ಫಾಲೋ
💐Appu creation 💐
@298064140
10,899
ಪೋಸ್ಟ್ಸ್
94,774
ಫಾಲೋವರ್ಸ್
💐Appu creation 💐
71.7K ವೀಕ್ಷಿಸಿದ್ದಾರೆ
23 ಗಂಟೆಗಳ ಹಿಂದೆ
#🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 ಚಿಕ್ಕಬಳ್ಳಾಪುರ : ತನ್ನ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಎಸಗಿದ ವಿಕೃತಿ ಮೆರೆದಿದ್ದ ಮಗನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ತಾಯಿ ಮತ್ತು ತಂದೆ ಜೊತೆ 38 ವರ್ಷದ ಅಪರಾಧಿ ವಾಸಿಸುತ್ತಿದ್ದ.ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು. 2024ರ ಆ.4ರಂದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದ. ಕಿರುಚಾಡಿದರೂ ಬಿಡದೆ ಅವರನ್ನು ಮನೆ ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು.ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ ಅವರು ವಿಚಾರಣೆ ನಡೆಸಿದ್ದರು. ಅಪರಾಧಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 25 ಸಾವಿರ ದಂಡ ಸಹ ವಿಧಿಸಲಾಗಿದೆ. #😞 ಮೂಡ್ ಆಫ್ ಸ್ಟೇಟಸ್
💐Appu creation 💐
19.7K ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
#😭ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ಹೀರೋ ಈಗ ದಿನಗೂಲಿ ಕಾರ್ಮಿಕ!💔 ಸಿನಿಮಾ ಎಲ್ಲರನ್ನು ಕೈಬೀಸಿ ಕರೆಯುತ್ತೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದೇ ಒಂದು ಚಿತ್ರದಿಂದ ಗಮನ ಸೆಳೆದವರು ಬಳಿಕ ಮೂಲೆ ಗುಂಪಾಗಿರುವ ಸಾಕಷ್ಟು ಉದಾಹರಣೆಗಳಿವೆ. ಸಿನಿಮಾ ಎಲ್ಲರಿಗೂ ಅಲ್ಲ ಎನ್ನುವ ಮಾತಿದೆ. ಅದು ನಿಜ ಕೂಡ.ಏಕಾಏಕಿ ಇದೊಂದು ಚಿತ್ರದ ನಟನೆಯಿಂದ ಎಲ್ಲರ ಗಮನ ಸೆಳೆದು ಬಳಿಕ ಮತ್ತೆರಡು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಸಿನಿಮಾ ಸಹವಾಸ ಬಿಟ್ಟು ಈಗ ಹಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ವ್ಯವಸಾಯ ಮಾಡಿಕೊಂಡಿರುವ ನಟ ಮರ ಹೊರುವ ಕಷ್ಟದ ಕೆಲಸಗಳನ್ನು ಮಾಡುತ್ತಾರೆ. ಅಂದ ಹಾಗೆ ಈತ ಮತ್ಯಾರು ಅಲ್ಲ ತಿಥಿ ಚಿತ್ರದ ನಟ ಅಭಿಷೇಕ್ ಹೆಚ್‌. ಎನ್.ಎಲ್ಲದಕ್ಕೂ ಸೈ, ನಾನು ಇಲ್ಲಿ ಏನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಬಂದವರು ಗೆಲ್ಲುತ್ತಾರೆ.ಆ ರೀತಿ ಬಂದವರೆಲ್ಲಾ ಗೆದ್ದಿದ್ದಾರೆ ಅನ್ನುವುದಕ್ಕೆ ಸಾಧ್ಯವಿಲ್ಲ. ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಬೇಕು. ಬರೀ ಅದೃಷ್ಟದಿಂದಲೇ ಇಲ್ಲಿ ಸಾಧನೆ ಶಿಖರ ಏರಿದವರು ಇದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಇಲ್ಲೊಬ್ಬ ನಟ ಕೂಲಿ ಕೆಲಸ ಮಾಡುತ್ತಿದ್ದಾರೆ. ಈತ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು ಎನ್ನುವುದು ಅಷ್ಟೇ ನಿಜ. ಆ ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು.
💐Appu creation 💐
34.4K ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#🚨ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ🚨 ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ, ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಇದೀಗ ಕುಣಿದಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಾ, ತನ್ನದೇ ಭಾರಿ ಹವಾ ಹುಟ್ಟುಹಾಕಿ ಶತ್ರುಗಳ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ.ಹೀಗಿದ್ದಾಗಲೇ ಡೆವಿಲ್ ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗಿ ಅಬ್ಬರಿಸಲು ಸಿದ್ಧವಾಗಿದೆ. ಇಂತಹ ಸಮಯದಲ್ಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಸದ್ಯ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಬ್ಬರಿಸುತ್ತಾ ದೊಡ್ಡ ಸಂಭ್ರಮ ಪಡ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒಂದೇ ಒಂದು ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಾ ಇದ್ದು, ಡೆವಿಲ್ ಸಿನಿಮಾ ಕ್ರೇಜ್ ಕಂಡು ಪರಭಾಷೆ ಸಿನಿಮಾಗಳು ಕೂಡ ಕರ್ನಾಟಕ ಬಿಟ್ಟು ಓಡಿ ಹೋಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಕೂಡ, ನಿದ್ದೆ ಬಿಟ್ಟು ರಾತ್ರಿ & ಹಗಲು ಡೆವಿಲ್ ಸಿನಿಮಾಗಾಗಿ ಕೆಲಸ ಮಾಡುತ್ತಾ ಇದ್ದಾರೆ. ಹೀಗಿದ್ದಾಗಲೇ, ಜೈಲಿಂದ ನಟ ದರ್ಶನ್ ತೂಗುದೀಪ್ ದಿಢೀರ್ ಪರಾರಿ, ನಟ ಸುದೀಪ್ & ಯಶ್ ಸಾಥ್ ಕೊಟ್ಟರಾ...
💐Appu creation 💐
3.9K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#😭ಕನ್ನಡದ ಖ್ಯಾತ ನಿರ್ದೇಶಕ ನಿಧನ 💔😟 ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಎದುರಾಗಿದೆ. ಭರವಸೆಯ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿದ್ದ ಸಂಗೀತ್‌ ಸಾಗರ್‌ ಅವರು ಚಿತ್ರೀಕರಣದ ಸ್ಥಳದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ನಾಳೆ (ಡಿಸೆಂಬರ್ 5) ಸಿನಿಮಾ ಚಿತ್ರೀಕರಣಕ್ಕೆ ತೆರೆ ಬೀಳಬೇಕಿತ್ತು ಎನ್ನುವಾಗಲೇ ಈ ದುರಂತ ಸಂಭವಿಸಿದ್ದು, ಚಿತ್ರತಂಡಕ್ಕೆ ಆಘಾತ ಉಂಟಾಗಿದೆ.ಘಟನೆ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಸಂಗೀತ್ ಸಾಗರ್ ಅವರು ತಮ್ಮ ಮುಂಬರುವ ಸಿನಿಮಾ 'ಪಾತ್ರಧಾರಿ'ಯ (Paatradhari) ಚಿತ್ರೀಕರಣದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರು. ಕಳೆದ 20 ದಿನಗಳಿಂದ ಹರಿಹರಪುರ ಮತ್ತು ತೀರ್ಥಹಳ್ಳಿ ತಾಲೂಕುಗಳ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.ಘಟನೆ ನಡೆದ ದಿನ, ಸಂಗೀತ್ ಸಾಗರ್ ಅವರು ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ದೃಶ್ಯವೊಂದರ ಕುರಿತು ಆಯಕ್ಷನ್ ಹೇಳುತ್ತಿದ್ದರು. ಈ ವೇಳೆಗೆ ಅವರು ತೀವ್ರ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಿತ್ರತಂಡದ ಸದಸ್ಯರು ಅವರನ್ನು ಹತ್ತಿರದ ಕೊಪ್ಪ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿರ್ದೆಶಕ ಸಂಗೀತ್‌ ಸಾಗರ್‌ ವಿಧಿವಶರಾಗಿದ್ದಾರೆ. #😞 ಮೂಡ್ ಆಫ್ ಸ್ಟೇಟಸ್
💐Appu creation 💐
24.5K ವೀಕ್ಷಿಸಿದ್ದಾರೆ
7 ದಿನಗಳ ಹಿಂದೆ
#🏏ಕ್ರಿಕೆಟ್‌'ಗೆ "ಗುಡ್‌ ಬೈ" ಹೇಳಿದ Kohli! BCCIಗೆ ತಲೆನೋವಾಯ್ತು ಕಿಂಗ್‌ ನಿರ್ಧಾರ❌ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಎರಡನೇ ಏಕದಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ, ಕೊಹ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರವು ಈಗ ಕ್ರಿಕೆಟ್ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ.ಡಿಸೆಂಬರ್ 24, 2025 ರಿಂದ ಪ್ರಾರಂಭವಾಗುವ ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ವಾಸ್ತವವಾಗಿ, 16 ವರ್ಷಗಳ ನಂತರ ಕೊಹ್ಲಿ ಈ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಈ ಹಿಂದೆ ವರದಿಗಳಿದ್ದವು.ದೇಶೀಯ ಕ್ರಿಕೆಟ್ ಬಗ್ಗೆ ವಿರಾಟ್ ಕೊಹ್ಲಿ ಅವರ ನಿಲುವು ಈಗ ಬಿಸಿಸಿಐಗೆ ಹೊಸ ಸವಾಲಾಗಿ ಪರಿಣಮಿಸಿದೆ. ಪ್ರಮುಖ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸುವ ಮನಸ್ಥಿತಿಯಲ್ಲಿಲ್ಲ. ಸಾಮಾನ್ಯವಾಗಿ, ಎಲ್ಲಾ ಸ್ವರೂಪಗಳ ರಾಷ್ಟ್ರೀಯ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ಕಡ್ಡಾಯವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕೆಂದು ಬಿಸಿಸಿಐ ಬಯಸುತ್ತದೆ. ಅವರ ಇದರ ಭಾಗವಾಗಿರುವುದರಿಂದ ಯುವ ಆಟಗಾರರಿಗೆ ಸ್ಫೂರ್ತಿಯಾಗಲಿದೆ ಎಂದು ಮಂಡಳಿ ಆಶಿಸುತ್ತದೆ. ಆದರೆ, ವಿರಾಟ್ ಕೊಹ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಲು ನಿರಾಕರಿಸಿರುವುದರಿಂದ, ಭಾಗವಹಿಸುವಿಕೆ ಕಡ್ಡಾಯ ಎಂಬ ನಿಯಮವನ್ನು ಬಿಸಿಸಿಐ ಹೇಗೆ ಜಾರಿಗೆ ತರುತ್ತದೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ವಿರಾಟ್ ಕೊಹ್ಲಿಗೆ ವಿಶೇಷ ವಿನಾಯಿತಿ ನೀಡಲು ಬಿಸಿಸಿಐ ಸಿದ್ಧರಿಲ್ಲ ಎಂದು ಎನ್‌ಡಿಟಿವಿ ವರದಿ ಬಹಿರಂಗಪಡಿಸಿದೆ. ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ ಎಂದು ವರದಿ ಹೇಳುತ್ತದೆ. ರೋಹಿತ್ ಆಡುತ್ತಿರುವಾಗ ವಿರಾಟ್ ಕೊಹ್ಲಿಗೆ ಮಾತ್ರ ವಿಶೇಷ ವಿನಾಯಿತಿ ನೀಡುವುದು ಮಂಡಳಿಯ ನಿಯಮಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಬಿಸಿಸಿಐ ಮೂಲಗಳು ಭಾವಿಸಿವೆ.
See other profiles for amazing content