ನಮ್ಮ ಸನಾತನ ಹಿಂದೂ ಧರ್ಮ🚩

ರಾಧಾಕೃಷ್ಣ 🦚💙
565 views
5 days ago
#🚩ಸನಾತನ ಧರ್ಮ #ನಮ್ಮ ಸನಾತನ ಹಿಂದೂ ಧರ್ಮ🚩 ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ..? ಮೊದಲಿಗೆ ವಿಭೂತಿಯನ್ನು ಅಥವಾ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುವ ಹಿಂದೆ ಇರುವ ಕಥೆಯನ್ನು ನಿಮಗೆ ಹೇಳುತ್ತೇವೆ. ಇದರ ಹಿಂದೆ ಒಂದು ಪ್ರಮುಖ ಕಾರಣ ಇದೆ, ಅದೇ ಈಶ್ವರ. ಹೌದು, ಸ್ವಾಮಿ ಈಶ್ವರನು ತನ್ನ ಇಡೀ ದೇಹಕ್ಕೆ ಭಸ್ಮದಿಂದ ಲೇಪಿಸಿಕೊಂಡಿರುತ್ತಾನೆ. ಪುರಾಣದ ಪ್ರಕಾರ ಭೃಗು ಎಂಬ ಮಹರ್ಷಿಯು ಇದ್ದ. ಈತನು ಒಮ್ಮೆ ಒಂದು ಘೋರ ತಪಸ್ಸನ್ನು ಮಾಡಿದನು. ಆ ಸಮಯದಲ್ಲಿ ಈತ ಕಾಡಿನಲ್ಲಿ ಹಣ್ಣು ಮತ್ತು ಸೊಪ್ಪುಗಳನ್ನು ಮಾತ್ರ ಸೇವಿಸುತ್ತಿದ್ದನು. ಈ ಭೃಗು ಒಂದು ದಿನ ದರ್ಬೆಯನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತನ್ನ ಕೈಬೆರಳುಗಳನ್ನು ಕತ್ತರಿಸಿಕೊಂಡನು. ಆಗ ಅವನ ಕತ್ತರಿಸಿದ ಬೆರಳಿನಿಂದ ರಕ್ತ ಬರುವ ಬದಲು, ಗಿಡದ ಕಾಂಡ ಕತ್ತರಿಸಿದಾಗ ಬರುವ ರಸದಂತಹ ದ್ರವ ಒಸರತೊಡಗಿತು. ಇದನ್ನು ನೋಡಿದ ಭೃಗುವಿಗೆ ತನ್ನ ಮೇಲೆ ತನಗೆ ಹೆಮ್ಮೆ ಮೂಡಿತು. ಆತ ಈ ಬೆಳವಣಿಗೆಯಿಂದ ಖುಷಿಗೊಂಡನು ಮತ್ತು ಸಹ ಬೆಳೆಸಿಕೊಂಡನು. ಇದನ್ನು ಗ್ರಹಿಸಿದ ಈಶ್ವರನು ಭೃಗುವಿಗೆ ಪಾಠ ಕಲಿಸಲು ಮನಸ್ಸು ಮಾಡಿದನು. ಆದ್ದರಿಂದ ಭೃಗುವಿನ ಬಳಿಗೆ ಮಾರು ವೇಷದಲ್ಲಿ ಮುದುಕನಂತೆ ಇವರ ಮುಂದೆ ಕಾಣಿಸಿಕೊಂಡನು. ಹೀಗೆ ಮುದುಕನಾಗಿ ಬಂದು ಶಿವನು ಭೃಗುವಿಗೆ ಏಕೆ ಸಂತೋಷನಾಗಿದ್ದೀಯಾ ಎಂದು ಕೇಳಿದನು. ಈ ಪ್ರಶ್ನೆಯಿಂದ ಕುಪಿತನಾದ ಭೃಗುವು ಆ ಮುದುಕನಿಗೆ ಹೀಗೆ ಹೇಳಿದನು. ನಾನು ಮಾಡಿದ ತಪಸ್ಸು ಫಲವನ್ನು ನೀಡಿದೆ. ಆದ್ದರಿಂದ ನನ್ನ ರಕ್ತವು ಒಂದು ಪವಿತ್ರ ಮರವನ್ನು ಕತ್ತರಿಸಿದರೆ ಬರುವ ರಸದಂತೆ ಪರಿವರ್ತನೆಯಾಗಿದೆ ಎಂದನು. ಆಗ ಮುದುಕನ ರೂಪದಲ್ಲಿದ್ದ ಶಿವನು ಇದರಲ್ಲಿ ಹೆಚ್ಚುಗಾರಿಕೆ ಏನಿದೆ. ಒಂದು ಗಿಡ ಅಥವಾ ಮರವನ್ನು ಕತ್ತರಿಸಿ ಸುಟ್ಟರೆ ಭಸ್ಮವಾಗುತ್ತದೆ ಎಂದು ತನ್ನ ಬೆರಳನ್ನು ಕತ್ತರಿಸಿಕೊಂಡನು, ಆಗ ಬೆರಳಿನಿಂದ ರಕ್ತ ಬರುವ ಬದಲು, ವಿಭೂತಿ ಬರಲು ಆರಂಭಿಸಿತು. ಆಗ ಭೃಗುವಿಗೆ ಇಲ್ಲಿ ಮುದುಕನ ರೂಪದಲ್ಲಿ ಬಂದಿರುವುದು ಶಿವ ಎಂದು ಅರ್ಥವಾಗಲು ತಡವಾಗಲಿಲ್ಲ. ಆಗ ತನ್ನ ಬಗ್ಗೆ ಇರಿಸಿಕೊಂಡಿದ್ದ ಹೆಮ್ಮೆ ಮತ್ತು ಅಹಂಕಾರವನ್ನು ಆತ ತ್ಯಜಿಸಿದನು. ಅಂದಿನಿಂದ ಭಸ್ಮವು ಸಾಕ್ಷಾತ್ ಶಿವನ ರೂಪವಾಗಿ ಪರಿಗಣಿಸಲ್ಪಟ್ಟಿತು. ಪವಿತ್ರ ವಸ್ತುಗಳಲ್ಲಿ ವಿಭೂತಿಗೂ ಸ್ಥಾನ :- ಹಿಂದೂ ಧರ್ಮದಲ್ಲಿ ಶಿವನಿಗೆ ಸಂಬಂಧಿಸಿದ ಪವಿತ್ರ ವಸ್ತುಗಳಲ್ಲಿ ಇದನ್ನು ಸಹ ಒಂದಾಗಿ ಪರಿಗಣಿಸಲಾಯಿತು. ಪ್ರತಿದಿನ ನಾವು ಈ ಭಸ್ಮವನ್ನು ಶಿವನ ಸ್ವರೂಪವಾಗಿ, ನಕಾರಾತ್ಮಕ ಅಂಶಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಬಳಸುತ್ತೇವೆ. ಈಗ ನಿಮಗೆ ಅರ್ಥವಾಯಿತಲ್ಲವೇ, ನಾವು ಏಕೆ ವಿಭೂತಿಯನ್ನು ಧರಿಸುತ್ತೇವೆ ಎಂದು. ****** ವಿಭೂತಿ, ಭಸ್ಮ..! ವಿಭೂತಿಯನ್ನು ಆಕಳ ಸೆಗಣಿಯಿಂದಲೇ ತಯಾರಿಸಬೇಕಾಗುತ್ತದೆ. ಆಕಳ ಸೆಗಣಿಯನ್ನೇ ಏಕೆ ಆಯ್ಕೆ ಮಾಡಿಕೊಂಡರು? ಅಮೆರಿಕದವರು ಆಕಳ ಸೆಗಣಿ ಹಾಗೂ ಮೂತ್ರದಲ್ಲಿ ಇರುವ ಕ್ರಮಿನಾಶಕ ಶಕ್ತಿ ಅಥವಾ ರೋಗಾಣುವನ್ನು ಕೊಲ್ಲುವಂಥ ಶಕ್ತಿ ಬೇರೆ ಯಾವ ಔಷಧದಲ್ಲಿ ಇರುವುದಿಲ್ಲವೆಂದು ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ಗಬ್ಬಾದ ಆಕಳ ಅಥವಾ ಕರು ಹಾಕಿದ ಆಕಳುಗಳಾಗಿರಬೇಕೆಂದು ಸೂಚಿಸಿದ್ದಾರೆ. ಏಕೆಂದರೆ ಇಂಥ ಆಕಳಿನ ಸೆಗಣಿಯಲ್ಲಿ, ‘ಲೆಕ್ಟೋಸ್’ ಎಂಬ ಔಷಧಿ ಗುಣ ಹೆಚ್ಚಾಗಿರುತ್ತದೆಂದೂ (ಆದರೆ ಬರಡು ಆಕಳು ಇಲ್ಲವೆ ವಯಸ್ಸಾದ ಆಕಳ ಸೆಗಣಿಯನ್ನು ಉಪಯೋಗಿಸಬಾರದೆಂದು) ಸೂಚಿಸಿದ್ದಾರೆ. ಇಂಥ ಆಕಳ ಸೆಗಣಿಯಿಂದ ಹಾಗೂ ಮೂತ್ರದಿಂದ ತಯಾರಿಸಿದ ಬಿಭೂತಿಯನ್ನೆ ನಾವು ಪೂಜೆಯ ವೇಳೆಯಲ್ಲಿ ಹೊಟ್ಟೆ, ಎದೆ, ಬೆನ್ನು, ಕೈ ಹಾಗೂ ಮುಖಗಳಲ್ಲಿ ಲೇಪನಮಾಡುತ್ತೇವೆ ನಂತರ ಧರಿಸಕೊಳ್ಳುತ್ತೇವೆ. ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯ ಪ್ರಕಾರ ಮನುಷ್ಯನ ಉಸಿರಾಟದಲ್ಲಿ ಹೊಟ್ಟೆ, ಎದೆ ಮತ್ತು ಬೆನ್ನಿನ ಚರ್ಮಗಳು ವಿಶೇಷವಾಗಿ ಉಸಿರಾಡಿಸುತ್ತವೆಂದು (ಶೇಕಡ 2%) ಆಕ್ಸಿಜನ್ ತೆಗೆದುಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಹೊರಹಾಕುತ್ತವೆಂದು ಕಂಡುಕೊಂಡಿದ್ದಾರೆ. ಆದರೆ ನಾವು ಮೂಗಿನಿಂದ ಉಸಿರಾಡಿಸುವಾಗ ವಾತಾವರಣದಲ್ಲಿಯ ಭಯಾನಕ ರೋಗಾಣುಗಳು ಒಳಕ್ಕೆ ಹೊಗಲಾರವು. ಕಾರಣ ಮೂಗಿನಲ್ಲಿ ಕೂದಲುಗಳು ಜಿಗುಟಾದ ಪದಾರ್ಥವು ಹಾಗೂ ಶ್ವಾಸನಾಳಗಳಲ್ಲಿ ಸಣ್ಣ ಸಣ್ಣ ರೋಮಗಳಿರುವುದರಿಂದ ಅಲ್ಲಿ ರೋಗಾಣುಗಳನ್ನು ತಡೆಯುವ ಸಾಮಥ್ರ್ಯವಿದೆ. ಆದರೆ ಹೊಟ್ಟೆ, ಬೆನ್ನಿನ ಚರ್ಮಗಳು ವಿಶೇಷವಾಗಿ ಉರಿರಾಡಿಸುವುದರಿಂದ ವಾತಾವರಣದಲ್ಲಿಯ ರೋಗಾಣುಗಳು ಶರೀರವನ್ನು ಪ್ರವೇಶಿಸಬಹುದು. ಹೀಗಾಗಬಾರದೆಂದೇ ಇಂಥ ಕ್ರಿಮಿನಾಶಕ ವಿಭೂತಿಯನತನು ಧರಿಸಲು ಸೂಚಿಸಿದ್ದಾರೆ. ವಿಭೂತಿಯನ್ನು ದೇಹದ ಅಂಗಾಂಗಗಳಿಗೆ ಧರಿಸುವ ಅಭ್ಯಾಸ ಸಾವಿರಾರು ವರ್ಷಗಳಿಂದ ಇದೆ. ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು, ಧರಿಸುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಈ ಭಸ್ಮದಲ್ಲಿ ಆಡಗಿರುವ ಔಷಧದ ಗುಣ. ವಿಭೂತಿಯಲ್ಲಿರುವ ವಿಶೇಷ ಗುಣವೆಂದರೆ, ದೇಹದ ಉಷ್ಣಾಂಶವನ್ನು ಹೊರಕ್ಕೆ ಬಿಡುವುದಿಲ್ಲ. ಅಂತೆಯೇ ಹೊರಗಿನ ತೇವಾಂಶ ದೇಹದೊಳಕ್ಕೆ ಪ್ರವೇಶದಂತೆ ತಡೆಗಟ್ಟುತ್ತದೆ. ರಕ್ತ ಹೆಪ್ಪು ಗಟ್ಟುವಂತಹ ಚಳಿಯಲ್ಲೂ ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಆದ ಕಾರಣವೇ ಚಳಿ ಪ್ರದೇಶದಲ್ಲಿ ವಾಸಿಸುವ ಸನ್ಯಾಸಿಗಳು ಅತಿ ಕಡಿಮೆ ಬಟ್ಟೆ, ಅಥವಾ ಬಟ್ಟೆಯೇ ಇಲ್ಲದಿದ್ದರೂ ಮೈಗೆಲ್ಲಾ ವಿಭೂತಿ ಲೇಪನ ಮಾಡಿರುತ್ತಾರೆ. ವಿಭೂತಿಯನ್ನು ಹಣೆಯ ಮೇಲೆ, ಕುತ್ತಿಗೆಯಲ್ಲಿ, ಕಿವಿಯ ಹಿಂದೆ, ಭುಜಗಳು, ಮೊಳಕೈ, ಮುಂಗೈ, ಕಾಲಿನ ಮಂಡಿ, ಪಾದ ಮುತಾದ ಭಾಗಗಳಲ್ಲಿ ಧರಿಸುವುದು, ಕಾರಣವೇನೆಂದರೆ, ದೇಹದ ಈ ಭಾಗದಲ್ಲಿರುವ ಕೀಲುಗಳಲ್ಲಿ ಶೀತದಿಂದ ಕೊಬ್ಬು ಹೆಪ್ಪುಗಟ್ಟಿ ತೊಂದರೆಯಾಗದಂತೆ ದೇಹದಲ್ಲಿ ಉಷ್ಣತೆಯನ್ನು ತಡೆಗಟ್ಟಿ ಸಹಕರಿಸುತ್ತದೆ. ಹಣೆ, ಕಿವಿ, ಕುತ್ತಿಗೆಗಳಲ್ಲಿ ಧರಿಸುವುದರಿಂದ ಹೊರಗಿನ ಗಾಳಿಯಲ್ಲಿರುವ ತೇವಾಂಶ ದೇಹದೊಳಕ್ಕೆ ಪ್ರವೇಸಿಸದಂತೆ ರಕ್ಷಿಸುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ ಅಂತಿಮ ಅವಸ್ಥೆ ತಲುಪಿದಾಗ ಅಂಗಾಲು ಮತ್ತು ಅಂಗೈಗಳಿಗೆ ’ವಿಭೂತಿ’ಯನ್ನು ಉಜ್ಜುವ ಕ್ರಮವಿದೆ. ವಿಭೂತಿಯನ್ನು ಕೆಲವು ಕಾಯಿಲೆಗಳಿಗೆ ಔಷಧವಾಗಿಯು ಬಳಸುತ್ತಾರೆ. ಉತ್ತಮವಾದ ಭಸ್ಮವನ್ನು ತಯಾರಿಸಲು ಕೆಲವು ನಿಯಮಗಳಿವೆ. ಆದರೆ ಈಗಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ಉತ್ತಮ ವಿಭೂತಿಯನ್ನು ಕೊಂಡು ಧರಿಸಬೇಕು. ಶ್ರೀ ವಿಭೂತಿ ರುದ್ರಾಕ್ಷಿಯೇ ಭಕ್ತಿ ಮುಕ್ತಿಗೆ ಸಾಧನವೋ ಎನ್ನ ತಂದೆ ಶಿವಶಿವಾ ಎಂಬ ಮಂತ್ರ ಎನಗಮೃತಾರೋಗಣೇಯೋ ಎನ್ನ ತಂದೆ ಕೂಡಲ ಸಂಗಮದೇವಾ, ನಿಮ್ಮ ನಾಮದ ರುಚಿ ತುಂಬಿತೋ ಎನ್ನ ತನುವ. — ಬಸವಣ್ಣನವರು ಧರ್ಮದಲ್ಲಿ ಪೂಜ್ಯ ವಸ್ತುಗಳನ್ನು ಆರಾಧಿಸಲಿಕ್ಕೆ ಪೂಜಾ ಸಾಧನಗಳಿರುತ್ತವೆ ವಿಭೂತಿ-ರುದ್ರಾಕ್ಷಿ-ಮಂತ್ರ ಅಂತಹ ಮುಕ್ತಿಯ ಸಾಧನಗಳು. “ಶಿವಶಿವಾ” ಎಂಬ ಮಂತ್ರ ಅಮೃತದಷ್ಟು ರುಚಿ ; ಪರಮಾತ್ಮಾ ನಿನ್ನ ಪವಿತ್ರ ನಾಮದ ರುಚಿ ನನ್ನ ಸರ್ವಾಂಗವನ್ನು ತುಂಬಿದೆ. ನೀರಿಂಗೆ ನೈದಿಲೆಯೆ ಶೃಂಗಾರ ; ಸಮುದ್ರಕ್ಕೆ ತೆರೆಯೆ ಶೃಂಗಾರ ; ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ; ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. — ಬಸವಣ್ಣನವರು ವಿಶಾಲವಾದ ಹರವಿಕೊಂಡು ನಿಂತ ನೀರು ನೈದಿಲೆಯಿಂದ ಹೆಚ್ಚು ಸುಂದರವಾಗಿ ಕಾಣುವಂತೆ ಸಮುದ್ರವು ತೆರೆಗಳಿಂದ ಚೆಲುವಾಗಿ ಕಾಣುವಂತೆ, ಸ್ತ್ರೀಗೆ ಗುಣವೇ ಸೌಂದರ್ಯವನ್ನು ಹೆಚ್ಚಿಸುವ ಅಂಶ, ಆಕಾಶದ ಚೆಲುವು ಚಂದ್ರಮನಿಂದ ವೃದ್ಧಿಗೊಳ್ಳುವಂತೆ, ಶರಣರ ಚೆಲುವು ನೊಸಲ ವಿಭೂತಿಯಿಂದ ಹೆಚ್ಚುತ್ತದೆ. ಇಲ್ಲವಾದರೆ ಆ ಹಣೆ ಬೋಳು ಬೋಳಾಗಿ ಕಾಣುತ್ತದೆ ಬಸವ ಬಸವಾ ಎಂದು ಭಸಿತಮಂ ಧರಿಸಿದರೆ ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು ಭಸಿತಮಂ ಧರಿಸಿ ಬಯಲಾದರಯ್ಯ ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ ಬಸವಾಕ್ಷರತ್ರಯಗಳೆಂದು ಮುದದಿ ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ ಬಸವ ಬಸವಾ ಎಂದು ಸಂಬಂಧಿಸುವೆನು ದುರುಳ ಕರಣಂಗಳೆಂಬ ಬೆರಣಿಗಳನುರುಹಿದ ಪರಮಚಿದ್ಭಸಿತವೆಂದರಿದು ನಾನು ಹರಬಸವ ಗುರುಬಸವ ಚರಬಸವ ಎಂದೆನುತ ಶಿರವಾದಿ ಚರಣಾಂತ್ಯದೊಳು ಧರಿಸುವೆ ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ ಸ್ನಾನಧೂಳನ ಧಾರಣಗಳಿಂದ ಹೀನ ಮಾನವರಿದರ ಜ್ಞಾನವಿಲ್ಲದೆ ಭವದ, ಕಾನನದೊಳಗೆ ತಾವು ಬೀಳುತಿಹರು ತ್ರಿನಯನ ಮಹಾಂತೇಶ ದಣಿ ಬಸವರಾಜನ ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ ಒಣಗುವವು ದುರಿತಂಗಳೆಂಬ ಕುಜವು. – ಬಾಲ ಲೀಲಾ ಮಹಾಂತ ಶಿವಯೋಗಿಗಳು. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ರಾಧಾಕೃಷ್ಣ 🦚💙
840 views
5 months ago
#ನಮ್ಮ ಸನಾತನ ಹಿಂದೂ ಧರ್ಮ🚩 ***📖“ವಿಶಾಲ ಧರ್ಮವೇ ಹಿಂದೂ ಧರ್ಮ”📖*** 01🕊️,ದಿನಕ್ಕೆ ಇಷ್ಟು ಬಾರಿ, ವಾರಕ್ಕೆ ಇಷ್ಟು ಬಾರಿ, ತಿಂಗಳಿಗೆ ಇಷ್ಟು ಬಾರಿ ಕಡ್ಡಾಯವಾಗಿ ದೇವಸ್ಥಾನಕ್ಕೆ ಹೋಗಬೇಕು ಎಂಬ ನಿಯಮಗಳನ್ನು ಹಾಕದ ಧರ್ಮವೇ ಹಿಂದೂ ಧರ್ಮ, 02🕊️,ಜೀವನಕಾಲದಲ್ಲಿ ಕಡ್ಡಾಯವಾಗಿ ಒಮ್ಮೆಯಾದರೂ ಕಾಶಿ ಅಥವಾ ರಾಮೇಶ್ವರಕ್ಕೆ ಹೋಗಲೇಬೇಕು ಎಂಬ ನಿಯಮಗಳನ್ನು ಹಾಕದ ಧರ್ಮವೇ ಹಿಂದೂ ಧರ್ಮ, 03🕊️,ಹಿಂದೂ ಧರ್ಮಗ್ರಂಥಗಳ ಪ್ರಕಾರವೇ ಜೀವನ ನಡೆಸಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸದ ಧರ್ಮವೇ ಹಿಂದೂ ಧರ್ಮ, 04🕊️,ಹಿಂದೂ ಧರ್ಮಕ್ಕೆ ವಿಶೇಷವಾದ ಒಬ್ಬೇ ಒಬ್ಬ ಧಾರ್ಮಿಕ ನಾಯಕ {ಮತಪೆದ್ದ}ಇಲ್ಲ. ಇದು ಸನಾತನ{ ಹಿಂದೂ } ಧರ್ಮ, 05🕊️,ಋಷಿಗಳು, ಸನ್ಯಾಸಿಗಳು, ಸಾಧುಗಳು, ಮಠಾಧಿಪತಿಗಳು ಈ ಧರ್ಮದ ಮೂಲ ಸ್ತಂಭಗಳು, 06🕊️,ಹಿಂದೂಗಳು ಕೆಳಗಿನವನ್ನೂ ಸಹ ಭಗವತ್ಸ್ವರರೂಪಾಗೈ ಆರಾಧಿಸುತ್ತಾರೆ:- 07🌳,ವೃಕ್ಷಗಳು ದೈವಸ್ವರೂಪಗಳು 08🌫️,ಕಲ್ಲುಗಳು–ಬಂಡೆಗಳು ದೈವಸ್ವರೂಪಗಳು 09⛈️,ನೀರು {ಗಂಗಾ} ದೈವಸ್ವರೂಪ 10💦,ಗಾಳಿ ದೈವಸ್ವರೂಪ 11🐒,ವಾನರಗಳು {ಕೋತಿಗಳು} ದೈವಸ್ವರೂಪಗಳು, 12🐕,ನಾಯಿಗಳು {ಭೈರವ ರೂಪ}ದೈವಸ್ವರೂಪಗಳು 13🦛,ಹಂದಿಗಳು {ವರಾಹ ಅವತಾರ}ದೈವಸ್ವರೂಪಗಳು, 14🤔,ನೀವೂ ದೈವಸ್ವರೂಪವೇ-ನಾನೂ ದೈವಸ್ವರೂಪವೇ, 15👀,ಕಣ್ಣಿಗೆ ಕಾಣುವ ಎಲ್ಲವೂ {ಚಕ್ಷುಗೋಚರವಾದ ಎಲ್ಲವೂ}ದೈವಸ್ವರೂಪವೇ, 16📖,ಚತುರ್ವೇದಗಳು, A, ನಾಲ್ಕು ಉಪವೇದಗಳು, B,ಎರಡು ಇತಿಹಾಸಗಳು, C, ಹದಿನೆಂಟು ಪುರಾಣಗಳು, D,ಹದಿನೆಂಟು ಉಪಪುರಾಣಗಳು, E,ಆರು ಶಾಸ್ತ್ರಗಳು, F,ಹದಿನೆಂಟು ಸ್ಮೃತಿಗಳು ಮತ್ತು 1200ಕ್ಕೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಒಳಗೊಂಡಿರುವ ವಿಶಾಲ ಧರ್ಮವೇ ಹಿಂದೂ ಧರ್ಮ, 09,ನಮ್ಮ ಧಾರ್ಮಿಕ ಗ್ರಂಥಗಳು ನಮಗೆ ಬೋಧಿಸುವ ವಿಶಿಷ್ಟ ಧರ್ಮಗಳು: 📖,ಕರ್ಮಗಳ ಬಗ್ಗೆ ತಿಳಿಯಲು→ವೇದಗಳು 🤔,ಸಮಸ್ತ ಜ್ಞಾನ ಪಡೆಯಲು → ಉಪನಿಷತ್ತುಗಳು 👩‍🦳,ಪರಸ್ತ್ರೀ ವ್ಯಾಮೋಹ ದೂರವಾಗಲು → ರಾಮಾಯಣ 🇮🇳,ರಾಜಕೀಯ ಆಸೆ, ಪದವಿ ವ್ಯಾಮೋಹ ದೂರವಾಗಲು → ಮಹಾಭಾರತ 🕉️,ಭಗವಂತನ ತತ್ತ್ವ ತಿಳಿಯಲು → ಭಾಗವತ 🦧,ಉತ್ತಮ ಆಡಳಿತಕ್ಕೆ → ಕೌಟಿಲ್ಯನ ಅರ್ಥಶಾಸ್ತ್ರ 👥,ಉತ್ತಮ ದಾಂಪತ್ಯ ಜೀವನಕ್ಕೆ→ವಾತ್ಸ್ಯಾಯನ ಕಾಮಶಾಸ್ತ್ರ, 🧑‍🦽,ಉತ್ತಮ ಆರೋಗ್ಯಕ್ಕೆ → ಆಯುರ್ವೇದ 😇,ಬುದ್ಧಿವಿಕಾಸಕ್ಕೆ → ವೇದ ಗಣಿತ 🧎‍♂️,ದೈಹಿಕ ಆರೋಗ್ಯ ಮತ್ತು ದೇಹಸೌಷ್ಠವಕ್ಕೆ → ಪತಂಜಲಿ ಯೋಗಶಾಸ್ತ್ರ 🏡,ಮನೆ/ಭವನ ನಿರ್ಮಾಣಕ್ಕೆ → ವಾಸ್ತುಶಾಸ್ತ್ರ 🪐,ಗ್ರಹ-ನಕ್ಷತ್ರ ಜ್ಞಾನಕ್ಕೆ → ಖಗೋಳ ಶಾಸ್ತ್ರ 10, 📖,ಯಾರನ್ನೂ ಬಲವಂತವಾಗಿ ಮತಾಂತರ ಮಾಡುವ ಪ್ರಯತ್ನ ಮಾಡದ ಧರ್ಮವೇ ಹಿಂದೂ ಧರ್ಮ. 11🍚,ಆಹಾರ ಪದ್ಧತಿಗಳಲ್ಲೂ ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಇರಬಹುದು, {ಶಾಕಾಹಾರ ಅಥವಾ ಮಾಂಸಾಹಾರ-ಯಾರಿಗೆ ಇಷ್ಟವೋ ಅದನ್ನು ಅನುಸರಿಸಬಹುದು} 12📖,ಎಲ್ಲಾ ಮತಗಳನ್ನು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಧರ್ಮವೇ ಹಿಂದೂ ಧರ್ಮ, 13🤔,ಮೋಕ್ಷಕ್ಕೆ ದಾರಿ ತೋರಿಸುವ ಧರ್ಮವೇ ಹಿಂದೂ ಧರ್ಮ, 14📖,ಎಲ್ಲಾ ಧರ್ಮಗಳನ್ನು ಗೌರವಿಸುವ ಧರ್ಮವೇ ಹಿಂದೂ ಧರ್ಮ, 15🕊️,ಪರಮತ ದೂಷಣೆ ಮಾಡದ ಧರ್ಮವೇ ಹಿಂದೂ ಧರ್ಮ, 👏,ನಾವುಹಿಂದುವಾಗಿ ಹುಟ್ಟಿದ್ದೇವೆ, 👏,ಹಿಂದುವಾಗಿ ಬದುಕೋಣ, 👏,ಹಿಂದುವಾಗಿ ಮರಣಿಸೋಣ, *🇮🇳,ಭಾರತ್ ಮಾತಾ ಕೀ ಜೈ🇮🇳👏🚩* *🚩 ಭಗವಂತ ಶ್ರೀ ಪರಶುರಾಮ🚩* ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏