖನನ್ನಾಗಿಸಲು ಕಾಮದೇವನನ್ನು ಕಳಿಸಿದರು. ದೇವಕಾರ್ಯಕ್ಕಾಗಿ ಕಾಮದೇವನು ಹೋಗಿ ಶಿವನ ಮೇಲೆ ಹೂಬಾಣ ಬಿಡಲು, ಒಂದು ಕ್ಷಣ ವಿಚಲಿತನಾದ ಶಿವನು ಕಾಮದೇವನ ಮೇಲೆ ಕುಪಿತಗೊಂಡು ತನ್ನ ಮೂರನೆಯ ಕಣ್ಣಿನ ಅಗ್ನಿಯಿಂದ ಕಾಮನನ್ನು ಸುಟ್ಟು ಹೊರಟುಹೋದನು! ಆಗ ಕಾಮನ ಪತ್ನಿ ರತಿಯು ಸಾಯಲೆಂದು ಹೊರಡಲು, ಶಿವನು ಪಾರ್ವತಿಯನ್ನು ವರಿಸಿದಾಗ ಕಾಮನು ಪುನಃ ಜೀವಂತನಾಗುತ್ತಾನೆ ಎಂಬ ಅಶರೀರವಾಣಿಯಾಯಿತು! ಅನಂತರ, ಪಾರ್ವತಿಯು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ವರಿಸಲು, ಕಾಮನು ಶಿವನ ದಯೆಯಿಂದ ಜೀವಂತಗೊಂಡನು. ಆದರೆ ಅವನು ದೇಹವಿಲ್ಲದೇ ಅನಂಗನೆನಿಸಿದನು ಹಾಗೂ ರತಿಯು ಬಯಸಿದಾಗ ಅವಳಿಗೆ ಮಾತ್ರ ಕಾಣುವಂತಾದನು. ಇದರ ಒಂದು ಸಂದೇಶವೇನೆಂದರೆ, ಕಾಮವು ಆಂತರ್ಯದಲ್ಲಿರಬೇಕು, ನಮ್ಮ ಬಯಕೆ ಅಥವಾ ರತಿಯನ್ನು ತೀರಿಸುವಂತಿದ್ದರೆ ಸಾಕು, ಎಲ್ಲರಿಗೂ ಕಾಣಬೇಕಿಲ್ಲ ಎಂಬುದು. ಎಲ್ಲರಿಗೂ ಕಾಮವು ಕಾಣಬೇಕೆಂದಾಗ ಅದು ಕಲೆಯಾಗಿರಬೇಕು. ಈ ಕಥೆಯನ್ನು ನೆನಪಿಸಿಕೊಳ್ಳಲು ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡುತ್ತಾರೆ, ಹಾಗೂ ಮರುದಿನ, ಕಾಮನ ಪೂಜೆ ಮಾಡುತ್ತಾರೆ. ಇದರ ತಾತ್ಪರ್ಯವೆಂದರೆ, ಕೆಟ್ಟ ಆಸೆಗಳೆಲ್ಲವೂ ಹೋಗಿ ಒಳ್ಳೆಯ ಆಸೆಗಳು ಉಳಿಯಲಿ ಎಂಬುದು. ಸಾಮಾನ್ಯವಾಗಿ ಕೃಷ್ಣನು ರಾಧೆ ಮತ್ತು ಇತರ ಗೋಪಿಕಾಸ್ತ್ರೀಯರೊಂದಿಗೆ ಓಕುಳಿಯಾಡುವ ಚಿತ್ರಗಳನ್ನು ನೋಡುತ್ತೇವೆ. ಈ ವಿಷಯದಲ್ಲಿ ಒಂದು ಸ್ವಾರಸ್ಯಕರ ಕಥೆ ಮತ್ತು ಆಚರಣೆಯಿದೆ. ಕೃಷ್ಣನು ನಂದಗಾಂವ್ ಅಥವಾ ವೃಂದಾವನದಲ್ಲಿ ವಾಸಿಸುತ್ತಿದ್ದನು. ರಾಧೆಯು ನಂದಗಾಂವ್ ಗೆ ಸನಿಹವೇ ಇರುವ ಬರ್ಸಾನಾ ಎಂಬ ಹಳ್ಳಿಯಲ್ಲಿದ್ದಳು.‌ ಕೃಷ್ಣನು ಹೋಳಿಯ ದಿನ, ಬರ್ಸಾನಾಗೆ ಹೋಗಿ ರಾಧೆ ಮತ್ತು ಅವಳ ಸಖಿಯರ ಮೇಲೆ ಬಣ್ಣ ಎರಚಿ ತುಂಟಾಟವಾಡಲು, ಅವಳೂ ಅವಳ ಸಖಿಯರೂ ಅವನಿಗೆ ಕೋಲುಗಳಲ್ಲಿ ಹೊಡೆದು ಅವನನ್ನು ಓಡಿಸುತ್ತಿದ್ದರು! ಇದನ್ನು ಲಾಠ್ ಮಾರ್ ಹೋಲಿ ಎಂದು ಈಗಲೂ ಆಚರಿಸುತ್ತಾರೆ. ನಂದಗಾಂವ್ ನ ಹುಡುಗರು ಕೃಷ್ಣನಂತೆ ಬರ್ಸಾನಾಗೆ ಹೋಗಿ ಅಲ್ಲಿನ ಹುಡುಗಿಯರೊಂದಿಗೆ ಓಕುಳಿಯಡುತ್ತಾರೆ. ಆ ಹುಡುಗಿಯರು, ರಾಧೆ ಮತ್ತು ಅವಳ ಸಖಿಯರಂತೆ ಅವರನ್ನು ಕೋಲುಗಳಿಂದ ಹೊಡೆಯುತ್ತಾರೆ. ಆ ಹುಡುಗರು ತಮ್ಮನ್ನು ರಕ್ಷಿಸಿಕೊಳ್ಳಲು ಗುರಾಣಿಗಳನ್ನು ಒಡ್ಡುತ್ತಾರೆ. ಹೀಗೆ ಇದೊಂದು ವಿನೋದೋತ್ಸವ. ಶ್ರೀ ಕೃಷ್ಣನ ಮಹಾಭಕ್ತರಾದ ಚೈತನ್ಯ ಮಹಾಪ್ರಭುಗಳು ಜನಿಸಿದ್ದು ಹೋಳಿ ಹುಣ್ಣಿಮೆಯಂದು. ಬಂಗಾರ ವರ್ಣದಿಂದ ಕೂಡಿದ್ದ ಚೈತನ್ಯರನ್ನು ಗೌರಾಂಗ ಎಂದೂ ಕರೆಯುತ್ತಾರೆ. ಹಾಗಾಗಿ ಹೋಳಿ ಹುಣ್ಣಿಮೆಯಂದು ಗೌರಪೂರ್ಣಿಮಾ ಎಂದೂ ಕರೆಯುತ್ತಾರೆ. ಬಂಗಾಳದಲ್ಲಿ ಹರಿನಾಮ ಸಂಕೀರ್ತನೆಯನ್ನು ಪ್ರಚುರಗೊಳಿಸಿದ ಚೈತನ್ಯರನ್ನು ರಾಧಾ, ಕೃಷ್ಣ ತತ್ವಗಳೆರಡೂ ಸೇರಿ ಆಗಿರುವ ಅವತಾರ ಎಂದು ಬಂಗಾಳಿಗರು ಪರಿಗಣಿಸುತ್ತಾರೆ. ಅಂತೆಯೇ, ಹೋಳಿ ಹಬ್ಬದಂದು, ರಾಧಾ ಕೃಷ್ಣರ ದಿವ್ಯ ಪ್ರೇಮವನ್ನು ಆಚರಿಸಲು ಅವರಿಬ್ಬರ ವಿಗ್ರಹಗಳನ್ನು ಸುಂದರವಾದ ಉಯ್ಯಾಲೆಯಲ್ಲಿ ಇರಿಸಿ ತೂಗುತ್ತಾರೆ. ಇದನ್ನು ಡೋಲೋತ್ಸವ ಎಂದು ಕರೆಯುತ್ತಾರೆ, ಹಾಗೂ ಇದು ಬಂಗಾಳ, ಅಸ್ಸಾಂ, ಒಡಿಶಾ, ಮೊದಲಾದ ರಾಜ್ಯಗಳಲ್ಲಿ, ವೈಷ್ಣವ ಸಂಪ್ರದಾಯಗಳಲ್ಲಿ ಪ್ರಚಲಿತವಿದೆ. ಹಿಂದೆ, ಪ್ರಾಚೀನ ಭಾರತದಲ್ಲಿ ವಸಂತಕಾಲದ ಆಗಮನವನ್ನು ಸಂಭ್ರಮಿಸಲು, ವಸಂತೋತ್ಸವ ಎಂದು ಅನೇಕ ದಿನಗಳ ಕಾಲ, ಸಾಹಿತ್ಯ, ಸಂಗೀತ, ನಾಟಕ, ಮೊದಲಾದ ಅನೇಕ ಕಲೆಗಳನ್ನುಳ್ಳ, ತಿಂಡಿತಿನಿಸುಗಳು, ಪ್ರೀತಿ ಪ್ರೇಮಗಳ ವೈಭವೀಕರಣಗಳನ್ನುಳ್ಳ ಹಲವಾರು ಸ್ವಾರಸ್ಯಕರ ಹಬ್ಬ, ಆಚರಣೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಈಗ ಹೋಳಿಯೊಂದೇ ಉಳಿದಿದೆ. ಹೀಗೆ ಹೋಳಿಯ ವಿಷಯದಲ್ಲಿ ಅನೇಕ ಸ್ವಾರಸ್ಯಕರ ಕಥೆಗಳಿವೆ, ಹಾಗೂ ವಿವಿಧ ಆಚರಣೆಗಳು ಬೆಸೆದುಕೊಂಡಿವೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿ ಅನೇಕ ವೈವಿಧ್ಯಮಯ ಕಥೆಗಳನ್ನೂ ಆಚರಣೆಗಳನ್ನೂ ನೋಡಬಹುದು. ❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ShareChat
***ಕಚ ದೇವಯಾನಿಯ ಕಥೆ.*** ರಾಕ್ಷಸರ ಗುರುಗಳಾದಂತ ಶುಕ್ರಾಚಾರ್ಯರು ಶಿವನನ್ನು ಮೆಚ್ಚಿಸಿ ಸತ್ತವರನ್ನು ಬದುಕಿಸುವ "ಮೃತ ಸಂಜೀವಿನಿ" ವಿದ್ಯೆಯನ್ನು ಕಲಿತಿದ್ದರು. ಇದರ ಬಲದಿಂದ ಅವರು ದೇವತೆಗಳೊಡನೆ ಹೋರಾಡಿ ಸತ್ತ ರಕ್ಕಸರನ್ನು ಬದುಕಿಸುತ್ತಿದ್ದರು. ಕಾಲಾನಂತರದಲ್ಲಿ ದೇವಬಣಕ್ಕೆ ತಮ್ಮಲ್ಲೂ ಯಾರಾದರೊಬ್ಬರು ಮೃತಸಂಜೀವಿನಿ ಕಲಿಯುವುದು ಒಳ್ಳೆಯದು ಅನ್ನಿಸಿತು. ಅದನ್ನವರು ಅಸುರ ಗುರು ಶುಕ್ರಾಚಾರ್ಯರಿಂದಲೇ ಕಲಿಯಬೇಕು. ಅಸುರರು ಇದ್ದಲ್ಲಿಗೇ ಹೋಗಿ ಅದನ್ನು ಕಲಿತು ಬರಲಿಕ್ಕೆ ಗಟ್ಟಿ ಗುಂಡಿಗೆಯ ಬುದ್ಧಿವಂತನೇ ಬೇಕು. ಯಾರನ್ನು ಕಳಿಸೋದು ಎಂದು ಯೋಚಿಸುತ್ತಿದ್ದಾಗ ದೇವಗುರು ಬೃಹಸ್ಪತಿಯ ಮಗ ಕಚ ಮುಂದೆ ಬಂದ. ನಾನು ಆ ವಿದ್ಯೆಯನ್ನು ಖಂಡಿತವಾಗಿಯೂ ಕಲಿತುಬರುತ್ತೇನೆಂದು ಶಪಥ ಮಾಡಿದ. ಹೀಗೆ ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ ಕಲಿಯೋಕೆ ಬಂದು, ಶುಕ್ರಾಚಾರ್ಯರನ್ನು ತನ್ನ ವಿನಯದಿಂದ ಮೆಚ್ಚಿಸಿ ಅವರ ಶಿಷ್ಯನಾಗುತ್ತಾನೆ. ಯಾರದರೂ ‘ವಿದ್ಯಾಮ್ ದೇಹಿ’ಯೆಂದು ಬಂದಾಗ ಒಪ್ಪಿಕೊಳ್ಳೋದು ಸೌಜನ್ಯ ಎಂದು ಶುಕ್ರಾಚಾರ್ಯರು ತನ್ನ ಬಳಿ ಶಿಷ್ಯನಾಗಿ ಸೇರಿಸಿಕೊಳ್ಳುತ್ತಾರೆ. ರಕ್ಕಸರು ಆ ಚೆಂದದ ಮೈಕಟ್ಟಿನ ಸುಂದರ ಯುವಕನ್ನ ಕಂಡು ಹಲ್ಲು ಕಡಿಯುತ್ತಿದ್ದರು. ಅವನು ವಿದ್ಯೆ ಅಪಹರಿಸುತ್ತಾನೆ ಅನ್ನೋದು ಒಂದು ಕಾರಣವಾದರೆ, ತಮ್ಮ ಹೆಣ್ಣುಗಳ ಚಿತ್ತವನ್ನೂ ಅಪಹರಿಸ್ತಾನೆ ಅನ್ನೋದು ಅದಕ್ಕಿಂತ ಮುಖ್ಯ ಕಾರಣ. ಸಾಲದ್ದಕ್ಕೆ ಅವನು ಗುರುಪುತ್ರಿ ದೇವಯಾನಿಯ ಬಳಿ ಸಲುಗೆಯಿಂದ ಮಾತಾಡುತ್ತಾನೆ! ಅವಳ ಕಣ್ಣುಗಳಲ್ಲಿ ಇತ್ತೀಚೆಗೆ ಏನೋ ಥರದ ಹೊಳಪು- ಶುಕ್ರನ ಕಣ್ಣಿಗೂ ಬಿದ್ದಿದೆ. ಶುಕ್ರರೇನೋ ಸುಮ್ಮನಿದ್ದರು. ದೈತ್ಯ ಯುವಕರು ಸುಮ್ಮನಿರಬೇಕಲ್ಲ? ‘ಆ ಮುದುಕನಿಗೆ ಮೊದಲೇ ಒಂದು ಕಣ್ಣು ಕಡಿಮೆ!’ ಅಂತ ಆಡಿಕೊಳ್ಳುತ್ತ ತಾವೇ ಕಚನಿಗೊಂದು ಗತಿ ಕಾಣಿಸೋಕೆ ತೀರ್ಮಾನಿಸಿದರು. ಹಸು ಮೇಯಿಸಲು ಹೋದ ಕಚನನ್ನ ಕತ್ತರಿಸಿ ನಾಲ್ಕು ದಿಕ್ಕಿಗೆ ಬಿಸಾಡಿದರು. ಇತ್ತ ಎಂದಿನಂತೆ ಸಂಜೆ ಕಚ ಬರೋದನ್ನೆ ಕಾಯ್ತಿದ್ದ ದೇವಯಾನಿಗೆ ಆತಂಕ. ಅಪ್ಪನನ್ನು ಕರೆದು ವಿಷಯ ತಿಳಿಸಿದಳು. ಶುಕ್ರನಿಗೆ ಮಗಳೆಂದರೆ ವಿಪರೀತ ವ್ಯಾಮೋಹ. ಶುಕ್ರ ತಡ ಮಾಡಲಿಲ್ಲ. ಜ್ಞಾನ ದೃಷ್ಟಿಯಿಂದ ಎಲ್ಲವನ್ನು ತಿಳಿದು ಸಂಜೀವನಿ ಮಂತ್ರ ವನ್ನು ಪಠಿಸಿದ. ಕಚ ನಿದ್ದೆಯಿಂದ ಎನ್ನುವಂತೆ ಎದ್ದು ಬಂದ. ಮತ್ತೆ ದೈತ್ಯ ಹುಡುಗರು ಕುದ್ದು ಹೋದರು. ಮುಸ್ಸಂಜೆಗೆ ಕಾದರು. ದನ ಕಾಯುತ್ತಿದ್ದ ಕಚನನ್ನು ಹೊತ್ತೊಯ್ದು ಕತ್ತರಿಸಿ ಚೂರುಚೂರು ಮಾಡಿದರು . ಸುಟ್ಟು ಭಸ್ಮ ಮಾಡಿದರು. ಭಸ್ಮವನ್ನ ಮದ್ಯದೊಂದಿಗೆ ಬೆರೆಸಿ ಪಾನ ಪಾತ್ರೆಗೆ ತುಂಬಿದರು. ಶುಕ್ರನ ಮುಂದೆ ಇಟ್ಟರು. ಶುಕ್ರ ಉಲ್ಲಸಿತನಾಗಿ ಕುಡಿದುಮಲಗಿದ. ದೇವಯಾನಿಗೆ ಮತ್ತೆ ಚಿಂತೆ. ಕಚ ಯಾಕೆ ಕಾಣಿಸ್ತಾ ಇಲ್ಲ. ಈ ಹೊತ್ತಲ್ಲದ ಹೊತ್ತಿನಲ್ಲಿ ಅಪ್ಪನನ್ನ ಎಬ್ಬಿಸುವುದೇ ? ಪ್ರಿಯತಮನಿಗಾಗಿ ಎಲ್ಲರೆದುರು ಕಣ್ಣೀರಿಡುವುದೆ? ತಾನು ಎಲ್ಲರ ಕಣ್ಣಲ್ಲಿ ಸಣ್ಣದಾದರೂ ಚಿಂತಿಲ್ಲ, ಅವನನ್ನ ಬದುಕಿಸಿಯೇ ಸಿದ್ಧ! ಎದ್ದೋಡಿದಳು. ಕೈಮುಗಿದಳು, ‘ತಂದೆ, ಒಂದೇ ಒಂದು ಸಲ… ಕೊನೆಯ ಬಾರಿಗೆ… ನನ್ನ ಪ್ರೇಮದಾಣೆಯಿದೆ ತಂದೆ!’ ಶುಕ್ರ ಕರಗಿದ. ಮಗಳಂದರೆ ವ್ಯಾಮೋಹ . ದೈತ್ಯರು ನಗತೊಡಗಿದರು. ಶುಕ್ರ ತಡೆದು ಕೇಳಿದ, ‘ಯಾಕೆ?!’ ‘ಕಚನ ಭಸ್ಮವನ್ನ ನಿಮ್ಮ ಮದ್ಯಕ್ಕೆ ಬೆರೆಸಿದ್ದೆವು. ಅವ ಬದುಕಿ ಬರಬೇಕಂದರೆ ನಿಮ್ಮ ಹೊಟ್ಟೆಯೊಡೆದು ಬರಬೇಕಾಗುತ್ತೆ!! ಗುರು, ಬಿಟ್ಟುಬಿಡಿ, ಅವನು ನಾಳೆಗೆ ಗೊಬ್ಬರವಾಗುತ್ತಾನೆ!!’ ದೇವಯಾನಿ ಕುಸಿದು ಕೂತಳು. ಕಚನ ಕರೆ ಅವಳೊಳಗೆ ಮೊರೆಯುತಿತ್ತು… ಇತ್ತ ತನ್ನ ತಂದೆಯನ್ನೂ ಬಿಟ್ಟುಕೊಡಲಾರಳು. ಶುಕ್ರನೆಂದರೆ ಅವಳ ಮತ್ತೊಂದು ಪ್ರಾಣವೇ. ಹಾಗೆಯೇ ಕಚನೂ. ದೇವಯಾನಿಯನ್ನ ಸಂತೈಸುತ್ತ ಶುಕ್ರನೆಂದ, ‘ ಮಗಳೇ, ಹೊಟ್ಟೆ ಒಳಗೆ ಇರುವ ಆತನಿಗೆ ಮೃತ ಸಂಜೀವಿನಿ ಉಪದೇಶ ಮಾಡುತ್ತೇನೆ. ಹಾಗೆಯೇ ಸಂಜೀವನಿ ಪಠಿಸಿ ಅವನನ್ನ ಬದುಕಿಸಿಕೊಡ್ತೀನಿ. ಆತ ನನ್ನ ಹೊಟ್ಟೆ ಸೀಳಿ ಹೊರಬರುತ್ತಾನೆ. ನಾನು ಹೊಟ್ಟೆಯೊಡೆದು ಬಿದ್ದ ಮೇಲೆ, ಅದೇ ಸಂಜೀವನಿ ಹೇಳಿ ನನ್ನ ಮರಳಿ ಬದುಕಿಸಲಿ. ಇದು ಅಷ್ಟು ಸುಲಭವಾಗಿರಲಿಲ್ಲ. ಆ ಮಂತ್ರ ಕಲಿಯುವುದು. ಅಷ್ಟು ಸುಲಭವಿದ್ದರೆ ಮೊದಲ ಸಲ ಬದುಕಿಸಿಕೊಳ್ಳುವಾಗ ಕೇಳಿದ್ದ ಕಚ ಕಲಿತುಬಿಟ್ಟಿರುತ್ತಿದ್ದ, ಈ ಹೊತ್ತಿಗೆ ದೇವಲೋಕ ಸೇರಿರುತ್ತಿದ್ದ. ಮೂರು ಬಾರಿ ಕೇಳಿ ಸಾಕಷ್ಟು ಕಲಿತಿದ್ದ ಆತ ಇನ್ನೂ ಒಂದಷ್ಟು ಪಳಗಬೇಕಿತ್ತು. ಕಚನ ದನಿ ಎಲ್ಲಿಂದಲೋ ತೇಲಿಬಂತು, ‘ನಾನು ನಿಮ್ಮನ್ನು ಬದುಕಿಸ್ತೇನೆ ಗುರುಗಳೇ, ನಿಮ್ಮಿಂದಲೇ ಸಾಕಷ್ಟು ಕಲಿತಿದ್ದೇನೆ.’ ಶುಕ್ರರು ಮಂತ್ರ ಮೊಳಗಿಸಿದರು. ಅವರ ಹೊಟ್ಟೆಯನ್ನು ಸೀಳಿ ಕಚ ಹೊರಗೆ ಬಂದ. ಗುರು ಶುಕ್ರಾಚಾರ್ಯರು ಸತ್ತು ಬಿದ್ದರು. ಹಾಗೆ ಬಂದವ ತಾನೂ ಅದೇ ಮಂತ್ರವನ್ನ ಹೇಳಿ ಗುರುವನ್ನ ಬದುಕಿಸಿಕೊಂಡ. ‘ನೀನಿನ್ನು ಇಲ್ಲೇ ಇದ್ದರೆ ಅಪಾಯ. ಹೇಗಿದ್ದರೂ ನಿನ್ನ ಕೆಲಸ ಮುಗಿಯಿತು ಅನ್ನಿಸುತ್ತದೆ. ತಗೋ, ಈ ನನ್ನ ಮಗಳ ಕೈ ನಿನಗೆ ಕೊಡುತ್ತೇನೆ. ಇಬ್ಬರೂ ಹೊರಟುಹೋಗಿ!’ ಶುಕ್ರನೆಂದ. ಕಚನೇನೋ ಹೊರಡಲು ತುದಿಗಾಲಲ್ಲಿ ನಿಂತಿದ್ದ. ಆದರೆ ದೇವಯಾನಿಯೊಟ್ಟಿಗೆ ಅಲ್ಲ! ‘ಹೇಗಾಗುವುದು ಗುರುಗಳೇ? ನಮ್ಮಲ್ಲಿ ಈ ಪದ್ಧತಿ ಇಲ್ಲ. ಗುರು ತಂದೆಗೆ ಸಮ. ಗುರುಪುತ್ರಿ ಸಹೋದರಿಯಂತಾಗೋದಿಲ್ವೆ? ನಾವು ಅಸುರರಂತಲ್ಲ!’ ‘ಕಚ, ನಮ್ಮ ಪ್ರೀತಿಯಾಣೆ….?’ ದೇವಯಾನಿ ಬಿಕ್ಕಿದಳು. ಅವ, ‘ಅದು ಸಹೋದರ ಪ್ರೀತಿ ಕಣೇ, ಅನ್ನುತ್ತ ಸ್ವರ್ಗಕ್ಕೆ ಹೊರಟುಹೋದ. ಮುಂದೆ ದೇವಯಾನಿ ಯಯಾತಿಯನ್ನು ಮದುವೆಯಾದಳು. ಮುಂದುವರೆದಿದೆ.......... 🌷🙏❤️ ವಿಮಲ್ ನ್ಯೂಟ್ರಿಷನ್ ಸೆಂಟರ್ ❤️🙏🌷 #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - 75 @ @ ( 46il 4:14 ٢؟ 81 75 @ @ ( 46il 4:14 ٢؟ 81 - ShareChat
ದ್ವಾಪರಯುಗದಲ್ಲಿ ಶೇಷಾಚಲ ಮತ್ತು ಪ್ರಸ್ತುತ ಕಲಿಯುಗದಲ್ಲಿ ವೆಂಕಟಾಚಲ ಎಂದು ಕರೆಯಲಾಗುತ್ತಿತ್ತು....... ವೆಂಕಟೇಶ್ವರ ಸ್ವಾಮಿ ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣುವು ತನ್ನ ಭಕ್ತರ ಮೇಲಿನ ಪ್ರೀತಿಯಿಂದ ವೆಂಕಟೇಶ್ವರನಾಗಿ ಅವತರಿಸಿದನು ಮತ್ತು ಈ ಕಲಿಯುಗದಲ್ಲಿ ಮಾನವೀಯತೆಯ ಮೋಕ್ಷ ಮತ್ತು ಉನ್ನತಿಗಾಗಿ ಕಾಣಿಸಿಕೊಂಡನು. ಇದನ್ನು ಈ ಯುಗದಲ್ಲಿ ವಿಷ್ಣುವಿನ ಪರಮ ರೂಪವೆಂದು ಪರಿಗಣಿಸಲಾಗಿದೆ. ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಕಲಿಯುಗ ವೈಕುಂಟಂ ಎಂದೂ ಕರೆಯುತ್ತಾರೆ. ವೆಂಕಟೇಶ್ವರ ವಿಷ್ಣುವಿನ ಮತ್ತೊಂದು ರೂಪವಾಗಿದ್ದು, ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ದೇವತೆ. ಅವರನ್ನು ವೆಂಕಟಾಚಲಪತಿ ಅಥವಾ ವೆಂಕಟರಮಣ ಅಥವಾ ತಿರುಮಲ್ ದೇವರ್ ಅಥವಾ ವರದರಾಜ ಅಥವಾ ಶ್ರೀನಿವಾಸ ಅಥವಾ ಬಾಲಾಜಿ ಅಥವಾ ಬಿತ್ತಲ ಎಂದೂ ಕರೆಯಲಾಗುತ್ತದೆ. ಅವರು ಕಪ್ಪು ಮೈಬಣ್ಣ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾರೆ. ಅವನ ಎರಡು ಮೇಲಿನ ಕೈಗಳಲ್ಲಿ (ಶಕ್ತಿಯ ಸಂಕೇತ) ಮತ್ತು ಶಂಖದ ನರಕವನ್ನು (ಅಸ್ತಿತ್ವದ ಸಂಕೇತ) ಹಿಡಿದಿದ್ದಾನೆ. ತನ್ನ ಕೆಳಗಿನ ಕೈಗಳನ್ನು ಕೆಳಕ್ಕೆ ಚಾಚಿ ಭಕ್ತರನ್ನು ನಂಬುವಂತೆ ಮತ್ತು ರಕ್ಷಣೆಗಾಗಿ ತನಗೆ ಶರಣಾಗುವಂತೆ ಕೇಳುತ್ತಾನೆ. ವೆಂಕಟೇಶ್ವರನ ಸರ್ವೋಚ್ಚ ದೇವಾಲಯವು ತಿರುಪತಿಯಲ್ಲಿದೆಮತ್ತು ಪ್ರತಿಯೊಬ್ಬ ವಿಷ್ಣು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತಾರೆ.ಒಮ್ಮೆ ಕಶ್ಯಪನ ನೇತೃತ್ವದಲ್ಲಿ ಕೆಲವು ಋಷಿಗಳು ಗಂಗೆಯ ದಡದಲ್ಲಿ ಯಜ್ಞವನ್ನು ಮಾಡಲು ಪ್ರಾರಂಭಿಸಿದರು. ನಾರದ ಮುನಿಅವರನ್ನು ಭೇಟಿ ಮಾಡಿ ಅವರು ಯಜ್ಞವನ್ನು ಏಕೆ ನಡೆಸುತ್ತಿದ್ದಾರೆ ಮತ್ತು ಯಾರಿಗೆ ಸಂತೋಷವಾಗುತ್ತದೆ ಎಂದು ಕೇಳಿದರು. ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಋಷಿಗಳು ಭೃಗು ಋಷಿಯ ಬಳಿ ಬಂದರು. ವಾಸ್ತವದ ನೇರ ನಿರ್ಣಯದ ನಂತರ ಪರಿಹಾರವನ್ನು ತಲುಪಲು, ಋಷಿ ಭೃಗುವು ಮೊದಲು ಬ್ರಹ್ಮನ ನಿವಾಸವಾದ ಸತ್ಯಲೋಕಕ್ಕೆ ಹೋದರು. ಸತ್ಯಲೋಕದಲ್ಲಿ, ಅವನು ಬ್ರಹ್ಮನನ್ನು ಕಂಡು, ಭಗವಾನ್ ನಾರಾಯಣನನ್ನು ಸ್ತುತಿಸುವ ನಾಲ್ಕು ವೇದಗಳನ್ನು ಪಠಿಸುತ್ತಾ, ತನ್ನ ನಾಲ್ಕು ತಲೆಗಳನ್ನು ಹೊಂದಿದ್ದನು ಮತ್ತು ಸರಸ್ವತಿಯಿಂದ ಉಪಸ್ಥಿತನಾದನು. ಭೃಗು ನಮನ ಸಲ್ಲಿಸುವುದನ್ನು ಬ್ರಹ್ಮ ದೇವರು ಗಮನಿಸಲಿಲ್ಲ. ಬ್ರಹ್ಮದೇವನು ಪೂಜೆಗೆ ಅನರ್ಹನೆಂದು ತೀರ್ಮಾನಿಸಿ, ಭೃಗುವು ಸತ್ಯಲೋಕವನ್ನು ತೊರೆದು ಶಿವನ ನೆಲೆಯಾದ ಕೈಲಾಸಕ್ಕೆ ತೆರಳಿದನು. ಕೈಲಾಸದಲ್ಲಿ, ಭೃಗುವು ಶಿವನು ಪಾರ್ವತಿಯೊಂದಿಗೆ ತನ್ನ ಸಮಯವನ್ನು ಆಹ್ಲಾದಕರವಾಗಿ ಕಳೆಯುವುದನ್ನು ಕಂಡನು ಮತ್ತು ಅವನ ಉಪಸ್ಥಿತಿಯನ್ನು ಗಮನಿಸಲಿಲ್ಲ. ಪಾರ್ವತಿಯು ಶಿವನ ಗಮನವನ್ನು ಋಷಿಯ ಉಪಸ್ಥಿತಿಯತ್ತ ಸೆಳೆದಳು. ಭೃಗು ಆಕ್ರಮಣದಿಂದ ಕೋಪಗೊಂಡ ಶಿವನು ಅವನನ್ನು ನಾಶಮಾಡಲು ಪ್ರಯತ್ನಿಸಿದನು. ಋಷಿಯು ಶಿವನನ್ನು ಶಪಿಸಿ ವೈಕುಂಠಕ್ಕೆ ಹೊರಟನು. ವೈಕುಂಠದಲ್ಲಿ, ವಿಷ್ಣುವು ಆದಿಶೇಷನ ಮೇಲೆ ಶ್ರೀ ಮಹಾಲಕ್ಷ್ಮಿಯೊಂದಿಗೆ ಅವನ ಪಾದಗಳಲ್ಲಿ ಸೇವೆ ಸಲ್ಲಿಸುತ್ತಿದ್ದನು. ಭಗವಾನ್ ವಿಷ್ಣುವು ಸಹ ತನ್ನನ್ನು ಗಮನಿಸಲಿಲ್ಲ ಎಂದು ಕಂಡು, ಋಷಿಯು ಕೋಪಗೊಂಡನು ಮತ್ತು ಮಹಾಲಕ್ಷ್ಮಿ ನೆಲೆಸಿರುವ ಅವನ ಎದೆಯ ಮೇಲೆ ಭಗವಂತನನ್ನು ಒದೆಯುತ್ತಾನೆ. ತಕ್ಷಣ, ವಿಷ್ಣುವು ಕೋಪಗೊಂಡ ಋಷಿಯ ಕ್ಷಮೆಯನ್ನು ಕೇಳಲು ಮತ್ತು ಭೃಗುಸ್ ಕಾಲಿಗೆ ಉಂಟಾದ ನೋವನ್ನು ನಿವಾರಿಸಲು ಅವನ ಪಾದಗಳನ್ನು ಒತ್ತಿದನು. ಹೀಗೆ ಮಾಡುವ ಮೂಲಕ ಭಗವಂತನು ಋಷಿಯ ಪಾದದಲ್ಲಿನ ಕಣ್ಣನ್ನು ತೆಗೆದನು, ಅವನ ವಿಶೇಷ ಶಕ್ತಿಯನ್ನು ತೆಗೆದುಹಾಕಿದನು. ಆಗ ಋಷಿಯು ವಿಷ್ಣುವು ತ್ರಿಮೂರ್ತಿಗಳಲ್ಲಿ ಅತ್ಯಂತ ಶ್ರೇಷ್ಠನೆಂದು ತೀರ್ಮಾನಿಸಿದನು ಮತ್ತು ಋಷಿಗಳಿಗೂ ಅದನ್ನೇ ಹೇಳಿದನು. ಋಷಿಯು ಕೋಪಗೊಂಡು ಭಗವಂತನನ್ನು ತನ್ನ ಎದೆಯ ಮೇಲೆ ಒದೆದನು, ಅದು ಮಹಾಲಕ್ಷ್ಮಿ ನೆಲೆಸಿದೆ. ತಕ್ಷಣ, ವಿಷ್ಣುವು ಕೋಪಗೊಂಡ ಋಷಿಯ ಕ್ಷಮೆಯನ್ನು ಕೇಳಲು ಮತ್ತು ಭೃಗುಸ್ ಕಾಲಿಗೆ ಉಂಟಾದ ನೋವನ್ನು ನಿವಾರಿಸಲು ಅವನ ಪಾದಗಳನ್ನು ಒತ್ತಿದನು. ಹೀಗೆ ಮಾಡುವ ಮೂಲಕ ಭಗವಂತನು ಋಷಿಯ ಪಾದದಲ್ಲಿನ ಕಣ್ಣನ್ನು ತೆಗೆದನು, ಅವನ ವಿಶೇಷ ಶಕ್ತಿಯನ್ನು ತೆಗೆದುಹಾಕಿದನು. ಆಗ ಋಷಿಯು ವಿಷ್ಣುವು ತ್ರಿಮೂರ್ತಿಗಳಲ್ಲಿ ಅತ್ಯಂತ ಶ್ರೇಷ್ಠನೆಂದು ತೀರ್ಮಾನಿಸಿದನು ಮತ್ತು ಋಷಿಗಳಿಗೂ ಅದನ್ನೇ ಹೇಳಿದನು. ಋಷಿಯು ಕೋಪಗೊಂಡು ಭಗವಂತನನ್ನು ತನ್ನ ಎದೆಯ ಮೇಲೆ ಒದೆದನು, ಅದು ಮಹಾಲಕ್ಷ್ಮಿ ನೆಲೆಸಿದೆ. ತಕ್ಷಣ, ವಿಷ್ಣುವು ಕೋಪಗೊಂಡ ಋಷಿಯ ಕ್ಷಮೆಯನ್ನು ಕೇಳಲು ಮತ್ತು ಭೃಗುಸ್ ಕಾಲಿಗೆ ಉಂಟಾದ ನೋವನ್ನು ನಿವಾರಿಸಲು ಅವನ ಪಾದಗಳನ್ನು ಒತ್ತಿದನು. ಹೀಗೆ ಮಾಡುವ ಮೂಲಕ ಭಗವಂತನು ಋಷಿಯ ಪಾದದಲ್ಲಿನ ಕಣ್ಣನ್ನು ತೆಗೆದನು, ಅವನ ವಿಶೇಷ ಶಕ್ತಿಯನ್ನು ತೆಗೆದುಹಾಕಿದನು. ಆಗ ಋಷಿಯು ವಿಷ್ಣುವು ತ್ರಿಮೂರ್ತಿಗಳಲ್ಲಿ ಅತ್ಯಂತ ಶ್ರೇಷ್ಠನೆಂದು ತೀರ್ಮಾನಿಸಿದನು ಮತ್ತು ಋಷಿಗಳಿಗೂ ಅದನ್ನೇ ಹೇಳಿದನು. ವೆಂಕಟೇಶ್ವರನಾಗಿ ವಿಷ್ಣು ಅಪರಾಧ ಮಾಡಿದ ಭೃಗುವಿಗೆ ಕ್ಷಮೆ ಕೇಳಿದ ತನ್ನ ಭಗವಂತನ ಕ್ರಿಯೆಯಿಂದ ಶ್ರೀ ಮಹಾಲಕ್ಷ್ಮಿಯು ಕೋಪಗೊಂಡಳು. ಕೋಪ ಮತ್ತು ದುಃಖದಿಂದ ಅವಳು ವೈಕುಂಠವನ್ನು ತೊರೆದು ಈಗ ಕೊಲ್ಲಾಪುರ ಎಂದು ಕರೆಯಲ್ಪಡುವ ಕರವೀರಪುರದಲ್ಲಿ ನೆಲೆಸಿದಳು. ಮಹಾಲಕ್ಷ್ಮಿಯ ನಿರ್ಗಮನದ ನಂತರ, ಭಗವಾನ್ ವಿಷ್ಣುವು ವೈಕುಂಠವನ್ನು ತೊರೆದು ವೆಂಕಟ ಬೆಟ್ಟದ ಪುಷ್ಕರಿಣಿಯ ಪಕ್ಕದಲ್ಲಿ ಹುಣಸೆ ಮರದ ಕೆಳಗೆ ಇರುವೆ ಬೆಟ್ಟದಲ್ಲಿ ವಾಸವಾಗಿದ್ದು, ಲಕ್ಷ್ಮಿಯ ಮರಳುವಿಕೆಗಾಗಿ ಊಟ ಮತ್ತು ನಿದ್ರೆಯಿಲ್ಲದೆ ಧ್ಯಾನ ಮಾಡುತ್ತಾನೆ. ಭೂಮಿ ತಾಯಿಯನ್ನು ರಕ್ಷಿಸಲು ಭಗವಂತ ವರಾಹ ರೂಪವನ್ನು ಪಡೆದ ಸ್ಥಳ ಇದು . ಭಗವಾನ್ ವಿಷ್ಣುವಿನ ಮೇಲೆ ಕರುಣೆ ತೋರಿ, ಬ್ರಹ್ಮ ಮತ್ತು ಮಹೇಶ್ವರರು ಹಸುವಿನ ಮತ್ತು ಅದರ ಕರುವಿನ ರೂಪವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಸೂರ್ಯ, ಸೂರ್ಯ ದೇವರುಮಹಾಲಕ್ಷ್ಮಿಗೆ ಇದನ್ನು ತಿಳಿಸಿ, ಗೋಪಾಲಕರ ರೂಪವನ್ನು ತಾಳಲು ಮತ್ತು ಹಸು ಮತ್ತು ಕರುವನ್ನು ಚೋಳ ದೇಶದ ರಾಜನಿಗೆ ಮಾರಾಟ ಮಾಡಲು ವಿನಂತಿಸಿದನು. ಚೋಳ ದೇಶದ ರಾಜನು ಹಸು ಮತ್ತು ಅದರ ಕರುವನ್ನು ಖರೀದಿಸಿ ತನ್ನ ದನಗಳ ಹಿಂಡಿನೊಂದಿಗೆ ವೆಂಕಟ ಬೆಟ್ಟಕ್ಕೆ ಮೇಯಿಸಲು ಕಳುಹಿಸಿದನು. ಇರುವೆ ಬೆಟ್ಟದ ಮೇಲೆ ಭಗವಾನ್ ವಿಷ್ಣುವನ್ನು ಕಂಡು, ಹಸು ತನ್ನ ಹಾಲನ್ನು ನೀಡಿತು ಮತ್ತು ಹೀಗೆ ಭಗವಂತನಿಗೆ ಆಹಾರವನ್ನು ನೀಡಿತು. ಏತನ್ಮಧ್ಯೆ, ಅರಮನೆಯಲ್ಲಿ, ಹಸು ಹಾಲು ನೀಡಲಿಲ್ಲ, ಅದಕ್ಕಾಗಿ ಚೋಳ ರಾಣಿ ಗೋಪಾಲಕನನ್ನು ತೀವ್ರವಾಗಿ ಶಿಕ್ಷಿಸಿದಳು. ಹಾಲಿನ ಕೊರತೆಯ ಕಾರಣವನ್ನು ಕಂಡುಹಿಡಿಯಲು, ಗೋಪಾಲಕನು ಹಸುವನ್ನು ಹಿಂಬಾಲಿಸಿದನು, ಪೊದೆಯ ಹಿಂದೆ ಅಡಗಿಕೊಂಡನು ಮತ್ತು ಹಸು ಇರುವೆ ಬೆಟ್ಟದ ಮೇಲೆ ತನ್ನ ಕೆಚ್ಚಲು ಖಾಲಿ ಮಾಡುವುದನ್ನು ಕಂಡುಹಿಡಿದನು. ಹಸುವಿನ ವರ್ತನೆಯಿಂದ ಕೋಪಗೊಂಡ ಗೋಪಾಲಕನು ತನ್ನ ಕೊಡಲಿಯಿಂದ ಹಸುವಿನ ತಲೆಯ ಮೇಲೆ ಒಂದು ಹೊಡೆತವನ್ನು ಹೊಡೆದನು. ಆದಾಗ್ಯೂ, ಭಗವಾನ್ ವಿಷ್ಣುವು ಹೊಡೆತವನ್ನು ಸ್ವೀಕರಿಸಲು ಮತ್ತು ಹಸುವನ್ನು ರಕ್ಷಿಸಲು ಇರುವೆ ಬೆಟ್ಟದಿಂದ ಮೇಲೆದ್ದನು. ಹಸುವು ಭಯದಿಂದ ಮತ್ತು ತನ್ನ ದೇಹದಾದ್ಯಂತ ರಕ್ತದ ಕಲೆಗಳೊಂದಿಗೆ ಚೋಳ ರಾಜನ ಬಳಿಗೆ ಮರಳಿತು. ಹಸುವಿನ ಭಯದ ಕಾರಣವನ್ನು ಕಂಡುಹಿಡಿಯಲು, ರಾಜನು ಘಟನೆಯ ಸ್ಥಳಕ್ಕೆ ಅವಳನ್ನು ಹಿಂಬಾಲಿಸಿದನು. ಇರುವೆ ಬೆಟ್ಟದ ಬಳಿ ನೆಲದ ಮೇಲೆ ಸತ್ತ ಗೋಪಾಲಕನನ್ನು ರಾಜನು ಕಂಡುಕೊಂಡನು. ಇದು ಹೇಗೆ ಸಂಭವಿಸಿತು ಎಂದು ಅವನು ಆಶ್ಚರ್ಯ ಪಡುತ್ತಿರುವಾಗ, ವಿಷ್ಣುವು ಇರುವೆ ಬೆಟ್ಟದಿಂದ ಎದ್ದು ರಾಜನಿಗೆ ತನ್ನ ಸೇವಕನ ತಪ್ಪಿನಿಂದಾಗಿ ಅಸುರನಾಗುತ್ತಾನೆ ಎಂದು ಶಪಿಸಿದನು. ರಾಜನು ನಿರಪರಾಧಿ ಎಂದು ವಾದಿಸಿದನು ಮತ್ತು ಭಗವಂತನು ಅವನಿಗೆ ಆಕಾಶರಾಜನಾಗಿ ಮರುಜನ್ಮ ನೀಡುತ್ತಾನೆ ಮತ್ತು ಪದ್ಮಾವತಿಯೊಂದಿಗಿನ ಮದುವೆಯ ಸಮಯದಲ್ಲಿ ಆಕಾಶರಾಜನು ಅರ್ಪಿಸಿದ ಕಿರೀಟದಿಂದ ಭಗವಂತನನ್ನು ಅಲಂಕರಿಸಿದಾಗ ಶಾಪವು ಕೊನೆಗೊಳ್ಳುತ್ತದೆ ಎಂದು ಹೇಳಿ ಆಶೀರ್ವದಿಸಿದನು. ಈ ಮಾತುಗಳಿಂದ ಭಗವಂತ ಕಲ್ಲಿನ ರೂಪಕ್ಕೆ ತಿರುಗಿದನು. ನಂತರ ಶ್ರೀನಿವಾಸನ ಹೆಸರಿನಲ್ಲಿ ವಿಷ್ಣುವು ವರಾಹ ಕ್ಷೇತ್ರದಲ್ಲಿ ನೆಲೆಸಲು ನಿರ್ಧರಿಸಿದನು. ಮತ್ತು ಶ್ರೀ ವರಾಹಸ್ವಾಮಿ ಅವರ ವಾಸ್ತವ್ಯಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದರು. ಅವರ ಕೋರಿಕೆಯನ್ನು ತಕ್ಷಣವೇ ಪುರಸ್ಕರಿಸಿದ ಶ್ರೀನಿವಾಸನು ಪುಷ್ಕರಿಣಿಯಲ್ಲಿ ಸ್ನಾನ ಮತ್ತು ಶ್ರೀ ವರಾಹಸ್ವಾಮಿಯ ದರ್ಶನವನ್ನು ಮಾಡದ ಹೊರತು ತನ್ನ ತೀರ್ಥಯಾತ್ರೆ ಪೂರ್ಣಗೊಳ್ಳುವುದಿಲ್ಲ ಮತ್ತು ಮೊದಲು ಶ್ರೀ ವರಾಹ ಸ್ವಾಮಿಗೆ ಪೂಜೆ ಮತ್ತು ನೈವೇದ್ಯವನ್ನು ಅರ್ಪಿಸಬೇಕೆಂದು ಆದೇಶಿಸಿದನು. ವಿಷ್ಣುವು ಆಶ್ರಮವನ್ನು ನಿರ್ಮಿಸಿ ಅಲ್ಲಿ ವಾಸಿಸುತ್ತಿದ್ದನು, ವಕುಲಾದೇವಿಯು ಅವನನ್ನು ತಾಯಿಯಂತೆ ನೋಡಿಕೊಳ್ಳುತ್ತಾಳೆ. ಯಶೋದೆ ವಕುಲಾದೇವಿಯಾಗಿ ಮರುಜನ್ಮ ಪಡೆದಿದ್ದಾಳೆ ದೇವಕಿಯ ಮಗನಾದ ಶ್ರೀ ಕೃಷ್ಣನನ್ನು ಯಶೋದೆ ತನ್ನ ಆರಂಭಿಕ ವರ್ಷಗಳಲ್ಲಿ ಬೆಳೆಸಿದಳು. ಆದಾಗ್ಯೂ, ರುಕ್ಮಿಣಿಯೊಂದಿಗೆ ಶ್ರೀಕೃಷ್ಣನ ವಿವಾಹವನ್ನು ವೀಕ್ಷಿಸಲು ಯಶೋದೆಯು ಧನ್ಯಳಾಗಲಿಲ್ಲ ಮತ್ತು ಅವಳು ತುಂಬಾ ದುಃಖಿತಳಾಗಿದ್ದಳು. ಶ್ರೀಕೃಷ್ಣ ಮುಂದಿನ ಜನ್ಮದಲ್ಲಿ ವಕುಲಾದೇವಿಯಾಗಿ ತನ್ನ ಮುಂದಿನ ಅವತಾರದಲ್ಲಿ ಶ್ರೀನಿವಾಸನಾಗಿ ಅವಳ ಆಸೆಯನ್ನು ಪೂರೈಸುವ ಭರವಸೆ ನೀಡಿದನು. ರುಕ್ಮಿಣಿಯ ಮುಂದಿನ ಜನ್ಮದಲ್ಲಿ ವಕುಲಾದೇವಿಯಾಗಿ, ವರಾಹಸ್ವಾಮಿಯನ್ನು ಶ್ರೀನಿವಾಸನ ಸೇವೆಗೆ ಕಳುಹಿಸಿದಾಗ ಅವಳು ಭಗವಂತನ ಸೇವೆ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ, ಚಂದ್ರ ಜನಾಂಗಕ್ಕೆ ಸೇರಿದ ಆಕಾಶರಾಜ ಎಂಬ ರಾಜನು ತೊಂಡಮಂಡಲವನ್ನು ಆಳುತ್ತಿದ್ದನು. ಆಕಾಶ ರಾಜನಿಗೆ ಉತ್ತರಾಧಿಕಾರಿಗಳಿಲ್ಲ, ಆದ್ದರಿಂದ ಅವನು ಯಜ್ಞವನ್ನು ಮಾಡಲು ಬಯಸಿದನು. ತ್ಯಾಗದ ಭಾಗವಾಗಿ, ಅವನು ಹೊಲಗಳನ್ನು ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲು ನೆಲದಲ್ಲಿ ಕಮಲವನ್ನು ತಿರುಗಿಸಿತು. ಕಮಲವನ್ನು ಪರೀಕ್ಷಿಸಿದಾಗ, ರಾಜನು ಅದರಲ್ಲಿ ಹೆಣ್ಣು ಮಗುವನ್ನು ಕಂಡುಕೊಂಡನು. ರಾಜನು ಯಜ್ಞವನ್ನು ಮಾಡುವ ಮೊದಲು ಮಗುವನ್ನು ಕಂಡು ಸಂತೋಷಪಟ್ಟನು ಮತ್ತು ಅದನ್ನು ತನ್ನ ಸ್ಥಳಕ್ಕೆ ಒಯ್ದು ತನ್ನ ರಾಣಿಗೆ ಅದನ್ನು ನೋಡಿಕೊಳ್ಳಲು ಕೊಟ್ಟನು. ಆ ಸಮಯದಲ್ಲಿ ಅವರು ವೈಮಾನಿಕ ಧ್ವನಿಯನ್ನು ಕೇಳಿದರು, ಅದು "ಓ ರಾಜ, ಇದನ್ನು ನಿಮ್ಮ ಮಗುವಿನಂತೆ ನೋಡಿಕೊಳ್ಳಿ ಮತ್ತು ಅದೃಷ್ಟವು ನಿಮಗೆ ಬರುತ್ತದೆ". ಅವಳು ಕಮಲದಲ್ಲಿ ಕಂಡುಬಂದಿದ್ದರಿಂದ, ರಾಜನು ಪದ್ಮಾವತಿ ಎಂದು ಹೆಸರಿಸಿದನು. ರಾಜಕುಮಾರಿ ಪದ್ಮಾವತಿಯು ಸುಂದರ ಕನ್ಯೆಯಾಗಿ ಬೆಳೆದಳು ಮತ್ತು ದಾಸಿಯರ ಗುಂಪಿಗೆ ಸೇರಿದ್ದರು. ತಿರುಮಲ ಪವಿತ್ರ ಪಟ್ಟಣ: ದೇವಾಲಯದ ಪಟ್ಟಣವಾದ ತಿರುಪತಿಯು ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯ ಚಂದ್ರಗಿರಿ ತಾಲೂಕಿನ ತಿರುಮಲ ಬೆಟ್ಟಗಳ ತಪ್ಪಲಿನಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 2,800 ಅಡಿ ಎತ್ತರದಲ್ಲಿರುವ ಬೆಟ್ಟದ ಮೇಲಿನ ಪವಿತ್ರ ಸ್ಥಳವನ್ನು ತಿರುಮಲ ಎಂದು ಕರೆಯಲಾಗುತ್ತದೆ, ಇದು ಭಗವಾನ್ ವೆಂಕಟೇಶ್ವರನ ವಾಸಸ್ಥಾನವಾಗಿದೆ. ಈ ಬೆಟ್ಟವು ಪೂರ್ವ ಘಟ್ಟಗಳ ಭಾಗವಾಗಿದೆ ಮತ್ತು ಇದನ್ನು ವೆಂಕಟಾಚಲ ಮತ್ತು ಶೇಷಾಚಲ ಎಂದೂ ಕರೆಯಲಾಗುತ್ತದೆ. ಈ ಭಾಗದಲ್ಲಿರುವ ಪೂರ್ವ ಘಟ್ಟಗಳು ಅವುಗಳ ವಕ್ರಾಕೃತಿಗಳು, ಎತ್ತರಗಳು ಮತ್ತು ಜಲಪಾತಗಳೊಂದಿಗೆ ಸರ್ಪ ಆದಿಶೇಷನನ್ನು ಹೋಲುತ್ತವೆ ಮತ್ತು ತಿರುಪತಿಯ ಏಳು ಬೆಟ್ಟಗಳು ಅದರ ಏಳು ತಲೆಗಳು ಮತ್ತು ಭಗವಾನ್ ನರಸಿಂಹ ಮೂರ್ತಿ ಇರುವ ಅಹೋಬಲಂ ಎಂದು ಹೇಳಲಾಗುತ್ತದೆ.ಆದಿಶೇಷನ ಕೇಂದ್ರವನ್ನು ಪ್ರತಿನಿಧಿಸುವ ಪೂಜಿಸಲಾಗುತ್ತದೆ, ಮತ್ತು ಶ್ರೀಶೈಲವು ಆದಿಶೇಷನ ಬಾಲದ ತುದಿಯನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿಯೇ ತಿರುಮಲಕ್ಕೆ ಶೇಷಾಚಲ ಎಂದು ಕರೆಯುತ್ತಾರೆ. ದಂತಕಥೆಗಳ ಪ್ರಕಾರ, ಇದು ಎಲ್ಲಾ ನಾಲ್ಕು ಯುಗಗಳಲ್ಲಿ ಪವಿತ್ರ ಸ್ಥಳವಾಗಿದೆ ಮತ್ತು ಇದನ್ನು ಕೃತಯುಗದಲ್ಲಿ ವೃಷಭಾಚಲ, ತ್ರೇತಾಯುಗದಲ್ಲಿ ಅಂಜನಾಚಲ, ದ್ವಾಪರಯುಗದಲ್ಲಿ ಶೇಷಾಚಲ ಮತ್ತು ಪ್ರಸ್ತುತ ಕಲಿಯುಗದಲ್ಲಿ ವೆಂಕಟಾಚಲ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿ, ಇತರ ವಿಷ್ಣು ದೇವಾಲಯಗಳಂತೆ, ನಮಗೆ ಯಾವುದೇ ಸಣ್ಣ ದೇವಾಲಯಗಳು ಅಥವಾ ವೈಷ್ಣವ ಸಂತರ ವಿಗ್ರಹಗಳು ಕಂಡುಬರುವುದಿಲ್ಲ. ವೆಂಕಟೇಶ್ವರ ದೇವಸ್ಥಾನದ ಹೊರತಾಗಿ , ತಿರುಮಲದಲ್ಲಿನ ಇತರ ಪ್ರಮುಖ ಸ್ಥಳಗಳು ಮತ್ತು ಸ್ವಾಮಿ ಪುಷ್ಕರಿಣಿ, ಪಾಪವಿನಾಸಂ ಮತ್ತು ಆಕಾಶಗಂಗಾ ಜಲಪಾತಗಳು, ವರಾಹಸ್ವಾಮಿ ದೇವಾಲಯ ಮತ್ತು ಶಿಲಾ ತೋರಣಂ 10,000 ವರ್ಷಗಳಷ್ಟು ಹಳೆಯದಾದ ಅತ್ಯಂತ ಪುರಾತನವಾದ ಶಿಲಾ ರಚನೆಯಾಗಿದೆ. 🌷🙏❤️ ವಿಮಲ್ ನ್ಯೂಟ್ರಿಷನ್ ಸೆಂಟರ್ ❤️🙏🌷 #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ceativevbes Uma ceativevbes Uma - ShareChat