Anthoniraj
ShareChat
click to see wallet page
@anthoniraj4671
anthoniraj4671
Anthoniraj
@anthoniraj4671
ಐ ಲವ್ ಶೇರ್ ಚಾಟ್
ಎದೆ ಸುಟ್ಟರೂ ಗುಟ್ಟು ಬಿಟ್ಟುಕೊಡದವಳು: ಭಾರತದ ಮೊದಲ ಮಹಿಳಾ ಗೂಢಾಚಾರಿಣಿ ನೀರಾ ಆರ್ಯ ಅದು 1943ರ ಒಂದು ಕಗ್ಗತ್ತಲೆಯ ರಾತ್ರಿ. ಅಂಡಮಾನ್‌ನ ಸೆಲ್ಯುಲಾರ್ ಜೈಲಿನ ಕಟ್ಟಕಡೆಯ ಕೋಣೆಯಲ್ಲಿ, ಕಬ್ಬಿಣದ ಸಾಲುಗಳ ಹಿಂದೆ, ಒಬ್ಬಳು ಯುವತಿ ನಿಂತಿದ್ದಳು. ಅವಳ ದೇಹದ ಮೇಲೆಲ್ಲಾ ಗಾಯಗಳು, ರಕ್ತದ ಕಲೆಗಳು. ಬ್ರಿಟಿಷ್ ಅಧಿಕಾರಿ ರೋಷದಿಂದ ಕೂಗಿದ, “ನೇತಾಜಿ ಎಲ್ಲಿ ಅಡಗಿದ್ದಾರೆ? ಹೇಳು, ಇಲ್ಲವೇ ಇಂದು ನಿನ್ನ ಕೊನೆಯ ದಿನ!” ಅವಳು ನಿಧಾನವಾಗಿ ತನ್ನದೆಯತ್ತ ಬೊಟ್ಟು ಮಾಡಿ ನಗುತ್ತಾ ಹೇಳಿದಳು: “ನೇತಾಜಿ ಇಲ್ಲಿಯೇ ಇದ್ದಾರೆ… ನನ್ನ ಹೃದಯದಲ್ಲಿ. ಅವರನ್ನು ಹೊರತೆಗೆಯಬೇಕಾದರೆ, ನನ್ನ ಹೃದಯವನ್ನೇ ಸೀಳಬೇಕು!”. ಆ ಮಾತು ಕೇಳಿ ಅಧಿಕಾರಿ ಕುಪಿತಗೊಂಡ, ಕೆಂಡದಂತಹ ಕಬ್ಬಿಣದ ಉಪಕರಣವನ್ನು ಕುಲುಮೆಯಿಂದ ತೆಗೆದು ಅವಳ ಎದೆಗೆ ಒತ್ತಿಯೇ ಬಿಟ್ಟ. ಚರ್ಮ ಸುಟ್ಟಿತು, ನೋವಿನಿಂದ ಆಕೆ ನರಳಾಡಿದಳು ಆದರೆ ಅವಳ ತುಟಿಯಿಂದ ಒಂದೇ ಒಂದು ಮಾತೂ ಹೊರಬರಲಿಲ್ಲ. ಆ ಯುವತಿಯ ಹೆಸರೇ ನೀರಾ ಆರ್ಯ. ಭಾರತದ ಮೊದಲ ಮಹಿಳಾ ಗೂಢಾಚಾರಿಣಿ ಎಂಬ ಹೆಗ್ಗಳಿಕೆ ಪಡೆದವಳು. ಪದಗಳಿಗೆ ಮೀರಿದ ತ್ಯಾಗ ಮಾಡಿದವಳು. ಅವಳ ಈ ತ್ಯಾಗದ ಹಿಂದೆ ಧೈರ್ಯವಿದೆ, ಶೋಕವಿದೆ. ಮಿಗಿಲಾಗಿ ದೇಶಭಕ್ತಿಯಿದೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಬಗೆಗಿನ ಸಮರ್ಪಣೆ ಇದೆ. ಅಷ್ಟಕ್ಕೂ ಆಕೆ ಭಾರತದ ಮೊದಲ ಗೂಢಾಚಾರಿಣಿಯಾಗಿ ಸಾಹಸ ಮೆರೆದಿದ್ದು ಹೇಗೆ ಎಂಬುದರ ಹಿಂದೆಯೂ ಒಂದು ರೋಚಕ ಕಥೆ ಇದೆ. ನೇತಾಜಿ ಪ್ರೇರಣೆಯಿಂದ ಭಾರತಕ್ಕೆ ಸಿಕ್ಕಳು ಮೊದಲ ಮಹಿಳಾ ಗೂಢಾಚಾರಿಣಿ ಉತ್ತರ ಪ್ರದೇಶದ ಶ್ರೀಮಂತ ಕುಟುಂಬದಲ್ಲಿ 1902ರ ಮಾರ್ಚ್‌ 5 ರಂದು ಜನಿಸಿದ್ದ ಆಕೆಯನ್ನು ದೇಶಭಕ್ತಿಯ ಜ್ವಾಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್‌ನ ರಾಣಿ ಝಾನ್ಸಿ ರೆಜಿಮೆಂಟ್‌ನತ್ತ ಕೊಂಡೊಯ್ಯಿತು. ಆದರೆ ಆಕೆಯ ತಂದೆ ಚಿಕ್ಕ ವಯಸ್ಸಲ್ಲೇ ಅವಳ ವಿವಾಹವನ್ನು ಬ್ರಿಟಿಷ್ ಸೇನೆಯ ಸಿಐಡಿ ಇನ್‌ಸ್ಪೆಕ್ಟರ್ ಶ್ರೀಕಾಂತ್ ಜೈ ರಂಜನ್ ದಾಸ್ ಅವರೊಂದಿಗೆ ನೆರವೇರಿಸಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು, ಆದರೆ ಬರು ಬರುತ್ತಾ ಅದು ದೇಶಭಕ್ತಿಯ ಪರೀಕ್ಷೆಯಾಗಿ ಪರಿವರ್ತನೆಗೊಂಡಿತು. ನೀರಾ ಅವರು ರಹಸ್ಯವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್‌ನ ರಾಣಿ ಝಾನ್ಸಿ ರೆಜಿಮೆಂಟ್‌ಗೆ ಸೇರಿದರು. ಅಲ್ಲಿಂದ ಅವರ ಜೀವನದಲ್ಲಿ ತ್ಯಾಗದ ಅಧ್ಯಾಯಗಳು ಆರಂಭವಾದವು. ಒಂದು ದಿನ, ಶ್ರೀಕಾಂತ್ ಅವರು ನೀರಾ ಅವರನ್ನು ಹಿಂಬಾಲಿಸಿ ರಹಸ್ಯ ಸಭೆಯ ಸ್ಥಳಕ್ಕೆ ತಲುಪಿ ನೇತಾಜಿ ಅವರ ಮೇಲೆ ಗುಂಡು ಹಾರಿಸಿಯೇ ಬಿಟ್ಟರು. ಆದರೆ ಗುರಿ ತಪ್ಪಿ ನೇತಾಜಿ ಅವರ ಚಾಲಕನನ್ನು ಈ ಗುಂಡು ತಲುಪಿತ್ತು ಆತ ಅಲ್ಲೇ ಅಸುನೀಗಿದ. ಈ ಸಂದರ್ಭದಲ್ಲಿ ತನ್ನ ದೇಶ ಮತ್ತು ನಾಯಕನನ್ನು ರಕ್ಷಿಸುವ ಸಲುವಾಗಿ ನೀರಾ ಕಿಂಚಿತ್ತೂ ಹಿಂದೆ ಮುಂದೆ ನೋಡದೆ ಕಠಿಣ ನಿರ್ಧಾರವನ್ನು ತೆಗೆದುಕೊಂಡೇ ಬಿಟ್ಟಳು – ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದು ಹಾಕಿದಳು. ಆಕೆಯ ಈ ಕಾರ್ಯ ಅವಳ ವೈಯಕ್ತಿಕ ಜೀವನದ ಅತ್ಯಂತ ಕರಾಳ ಭಾಗವಾಗಿತ್ತು. ಆದರೆ ನೇತಾಜಿ ಅವರು ಅಕೆಯ ಧೈರ್ಯಕ್ಕೆ ಮೆಚ್ಚಿ, ಅವಳನ್ನು ಆಝಾದ್ ಹಿಂದ್ ಫೌಜ್‌ನ ಮೊದಲ ಮಹಿಳಾ ಗೂಢಚಾರಿಕೆಯಾಗಿ ನೇಮಿಸಿದರು. ಅವಳನ್ನು "ನೀರಾ-ನಾಗಿನಿ" ಎಂದು ಕರೆದರು. ನೀರಾ ನಾಗಿನಿ ಎಂದರೆ ಸರ್ಪಗಳ ರಾಣಿಯಂತೆ ತೀಕ್ಷ್ಣಮತಿ ಎಂದು. ಇಲ್ಲಿಂದ ಗೂಢಾಚಾರಿಣಿಯಾಗಿ ಆಕೆ ಜೀವನದ ಗತಿ ಬದಲಾಯಿತು. ಸಾಹಸ, ಧೈರ್ಯ ಆಕೆಯ ಗುರುತಾಯಿತು. ಗೂಢಾಚಾರಣಿಯಾಗಿ ನೀರಾ ಮಾಡಿದ ಸಾಹಸಕ್ಕೆ ಮಿತಿಯೇ ಇಲ್ಲ ಗೂಢಚರ್ಯೆಯಲ್ಲಿ ನೀರಾ ಅವರು ಸರಸ್ವತಿ ರಾಜಮಣಿ ( INAನ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡಿದ ವೀರಾಂಗನೆ) ಅವರ ಜೊತೆಗೂಡಿ ಕೆಲಸ ಮಾಡಿದರು. ಇಬ್ಬರೂ ಹುಡುಗರ ವೇಷ ಧರಿಸಿ ಬ್ರಿಟಿಷ್ ಅಧಿಕಾರಿಗಳ ಮನೆಗಳು ಮತ್ತು ಶಿಬಿರಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡಿದರು. ಒಂದು ಬಾರಿ ಅವರ ಸಹೋದ್ಯೋಗಿ ದುರ್ಗಾಮಲ್ಲ ಗೋರ್ಖಾ ಅವರು ಬ್ರಿಟಿಷರ ಕೈಗೆ ಸಿಕ್ಕಿಬಿದ್ದಾಗ, ನೀರಾ ಮತ್ತು ಸರಸ್ವತಿ ತೃತೀಯ ಲಿಂಗಿಗಳಂತೆ ವೇಷ ಧರಿಸಿ ಜೈಲಿಗೆ ನುಗ್ಗಿ, ಮಾದಕ ದ್ರವ್ಯ ಕೊಟ್ಟು ಕಾವಲುಗಾರರನ್ನು ಮೂರ್ಛೆ ಹೋಗುವಂತೆ ಮಾಡಿ ಅವರನ್ನು ರಕ್ಷಿಸಿದರು. ಆದರೆ ತಪ್ಪಿಸಿಕೊಳ್ಳುವಾಗ ಸರಸ್ವತಿ ಅವರ ಕಾಲಿಗೆ ಗುಂಡು ತಗುಲಿತ್ತು. ಮೂರು ದಿನಗಳ ಕಾಲ ಕಾಡಿನ ಮರದ ಮೇಲೆ ಅಡಗಿಕೊಂಡು ಅವರು ತಮ್ಮ ಪ್ರಾಣ ಉಳಿಸಿಕೊಂಡರು. ನೇತಾಜಿ ಅವರು ಅವರ ಸಾಹಸಕ್ಕೆ ಮೆಚ್ಚಿ ನೀರಾ ಅವರನ್ನು ಕ್ಯಾಪ್ಟನ್ ಮತ್ತು ಸರಸ್ವತಿ ಅವರನ್ನು ಲೆಫ್ಟಿನೆಂಟ್ ಆಗಿ ನೇಮಿಸಿದರು. ನೀರಾ ಅವರಿಗೆ ನೇತಾಜಿ ಅವರ ಭದ್ರತೆಯ ಜವಾಬ್ದಾರಿಯನ್ನೂ ನೀಡಲಾಯಿತು. ಬ್ರಿಟಿಷರ ಕೈಗೆ ಸಿಕ್ಕಿಬಿದ್ದಾಗ ನೀರಾ ಅನುಭವಿಸಿದ ಯಾತನೆ ಅತಿ ಘೋರ ಗೂಢಾಚಾರಿಣಿಯಾಗಿ ಬ್ರಿಟಿಷರ ವಿರುದ್ಧ ಮಾಹಿತಿಗಳನ್ನ ಸಂಗ್ರಹಿಸಿ ಆಜಾದ್‌ ಹಿಂದ್‌ ಫೌಜ್‌ಗೆ ತಲುಪಿಸುತ್ತಿದ್ದ ನೀರಾ ಒಂದು ದಿನ ಬ್ರಿಟಿಷರ ಕೈಗೆ ಸಿಕ್ಕಿ ಬೀಳಬೇಕಾದ ಪರಿಸ್ಥಿತಿ ಬಂದೇ ಬಿಟ್ಟಿತು. ಬ್ರಿಟಿಷರು ಆಕೆಯನ್ನು ಕಾಲಾಪಾನಿ ಜೈಲಿನಲ್ಲಿ ವರ್ಷಗಳ ಕಾಲ ಇಟ್ಟು ಕ್ರೂರ ಚಿತ್ರಹಿಂಸೆಯನ್ನು ನೀಡಿದರು. ಪ್ರತಿ ಶಿಕ್ಷೆಯನ್ನು ಆಕೆ ಸಹಿಸಿಕೊಂಡಲೇ ಹೊರತು ನೇತಾಜೀ ಅವರ ಕಾರ್ಯಾಚರಣೆಯ ಬಗೆಗಿನ ರಹಸ್ಯವನ್ನು ಆಕೆ ಬಾಯಿ ಬಿಡಲಿಲ್ಲ. ನೇತಾಜಿ ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಒತ್ತಡ ಹೇರಿ ತೀವ್ರ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲಾಯಿತು. ಆಕೆ "ನೇತಾಜಿ ನನ್ನ ಹೃದಯದಲ್ಲಿ ಇದ್ದಾರೆ" ಎಂದಾಗ, ಜೈಲರ್ ಅವಳ ಎದೆಗೆ ಬೆಂಕಿಯಿಂದ ಬರೆ ಎಳೆದು ಸ್ತನಗಳನ್ನು ವಿಕೃತಗೊಳಿಸುವ ಪ್ರಯತ್ನ ಮಾಡಿದ್ದ. ಆದರೂ ಆಕೆ ಎದೆಗುಂದದೆ ಅಚಲವಾಗಿ ದೇಶಭಕ್ತಿ ಮೆರೆದಿದ್ದಳು. ಸ್ವಾತಂತ್ರ್ಯದ ನಂತರ 1947 ರಲ್ಲಿ ಆಕೆಯು ಜೈಲಿನಿಂದ ಬಿಡುಗಡೆಯಾದಳು. ಅಪ್ರತಿಮ ತ್ಯಾಗ ಮಾಡಿದರೂ ಪುರಸ್ಕಾರ ಮನ್ನಣೆ ಪಡೆಯಲಿಲ್ಲ ನೀರಾ ಆರ್ಯ ಸಿರಿವಂತ ಕುಟುಂಬದಲ್ಲಿ ಜನಿಸಿದಳು. ಆದರೆ ದೇಶಕ್ಕಾಗಿ ಆಕೆ ತುಳಿದಿದ್ದು ಸಂಘರ್ಷದ ಹಾದಿಯನ್ನು. ಸ್ವಾತಂತ್ರ್ಯ ಬಂದ ಬಳಿಕವೂ ಆಕೆ ಸರ್ಕಾರದಿಂದ ಯಾವುದೇ ಗೌರವವನ್ನು ಪಡೆಯಲಿಲ್ಲ. ಅದಕ್ಕೆ ಆಕೆ ಬಯಸಿದವಳೂ ಅಲ್ಲ. ಹೈದರಾಬಾದ್‌ನಲ್ಲಿ ಬಡತನದಲ್ಲಿ ಹೂವು ಮಾರಾಟ ಮಾಡಿ ಜೀವನ ನಡೆಸಿದಳು. ಸರ್ಕಾರಿ ಪಿಂಚಣಿ ಬೇಡವೆಂದು ನಿರಾಕರಿಸಿದಳು. 1998ರಲ್ಲಿ ಆಕೆ ಇಹಲೋಕ ತ್ಯಜಿಸಿ ಅಮರಳಾಗಿ ಉಳಿದಳು.. ನೀರಾ ಆರ್ಯ ಕಥೆ ಕೇವಲ ಧೈರ್ಯದ ಕಥೆಯಲ್ಲ. ಅದು ದೇಶಕ್ಕಾಗಿ ಪ್ರೀತಿ, ಕುಟುಂಬ, ಗೌರವ ಎಲ್ಲವನ್ನೂ ತ್ಯಾಗ ಮಾಡಿದ ವೀರ ಮಹಿಳೆಯ ಕಥೆ. ಆಕೆಯ ಜೀವನಗಾಥೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ತ್ಯಾಗವನ್ನು ಎತ್ತಿ ತೋರಿಸುತ್ತದೆ. ಅವಳ ಜೀವನವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ತ್ಯಾಗದ ಅತ್ಯುನ್ನತ ಉದಾಹರಣೆಯಾಗಿದೆ. ಪತಿ, ಕುಟುಂಬ, ದೇಹದ ಗೌರವ, ಸುಖೀ ಜೀವನ – ಎಲ್ಲವನ್ನೂ ದೇಶಕ್ಕಾಗಿ ಬಲಿಕೊಟ್ಟ ಅವಳು, ತನ್ನ ಹೃದಯದಲ್ಲಿ ನೇತಾಜಿಯನ್ನು ಹೊತ್ತುಕೊಂಡು ಕಾಲಾಪಾನಿಯ ಕಗ್ಗತ್ತಲೆಯಲ್ಲಿ ಧೈರ್ಯದಿಂದ ನಿಂತಳು. ಅವಳ ರಕ್ತದಿಂದ ಬರೆದ ಜೀವನ ಕಥೆ ಇತಿಹಾಸದಲ್ಲಿ ದೀರ್ಘಕಾಲ ಮರೆಯಾಗಿದ್ದವು, ಆದರೆ ಇಂದು ಅವುಗಳು ಮತ್ತೆ ಬೆಳಕಿಗೆ ಬಂದಿವೆ – ಸ್ಮಾರಕಗಳು, ಪುಸ್ತಕಗಳು, ಚಲನಚಿತ್ರಗಳ ಮೂಲಕ. ಸ್ವಾತಂತ್ರ್ಯವು ಕೇವಲ ಯುದ್ಧಭೂಮಿಯಲ್ಲಿ ಗೆದ್ದದ್ದಲ್ಲ, ಅದು ಅನೇಕ ಅನಾಮಧೇಯ ಹೃದಯಗಳು ಸಹಿಸಿದ ನೋವುಗಳಿಂದ ನಿರ್ಮಿತವಾಯಿತು. ಅವಳಂತಹ ವೀರಾಂಗನೆಯರ ತ್ಯಾಗವಿಲ್ಲದಿದ್ದರೆ ಇಂದಿನ ಭಾರತವಿರುತ್ತಿರಲಿಲ್ಲ. ಅವಳ ಕಥೆಯು ಶಾಶ್ವತವಾಗಿ ಉಳಿಯಲಿ – ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೇತಾಜಿಯಂತೆಯೇ ಧೈರ್ಯ ಮತ್ತು ನಿಷ್ಠೆಯ ದೀಪವಾಗಿ ಉರಿಯಲಿ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - గుట్టు ಘಸೊಟಡದವಳು ್ಭುಭಾರತದ ఎది ஜஃ& ಮಹಿಳಾ ಗೂಢಾಚಾರಿಣಿ ನೀರಾ ಆರ್ಯ Saturday; January 24th, 2026 ವೀರನಾರಿಯರು Admin గుట్టు ಘಸೊಟಡದವಳು ್ಭುಭಾರತದ ఎది ஜஃ& ಮಹಿಳಾ ಗೂಢಾಚಾರಿಣಿ ನೀರಾ ಆರ್ಯ Saturday; January 24th, 2026 ವೀರನಾರಿಯರು Admin - ShareChat
ಜಯದೇವಕವಿಯ ಗೀತಗೋವಿಂದ ಅಷ್ಟಪದಿ 9 *ಸಂಕ್ಷಿಪ್ತ ಭಾವ* ರಾಧೆಯ ವಿರಹವೇದನೆಯ ವರ್ಣನೆ ಇಲ್ಲಿ ಮುಂದುವರೆದಿದೆ. ಸಖಿಯು ಹರಿಗೆ ಮನಮುಟ್ಟುವಂತೆ ಹೇಳುತ್ತಿರುವಳು. ಹೇ, ಕೇಶವ, ನಿನ್ನ ವಿರಹದಿಂದ ಬಳಲಿ ಬೆಂಡಾಗಿರುವ ರಾಧೆಯು ತನ್ನ ಮೈಮೇಲಿನ ಸರವನ್ನೂ ಹೊರೆಯೆಂದು ಭಾವಿಸಿದ್ದಾಳೆ. ಸೊರಗಿಹೋಗಿರುವ ಅವಳಿಗೆ ಅವು ಭಾರವಾಗಿವೆ. ತಂಪಾದ ಚಂದಿರನ ರಸವನ್ನು ಅವಳು ವಿಷವೆಂದೇ ಭಾವಿಸಿರುವಳು. ಸತತವಾಗಿ ನಿಟ್ಟುಸಿರು ಬಿಡುತ್ತ ಉರಿಯುವ ಕಾಮನ ಬೆಂಕಿಯಲ್ಲಿ ಬೇಯುತ್ತಿರುವಳು. ದಿಕ್ಕುದಿಕ್ಕುಗಳಲ್ಲಿಯೂ ನಿನ್ನನ್ನು ನೋಡಲು ತಿರುಗುವಳು. ದಂಟು ಕಳಚಿದ ತಾವರೆಯು ಬಾಡುವಂತೆ ಅವಳ ಬಾಡಿರುವಳು. ಕೈಯನ್ನು ಕೆನ್ನೆಗಾನಿಸಿ ಹಿಡಿದು ಅಲ್ಲಾಡದೆ ನಿನ್ನ ನಿರೀಕ್ಷೆಯಲ್ಲಿ ನಿಲ್ಲುವಳು. ಎದುರಿಗೆ ಇರುವ ಹೊಸ ಚಿಗುರಿನ ಹಾಸಿಗೆಯನ್ನು ಬೆಂಕಿಯೆಂದೇ ಭಾವಿಸುವಳು. ಮರಣಕಾಲದಲ್ಲಿ ನಾಮಜಪ ಮಾಡುವಂತೆ ಹರಿ, ಹರಿ, ಹರಿಯೆಂದು ಅಳುವಳು. ಇಂತಹಾ ಪರಿತಾಪದ ಸ್ಥಿತಿಯಲ್ಲಿರುವ ರಾಧೆಯ ಬಗೆಯನ್ನು ಜಯದೇವ ಕವಿಯು ರಚಿಸಿರುವನು. ಇದು ಶ್ರೀ ಹರಿಯ ಅಡಿಗಳಿಗೆ ಅರ್ಪಿತವಾಗಲಿ. ( ನಾಲ್ಕನೆಯ ಸರ್ಗ ಮುಗಿಯಿತು. ಇಲ್ಲಿ ಎರಡು ಅಷ್ಟಪದಿಗಳಿವೆ ) *ಚತುರ್ಥ ಸರ್ಗ ಸ್ನಿಗ್ಧ ಮಧುಸೂದನ ಒಟ್ಟು ಸಾರಾಂಶ* ಯಮುನೆಯ ತೀರದ ದಟ್ಟವಾದ ಬಿದಿರುಮೆಳೆ ಕೃಷ್ಣನ ಪ್ರೇಮಕೇಲಿಯ ಸುಂದರ ತಾಣವಾಗಿತ್ತು. ರಾಧೆಯ ವಿರಹದಿಂದ ಬೇಸತ್ತ ಮಾಧವನು ಆ ತಂಪನೆಯ ಜಾಗದಲ್ಲಿ ಕಳೆಗುಂದಿ ಕುಳಿತಿದ್ದನು. ಅಷ್ಟರಲ್ಲಿ ರಾಧೆಯ ಗೆಳತಿಯೊಬ್ಬಳು ಅಲ್ಲಿಗೆ ಬಂದು, ರಾಧೆಯ ವಿರಹ ಬಾಧೆಯನ್ನು ಬಣ್ಣಿಸುವಳು. “ಹೇ ಮಾಧವ ನಿನ್ನ ವಿರಹದ ಬೇಗೆಯಿಂದ ರಾಧೆಗೆ ಈಗ ಚಂದನವೂ ಬೇಡವಾಗಿದೆ. ಚಂದ್ರಕಿರಣಗಳೂ ನೋವನ್ನು ಹೆಚ್ಚಿಸುತ್ತಿವೆ. ತಂಪುಗಾಳಿ ಸೋಂಕಿದರೆ ಸರ್ಪ ಸ್ಪರ್ಶವಾದಂತೆ ಆಕೆ ಹೆದರಿದ್ದಾಳೆ. ನಿನ್ನ ಅಪ್ಪುಗೆಯ ನಿರೀಕ್ಷೆಯಿಂದ ಕಂಗೆಟ್ಟಿದ್ದಾಳೆ' ಎಂದಳು. ಇನ್ನು ರಾಧೆಯ ಅವಸ್ಥೆ ಹೇಳತೀರದಾಗಿದೆ. ಕಾಮಬಾಣಕ್ಕೆ ತುತ್ತಾದ ಅವಳು ರಹಸ್ಯವಾಗಿ ಮಾಧವನ ಚಿತ್ರವನ್ನು ಎಲ್ಲೆಂದರಲ್ಲಿ ಬರೆಯುತ್ತಾಳೆ. ಒಮ್ಮೆ ಗೋಳಾಡಿದರೆ, ಮತ್ತೊಮ್ಮೆ ನಗುತ್ತಾಳೆ. ಮಗದೊಮ್ಮೆ ಚಂಚಲೆಯಾಗಿ ತಾಪಪಡುವಳು. ಅವಳಿಗೆ ಮನೆಯೇ ಕಾಡೆನಿಸಿದೆ. ಸಖಿಯರ ಗುಂಪೇ ಬಂಧನದಂತಿದೆ. ಪ್ರೇಮಾಗ್ನಿಯಲ್ಲಿ ಆಕೆಯು ಬೆಂದು ಬಸವಳಿದಿದ್ದಾಳೆ. ಮೈಗೆ ಲೇಪಿಸಿದ ಚಂದನವನ್ನು ವಿಷವೇನೋ ಎಂಬ ಸಂದೇಹದಿಂದ ಮತ್ತೆ ಮತ್ತೆ ನೋಡಿಕೊಳ್ಳುತ್ತಾಳೆ. ಕೆನ್ನೆಗೆ ಕೈ ಹೊತ್ತು, ಎಷ್ಟೋ ಹೊತ್ತು ನಿಷ್ಕ್ರಿಯವಾಗಿ ಕುಳಿತಲ್ಲೇ ಕುಳಿತಿರುತ್ತಾಳೆ. ಈ ವಿರಹಕ್ಕೆ ಕೊನೆಯೇ ಇಲ್ಲದಂತಾಗಿದೆ. ಬಹಳ ಕಾಲದಿಂದ ಕಾಮಜ್ವರದಿಂದ ತಪ್ತಳಾದ ಆಕೆಯ ಮನಸ್ಸು ಚಂದ್ರ, ತಾವರೆ, ತಂಗಾಳಿ ಇವುಗಳ ನೆನಪು ಬಂದರೆ ಸಾಕು, ಮೈಯುರಿ ಹತ್ತಿದವಳಂತೆ ಕಂಗೆಡುತ್ತಾಳೆ. ಹಿಂದೆ ರಾಧೆಯು ಅರೆಕ್ಷಣವೂ ಮಾಧವನನ್ನು ಆಗಲುತ್ತಿರಲಿಲ್ಲ. ಈಗ ಚಿರವಿರಹಿಯಾಗಿ ಬಳಲಿದ್ದಾಳೆ. ಇಂತಿರುವಾಗ ಮಳೆಗಾಲ ತನ್ನ ಆಗಮನವನ್ನು ರಭಸವಾಗಿಯೇ ತೋರಿಸಿತು. ಮಳೆಯ ಜೋರು ಇಂದ್ರನು ನೇರವಾಗಿ ಬಾಣಬಿಟ್ಟನೋ ಎಂಬಂತಿತ್ತು. ಗೋಕುಲವೆಲ್ಲ ಮಳೆಯಿಂದ ಚಿಂತೆಗೀಡಾದಾಗ ಕೃಷ್ಣನು ಗೋವರ್ಧನ ಗಿರಿಯನ್ನು ಹೊತ್ತು ಗೊಲ್ಲರನ್ನೂ, ಗೋಪಿಯರನ್ನೂ ರಕ್ಷಿಸಿದ ಮಾಧವನ ನೆನಪು ಬಂದಿದೆ. ತಮ್ಮನ್ನು ರಕ್ಷಿಸಿದ ಮಾಧವನ ತೋಳುಗಳಿಗೆ ಆನಂದ ತುಂದಿಲೆಯರಾದ ಗೋಪಿಯರು ಚುಂಬಿಸಿದ್ದರು. ಅವನ ತೋಳುಗಳಿಗೆ ಅವರ ಸಿಂಧೂರವು ಹತ್ತಿ ಕೆಂಪಾಗಿದ್ದವು. ಈ ಮಾಧವನ ನಳಿತೋಳುಗಳು ನಮಗೆ ಶ್ರೇಯಸ್ಸನ್ನುಂಟುಮಾಡಲಿ ಎಂಬಲ್ಲಿಗೆ ಸ್ನಿಗ್ಧ ಮಧುಸೂದನನೆಂಬ ಗೀತ ಗೋವಿಂದದ ನಾಲ್ಕನೆಯ ಸರ್ಗ ಮುಗಿಯಿತು. *ಪರಮೇಶ್ವರ ಭಟ್ಟರ ಕನ್ನಡ ರೂಪ* ಅಷ್ಟಪದಿ 9 ರಾಧಿಕೆ, ಕೇಶವ ತವ ವಿರಹದೊಳು ಉರದೊಳು ತೊನೆಯುವ ಸರವನುಮಿಂದವಳು ಹೊರೆಯೆಂದೆಣಿಪಳು ಸೊರಗಿದ ಮೈಯವಳು. 1 ತಣ್ಣನೆ ಚಂದನ ರಸದಣ್ಪನುಮವಳು ವಪುವೊಳು ವಿಷವೆನೆ ಶಂಕಿಸಿ ನಿರುಕಿಪಳು‌. 2 ಸಂತತ ಬಿಡುತಿರುವುಸಿರನುಮಿಂದವಳು ಉರಿಯುವ ಕಾಮನ ಬೆಂಕಿವೊಲೆಣಿಸುವಳು. 3 ದೆಸೆದೆಸೆಗೆಸೆವಳು ಕಣ್ಣಿನ ನೋಟವನು. ನಾಳವು ಕಳಚಿದ ತಾವರೆವೋಲದನು. 4 ಎಳವೆರೆಯಂದದ ಕದಪನು ಬೈಗಿನೊಳು ಕೈಯೊಳಗಿರಿಸುತೆ ನಿಲುವಳು ಮಿಸುಕದೊಲು. 5 ಕಣ್ಣೆದುರಿನ ಹೊಸತಳಿರಿನ ತಲ್ಪವನೆ ಬಗೆವಳು ವಿರಹ ಹುತಾಶನ ಕಲ್ಪವೆನೆ. 6 ವಿರಹದ ಭರದೊಳು ಹರಿಹರಿಹರಿಯೆಂದು ಮರಣದೊಳೆಂತಂತೆಣ್ಣುತಲಿಹಳಿಂದು. 7 ಶ್ರೀ ಜಯದೇವನು ಹಾಡಿದ ಗೀತವಿದು ನೆಲಸಲಿ ಹರಿಯಡಿಗಂಕಿತವೆನಿಸಿದಿದು. 8 *ಮೂಲಭಾಗ* ಗೀತಂ-ಅಷ್ಟಪದೀ- 9 ಸ್ನಿಗ್ಧಮಧುಸೂದನ ರಾಸಾವಲಯಮ್ ದೇಶಾಖ್ಯರಾಗ, ಏಕತಾಲೀತಾಲ ಸ್ತನವಿನಿಹಿತಮಪಿ ಹಾರಮುದಾರಂ ಸಾ ಮನುತೇ ಕೃಶತನುರಿವ ಭಾರಂ ರಾಧಿಕಾ ತವ ವಿರಹೇ ಕೇಶವ ||ಧ್ರುವಮ್|| ೧ ಸರಸಮಸೃಣಮಪಿ ಮಲಯಜಪಂಕಂ ಪಶ್ಯತಿ ವಿಷಮಿವ ವಪುಷಿ ಸಶಂಕಂ ೨ ಶ್ವಸಿತಪವನಮನುಪಮಪರಿಣಾಹಂ ಮದನದಹನಮಿವ ವಹತಿ ಸದಾಹಂ ೩ ದಿಶಿ ದಿಶಿ ಕಿರತಿ ಸಜಲಕಣಜಾಲಂ ನಯನನಲಿನಮಿವ ವಿಗಲಿತನಾಲಂ ೪ ತ್ಯಜತಿ ನ ಪಾಣಿತಲೇನ ಕಪೋಲಂ ಬಾಲಶಶಿನಮಿವ ಸಾಯಮಲೋಲಂ ೫ ನಯನವಿಷಯಮಪಿ ಕಿಸಲಯತಲ್ಪಂ ವಿಹಿತಹುತಾಶವಿಕಲ್ಪಂ ೬ ಹರಿರಿತಿ ಹರಿರಿತಿ ಜಪತಿ ಸಕಾಮಂ ವಿರಹ ವಿಹಿತ ಮರಣೇನ ನಿಕಾಮಂ ೭ ಶ್ರೀಜಯದೇವಭಣಿತಮಿತಿ ಗೀತಂ ಸುಖಯತು ಕೇಶವಪದಮುಪನೀತಂ ೮ ಸಾ ರೋಮಾಂಚತಿ ಸೀತ್ಕರೋತಿ ವಿಲಪತ್ಯುತ್ಕಂಪತೇ ತಾಮೃತಿ ಧ್ಯಾಯತ್ಯುದ್ಭ್ರಮತಿ ಪ್ರಮೀಲತಿ ಪತತ್ಯುದ್ಯಾತಿ ಮೂರ್ಚ್ಛತ್ಯಪಿ ಏತಾವತ್ಯತನುಜ್ವರೇ ರತನುರ್ಜೀವೇನ್ನ ಕಿಂ ತೇ ರಸಾ_ ತ್ಸ್ವರ್ವೇದ್ಯಪ್ರತಿಮ ಪ್ರಸೀದಸಿ ಯದಿ ತ್ಯಕ್ತೋsನ್ಯಥಾ ಹಸ್ತಕಃ ೯ ಸ್ಮರಾತುರಾಂ ದೈವತವೈದ್ಯ ಹೃದ್ಯತ್ವದಂಗಸಂಗಾಮೃತಮಾತ್ರ ಸಾಧ್ಯಾಂ ನಿವೃತ್ತ ಬಾಧಾಂ ಕುರುಷೇ ನ ರಾಧಾಮುಪೇಂದ್ರ ವಜ್ರಾದಪಿ ದಾರುಣೋsಸಿ ೧೦ ಕಂದರ್ಪಜ್ವರಸಂಜ್ವರಾತುರತನೋರಾಶ್ಚರ್ಯಮಸ್ಯಾಶ್ಚಿರಂ ಚೇತಶ್ಚಂದನಚಂದ್ರಮಃಕಮಲಿನೀ ಚಿಂತಾಸು ಸಂತಾಮ್ಮತಿ ಕಿಂತು ಕ್ಲಾ೦ತಿವಶೇನ ಶೀತಲತನುಂ ತ್ವಾಮೇಕಮೇವ ಪ್ರಿಯಂ ಧ್ಯಾಯಂತೀ ರಹಸಿ ಸ್ಥಿತಾ ಕಥಮಪಿ ಕ್ಷೀಣಾಕ್ಷಣಂ ಪ್ರಾಣಿತಿ ೧೧ ಕ್ಷಣಮಪಿ ವಿರಹಃ ಪುರಾ ಸೇಹೇ ನಯನನಿಮೀಲನಖಿನ್ನಯಾ ಯಯಾ ತೇ ಕಥಮಸೌ ರಸಾಲಶಾಖಾಂ ಚಿರವಿರಹೇಣ ವಿಲೋಕ್ಯ ಪುಷ್ಪಿತಾಗ್ರಾಂ ೧೨ ವೃಷ್ಟಿವ್ಯಾಕುಲಗೋಕುಲಾವನರಸಾದುದ್ಧೃತ್ಯಗೋವರ್ಧನಂ ಬಿಭ್ರದ್ಪಲ್ಲವವಲ್ಲಭಾಭಿರಧಿಕಾನಂದಾಚ್ಚಿರಂ ಚುಂಬಿತಃ ದರ್ಪೇಣೈವ ತದರ್ಪಿತಾಧರತಟೀಸಿಂಧೂರಮುದ್ರಾಂಕಿತೋ ಬಾಹುರ್ಗೋಪತನೋಸ್ತ ನೋತು ಭವತಾಂ ಶ್ರೇಯಾಂಸಿ ಕಂಸದ್ವಿಷಃ ೧೩ || ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಸ್ನಿಗ್ಧ ಮಧುಸೂದನೋನಾಮ ಚತುರ್ಥ ಸರ್ಗಃ || ಕೃತಜ್ಣತೆ: 1. ಮೂಲ: ಜಯದೇವ ಕವಿಯ 'ಗೀತಗೋವಿಂದ' 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ 3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ShareChat
2026 ರ ಹೊತ್ತಿಗೆ ಬದುಕಲು ಬುದ್ಧಿವಂತ ವ್ಯಕ್ತಿಯ ಮಾತುಗಳು 1. ನಿಮ್ಮ ಜೀವನದಲ್ಲಿ ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದಿಲ್ಲ. ಅದಕ್ಕಾಗಿಯೇ ನೀವು ನಿರೀಕ್ಷೆಗಳನ್ನು ಬಿಟ್ಟು ಹರಿವಿನೊಂದಿಗೆ ಹೋಗಬೇಕು. 2. ನಿಮ್ಮ ಜೀವನದಿಂದ ಕಹಿಯನ್ನು ಕಡಿಮೆ ಮಾಡಿ, ಅದು ಆಶೀರ್ವಾದಗಳನ್ನು ವಿಳಂಬಗೊಳಿಸುತ್ತದೆ! 3. ಬೆಂಬಲ ನೀಡುವ ಮಹಿಳೆಯೊಂದಿಗೆ ಡೇಟಿಂಗ್ ಮಾಡುವುದು ಎಲ್ಲವೂ. 4. ನೀವು ಯಶಸ್ವಿಯಾಗಲು ಬಯಸಿದರೆ, ನೀವು ಒಂದು ನಿಯಮವನ್ನು ಗೌರವಿಸಬೇಕು - ನಿಮಗೆ ಎಂದಿಗೂ ಸುಳ್ಳು ಹೇಳಬೇಡಿ. 5. ನಿಮ್ಮ ಪೋಷಕರು ಯಾವಾಗಲೂ ನಿಮ್ಮ ಮೇಲೆ ಅವಲಂಬಿತರಾಗಿದ್ದರೆ, ಅವರ ಪೋಷಕರ ಮೇಲೆ ಅವಲಂಬಿತರಾಗಿರುವವರೊಂದಿಗೆ ಅದೇ ಆಟವಾಡಬೇಡಿ. 6. ಗುರಿಗಳನ್ನು ಬೆನ್ನಟ್ಟಿ, ಜನರಲ್ಲ. 7. ನಿಮ್ಮ 20 ರ ದಶಕವು ನಿಮ್ಮ ಸ್ವಾರ್ಥಿ ವರ್ಷಗಳು, ನಿಮ್ಮನ್ನು ನೀವು ನಿರ್ಮಿಸಿಕೊಳ್ಳಿ, ಎಲ್ಲಾ ವೆಚ್ಚದಲ್ಲಿಯೂ ಮೊದಲು ನಿಮ್ಮನ್ನು ಆರಿಸಿಕೊಳ್ಳಿ. 8. ನಿರ್ಲಿಪ್ತತೆಯೇ ಶಕ್ತಿ. ನಿಮಗೆ ಶಾಂತಿಯನ್ನು ತರದ ಯಾವುದನ್ನಾದರೂ ಬಿಡುಗಡೆ ಮಾಡಿ. 9. ನಿಮ್ಮ ಮಾತುಗಳು ನಿಮ್ಮ ಮೌನಕ್ಕಿಂತ ಹೆಚ್ಚು ಸುಂದರವಾಗಿದ್ದಾಗ ಮಾತ್ರ ಮಾತನಾಡಿ. 10. ನಿಮ್ಮ ನೋಟದಲ್ಲಿ ಹೂಡಿಕೆ ಮಾಡಿ. ಬೇರೆ ಯಾರಿಗೂ ಅಲ್ಲ, ನಿಮಗಾಗಿ ಮಾಡಿ. ನೀವು ಚೆನ್ನಾಗಿ ಕಾಣುವಾಗ, ನಿಮಗೆ ಒಳ್ಳೆಯ ಭಾವನೆ ಬರುತ್ತದೆ. ಚೆನ್ನಾಗಿ ಡ್ರೆಸ್ಸಿಂಗ್ ಮಾಡುವುದು ಸಾಮಾನ್ಯಗೊಳಿಸಿ, ನೀವು ಕೋಪಗೊಂಡಿಲ್ಲ, ಆದರೆ ಮುರಿದುಹೋಗಿದ್ದೀರಿ. 11. ಕೆಲವರು ನಿಮಗೆ ಎಲ್ಲವೂ ತಪ್ಪಾಗುವುದನ್ನು ನೋಡಲು ಬಯಸುತ್ತಾರೆ ಏಕೆಂದರೆ ಅವರಿಗೆ ಏನೂ ಸರಿಯಾಗಿ ನಡೆಯುತ್ತಿಲ್ಲ. 12. ಒಳ್ಳೆಯ ವ್ಯಕ್ತಿಯಾಗಿರುವುದು ನಿಮ್ಮನ್ನು ಪ್ರೀತಿಸುವುದಿಲ್ಲ. ಅದು ನಿಮ್ಮನ್ನು ಬಳಸಿಕೊಳ್ಳುತ್ತದೆ. 13. ಜನರನ್ನು ಕಳೆದುಕೊಳ್ಳುವ ಭಯಪಡಬೇಡಿ, ನಿಮ್ಮ ಸುತ್ತಲಿನ ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವ ಮೂಲಕ ನಿಮ್ಮನ್ನು ಕಳೆದುಕೊಳ್ಳುವ ಭಯಪಡಿರಿ. 14. ನಿಮ್ಮ ನಡೆಯನ್ನು ಖಾಸಗಿಯಾಗಿ ಇರಿಸಿ. ಅದು ಮುಚ್ಚುವವರೆಗೆ ಅದನ್ನು ಘೋಷಿಸಬೇಡಿ! ಅಕಾಲಿಕ ಪ್ರಕಟಣೆಗಳು ದುಷ್ಟಶಕ್ತಿಗಳನ್ನು ಆಕರ್ಷಿಸುತ್ತವೆ. ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಜನರಿಗೆ ಹೇಳುವುದನ್ನು ನಿಲ್ಲಿಸುವುದು. 15. ನಿಮ್ಮ ಮಾನಸಿಕ ಆರೋಗ್ಯದ ಸಲುವಾಗಿ ತುಂಬಾ ಪ್ರೀತಿಸಬೇಡಿ, ಚಿಕಿತ್ಸಾ ಅವಧಿಗಳು ದುಬಾರಿಯಾಗಿದೆ. ಅಲ್ಲದೆ, ನೀವು ಸಿದ್ಧರಾಗಿರುವಾಗ ಮದುವೆಯಾಗಿ, ನೀವು ಒಂಟಿಯಾಗಿರುವಾಗ ಅಲ್ಲ. 16. ನಿಮ್ಮ ಆಲೋಚನೆಗಳು ತುಂಬಾ ಶಕ್ತಿಯುತವಾಗಿವೆ, ಅವರನ್ನು ಸಕಾರಾತ್ಮಕವಾಗಿಸಿ. 17. ಸಾಮಾಜಿಕ ಮಾಧ್ಯಮವು ನೀವು ನಿಜವಾಗಿಯೂ ಕರುಣೆ ತೋರಬೇಕಾದ ವ್ಯಕ್ತಿಯನ್ನು ಅಸೂಯೆಪಡುವಂತೆ ಮಾಡುತ್ತದೆ. 18. ನಿಮ್ಮ ಹುಟ್ಟುಹಬ್ಬದಂದು ಯಾರೂ ನಿಮಗೆ ಏನೂ ಸಾಲದು, ಹಣವನ್ನು ಉಳಿಸಲು ಮತ್ತು ನಿಮ್ಮನ್ನು ಹಾಳು ಮಾಡಿಕೊಳ್ಳಲು ಕಲಿಯಿರಿ. 19. ನೀವು ಮಾಡಲು ಹೆದರುವ ಆ ನಡೆಯು ಎಲ್ಲವನ್ನೂ ಬದಲಾಯಿಸಬಹುದು. ಅದನ್ನು ಮಾಡಿ. ಸರಿಸಿ. 20. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಾ ನಿಮ್ಮ ಪ್ರಗತಿಯನ್ನು ಹಾಳು ಮಾಡಿಕೊಳ್ಳಬೇಡಿ. 21. ನೀವು ಎಷ್ಟೇ ಬಾಯಾರಿದರೂ, ನೀವು ಎಂದಿಗೂ ನೀರನ್ನು ಕೇಳಬಾರದು ಎಂದು ಕೆಲವು ಜನರಿದ್ದಾರೆ. 22. ನಿಮ್ಮ ಜೀವನಕ್ಕೆ ಮೌಲ್ಯವನ್ನು ಸೇರಿಸಿ, ಕೌಶಲ್ಯವನ್ನು ಕಲಿಯಿರಿ, ನಿಮ್ಮನ್ನು ಅಭಿವೃದ್ಧಿಪಡಿಸಿ. 23. ನಿಮ್ಮನ್ನು ನೋಯಿಸುವ ಬಗ್ಗೆ ನೀವು ಇನ್ನು ಮುಂದೆ ಚಿಂತಿಸದಷ್ಟು ಯಾರನ್ನೂ ಪ್ರೀತಿಸಬೇಡಿ. 24. ನೀವು ನಿಮ್ಮ ಸ್ವಂತ ಆತ್ಮೀಯ ಸ್ನೇಹಿತ. ಎಂದಿಗೂ, ನಿಮ್ಮನ್ನು ಕೆಳಗಿಳಿಸಿ. 25. ಕೆಲವೊಮ್ಮೆ ನೀವು ಇನ್ನೂ ಮೂರ್ಖರಾಗಿದ್ದೀರಾ ಎಂದು ಪರಿಶೀಲಿಸಲು ಜನರು ನಿಮ್ಮ ಜೀವನದಲ್ಲಿ ಹಿಂತಿರುಗುತ್ತಾರೆ. 26. ನಿಮ್ಮ ಮೇಜಿನ ಬಳಿ ಯಾವ ಕುರ್ಚಿಗಳು ಸೂಕ್ತವಲ್ಲ ಎಂದು ನೀವು ಬೇಗನೆ ಕಂಡುಕೊಂಡಷ್ಟೂ, ನಿಮ್ಮ ಊಟವು ಹೆಚ್ಚು ಶಾಂತಿಯುತವಾಗಿರುತ್ತದೆ. 27. ನೀವು ಓಡಲು ಬಯಸಿದರೆ, ಮೊದಲು ನೀವು ನಡೆಯಲು ಕಲಿಯಬೇಕು. ಹೌದು, ಕನಸುಗಳು ದೊಡ್ಡವು, ಆದರೆ ನೀವು ಎಲ್ಲೋ ಪ್ರಾರಂಭಿಸಬೇಕು, ಮತ್ತು ಏನನ್ನಾದರೂ ಮಾಡುವುದು ಏನೂ ಇಲ್ಲದಿರುವುದಕ್ಕಿಂತ ಉತ್ತಮವಾಗಿದೆ. ಸಣ್ಣದಾಗಿ ಪ್ರಾರಂಭಿಸಿ, ಸ್ಥಿರವಾಗಿರಿ ಮತ್ತು ಅದು ದೊಡ್ಡದಾಗುವುದನ್ನು ನೋಡಿ. 28. ಬೇರೆಯವರ ಮೇಲೆ ಹಣ ಖರ್ಚು ಮಾಡುವ ಮೊದಲು, ನಿಮ್ಮ ಕುಟುಂಬ ಚೆನ್ನಾಗಿದೆ ಎಂದು ಖಚಿತಪಡಿಸಿಕೊಳ್ಳಿ. 29. ಯಾವುದು ಸುಲಭವಾಗಿ ಬರುತ್ತದೆಯೋ ಅದು ಉಳಿಯುವುದಿಲ್ಲ. ಯಾವುದು ಇರುತ್ತದೆಯೋ ಅದು ಸುಲಭವಾಗಿ ಬರುವುದಿಲ್ಲ. 30. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುವ ಜನರಿಗೆ ಸುಳ್ಳು ಹೇಳುವುದನ್ನು ಸಾಮಾನ್ಯಗೊಳಿಸಿ. 31. ಮೋಸ ಮಾಡುವ ಪಾಲುದಾರರನ್ನು ಕ್ಷಮಿಸುವುದರಿಂದ ಒಂದು ದಿನ ನೀವು ಎಚ್ಐವಿ ಪಾಸಿಟಿವ್ ಪರೀಕ್ಷೆಗೆ ಒಳಗಾಗುತ್ತೀರಿ. 32. ಕೆಲವು ಮಾಜಿಗಳು ಈಗ ವಿಮಾನ ಓಡಿಸುತ್ತಿದ್ದಾರೆ ಅಥವಾ ಜಗತ್ತನ್ನು ಹೊಂದಿದ್ದಾರೆಂದು ನಾವು ಕೇಳಿದರೂ, ಅವರನ್ನು ಬಿಟ್ಟು ನಾವು ಎಂದಿಗೂ ವಿಷಾದಿಸುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. 33. ಗೆಳೆಯರ ಒತ್ತಡವನ್ನು ತಪ್ಪಿಸಿ. 34. ಮಹಿಳೆಯರನ್ನು ನಿಂದಿಸಬೇಡಿ ಮತ್ತು ಕೊಲ್ಲಬೇಡಿ. ನಿಮ್ಮನ್ನು ಗೌರವಿಸಿ. 35. ನಿಮ್ಮ ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಸ್ನೇಹಿತರಲ್ಲ. ~ ನಿಮ್ಮ ಕೆಲಸ ಮಾಡಿ. ~ ಸಂಬಳ ಪಡೆಯಿರಿ. ~ ಮನೆಗೆ ಹೋಗಿ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ( ( - ShareChat
ಕುರಾನ್, ಸೂಫಿ ಮತ್ತು ಧರ್ಮಾಚರಣೆಯ ಧೈರ್ಯ.... ಬಗ್ದಾದಿನಲ್ಲೊಬ್ಬ ದರವೇಶಿ ಇದ್ದ. ಪ್ರೇಮದ ಪ್ರತಿರೂಪದಂತಿದ್ದ ಅವನನ್ನ ಕಂಡ್ರೆ ಇಡೀ ಊರಮಂದಿಗೆ ಖುಷಿ. ಅವ ಸುಮ್ನೆ ರಸ್ತೇಲಿ ನಡ್ಕೊಂಡು ಹೋಗ್ತಿದ್ರೂ ಸಾಕು, ಅವನ ಹಿಂದೋಡಿ, ನಿಲ್ಲಿಸಿ, ಏನಾದ್ರೂ ತಿನ್ನೋಕೆ – ಕುಡಿಯೋಕೆ ಕೊಡ್ತಿದ್ರು. ಅವನೂ ಅದನ್ನೆಲ್ಲ ಅಷ್ಟೇ ಪ್ರೀತಿಯಿಂದ ಇಸ್ಕೊಂಡು, ನವಿಲುಗರಿ ಅವರ ತಲೆ ಸೋಕಿಸಿ ಆಶೀರ್ವಾದ ಮಾಡ್ತಿದ್ದ. ಈ ದರವೇಶಿ, ಯಾರು ಏನು ಕೇಳಿದ್ರೂ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ” ಅನ್ತ ಉತ್ತರಿಸ್ತಿದ್ದ. “ಅದು ಹೇಗೆ ನೀನು ಯಾವಾಗ್ಲೂ ಇಷ್ಟು ಖುಷಿಯಾಗಿರ್ತೀಯ?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” “ಅದು ಹೇಗೆ ನಿಂಗೆ ಎಲ್ರನ್ನೂ ಪ್ರೀತ್ಸೋಕೆ ಸಾಧ್ಯ ಆಗತ್ತೆ?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” “ಅದ್ಯಾಕೆ ನಿನ್ಗೆ ಸಿಟ್ಟೇ ಬರೋದಿಲ್ಲ!?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” ಹಿಂಗೆ… ಒಂದ್ ಸಲ ದರವೇಶಿ ಸಂತೆ ಬೀದಿಯ ಮಧ್ಯದಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡು, ದಫ್ ಬಡೀತಾ ಏನೋ ಹಾಡ್ತಿದ್ದ. ಒಬ್ಬ ಚಿಕ್ಕ ಹುಡುಗ ಅವನ ವೇಷಭೂಷಣ ನೋಡಿ ಕುತೂಹಲದಿಂದ ಅವನ ಹತ್ರ ಹೋಗಿ ನಿಂತ. ಕಣ್ತೆರೆದ ದರವೇಶಿ ಅವನ ಮುಂದೆ ದಫ್ ಹಿಡೀತಾ, “ನೀನೂ ಬಡೀತೀಯಾ?” ಅಂತ ಕೇಳ್ದ. ಹುಡುಗ ತಲೆ ಅಡ್ಡಡ್ಡ ಅಲ್ಲಾಡಿಸ್ತಾ, “ನಂಗ್ ಬರಲ್ಲ. ನೀನು ಇಷ್ಟ್ ಚೆನಾಗಿ ದಫ್ ಬಡೀತಿಯಲ್ಲ, ಅದ್ ಹೇಗೆ?” ಅಂದ. ದರವೇಶಿ ಯಾವತ್ತಿನಂತೆ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” ಅನ್ನುತ್ತಾ ಹುಡುಗನ ತಲೆಯನ್ನ ಪ್ರೀತಿಯಿಂದ ಸವರಿದ. ಹುಡುಗ ಅಷ್ಟಕ್ಕೆ ಸುಮ್ನಾಗ್ಲಿಲ್ಲ. “ಕುರಾನಲ್ಲೇನಿದೆ?” ಕೇಳೇಬಿಟ್ಟ! ಒಂದು ಕ್ಷಣ ಸಂತೆಗೆ ಸಂತೆಯೇ ಸ್ತಬ್ಧವಾಗಿಬಿಡ್ತು. ಎಲ್ರೂ ಅಚ್ಚರಿಯಿಂದ ಉತ್ತರಕ್ಕಾಗಿ ದರವೇಶಿಯ ಕಡೆ ತಿರುಗಿದ್ರು. ಅವನ ಮುಖದಲ್ಲೇನೂ ವ್ಯತ್ಯಾಸ ಕಾಣಲಿಲ್ಲ. “ಕುರಾನಲ್ಲಿ… ಒಣಗಿದ ಎರಡು ಹೂಗಳು, ನನ್ನ ಗೆಳೆಯನ ಪತ್ರ ಇದಾವೆ” ಅನ್ನುತ್ತಾ ತನ್ನ ಜೋಳಿಗೆಯಿಂದ ಹೊರತೆಗೆದು ಹುಡುಗನ ಮುಂದೆ ಹಿಡಿದ. ಇದೊಂದು ಸೂಫಿ ಕತೆ. ಎಷ್ಟು ಚೆಂದದ ಕತೆ ಇದು! ಯಾವುದೇ ಧರ್ಮಗ್ರಂಥದಲ್ಲಿ ಇರಬೇಕಾದ್ದು ಇಷ್ಟೇ ತಾನೆ? ಮನಸ್ಸಿಗೆ ಉಲ್ಲಾಸ ಕೊಡುವ ಸುಂದರ ನೆನಪು, ಒಂದು ಹಿಡಿ ಪ್ರೀತಿ? ಜೀವನಕ್ಕೆ ಬೇಕಿರೋದು ಇವಿಷ್ಟೇ ಆದ್ರೂ ನಾವು ಹುಡುಕೋದು ಬೇರೇನೇ. ಕಳೆದೋಗಿದ್ದು ಕಿವಿಯೋಲೆ, ಹುಡುಕೋದು ಕೈಬಳೆ! ಹೀಗಿದೆ ನಮ್ಮ ಪರಿಸ್ಥಿತಿ. ಬೇಕಿರೋದು ಪ್ರೀತಿ, ಬೇಕಿರೋದು ಶಾಂತಿ. ಆದ್ರೆ ಧರ್ಮಗಳಲ್ಲಿ ನಾವು ಹುಡುಕೋದು ಪ್ರತಿಷ್ಠೆ, ಮೇಲಾಟ, ಅಧಿಕಾರ ಮತ್ತು ಅಹಂಕಾರಕ್ಕೆ ಪುಷ್ಟಿ ಕೊಡೋ ವಿಚಾರ. ಆ ಕಾರಣಕ್ಕೇ ಅಷ್ಟೂ ವರ್ಷ ದರವೇಶಿ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತು” ಅಂದಾಗ ಯಾರೂ ಮರುಪ್ರಶ್ನೆ ಮಾಡದೇ ಇದ್ದುದು. ಯಾಕಂದ್ರೆ ಅವರೆಲ್ರೂ ಕುರಾನಲ್ಲೇನಿದೆ ಅಂತ ನಮಗೂ ಗೊತ್ತು ಅಂದುಕೊಂಡುಬಿಟ್ಟಿದ್ರು! ಆ ಚಿಕ್ಕ ಹುಡುಗನಿಗೆ ಮಾತ್ರ, ಇನ್ನೂ ಅಹಂಕಾರ ಬಲಿತಿರದ ಮುಗ್ಧ ಮನಸ್ಸಿಗೆ ಮಾತ್ರ ಆ ಪ್ರಶ್ನೆ ಕೇಳಬೇಕನಿಸ್ತು. ಆ ಹುಡುಗನಿಗೆ ಧರ್ಮಗ್ರಂಥದಲ್ಲೇನಿದೆ ಅಂತ ತಿಳಿಯುವ ಪ್ರಾಮಾಣಿಕ ಕುತೂಹಲವಿತ್ತು. ಅದರಲ್ಲೇನಿದೆ ಅಂತ ಗೊತ್ತಾದ್ರೆ ಆ ದರವೇಶಿಗಿರೋ ಕೌಶಲ್ಯ ತಾನೂ ಪಡ್ಕೋಬಹುದು ಅನ್ನುವ ಆಲೋಚನೆ ಅವನಿಗೆ ಬಂದಿತ್ತೇನೋ. ಅದಕ್ಕೇ ಅವ ಮರುಪ್ರಶ್ನೆ ಹಾಕಿದ್ದು. ಆದ್ರೆ ಆ ಊರಿನ ಜನಕ್ಕೆ ಅಂಥಾ ಬಯಕೆ ಇದ್ದಂತಿರಲಿಲ್ಲ. ದರವೇಶಿ ಯಾವಾಗ್ಲೂ ಖುಷಿಯಿಂದ ಇರ್ತಾನೆ, ಎಲ್ಲರನ್ನೂ ಪ್ರೀತಿಸ್ತಾನೆ, ನೆಮ್ಮದಿಯಾಗಿದಾನೆ ಅನ್ನೋದು ಅವರಿಗೆ ಗೊತ್ತಿತ್ತು. ಅದಕ್ಕೆಲ್ಲ ಕಾರಣ ಅವನೇ ಸ್ಪಷ್ಟವಾಗಿ ಹೇಳಿದ್ದ. ಅವರೂ ಅದನ್ನು ನಂಬಿದ್ರು. ಆ ಜನರೂ ಕುರಾನ್ ಓದಿದ್ದವರೇ. ಆದರೂ ದರವೇಶಿಗಿರೋ ಖುಷಿ, ಅವನಿಗಿರೋ ನೆಮ್ಮದಿ ನಮಗಿಲ್ಲವಲ್ಲ, ನಮಗೆ ಗೊತ್ತಿಲ್ಲದ ಅಂಥದೇನು ಅವನಿಗೆ ಗೊತ್ತಿದೆ- ಅನ್ನೋ ಪ್ರಶ್ನೆ ಅವರನ್ನು ಕಾಡಿರಲೇ ಇಲ್ಲ. ಅಥವಾ ಕಾಡಿತ್ತೇನೋ. ಕೇಳುವ ಧೈರ್ಯ ಮಾಡಿರಲಿಲ್ಲ ಅನ್ನಿಸುತ್ತೆ! ಧರ್ಮವನ್ನ ಅರಿಯೋದಕ್ಕೆ ಬೇಕಿರೋದು ಶ್ರದ್ಧೆಯಲ್ಲ, ಧೈರ್ಯ. ಯಾಕಂದ್ರೆ ಧರ್ಮ ನಮ್ಗೆ ಸತ್ಯ ಹೇಳುತ್ತೆ. ‘ಎಲ್ಲಾ ಜೀವಿಗಳೂ ಒಂದೇ. ಯಾರೂ ಮೇಲಲ್ಲ, ಯಾರೂ ಕೀಳಲ್ಲ’ ಅನ್ನೋದೇ ಆ ಸತ್ಯ. ನಮ್ಮ ಅಹಂಕಾರಕ್ಕೆ ಸವಾಲಾಗಿರೋ ಈ ಸತ್ಯಾನ ಅರಗಿಸ್ಕೊಳ್ಳೋದು ಸುಲಭ ಅಲ್ಲ. ಅದಕ್ಕೆ ಧೀರತನ ಬೇಕಾಗುತ್ತೆ. ಧರ್ಮದ ದಲ್ಲಾಳಿಗಳು ಮಾಡಿಟ್ಟ ನೀತಿ – ನಿಯಮ – ಶಾಸ್ತ್ರ ಸಾವಿರ ಇರ್ಬೋದು. ಹರಮ್ – ಹರಬ್, ಪ್ರಾಮಿಸ್ಡ್ ಲ್ಯಾಂಡ್ – ಹೋಲಿ ಲ್ಯಾಂಡ್, ಜನ್ಮಭೂಮಿ – ದೇವಭೂಮಿ… ದೇವ್ರು ಅಂದ್ರೇನು, ಧರ್ಮ ಅಂದ್ರೇನು ಅಂತ ಗೊತ್ತಿರೋರು ಇಂಥಾ ಮೂರ್ಖತನಕ್ಕೆಲ್ಲ ಟೈಂ ವೇಸ್ಟ್ ಮಾಡ್ಕೊಳಲ್ಲ. ಆ ದರವೇಶಿ ಹಾಗೆ ಯಾವ್ದು ಸಂತೋಷ ಕೊಡತ್ತೋ, ಯಾವ್ದು ಪ್ರೀತಿ ಕೊಡತ್ತೋ, ನಮ್ಮನ್ನ ಕಾಪಾಡುತ್ತೋ ಅದನ್ನಷ್ಟೆ ಮಾಡ್ತಾ ಹೋಗ್ತಾರೆ. ಧರ್ಮ ಹೇಳೋದು ಅದನ್ನೇ. ‘ಸಂತೋಷವಾಗಿರಿ, ಪ್ರೀತಿಯಿಂದಿರಿ…’ ಮತ್ತೇನು ಬೇಕು? ಧರ್ಮ – ಉಳಿಸುವ ಸಾಧ್ಯತೆ ಇರುವಾಗ ಯಾರನ್ನೂ ಸಾಯಲು ಬಿಡಬೇಡ ಅನ್ನುತ್ತೆ. ‘ಕ್ಷಮಿಸುವ ಸಾಧ್ಯತೆ ಇರುವಾಗ ಶಿಕ್ಷಿಸಬೇಡ, ಪ್ರೀತಿಸುವ ಚಿಕ್ಕ ಸಾಧ್ಯತೆಯನ್ನೂ ಬಿಟ್ಟುಕೊಡ್ಬೇಡ, ಸಂಧಾನ ಸಾಧ್ಯವಿದ್ದಾಗ ಯುದ್ಧದ ಆಲೋಚನೆ ಬೇಡ’ ಅನ್ನುತ್ತೆ ಧರ್ಮ. ಇವನ್ನೆಲ್ಲ ಪಾಲಿಸೋ ಧೈರ್ಯ ನಮಗಿದ್ರೆ ಮಾತ್ರ ನಾವು ಧಾರ್ಮಿಕರಾಗ್ತೀವಿ. ಇಲ್ಲದಿದ್ರೆ ನಮ್ಮದು ಬರೀ ಡಂಬಾಚಾರ ಅಷ್ಟೇ. ಬಗ್ದಾದಿನ ದರವೇಶಿಗೆ ಅಂಥ ಧೀರತನವಿತ್ತು. ಅವ ಕುರಾನ್ ಸಾರಿದ್ದ ಸತ್ಯವನ್ನ ಮನದಟ್ಟು ಮಾಡ್ಕೊಂಡಿದ್ದ. ಆ ಸತ್ಯ, ಧರ್ಮಗ್ರಂಥದ ಪ್ರತಿಯೊಳಗೆ ಒಣಗಿದ ಹೂ ಮತ್ತು ಗೆಳೆಯನ ಪತ್ರದ ರೂಪದಲ್ಲಿ ಭದ್ರವಾಗಿದ್ದು ಸದಾ ಅವನನ್ನ ಎಚ್ಚರಿಸ್ತಿತ್ತು. ಆ ಎಚ್ಚರವೇ ಅವನನ್ನು ದಾರಿ ತಪ್ಪದಂತೆ ಮಾಡಿದ್ದು. ಅದರಿಂದಾಗೇ ಅವನಿಗೆ ಎಲ್ಲರನ್ನೂ ಪ್ರೀತಿಸೋಕೆ, ಖುಷಿಯಾಗಿರೋಕೆ ಸಾಧ್ಯವಾಗಿದ್ದು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - ShareChat
ಜ್ಯೋತಿಷ್ಯ ಮತ್ತು ಭವಿಷ್ಯ ಹಾಗು ವಾಸ್ತವ........ ಯೋಚಿಸಬೇಕಾದ ವಿಷಯ.... ಮತ್ತು ಅರ್ಥ ಮಾಡಿಕೊಳ್ಳುವ ಮನೋಭಾವ..... ಹಾಗೂ ನಿರ್ಧರಿಸುವ ಚಾಣಾಕ್ಷತೆ. ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ ಭಾರತೀಯ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 80/90 ರಷ್ಟು ಮಹಿಳೆಯರು ಮತ್ತು ಶೇಕಡಾ 60/70 ರಷ್ಟು ಪುರುಷರಿಗೆ ನಂಬಿಕೆ, ಗೌರವ, ವಿಶ್ವಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರು ಇದಕ್ಕೆ ಶರಣಾಗಿದ್ದಾರೆ.............. ಆರೋಗ್ಯ ಸಮಸ್ಯೆಗೆ ಡಾಕ್ಟರುಗಳು, ಜಮೀನು ವಿವಾದಗಳಿಗೆ ಲಾಯರ್ ಮತ್ತು ನ್ಯಾಯಾಧೀಶರು , ಸಾಂಸಾರಿಕ ಸಮಸ್ಯೆಗಳಿಗೆ ಪೋಲಿಸ್ ಮತ್ತು ಸಂಬಂಧಿಗಳು, ಶೈಕ್ಷಣಿಕ ಸಮಸ್ಯೆಗೆ ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳು, ಆರ್ಥಿಕ ಸಮಸ್ಯೆಗಳಿಗೆ ಆಡಳಿತಾತ್ಮಕ ವ್ಯವಸ್ಥೆಗಳು ಇತ್ಯಾದಿ ಇದ್ದರೂ ಜ್ಯೋತಿಷಿಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾದರೆ ಜ್ಯೋತಿಷ್ಯ ನಿಜವೇ.??? ಸಮಸ್ಯೆಗಳಿಗೆ ಪರಿಹಾರ ಮತ್ತು ಭವಿಷ್ಯದ ಭದ್ರ ಬುನಾದಿ ಇವರಿಂದ ಸಾಧ್ಯವೇ ? ನಿಜವಾದ ಕುತೂಹಲ ಇರುವುದೇ ಇಲ್ಲಿ. ಕೆಲವು ಚಾಣಾಕ್ಷ ಜ್ಯೋತಿಷಿಗಳು ಶೇಕಡ 70/80 ರಷ್ಟು ಸರಿಯಾಗಿಯೇ ಹೇಳುತ್ತಾರೆ ಎಂದೆನಿಸುತ್ತದೆ. ಇದು ಹೇಗೆ ಸಾಧ್ಯ ? ಸೃಷ್ಟಿಯ ಸ್ವಾಭಾವಿಕತೆಯನ್ನು ಭೇದಿಸುವ ಶಕ್ತಿ ಜ್ಯೋತಿಷಿಗಳಿಗೆ ಇದೆಯೇ ? ಇದನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಮಾಜದ Social structure ಹೇಗೆ Construct ಆಗಿದೆ ಎಂಬುದನ್ನು ಗಮನಿಸಬೇಕು. ಇಡೀ ಭಾರತೀಯರ ಸಾಮಾಜಿಕ ವ್ಯವಸ್ಥೆ ಭಕ್ತಿ, ಭಾವನೆ, ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ಮನುಷ್ಯ ಸಂಬಂಧಗಳು ಮುಖ್ಯವಾಗಿ ತಂದೆ, ತಾಯಿ, ಮಕ್ಕಳು ಮುಂತಾದ ರಕ್ತ ಸಂಬಂಧಗಳು ಬಹಳಷ್ಟು ಬೆಸೆದುಕೊಂಡಿದೆ. ಅಜ್ಞಾನ, ಬಡತನ, ಭಯ ಮತ್ತು ಮೌಢ್ಯ ಇಲ್ಲಿನ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ. ಪ್ರೀತಿ, ಪ್ರೇಮ, ಪ್ರಣಯಗಳ ಬಗ್ಗೆ ತೀರಾ ಸಂಕುಚಿತ ಮನೋಭಾವವಿದೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ಯಾವುದೇ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಇಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಭಾರತೀಯ ಜನರ ಜೀವನಶೈಲಿ ತುಂಬಾ ಏರಿಳಿತಗಳನ್ನು ಉಂಟುಮಾಡುತ್ತಿದೆ. ಇದೇ ಈ ಜ್ಯೋತಿಷಿಗಳ ಮೂಲ ಬಂಡವಾಳ. ಇಡೀ ವ್ಯವಸ್ಥೆಗೆ ಮತ್ತು ಸಾಮಾನ್ಯ ಜನರಿಗೆ ಅನ್ವಯಿಸುವ ಕೆಲವು ಅಂಶಗಳನ್ನು ಬಹಳ ಕಲಾತ್ಮಕವಾಗಿ ಹೇಳುತ್ತಾರೆ. ಅದನ್ನು ಕೇಳಿದರೆ " ಅರೆ , ಇದೇನಿದು ಎಷ್ಟೊಂದು ಸತ್ಯ. ನನ್ನ ಜೀವನದಲ್ಲಿ ನಡೆದಿರುವುದೇ ಅಲ್ಲವೆ. ಜ್ಯೋತಿಷ್ಯ ನಿಜವಾಗಿ ಸತ್ಯ " ಎಂಬ ನಂಬಿಕೆ ಬರುತ್ತದೆ. ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಇದೆ, ನಿಮಗೆ ಸ್ನೇಹಿತರಿಂದ ಮೋಸವಾಗುತ್ತದೆ, ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ, ನಿಮಗೆ ವಾಹನಗಳಿಂದ ಗಂಡಾಂತರವಿದೆ, ನೀವು ಬೇರೆಯವರನ್ನು ಬೇಗ ನಂಬಿ ಮೋಸ ಹೋಗುವಿರಿ " ಇತ್ಯಾದಿ ಇತ್ಯಾದಿ.... ಚುನಾವಣಾ ಸಂಧರ್ಭದ ಫಲಿತಾಂಶ ಬಿಡಿ. ಈ ದೇಶದ ಪ್ರತಿಯೊಬ್ಬರೂ ಭವಿಷ್ಯಕಾರರೇ...! ಆದರೆ , ವಾಸ್ತವದಲ್ಲಿ ಇದೊಂದು ಭ್ರಮೆ. ನಮ್ಮ ಮದುವೆ, ಮಕ್ಕಳು, ಉದ್ಯೋಗ, ಆರೋಗ್ಯ, ಕೌಟುಂಬಿಕ ಕಲಹ, ಆರ್ಥಿಕ ಅಧೋಗತಿ, ಶತ್ರುಗಳ ಕಾಟ, ಕೆಲವೊಮ್ಮೆ ಯಶಸ್ಸು ಎಲ್ಲವೂ ಸಹಜ, ಸ್ವಾಭಾವಿಕ ಮತ್ತು ನಾವು ವಾಸಿಸುವ ದೇಶ, ಕಾಲ, ಪರಿಸ್ಥಿತಿ ಮತ್ತು ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ತಾಳ್ಮೆ ಮತ್ತು ಜಾಣತನ ನಮ್ಮ ಸಾಮಾನ್ಯ ಜನರಿಗೆ ಇನ್ನೂ ಮೂಡಿಲ್ಲ. ಅದಕ್ಕೆ ಬದಲಾಗಿ ಮೌಢ್ಯಕ್ಕೆ ಮತ್ತು ಸುಲಭ ಪರಿಹಾರದ ಆಕರ್ಷಣೆಗೆ ಒಳಗಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮೊದಲು ಗಿಣಿ, ಕವಡೆ, ಹಸ್ತ ಮುದ್ರಿಕೆ, ತಿಥಿ, ನಕ್ಷತ್ರ, ರಾಶಿ, ಜಾತಕ ಮುಂತಾದ ಕೆಲವು ವಿಷಯಗಳ ಮೇಲೆ ಯಾರೋ ಕೆಲವರು ಹೊಟ್ಟೆಪಾಡಿಗಾಗಿ ಶಾಸ್ತ್ರ ಹೇಳುತ್ತಾ, ಕೊಟ್ಟಷ್ಟು ಹಣ ಪಡೆಯುತ್ತಾ, ಹೇಗೋ ಉಪ ಉದ್ಯೋಗದಂತೆ ಜೀವಿಸುತ್ತಿದ್ದರು. ಆದರೆ ಈ ಮಾಧ್ಯಮಗಳ ಪ್ರಭಾವ ಹೆಚ್ಚಾದ ಮೇಲೆ ಇದೊಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿತು ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಯಿತು. ಬದುಕಿನ ಅನಿಶ್ಚಿತತೆ ಹೆಚ್ಚಾದಷ್ಟು ಜ್ಯೋತಿಷ್ಯ ತನ್ನ ಪ್ರಾಮುಖ್ಯತೆ ಪಡೆಯುತ್ತಿದೆ. ಅವರು ಹೇಳುವುದು ನಿಜವೆಂಬ ಭ್ರಮೆ ಸೃಷ್ಟಿಸುತ್ತಿದೆ. ಪೌರಾಣಿಕ ದೇವರುಗಳನ್ನೇ Overtake ಮಾಡಿ ಹೊಸ ರೀತಿಯ ದೇವಮಾನವರೆಂಬ ನಕಲಿಗಳು ಜ್ಯೋತಿಷಿಗಳ ರೂಪದಲ್ಲಿ ಉಧ್ಭವವಾಗಿದ್ದಾರೆ. ಈ ಬಗೆಗೆ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ. ಇದಕ್ಕೆ ಪರಿಹಾರವೆಂದರೆ, ಹೆಚ್ಚು ಹೆಚ್ಚು ಸೃಷ್ಟಿಯನ್ನು ಅರಿಯಿರಿ. ಪ್ರಕೃತಿಗೆ ನಿಯತ್ತಾಗಿ ಬದುಕಿ. ಪರಿಸ್ಥಿತಿಯನ್ನು ವಿಶಾಲ ಅರ್ಥದಲ್ಲಿ ಗ್ರಹಿಸಿ. ಸಮಸ್ಯೆ ನನಗೆ ಮಾತ್ರ ಎಂಬ ಸಂಕುಚಿತತೆ ಬಿಡಿ. ಎಲ್ಲರೂ ಒಂದಲ್ಲಾ ಒಂದು ಸಮಸ್ಯೆಗಳಲ್ಲಿ ಇರುವವರೇ. ಅದರ ರೂಪ ಮಾತ್ರ ಭಿನ್ನವಾಗಿರುತ್ತದೆ. ಅದೇ ವಾಸ್ತವ. ಉದಾಹರಣೆಗೆ....... ಮೇಷ ರಾಶಿ --------------------- ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ..... ವೃಷಭ ರಾಶಿ -------------------- ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ......... ಮಿಥುನ ರಾಶಿ -------------------------- ನಿಮ್ಮ ಮನೆಯ ಹಿರಿಯರಿಗೆ ಆಗಾಗ ಅನಾರೋಗ್ಯ ಕಾಡುತ್ತದೆ. ಕಾಳಜಿ ವಹಿಸದಿದ್ದರೆ ಅನಾಹುತ ನಿಶ್ಚಿತ......... ಕರ್ಕಾಟಕ ರಾಶಿ -------------------------- ವಾಹನ ಪ್ರಯಾಣ ಮಾಡುವಾಗ ಅಪಘಾತವಾಗುವ ಸಾಧ್ಯತೆ ಇದೆ. ಪ್ರಯಾಣ ಮುಂದೂಡುವುದು ಉತ್ತಮ....... ಸಿಂಹ ರಾಶಿ -------------------- ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು ಮತ್ತು ಉದ್ಯೋಗ ಹೋಗುವ ಸಾಧ್ಯತೆಯೂ ಇದೆ. ಸ್ವಲ್ಪ ಹುಷಾರು...... ಕನ್ಯಾ ರಾಶಿ --------------------- ಅನಿರೀಕ್ಷಿತ ಸುದ್ದಿ ಬರುತ್ತದೆ. ಕೆಟ್ಟ ವಿಷಯಗಳು ಕೇಳಬೇಕಾಗಬಹುದು. ಮಾನಸಿಕವಾಗಿ ಸಿದ್ದರಾಗಿ...... ತುಲಾ ರಾಶಿ ---------------------- ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಬಹುದು......... ವೃಶ್ಚಿಕ ರಾಶಿ ------------------------ ಮಗ - ಮಗಳ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ವಿಚ್ಛೇದನದ ಸಾಧ್ಯತೆ ಇದೆ........ ಧನು ರಾಶಿ -------------------- ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹೊಂದಿ ಕೆಟ್ಟ ದಾರಿ ಹಿಡಿಯಬಹುದು. ಎಚ್ಚರಿಕೆಯಿಂದ ಇರಿ. ಮಕರ ರಾಶಿ ------------------------ ಮನೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ. ಅನಿರೀಕ್ಷಿತ ಘಟನೆಗಳು ನಡೆದು ಬಹಳ ನಷ್ಟ ಅನುಭವಿಸುವಿರಿ....... ಕುಂಭ ರಾಶಿ -------------------- ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡುತ್ತದೆ. ಶಾಂತಿ ಇಲ್ಲವಾಗುತ್ತದೆ. ಮೀನ ರಾಶಿ -------------------- ಅನಿರೀಕ್ಷಿತ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಳೆದುಕೊಂಡಿರುವುದನ್ನು ಮತ್ತೆ ಪಡೆಯುವಿರಿ..... ಇದು, ದಿನ, ವಾರ, ತಿಂಗಳು, ವಾರ್ಷಿಕ ಅಥವಾ ಜೀವನಪರ್ಯಂತ ಘಟಿಸಲಿರುವ ನಿಮ್ಮ ಭವಿಷ್ಯ. ದಿನನಿತ್ಯ ಟಿವಿ, ಪತ್ರಿಕೆ ಮುಂತಾದ ಎಲ್ಲಾ ಕಡೆಗಳಲ್ಲಿ ನಿಮ್ಮ ಹೆಸರಿನ ಮೇಲೆಯೋ, ಜನ್ಮ ನಕ್ಷತ್ರದ ಮೇಲೆಯೋ, ನಿಮ್ಮ ಹಸ್ತ ರೇಖೆಗಳ ಮೇಲೆಯೋ, ಕವಡೆ, ಗಿಣಿ ಮುಂತಾದವುಗಳ ಮೇಲೆಯೋ ಒಟ್ಟಿನಲ್ಲಿ ಆಯಾ ವಿಷಯದ ಪಂಡಿತರು ಈ ಭವಿಷ್ಯ ಹೇಳುತ್ತಾರೆ. ಇದರಲ್ಲಿಯೂ ಹಲವಾರು ವಿಧಾನಗಳು ಇವೆ. ಹಾಗೆಯೇ ದಿಕ್ಕು, ಬಣ್ಣ, ಸಂಖ್ಯೆ, ಜನ್ಮ ಜಾತಕ, ಇತ್ಯಾದಿ ಅಂಶಗಳ ಮೇಲೆಯೂ ಭವಿಷ್ಯ ನುಡಿಯಲಾಗುತ್ತದೆ. ಕೆಲವರು ಇದೊಂದು ವೈಜ್ಞಾನಿಕ ವಿದ್ಯೆ. ಗ್ರಹಗಳು, ನಕ್ಷತ್ರಗಳ ಚಲನವಲನಗಳನ್ನು ಅಭ್ಯಸಿಸಿ ಮನುಷ್ಯ ಇತಿಹಾಸದ ಅನುಭವಗಳ ಆಧಾರದ ಮೇಲೆ ಆತನ ಗುಣ ಸ್ವಭಾವಗಳನ್ನು ಗುರುತಿಸುವ ವಿಜ್ಞಾನವಿದು. ಖಚಿತ ಭವಿಷ್ಯ ಹೇಳುವುದು ಸಾಧ್ಯವಿಲ್ಲವಾದರು ಕೆಲವು ನಡೆಗಳನ್ನು ಗುರುತಿಸಬಹುದು. ಈಗಿನ ಅನೇಕ ನಕಲಿ ಜ್ಯೋತಿಷಿಗಳ ವ್ಯಾಪಾರಿ ಮನೋಭಾವದಿಂದ ಇದು ಕಲುಷಿತಗೊಂಡಿದ್ದು ನಿಜವಾದ ಜ್ಯೋತಿಷ್ಯ ಶಾಸ್ತ್ರ ವೈಚಾರಿಕವಾದದ್ದು ಎಂದು ಸಮರ್ಥಿಸಿಕೊಳ್ಳುತ್ತಾರೆ.... ಹೌದು, ಕೆಲವೊಮ್ಮೆ ಅದರಲ್ಲೂ ನಮ್ಮ ಸಂಕಷ್ಟದ ಸಮಯದಲ್ಲಿ ಯಾರೋ ಜ್ಯೋತಿಷಿಗಳು ಮೇಲೆ ತಿಳಿಸಿದ ಅಂಶಗಳ ಆಧಾರದಲ್ಲಿ ಕೆಲವು ಊಹಾತ್ಮಕ ಅಥವಾ ಅವರು ಕಲಿತ ವಿದ್ಯೆಯ ನೆರವಿನಿಂದ ಕೆಲವು ಸಲಹೆ ಸೂಚನೆಗಳನ್ನು ನೀಡಬಹುದು. ಅದು‌ ಹಲವು ಬಾರಿ ನಿಜವೂ ಆಗಬಹುದು. ಅದು ಜ್ಯೋತಿಷ್ಯದ ಮೇಲೆ ನಂಬಿಕೆ ಹೆಚ್ಚಿಸುತ್ತದೆ. ಹಾಗಾದರೆ ಜ್ಯೋತಿಷ್ಯ ನಿಜವೇ ? ಒಣ ವೈಚಾರಿಕ ಪ್ರಜ್ಞೆಯೂ ಬೇಡ ಅಥವಾ ಹಿರಿಯರು ತೋರಿದ ಧರ್ಮ, ಸಂಪ್ರದಾಯದ ನಂಬಿಕೆಯ ದಾರಿಯೂ ಬೇಡ. ನಮ್ಮ ಇಂದಿನ ಅರಿವು ಅನುಭವದ ಮಿತಿಯಲ್ಲಿ ಇದನ್ನು ಯೋಚಿಸೋಣ......... ಇದು ಸಾರ್ವತ್ರಿಕ ಸತ್ಯವೇ ? ವಿಶ್ವದ ಈಗಿನ ಸುಮಾರು 750 ಕೋಟಿ ಜನಸಂಖ್ಯೆಗೂ ಇದು ಅನ್ವಯವಾಗುತ್ತದೆಯೇ ? ಸೃಷ್ಟಿಯ ಎಲ್ಲಾ ಭೂ ಪ್ರದೇಶದಲ್ಲಿಯೂ ಏಕ ಪ್ರಕಾರವಾಗಿ ಪರಿಣಾಮ ಬೀರುತ್ತದೆಯೇ ? ಮನುಷ್ಯರಿಗೆ ಮಾತ್ರವೇ ಅಥವಾ ಸಕಲ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆಯೇ ? ಬಣ್ಣ, ದಿಕ್ಕು, ಸಂಖ್ಯೆಗಳು ಮನುಷ್ಯನ ವ್ಯಾವಹಾರಿಕ ಅನುಕೂಲಕ್ಕಾಗಿ ಗುರುತಿಸುವಿಕೆಯ ಕಾರಣಕ್ಕಾಗಿ ನೀಡಿದ ಹೆಸರುಗಳಲ್ಲವೇ ? ಸಾರ್ವಜನಿಕವಾಗಿ ಪ್ರಾಕೃತಿಕ ವಿಕೋಪಗಳನ್ನು, ವೈಯಕ್ತಿಕವಾಗಿ ಮನುಷ್ಯನ ಏಳು ಬೀಳುಗಳನ್ಮು, ಯಶಸ್ಸು ವೈಫಲ್ಯಗಳನ್ನು, ಹುಟ್ಟು ಸಾವುಗಳನ್ನು ಖಚಿತವಾಗಿ ಮೊದಲೇ ಮಾಹಿತಿ ನೀಡಲು ಸಾಧ್ಯವೇ ? ಪ್ರಕೃತಿಯ ಎಲ್ಲಾ ಅಂಶಗಳನ್ನು ಜ್ಯೋತಿಷ್ಯ ಶಾಸ್ತ್ರ ಭೇದಿಸಿದೆಯೇ ? ಆರೋಗ್ಯವೇ ಇರಲಿ, ಆರ್ಥಿಕ ಪರಿಸ್ಥಿತಿಯೇ ಇರಲಿ, ತಂತ್ರಜ್ಞಾನವೇ ಇರಲಿ, ಮಾನಸಿಕ ಸಮತೋಲನವೇ ಇರಲಿ ಅಥವಾ ವ್ಯವಸ್ಥೆಯ ಯಾವುದೇ ವಿಷಯದಲ್ಲಿ ವಿಜ್ಞಾನ ಮತ್ತು ಜ್ಯೋತಿಷ್ಯದ ಮುಖಾಮುಖಿಯಲ್ಲಿ ಜ್ಯೋತಿಷ್ಯ ಹೆಚ್ಚು ಖಚಿತವಾದದ್ದು ಮತ್ತು ಸಾರ್ವತ್ರಿಕ ಸತ್ಯ ಎಂದು ನಿಮಗನಿಸುತ್ತದೆಯೇ ? ಯಾವುದೋ ನಮ್ಮ ವೈಯಕ್ತಿಕ ನೆಲೆಯಲ್ಲಿ ಕೆಲವು ಘಟನೆಗಳು ಕಾಕತಾಳೀಯ ಅಥವಾ ಸಹಜ ಸ್ವಾಭಾವಿಕವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾದಲ್ಲಿ ಅದನ್ನೇ ಸಂಪೂರ್ಣ ಸತ್ಯ ಎಂದು ಭಾವಿಸಬೇಕೆ ? ಈ ಕ್ಷಣದ ಆಧುನಿಕ ಸಮಾಜವನ್ನು ಗಮನಿಸಿದಾಗ ಇಡೀ ವಿಶ್ವದ ದಿನನಿತ್ಯದ ಆಗುಹೋಗುಗಳನ್ನು ಮುನ್ನಡೆಸುತ್ತಿರುವುದು ವಿಜ್ಞಾನವೇ ಅಥವಾ ಜ್ಯೋತಿಷ್ಯವೇ ? ಸಾವಿನ ಭಯ ಪಡದೆ, ಸೋಲಿನ ಆತಂಕಕ್ಕೆ ಒಳಗಾಗದೆ, ನಿಷ್ಕಲ್ಮಶ ಮನಸ್ಸಿನಿಂದ, ವಿಶಾಲ ಮನೋಭಾವದಿಂದ, ದೀರ್ಘಕಾಲದ ಮೌನದಲ್ಲಿ ಇದರ ಬಗ್ಗೆ ನೀವು ಯೋಚಿಸಿದರೆ ಬಹುಶಃ ವಾಸ್ತವಿಕ ಸತ್ಯ ನಿಮಗೆ ಅರ್ಥವಾಗಬಹುದು. ಬದುಕು ತುಂಬಾ ಸರಳವಾಗಿದ್ದಾಗ, ಮನುಷ್ಯ ಪ್ರಕೃತಿಯೊಂದಿಗೆ ಜೀವಿಸುತ್ತಿದ್ದಾಗ,‌ ಆತನ ಬೇಡಿಕೆಗಳು ಅನ್ನ ಆಹಾರಕ್ಕೆ ಸೀಮಿತವಾಗಿದ್ದಾಗ, ಅಕ್ಷರ ಜ್ಞಾನವಿಲ್ಲದ ಸಮಯದಲ್ಲಿ, ವಿಜ್ಞಾನ ಇನ್ನೂ ಅಸ್ತಿತ್ವವಿಲ್ಲದ ಕಾಲದಲ್ಲಿ ಜ್ಯೋತಿಷ್ಯ ಒಂದು ಸಲಹಾ ರೂಪದ ಮಾರ್ಗದರ್ಶನವಾಗಿ ಇದ್ದಿರಬಹುದು.... ಆದರೆ ಇಂದಿನ ಸಂಕೀರ್ಣ ಆಧುನಿಕ ಸಮಾಜದಲ್ಲಿ ವಿಜ್ಞಾನವನ್ನು ತಿರಸ್ಕರಿಸಿ, ಜ್ಯೋತಿಷ್ಯವನ್ನು ಪುರಸ್ಕರಿಸಿ ನಮ್ಮ ದೇಶದ ಅಭಿವೃದ್ಧಿ ಸಾಧ್ಯವೇ ? ವೈಯಕ್ತಿಕ ಬದುಕಿನ ಯಶಸ್ಸು ನೆಮ್ಮದಿ ಸಾಧ್ಯವೇ ? ತಾಖತ್ತಿದ್ದರೆ ಹೇಳಿ ನಿಮ್ಮ ಭವಿಷ್ಯ ಜೈಲಿನಲ್ಲಿರುವ ಖೈದಿಗಳಿಗೆ,..... ಧೈರ್ಯವಿದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ಆಸ್ಪತ್ರೆಯಲ್ಲಿ ಮಲಗಿರುವ ರೋಗಿಗಳಿಗೆ,... ಗೊತ್ತಿದ್ದರೆ ಹೇಳಿ ನಿಮ್ಮ ರಾಶಿಗಳ ಚಲನೆ ಭಿಕ್ಷುಕರಿಗೆ,.... ತಿಳಿದಿದ್ದರೆ ಹೇಳಿ ನಿಮ್ಮ ಮುನ್ಸೂಚನೆ ಹೊಟ್ಟೆಪಾಡಿನ ವೇಶ್ಯೆಯರಿಗೆ,.... ಅರಿತಿದ್ದರೆ ಹೇಳಿ ನಿಮ್ಮ ರಾಹುಕೇತುಗಳ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ,..... ಅರ್ಥವಾದರೆ ಹೇಳಿ ನಿಮ್ಮ ಭವಿಷ್ಯ ಅನಾಥಾಶ್ರಮದ ಮಕ್ಕಳಿಗೆ,..... ಬುದ್ದಿ ಇದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ವೃದ್ಧಾಶ್ರಮದ ಹಿರಿಯ ಜೀವಗಳಿಗೆ,.... ಕುರಿ, ಕೋಳಿ, ನಾಯಿ, ಹಂದಿ, ಹಸುಗಳಿಗೆ ಹೇಳಿ ಅದರ ಆಯುಷ್ಯದ ಭವಿಷ್ಯ,..... ಗಾಳಿ, ನೀರು, ಬೆಳಕು, ಅರಣ್ಯಗಳಿಗೆ ಹೇಳಿ ನಿಮ್ಮ ಜ್ಯೋತಿಷ್ಯ,.... ಹಸು ಶ್ರೇಷ್ಠ - ಹಂದಿ ಕನಿಷ್ಠ, ಗಂಡು ಶ್ರೇಷ್ಠ - ಹೆಣ್ಣು ಕನಿಷ್ಠ, ಬಿಳಿ ಶ್ರೇಷ್ಠ - ಕಪ್ಪು ಕನಿಷ್ಠ, ಪೂರ್ವ ಶ್ರೇಷ್ಠ - ಪಶ್ಚಿಮ ಕನಿಷ್ಠ, 9 ಶ್ರೇಷ್ಠ - 7 ಅನಿಷ್ಠ, ಶಾಸ್ತ್ರೀಯ ಸಂಗೀತ/ ನೃತ್ಯ ಶ್ರೇಷ್ಠ, ಜಾನಪದ ಸಂಗೀತ/ನೃತ್ಯ ಕನಿಷ್ಠ, ಕಾಲ್ಪನಿಕ ದೇವರು ಶ್ರೇಷ್ಠ‌ - ವಾಸ್ತವ ಮನುಷ್ಯ ಕನಿಷ್ಠ, ಬಿಡಿ ಈ ಮೌಢ್ಯದ ತಾರತಮ್ಯವನ್ನು, ಬದುಕಿ ಸರಳವಾಗಿ - ಸಹಜವಾಗಿ, ಸೃಷ್ಟಿಗೆ ನಿಯತ್ತಾಗಿ...... ಯೋಚಿಸಿ ನಿರ್ಧರಿಸುವ, ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವ, ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯ ನಿಮಗಿದೆ. ಧನ್ಯವಾದಗಳು........ ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - Sathosh 3 ದೂಜ್ಯ್ ಎeo. 00200500 99025 78187 0v^ ৫১02 Sathosh 3 ದೂಜ್ಯ್ ಎeo. 00200500 99025 78187 0v^ ৫১02 - ShareChat
ಸತ್ಯವನ್ನೇ ನುಡಿದ ಕಾಗೆ ​ಒಂದಾನೊಂದು ಕಾಲದಲ್ಲಿ, ಅರಣ್ಯವೊಂದರಲ್ಲಿ ಒಂದು ದೊಡ್ಡ ಮತ್ತು ಸುಂದರವಾದ ಮರವಿತ್ತು. ಆ ಮರದ ಮೇಲೆ ಅನೇಕ ಪಕ್ಷಿಗಳು ವಾಸಿಸುತ್ತಿದ್ದವು. ಅವುಗಳಲ್ಲಿ ಒಂದು ಸಣ್ಣ ಕಾಗೆ ಇತ್ತು, ಅದು ತನ್ನ ಪ್ರಾಮಾಣಿಕತೆ ಮತ್ತು ಸತ್ಯವನ್ನು ನುಡಿಯುವ ಗುಣಕ್ಕಾಗಿ ಹೆಸರುವಾಸಿಯಾಗಿತ್ತು. ಆದರೆ, ಅರಣ್ಯದ ರಾಜ ಸಿಂಹಕ್ಕೆ ಈ ಕಾಗೆಯ ಸತ್ಯವಾದ ಮಾತುಗಳು ಅಷ್ಟಾಗಿ ಇಷ್ಟವಿರಲಿಲ್ಲ. ಸಿಂಹ ಯಾವಾಗಲೂ ತನ್ನ ಹೊಗಳಿಕೆಯನ್ನೇ ಕೇಳಲು ಬಯಸುತ್ತಿತ್ತು. ​ಒಂದು ದಿನ, ಸಿಂಹವು ತನ್ನ ಮಂತ್ರಿಗಳಾದ ನರಿ ಮತ್ತು ತೋಳದೊಂದಿಗೆ ಸಭೆ ಸೇರಿತ್ತು. "ನಾನು ಈ ಅರಣ್ಯದ ಅತಿ ಶಕ್ತಿಶಾಲಿ ಮತ್ತು ಬುದ್ಧಿವಂತ ರಾಜ. ನನ್ನ ಸಾಮ್ರಾಜ್ಯದಲ್ಲಿ ಎಲ್ಲವೂ ಪರಿಪೂರ್ಣವಾಗಿದೆ, ಅಲ್ಲವೇ?" ಎಂದು ಸಿಂಹ ಗಂಭೀರವಾಗಿ ಕೇಳಿತು. ನರಿ ತಕ್ಷಣ, "ಹೌದು ಮಹಾರಾಜ! ನಿಮ್ಮಂತಹ ಬುದ್ಧಿವಂತ ರಾಜ ಸಿಕ್ಕ ನಾವೇ ಧನ್ಯರು. ನಿಮ್ಮ ಆಳ್ವಿಕೆಯಲ್ಲಿ ಅರಣ್ಯ ಸಮೃದ್ಧವಾಗಿದೆ," ಎಂದಿತು. ತೋಳ ಕೂಡ, "ನಿಮ್ಮ ಶೌರ್ಯಕ್ಕೆ ಸಾಟಿಯಿಲ್ಲ ಮಹಾರಾಜ. ನಿಮ್ಮ ಮುಂದೆ ಬೇರೆ ಯಾವುದೇ ಪ್ರಾಣಿ ನಿಲ್ಲಲು ಸಾಧ್ಯವಿಲ್ಲ," ಎಂದು ಹೊಗಳಿತು. ​ಆಗ ಅಲ್ಲಿ ಹಾರಿ ಬಂದ ಕಾಗೆ, ಸಿಂಹದ ಮಾತುಗಳನ್ನು ಮತ್ತು ಮಂತ್ರಿಗಳ ಹೊಗಳಿಕೆಯನ್ನು ಕೇಳಿಸಿಕೊಂಡಿತು. ಅದು ಧೈರ್ಯವಾಗಿ ಸಿಂಹದತ್ತ ಹಾರಿ ಬಂದು, "ಮಹಾರಾಜ, ನಿಮ್ಮ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ನಾವು ಗೌರವಿಸುತ್ತೇವೆ. ಆದರೆ, ಅರಣ್ಯದಲ್ಲಿ ಎಲ್ಲಾ ಸರಿಯಾಗಿದೆ ಎಂದು ಹೇಳಲಾಗುವುದಿಲ್ಲ. ನಿನ್ನೆ ಬೇಟೆಗಾರರು ಬಂದು ನಮ್ಮ ಕೆಲವು ಪ್ರಾಣಿಗಳನ್ನು ಹಿಡಿದುಕೊಂಡು ಹೋಗಿದ್ದಾರೆ. ನೀರು ಸಿಗದೆ ಕೆಲವು ದಿನಗಳಿಂದ ಸಣ್ಣ ಪ್ರಾಣಿಗಳು ಬಳಲುತ್ತಿವೆ. ಇದೆಲ್ಲವೂ ಸತ್ಯ." ​ಕಾಗೆಯ ಮಾತು ಕೇಳಿ ಸಿಂಹಕ್ಕೆ ಸಿಟ್ಟು ನೆತ್ತಿಗೇರಿತು. "ಕಾಗೆಯೇ, ನಿನಗೆ ನನ್ನ ಅಧಿಕಾರದ ಬಗ್ಗೆ ಅರಿವಿಲ್ಲವೇ? ನೀನು ಸದಾ ನಕಾರಾತ್ಮಕ ವಿಷಯಗಳನ್ನೇ ಹೇಳುತ್ತಿ. ನಿನ್ನನ್ನು ನನ್ನ ರಾಜ್ಯದಿಂದ ಹೊರಹಾಕಬೇಕು!" ಎಂದು ಸಿಂಹ ಗರ್ಜಿಸಿತು. ನರಿ ಮತ್ತು ತೋಳ ಕೂಡ ಕಾಗೆಯನ್ನು ಹೀಯಾಳಿಸಿದವು, "ನಿನ್ನ ಅತಿಯಾದ ಸತ್ಯ ನಿನ್ನನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ರಾಜನನ್ನು ಹೊಗಳುವುದನ್ನು ಕಲಿ." ​ಆದರೆ ಕಾಗೆ ಭಯಪಡಲಿಲ್ಲ. "ಸತ್ಯವನ್ನು ನುಡಿಯುವುದು ನನ್ನ ಕರ್ತವ್ಯ ಮಹಾರಾಜ. ನೀವು ಸತ್ಯವನ್ನು ಕೇಳಲು ಇಷ್ಟಪಡದಿದ್ದರೆ, ನಾನೇ ಅರಣ್ಯ ಬಿಟ್ಟು ಹೋಗುತ್ತೇನೆ," ಎಂದು ಹೇಳಿ ಅಲ್ಲಿಂದ ಹಾರಿ ಹೋಯಿತು. ಕೆಲವು ದಿನಗಳ ನಂತರ, ಅರಣ್ಯದಲ್ಲಿ ನಿಜವಾಗಿಯೂ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭಿಸಿದವು. ಬೇಟೆಗಾರರ ಹಾವಳಿ ಹೆಚ್ಚಾಯಿತು, ಅರಣ್ಯದಲ್ಲಿ ನೀರಿನ ಕೊರತೆ ತೀವ್ರವಾಯಿತು. ನರಿ ಮತ್ತು ತೋಳ ಸಿಂಹವನ್ನು ಹೊಗಳುವುದನ್ನೇ ಮುಂದುವರಿಸಿದವು. ಆದರೆ ಯಾವುದೇ ಪರಿಹಾರ ಸೂಚಿಸಲಿಲ್ಲ. ಸಿಂಹಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಅರಿವಾಯಿತು. ಆಗ ಕಾಗೆಯ ಮಾತು ನೆನಪಾಯಿತು. ​ಸಿಂಹಕ್ಕೆ ತನ್ನ ತಪ್ಪಿನ ಅರಿವಾಯಿತು. "ನಾವು ಕಾಗೆಯ ಸತ್ಯವಾದ ಮಾತುಗಳನ್ನು ಕೇಳಬೇಕಿತ್ತು. ಹೊಗಳುಭಟ್ಟರ ಮಾತುಗಳನ್ನು ಕೇಳಿ ನಾನು ತಪ್ಪು ಮಾಡಿದೆ" ಎಂದು ಪಶ್ಚಾತ್ತಾಪ ಪಟ್ಟಿತು. ಸಿಂಹ ತಕ್ಷಣ ಕಾಗೆಯನ್ನು ಹುಡುಕಿ ಕರೆತರಲು ತನ್ನ ಸೇವಕರನ್ನು ಕಳುಹಿಸಿತು. ಕಾಗೆ ಹಿಂತಿರುಗಿದಾಗ, ಸಿಂಹ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿತು. ಕಾಗೆ ಸಿಂಹಕ್ಕೆ ಕೆಲವು ಉತ್ತಮ ಸಲಹೆಗಳನ್ನು ನೀಡಿತು. ಸಿಂಹವು ಕಾಗೆಯ ಸಲಹೆಗಳನ್ನು ಪಾಲಿಸಿ, ಅರಣ್ಯವನ್ನು ಮತ್ತೆ ಸುರಕ್ಷಿತವಾಗಿ ಮತ್ತು ಸಮೃದ್ಧವಾಗಿ ಮಾಡಿತು. ಅಂದಿನಿಂದ ಸಿಂಹವು ಸತ್ಯವನ್ನು ಕೇಳಲು ಮತ್ತು ಒಪ್ಪಿಕೊಳ್ಳಲು ಪ್ರಾರಂಭಿಸಿತು, ಮತ್ತು ಕಾಗೆ ಸಿಂಹದ ನಂಬಿಕಾರ್ಹ ಸಲಹೆಗಾರವಾಯಿತು. ​ನೀತಿ: ಸತ್ಯ ಕಹಿಯಾಗಿದ್ದರೂ ಅದು ಎಂದಿಗೂ ನಮಗೆ ಒಳಿತು ಮಾಡುತ್ತದೆ. ಹೊಗಳಿಕೆಗೆ ಮರುಳಾಗದೆ, ಸತ್ಯವನ್ನು ಸ್ವೀಕರಿಸುವುದು ಉತ್ತಮ ನಾಯಕನ ಲಕ್ಷಣ. ​"ಹೊಗಳಿಕೆಗೆ ಮರುಳಾಗುವ ಬದಲು, ಕಹಿಯಾದರೂ ಸತ್ಯವನ್ನು ನುಡಿಯುವವರನ್ನು ಗೌರವಿಸೋಣ. ಸತ್ಯವೇ ನಮ್ಮ ಬದುಕಿನ ದಾರಿದೀಪ." ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ShareChat
ಹುಡುಗಿಯಾಗಿದ್ದ ಗಂಗೆ ನದಿಯಾದ ಕಥೆ:- ಭಗವಂತ ವಾಮನ ಅವತಾರದಲ್ಲಿ ಬಂದು, ಬಲಿ ಚಕ್ರವರ್ತಿಯಿಂದ ಮೂರು ಹೆಜ್ಜೆ ದಾನ ತೆಗೆದುಕೊಳ್ಳಲು ತ್ರಿವಿಕ್ರಮ ನಾಗಿ ಬೆಳೆದು ನಿಂತು, ಮೊದಲು ಮೇಲಿನ ಲೋಕವನ್ನು ಅಳೆಯುವಾಗ ವಾಮನನ ಒಂದು ಪಾದದ ಉಗುರಿನ ಕೊನೆ ದೇವ ಲೋಕದ ಬಂಗಾರದ ಗೋಡೆಗೆ ತಗುಲಿ, ಬಿರುಕು ಬಿಟ್ಟ ಕಾರಣ ಭೂಮಂಡಲದ ಹೊರಗಿರುವ ನೀರೆಲ್ಲ ಒಳಗೆ ಬಂದಿತು. ನೀರಿನಿಂದ ಬ್ರಹ್ಮಾಂಡವೇ ಮುಳುಗಿ ಹೋಗುತ್ತಿತ್ತು. ಆಗ ಬ್ರಹ್ಮದೇವನು ತನ್ನ ಕಮಂಡಲ ದಲ್ಲಿ ನೀರನ್ನೆಲ್ಲ ಹಿಡಿದು, ಅದರಿಂದ ವಿಷ್ಣುವಿನ ಪಾದ ತೊಳೆದಾಗ ಪಾದದಿಂದ ಹರಿದು ಬಂದ ನೀರು 'ಗಂಗೆ' ಯಾದಳು. ಎರಡನೇ ಜನ್ಮದಲ್ಲಿ, ಮೇನಾ ದೇವಿ ಮತ್ತು ಹಿಮವಂತ ರಾಜನಿಗೆ 'ಗಂಗೆ' ಹಿರಿಯ ಮಗಳಾಗಿ, ಪಾರ್ವತಿ ದೇವಿ ಎರಡನೇ ಮಗಳಾಗಿ, ಮೂರನೇ ಮಗ ನಾಗಿ ಮೈನಾಕ ಪರ್ವತ ಹುಟ್ಟಿದರು. ಕಾರಣಾಂತರದಿಂದ ಬಾಲ್ಯದಲ್ಲಿಯೇ ಗಂಗೆ ದೇವಲೋಕಕ್ಕೆ ಹೋದಳು. ಆದರೆ ಮತ್ತೆ ಭೂಮಿಗೆ ಇಳಿದು ಬರಬೇಕಾದ ಸಂದರ್ಭ ಬಂದಿತು. ನದಿಯಾಗಿ ಹರಿದು ಬರಲು ಕಾರಣ, ಪರ್ವತರಾಜ ಹಿಮವಂತನ ಹಿರಿಯ ಮಗಳಾಗಿದ್ದಳು ಗಂಗೆ, ಚಿಕ್ಕ ಹುಡುಗಿಯಾ ಗಿದ್ದಾಗಲೇ ದೇವಲೋಕಕ್ಕೆ ಬಂದವಳು. ಮತ್ತೆ ಅವಳು ಭೂಲೋಕಕ್ಕೆ ಹೋಗಲಿಲ್ಲ. ಬಾಲಕಿ ಗಂಗೆಯನ್ನು ಬ್ರಹ್ಮನು ಬೆಳೆಸಿ ಅವಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದ. ಬಾಲಕಿಯಾಗಿದ್ದ ಗಂಗೆ ಒಮ್ಮೆ ಭೂಲೋ ಕದ ನದಿ ಹತ್ತಿರ ಆಟವಾಡುತ್ತಿದ್ದಳು. ಆ ಸಮಯದಲ್ಲಿ ದೂರ್ವಾಸ ಮುನಿಗಳು ಸ್ನಾನ ಸಂಧ್ಯಾವಂದನೆ ಮಾಡಲು ನದಿಗೆ ಬಂದಿದ್ದರು. ಎಲ್ಲಾ ಮುಗಿಸಿ ಇನ್ನೇನು ಹೊರಡಬೇಕು ಎಂದು ಎರಡು ಹೆಜ್ಜೆ ಮುಂದಿಟ್ಟರು, ದೂರ್ವಾಸರ ಮೈ ಮೇಲಿ ನ ಬಟ್ಟೆ ಗಾಳಿಯಲ್ಲಿ ಹಾರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಅದನ್ನು ಹಿಡಿಯ ಲು ದೂರ್ವಾಸರು ಬಹಳ ಪ್ರಯತ್ನ ಪಡು ತ್ತಿದ್ದರು ಆದರೆ ಅವರ ಕೈಗೆ ಸಿಗುತ್ತಿರಲಿಲ್ಲ. ಆಡುತ್ತಿದ್ದ ಬಾಲಕಿ ಗಂಗೆಗೆ ದೂರ್ವಾಸರ ಪರದಾಟ ನೋಡಿ ತಡೆಯ ಲಾರದಷ್ಟು ನಗು ಬಂದಿತು. ಎಷ್ಟೇ ಪ್ರಯತ್ನಿಸಿದರೂ ಅವಳಿಂದ ನಗು ತಡೆಯಲು ಆಗಲಿಲ್ಲ. ನೋಡಿದ ದುರ್ವಾಸರಿಗೆ ಕೋಪ ಬಂದಿ ತು. ಮೊದಲೇ ಕೋಪಿಷ್ಟರಾದ ಅವರು, ಇದೇನಿದು ನನ್ನ ಸ್ನಾನದ ಬಟ್ಟೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ನನ್ನ ಸ್ಥಿತಿಯನ್ನು ನೋಡಿ ಈ ಚಿಕ್ಕ ಹುಡುಗಿ ನಗುತ್ತಿದ್ದಾಳಲ್ಲ ಎಂದುಕೊಂಡು, ಗಂಗೆಯನ್ನು ಕರೆದು ನೀನು ದೇವತೆಯಾಗಿ ಸ್ವರ್ಗದಲ್ಲಿ ಸಂತೋ ಷವಾಗಿ ಓಡಾಡಿಕೊಂಡಿದ್ದೆ. ಭೂಲೋಕಕ್ಕೆ ಬಂದು ಇಂದಿನ ನನ್ನ ಸ್ಥಿತಿಯನ್ನು ನೋಡಿ ನಗುತ್ತಿದ್ದೀಯಾ? ನೀನು ಸಹ ಈ ಭೂಮಿ ಯಲ್ಲಿ ನದಿಯಾಗಿ ಹರಿದಾಡಿ ಕೊಂಡಿರು ವಂತೆ ಎಂದು ಶಾಪ ಕೊಟ್ಟು ಹೋದರು. ಇದನ್ನೆಲ್ಲಾ ನೋಡಿ ಪುಟ್ಟ ಹುಡುಗಿ ಗಂಗೆ ಮನಸ್ಸಿಗೆ ನೋವಾಯಿತು. ತಾನು ನಕ್ಕಿದ್ದು ಅವಳಿಗೆ ತಪ್ಪು ಎಂದು ಈಗ ಅರ್ಥವಾಗುತ್ತಿದೆ. ಆದರೆ ಕಾಲ ಮಿಂಚಿ ಹೋಗಿತ್ತು ದುರ್ವಾಸರು ಶಾಪ ಕೊಟ್ಟಾ ಗಿದೆ. ಏನು ಮಾಡಲೂ, ತಿಳಿಯದೇ ಮಾಡಿದ ತಪ್ಪಿಗೆ ದುರ್ವಾಸರ ಶಾಪಕ್ಕೆ ಗುರಿಯಾದ ವಿಚಾರವನ್ನು ಬ್ರಹ್ಮನಿಗೆ ಹೇಳಿದಳು. ಶಾಪದ ಪ್ರಕಾರ ಭೂಮಿಯ ಲ್ಲಿ ನದಿಯಾಗಿ ಒಬ್ಬಂಟಿಯಾಗಿ ಹರಿಯು ವುದು ನನಗೆ ಇಷ್ಟವಿಲ್ಲ. ಏನಾದರೂ ಮಾಡಿ ಶಾಪವನ್ನು ವಾಪಸ್ಸು ಪಡೆವಂತೆ ತಿಳಿಸಿ ಎಂದು ಬ್ರಹ್ಮನಲ್ಲಿ ಬೇಡಿದಳು. ಆದರೆ ಯಾವುದೇ ಋಷಿಮುನಿಗಳು ಕೊಟ್ಟ ಶಾಪ ಹಿಂಪಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ ಬ್ರಹ್ಮ, ಆದರೆ ನಾನು ನಿನಗೆ, ಒಂದು ಅವಕಾಶ ಕೊಡುತ್ತೇನೆ. ನೀನು ಭೂಲೋಕದಲ್ಲಿ ನದಿಯಾಗಿ ಹರಿಯು ವಾಗ ನಿನ್ನನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅವರು ಮಾಡಿದ ಪಾಪಗಳನ್ನು ನಿನ್ನ ನದಿಯಲ್ಲಿ ಸ್ನಾನ ಮಾಡಿ ಅವರ ಪಾಪ ತೊಳೆದು ಕೊಳ್ಳು ವಂತೆ ವರ ಕೊಡುತ್ತೇನೆ. ಇದರಿಂದ ನೀನು ಭೂಲೋಕದಲ್ಲಿ ಒಬ್ಬಂಟಿಯಾಗಿ ಇದ್ದೇನೆ ಎಂದು ಅನಿಸುವುದಿಲ್ಲ ಎಂದು ಬ್ರಹ್ಮ ಹೇಳಿದ. ಬ್ರಹ್ಮನ ಮಾತು ಕೇಳಿದ ಗಂಗೆ ಒಪ್ಪಿ ಕೊಂಡು ದೂರ್ವಾಸರಲ್ಲಿಗೆ ಬಂದು ಕ್ಷಮೆ ಯಾಚಿಸುತ್ತಾಳೆ. ದೂರ್ವಾಸರು ಪ್ರಸನ್ನ ರಾಗಿ ಬ್ರಹ್ಮನ ಹೇಳಿದಂತೆ ನೀನು, ಭೂ ಲೋಕದಲ್ಲಿ ನದಿಯಾಗಿ ಹರಿಯುವೆ. ಜನಗಳು ತಾವು ಮಾಡಿದ ಪಾಪವನ್ನು ಪವಿತ್ರ ಗಂಗಾ ನದಿಯಲ್ಲಿ ಮಿಂದು ಪರಿ ಹರಿಸಿಕೊಳ್ಳುತ್ತಾರೆ. ಹಾಗೆ ನೀನು ದೇವ ಲೋಕ ಭೂಲೋಕ ಪಾತಾಳಲೋಕ ಹೀಗೆ ಮೂರು ಲೋಕಗಳಲೂ ಪವಿತ್ರ ನದಿಯಾ ಗಿ ಹರಿಯುತ್ತಾ, ಭೂಲೋಕದಲ್ಲಿ ಪಾಪನಾಶಿನಿ 'ಗಂಗೆ' ಯಾಗಿ ಹೆಸರು ಪಡೆಯುವೆ ಎಂದು ಆಶೀರ್ವದಿಸಿದರು. ಇತ್ತ ಭಗೀರಥನು, ತನ್ನ ಮುತ್ತಾತಂದಿರಿಗೆ ಮುಕ್ತಿ ಕೊಡಿಸುವ ಸಲುವಾಗಿ, ಕಠಿಣ ತಪಸ್ಸು ಮಾಡಿ ಭೂಮಿಗೆ ಗಂಗೆಯನ್ನು ಹರಿಸುವಂತೆ ಕೇಳಿದಾಗ ಬ್ರಹ್ಮನು ಹರಿಸಿ ದನು. ಅವಳ ರಭಸವನ್ನು ತಡೆಯಲು ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿ ನಿಧಾನವಾಗಿ ಗಂಗೆಯನ್ನು ಇಳಿಸುತ್ತಾನೆ. ಹೀಗೆ ಗಂಗೆ 3 ಜನ್ಮಗಳತ್ತಿ, ಹರಿ-ಹರ- ಬ್ರಹ್ಮರ ಮೂಲಕ ಭೂಮಿಗೆ ಹರಿದು 'ಪವಿತ್ರ ಗಂಗೆ'ಯಾದಳು. ಭಗೀರಥನ ಮುತ್ತಾತಂದಿರ ಕುರಿತು: ಇಕ್ಷ್ವಾಕುವಂಶದ ಸಗರ ಚಕ್ರವರ್ತಿ,ಅಶ್ವ ಮೇಧ ಯಾಗ ಮಾಡಲು ಯಾಗದ ಕುದುರೆಯನ್ನು ಬಿಟ್ಟಾಗ, ಇಂದ್ರ ಅದನ್ನು ಅಪಹರಿಸಿ 'ಕಪಿಲ' ಮುನಿಗಳ ಆಶ್ರಮ ದಲ್ಲಿ ಬಿಟ್ಟನು. ಸಗರ ಚಕ್ರವರ್ತಿಯ 60 ಸಾವಿರ ಮಕ್ಕಳು ಕುದುರೆಯನ್ನು ತರಲು ಹೊರಟವರು ಕಪಿಲ ಮುನಿಗಳ ಆಶ್ರಮ ದಲ್ಲಿದ್ದ ಕುದುರೆಯನ್ನು ನೋಡಿ ಅವರೇ ಕದ್ದಿದ್ದಾರೆಂದು ತಪ್ಪು ತಿಳಿದು, ಅವರ ತಪಸ್ಸಿಗೆ ತೊಂದರೆ ಮಾಡಿದರು.'ಕಪಿಲ' ಮುನಿಗಳ ಕೋಪದ ಶಾಪಕ್ಕೆ ಗುರಿಯಾಗಿ ಸಗರ ಚಕ್ರವರ್ತಿಯ 60.000 ಮಕ್ಕಳು ಸುಟ್ಟು ಭಸ್ಮವಾದರು.ಆದರೆ ಅವರಿಗೆ ಮೋಕ್ಷ ಸಿಗಲಿಲ್ಲ. ಮೋಕ್ಷ ಕೊಡಿಸುವ ಸಲುವಾಗಿ ಸಗರ ಚಕ್ರವರ್ತಿಯ ಇನ್ನೊಬ್ಬ ಮಗ ಅಸಮಂಜಸ, ಅವನ ಮಗ ಅಂಶು ಮಂತ, ಇವನ ಮಗ ದಿಲೀಪ, ಇವರೆಲ್ಲ ರೂ ಮೋಕ್ಷ ಕೊಡಿಸಲು ಸಾವಿರಾರು ವರ್ಷ ಕಾಲ ತಪಸ್ಸು ಮಾಡಿ ವೃದ್ಧರಾದು ದರಿಂದ ನಿಧನಹೊಂದಿದರು. ಆದರೆ ಇವರೆಲ್ಲರ ತಪಸ್ಸಿನ ಪುಣ್ಯದ ಫಲ ಹಾಗೆ ಇದ್ದು, ಮುಂದೆ ದಿಲೀಪನ ಮಗ ಭಗೀರಥ ಎಂಬ ರಾಜನು ಒಂಟಿ ಕಾಲಿನಲ್ಲಿ ನಿಂತು, ಬ್ರಹ್ಮನನ್ನು, ನಂತರ ಶಿವನನ್ನು ಕುರಿತು ತಪಸ್ಸು ಮಾಡಿ ತನ್ನ 60000 ಮುತ್ತಾ ತಂದಿರಿಗೆ ಮುಕ್ತಿಯನ್ನು ಕೊಡಿಸಿ ಎಂದು ಕಪಿಲ ಮುನಿಗಳನ್ನು ಬೇಡಿಕೊಂಡನು. ಪರಮೇಶ್ವರನು ಗಂಗೆಯನ್ನು ಧರೆಗಿಳಿಸಿದನು. ಈ ರೀತಿಯಾಗಿ ಭಗೀರಥನ ಪ್ರಯತ್ನದಿಂದಾಗಿ ಗಂಗೆ ಭೂಲೋಕಕ್ಕೆ ನದಿಯಾಗಿ ಹರಿದು ಬಂದಳು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ShareChat
ದೇವರೇನು ನಮ್ಮ ಕಾವಲುಗಾರನೇ? : ಗುರುಕುಲವೊಂದರಲ್ಲಿ ಗುರುಗಳು ತಮ್ಮ ಶಿಷ್ಯರಿಗೆ, ‘ಪ್ರತಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ. ಅವನು ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾನೆ’ ಎಂದು ಬೋಧಿಸಿದರು. ಶಿಷ್ಯನೊಬ್ಬ ಅದನ್ನು ಮತ್ತೆ ಮತ್ತೆ ಉಚ್ಚರಿಸುತ್ತಾ ಮನದಟ್ಟು ಮಾಡಿಕೊಂಡ. ಮಾರನೇ ದಿನ ಆ ಶಿಷ್ಯ ಕಾಡಿಗೆ ಕಟ್ಟಿಗೆ ತರಲು ಹೋದಾಗ ಮದ್ದಾನೆಯೊಂದು ಧಾವಿಸಿ ಬರುತ್ತಿತ್ತು. ಅದರ ಬೆನ್ನತ್ತಿದ ಮಾವುತ, ‘ಓಡಿ, ಓಡಿ ತಪ್ಪಿಸಿಕೊಳ್ಳಿ’ ಎಂದು ಕೂಗುತ್ತಿದ್ದ. ಅಲ್ಲಿದ್ದವರೆಲ್ಲ ಸುರಕ್ಷಿತ ಜಾಗಕ್ಕೆ ತೆರಳಿ ಅಡಗಿಕೊಂಡರೆ, ಈ ಶಿಷ್ಯನೊಬ್ಬ ಆನೆ ಬರುತ್ತಿದ್ದ ದಾರಿಗೆ ಮುಖ ಹಾಕಿ, ಕೈಮುಗಿದು ನಿಂತ. ‘ದೂರ ಸರಿ, ಈ ಆನೆಗೆ ಮತ್ತೇರಿದೆ’ ಎಂದು ಎಚ್ಚರಿಸಿದ. ಆದರೆ ಶಿಷ್ಯ ಹತ್ತಿರ ಬರುತ್ತಿದ್ದ ಆನೆಯನ್ನು ನೊಡುತ್ತಾ, ‘ಈ ಆನೆಯಲ್ಲೂ ನಾರಾಯಣ ಇದ್ದಾನೆ, ಅವನು ನನಗೇನೂ ಅಪಾಯ ಮಾಡುವುದಿಲ್ಲ, ನನ್ನನ್ನು ಕಾಪಾಡುತ್ತಾನೆ’ ಅನ್ನುತ್ತಿರುವಾಗಲೇ ಅದು ಸಮೀಪಿಸಿ, ಅವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿತು. ಅವನು ತುಸು ದೂರವಿದ್ದ ಕೊಳದ ಬದಿಯ ಹುಲ್ಲು ಜೊಂಡಿನ ಮೇಲೆ ಬಿದ್ದ. ಮೈಕೈ ತರಚಿತು. ಅದಕ್ಕಿಂತ ಹೆಚ್ಚಾಗಿ, ಅವನು ಆಘಾತಗೊಂಡಿದ್ದ. ಇದು ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದ ದೃಷ್ಟಾಂತ ಕತೆ. ನಂಬಿಕೆಯ ಹೆಸರಲ್ಲಿ ನಾವು ನಮ್ಮ ಜವಾಬ್ದಾರಿಗಳನ್ನು ಹೇಗೆ ಮರೆಯುತ್ತೇವೆ ಅನ್ನುವುದನ್ನು ಇದು ಸಮರ್ಥವಾಗಿ ಬಿಂಬಿಸುತ್ತದೆ. ನಂಬಿಕೆ ಅಥವಾ ಶ್ರದ್ಧೆ ಯಾವತ್ತೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ನೆವ ಆಗಬಾರದು. ನಮ್ಮ ಸೋಲು, ವೈಫಲ್ಯಗಳನ್ನು ಹೊರಲು ಏನಾದರೊಂದು ಬೇಕೆಂದು ನಾವು ಅವನ್ನು ಅವಲಂಬಿಸಿರುತ್ತೇವೆ. ನಾವು ಗೆದ್ದಾಗಲೂ ಆ ಗೆಲುವನ್ನು ನಿಭಾಯಿಸಲು ಅದರ ಕ್ರೆಡಿಟ್ ಅತೀಂದ್ರಿಯ ಶಕ್ತಿಗೆ ಬಿಟ್ಟುಕೊಡುತ್ತೇವೆ. ನಾವು ಪ್ರಯತ್ನ ಹಾಕಿಲ್ಲವಾದರೆ, ಅದು ನಮ್ಮದೇ ತಪ್ಪು ಮತ್ತು, ನಾವು ಪ್ರಯತ್ನ ಹಾಕಿದ್ದರೆ ಅದು ನಮ್ಮದೇ ಸಾಧನೆ- ಇಷ್ಟು ಮನದಟ್ಟು ಮಾಡಿಕೊಂಡರೆ ಮಾತ್ರ ಸೋಲು – ಗೆಲುವುಗಳನ್ನು ನಮ್ಮಿಂದ ನಿಭಾಯಿಸಲು ಸಾಧ್ಯ. ದೈವವೇ ಆಗಲಿ, ವಿಧಿಯೇ ಆಗಲಿ, ಅವನ್ನು ಯಾವತ್ತೂ ನಮ್ಮ ಊರುಗೋಲಿನಂತೆ ಬಳಸಬಾರದು. ನಾವು ಏನೆಲ್ಲ ಮಾಡಬೇಕೋ ಅವಲ್ಲೆವನ್ನೂ ಮಾಡಿ, ಆಮೇಲೆ ಗೆದ್ದರೆ ಅಹಂಕಾರ, ಸೋತರೆ ಕೀಳರಿಮೆಗೆ ಪಕ್ಕಾಗದಿರಲು ಮಾತ್ರ ಅವುಗಳನ್ನು ಆತುಕೊಳ್ಳಬೇಕೇ ಹೊರತು. ಸೋಲು – ಗೆಲುವಿಗೆ ಅವನ್ನು ಕಾರಣವಾಗಿಸಬಾರದು. * ಇಲ್ಲೊಂದು ಸೂಫಿ ಕತೆ ನೆನಪಾಗುತ್ತಿದೆ. ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. ಅವನು ಒಳಗೆ ಹೋಗಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ಕೃತಜ್ಞತೆ ಸಮರ್ಪಿಸಲು ಬಯಸಿದ. ಮಸೀದಿಯ ಹೊರಗೊಂದು ಮರವಿತ್ತು. ಅದಕ್ಕೆ ಒಂಟೆಯನ್ನು ಕಟ್ಟಿದ. ಒಳಗೆ ಹೋಗಿ ಪ್ರಾರ್ಥನೆಗೆ ಕುಳಿತವನು ಜಗತ್ತನ್ನೇ ಮರೆತುಬಿಟ್ಟ. ಅಲ್ಲಾನ ಧ್ಯಾನದಲ್ಲಿ ಮುಳುಗಿದ್ದ ಆತನಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಮಸೀದಿಯಿಂದ ಹೊರಗೆ ಬರುವಾಗ ಕತ್ತಲಾಗಿತ್ತು. ಒಂಟೆಯನ್ನು ಬಿಡಿಸಲೆಂದು ಮರದ ಬಳಿ ಬಂದರೆ ಅಲ್ಲಿ ಅದು ನಾಪತ್ತೆ! ಸುತ್ತಮುತ್ತ ಹುಡುಕಾಡಿದ. ಎಲ್ಲೂ ಅದರ ಸುಳಿವಿಲ್ಲ. ಅವನಿಗೆ ಅಲ್ಲಾನ ಮೇಲೆ ಸಿಟ್ಟೇ ಬಂದಿತು. “ನಿನ್ನ ಪ್ರಾರ್ಥನೆಗಾಗಿ ಒಂಟೆಯನ್ನು ಹೊರಗೆ ಬಿಟ್ಟು ಬಂದಿದ್ದಕ್ಕೆ ಇದೇ ಬಹುಮಾನವೇ” ಎಂದು ಸಿಡುಕಿದ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ಆಕಾಶದತ್ತ ಮುಖ ಮಾಡಿ “ನೀನೊಬ್ಬ ಮೋಸಗಾರ! ನಿನ್ನನ್ನು ನಂಬಿದ್ದಕ್ಕೆ ಸರಿಯಾಗಿಯೇ ಚೂರಿ ಹಾಕಿದ್ದೀಯ. ಇದೆಲ್ಲಿಯ ನ್ಯಾಯ!?” ಎಂದು ಕೂಗಾಡಿದ. ಅದೇ ದಾರಿಯಲ್ಲಿ ಹೋಗುತ್ತಿದ್ದ ಸೂಫಿಯೊಬ್ಬನಿಗೆ ಈ ಕೂಗಾಟ ಕೇಳಿಸಿತು. ನಗುತ್ತಾ ವ್ಯಾಪಾರಿಯ ಬಳಿ ಬಂದು ವಿಷಯ ಏನೆಂದು ಕೇಳಿದ. ವ್ಯಾಪಾರಿ ಎಲ್ಲವನ್ನೂ ತಿಳಿಸಲು, ಸೂಫಿ “ಅಲ್ಲಯ್ಯಾ… ಅಲ್ಲಾನ ಮೇಲೆ ಭರವಸೆ ಇಡುವುದು ಬೇರೆ ವಿಷಯ, ಒಂಟೆಯನ್ನು ಹೀಗೆ ಎಲ್ಲೆಂದರಲ್ಲಿ ಕಟ್ಟಿ ಹಾಕುವುದು ಬೇರೆ ವಿಷಯ. ಜೇನಿನ ಜಾಡಿಯನ್ನು ಮುಚ್ಚಳ ಹಾಕದೆ ಬಿಟ್ಟರೆ ಇರುವೆ ಮುತ್ತಿಕೊಳ್ಳುವುದು ಸಹಜ. ಅದಕ್ಕೆ ಅಲ್ಲಾ ತಾನೆ ಏನು ಮಾಡಿಯಾನು!? ಅಲ್ಲಾನನ್ನು ನಂಬುವುದು ಬೇರೆ ವಿಷಯ, ನಿನ್ನ ಜವಾಬ್ದಾರಿಯನ್ನು ನೀನು ನಡೆಸುವುದು ಬೇರೆ ವಿಷಯ” ಎಂದು ತಿಳಿ ಹೇಳಿದ. ವಿಷಯ ಇಷ್ಟೇ. ನಮ್ಮಲ್ಲಿ ತಪ್ಪು ಇಟ್ಟುಕೊಂಡು ದೇವರನ್ನು ಪ್ರಶ್ನಿಸಬಾರದು. ಪ್ರಶ್ನಿಸುವುದೇ ಆದರೆ, ದೇವರನ್ನು ನಂಬಬಾರದು! ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - ShareChat
ಚಮ್ಮಾರನ ಶಿವಭಕ್ತಿ ಒಮ್ಮೆ ಶಿವ ಪಾರ್ವತಿ ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಪಾರ್ವತಿ ದೇವಿ ಭೂಲೋಕದ ಕಡೆ ನೋಡಿದಳು. ಭೂಲೋಕದಲ್ಲಿ ಶಿವನ ಭಕ್ತರು ಶಿವನನ್ನು ಪೂಜಿಸುತ್ತಿದ್ದರು. ಶಿವನ ಸ್ತೋತ್ರ ಮಾಡುತ್ತಿದ್ದವರನ್ನು ಕಂಡು ಪಾರ್ವತಿಗೆ ತುಂಬಾ ಸಂತೋಷವಾಯಿತು. ದೇವಾ ಇಷ್ಟೊಂದು ಭಕ್ತರು ನಿತ್ಯ ನಿನ್ನನ್ನು ಪೂಜಿಸುತ್ತಾರೆ. ಅದಕ್ಕೆ ಶಿವನು, "ಹೌದು ಇವರಲ್ಲಿ ಯಾರೂ ನಿಜವಾದ ಭಕ್ತರಲ್ಲ. ಕೇವಲ ತೋರಿಕೆಗಾಗಿ ಹೀಗೆ ಮಾಡುತ್ತಿದ್ದಾರೆ. ಸ್ವಾರ್ಥ ತುಂಬಿದ ಮನಸ್ಸು ಅವರದು. ಪೂಜಾ ವಿಧಾನಗಳಲ್ಲಿ ತಮಗೆ ಬೇಕಾದ್ದನ್ನು ಕರುವಣಿಸುವಂತೆ ನನ್ನನ್ನು ಪ್ರಾರ್ಥಿಸುತ್ತಾರೆ. ಸ್ವಾರ್ಥ ತುಂಬಿದ ಪೂಜಾ ಭಕ್ತಿಗೆ ನಾನು ಪ್ರೀತನಾಗುವುದಿಲ್ಲ" ಎನ್ನುತ್ತಾನೆ ಶಿವ. ಭೂಲೋಕದ ಮಾನವರು ಎತ್ತ ಕಡೆಯಿಂದ ನೋಡಿದರೂ ತಮ್ಮ ಸ್ವಾರ್ಥ ಆಸೆಗಳಿಗೆ ಬೇಡುವವರನ್ನು ಕಂಡು ಪಾರ್ವತಿ ಆತಂಕಗೊಂಡಳು. ಸ್ವಲ್ಪ ಸಮಯ ಕಳೆದ ನಂತರ ಎಲ್ಲಿಂದಲೋ ಶಿವಶಿವ ಎನ್ನುವ ಸದ್ದು ಕೇಳಿತು. ಪಾರ್ವತಿ ಶಿವನ ಕಡೆ ನೋಡಿದಳು. ಹೌದು ಅವನು ನನ್ನ ನಿಜವಾದ ಭಕ್ತ ಅನುಮಾನ ಬೇಡ ಎಂದ. ಪಾರ್ವತಿ ಆ ಭಕ್ತನ ಕಡೆ ನೋಡಿದಳು. ಅವನೊಬ್ಬ ಚಮ್ಮಾರ ಅವನು ಶಿವಲಿಂಗದ ಮೇಲೆ ಚಪ್ಪಲಿ ಇಟ್ಟು ಅದನ್ನು ಪಟಪಟನೆ ಕುಟ್ಟುತ್ತ ರಿಪೇರಿ ಮಾಡುತ್ತಿದ್ದ. ಅದನ್ನು ಕಂಡು ಪಾರ್ವತಿಗೆ ಆಶ್ಚರ್ಯವಾಯಿತು. ಮತ್ತು ಕೋಪವೂ ಬಂದಿತು. ಇದೇನಿದು ಅವನು ಮಾಡುವ ಕೆಲಸ. ಶಿವಲಿಂಗದ ಮೇಲೆ ಚಪ್ಪಲಿ ಮಾಡುವುದು. ಇದು ಶಿವನಿಗೆ ಅವಮಾನ ಮಾಡಿದಂತಲ್ಲವೇ ಇವನು ನಿಮ್ಮ ಭಕ್ತನೇ ಎಂದು ಶಿವನಿಗೆ ಕೇಳುತ್ತಾಳೆ ಪಾರ್ವತಿ. ಹೌದು ಇವನೇ ನಿಜವಾದ ಭಕ್ತ . ನಿಜವಾದ ನನ್ನ ಭಕ್ತ. ಎಲ್ಲರೂ ಬೂಟಾಟಿಕೆಯಿಂದ ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದಾನೆ. ಹಾಗೂ ಅವನ ಕೆಲಸದ ನಡುವೆ ಶಿವಶಿವ ಎನ್ನುತ್ತಿದ್ದಾನೆ. ನಿಸ್ವಾರ್ಥ ಭಾವದಿಂದ ಭಕ್ತಿ, ಪ್ರಾರ್ಥನೆ ಹಾಗೂ ಕಾಯಕವನ್ನು ಮಾಡುವವನೇ ಆಡಂಬರದ ಭಕ್ತಿ ಪ್ರದರ್ಶಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ನನ್ನನ್ನು ಕೋರುತ್ತಾರೆ. ಆದ್ದರಿಂದ ಚಮ್ಮಾರನ ಕೆಲಸದಿಂದ ಶಿವಲಿಂಗಕ್ಕೆ ಅಪಮಾನವಾಯಿತೆಂದು ಭಾವಿಸಬೇಡ. ಅವನ ಹೃದಯ ನಿಷ್ಕಲ್ಮಶವಾಗಿದೆ. ಶಿವನನ್ನು ಭಜಿಸುವುದನ್ನು ಬಿಟ್ಟು ಅವನಿಗೇನೂ ತಿಳಿದಿಲ್ಲ. ಅವನು ಏನನ್ನೂ ಬೇಕೆಂದು ಬೇಡುತ್ತಿಲ್ಲ. ಆದ್ದರಿಂದ ಆ ಭಕ್ತನ ಮನಸ್ಸನ್ನು ನಿಗ್ರಹಿಸಿ ಅವನನ್ನು ಅನುಗ್ರಹಿಸುವ ಎಂದನು ಶಿವ. ಪಾರ್ವತಿಗೆ ಶಿವನ ಮಾತನ್ನು ಕೇಳಿ ಚಮ್ಮಾರನಲ್ಲಿ ಪ್ರೀತಿ ಹಾಗೂ ನಂಬಿಕೆ ಉಂಟಾಯಿತು. ಚಮ್ಮಾರನಿಗೆ ಮಂಗಳವಾಗಲೆಂದು ಆಶೀರ್ವದಿಸಿದಳು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ل n 9 ل n 9 - ShareChat
ರಾಮ ನಾಮದ ಮಹಿಮೆ :- ಪಾಂಡವರು ಕಾಮ್ಯಕ ವನದಲ್ಲಿದ್ದ ಪಾಂಡವರನ್ನು ನೋಡ ಲು ಬಂದ ಶ್ರೀ ಕೃಷ್ಣನನ್ನು ಪ್ರೀತಿಯಿಂದ ಸ್ವಾಗತಿಸಿದ ಯುಧಿ ಷ್ಠಿರ ಬಹಳ ಆತಂಕದಲ್ಲಿದ್ದ . ಕೃಷ್ಣನನ್ನು ಸತ್ಕರಿಸಿ ಕೇಳಿದ ಹೇ ವಾಸುದೇವ, ನನಗೆ ರಾಜ್ಯ, ಕೋಶ, ಅಧಿಕಾರ ದಲ್ಲಿ ಆಸಕ್ತಿ ಇಲ್ಲ. ಆದರೆ ನನ್ನಿಂದಾಗಿ ನನ್ನ ತಾಯಿ, ತಮ್ಮಿಂದಿರು ಮತ್ತು ದ್ರೌಪದಿ ಕಷ್ಟ ಪಡುವಂತಾಗಿದೆ. ಇದಕ್ಕೆ ಕಾರಣರಾದ ಶತ್ರುಗಳನ್ನು ಸಂಹಾರ ಮಾಡಿ ನನ್ನ ರಾಜ್ಯವನ್ನು ಪಡೆಯಲು ನಾನು ಏನು ಮಾಡಬೇಕು ನೀನೆ ದಾರಿ ತೋರು ಎಂದು ಕೇಳಿದ. ಕೃಷ್ಣ ಧರ್ಮರಾಯನ ಸಮೀಪ ಬಂದು ಅವನ ಕಿವಿಯಲ್ಲಿ 'ರಾಮ ನಾಮ ಮಂತ್ರ' ಉಪದೇಶ ಮಾಡಿ ನೀನು ಯಾವಾಗಲೂ 'ಶ್ರೀ ರಾಮ ಜಯ ರಾಮ' ಈ ಮಂತ್ರ ವನ್ನು ಜಪಿಸುತ್ತಿರು ಇದರಿಂದ ನಿನ್ನ ಸಕಲ ಕಷ್ಟಗಳು ಕಳೆದು ರಾಜ್ಯ ಲಭಿಸುತ್ತದೆ ಎಂದನು. ಆದರೆ ಅನುಮಾನ ಕೊಂಡ ಧರ್ಮರಾಜ, ಕೃಷ್ಟಾ 'ರಾಮ ನಾಮ' ಮಂತ್ರ ಜಪಿಸಿ ಫಲ ಪಡೆದವರು ಯಾರಾದರೂ ಇದ್ದಾರೆಯೇ? ಎಂದು ಕೇಳಿದ. ಕೃಷ್ಣ ಹೇಳಿದ, ತ್ರೇತಾಯುಗದಲ್ಲಿ ನಾನು ರಾಮನಾಗಿದ್ದೆ. ಹನುಮಂತ ಸೀತಾನ್ವೇಷಣೆಗೆ ಹೊರಟಾಗ, ನಿನ್ನ ಕಾರ್ಯದಲ್ಲಿ ಜಯವಾಗಲಿ ಎಂದು “ರಾಮ ನಾಮ” ಮಂತ್ರೋಪದೇಶ ಮಾಡಿದೆ. ಅವನಿಗೆ ಎದುರಾಗುವ ದೊಡ್ಡ ದೊಡ್ಡ ಅಡೆತಡೆ ಗಳನ್ನೆಲ್ಲಾ ಹೊಡೆದೋಡಿಸಿ ಕಾರ್ಯ ಸಾಧಿಸುವಲ್ಲಿ ಜಯ ಶಾಲಿ ಯಾದನು. 'ರಾಮ ನಾಮ' ಮಂತ್ರವನ್ನು ಸಾಕ್ಷಾತ್ ಪರಮೇಶ್ವರನೇ ಜಪಿಸುತ್ತಿದ್ದನು. ರಾಮನಿಗಿಂತ ಮೊದಲೇ 'ರಾಮ’ನ ಹೆಸರು ಇತ್ತು. ಪ್ರಾಚೀನ ಕಾಲದಲ್ಲಿ ಶಿವನನ್ನು 'ರಾಮಾ' ಎಂದು ಕರೆಯುತ್ತಿದ್ದರು. ಇಕ್ವಾಕು ವಂಶದ ಗುರು ವಶಿಷ್ಠರು ಸಪ್ತ ಋಷಿಗಳಲ್ಲಿ ಒಬ್ಬರು. ಸಾವಿರಾರು ವರ್ಷ ಬದುಕಿದ್ದವರು ಎಂದು ಕಾವ್ಯಗಳೇ ಹೇಳುತ್ತವೆ. ವಸಿಷ್ಠರ ನೂರು ಮಕ್ಕಳಲ್ಲಿ ಹಿರಿಯ ಮಗ ಶಕ್ತಿ, ಇವನ ಮಗ ಪರಾ ಶರ, ಪರಾಶರರ ಮಗ ವೇದವ್ಯಾಸರು. ವಶಿಷ್ಠರು ರಾಮನ ವಂಶದವರಿಗೆ ಗುರುವಾಗಿ ಇಕ್ವಾಕು ವಂಶ ನಡೆಸಿದರೆ, ವೇದ ವ್ಯಾಸರು ಮಹಾಭಾರತವನ್ನು ನಡೆಸಿದವರು. ಅಂದರೆ ಈ ವಂಶದವರು ತ್ರೇತಾಯುಗದಿಂದ ದ್ವಾಪರದ ತನಕ ಬಂದಿರುವರು. ರಾಮ- ಲಕ್ಷ್ಮಣಗೆ ವಶಿಷ್ಠರೇ ಹೆಸರಿಟ್ಟರು. ಯುಗ ಯುಗಗಳು ಕಳೆದರೂ ‘ರಾಮ’ ಹೆಸರು ಶಾಶ್ವತವಾಗಿರಲು, ವಿಷ್ಣುವಿನ ಹೆಸರು 'ನಾರಾಯಣ' ದಲ್ಲಿ 'ರಾ- ಇಲ್ಲದಿದ್ದರೆ ನಾಯಣ ಅಂದರೆ ಇಲ್ಲ ಎಂದಾಗುತ್ತದೆ. 'ಶಿವನ' ಓಂ ನಮಃ ಶಿವಾಯದಲ್ಲಿ 'ಮ' ಇಲ್ಲದಿದ್ದರೆ 'ನಾ ಶಿವಾಯ' ಶಿವ ಇಲ್ಲ ಎಂದಾಗುತ್ತದೆ. ನಾರಾಯಣದಲ್ಲಿ 'ರಾ' ಎಂಬ ಬೀಜಾಕ್ಷರ, ನಮಃ ಶಿವಾಯ ದಲ್ಲಿ 'ಮ' ಎಂಬ ಬೀಜಾಕ್ಷರವನ್ನು ಸೇರಿಸಿ 'ರಾಮ' ಎಂಬ ಹೆಸರನ್ನು ಇಟ್ಟರು. ಇದರಿಂದ 'ಶೈವ- ವೈಷ್ಣವರು' ಎಲ್ಲರಿಗೂ ರಾಮ ಪ್ರಿಯನಾದನು. ಇಂಥ ಮಹಿಮೆಯ ರಾಮ ನಾಮದ ಪ್ರಯೋಜನವನ್ನು ಲೆಕ್ಕವಿಲ್ಲದಷ್ಟು ಭಕ್ತರು ಪಡೆದಿದ್ದಾರೆ. ಹನುಮಂತನ ರೋಮ ರೋಮಗಳಲ್ಲೂ ರಾಮ ನಾಮ ತುಂಬಿದೆ. ರಾಮ ತನ್ನ ಅವತಾರ ಮುಗಿಸಿ ವೈಕುಂಠ ಕ್ಕೆ ಹೊರಟಾಗ ಹನುಮಂತನನ್ನು ನೀನು ಬರುವೆಯಾ? ಎಂದು ಕೇಳಿದಾಗ, ಭೂಲೋಕದಲ್ಲಿ ರಾಮನಾಮ ಸ್ಮರಣೆ ಎಲ್ಲಿಯ ತನಕ ನನ್ನ ಕಿವಿಗೆ ಕೇಳುತ್ತದೋ ಅಲ್ಲಿಯತನಕ ನಾನು ಬರುವುದಿಲ್ಲ ಇಲ್ಲೇ ಇರುತ್ತೇನೆ ಎಂದ ಹನುಮಂತ. 'ರಾಮ' ಎಂಬ ಹೆಸರಿನ ಮಹಿಮೆಯೇ ಅಂತದ್ದು. ಸಂತ 'ಕಬೀರ'ರು ಹುಟ್ಟಿನಿಂದ ಯಾವ ಜಾತಿ ‌ಗೊತ್ತಿಲ್ಲ. ನೇಕಾರ ದಂಪತಿಗೆ ಮರದ ಕೆಳಗೆ ದೊರೆತ ಮಗುವಿಗೆ 'ಕಬೀರ' ಎಂದು ಹೆಸರಿಟ್ಟು ಸಾಕಿದರು. ಕಬೀರ ಭಕ್ತಿ ಪಂಥದ ಕವಿ ಆಗಿದ್ದನು. ರಾಮ ಭಕ್ತನಾದ ಕಬೀರ ಕಾಶಿಯಲ್ಲಿ ಇದ್ದನು, ಕಬೀರನ ಗುರುಗಳು ರಾಮಾನಂದರು. ಗುರುಗಳಿಂದ ‘ರಾಮ ನಾಮ’ ಉಪದೇಶ ಪಡೆಯಲು ಕಬೀರ ಬಯಸಿದ ಆ ದಿನಗಳಲ್ಲಿ ದೀಕ್ಷೆ ಅಷ್ಟು ಸುಲಭವಾಗಿ ಕೊಡುವ ಹಾಗೆ ಇರಲಿಲ್ಲ. ಅದರದೇ ಆದ ನಿಯಮಗಳಿದ್ದವು. ಆದರೆ ಕಬೀರನಿಗೆ ಗುರುಗಳಿಂದಲೇ ಉಪದೇಶ ಬೇಗ ಪಡೆಯ ಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಒಂದು ಉಪಾಯ ಮಾಡಿದ “ರಮಾನಂದರು” ಬೆಳಗಿನ ಜಾವವೇ ಗಂಗಾ ನದಿ ಸ್ನಾನಕ್ಕೆ ಬರುವರೆಂದು ತಿಳಿದು, ಅವನು ಅದೇ ಸಮಯಕ್ಕೆ ಹೋಗಿ ನದಿಯ ಮೆಟ್ಟಿಲ ಮೇಲೆ ಮಲಗಿದನು. ಎಂದನಂತೆ ರಮಾನಂದರು ರಾಮನಾಮ ಸ್ಮರಣೆ ಮಾಡುತ್ತಾ ಮೆಟ್ಟಿಲ ಮೇಲೆ ಇಳಿದು ಬರುತ್ತಿದ್ದರು. ಅವರ ಕಾಲಲ್ಲಿ ಪಾದುಕೆ ಇತ್ತು. ಕತ್ತಲಲ್ಲಿ ಕಾಣದೆ ಕಬೀರನ ತಲೆಯ ಮೇಲೆ ತುಳಿದು ಬಿಟ್ಟರು. ತಕ್ಷಣ ಕಬೀರ ಮೇಲೆದ್ದು, ಗುರುಗಳೇ ನನಗೆ ದೀಕ್ಷೆ ಕೊಟ್ಟಿದಿರಿ ಎಂದು ಓಡುತ್ತಾ ಹೋದನು. ಎದುರಿಗೆ ಬಂದವರಿಗೆಲ್ಲ ಗುರುಗಳು ನನಗೆ ದೀಕ್ಷೆ ಕೊಟ್ಟರು ಎಂದು ಹೇಳಿದನು. ಇವನಿಗೆ ಹೇಗೆ ಇಷ್ಟು ಬೇಗ ದೀಕ್ಷೆ ಕೊಟ್ಟರೂ ಎಂದು ಉಳಿದವರಿಗೆಲ್ಲ ಆಶ್ಚರ್ಯ, ಅವರೆಲ್ಲ ಕಬೀರನನ್ನು ಕರೆದುಕೊಂಡು ಬಂದು ಗುರುಗಳ ಎದುರೆ ನಿಲ್ಲಿಸಿ, ಇವನಿಗೆ ರಾಮ ನಾಮ ಉಪದೇಶ ಕೊಟ್ಟಿದ್ದೀರಾ ಎಂದು ಕೇಳಿದರು. ತಕ್ಷಣ, ಗುರುಗಳೇ ನೀವು ನನಗೆ 'ರಾಮ-ನಾಮ'ದ ದೀಕ್ಷೆ ಕೊಟ್ಟಿದ್ದೀರಿ ಅಲ್ಲವೇ? ಎಂದು ಕಬೀರ ಕೇಳಿದ, ಇದನ್ನು ಕೇಳಿದ ರಮಾನಂದರಿಗೆ ಕೋಪ ಬಂದು 'ಅಯ್ಯೋ ರಾಮ್ ರಾಮಾ' ಏನ್ ಹೇಳ್ತಾ ಇರುವೆ ಎಂದಾಗ, ಕಬೀರ ಮತ್ತಷ್ಟು ಸಂತೋಷದಿಂದ ಹೇಳಿದ, ಗುರುಗಳೇ ಆ ದಿನ ಅ ಕತ್ತಲಲ್ಲಿ ಗಂಗಾ ನದಿಯ ದಡದಲ್ಲಿ ನನಗೆ ದೀಕ್ಷೆ ಕೊಟ್ಟಿದ್ದು ಯಾರಿಗೂ ತಿಳಿದಿರಲಿಲ್ಲ. ಈ ದಿನ ಎಲ್ಲರೆದುರಿಗೆ ನೀವು ದೀಕ್ಷೆ ಕೊಟ್ಟಿದ್ದಿರಿ ನಾನೇ ಧನ್ಯ ಎಂದನು. ರಮಾನಂದರ ಅತ್ಯುತ್ತಮ ಶಿಷ್ಯ ಎಂದರೆ ಅದು ನೀನೇ ಎಂದು ಗುರುಗಳು ಎಲ್ಲರ ಎದುರಿಗೆ ಕಬೀರಗೆ ಹೇಳಿದರು. ಭಕ್ತಿ ಪಂಥದ ದಾರಿ ತೋರಿದ ಪ್ರಮುಖರಲ್ಲಿ, ರಮಾನಂದರು, ಸಮರ್ಥ ರಾಮದಾಸರು, ತುಳಸಿದಾಸರು, ಕಬೀರ ದಾಸರು, ಶ್ರೀಧರ ಸ್ವಾಮಿಗಳು, ಗುರು ಗೋಂದಾವಳ ಮಹಾರಾಜರು, ಇನ್ನು ಅನೇಕಾನೇಕ ಭಕ್ತ ಸಂತರು ರಾಮ ನಾಮ ಜಪಿಸಿ ಮುಕ್ತಿ ಪಡೆದರು. “ರಾಮ ನಾಮ” ಜಪಕ್ಕೆ ಅದ್ಭುತವಾದ ಶಕ್ತಿ ಇದೆ. ಬೆಂಕಿಗೆ, ಹೇಗೆ ಸುಡುವ ಶಕ್ತಿ ಇದೆ ಯೋ ಹಾಗೆ, ಆಕಸ್ಮಿಕವಾಗಿ ಮಾಡಿದ “ಪಾಪ” ಗಳನ್ನು ಕಳೆವ ಶಕ್ತಿ ರಾಮನಾಮ ದಲ್ಲಿ ಇದೆ. 'ರಾ' ಎನ್ನಲು ಬಾಯಿ ಕಳೆಯುತ್ತೇವೆ, ಒಳಗಿದ್ದ ಪಾಪ ಹೊರಗೆ ಹೋಗುತ್ತದೆ. 'ಮಾ' ಎಂದು ಹೇಳುವಾಗ 'ತುಟಿ' ಮುಚ್ಚುತ್ತದೆ. ಅಂದರೆ ಹೊರಗೆ ಹೋದ ಪಾಪ ಒಳಗೆ ಮತ್ತೆ ಸೇರುವುದಿಲ್ಲ. ನಂಬಿಕೆ ಇರಬೇಕು. ರಾಮನಾಮದ ಮಹಿಮೆ ಬಲ್ಲವರೇ ಬಲ್ಲರು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - Chud Chud - ShareChat