*ಶ್ರೀಕಾಶ್ಯಪ ಶಿಲ್ಪಶಾಸ್ತ್ರದಲ್ಲಿ ಶ್ರೀವೀರಭದ್ರ*
°°°°°°°°°°°°°°°°°°°°°°°°°°°°°°°°°°°°°°°°°°°°°°°°°°
"ಶ್ರೀ ಕಾಶ್ಯಪ ಶಿಲ್ಪ ಶಾಸ್ತ್ರಂ" ಕೃತಿಯು ವೀರಭದ್ರನ ಲಕ್ಷಣಗಳನ್ನು ನಿರೂಪಿಸಿರುವುದು ಹೀಗೆ:
'ಚತುರ್ಭುಜ ಸ್ತ್ರಿನೇತ್ರಶ್ಚ ಜಟಾಮುಕುಟ ಮಂಡಿತ:
ಸರ್ವಾಭರಣ ಸಂಯುಕ್ತ: ಶ್ವೇತವರ್ಣೋ ವೃಷಧ್ವಜ:
ಶೂಲಾಯುಧಶ್ಚಾಪ್ಯಭಯಂ ದಕ್ಷಿಣೇತು ಕರದ್ವಯೇ
ಗದಾ ಚ ವರದಂ ಚಾಪಿ ವಾಮಪಾರ್ಶ್ವ ಕರದ್ವಯೇ
ಶ್ವೇತ ಪದ್ಮಾಸನಾಸೀನ: ವಟವೃಕ್ಷ ಸಮಾಶ್ರಿತ:
ವೀರಭದ್ರಮಿತಿ ಖ್ಯಾತಂ ಬ್ರಾಹ್ಮೀ ರೂಪಂ ತತ: ಶ್ರುಣು'
ಚತುರ್ಭುಜ, ಮೂರು ಕಣ್ಣುಗಳನ್ನುಳ್ಳವ, ಜಟಾಮುಕುಟ, ಸರ್ವಾಭರಣ ಸಂಯುಕ್ತ, ಶ್ವೇತ ವರ್ಣಿ ಹಾಗೂ ವೃಷಭದ್ರಜನಾಗಿದ್ದಾನೆ. ಬಲಹಸ್ತಗಳಲ್ಲಿ ಶೂಲಾಯುಧವಿದೆ; ಅಭಯ ಮುದ್ರೆ ಇದೆ. ಎಡಹಸ್ತದಲ್ಲಿ ಗದೆ, ವರದಿ ಮುದ್ರೆಯಿದೆ; ಬಿಳಿ ಕಮಲದ ಮೇಲೆ ಆಲದ ಮರದ ಕೆಳಗೆ ಆಸೀನ. ಇಂತೆಲ್ಲ ಹೇಳಿರುವಲ್ಲಿ ಅವನ ಶಾಂತಿಃ ಸ್ವರೂಪ ವನ್ನೂ ಹೇಳಿದಂತಿದೆ. ಆದರೆ ಈ ವರ್ಣನೆಯ ಶಿಲ್ಪ ಅಷ್ಟು ಪ್ರಾಚೀನವೆನಿಸುವುದಿಲ್ಲ. ಢಾಲುವಿನಡಿಯ ರುಂಡ ಶಿಲ್ಪವು ಕಾಲಾಂತರದಲ್ಲಿ ಇಡಿಯಾಗಿ ಗದಾರೂಪಕ್ಕೆ ಮಾರ್ಪಟ್ಟಿರುವಂತೆ ಕಾಣುತ್ತದೆ. ಬಿಳಿಯ ಕಮಲದ ಮೇಲಿನ ಆಸೀನತೆ ವಿಷ್ಣು ನೇತ್ರದಿಂದಾದ ಪೂಜೆಯ ಪರಿಷ್ಕರಣ ರೂಪವೆನಿಸುತ್ತದೆ. ದಕ್ಷಯಜ್ಞ ನಾಶದ ನಂತರದಲ್ಲಿ ಶಾಂತರೂಪದಲ್ಲಿ ವೀರಭದ್ರನನ್ನು ಕಾಣಿಸುವ ಕಲ್ಪನೆಯಲ್ಲಿ ಈ ಬಗೆಯ ವರ್ಣನೆಗಳು ಮೂಡಿಬಂದಂತೆ ಕಾಣುತ್ತೇವೆ.
ಈ ಶಾಸ್ತ್ರ ಗ್ರಂಥಗಳಲ್ಲಿನ ವರ್ತನೆಗಳಿಗೆ, ದೇಶೀಯ ಅಥವಾ ಪ್ರಾದೇಶಿಕ ಕಲ್ಪನೆಗಳಿಗೆ ಪೂರಕವಾಗಿ ಮೂಡಿಬಂದಿರುವ ವೀರಭದ್ರನ ವೈವಿಧ್ಯಮಯ ಶಿಲ್ಪಗಳು ಕಾಣಬರುವಲ್ಲಿ, ಜನಸಂಸ್ಕೃತಿಯಲ್ಲಿ ಅವು ಮೈತಳೆದಿರುವ ರೀತಿಗಳು ಗೋಚರವಿರುವಲ್ಲಿ ಅಂಶವಿರುವ ಗುಡಿಗಳ ವೈಲಕ್ಷಣಗಳು ಕಂಡುಬರುವಲ್ಲಿ ಅವುಗಳನ್ನು ಮುಂದಿನ ಉದಾಹರಣೆಗಳಿಂದ ಗಮನಿಸಬಹುದು. ಮುಂದೆ ಪ್ರಸ್ತಾಪಿಸಿರುವ ನೆಲೆಗಳು ವೀರಭದ್ರನಲ್ಲಿ ಕೆಲವಷ್ಟು ಸಾಮಾನ್ಯ ಅಂಶಗಳಿದ್ದರೂ, ಪ್ರತಿಸಂದರ್ಭದಲ್ಲಿಯೂ ಒಂದು ಪ್ರತ್ಯೇಕ ವೈಶಿಷ್ಟ್ಯವಿರುವುದನ್ನು ಹೆಚ್ಚು ಗಮನಿಸಿ ಇಲ್ಲಿ ಮಂಡಿಸಲಾಗಿದೆ.
*ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ*
#🙏ಭಕ್ತಿ ಸ್ಟೇಟಸ್ #🙏ಶ್ರೀ ವೀರಭದ್ರೇಶ್ವರ ಸ್ವಾಮಿ🙏 #🔱 ಭಕ್ತಿ ಲೋಕ ##ಶ್ರೀ ವೀರಭದ್ರೇಶ್ವರ ಪ್ರಸನ್ #ಶ್ರೀ ವೀರಭದ್ರೇಶ್ವರ