ಈತ ಗೌತಮ ಬುದ್ಧನ ಪ್ರತಿರೂಪ.
ಇದು RSS ಅಲ್ಲ, ಖುದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದು ಮಾತುಗಳಿವು...
ಈ ಮಾತುಗಳನ್ನು...
ಯಾರೋ ನಮ್ಮಂತ ಜನಸಾಮಾನ್ಯನೋ, ಸಂಘದ ಸಂಚಾಲಕರೋ ಹೇಳಿದ್ದಿದ್ರೆ ಏನೋ ಸುಮ್ನೆ ಬಿಲ್ಡಪ್ ಕೊಡೋಕ್ ಹೇಳ್ತಿದಾರೆ ಅಂತ ಸುಮ್ಮನಾಗಬಹುದಿತ್ತು. ಆದರೆ ಹೇಳಿದ್ದು ಬೇರೆ ಯಾರೋ ಅಲ್ಲ, ಸೈದ್ಧಾಂತಿಕವಾಗಿ ಮತ್ತೊಂದು ಧ್ರುವದಲ್ಲಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವ್ರೇ ಸ್ವತಃ ಈ ಮಾತು ಹೇಳಿದ್ದರು ಅಂದ್ರೆ ಜಸ್ಟ್ ಇಮ್ಯಾಜಿನ್ ಈತನ ವ್ಯಕ್ತಿತ್ವ ಅದೆಷ್ಟು ಸ್ವಚ್ಛ ಹಾಗೂ ಮೇಲ್ಮಟ್ಟದ್ದಾಗಿತ್ತೋ ಅಂತ.
ಅದು 1923ರ ಸಮಯ...
ಅಂಡಮಾನಿನ ಜೈಲಿಂದ ಯರವಾಡ ಜೈಲಿಗೆ ಶಿಫ್ಟ್ ಆಗಿದ್ದ ಸಾವರ್ಕರ್ 1924ರಲ್ಲಿ ಬಿಡುಗಡೆಯಾಗಿ ಹೊರಬಂದರಾದ್ರೂ, ಆ ಸಮಯದಲ್ಲಿ ವಿಧಿಸಿದ್ದ ನಿಬಂಧನೆಗಳಲ್ಲಿ, ಯಾವುದೇ ಕಾರಣಕ್ಕೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತಿಲ್ಲ ಹಾಗೂ ರತ್ನಗಿರಿಯನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬುದೂ ಪ್ರಮುಖವಾಗಿದ್ದ ಕಾರಣ,
ರತ್ನಗಿರಿಯಲ್ಲಿಯೇ ವಾಸ್ತವ್ಯ ಹೂಡಿದ್ದ ಸಾವರ್ಕರ್ ಕೈಗೆತ್ತಿಕೊಂಡಿದ್ದೇ ಅಸ್ಪೃಶ್ಯತಾ ನಿವಾರಣೆಯ ಆಂದೋಲನ. ಆಂದೋಲವನ್ನು ಕೈಗೆತ್ತಿಕೊಂಡದ್ದಷ್ಟೇ ಅಲ್ಲ, ಅದ್ಯಾವ ಪರಿ ಆಂದೋಲನವನ್ನು ಮುನ್ನೆಡೆಸಿದರೆಂದರೆ ಕೇವಲ ಎರಡೇ ವರ್ಷದಲ್ಲಿ ಇಡೀ ರತ್ನಗಿರಿಯನ್ನು ಅಸ್ಪ್ರಶ್ಯತೆಯಿಂದ ಮುಕ್ತ ಮಾಡಿಬಿಟ್ಟಿದ್ದರು ಸಾವರ್ಕರ್. ಅದರ ಅಂಗವಾಗಿ ದೇವಸ್ಥಾನವೊಂದನ್ನೇ ನಿರ್ಮಿಸಿದ ಸಾವರ್ಕರ್ ಅದಕ್ಕಿಟ್ಟ ಹೆಸರೇ “ಪತೀತ ಪಾವನ ದೇವಸ್ಥಾನ”. ಈ ದೇವಸ್ಥಾನದಲ್ಲಿ ಸರ್ವಜಾತಿಯವ್ರಿಗೂ ಮುಕ್ತ ಅವಕಾಶವನ್ನು ಕಲ್ಪಿಸಿದ್ದಷ್ಟೇ ಅಲ್ಲದೆ, ದೇವಸ್ಥಾನದಲ್ಲಿ ಸಹಭೋಜನವನ್ನೂ ಆರಂಭಿಸೋ ಮುಖಾಂತರ ಹೊಸತೊಂದು ಕ್ರಾಂತಿಯನ್ನೇ ಮಾಡಿ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಕ್ಕೇ ಅಂಬೇಡ್ಕರ್ ಹೇಳಿದ್ದು ‘ಸಾವರ್ಕರ್ ಬುದ್ಧನ ಪ್ರತಿರೂಪ' ಅಂತ. ಇಂತಹದ್ದೊಂದು ಆಂದೋಲನ ದೇಶದೆಲ್ಲೆಡೆ ಎಷ್ಟೊಂದು ಪ್ರಶಂಸೆಗೆ ಪಾತ್ರವಾಯ್ತು ಅಂದರೆ...
ಕಳೆದೊಂದು ದಶಕದಿಂದ...
ಕೈಗೆತ್ತಿಕೊಂಡ ಅಷ್ಟೂ ಆಂದೋಲನಗಳು ಅಂದುಕೊಂಡಂತಹ ಯಶಸ್ಸು ತಂದುಕೊಡದೆ ಹತಾಶರಾಗಿದ್ದ ಕಾಂಗ್ರೆಸ್ ಹಾಗೂ ಗಾಂಧೀಜಿ ಇದರಿಂದ ಪ್ರೇರೇಪಿತರಾಗಿ
1933ರಲ್ಲಿ ಅಸ್ಪೃಶ್ಯತೆ ನಿವಾರಣೆಯ ಹೆಸರಲ್ಲಿ ದಲಿತರಿಗೆ ಹರಿಜನ ಎಂಬ ನಾಮಕರಣವನ್ನು ಮಾಡಿದ್ದಲ್ಲದೆ, ಚಳುವಳಿಯ ಅಂಗವಾಗಿ ಯಾವ ಜೈಲಿನಲ್ಲಿ ಸಾವರ್ಕರ್ ಬಂಧಿಯಾಗಿದ್ದರೋ, ಅದೇ ಯರವಾಡ ಜೈಲಿನಲ್ಲೇ ಉಪವಾಸ ಸತ್ಯಾಗ್ರಹವನ್ನೂ ಕೈಗೊಳ್ಳೋ ಮುಖಾಂತರ ಬೇರೊಂದು ಹೆಸರಲ್ಲಿ ಇದೇ ಆಂದೋಲನವನ್ನು ತಾವೂ ಆರಂಭಿಸಿಬಿಟ್ಟಿದ್ದರು.
ಆದರೆ ಅದ್ಯಾಕೋ ಈ ಆಂದೋಲನವೂ ಆಗ ಅಷ್ಟೊಂದು ಯಶಸ್ವಿಯಾಗಲಿಲ್ಲ...
ಹಾಗಂತ...
ನಾನೇನೂ ಇದೂ ಮುಖ್ಯ ಕಾರಣವಾಗಿರಬಹುದು ಸಾವರ್ಕರ್ ಅವರ ವ್ಯಕ್ತಿತ್ವಹರಣದ ಶಡ್ಯಂತ್ರ ಮೊದಲಾಗೋದಕ್ಕೆ ಅಂತೇನೂ ಹೇಳ್ತಿಲ್ಲ.
ಇವತ್ತು ಸಾವರ್ಕರ್ ಹುಟ್ಟುಹಬ್ಬ ಅಂದಾಕ್ಷಣ ಇದೆಲ್ಲಾ ಸುಮ್ನೆ ನೆನಪಾಯ್ತು ಬರ್ಕೊಂಡೆ ಅಷ್ಟೇ ಮತ್ತೇನಿಲ್ಲ.
ಗಾಂಧಿಯದು ಮೇರು ವ್ಯಕ್ತಿತ್ವ ಬಿಡೀ..
ಎಲ್ಲೋ ಒಂದಿಷ್ಟು ಸಣ್ಣಪುಟ್ಟ ನಿದರ್ಶನಗಳನ್ನು ಹೊರತುಪಡಿಸಿದ್ರೆ, ಹೀಗೆಲ್ಲಾ ಚಿಕ್ ಚಿಕ್ ಮ್ಯಾಟ್ರಿಗೆಲ್ಲಾ ಇಗೋ ಹರ್ಟ್ ಮಾಡ್ಕೊಂಡು ಮತ್ತೊಬ್ಬ ಹೋರಾಟಗಾರರನ್ನೆಲ್ಲಾ ಹಣಿಯೋ ಚಿಲ್ರೆ ಕೆಲಸ ಮಾಡೋವ್ರೇನಲ್ಲ.
ಇವತ್ತು ಈ ದಿವ್ಯಚೇತನದ ಹುಟ್ಟು ಹಬ್ಬ.
ಹ್ಯಾಪಿ ಹುಟ್ದಬ್ಬ ಸಾವರ್ಕರ್ ಜೀ...
ಈ ಜಗತ್ತಿರೋವರೆಗೂ,
ನೀವು ಯಾವತ್ತೂ ಜೀವಂತ. ❤
#ಸಾವರ್ಕರ್ ವ್ಯಕ್ತಿಯಲ್ಲವ್ಯಕ್ತಿತ್ವ
#ಸಾವರ್ಕರ್ ಹೆಸರಲ್ಲಉಸಿರು. ❤ Narendra Modi Amit Shah MYogiAdityanath #narendramodisevatrust
#🎥 Motivational ಸ್ಟೇಟಸ್