ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಅಪ್ಡೇಟ್ ಬಂದಿದೆ. ಕೊಲೆ ತನಿಖೆಯ ಭಾಗವಾಗಿ ಇಂದು ಎಫ್ಎಸ್ಎಲ್ ವರದಿ ಬರಲಿದೆ ಎನ್ನಲಾಗಿತ್ತು. ಈ ಸಂಬಂಧ ಈಗ ವರದಿ ಪೊಲೀಸರ ಕೈ ಸೇರಿದ್ದು ಶಾಕಿಂಗ್ ಸತ್ಯವೊಂದು ರಿವೀಲ್ ಆಗಿದೆ.ಕೊಲೆ ತನಿಖೆಯಲ್ಲಿ ಅತಿ ದೊಡ್ಡ ರಹಸ್ಯ ರಿವಿಲ್ ಆಗಿದೆ.ಎಫ್ ಎಸ್ ಎಲ್ ವರದಿ ಬಿಚ್ಚಿಟ್ಟಿದೆ ಭಯಾನಕ ಸತ್ಯವೇನು ಗೊತ್ತಾ? ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳು ಸಿಕ್ಕಿದ್ದು ಪೊಲೀಸರಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ.ಈ ಒಂದು ಎಫ್ಎಸ್ಎಲ್ ವರದಿಯ ಸಾಕ್ಷಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಕಂಟಕವಾಗಲಿದೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ದರ್ಶನ್ ನ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ನಲ್ಲಿ ರಕ್ತದ ಕಲೆ ಕಂಡು ಬಂದಿದೆ.ಪೊಲೀಸರು ಇದನ್ನು ವಶಕ್ಕೆ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದರು. ಎಫ್ ಎಸ್ ಎಲ್ ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡ ಪಟ್ಟಿದೆ.ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದ ಎನ್ನುವುದಕ್ಕೆ ಅತ್ಯಂತ ಮಹತ್ವಪೂರ್ಣ ಸಾಕ್ಷ್ಯ ಇದಾಗಿದೆ. ನ್ಯೂಸ್ 18 ಕನ್ನಡಕ್ಕೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.ಈ ಒಂದು ಕೇಸ್ನಲ್ಲಿ ಬಹಳಷ್ಟು ವರದಿಗಳು ಇನ್ನಷ್ಟೇ ಪೊಲೀಸರ ಕೈ ಸೇರಬೇಕಾಗಿದೆ. ಇವುಗಳು ಸಿಕ್ಕಿದಾಗ ಕೇಸ್ನ ದಿಕ್ಕು ಬದಲಾಗುವ ಅಥವಾ ಪ್ರಕರಣದಲ್ಲಿ ದೊಡ್ಡ ಅಪ್ಡೇಟ್ ಬರುವ ಸಾಧ್ಯತೆಯೂ ಇದೆ. ಆರೋಪಿಗಳ ಡಿಎನ್ಎ ಟೆಸ್ಟ್ ರಿಪೋರ್ಟ್, ಡಿಎನ್ಎ ಟೆಸ್ಟ್ ಸಲುವಾಗಿ ಬ್ಲಡ್ ಸ್ಯಾಂಪಲ್, ಹೇರ್ ಸ್ಯಾಂಪಲ್, ಉಗುರಿನ ಚುರನ್ನ ಸಂಗ್ರಹಿಸಿದ್ದ ವೈದ್ಯರು ಇವೆಲ್ಲದರ ರಿಪೋರ್ಟ್ ಇನ್ನು ಕೊಡಬೇಕಷ್ಟೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆರೋಪಿಗಳ ಡಿಎನ್ಎ ಟೆಸ್ಟ್ ಸ್ಯಾಂಪಲ್ ರಿಪೋರ್ಟ್ಸ್, ಕೃತ್ಯಕ್ಕೆ ಬಳಸಿದ್ದ ವಸ್ತುಗಳ ರಿಪೋರ್ಟ್ಸ್, ವಸ್ತುಗಳ ಮೇಲಿದ್ದ ರಕ್ತದ ಕಲೆಗಳು, ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬ್ಲಡ್ ಸ್ಯಾಂಪಲ್ಸ್, ಆರೋಪಿಗಳು ಕೃತ್ಯ ಎಸಗಿದ್ದ ವೇಳೆ ಧರಿಸಿದ್ದ ಬಟ್ಟೆಗಳ ರಿಪೋರ್ಟ್ ಕೇಳಲಾಗಿತ್ತು.
ಪೊಲೀಸರು ಆರೋಪಿಗಳ ಬಟ್ಟೆಗಳನ್ನ ಸೀಜ್ ಮಾಡಿ ಎಫ್ಎಸ್ಎಲ್ ಗೆ ರವಾನಿಸಿದ್ದರು. ಆರೋಪಿಗಳ ಚಪ್ಪಲಿ, ಶೂಗಳ ರಿಪೋರ್ಟ್ ಕೂಡಾ ಕೇಳಲಾಗಿದೆ. ಕೃತ್ಯದ ವೇಳೆ ಪುಟ್ ಪ್ರಿಂಟ್ ಸಂಗ್ರಹಿಸಲು ಚಪ್ಪಲಿ, ಶೂಗಳ ಸಂಗ್ರಹಿಸಲಾಗಿತ್ತು.ಪಟ್ಟಣಗೆರೆ ಶೆಡ್ ನಲ್ಲಿ ಸಂಗ್ರಹಿಸಿದ ಸಿಸಿಟಿವಿ ಪೂಟೇಜ್ ಸದ್ಯ ಕೇಸ್ನಲ್ಲಿ ದೊಡ್ಡ ಸಾಕ್ಷಿಯಾಗಿದೆ. ಡಿವಿಆರ್ ಸಮೇತ ಇವೆಲ್ಲವನ್ನೂ ಎಫ್ಎಸ್ಎಲ್ ಗೆ ರವಾನಿಸಿದ್ದ ಪೊಲೀಸರು ರಿಪೋರ್ಟ್ಗಾಗಿ ಕಾಯುತ್ತಿದ್ದಾರೆ. ದರ್ಶನ್ ಹಾಗೂ ಪವಿತ್ರಾಗೌಡ ಮನೆಯ ಸಿಸಿಟಿವಿ ರಿಪೋರ್ಟ್ ಕೂಡಾ ಸಿಗಬೇಕಾಗಿದೆ.ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಿಸಿಟಿವಿಗಳ ರಿಪೋರ್ಟ್, ಮೃತದೇಹ ಪತ್ತೆಯಾದ ರಾಜಕಾಲುವೆ ಸಮೀಪದ ಸಿಸಿಟಿವಿ ರಿಪೋರ್ಟ್, ಆರೋಪಿಗಳ ಮೊಬೈಲ್ ಫೋನ್ ರಿಪೋರ್ಟ್ ಬರಲಿದೆ. ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳ ಮೊಬೈಲ್ ಫೋನ್ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ. ಎಫ್ಎಸ್ಎಲ್ ನಲ್ಲಿ ಮೊಬೈಲ್ ಎಕ್ಸ್ಟಾಕ್ಟ್ ಮಾಡಿ ವರದಿ ಕೇಳಿದ ಪೊಲೀಸರು ವರದಿಗಾಗಿ ಸದ್ಯ ಕಾಯುತ್ತಿದ್ದಾರೆ. ಈಗ ಬಂದಿರುವ ಎಫ್ಎಸ್ಎಲ್ ವರದಿಯಂತೂ ದರ್ಶನ್ ವಿರುದ್ಧ ಬಹಳ ಮುಖ್ಯವಾದ ಸಾಕ್ಷಿಯಾಗಿರಲಿದೆ. ಇದರಿಂದ ನಟನಿಗೆ ಮತ್ತಷ್ಟು ಸಮಸ್ಯೆಯಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.
#📢ಆಗಸ್ಟ್ 7ರ ಅಪ್ಡೇಟ್ಸ್ 🗞️