Anthoniraj
ShareChat
click to see wallet page
@anthoniraj4671
anthoniraj4671
Anthoniraj
@anthoniraj4671
ಐ ಲವ್ ಶೇರ್ ಚಾಟ್
ಮಹಾಶಿವರಾತ್ರಿಯ ದಿನದ ಶುಭಾಶಯಗಳು ಶಿವನಿಗೆ ಸಾವಿರಾರು ಹೆಸರುಗಳಿವೆ (ಶಿವ ಸಹಸ್ರನಾಮ). ಅವುಗಳಲ್ಲಿ ಪ್ರಮುಖವಾದ ಮತ್ತು ಅತ್ಯಂತ ಜನಪ್ರಿಯವಾದ ಕೆಲವು ಹೆಸರುಗಳನ್ನು ಕೆಳಗೆ ನೀಡಲಾಗಿದೆ: ಶಿವನ ಪ್ರಮುಖ ಹೆಸರುಗಳು * ಮಹಾದೇವ (ದೇವತೆಗಳಿಗೂ ದೇವ) * ಶಂಕರ (ಶುಭವನ್ನು ಉಂಟುಮಾಡುವವನು) * ಮಹೇಶ್ವರ (ಪರಮ ಪ್ರಭು) * ನೀಲಕಂಠ (ವಿಷವನ್ನು ಕುಡಿದು ಕುತ್ತಿಗೆಯನ್ನು ನೀಲಿ ಮಾಡಿಕೊಂಡವನು) * ಪಶುಪತಿ (ಎಲ್ಲಾ ಜೀವಿಗಳ ಒಡೆಯ) * ರುದ್ರ (ದುಷ್ಟರನ್ನು ಶಿಕ್ಷಿಸುವವನು) * ತ್ರಿನೇತ್ರ (ಮೂರು ಕಣ್ಣುಗಳುಳ್ಳವನು) * ಗಂಗಾಧರ (ಗಂಗೆಯನ್ನು ತಲೆಯಲ್ಲಿ ಧರಿಸಿದವನು) * ಚಂದ್ರಶೇಖರ (ಚಂದ್ರನನ್ನು ಮುಡಿಯಲ್ಲಿ ಮುಡಿದವನು) * ಭೋಲೇನಾಥ (ಬೇಗನೆ ಪ್ರಸನ್ನನಾಗುವ ಮುಗ್ಧ ದೇವ) * ವಿಶ್ವನಾಥ (ಜಗತ್ತಿನ ಒಡೆಯ) * ಕೈಲಾಸಪತಿ (ಕೈಲಾಸ ಪರ್ವತದ ಒಡೆಯ) * ಪರಮೇಶ್ವರ (ಅತ್ಯುನ್ನತ ದೇವರು) * ಓಂಕಾರ (ಓಂಕಾರ ಸ್ವರೂಪಿ) * ಮೃತ್ಯುಂಜಯ (ಮೃತ್ಯುವನ್ನು ಗೆದ್ದವನು) * ನಟರಾಜ (ನೃತ್ಯದ ರಾಜ) * ವೈದ್ಯನಾಥ (ಆರೋಗ್ಯ ನೀಡುವವನು) * ಕಾಲಭೈರವ (ಕಾಲದ ಭಯವನ್ನು ಹೋಗಲಾಡಿಸುವವನು) * ಅರ್ಧನಾರೀಶ್ವರ (ಶಕ್ತಿ ಮತ್ತು ಶಿವನ ಸಂಗಮ) * ಗಿರಿಜಾಪತಿ (ಪಾರ್ವತಿಯ ಪತಿ) ಇತರ ಕೆಲವು ವಿಶೇಷ ಹೆಸರುಗಳು: * ಜಟಾಧರ * ತ್ರಿಶೂಲಧಾರಿ * ಲಲಾಟಾಕ್ಷ * ವೀರಭದ್ರ * ಸದಾಶಿವ * ಪಂಚಮುಖಿ * ಭೂತನಾಥ * ಉಗ್ರ * ವಿನಾಯಕಪ್ರಿಯ * ಅಜೇಯ *ಹರೀಶ * ವ್ಯೋಮಕೇಶ (ಆಕಾಶವನ್ನೇ ಕೂದಲಾಗಿ ಉಳ್ಳವನು) * ದಿಗಂಬರ (ದಿಕ್ಕುಗಳನ್ನೇ ವಸ್ತ್ರವಾಗಿ ಧರಿಸಿದವನು) * ತ್ರಿಪುರಾರಿ (ತ್ರಿಪುರ ಎಂಬ ಅಸುರರ ನಗರಗಳನ್ನು ನಾಶ ಮಾಡಿದವನು) * ಸ್ಮರಹರ (ಮನ್ಮಥನನ್ನು ದಹಿಸಿದವನು) * ಭವ (ಜಗತ್ತಿನ ಉಗಮಕ್ಕೆ ಕಾರಣನಾದವನು) * ಸರ್ವ (ಎಲ್ಲೆಡೆ ವ್ಯಾಪಿಸಿರುವವನು) * ಶಿತಿಕಂಠ (ಬಿಳಿ ಕುತ್ತಿಗೆಯವನು - ವಿಷ ಧರಿಸುವ ಮುನ್ನ) * ಕಪರ್ದಿ (ಜಟೆಯನ್ನು ಹೊಂದಿರುವವನು) * ಅಘೋರ (ಭಯಂಕರವಲ್ಲದ ಅಥವಾ ಸೌಮ್ಯರೂಪಿ) * ಪಿನಾಕಿ (ಪಿನಾಕ ಎಂಬ ಧನಸ್ಸನ್ನು ಹಿಡಿದವನು) * ಖಟ್ವಾಂಗಿ (ಖಟ್ವಾಂಗ ಎಂಬ ಆಯುಧ ಧರಿಸಿದವನು) * ಅವಧೂತ (ಸಂಸಾರ ಮಾಯೆಯನ್ನು ತೊರೆದವನು) * ವಿರೂಪಾಕ್ಷ (ವಿಚಿತ್ರವಾದ ಕಣ್ಣುಗಳುಳ್ಳವನು - ಜ್ಞಾನನೇತ್ರ) * ದಕ್ಷಿಣಾಮೂರ್ತಿ (ಗುರು ಸ್ವರೂಪಿಯಾಗಿ ದಕ್ಷಿಣಕ್ಕೆ ಮುಖ ಮಾಡಿ ಕುಳಿತವನು) ಪ್ರಕೃತಿ ಮತ್ತು ಗುಣಕ್ಕೆ ಸಂಬಂಧಿಸಿದ ಹೆಸರುಗಳು: * ಅಶುತೋಷ (ತಕ್ಷಣವೇ ತೃಪ್ತನಾಗುವವನು) * ಸ್ಥಾಣು (ಚಲನೆಯಿಲ್ಲದ, ಸ್ಥಿರವಾದ ತತ್ವ) * ಅನಂತ (ಅಂತ್ಯವಿಲ್ಲದವನು) * ಜೋತಿಸ್ವರೂಪ (ಬೆಳಕಿನ ರೂಪದವನು) * ಹರ (ಪಾಪಗಳನ್ನು ಹರಿಸುವವನು) * ಈಶಾನ (ಐದು ಮುಖಗಳಲ್ಲಿ ಒಂದು - ಜ್ಞಾನದ ಸಂಕೇತ) * ಭರ್ಗ (ಪಾಪಗಳನ್ನು ಸುಡುವ ತೇಜಸ್ಸು) * ಶೂಲಪಾಣಿ (ಕೈಯಲ್ಲಿ ಶೂಲ ಹಿಡಿದವನು) * ವೃಷಭಾರೂಢ (ನಂದಿಯ ಮೇಲೆ ಸವಾರಿ ಮಾಡುವವನು) * ಸೋಮಶೇಖರ (ತಂಪಾದ ಚಂದ್ರನನ್ನು ಧರಿಸಿದವನು) ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat
ಪ್ರಾಚೀನ ಭಾರತದ ಮೊದಲ ಪ್ರೇಮಪತ್ರ ..... ಭಾಗವತ ಪುರಾಣದ ಪ್ರಕಾರ, ವಿದರ್ಭದ ರಾಜಕುಮಾರಿ ರುಕ್ಮಿಣಿ .ಅವರು ಭಾರತೀಯ ಪೌರಾಣಿಕ ಇತಿಹಾಸದಲ್ಲಿನ ಮೊದಲ ದಾಖಲೆಯಾದ ಪ್ರೇಮಪತ್ರವನ್ನು ಬರೆದ ಮಹಿಳೆ ಎಂದು ನಂಬಲಾಗುತ್ತದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ರಾಜ ಶಿಶುಪಾಲನೊಂದಿಗೆ ವಿವಾಹಕ್ಕೆ ಒತ್ತಾಯಿಸಲ್ಪಟ್ಟಾಗ ಅವರು ಭಯಕ್ಕಿಂತ ಭಕ್ತಿ ಮತ್ತು ಸ್ವೈಚ್ಛಿಕತೆಯನ್ನು ಆಯ್ಕೆ ಮಾಡಿಕೊಂಡರು ರುಕ್ಮಿಣಿ ಗುಪ್ತವಾಗಿ ಒಬ್ಬ ವಿಶ್ವಾಸಾರ್ಹ ಬ್ರಾಹ್ಮಣ ದೂತನನ್ನು ದ್ವಾರಕೆಗೆ ಕಳುಹಿಸಿ, ಭಗವಾನ್ ಶ್ರೀಕೃಷ್ಣರಿಗೆ ಒಂದು ಹೃದಯಸ್ಪರ್ಶಿ ಪತ್ರವನ್ನು ಕಳುಹಿಸಿದರು ಆ ಪತ್ರದಲ್ಲಿ ಅವರು ಶ್ರೀಕೃಷ್ಣರನ್ನು “ಭುವನ ಸುಂದರ” — ವಿಶ್ವದಲ್ಲೇ ಅತಿ ಸುಂದರನಾದವನು ಎಂದು ಕರೆದರು. ತಮ್ಮ ಸಂಪೂರ್ಣ ಶರಣಾಗತಿಯನ್ನು ವ್ಯಕ್ತಪಡಿಸಿ ಬಲವಂತದ ಮದುವೆಯ ಮುನ್ನವೇ ಬಂದು ತಮಗೆ ರಕ್ಷಣೆ ನೀಡಿ ವಿವಾಹವಾಗಬೇಕೆಂದು ವಿನಂತಿಸಿದರು ಅದು ಕೇವಲ ಒಂದು ಪತ್ರವಲ್ಲ… ಅದು ಒಂದು ಮಹಿಳೆಯ ಧೈರ್ಯದ ಘೋಷಣೆ ತಮ್ಮ ವಿಧಿಯನ್ನು ತಾವೇ ಆಯ್ಕೆ ಮಾಡಿದ ಸಾಹಸ ತಮ್ಮ ಭಕ್ತಿ, ನಂಬಿಕೆ ಮತ್ತು ಪ್ರೀತಿಯ ಮೇಲಿನ ಅಚಲ ವಿಶ್ವಾಸ ಶ್ರೀಕೃಷ್ಣರು ಅವರ ಧೈರ್ಯವನ್ನು ಗೌರವಿಸಿ ವಿದರ್ಭಕ್ಕೆ ಬಂದು ರುಕ್ಮಿಣಿಯನ್ನು ರಕ್ಷಿಸಿ, ದ್ವಾರಕೆಯಲ್ಲಿ ವಿವಾಹವಾದರು. ಪ್ರಾಚೀನ ಭಾರತ ಪ್ರೀತಿಯನ್ನು ಮಾತ್ರ ಅರ್ಥ ಮಾಡಿಕೊಂಡಿರಲಿಲ್ಲ… ಅದು ಆಯ್ಕೆ, ಭಕ್ತಿ ಮತ್ತು ಆಂತರಿಕ ಶಕ್ತಿಯನ್ನು ಗೌರವಿಸುತ್ತಿತ್ತು 📖 ಮೂಲ: ಭಾಗವತ ಪುರಾಣ (ಸ್ಕಂಧ 10 – ರುಕ್ಮಿಣಿ ಕಲ್ಯಾಣ) ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ವಿಶ್ವದ ಮೊದಲ ಪ್ರೇಮ ಪತ್ರ ವಿಶ್ವದ ಮೊದಲ ಪ್ರೇಮ ಪತ್ರ - ShareChat
ಜನ್ಮಾಂತರದ_ಕರ್ಮಫಲದ_ಸಂಬಂಧಗಳು :- ಬಹಳ ಹಿಂದೆ ಧರ್ಮಪಾಲ ಎಂಬ ರಾಜನಿದ್ದನು. ಹೆಸರಿಗೆ ತಕ್ಕಂತೆ ಧರ್ಮಪಾಲನೆಯನ್ನು ಮಾಡುತ್ತಿದ್ದ . 'ಯಥಾ ರಾಜ ತಥಾ ಪ್ರಜಾ' ರಾಜನಂತೆ ರಾಜ್ಯವು ಸುಭೀಕ್ಷ ವಾಗಿತ್ತು. ರಾಜನು ಆಸ್ತಿಕನಾಗಿದ್ದನು. ಅರಮನೆಗೆ ಹತ್ತಿರದ ಗುಡ್ಡದಮೇಲೆ ದೇವಸ್ಥಾನವನ್ನು ಕಟ್ಟಿಸುತ್ತಾನೆ. ದೇವರ ಪೂಜೆಗೆಂದು ಒಬ್ಬ ವಿಪ್ರ ನನ್ನು ನೇಮಿಸುತ್ತಾನೆ. ಆ ವಿಪ್ರನು ಒಳ್ಳೆಯವನೂ ಧರ್ಮಾತ್ಮನು ಆಗಿದ್ದನು. ರಾಜನಿಗೆ ಹಾರವನ ಗುಣ ನಡೆಗಳು, ರಾಜನ ಪ್ರಸನ್ನತೆ, ನ್ಯಾಯ ಮಾರ್ಗಗಳ ಕುರಿತು ಬ್ರಾಹ್ಮಣನಿಗೂ ಗೌರವವಿತ್ತು. ಬ್ರಾಹ್ಮಣ ಪೂಜೆಗೆ ಬಂದು ಇಪ್ಪತ್ತು ವರ್ಷ ಕಳೆದು ಹೋಗಿದೆ. ರಾಜನು, ಇದುವರೆಗೂ ಒಂದೇ ಒಂದು ಆದೇಶದ ಮಾತನ್ನು ಅರ್ಚಕನಿಗೆ ಹೇಳುವ ಸಂದರ್ಭ ಬರಲಿಲ್ಲ . ರಾಜನಿಗೆ ಕೆಲವು ಕಾಲದ ನಂತರ ಪುತ್ರ ಸಂತಾನವಾಗಿ ತುಂಬಾ ಸಂತೋಷ ವಾಯಿತು. ಮಗನಿಗೆ ಗುರುಕುಲದಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಿದನು. ವಯಸ್ಸಿಗೆ ಬಂದಮೇಲೆ ಸುಂದರ ರಾಜಕುಮಾರಿ ಜೊತೆ ಮದುವೆ ಮಾಡಿದನು. ಮದುವೆ ದಿನ ರಾತ್ರಿ ರಾಜಕುಮಾರಿಗೆ ನಿದ್ದೆ ಬರಲಿಲ್ಲ. ಹೀಗಾಗಿ ರೂಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಳು. ಹೀಗೆ ಓಡಾಡುವಾಗ ರಾಜಕುಮಾರ ಮಲಗಿದ ಮಂಚದ ಹತ್ತಿರ ವಜ್ರಖಚಿತವಾದ ಅಪರೂಪದ ಕತ್ತಿಯನ್ನು ನೋಡಿದಳು. ಕೈಯಲ್ಲಿ ತೆಗೆದುಕೊಂಡಳು. ಕಣ್ಣು ಕೋರೈಸುವಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಭಯದಿಂದ ಅವಳ ಕೈ ಜಾರಿ ಬಿದ್ದ ಕತ್ತಿ ರಾಜಕುಮಾರನ ಕುತ್ತಿಗೆ ಕತ್ತರಿಸಿತು. ಪ್ರಾಣ ಹೋಯಿತು. ರಾಜಕುಮಾರಿಗೆ ಬಹಳ ಹೆದರಿಕೆ ಆಯ್ತು. ರಾಜಕುಮಾರನನ್ನು ತಾನು ಕೊಂದಿದ್ದೇನೆ ಎಂದರೆ ತನಗೆ ಕಠಿಣ ಶಿಕ್ಷೆ ಆಗುತ್ತದೆ ಎಂದುಕೊಂಡು ನಡುಗಿದಳು. ಬೆಳಗಾಯಿತು ಸೇವಕರಿಂದ ವಿಷಯ ತಿಳಿದ ರಾಜನು ಕೊಣೆಗೆ ಬಂದನು.ವಿಚಾರಿಸಿದಾಗ, ಅಪರಿಚಿತರು ರಾಜಕುಮಾರನನ್ನು ಕೊಲೆ ಮಾಡಿ ಗುಡ್ಡದ ಸಮೀಪ ದೇವಸ್ಥಾನದ ಒಳಗೆ ಹೋದಂತೆ ನೋಡಿದೆ ಹೀಗೆ ರಾಜಕುಮಾರಿ ಹೇಳಿದಳು. ರಾಜನ ಆದೇಶದಂತೆ ಸೇವಕರು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಬ್ರಾಹ್ಮಣನು ಒಳಗೆ ದೇವರ ಪೂಜೆ ಮಾಡುತ್ತಿದ್ದನು. ಅವನನ್ನೇ ಹಿಡಿದು ಹೊರಗೆ ತಂದರು. ರಾಜನು ಆ ಬ್ರಾಹ್ಮಣನನ್ನು ವಿಚಾರಿಸಿದಾಗ, ನನಗೇನೂ ತಿಳಿಯದು. ಇಷ್ಟಕ್ಕೂ ನಿಮ್ಮ ಮಗನನ್ನು ಏಕೆ ಕೊಲ್ಲಲಿ? ಎಷ್ಟೋ ವರ್ಷಗಳಿಂದ ನೋಡಿದ್ದೇನೆ ಬ್ರಾಹ್ಮಣ ಕೊಲೆ ಮಾಡಿರುವುದು ಸುಳ್ಳು ಎಂದು ರಾಜನು ಸುಮ್ಮನಾದನು. ಆದರೆ ಪರಿವಾರದವರೆಲ್ಲ ಇಲ್ಲ ಇವನೇ ಕೊಲೆ ಮಾಡಿರುವುದು ಎಂದು ಹೇಳಿದಾಗ, ರಾಜನು ಪರಿಸ್ಥಿತಿಗಳ ಕಾರಣ, ಹೇಳಿದ್ದನ್ನು ನಂಬಿದನು. ಬ್ರಾಹ್ಮಣನ ಮೇಲಿನ ಕರುಣೆಯಿಂದ ಪ್ರಾಣ ತೆಗೆಯದೆ, ಅವನ ಮಗನ ಕುತ್ತಿಗೆಯನ್ನು ಕತ್ತರಿಸಿದ ಬ್ರಾಹ್ಮಣನ ಕೈಯ್ಯನ್ನೆ ಕತ್ತರಿಸುವಂತೆ, ಆದೇಶ ಕೊಟ್ಟನು. ರಾಜನ ಸೇವಕರು, ಬ್ರಾಹ್ಮಣನ ಬಲಗೈ ಹಸ್ತ ಕತ್ತರಿಸಿದರು. ನೋವನ್ನು ತಾಳಲಾರದೆ ಬ್ರಾಹ್ಮಣ ಒದ್ದಾಡಿದನು. ದೇವರೇ ಇಷ್ಟು ವರ್ಷಗಳು ಒಂದೂ ತಪ್ಪು ಮಾಡದೆ ಶ್ರದ್ಧಾ ಭಕ್ತಿಯಿಂದ ನಿನ್ನ ಸೇವೆ ಮಾಡುತ್ತಾ ಬಂದಿದ್ದೇನೆ, ನನಗೇಕೆ ಇಂಥ ಶಿಕ್ಷೆ ಯೋಚಿಸಿ, ಜ್ಯೋತಿಷ್ಯರನ್ನ ಕೇಳಿ ತಿಳಿಯಬೇಕು ಎಂದು ಕೊಂಡನು. ಅಧರ್ಮ ಮಾಡಿದ ರಾಜನ ಕೃತ್ಯದಿಂದ ಬೇಸತ್ತು ಊರನ್ನೇ ಬಿಟ್ಟು ಹೊರಟನು. ಅಪರಾಧ ಮಾಡದಿದ್ದರೂ, ಇಂತಹ ದೊಡ್ಡ ಶಿಕ್ಷೆಯಾಗಲು ಕಾರಣವೇನು ತಿಳಿಯಲು ಒಬ್ಬ ಮಹಾನ್ ಪಂಡಿತನನ್ನು ಹುಡುಕುತ್ತಾ ಹೊರಟನು. ಎಲ್ಲಿಯೂ ಸಿಗದೆ, ಕಾಶಿ ರಾಜ್ಯಕ್ಕೆ ಬಂದನು. ಅಲ್ಲೂಬ್ಬ ಜ್ಯೋತಿಷ್ಯ ಪ್ರಕಾಂಡ ಪಂಡಿತರು ಸಿಕ್ಕಿದರು. ಅವರೊಡನೆ ಮಾತನಾಡಿ ಅವರ ಮನೆಗೆ ಬಂದನು. ಆದರೆ ಪಂಡಿತನು ಮನೆಗೆ ಬರುತ್ತಿದ್ದಂತೆ ಒಳಗಿನಿಂದ ಅವನ ಹೆಂಡತಿ ಬಂದು ಪಂಡಿತನನ್ನು ಬಾಯಿಗೆ ಬಂದಹಾಗೆ ಬೈಯ್ಯುತ್ತಾ ಜಗಳ ಮಾಡುತ್ತಾ ಗಂಡನನ್ನು ತಿರಸ್ಕಾರದಿಂದ ಕಾಣುತ್ತಿದ್ದಳು. ಆದರೂ ಪಂಡಿತನು ಅವಳಿಗೆ ಏನೂ ಹೇಳದೆ ಸುಮ್ಮನಿರುವುದನ್ನು ನೋಡಿ ಬ್ರಾಹ್ಮಣನಿಗೆ ಅರ್ಥವಾಗಲಿಲ್ಲ. ಪಂಡಿತರು, ಬ್ರಾಹ್ಮಣ ನನ್ನು ಕರೆದು ಕೂರಿಸಿ, ಬ್ರಾಹ್ಮಣ ಶ್ರೇಷ್ಠರೇ ನೀವು ನನ್ನಲ್ಲಿಗೆ ಬಂದ ಕಾರಣವೇನು ಹೇಳಿ ಎಂದರು. ಬ್ರಾಹ್ಮಣನು ನಮಸ್ಕಾರ ಪಂಡಿತರೆ, ನನ್ನ ಸಮಸ್ಯೆಯನ್ನು ನಿಮ್ಮಲ್ಲಿ ಕೇಳಲು ಬಂದಿದ್ದೇನೆ ಆದರೆ ಅದಕ್ಕೂ ಮುನ್ನ ಸಾತ್ವಿಕ ರಾದ ನಿಮ್ಮನ್ನು ನಿಮ್ಮ ಪತ್ನಿ ಹುಡುಕಿ ಹುಡುಕಿ ಬಯ್ಯುತ್ತಾ ಹೀಯಾಳಿಸುತ್ತಾರೆ? ನೀವು ಪ್ರತಿಯಾಗಿ ಏನು ಹೇಳುವುದಿಲ್ಲ ಏಕೆ? ಎಂದಾಗ ಪಂಡಿತರು ಹೇಳಿದರು. ಆಕೆ ಸ್ತ್ರೀ ಯಲ್ಲ, ನನ್ನ ಕರ್ಮ. ನಾವು ಹುಟ್ಟುವಾಗ, ಪತಿ, ಪತ್ನಿ, ಪುತ್ರ, ಪುತ್ರಿ, ಒಡಹುಟ್ಟಿದವರಾಗಿ ನಮ್ಮ ಜೊತೆ ಜೊತೆಯಲ್ಲಿ ರಕ್ತ ಸಂಬಂಧಿಗಳಾಗಿ, ಹುಟ್ಟುತ್ತಾರೆ ಒಳ್ಳೆಯದಕ್ಕೂ ಅವರು ನಮ್ಮ ಜೊತೆ ಹುಟ್ಟಿರಬಹುದು. ಅಥವಾ ಕರ್ಮ ಕಳೆದುಕೊಳ್ಳಲು ಬಂದಿರಬಹುದು. ಇದನ್ನು ಅನುಭವಿಸಬೇಕು. ಇದೇ ನನ್ನ ಭಾಗ್ಯದಲ್ಲಿ ಬರೆದಿತ್ತು ಎಂದರು. ಅದು ಏನು ಎಂದು ಕೇಳಿದಾಗ? ಹಿಂದಿನ ಜನ್ಮದಲ್ಲಿ ನಾನು ಒಂದು ಕಾಗೆ ಆಗಿದ್ದೆ. ನನ್ನ ಪತ್ನಿ ಕತ್ತೆ ಯಾಗಿದ್ದಳು. ಕತ್ತೆಯ ಬೆನ್ನ ಮೇಲೆ ಒಂದು ಗಾಯವಾಗಿ ಅದು ಹುಣ್ಣಾಗಿ ಕತ್ತೆಗೆ ನೋವಾಗುತ್ತಿತ್ತು. ಕಾಗೆ ಯಾಗಿದ್ದ ನಾನು ಆ ಗಾಯದ ಮೇಲೆ ಕುಕ್ಕಿ-ಕುಕ್ಕಿ ಇನ್ನಷ್ಟು ಹಿಂಸೆ ಮಾಡುತ್ತಿದ್ದೆ. ಅದು ನನ್ನನ್ನು ಓಡಿಸಲಾಗದೆ ಮತ್ತಷ್ಟು ಒದ್ದಾಡಿ ಕೂಗುತ್ತಿತ್ತು. ಇದೇ ರೀತಿ ಪ್ರತಿದಿನ ಗಾಯದ ಮೇಲೆ ಕುಕ್ಕಿಕುಕ್ಕಿ ಮತ್ತಷ್ಟು ಗಾಯ ಜಾಸ್ತಿ ಮಾಡಿದೆ. ಒಂದು ದಿನ ಹೀಗೆ ಕುಕ್ಕಿ ನೋವು ಮಾಡುತ್ತಿದ್ದಾಗ ಸಹಿಸದೆ ಗಂಗಾನದಿಗೆ ಇಳಿಯಿತು ನಾನು ಅದರ ಬೆನ್ನ ಮೇಲೆ ಕುಳಿತಿದ್ದೆ. ಆಳಕ್ಕೆ ಹೋಗಿ ಅದರ ಜೊತೆ ನಾನು ಮುಳುಗಿದೆ. ಗಂಗಾ ನದಿಯ ಪುಣ್ಯ ಫಲದಿಂದಾಗಿ, ನಾನು ವೇದ-ಪಾರಂಗತ ಪಂಡಿತನಾದೆ, ಆಕೆ ಬ್ರಾಹ್ಮಣ್ಯ ಜನ್ಮತಾಳಿ ನನ್ನ ಪತ್ನಿಯಾದಳು. ಹಿಂದಿನ ಕರ್ಮಫಲ ಈ ಜನ್ಮದಲ್ಲಿ ಭಾದಿಸುತ್ತಿದೆ. ಇನ್ನು ಕೆಲವೇ ದಿನದಲ್ಲಿ ಕರ್ಮಫಲ ಮುಗಿಯುತ್ತದೆ ಏಕೆಂದರೆ ಇದರಲ್ಲಿ ಯಾರದೂ ತಪ್ಪಿಲ್ಲ. ಕಾಗೆ ಕುಕ್ಕುವುದು ಅದರ ಸ್ವಭಾವ. ಕತ್ತೆಗೆ ಗಾಯವಾಗಿದ್ದು ಸಹಜ. ಇನ್ನು ಕೆಲವು ದಿನ ಸಹಿಸಿಕೊಂಡರೆ ಕರ್ಮಫಲ ಮುಗಿಯುತ್ತದೆ ಎಂದು ಶಾಂತಚಿತ್ತರಾದರು. ನಂತರ ಬ್ರಾಹ್ಮಣ ಶ್ರೇಷ್ಠರೇ, ಈಗ ನಿಮ್ಮ ಸಮಸ್ಯೆ ಹೇಳಿ ಎಂದರು. ಬ್ರಾಹ್ಮಣ ಇದುವರೆಗೂ ನಡೆದ ಸಮಾಚಾರವನ್ನೆಲ್ಲಾ ಹೇಳಿ, ಪಾಪಿಯಾದ ರಾಜನು ಅನ್ಯಾಯವಾಗಿ ನನ್ನ ಕೈಯನ್ನು ಕತ್ತರಿಸಿದ್ದಾರೆ. ಎಂದಾಗ ಬ್ರಾಹ್ಮಣೊತ್ತಮರೆ ನಿಮ್ಮ ಕೈಯನ್ನು ರಾಜ ಕತ್ತರಿಸಿದ್ದು ಅಲ್ಲ ಅದು ನಿಮ್ಮ ಕರ್ಮ ಫಲ ಎಂದು ಪಂಡಿತರು ಹೇಳಿದ್ದನ್ನು ಕೇಳಿದ ಬ್ರಾಹ್ಮಣ, ಇದು ಹೇಗೆ ಎಂದು ಕೇಳಿದನು. ಜ್ಯೋತಿಷಿ ಪಂಡಿತನು, ಬ್ರಾಹ್ಮಣೋತ್ತಮ ನೀವು ಪೂರ್ವಜನ್ಮದಲ್ಲಿ ಒಬ್ಬ ಮಹಾನ್ ತಪಸ್ವಿ ಆಗಿದ್ದೀರಿ. ರಾಜಕುಮಾರಿ ಹಸು ಆಗಿದ್ದಳು. ರಾಜಕುಮಾರ ಕಟುಕ ಆಗಿದ್ದ. ಒಂದು ದಿನ ಹಸುವನ್ನು ಕೊಲ್ಲಲು ಕಟುಕ ಕತ್ತಿಹಿಡಿದು ಬರುತ್ತಿದ್ದ. ಹಸು ತಪ್ಪಿಸಿಕೊಂಡು ನಿಮ್ಮ ಮುಂದೆಯೇ ಹಾದು ಕಾಡಿನೊಳಗೆ ಹೋಯಿತು. ಆಗ ಕಟುಕ ನಿಮ್ಮ ಮುಂದೆ ಬಂದು ಹಸು ಎಲ್ಲಿ ಹೋಯಿತು ಎಂದು ಕೇಳಿದಾಗ ನೀವು ಬಲಗೈ ಎತ್ತಿ ಹಸು ಹೋದ ಜಾಗವನ್ನು ತೋರಿಸಿದಿರಿ ಕಟುಕ ಹಿಂದೆಯೇ ಹೋಗಿ ಹಸವಿನ ಕುತ್ತಿಗೆಯನ್ನು ಕತ್ತರಿಸಿದನು. ಆ ಸಮಯಕ್ಕೆ ಕಾಡಿನ ದೊಡ್ಡ ಸಿಂಹ ಬಂದು ಕಟುಕ ಮತ್ತು ಹಸುವನ್ನು ಕೊಂದು ಹಾಕಿ ತಿಂದಿತು. ಈ ಜನ್ಮದಲ್ಲಿ ಕಟುಕ ರಾಜಕುಮಾರನಾಗಿದ್ದ. ಹಸು ರಾಜಕುಮಾರಿಯಾಗಿದ್ದಳು. ಅವರಿಬ್ಬರು ಕರ್ಮಫಲದಿಂದ ಒಂದು ರಾತ್ರಿಯ ಮಟ್ಟಿಗೆ ಈ ಜನ್ಮದಲ್ಲಿ ಒಂದುಗೂಡಿದ್ದರು. ಹಿಂದಿನ ಕರ್ಮಫಲ ದಂತೆ ರಾಜಕುಮಾರಿಯ ಕೈಜಾರಿ ಖಡ್ಗ ಬಿದ್ದು ರಾಜಕುಮಾರ ಮರಣಹೊಂದಿದ. ನೀವು ಬಲಗೈ ತೋರಿಸಿದ್ದರಿಂದ, ನಿಮ್ಮ ಬಲಗೈ ಕಳೆದುಕೊಂಡಿದ್ದೀರಿ. ಕರ್ಮಫಲಗಳು ಅದರ ಕರ್ತವ್ಯವನ್ನು ಮುಗಿಸಿದೆ. ಇದರಲ್ಲಿ ಯಾರ ತಪ್ಪು ಇಲ್ಲ. ಇನ್ನೂ ಬಾಕಿ ಇರುವ ಅವರವರ ಕರ್ಮಫಲಗಳನ್ನು ಸಕಾರಾತ್ಮಕ ಚಿಂತನೆಯೊಂದಿಗೆ, ಸಂತೋಷದಿಂದ ಕಳೆಯಬೇಕು.ಬೇರೆ ಮಾರ್ಗವಿಲ್ಲ ಎಂದರು. ವಿಪತ್ತುಗಳಿಗೆ ಪೂರ್ವಭಾವಿಯಾಗಿಯೇ ಸಿದ್ಧತೆಗಳನ್ನು ಚಿಂತಿಸಿ ರಬೇಕು. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಯುಕ್ತವಲ್ಲ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - (E01 Genee Aoed Elu ಕರ್ಮಣೇ ವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲ ಹೇತುರ್ಭುಮಾ ಸಂಗೋಸ್ತ್ವ   ಕರ್ಮಣಿ || 8e ಬಿಟ್ಟು' (ed 2303 నిన్న నిను ಕರ್ತವ್ಯವನ್ನು ಮನಸ್ಸಿಟ್ಟು ' ಕರ್ತವ್ಯ (ಕರ್ಮ)ವನ್ನು ಮಾಡದೆ ಮಾಡು ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ) (E01 Genee Aoed Elu ಕರ್ಮಣೇ ವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲ ಹೇತುರ್ಭುಮಾ ಸಂಗೋಸ್ತ್ವ   ಕರ್ಮಣಿ || 8e ಬಿಟ್ಟು' (ed 2303 నిన్న నిను ಕರ್ತವ್ಯವನ್ನು ಮನಸ್ಸಿಟ್ಟು ' ಕರ್ತವ್ಯ (ಕರ್ಮ)ವನ್ನು ಮಾಡದೆ ಮಾಡು ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ) - ShareChat
ಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿ (ಫೆಬ್ರವರಿ/ಮಾರ್ಚ್) ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನ ಮತ್ತು ಜಾಗೃತಿಯನ್ನು ಬೆಳಗಿಸುವ ಶಿವ-ಶಕ್ತಿ ಸಮ್ಮಿಲನದ ರಾತ್ರಿ. ಶಿವನು ಜಗತ್ತನ್ನು ಉಳಿಸಲು ಹಾಲಾಹಲ ಸೇವಿಸಿದ ದಿನ, ಶಿವ-ಪಾರ್ವತಿ ವಿವಾಹ ಮಹೋತ್ಸವ ಮತ್ತು ಶಿವನು ಲಿಂಗರೂಪಿಯಾಗಿ ಪ್ರಕಟವಾದ ದಿನವಾಗಿ ಇದನ್ನು ಆಚರಿಸಲಾಗುತ್ತದೆ. ಶಿವರಾತ್ರಿಯ ಪ್ರಮುಖ ಮಹತ್ವಗಳು: ಆಧ್ಯಾತ್ಮಿಕ ಜಾಗೃತಿ: ಇದು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ಶಿವನ ಧ್ಯಾನ, ಉಪವಾಸ ಮತ್ತು ರಾತ್ರಿ ಜಾಗರಣೆಯ ಮೂಲಕ ಅಹಂಕಾರ ಮತ್ತು ನಕಾರಾತ್ಮಕತೆಯನ್ನು ದೂರ ಮಾಡಿ ಆತ್ಮದ ಬೆಳವಣಿಗೆ ಸಾಧಿಸುವ ದಿನವಾಗಿದೆ. ಶಿವ-ಶಕ್ತಿ ಸಮ್ಮಿಲನ: ಮಹಾಶಿವರಾತ್ರಿಯು ಪುರುಷ (ಶಿವ) ಮತ್ತು ಪ್ರಕೃತಿ (ಶಕ್ತಿ) ಶಕ್ತಿಗಳ ಸಮ್ಮಿಲನವನ್ನು ಸಂಕೇತಿಸುತ್ತದೆ. ವೈಜ್ಞಾನಿಕ ಮಹತ್ವ: ಈ ರಾತ್ರಿಯಲ್ಲಿ ಉತ್ತರಾರ್ಧಗೋಳದಲ್ಲಿ ಭೂಮಿಯ ಸ್ಥಾನವು ವಿಶೇಷವಾಗಿದ್ದು, ಮನುಷ್ಯನ ಬೆನ್ನುಮೂಳೆಯು ನೈಸರ್ಗಿಕವಾಗಿ ಮೇಲಕ್ಕೆ ಸರಿಯುತ್ತದೆ, ಇದು ಧ್ಯಾನಕ್ಕೆ ಅತ್ಯಂತ ಪವಿತ್ರವಾದ ಸಮಯವಾಗಿದೆ. ಪವಿತ್ರ ಆಚರಣೆ: ಭಕ್ತರು ದಿನವಿಡೀ ಉಪವಾಸವಿದ್ದು, ರಾತ್ರಿ ಜಾಗರಣೆ (ನಾಲ್ಕು ಪ್ರಹರಗಳ ಪೂಜೆ) ಆಚರಿಸಿ, ಬಿಲ್ವಪತ್ರೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪೌರಾಣಿಕ ಹಿನ್ನೆಲೆ: ಪುರಾಣಗಳ ಪ್ರಕಾರ, ಸೃಷ್ಟಿಯು ವಿನಾಶದ ಅಂಚಿನಲ್ಲಿದ್ದಾಗ, ವಿಷ್ಣು ಮತ್ತು ಬ್ರಹ್ಮರಿಗೆ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ದರ್ಶನ ನೀಡಿದ ದಿನ ಇದಾಗಿದೆ. ಅಲ್ಲದೆ, ಸಮುದ್ರ ಮಥನದ ಸಮಯದಲ್ಲಿ ಬಂದ ಹಾಲಾಹಲವನ್ನು ಸೇವಿಸಿ ಜಗತ್ತನ್ನು ಉಳಿಸಿದ ದಿನವೂ ಇದೇ ಆಗಿದೆ. ಗಮನಿಸಿ: ಶಿವರಾತ್ರಿಯು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಭಕ್ತಿಯನ್ನು ಪ್ರತಿನಿಧಿಸುತ್ತದೆ. ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ, ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ. ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ. ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ. ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ... ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - == == - ShareChat
ಕೃಷ್ಣ ಕೊಟ್ಟ ಹಾಗಲಕಾಯಿ ತೀರ್ಥ ಸ್ನಾನದ ಕಥೆ ಕುರುಕ್ಷೇತ್ರ ಯುದ್ಧದ ನಂತರ ಎಲ್ಲಂದರಲ್ಲಿ ಮೌನ, ನಾಯಿ ಕಾಗೆಗಳ ಸದ್ದು ಕೇಳಿಸುತ್ತಾ ಇತ್ತು.ಎಲ್ಲರನ್ನು ಕಳೆದುಕೊಂಡ ನೋವು ಎಲ್ಲರಲ್ಲೂ ಕಾಣಿಸುತ್ತಾ ಇತ್ತು ಇದೆಲ್ಲವನ್ನೂ ದೂರದಲ್ಲಿ ನಿಂತು ವೀಕ್ಷಿಸಿದ ಧರ್ಮರಾಯನನ್ನು ಭಾರೀ ಜುಗುಪ್ಸೆ ಆವರಿಸಿಕೊಂಡಿತ್ತು. ಇಂಥಾ ಘೋರ ಹತ್ಯಾಕಾಂಡದ ಪಾಪದ ರಾಶಿಯನ್ನು ಹೊತ್ತುಕೊಂಡಿರುವ ತಲೆಯ ಮೇಲೆ ಸಾಮ್ರಾಜ್ಯಾಧಿಪತಿಯ ಕಿರೀಟವನ್ನು ಸ್ಥಾಪಿಸಿಕೊಳ್ಳುವುದು ಮೊದಲೇ ಧರ್ಮಭೀರುವಾದ ಯುದಿಷ್ಠಿರನಿಗೆ ಸರ್ವಥಾ ಸಮರ್ಥನೀಯವಲ್ಲ ಎನಿಸಿಬಿಟ್ಟಿತು. ಹಾಗಾದರೆ ಈ ಪಾಪವನ್ನು ತೊಳೆದುಕೊಳ್ಳುವುದು ಹೇಗೆ? ಚಿಂತಿಸಿದ. ಕೊನೆಗೊಂದು ನಿರ್ಧಾರಕ್ಕೆ ಬಂದ. ಇಡೀ ಭರತಖಂಡದ ಯಾತ್ರೆಯನ್ನು ಕೈಗೊಂಡು, ಭರತಭೂಮಿಯ ಎಲ್ಲ ನದಿ-ತೀರ್ಥಗಳಲ್ಲಿ ಮುಳುಗೆದ್ದು, ಎಲ್ಲ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ತನ್ನ ಪಾಪವನ್ನು ತೊಳೆದುಕೊಂಡ ಬಳಿಕವೇ ಪಟ್ಟಾಭಿಷಿಕ್ತನಾಗುವುದೆಂದು ತೀರ್ಮಾನಿಸಿ, ಸೋದರರು ಹಾಗೂ ಪತ್ನಿ ದ್ರೌಪದಿಗೆ ಹೇಳಿದ. ಅಣ್ಣನನ್ನು ಅನುಸರಿಸಿಯೇ ಈವರೆಗೆ ಬಂದಿದ್ದ ಅವರುಗಳು ತಾವೂ ಬರುವುದಾಗಿ ಹೇಳಿದರು. ಸರಿ, ಹೊರಡುವ ಮುನ್ನ ತಮ್ಮ ದಿಗ್ದರ್ಶಿಯಾದ ಶ್ರೀಕೃಷ್ಣನನ್ನು ಭೇಟಿಯಾಗಿ, ಆತನ ಆಶೀರ್ವಾದ ಪಡೆದು ಹೋಗುವುದೆಂದು ನಿರ್ಧರಿಸಿ, ಕೃಷ್ಣನ ಬಳಿ ಬಂದರು. ಅಷ್ಟ ಮಹಿಷಿಯರ ಜತೆ ಲೋಕಾಭಿರಾಮ ಕುಳಿತಿದ್ದ ಕೃಷ್ಣ, ಪಾಂಡವರ ಮಾತನ್ನು ಸಾವಧಾನಚಿತ್ತನಾಗಿ ಆಲಿಸಿ, ಏನನ್ನೂ ಹೇಳದೇ ಧಿಗ್ಗನೆ ಎದ್ದು ಒಳ ನಡೆದ. ಎಲ್ಲರಿಗೂ ದಿಗಿಲು! ತಮ್ಮ ಆರಾಧ್ಯನೇಕೆ ಹೀಗೆ ಮಾಡಿದ? ತಮ್ಮಿಂದ ಏನಾದರೂ ಅಪಚಾರವಾಯಿತೆ? ಪಾಪ ಪರಿಹಾರ ಮಾರ್ಗವನ್ನು ಆತನ ಬಳಿಯೇ ಕೇಳಬೇಕಾಗಿತ್ತೇ? ಹೀಗೆ... ಏನೇನೋ ಯೋಚನೆಗಳು ಸುಳಿಯುತ್ತಿದ್ದಾಗಲೇ ಗಂಭೀರವದನನಾಗಿ ಮರಳಿದ ಕೃಷ್ಣನ ಕೈಯ್ಯಲ್ಲೊಂದು ಪುಟ್ಟ ಹಾಗಲಕಾಯಿ ಇತ್ತು. ಅದನ್ನು ಧರ್ಮರಾಜನ ಕೈಗಿಡುತ್ತಾ, 'ನಿಮ್ಮ ತೀರ್ಥಯಾತ್ರೆಯ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ಖಂಡಿತಾ ಹೋಗಿಬನ್ನಿ. ಆ ಯುದ್ಧಕ್ಕೆ ಸಾಕ್ಷಿಯಾಗಿದ್ದ ನನಗೂ ನಿಮ್ಮ ಜತೆ ಬರಬೇಕೆಂದೆನಿಸಿತ್ತು.ಆದರೆ ಬಹಳ ಕಾಲದಿಂದ ದ್ವಾರಕೆಯನ್ನು ಬಿಟ್ಟು ಇದ್ದುದ್ದರಿಂದ ಸಾಕಷ್ಟು ರಾಜಕಾರ್ಯಗಳು ಬಾಕಿ ಉಳಿದುಬಿಟ್ಟಿವೆ. ನನ್ನ ಬದಲು ನನ್ನ ಪ್ರತಿನಿಧಿಯಾಗಿ ನಿಮ್ಮ ಜತೆ ಇದನ್ನು ಕಳುಹಿಸುತ್ತೇನೆ. ಇದು ನಾನೇ ಖುದ್ದು ಅತ್ಯಂತ ಪ್ರೀತಿಯಿಂದ ನನ್ನ ತೋಟದಲ್ಲಿ ಬೆಳೆಸಿದ್ದು. ನೀವು ಎಲ್ಲೆಲ್ಲಿ ತೀರ್ಥ ಸ್ನಾನ ಮಾಡುತ್ತೀರೋ, ಅಲ್ಲೆಲ್ಲ ಇದಕ್ಕೂ ಸ್ನಾನ ಮಾಡಿಸಿ. ನೀವು ಮುಳುಗೇಳುವ ಎಲ್ಲ ನದಿಗಳಲ್ಲಿ ಇದನ್ನೂ ಮುಳುಗಿಸಿ ಏಳಿಸಿ. ಎಲ್ಲ ದೇವರ ದರ್ಶನ ಮಾಡಿಸಿ, ಪ್ರಸಾದವನ್ನು ಹಾಕಿಸಿಕೊಂಡು ಬನ್ನಿ. ಆಗಬಹುದೇ?' ಎಂದ. ಪಾಂಡವರು ನಿಟ್ಟುಸಿರು ಬಿಟ್ಟು, ಸಮಾಧಾನ ಹೊಂದಿದರು. ಕೃಷ್ಣನ ಮಾತನ್ನು ಶಿರಸಾವಹಿಸಿ ಪಾಲಿಸುವುದಾಗಿ ಮಾತುಕೊಟ್ಟು ಹಾಗಲವನ್ನು ಜೋಪಾನವಾಗಿ ಜೋಳಿಗೆಯಲ್ಲಿಟ್ಟುಕೊಂಡು ಹೊರಟರು. ವಿಶಾಲ ಭರತ ಖಂಡದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಮಗ್ರ ಪರ್ಯಟನೆ ಮಾಡಿ, ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಿ, ಸರ್ವ ತೀರ್ಥಗಳಲ್ಲೂ ಮಿಂದೆಂದು ಪುನೀತಭಾವದಲ್ಲಿ ಮರಳಿದರು. ಎಲ್ಲಿಯೂ ಹಾಗಲವನ್ನು ಮರೆಯದೇ, ಎಲ್ಲೆಡೆ ತಾವು ಏನೆಲ್ಲವನ್ನೂ ಮಾಡಿದರೋ ಅದೆಲ್ಲವನ್ನೂ ಸ್ವತಃ ಕೃಷ್ಣನೇ ಎಂದು ಭಾವಿಸಿ, ಹಾಗಲಕ್ಕೂ ಮಾಡಿಸಿದರು. ಎಲ್ಲ ದೇವರೆದರೂ ಅದನ್ನೂ ಇಟ್ಟು ಪ್ರಸಾದ ಹಾಕಿಸಿಕೊಂಡು ಬಂದಿದ್ದರು. ಯಾತ್ರೆಯ ಕೊನೆಯಲ್ಲಿ ಪುನಃ ಕೃಷ್ಣನ ಸಾನ್ನಿಧ್ಯಕ್ಕೆ ಬಂದು, ಹಾಗಲವನ್ನು ಅವನ ಕೈಗೆ ಮರಳಿಸಿದರು. ಕೃಷ್ಣ ಕೇಳಿದ- 'ಎಲ್ಲೆಡೆ ಇದಕ್ಕೂ ತೀರ್ಥ ಸ್ನಾನ ಮಾಡಿಸಿದ್ದೀರಲ್ಲಾ, ಎಲ್ಲ ದೇವರ ದರ್ಶನ ಮಾಡಿಸಿದ್ದೀರಲ್ಲಾ?' ಚಾಚೂ ತಪ್ಪದೇ ಪಾಲಿಸಿದ್ದಾಗಿ ಯುಧಿಷ್ಠಿರ ವರದಿ ಒಪ್ಪಿಸಿದ. ಸರಿ ಎಂದು ಸೇವಕರಿಂದ ಒಂದು ಕತ್ತಿ ತರಿಸಿದ ಕೃಷ್ಣ, ಆ ಹಾಗಲವನ್ನು ಆರು ಭಾಗಗಳಾಗಿ ಕತ್ತರಿಸಿದ. ಮತ್ತೆ ಪಾಂಡವರಿಗೆ ಆಶ್ಚರ್ಯ! ಹಾಗಲದ ಒಂದೊಂದು ತುಂಡುಗಳನ್ನು ದ್ರಾಪದಿ ಹಾಗೂ ಐವರು ಪಾಂಡವರಿಗೆ ಹಂಚಿ, ತಿನ್ನಲು ಹೇಳಿದ. ಅದನ್ನು ಬಾಯಿಗಿಟ್ಟುಕೊಂಡ ಅವರೆಲ್ಲರೂ ಮುಖ ಕಿವುಚಿದರು. 'ಯಾಕೆ ಹೀಗೆ ಮುಖ ಮಾಡುತ್ತೀರಿ? ಹಾಗಲ ಸಿಹಿ ಇಲ್ಲವೇ?' ಎಂದು ಕೇಳಿದ ಕೃಷ್ಣ. ಆತನ ಮಾತಿಗೆ ನಗಬೇಕೋ, ಗಂಭಿರವಾಗಿ ಉತ್ತರ ಹೇಳಬೇಕೋ ಅರಿಯದೇ ಗೊಂದಲಕ್ಕೆ ಬಿದ್ದರು ಪಾಂಡವರು, ಇದ್ದುದರಲ್ಲಿ ಹೆಚ್ಚು ಸಲುಗೆ ಇದ್ದ ದ್ರೌಪದಿಯೇ, 'ಅಣ್ಣಾ, ಇದೇನು ಹೀಗೆ ಕೇಳುತ್ತಿರುವೆ? ಹಾಗಲ ಎಂದಾದರೂ ಸಿಹಿ ಇರುತ್ತದೆಯೇ? ಅದರಲ್ಲೂ ಇಷ್ಟು ದಿನ ನೀರಲ್ಲಿ ನೆನೆದ ಹಾಗಲ ಇನ್ನಷ್ಟು ಕಹಿ ಬಿಟ್ಟುಕೊಂಡಿದೆ' ಎಂದಳು. ಹಾಗೇಕೆ? ಇಷ್ಟೆಲ್ಲಾ ದೇವರ ದರ್ಶನ ಮಾಡಿಸಿದ, ತೀರ್ಥ ಸ್ನಾನ ಮಾಡಿಸಿದ ಬಳಿಕ ಹಾಗಲದೊಳಗಿನ ಕಹಿ ಹೋಗಿ ಸಿಹಿಯಾಗಿರಬೇಕಿತ್ತಲ್ಲವೇ?' ಎಂದ ಕೃಷ್ಣ ಕೃಷ್ಣನ ಮಾತಿನ ಒಳಮರ್ಮ ಧರ್ಮಜನಿಗೆ ಥಟ್ಟನೆ ಹೊಳೆಯಿತು. ತಮ್ಮ ಮೂರ್ಖತನಕ್ಕೆ ಕ್ಷಮೆ ಕೇಳಿದ. ನಮ್ಮ ಜೀವನದಲ್ಲೂ ಇದೇ ಆಗಬೇಕಿರುವುದು. ಬದುಕಿನಲ್ಲಿ ಘಟಿಸಿದ ಪಾಪ, ಮಾಡಿದ ಅಪರಾಧಗಳು, ಕೈಗೊಂಡ ಕು-ಕರ್ಮಗಳನ್ನು ಆಂತರ್ಯದ ಪಶ್ಚಾತ್ತಾಪದ ಬೇಗುದಿಯಲ್ಲಿ ಮರಳಿಸಿ, ಸುಟ್ಟುಕೊಳ್ಳಬೇಕು. ನೈಜ ಮರುಗುವಿಕೆಯ ಕಣ್ಣಿರಿನಲ್ಲಿ ತೊಳೆದುಕೊಳ್ಳಬೇಕು. ಸತ್ಕಾರ್ಯ, ಸನ್ನಡತೆ, ಸದಾಚಾರದ ದೃಢ ನಿಶ್ಚಯದ ದರ್ಶನವನ್ನು ಮನಸಿಗೆ ಮಾಡಿಸಿ ಪುನೀತರಾಗಬೇಕೇ ಹೊರತೂ, ಮಾಡಬಾರದ್ದನ್ನೆಲ್ಲ ಮಾಡಿ, ದಿನಗಟ್ಟಲೆ ದೇವರ ಮುಂದೆ ಕುಳಿತಾಕ್ಷಣ, ತೋರುಗಾಣಿಕೆಗಾಗಿ ಯಾರ್ಯಾರಿಗೋ ಏನೇನೋ ದಾನಕೊಟ್ಟೆ ಎಂದು ಬೀಗಿದಾಕ್ಷಣ, ಸಂಭಾವಿತನ ಪೋಸು ಕೊಟ್ಟಾಕ್ಷಣ, ದೊಡ್ಡ ದೊಡ್ಡ ದೇಗುಲಗಳ ದೇವರಿಗೆ ಕೋಟ್ಯಂತರ ರುಪಾಯಿಗಳ ಕಾಣಿಕೆ ಕೊಟ್ಟಾಕ್ಷಣ ನಾವು ಮನುಷ್ಯರೆನಿಸಿಕೊಳ್ಳುವುದಿಲ್ಲ.ಆಂತರ್ಯದಲ್ಲಿ ಸಿಹಿಯಾಗಿರುವವರಿಗೆ ಯಾವ ದೇವರು, ಯಾವ ಧರ್ಮ, ಯಾವ ಆಚರಣೆಯೂ ಅಗತ್ಯ ಇಲ್ಲ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ಕೊಟ್ಚ   ಕೃಷ್ಣ ಹಾಗಲಾಯಿ ತೀರ್ಥ శెథి गNळ ಕೊಟ್ಚ   ಕೃಷ್ಣ ಹಾಗಲಾಯಿ ತೀರ್ಥ శెథి गNळ - ShareChat
*ದೇವರ ನೈವೇದ್ಯಕ್ಕೆ ಇಡುವ ಪದಾರ್ಥಗಳ ಹೆಸರುಗಳು ಸಂಸ್ಕೃತದಲ್ಲಿ* 1️⃣ಬಾಳೆಹಣ್ಣು👉🏻 *ಕದಳೀ ಫಲಂ* 2️⃣ಮಾವಿನ ಹಣ್ಣು👉🏻 *ಆಮ್ರ ಫಲಂ* 3️⃣ಕಿತ್ತಳೆ👉🏻 *ನಾರಂಗ ಫಲಂ* 4️⃣ತೆಂಗಿನಕಾಯಿ👉🏻 *ನಾರಿಕೇಳ ಫಲಂ* 5️⃣ಸೀಬೆ👉🏻 *ಬಹುಬೀಜ ಫಲಂ* 6️⃣ದಾಳಿಂಬೆ👉🏻 *ದಾಡಿಮ ಫಲಂ* 7️⃣ಹಲಸಿನ ಹಣ್ಣು👉🏻 *ಪನಸ ಫಲಂ* 8️⃣ಎಲಚಿ👉🏻 *ಬದರ ಫಲಂ* 9️⃣ಖರ್ಜೂರ👉🏻 *ಖರ್ಜೂರ ಫಲಂ* 1️⃣0️⃣ಮೂಸಂಬಿ👉🏻 *ಜಂಬೀರ ಫಲಂ* 1️⃣1️⃣ದ್ರಾಕ್ಷಿ👉🏻 *ದ್ರಾಕ್ಷಾ ಫಲಂ* 1️⃣2️⃣ನೇರಳೆ👉🏻 *ಜಂಬೂ ಫಲಂ* 1️⃣3️⃣ಸೌತೆಕಾಯಿ👉🏻 *ಉರ್ವಾರುಕ ಫಲಂ* 1️⃣4️⃣ಚಕ್ಕೋತ👉🏻 *ಲಿಕುಚ ಫಲಂ* 1️⃣5️⃣ಕಬ್ಬು👉🏻 *ಇಕ್ಷು ಖಂಡಮ್* 1️⃣6️⃣ಕಡಲೆಬೇಳೆ👉🏻 *ಚಣಕ ದಳ* 1️⃣7️⃣ತಂಬಿಟ್ಟು👉🏻 *ತಂಡುಲ ಚೂರ್ಣ* 1️⃣8️⃣ಹೆಸರುಬೇಳೆ👉🏻 *ಮುದ್ಗದಳ* 1️⃣9️⃣ಕಡಲೆಪುರಿ👉🏻 *ಧಾನಾ ಭ್ರಷ್ಟಯವಃ(ಮಂಡಕ್ಕಿ)* 2️⃣0️⃣ಒಬ್ಬಟ್ಟು👉🏻 *ಅಪೂಪ (ಪೋಲಿಕಾ)* 2️⃣1️⃣ಲಾಡು👉🏻 *ಲಡ್ಡು ಕಮ್* 2️⃣2️⃣ಒಡೆ👉🏻 *ಮಾಷಾ ಪೂಪ* 2️⃣3️⃣ರೊಟ್ಟಿ👉🏻 *ಕಾಂದವ* 2️⃣4️⃣ವಾಂಗಿಬಾತು👉🏻 *ವೃಂತಕಾನ್ನಂ* 2️⃣5️⃣ಪಲ್ಯ👉🏻 *ವ್ಯಂಜನಂ* 2️⃣6️⃣ಪಾಯಸ👉🏻 *ಪಾಯಸಂ* 2️⃣7️⃣ಗೋಡಂಬಿ👉🏻 *ಭಾಲ್ಲಾತಕಃ* 2️⃣8️⃣ಸಿಹಿ ಗಳಿಗೆ👉🏻 *ಮಧುರ* 2️⃣9️⃣ಬೆಲ್ಲದ ಪಾನಕ👉🏻 *ಗುಡ ಮಿಶ್ರ ಜಲಂ* 3️⃣0️⃣ಪಾನಕ👉🏻 *ಶರ್ಕರಾಮಿಶ್ರ ಜಲಂ* 3️⃣1️⃣ಅನಾನಸ್👉🏻 *ಅನಾನಸಂ* 3️⃣2️⃣ಮೊಸರು ವಡೆ👉🏻 *ದದಿ ಮಾಷಾಪೂಪ* 3️⃣3️⃣ವೀಳೇದೆಲೆ👉🏻 *ನಾಗವಲ್ಲೀ* 3️⃣4️⃣ಅಡಿಕೆ👉🏻 *ಕ್ರಮುಖ* 3️⃣5️⃣ಕುಂಬಳಕಾಯಿ👉🏻 *ಕೂಷ್ಮಾಂಡ* 3️⃣6️⃣ಹಾಲು👉🏻 *ಕ್ಷೀರ* 3️⃣7️⃣ಎಳಗಾಯಿ👉🏻 *ಶಲಾಟು* 3️⃣8️⃣ಕಡುಬು👉🏻 *ಮೋದಕ* 3️⃣9️⃣ಅತ್ತಿಹಣ್ಣು👉🏻 *ಔದುಂಬರ ಫಲ* 4️⃣0️⃣ಚಟ್ನಿ👉🏻 *ತಮನಂ, ನಿಷ್ಠಾನಂ* 4️⃣1️⃣ಅವಲಕ್ಕಿ👉🏻 *ಪೃಥುಕಃ,* ಚಿಪಿಟಕಃ 4️⃣2️⃣ಗುಗ್ಗುರಿ👉🏻 *ಅಭ್ಯೂಷಃ* 4️⃣3️⃣ಎಲಚಿ👉🏻 *ಬದರಿ* 4️⃣4️⃣ಜಾಮೂನ್/ಜಿಲೇಬಿ👉🏻 *ವಿಜಿಲಂ* 4️⃣5️⃣ಜಾಂಗೀರ್/ಪಲಾವ್👉🏻 *ಪ್ರಯಸ್ತಂ* 4️⃣6️⃣ಬೆಣ್ಣೆ👉🏻 *ನವನೀತಂ* 4️⃣7️⃣ನೆಲ್ಲಿಕಾಯಿ👉🏻 *ಆಮಲಕ* 4️⃣8️⃣ಹುರಿಗಡಲೆ👉🏻 *ಬಾಲ ಭೋಜ್ಯ(ಪಪ್ಪುಲು)* 4️⃣9️⃣ಪೊಂಗಲ್👉🏻 *ಮುದ್ಗೋದನಂ* 5️⃣0️⃣ಮೊಸರನ್ನ-👉🏻 *ದಧ್ಯನ್ನಂ* ❤️🙏🌷. ವಿಮಲ್ ನ್ಯೂಟ್ರಿಷನ್ಸೆಂಟರ್🌷🙏❤️#😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - శ శ - ShareChat
***ಶ್ರೀಕೃಷ್ಣ ಕಣ್ಣೀರಿಟ್ಟ ಕಥೆ.*** ಒಮ್ಮೆ ದ್ವಾರಕೆಯಲ್ಲಿ ಶ್ರೀಕೃಷ್ಣನು,ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಾ ಕಣ್ಣೀರು ಹಾಕುತ್ತಿದ್ದನು. ಇದನ್ನು ಗಮನಿಸಿದ ಉದ್ದವನು, ಭಗವಂತ ನಿನ್ನ ದುಃಖಕ್ಕೆ ಕಾರಣವೇನು? ನೀನು ಈ ರೀತಿ ಅಳುವುದನ್ನು ನಾನು ಎಂದೂ ನೋಡಿರಲಿಲ್ಲ ಎನ್ನುತ್ತಾನೆ. ಆಗ ಶ್ರೀ ಕೃಷ್ಣ ಪರಮಾತ್ಮನು, ಉದ್ದವ, ನನ್ನನ್ನು ನೆನಪಿಸಿಕೊಳ್ಳುತ್ತಾ ಬೃಂದಾವನದ ಜನರು ಸದಾ ಕಣ್ಣೀರು ಹಾಕುತ್ತಿರುತ್ತಾರೆ. ನನಗೆ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ನನ್ನ ಈ ರಾಜಕಾರ್ಯಗಳು ಎಂದು ಮುಗಿಯುವೋ ಎನ್ನುತ್ತಾನೆ. ಆಗ ಉದ್ದವನು, ಭಗವಂತ ನೀನು ಒಬ್ಬ ಸಾಮಾನ್ಯ ಮನುಷ್ಯ ಎಂದು ಆ ಜನರೆಲ್ಲ ತಿಳಿದುಕೊಂಡಿದ್ದಾರೆ‌. ನೀನು ಭಗವಂತನೆಂದು ತಿಳಿದುಕೊಂಡರೆ, ಅವರ ದುಃಖ ಕಡಿಮೆಯಾಗುತ್ತದೆ. ನಾನು ಅವರಿಗೆ ಹೋಗಿ ಈ ಪರಮ ತತ್ವವನ್ನು ಉಪದೇಶ ಮಾಡಿ ಅವರ ದುಃಖವನ್ನು ಕಡಿಮೆ ಮಾಡಿ ಬರುತ್ತೇನೆ, ಯೋಚಿಸಬೇಡ ಎನ್ನುತ್ತಾನೆ ಆಗ ಶ್ರೀ ಕೃಷ್ಣನು ಸಂತೋಷದಿಂದ ಪ್ರತಿಯೊಬ್ಬರಿಗೂ ಒಂದೊಂದು ಪತ್ರವನ್ನು ಬರೆದುಕೊಡುತ್ತಾನೆ. ಸ್ನೇಹಿತರಿಗೆಲ್ಲ ಒಂದು ಪತ್ರ ,ತಂದೆ ತಾಯಿಯರಿಗೆ ಒಂದು ಪತ್ರ ಗೋಪಿಕೆಯರಿಗೆ ಒಂದು ಪತ್ರ. ಉದ್ದವನು ಅವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಬೃಂದಾವನಕ್ಕೆ ಹೊರಡುತ್ತಾನೆ .ದಾರಿಯಲ್ಲಿ ಯಾರ ಬಳಿ, ಏನೇನು ಮಾತನಾಡಬೇಕೆಂದು ಯೋಚಿಸಿಕೊಂಡು ಬೃಂದಾವನವನ್ನು ಪ್ರವೇಶಿಸುತ್ತಾನೆ.ಮೊದಲು ಉದ್ದವನನ್ನು ದೂರದಿಂದ ಕಂಡು, ಶ್ರೀಕೃಷ್ಣ ಪರಮಾತ್ಮನೇ ಬಂದನೆಂದು, ಬೃಂದಾವನವಾಸಿಗಳೆಲ್ಲ ಇವನ ಬಳಿ ಓಡಿ ಬರುತ್ತಾರೆ. ನಂತರ ಉದ್ದವನೆಂದು ತಿಳಿದು, ನಿರಾಶರಾಗುತ್ತಾರೆ. ಯಾವಾಗ ಅವನು ಶ್ರೀ ಕೃಷ್ಣನಿಂದ ಸಂದೇಶಗಳನ್ನು ತಂದಿದ್ದೇನೆ ಎಂದು ಹೇಳಿದನೋ, ಅವರೆಲ್ಲ ಅವನನ್ನು ಬಗೆಬಗೆಯಾಗಿ ಉಪಚರಿಸುತ್ತಾ ಅವನನ್ನು ಮುತ್ತಿಕೊಳ್ಳುತ್ತಾರೆ. ಮೊದಲು ಉದ್ದವನು ಶ್ರೀಕೃಷ್ಣನ ಸ್ನೇಹಿತರಿಗೆ ಅವರ ಪತ್ರವನ್ನು ಓದಿ ಹೇಳುತ್ತಾನೆ. ಅವರೆಲ್ಲ ಆನಂದದಿಂದ ಕಣ್ಣೀರು ಹಾಕುತ್ತಾರೆ. ಉದ್ದವನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ ನಂತರ ಉದ್ದವನು ಯಶೋದೆ ಮತ್ತು ನಂದ ಮಹಾರಾಜರ ಅರಮನೆಯನ್ನು ಪ್ರವೇಶಿಸಿ ಅವರಿಗೆ ಶ್ರೀಕೃಷ್ಣನ ಸಂದೇಶಗಳನ್ನು ತಿಳಿಸುತ್ತಾನೆ ಕೊನೆಯಲ್ಲಿ ಗೋಪಿಯರು ಉದ್ದವನನ್ನು ,ಒಂದು ಏಕಾಂತ ಸ್ಥಾನಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಶ್ರೀಕೃಷ್ಣನ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಉದ್ದವನು ಮಾತನಾಡಲು ಆರಂಭಿಸಿದೊಡನೆಗಯೇ ಹೃದಯ ಹಿಂಡುವಂತೆ ಅಳಲು ಆರಂಭಿಸುತ್ತಾರೆ. ಉದ್ಧವನು, ಪತ್ರವನ್ನು ಓದುವುದನ್ನು ಕೂಡ ಅವರು ಕೇಳಿಸಿಕೊಳ್ಳುತ್ತಿಲ್ಲ. ಬರೇ ಅಳುತ್ತಿದ್ದಾರೆ. ಅವರನ್ನು ಸಮಾಧಾನ ಮಾಡುವುದೇ ಉದ್ದವನಿಗೆ ಬಹಳ ಕಷ್ಟಕರವಾಗಿ ಹೋಗುತ್ತದೆ. ಕೊನೆಗೆ ಬಹಳ ಪ್ರಯಾಸದಿಂದ, ಅವರ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರ ಕೊಟ್ಟು ,ಶ್ರೀ ಕೃಷ್ಣನು ಸಾಮಾನ್ಯ ಮನುಷ್ಯನಲ್ಲ, ಅವನು ಭಗವಂತ. ನೀವೆಲ್ಲರೂ ಅವನನ್ನು ಭಕ್ತಿಯಿಂದ ಭಜಿಸಬೇಕು. ಭಗವಂತನಂತೆ ಪೂಜಿಸಬೇಕು. ಅವನು ಎಲ್ಲೆಡೆ ಇರುವ ನಿರಾಕಾರ ತತ್ವನು. ಆ ಶಕ್ತಿಗೆ ನೀವು ವಂದಿಸುತ್ತಾ, ಅದರಲ್ಲಿ ಒಂದಾದರೆ ನಿಮ್ಮ ಈ ದುಃಖವು ಪರಿಹಾರವಾಗುತ್ತದೆ ಎನ್ನುತ್ತಾನೆ. ಆಗ ಗೋಪಿಯರು ಉದ್ದವನನ್ನು ವಿಚಿತ್ರವಾಗಿ ನೋಡುತ್ತಾ, ಉದ್ದವಾ, ಶ್ರೀ ಕೃಷ್ಣನು ಭಗವಂತನು ಎಂದು ನಮಗೆ ಯಾರಿಗೂ ತಿಳಿದಿಲ್ಲ ಎಂದು ಭಾವಿಸಿರುವೆಯಾ? ನಮ್ಮ ಕಣ್ಣ ಮುಂದೆಯೇ ಅವನು ಅನೇಕ ಪವಾಡಗಳನ್ನು ಮಾಡಿರುವನು. ಭಗವಂತನಿಗೆ ನೋವು ನಲಿವುಗಳು ಇರಬಾರದೇನು? ಅವನು ಹರ್ಷಗೊಳ್ಳುವುದನ್ನೂ, ರಾಧೆಯ ವಿರಹದಿಂದ ವಿಲಾಪ ಮಾಡುವುದನ್ನು ಕೂಡ ನಾವು ಅನೇಕ ಬಾರಿ ನೋಡಿದ್ದೇವೆ. ಭಗವಂತನು ನಿರಾಕಾರ ತತ್ವ ನಾಗಿರುವಂತೆ ಸಾಕಾರ ತತ್ವನೂ ಕೂಡ ಆಗಿರುವನು. ಅವನು ನಮ್ಮ ಪ್ರೇಮ ಪೂರ್ವಕ ಸೇವೆಗಳನ್ನು ಸ್ವೀಕರಿಸಿ ಹರ್ಷಪಡುತ್ತಿದ್ದನು. ನಮ್ಮನ್ನು ಕೂಡ ಹರ್ಷಪಡಿಸುತ್ತಿದ್ದನು. ನಾವು ಈಗ ನಮ್ಮ ಈ ಬಾಹ್ಯ ಕಣ್ಣುಗಳಿಂದ ಅವನನ್ನು ನೋಡಲಾಗುತ್ತಿಲ್ಲವಾದರೂ ಅವನ ಮಾತನ್ನು ಈ ಕಿವಿಗಳಿಂದ ಕೇಳಿಸಿಕೊಳ್ಳಲು ಆಗುತ್ತಿಲ್ಲವಾದರೂ ,ನಮ್ಮ ಸುತ್ತಮುತ್ತ ಅವನ ಇರುವಿಕೆಯನ್ನು ಸದಾ ಗ್ರಹಿಸುತ್ತಿರುವೆವು. ಅವನು ಬೃಂದಾವನವನ್ನು ಬಿಟ್ಟು ಹೋಗಿರುವನು ಎಂದು ನಾವು ಎಂದೂ ಭಾವಿಸುವುದಿಲ್ಲ‌ ಎಂದರು ‌ಇದರಿಂದ ಅಚ್ಚರಿಗೊಂಡ ಉದ್ದವನನ್ನು ಗೋಪಿಯರು, ಶ್ರೀ ರಾಧಾ ರಾಣಿಯ ಬಳಿ, ಕರೆದುಕೊಂಡು ಹೋದರು. ಶ್ರೀರಾಧೆಯು ತನ್ನ ಬಳಿ ಬಂದ ಉದ್ದವನನ್ನೂ, ಗೋಪಿಯರನ್ನೂ ಗಮನಿಸಲೇ ಇಲ್ಲ. ಅವಳು ಆನಂದವಾಗಿ ಇರುವಂತೆ ವರ್ತಿಸುತ್ತಿದ್ದಳು. ಮರುಕ್ಷಣ ದುಃಖದಿಂದ ಅಳುವಳು .ಯಾರೊಡನೆಯೋ ಮಾತನಾಡುವಳು‌ ಒಟ್ಟಿನಲ್ಲಿ ಅವಳು ಬೇರೆ ಯಾವುದೋ ಪ್ರಪಂಚದಲ್ಲಿ ಇರುವಂತೆ ಭಾಸವಾಗುತ್ತಿತ್ತು‌ ಇದೆಲ್ಲವನ್ನು ನೋಡಿದ ಉದ್ದವನಿಗೆ ,ಈ ಗೋಪಿಯರು ಭಗವಂತನೊಂದಿಗೆ, ಧ್ಯಾನ ಸ್ಥಿತಿಯಲ್ಲಿ ಸದಾ ವ್ಯವಹರಿಸುತ್ತಿರುವರು. ಇವರು ಧ್ಯಾನದ ಉನ್ನತ ಸ್ಥಿತಿಯನ್ನು ಈಗಾಗಲೇ ಪಡೆದುಕೊಂಡಿರುವರು. ಪ್ರೇಮ ಯೋಗ ವೆಂಬ ಈ ಬಗೆಯ ಧ್ಯಾನ ಸ್ಥಿತಿಯನ್ನು, ಇವರಿಂದ ನಾನು ಕಲಿತುಕೊಳ್ಳಲಿ ಎಂದು, ಭಗವಂತನು ನನ್ನನ್ನು ಇಲ್ಲಿಗೆ ಕರುಣೆಯಿಂದ ಕಳಿಸಿರುವನು. ಇವರು ಗಳಿಸಿರುವ ಪ್ರೇಮ ಯೋಗವನ್ನು ಗಳಿಸಲು ನಾನು ಎಷ್ಟು ತಪಸ್ಸು ಮಾಡಬೇಕಾಗಬಹುದು ಎಂದು ಕೈಮುಗಿದು, ಶ್ರೀ ರಾಧಾ ಮಂತ್ರವನ್ನು ಜಪಿಸಲು ಆರಂಭಿಸಿದನು‌ ಆಗ ಅವನು ತನ್ನ ಜ್ಞಾನದ ಕಣ್ಣುಗಳಿಂದ, ಬೃಂದಾವನದ ಎಲ್ಲೆಡೆಯಲ್ಲಿಯೂ, ಶ್ರೀ ಕೃಷ್ಣನು ಪ್ರತಿಯೊಬ್ಬರೊಡನೆಯೂ ಇರುವಂತೆ, ಅವರೊಡನೆ ಬಗೆಬಗೆಯಾಗಿ ವ್ಯವಹರಿಸುತ್ತಿರುವಂತೆ, ಆನಂದಿಸುತ್ತಿರುವಂತೆ, ದರ್ಶನವಾಯಿತು. ಪ್ರೇಮಯೋಗದ ತತ್ವವನ್ನು ಉದ್ದವನು ಆಗ ಅರಿತುಕೊಂಡನು. ಅವರಂತೆಯೇ ತನಗೂ, ಶ್ರೀ ಕೃಷ್ಣನ ಮೇಲೆ ಪ್ರೇಮವು ಬೆಳೆಯಲಿ ಎಂದು ಬಯಸುತ್ತಾ, ಉದ್ಧವನು ಬಹಳ ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡನು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat
ಮದುವೆಗಳಲ್ಲಿ ಅಕ್ಕಿ ಕಾಳುಗಳನ್ನು ಅಕ್ಷತೆಯಾಗಿ ಯಾಕೆ ಉಪಯೋಗಿಸುತ್ತಾರೆ? ಹಿಂದೂ ವಿವಾಹಗಳಲ್ಲಿ, ನಾವು “ತಂಡುಲ್ ಅಕ್ಷತಾ” (ಅಕ್ಕಿ ಧಾನ್ಯಗಳು) ಅನ್ನು ಬಳಸುತ್ತೇವೆ. ಬೇರೆ ಯಾವುದೇ ಧಾನ್ಯಗಳನ್ನು ಬಳಸಲಾಗುವುದಿಲ್ಲ. ಅಕ್ಕಿಯು ದೊಡ್ಡ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಅದರ ಮೂಲಭೂತ ಜೀವನ-ಸಮರ್ಥನೀಯ ಗುಣಲಕ್ಷಣಗಳಿಂದಾಗಿ, ಅಕ್ಕಿಯನ್ನು ಮಂಗಳಕರ, ಸಮೃದ್ಧಿ ಮತ್ತು ಫಲವತ್ತತೆಯ ಪ್ರಬಲ ಸಂಕೇತವೆಂದು ಪ್ರಶಂಸಿಸಲಾಗುತ್ತದೆ. ನಾವು ವಧುವನ್ನು ಸಮೃದ್ಧಿಯ ದೇವತೆಯಾದ ಲಕ್ಷ್ಮಿಯ ಅವತಾರವೆಂದು ಪರಿಗಣಿಸುತ್ತೇವೆ. ವಿವಾಹ ಸಮಾರಂಭದಲ್ಲಿ, ನವವಿವಾಹಿತರು ಸಮೃದ್ಧ ದಾಂಪತ್ಯ ಜೀವನವನ್ನು ಆಶೀರ್ವದಿಸಲು ಅಕ್ಕಿಯನ್ನು ಚಿಮುಕಿಸಲಾಗುತ್ತದೆ. ಈ ಸಂಪ್ರದಾಯದ ಹಿಂದೆ ಎರಡು ಮೂಲಭೂತ ಕಾರಣಗಳಿವೆ. 1.ಅಕ್ಕಿಯು ಒಳಗಿನಿಂದ ಕೊಳೆಯದ ಏಕೈಕ ಧಾನ್ಯವಾಗಿದೆ … ಅದು ಒಳಗಿನಿಂದ ಸೋಂಕಿಗೆ ಒಳಗಾಗುವುದಿಲ್ಲ … ಅದಕ್ಕಾಗಿಯೇ ವ್ಯಕ್ತಿಯ ಧಾರ್ಮಿಕ ಮತ್ತು ಶುದ್ಧ ಸ್ವಭಾವವು ತೊಳೆದ ಅಕ್ಕಿಯಂತೆ ಎಂದು ಹೇಳಲಾಗುತ್ತದೆ. ಅಕ್ಕಿ ಒಂದೇ ಧಾನ್ಯವಾಗಿದೆ (ಎಕ್ಡಾಲ್), ಅದು ಎರಡು ಭಾಗಗಳಾಗಿ ವಿಭಜಿಸುವುದಿಲ್ಲ ಅಥವಾ ವಿಭಜನೆಯಾಗುವುದಿಲ್ಲ. ಇಬ್ಬರು ವಿವಾಹಿತರ ಜೀವನವು ಒಂದೇ ಆಗಿರಬೇಕು ಮತ್ತು ವಿಭಜನೆಯಾಗಬಾರದು / ವಿಭಜನೆಯಾಗಬಾರದು ಎಂಬುದು ಅಕ್ಕಿ ಅಕ್ಷತೆಯ ಬಳಕೆಯ ಹಿಂದಿನ ಭಾವನೆ. ಭತ್ತದ ಕಾಳು ಮೊಳಕೆಯೊಡೆದ ನಂತರ ಮೇಲಕ್ಕೆ ಬರುವ ಗಿಡವನ್ನು ಹೊರತೆಗೆದು ಮತ್ತೆ ಬೇರೆಡೆ ನೆಡಲಾಗುತ್ತದೆ…. …ಆಗ ಅದು ನಿಜವಾಗಿಯೂ ಅರಳುತ್ತದೆ…..! ಅದೇ ರೀತಿ, ಮದುವೆಗೆ ಮುಂಚೆ ಒಂದು ಹುಡುಗಿ ಒಂದೇ ಸ್ಥಳದಲ್ಲಿ ಬೆಳೆಯುತ್ತಾಳೆ … ಆದರೆ ಮದುವೆಯ ನಂತರ ಮತ್ತೊಂದು ಮನೆಗೆ ಹೋಗಿ ಅಲ್ಲಿ ಅವಳು ಅರಳುತ್ತಾಳೆ … ಇದಕ್ಕಾಗಿಯೂ ಸಹ ಧಾರ್ಮಿಕ (ಮಾಂಗಲ್ಯರೂಪಿ) ಅಕ್ಷತೆಗಳನ್ನು ಅವಳ ಮತ್ತು ಅವಳ ವೈವಾಹಿಕ ಜೀವನದ ಅರಳಿಸಲು ಬಳಸಲಾಗುತ್ತದೆ. .. ನಮ್ಮ ಸಂಪ್ರದಾಯಗಳು ಬಹಳ ಆಳವಾದ ಮತ್ತು ಚಿಂತನಶೀಲವಾಗಿವೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು. ಮುಂದಿನ ಪೀಳಿಗೆಯವರು ಇವುಗಳನ್ನು ಅರಿತು ಅಭ್ಯಾಸ ಮಾಡಬೇಕು..... ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - Vas  luarodds  Vas  luarodds - ShareChat
ಶಂಖದ ನೀರನ್ನು ಸಿಂಪಡಿಸುವುದೇಕೆ..? ಶಂಖವನ್ನು ಮನೆಯಲ್ಲಿಟ್ಟರೆ ಏನಾಗುತ್ತೆ..? ಧಾರ್ಮಿಕ ಶುಭ ಸಮಾರಂಭಗಳಲ್ಲಿ ತಪ್ಪದೇ ಬಳಸುವ ಶಂಖದ ಮಹತ್ವವೇನು..? ಇದರ ನೀರನ್ನು ಸಿಂಪಡಿಸುವುದರಿಂದಾಗುವ ಪ್ರಯೋಜನವೇನು..? ಇಲ್ಲಿದೆ ಶಂಖದ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ. ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಸ್ಥಾನ – ಮಾನವನ್ನು ನೀಡಲಾಗಿದೆ. ಪೂಜೆಯಲ್ಲಿ, ಧಾರ್ಮಿಕ ಆಚರಣೆಯಲ್ಲಿ, ಹೋಮ – ಹವನಗಳಲ್ಲಿ, ತಾಂತ್ರಿಕ ಚಟುವಟಿಕೆಗಳಲ್ಲಿ ಮತ್ತು ವಿಜಯದಂತಹ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲೂ ಶಂಖವನ್ನು ಬಳಸಲಾಗುತ್ತದೆ. ಶಂಖವನ್ನು ಹಿಂದೂ ಧರ್ಮದಲ್ಲಿ ಭಗವಾನ್‌ ವಿಷ್ಣು ಮತ್ತು ದೇವಿ ಲಕ್ಷ್ಮಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಂಖವು ಅತ್ಯಂತ ಪವಿತ್ರವಾದ ವಸ್ತುವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಶಂಖವನ್ನು ಊದುವುದು ಅಥವಾ ನುಡಿಸುವುದು ಒಂದು ಸಂಪ್ರದಾಯವಾಗಿದೆ. ದೇವಾಲಯಗಳಲ್ಲಿ ಆರತಿಯ ನಂತರ ಶಂಖದಿಂದ ನೀರನ್ನು ಭಕ್ತರ ಮೇಲೆ ಚಿಮುಕಿಸಲಾಗುತ್ತದೆ. ಶಂಖದಿಂದ ನೀರನ್ನು ಏಕೆ ಚಿಮುಕಿಸಲಾಗುತ್ತದೆ..? ದೇವಾಲಯಗಳಲ್ಲಿ ಶಂಖದಿಂದ ನೀರನ್ನು ಚಿಮುಕಿಸುವಾಗ ಎಂದಾದರೂ ನೀವು ಅದರ ಕಾರಣವನ್ನು ತಿಳಿಯಲು ಇಚ್ಛಿಸಿದ್ದೀರಾ..? 1) ಶಂಖದ ನೀರನ್ನು ಚಿಮುಕಿಸುವುದರ ಪ್ರಯೋಜನವೇನು..? ಬ್ರಹ್ಮವೈವರ್ತ ಪುರಾಣದ ಪ್ರಕಾರ, ಶಂಖದಲ್ಲಿ ನೀರನ್ನು ತುಂಬಿಸಿ ಅದಕ್ಕೆ ಶ್ರೀಗಂಧವನ್ನು ಸೇರಿಸಿ ಸಿಂಪಡಿಸುವುದರಿಂದ ನಮ್ಮ ಸುತ್ತಲಿನ ವಾತಾವರಣವು ಶುದ್ಧ ಮತ್ತು ಪಾವಿತ್ರತೆಯಿಂದ ತುಂಬಿರುತ್ತದೆ. ಯಾವಾಗಲೂ ಪೂಜಾ ಸ್ಥಳದಲ್ಲಿ ಶಂಖದಲ್ಲಿ ನೀರನ್ನು ಇಡಬೇಕು ಇದರಿಂದ ಪೂಜಾ ಸ್ಥಳವು ಪವಿತ್ರವಾಗಿರುತ್ತದೆ. ಶಂಖದ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯು ದೂರಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಯಾಗುತ್ತದೆ. ಭಗವಾನ್‌ ವಿಷ್ಣು ಇದನ್ನು ಕೈಯಲ್ಲಿ ಹಿಡಿದಿರುವುದರಿಂದ ಇದು ಶುಭಸೂಚಕವೆಂಬ ನಂಬಿಕೆಯಿದೆ. 2) ಶಂಖದಿಂದ ಹೊರಹೊಮ್ಮುವ ಶಬ್ಧದ ಪ್ರಯೋಜನವೇನು..? ನೀರಿನೊಂದಿಗೆ ಶಂಖದಲ್ಲಿದ್ದ ಸಾತ್ವಿಕ ಶಕ್ತಿಯು ಶಂಖವನ್ನು ಊದಿದಾಗ ಅದರ ಶಬ್ಧದಿಂದ ಹೊರಹೊಮ್ಮುತ್ತದೆ. ಯಾವ ಮನೆಯಲ್ಲಿ ಶಂಖವನ್ನು ಊದಲಾಗುತ್ತದೆಯೋ ಆ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲವೆನ್ನುವ ನಂಬಿಕೆಯಿದೆ. ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆಗಳು ದೂರಾಗುತ್ತದೆ. ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ. 3) ಶಂಖದಿಂದಾಗುವ ವಾಸ್ತು ಪ್ರಯೋಜನವೇನು..? ನೀರಿನೊಂದಿಗೆ ಶಂಖದಲ್ಲಿದ್ದ ಸಾತ್ವಿಕ ಶಕ್ತಿಯು ಶಂಖವನ್ನು ಊದಿದಾಗ ಅದರ ಶಬ್ಧದಿಂದ ಹೊರಹೊಮ್ಮುತ್ತದೆ. ಯಾವ ಮನೆಯಲ್ಲಿ ಶಂಖವನ್ನು ಊದಲಾಗುತ್ತದೆಯೋ ಆ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲವೆನ್ನುವ ನಂಬಿಕೆಯಿದೆ. ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆಗಳು ದೂರಾಗುತ್ತದೆ. ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ. 3) ಶಂಖದಿಂದಾಗುವ ವಾಸ್ತು ಪ್ರಯೋಜನವೇನು..? ವಾಸ್ತುಶಾಸ್ತ್ರ ಮತ್ತು ಫೆಂಗ್‌ಶೂಯಿ ಕೂಡ ಮನೆಯಲ್ಲಿ ಶಂಖ ಇಡುವುದರಿಂದಾಗುವ ಪ್ರಯೋಜನವನ್ನು ವಿವರಿಸುತ್ತದೆ. ಶಂಖವನ್ನು ಮನೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಇಡುವುದರಿಂದ ಎಲ್ಲಾ ಕಾರ್ಯದಲ್ಲಿ, ಜೀವನದಲ್ಲಿ, ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಒಂದು ವೇಳೆ ನೀವು ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಇಚ್ಛಿಸಿದರೆ ಮನೆಯ ದಕ್ಷಿಣ ದಿಕ್ಕಿನತ್ತ ಶಂಖ ಚಿಪ್ಪನ್ನು ಇಡಿ. ಶಂಖವನ್ನು ಮನೆಯಲ್ಲಿರಿಸುವುದರಿಂದ ಆರ್ಥಿಕ ಲಾಭವಾಗುತ್ತದೆಯೆಂದು ಮನಬಂದತೆ ಶಂಖವನ್ನು ಇಡಬಾರದು. ಮನೆಯಲ್ಲಿ ಶಂಖವನ್ನು ಕೇವಲ ಪೂಜಾ ಸ್ಥಳದಲ್ಲಿ ಅಥವಾ ಮುಖ್ಯ ಜಗುಲಿಯಲ್ಲಿ ಇಡಬೇಕು. ಮಕ್ಕಳ ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಯಶಸ್ಸಿಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಶಂಖವನ್ನು ಇಡಬೇಕು. 4) ಶಂಖ ಲಕ್ಷ್ಮಿ ದೇವಿಯ ಸಹೋದರ: ಸಮುದ್ರ ಮಂಥನ ಸಮಯದಲ್ಲಿ ಹೊರಹೊಮ್ಮಿದ 14 ವಿವಿಧ ರತ್ನಗಳಲ್ಲಿ ಶಂಖವೂ ಕೂಡ ಒಂದು. ಶಂಖವನ್ನು ತಾಯಿ ಲಕ್ಷ್ಮಿಯ ಸಹೋದರನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವ ಸ್ಥಳದಲ್ಲಿ ಶಂಖವನ್ನು ಇಡಲಾಗುತ್ತದೆಯೋ ಆ ಸ್ಥಳದಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆನ್ನುವ ನಂಬಿಕೆಯಿದೆ. ಶಂಖವು ಸ್ವರ್ಗದಲ್ಲಿನ ಅಷ್ಟಸಿದ್ಧಿ ಮತ್ತು ನವನಿಧಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. 5) ಶಂಖ ಮತ್ತು ವಿಜ್ಞಾನ: ವಿಜ್ಞಾನವು ಹೇಳುವ ಪ್ರಕಾರ, ಶಂಖದಲ್ಲಿ ನೀರನ್ನು ಎಷ್ಟೇ ದಿನಗಳವರೆಗೆ ಶೇಖರಿಸಿಟ್ಟರು ಅದು ಹಾಳಾಗುವುದಿಲ್ಲ ಮತ್ತು ಅಶುದ್ಧವಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಶಂಖದಲ್ಲಿ ಶೇಖರಣೆಗೊಂಡ ನೀರನ್ನು ಅಂದರೆ ಶಂಖದಲ್ಲಿಟ್ಟ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಬ್ಯಾಕ್ಟೇರಿಯಾ ಸೇರಿದಂತೆ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತದೆ. ಶಂಖದಲ್ಲಿನ ಗಂಧಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶವು ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಶಂಖದ ನೀರನ್ನು ಸಿಂಪಡಿಸುವುದರಿಂದ ಮತ್ತು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಂಖದ ನೀರನ್ನು ಎಂದಿಗೂ ಎಸೆಯಬೇಡಿ. ಒಂದು ವೇಳೆ ನೀವು ಶಂಖದಲ್ಲಿ ನೀರನ್ನು ಶೇಖರಿಸಿದ್ದರೆ ಅದನ್ನು ಮನೆಗೆ ಸಿಂಪಡಿಸಿ, ಮನೆಯ ಸದಸ್ಯರಿಗೆ ಸಂಪಡಿಸಿ. ಇಲ್ಲವೇ, ನಿಮ್ಮ ಮನೆಯಲ್ಲಿ ಶಂಖವಿದ್ದು ಅದನ್ನು ಖಾಲಿಯಿಟ್ಟಿದ್ದರೆ ಆ ಶಂಖಕ್ಕೆ ಇಂದಿನಿಂದಲೇ ನೀರನ್ನು ಹಾಕಿಡುವ ರೂಢಿ ಬೆಳೆಸಿಕೊಳ್ಳಿ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat
ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗಳು........ ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ನಡುವಿನ ತೀವ್ರತರವಾದ ಹಾಗೂ ಹೆಚ್ಚು ಕಾಲದ ದ್ವೇಷದ ಬಗ್ಗೆ ಹೇಳುವಾಗ ಅವರಿಬ್ಬರೂ ಹಾವು ಮುಂಗುಸಿ ಇದ್ದಂತೆ ಎಂದೇ ಹೇಳುತ್ತಾರೆ. ಬಹುಶಃ ಅವರಿಬ್ಬರ ನಡಿವಿನ ದ್ವೇಷವನ್ನು ನಿಖರವಾಗಿ ಅರ್ಥೈಸಲು ಇದಕ್ಕಿಂತಲೂ ಬೇರೊಂದು ಉದಾಹರಣೆ ಸಾಧ್ಯವಿಲ್ಲ. ಹಾವು ಮತ್ತು ಮುಂಗುಸಿಯ ನಡುವಿನ ತಲ ತಲಾಂತರದ ದ್ವೇಷದ ಹಿಂದಿನ ಕಾರಣವೇನು? ಹಾವು ಮುಂಗುಸಿಯನ್ನು ದ್ವೇಷಿಸುತ್ತದೆಯೋ ಅಥವಾ ಮುಂಗುಸಿಯೇ ಹಾವನ್ನು ದ್ವೇಷಿಸುತ್ತದೆಯೋ? ಇವರಿಬ್ಬರ ಕಾದಾಟದಲ್ಲಿ ಮುಂಗುಸಿಯೇ ಹೇಗೆ ಗೆಲ್ಲುತ್ತದೆ..? ಇಂತಹ ಪ್ರಶ್ನೆಗಳಿಗೆ ಉತ್ತರವು ಶುದ್ದ ಪ್ರಾಕೃತಿಕ ವಾಗಿಯೇ ಇರುತ್ತದೆ.. ಮುಂಗುಸಿಗಳು ಪೊದೆಗಳ ಕೆಳಗೆ ಅಥವಾ ಹುಲ್ಲು ಗಾವಲುಗಳ ನಡುವೆ ಪೊಟರೆಗಳನ್ನು ನಿರ್ಮಿಸಿಕೊಂಡು ಆ ಪೊಟರೆಗಳಲ್ಲೇ ವಾಸಮಾಡುತ್ತವೆ, ಹಾಗೂ ತಮ್ಮ ಮರಿಗಳನ್ನು ಪೊಟರೆಯ ಒಳಗೆ ಕೆಲದಿನಗಳ ಕಾಲ ಆರೈಕೆ ಮಾಡುತ್ತವೆ. ಮುಂಗುಸಿಗಳು ನಿರ್ಮಿಸಿದ ಪೊಟರೆಗಳನ್ನು ಕಂಡ ತಕ್ಷಣವೇ ಅದರೊಳಗೆ ಹೊಕ್ಕು ಅದರೊಳಗಿರುವ ಚಿಕ್ಕ ಚಿಕ್ಕ ಮರಿಗಳನ್ನು ತಿನ್ನುವುದು ಹಾವಿನ ಜನ್ಮ ದತ್ತ ಗುಣವಾಗಿದೆ. ಹಾಗೂ ಸಾಮಾನ್ಯವಾಗಿ ಇಂತಹಾ ಪೊಟರೆಯೊಳಗೆ ತಾನೂ ಸಹಾ ವಾಸಿಸಲೂ ಹವಣಿಸುವುದೂ ಸಹಾ ಹಾವಿನ ಮೂಲ ಗುಣಗಳಲ್ಲೊಂದಾಗಿದೆ... ಪೃಕೃತಿಯ ಸೂತ್ರ........ ಪೃಕೃತಿಯ ಪ್ರತೀ ಜೀವಿಯೂ ತನ್ನ ಸಂತಾನವನ್ನು ಕಾಪಾಡುವುದು ಹಾಗೂ ಅವುಗಳನ್ನು ಅಪಾಯಗಳಿಂದ ರಕ‌್ಷಿಸುವುದು ಇದು ಪೃಕೃತಿಯ ಸೂತ್ರವಾಗಿದೆ . ಇದರಂತೆಯೇ ಮುಂಗುಸಿಯು ತನ್ನ ಸಂತಾನವನ್ನು ನಾಶಮಾಡುವಲ್ಲಿ ಮುಂಚೂಣಿಯಲ್ಲಿರು ಹಾವುಗಳ ಬಗ್ಗೆ ತಲೆ ಮಾರುಗಳಿಂದಲೂ ಎಚ್ಚರಿಕೆಯಿಂದಿರುತ್ತವೆ. ಹಾವುಗಳು ಹೊಕ್ಕದ ಮುಂಗುಸಿಯ ಬಿಲಗಳೇ ಇಲ್ಲ ಎಂದು ಹೇಳಬಹುದು . ಹೀಗೆ ತನ್ನ ಜೀವಿತಾವದಿಯ ಶತೃವಾದ ಹಾವುಗಳನ್ನು ಮುಂಗುಸಿಗಳು ದ್ವೇಷಿಸುತ್ತಲೇ ಇರುತ್ತವೆ.. ಆದರೆ ಹಾವು ಮುಂಗುಸಿಗಳನ್ನು ದ್ವೇಷಿಸುವ ಬದಲಾಗಿ ಮುಂಗುಸಿಗಳು ನಿರ್ಮಿಸಿರುವ ಪೊಟರೆಗಳಲ್ಲಿ ಠಿಕಾಣಿ ಹೂಡಲು ಹಾಗೂ ಅವುಗಳ ಮರಿಗಳನ್ನು ಗುಳುಂ ಮಾಡಲು ಮಾತ್ರ ಹವಣಿಸುತ್ತಿರುತ್ತದೆ. ಹಾವು_ಮುಂಗುಸಿ ಕಾಳಗ ಹೇಗಿರುತ್ತದೆ...... ಹಾವಿನ ಬಗ್ಗೆ ಸದಾ ಎಚ್ಚರಿಕೆಯಿಂದಿರುವ ಮುಂಗುಸಿಯು ಹಾವನ್ನು ಕಂಡ ತಕ್ಷಣ ಅಥವಾ ಹಾವಿನ ಚಲನೆಯ ಶಬ್ದವನ್ನು ಕೇಳಿದ ತಕ್ಷಣ ಅಥವಾ ತನ್ನ ಮರಿಗಳು ಸೂಚಿಸುವ ಅಪಾಯದ ಸಂಜ್ಞೆಗಳನ್ನು ತಿಳಿದ ತಕ್ಷಣವೇ ಜಾಗರೂಕವಾಗಿ ಹಾವಿನ ಮೇಲೆ ದಾಳಿಗಿಳಿಯುತ್ತದೆ. ಈ ರೀತಿ ಎರಗುವ ಮುಂಗುಸಿಯಿಂದ ಪಾರಾಗಲು ಹಾವೂ ಸಹಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ . ಹಾವಿನ ಕಡಿತದಿಂದ ಪಾರಾಗಲು ಮುಂಗುಸಿಯು ಬಹಳ ಚಾಕಚಕ್ಯತೆಯಿಂದ ಹೋರಾಡುತ್ತದೆ. ಕೆಲವೇ ಸಮಯದಲ್ಲಿ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಾವಿಗೆ ಭಯವನ್ನು ಉಂಟು ಮಾಡುತ್ತದೆ. ಸಾಧ್ಯವಾದರೆ ಮೂರ್ನಾಲ್ಕು ಬಾರಿಯಾದರೂ ಕಚ್ವಿ ಎಳೆದು ಈ ಮುಂಗುಸಿಯ ಸಹವಾಸವೇ ಬೇಡವೆಂದು ಹಾವು ಓಡಿ ಹೋಗುವಂತೆ ಭಯಪಡಿಸುತ್ತವೆ. ಒಂದು ವೇಳೆ ಹಾವಿನ ಕಡಿತಕ್ಕೆ ಮುಂಗುಸಿಯೇ ಒಳಗಾದರೆ ಹಾವಿನ ವಿಷದಿಂದ ಪಾರಾಗುವ ಸಸ್ಯವನ್ನು ತಿಂದು ಬಚಾವಾಗುತ್ತದೆ ಎಂದೂ ಸಹಾ ಹೇಳಲಾಗುತ್ತದೆ . ಆದರೇ ಹಾವಿನ ಕಡಿತಕ್ಕೆ ಒಳಪಡದೆ ದಾಳಿಮಾಡುವ ಕೌಶಲ್ಯವನ್ನು ಮುಂಗುಸಿಗಳು ರೂಡಿಸಿಕೊಂಡಿರುತ್ತವೆ. ಹಾವುಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆಯಿಂದಿರುವ ಹಾಗೂ ಹಾವಿನ ಬಗ್ಗೆ ಹೊಂದಿರುವ ರಕ್ತಗತ ದ್ವೇಷವೇ ಮುಂಗುಸಿಯಲ್ಲಿ ಬಹಳ ಜಾಗರೂಕವಾಗಿ ಕಾದಾಡುವ ಕೌಶಲ್ಯಗಳನ್ನು ಬಲಗೊಳಿಸಿರುತ್ತದೆ. ಆದರೆ ಹಾವು ಮುಂಗಿಷಿಯಷ್ಟು ಕೌಶಲ್ಯಗಳನ್ನು ಬಳಸುವುದಿಲ್ಲ. ತನ್ನ ಎದುರಾಳಿ ಮುಂಗುಸಿಯನ್ನು ಭಯಪಡಿಸಲು ಆಕ್ರೋಶದ ಶಬ್ದಮಾಡುವುದು ಹಾಗು ಮುಂಗುಸಿಯನ್ನು ಕಚ್ವಿ ತನ್ನ ಹಲ್ಲುಗಳ ಕೊಳವೆಯಲ್ಲಿ ಸಿದ್ದವಿರುವ ವಿಷಕಾರಲು ಹವಣಿಸುತ್ತದೆ. ಮುಂಗುಸಿಗಿಂತಲೂ ಉದ್ದವಾಗಿರುವ, ತನ್ನ ದೇಹವನ್ನು ಮುಂಗುಸಿಯ ಬಾಯಿಗೆ ಸಿಕ್ಕದಂತೆ ಪಾರಾಗಲು ಹಾವೂ ಸಹಾ ಹೆಚ್ಚು ಶ್ರಮ ಪಡಬೇಕಾಗುತ್ತದೆ.. ಆದರೂ ಸಹಾ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಚೂಪಾದ ಹಲ್ಲುಗಳಿಂದ ಕಚ್ಚಿ ಎಳೆದು ಸೀಳುವಲ್ಲಿ ಮುಂಗುಸಿಯೇ ಯಶಸ್ವಿಯಾಗುತ್ತದೆ. ಹೀಗಾಗಿ ಪ್ರತೀ ಕಾಳಗದಲ್ಲೂ ಮುಂಗುಸಿಯೇ ಗೆದ್ದಂತೆ ನೋಡುಗರಿಗೆ ಭಾಸವಾಗುತ್ತದೆ. ಮುಂಗುಸಿಯ ಕಡಿತದಿಂದ ಹಾವಿಗೆ ಪ್ರಾಣಾಪಾಯವಾಗುವುದಿಲ್ಲ. ಆದರೆ ಹೆಚ್ಚು ಕಡಿತದಿಂದ ಹೆಚ್ಚು ನೋವು ರಕ್ತಸ್ರಾವವಾಗಬಹುದು. ಕೆಲವು ಸಲ ಮುಂಗುಸಿಯ ಜೊಲ್ಲಿನಲ್ಲಿರುವ ತೀವೃತರವಾದ ರ‌್ಯಾಬೀಸ್ ಗಳಿಂದ ಹಾವಿನ ಆರೋಗ್ಯವೂ ಕ‌್ಷಿಣಿಸಬಹುದು. ತನ್ನ ಸುಲಲಿತ ಚಲನೆಗೂ ಕೆಲ ಕಾಲ ಅಡ್ಡಿಯಾಗಬಹುದು. ಆದರೆ ಹಾವಿನ ಕಡಿತವು ಮುಂಗುಸಿಗೆ ಹೆಚ್ಚು ಅಪಾಯಕಾರಿ. ಈ ಹಾವು ಮತ್ತು ಮುಂಗುಸಿಯ ದ್ವೇಷದ ಹಿಂದೆ ಪೃಕೃತಿಯ ಸರಳ ಸೂತ್ರವೇ ಇರುತ್ತದೆ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - dor dor - ShareChat