🙏 ಜೈ ಶ್ರೀ ರಾಮ🚩

ರಾಧಾಕೃಷ್ಣ 🦚💙
1.1K ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#🕉️ ಜೈ ಶ್ರೀ ರಾಮ🙏 #🙏🎵ಶ್ಲೋಕಗಳು!! ಶ್ರೀರಾಮರಕ್ಷಾಸ್ತೋತ್ರಮ್ ಶ್ರೀರಾಮರಕ್ಷಾಸ್ತೋತ್ರಮ್ ಪ್ರಸ್ತಾವನೆ : ಶ್ರೀ ರಾಮರಕ್ಷಾಸ್ತೋತ್ರವು ಶ್ರೀರಾಮಚಂದ್ರನ ಗುಣಗಾನದ ಪ್ರಾರ್ಥನಾ ರೂಪದಲ್ಲಿ ಶ್ರೀರಾಮಚಂದ್ರನ ಸಂಪೂರ್ಣ ರಕ್ಷಣೆಯನ್ನು ಬೇಡುವಂತೆ ರಚಿಸಿರುವ ಅತ್ಯಂತ ಶಕ್ತಿಶಾಲಿ ದೈವೀ ಸ್ತೋತ್ರ. ವೇದಕಾಲದ ಮಹರ್ಷಿ ಬುಧಕೌಶಿಕರಿಗೆ ಕನಸಿನಲ್ಲಿ ಭಗವಾನ್ ಶಂಕರನು ಕಾಣಿಸಿಕೊಂಡು ಈ ಸ್ತೋತ್ರವನ್ನು ರಚಿಸುವಂತೆ ಆಜ್ಞಾಪಿಸಿದನು. ಕನಸಿನಿಂದ ಹೊರಬಂದ ಬುಧಕೌಶಿಕರು ಬ್ರಾಹ್ಮೀ ಮುಹೂರ್ತದಲ್ಲೇ ಈ ಸ್ತೋತ್ರವನ್ನು ರಚಿಸಿದರು. ಋಗ್ವೇದದಲ್ಲಿ ಈ ಸ್ತೋತ್ರದ ಬಗೆಗೆ ಉಲ್ಲೇಖವಿದೆ. "ರಾಮ ರಕ್ಷಾ " ಎಂದರೆ "ರಾಮನಿಂದ ಸಂಪೂರ್ಣ ರಕ್ಷಣೆ (ನಮಗೆ) " ಎಂದು. ಈ ಸ್ತೋತ್ರವನ್ನು " ರಾಮ ಕವಚ ಸ್ತೋತ್ರ " ಎಂದೂ ಕರೆಯಲ್ಪಡುತ್ತದೆ. ಶ್ರೀರಾಮನು ಭಕ್ತರನ್ನು ಸಂಪೂರ್ಣವಾಗಿ ಕವಚದ ಮೂಲಕ ರಕ್ಷಿಸುವನು. ಇದು ಶ್ರೀರಾಮನ ಅಸ್ತ್ರ - " ವಜ್ರಪಂಜರ" (ವಜ್ರಪಂಜರನಾಮೇದಂ). ಶ್ರೀ ರಾಮರಕ್ಷಾಸ್ತೋತ್ರ ಹಾಗೂ ಹನೂಮಾನ್ ಚಾಲೀಸ ಸ್ತೋತ್ರಗಳೆರಡನ್ನೂ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳೆಂದು ಭಕ್ತರ ನಂಬಿಕೆ. ಚೈತ್ರಮಾಸದ ನವರಾತ್ರೆಗಳ ದಿನಗಳಲ್ಲಿ - ಯುಗಾದಿ ದಿನದಿಂದ ಪ್ರಾರಂಭಗೊಂಡು ಶ್ರೀರಾಮ ನವಮಿಯ ವರೆಗಿನ ಒಂಬತ್ತು ದಿನಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ರಾಮರಕ್ಷಾ ಸ್ತೋತ್ರವನ್ನು ಹನ್ನೆರಡು ಬಾರಿ ಪ್ರತಿನಿತ್ಯವೂ ಪಠಿಸಿದವರಿಗೆ ಶ್ರೀರಾಮಚಂದ್ರನಿಂದ ಸಂಪೂರ್ಣ ರಕ್ಷಣೆ ಹಾಗೂ ಸಕಲ ಇಷ್ಟಾರ್ಥಗಳೂ ಈಡೇರಿ ಅಭ್ಯುದಯವನ್ನು ಹೊಂದಿ ಕಡೆಗೆ ಮುಕ್ತಿ ದೊರಕುವುದೆಂಬುದಾಗಿ ಫಲಶೃತಿಯು ತಿಳಿಯಪಡಿಸೂತ್ತದೆ. ಇದೇ ರೀತಿ ಅಶ್ವಿನಿ ನವರಾತ್ರೆಯ ದಿನಗಳಂದೂ ಸ್ತೋತ್ರ ಪಠಣೆಗೆ ಸೂಕ್ತ ಸಮಯ. ಪ್ರತಿನಿತ್ಯವೂ ಒಮ್ಮೆಯಾದರೂ ಈ ಸ್ತೋತ್ರವನ್ನು ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿಗಳು ಉಂಟಾಗುವುದು. ಶ್ರೀರಾಮರಕ್ಷಾ ಸ್ತೋತ್ರದ ಕೆಲವು ವೈಶಿಷ್ಟ್ಯತೆಗಳು : 1. ಶ್ರೀ ರಾಮ ರಕ್ಷಾಸ್ತೋತ್ರ ಮತ್ತು ಋಗ್ವೇದ : ಶ್ರೀರಾಮನು ವೇದಗಳಲ್ಲಿನ ಪುರುಷ (ಅತ್ಯಂತ ಮಹಾನ್ ವ್ಯಕ್ತಿತ್ವ) ಮತ್ತು ಉಪನಿಷತ್ತಿನಲ್ಲಿ ವರ್ಣಿಸಿರುವ ಬ್ರಹ್ಮನ್ (ಅತ್ಯುನ್ನತ ಪರಿಪೂರ್ಣ ಅಸ್ತಿತ್ವ). ಶ್ರೀರಾಮನನ್ನು ಪುರುಷ, ವಿಷ್ಣು , ಇಂದ್ರ (ವಿಶ್ವದಲ್ಲಿನ ಪರಮೋಚ್ಚ ಚಕ್ರವರ್ತಿ ಎಂಬುದಾಗಿ) ಸಮಸ್ತ ವೇದ ಹಾಗೂ ಉಪನಿಷತ್ತುಗಳಲ್ಲಿ ಹೊಗಳಲಾಗಿದೆ. ಯ ಇಮೆ ರೋದಸೀ ಉಭೇ ಅಹಮಿಂದ್ರಮ್ ಅತುಷ್ಟವಮ್ | ವಿಶ್ವಾಮಿತ್ರಸ್ಯ ರಕ್ಷತಿ ಬ್ರಹ್ಮೇಂದ್ರಂ ಭಾರತಂ ಜನಮ್ || ( ಋಗ್ವೇದ 3.53.12 ) ಹೇ ಮಾನವರೇ ! ವಿಶ್ವಾಮಿತ್ರನಾದ ನಾನು ಶ್ರೀರಾಮರಕ್ಷಾ ಸ್ತೋತ್ರದ ಮೂಲಕ ಭಗವಾನ್ ಶ್ರೀರಾಮಚಂದ್ರನನ್ನು ( ಇಂದ್ರ ) ಹೊಗಳಿ ಸ್ತುತಿಸಿರುವೆ. ಆ ರಾಮನು ( ಇಂದ್ರ ) ಬ್ರಹ್ಮನು, ಭೂಲೋಕ ಹಾಗೂ ಸ್ವರ್ಗಲೋಕಗಳನ್ನು ಪೋಷಿಸುವವನು ! ವಿಶ್ವಾಮಿತ್ರನ ಈ ರಾಮ ರಕ್ಷಾ ಸ್ತೋತ್ರವು ಭರತ ವಂಶದ ಸಕಲ ಮನುಜರನ್ನೂ ರಕ್ಷಿಸಲಿ. ಇಲ್ಲಿ ಶ್ಲೋಕದಲ್ಲಿ ಬರುವ "ರಕ್ಷತಿ" ಪದವು ರಕ್ಷಾ ಸ್ತೋತ್ರವನ್ನು ಸೂಚಿಸುತ್ತದೆ. "ಭಾರತಂ ಜನಮ್ " ಎಂದರೆ ಭರತ ಖಂಡದ ಜನಗಳು ಎಂದರ್ಥ. - ಪ್ರತಿಯೊಬ್ಬ ರಾಮ ಭಕ್ತನೂ ಪ್ರತಿನಿತ್ಯ ರಾಮ ರಕ್ಷಾ ಸ್ತೋತ್ರವನ್ನು ಪಠಿಸಬೇಕು ಹಾಗೂ ಶ್ರೀರಾಮನು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ. ಋಗ್ವೇದದ ಮುಂದಿನ ಶ್ಲೋಕದಲ್ಲಿ ( 3.53.13 ) ವಿಶ್ವಾಮಿತ್ರಾ ಅರಾಸತ ಬ್ರಹ್ಮ ಇಂದ್ರಾಯ ವಜ್ರಿಣೇ | ಕರತ್ ಇತ್ ನಃ ಸುರಾಧಸಃ || ವಜ್ರಧಾರಿ ಇಂದ್ರನಿಗಾಗಿ ವಿಶ್ವಾಮಿತ್ರನ ವಂಶಜರು ಮಂತ್ರಗಳನ್ನು ರೂಪಿಸಿರುವರು. ಅನುಗ್ರಹಿಸಲಿ ಆತನು ನಮಗೆ ಮಂಗಳಕರ ಐಶ್ವರ್ಯಗಳನ್ನು. ಸುರಾಧಸಃ = ಮಂಗಳಕರ ಐಶ್ವರ್ಯಗಳನು. ವಿಶ್ವಾಮಿತ್ರರು ಶ್ರೀರಾಮನಿಗೆ ಬಲ ಮತ್ತು ಅತಿಬಲ ಮಂತ್ರಗಳನ್ನು ಉಪದೇಶಿಸುತ್ತಾರೆ. ಬಲ ಅತಿಬಲ ಶಕ್ತಿಗಳ ಶ್ಲೋಕಗಳನ್ನು ಋಗ್ವೇದದ 3.53 ನೇ ಅಧ್ಯಾಯದಲ್ಲಿ ವಿವರವಾಗಿ ವರ್ಣಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಬಲ ಅತಿಬಲ ವಿದ್ಯೆಯ ಬಗ್ಗೆ ವಿವರವಾಗಿ ವರ್ಣಿಸಲಾಗಿದೆ. ವಾಲ್ಮೀಕಿ ರಾಮಾಯಣದ 1.4.6 ನೇ ಶ್ಲೋಕಗಳಲ್ಲಿ ವಿವರವಾಗಿ ವರ್ಣಿಸಿರುವುದು ವೇದದಲ್ಲಿನ ಉಲ್ಲೇಖವನ್ನು ಪುಷ್ಟೀಕರಿಸುವ ಸಲುವಾಗಿ. ಬಲ ಅತಿಬಲ ವಿದ್ಯೆಗೆ ಸಂಬಂಧಿಸಿದ ಸ್ಪಷ್ಟ ಶ್ಲೋಕಗಳು ಋಗ್ವೇದದಲ್ಲಿನ 3.53.17, 18, 19, 20 ಮತ್ತು 21. ಬಲಂ ಧೇಹಿ ತನೂಷು ನೋ ಬಲಮ್ ಇಂದ್ರ ಅನಳತ್ಸು ನಃ | ಬಲಂ ತೋಕಾಯ ತನಯಾಯ ಜೀವಸೇ ತ್ವಂ ಹಿ ಬಲದಾ ಅಸಿ || (ಋಗ್ವೇದ 3.53.18) ಹೀಗೆ ರಾಮ ರಕ್ಷಾ ಸ್ತೋತ್ರವು ವೇದಗಳ ಮೂಲವನ್ನು ಹೊಂದಿದೆ. 2. ರಾಮ ರಕ್ಷಾಸ್ತೋತ್ರವು ಶ್ರೀರಾಮನ ಅನೇಕ ಸುಮಧುರ ನಾಮಗಳ ಭಂಡಾರ : ರಾಮರಕ್ಷಾ ಸ್ತೋತ್ರದಲ್ಲಿ ಶ್ರೀರಾಮನ ಅನೇಕ ಮಧುರವಾದ ನಾಮಗಳು ಇರುವುದು. ಹಾಗಾಗಿ ಇದನ್ನು ಸ್ತುತಿಸುವುದು ಹೃದಯ ಹಾಗೂ ಮನಸ್ಸಿಗೆ ಅತ್ಯಂತ ಆಪ್ಯಾಯಮನವಾಗಿದ್ದು ಅಮೃತವನ್ನು ಪಾನಮಾಡಿದಷ್ಟು ಸಂತಸವನ್ನು ನೀಡುವುದು. ಈ ಸ್ತೋತ್ರವನ್ನು ಪಠಿಸುವಾಗ ಶ್ರೀರಾಮನ ಅನೇಕ ಸುಂದರ ನಾಮಗಳನ್ನು ನಾಲಿಗೆಯ ಮೇಲೆ ಅಮೃತದಂತೆ ಇರಿಸಿಕೊಂಡು ಸ್ತೋತ್ರದುದ್ದಕ್ಕೂ ಅವುಗಳನ್ನೇ ಮನನ ಮಾಡುತ್ತಾ ಇರುವುದು ಮಹದಾನಂದಕರವಾದ ವಿಷಯ. ಈ ಸ್ತೋತ್ರದಲ್ಲಿ ಬರುವ ಶ್ರೀರಾಮನ ಸುಂದರ ಹೆಸರುಗಳೆಂದರೆ : ಶ್ರೀರಾಮ , ರಾಮಭದ್ರ ( ಸದ್ಗುಣ ಸಂಪನ್ನ ) , ರಾಮಚಂದ್ರ ( ಮುಖಭಾವವು ಪೂರ್ಣ ಚಂದ್ರನಂತೆ), ರಾಘವ , ರಘುನಂದನ , ರಘುನಾಥ , ದಶರಥಾತ್ಮಜ, ಕೌಶಲ್ಯೇಯ , ವಿಶ್ವಾಮಿತ್ರಪ್ರಿಯ , ಸೌಮಿತ್ರಿ-ವತ್ಸಲ (ಲಕ್ಷ್ಮಣನ ಪ್ರೀತಿಪಾತ್ರನು ) , ಸೀತಾಪತಿ , ಜಮದಗ್ನ್ಯಾಜಿತ್ ( ಜಮದಗ್ನಿಯ ಮಗನನ್ನು ಜಯಿಸಿದವನು ), ಭರತವಂದಿತ , ವಿದ್ಯಾನಿಧಿ, ಖರದ್ವಂಶಿ ( ಖರ ದೈತ್ಯನ ಸಂಹಾರ ಮಾಡಿದವನು ), ಜಾಂಬ್ವದಾಶ್ರಯ ( ಜಾಂಬವಂತನು ಆಶ್ರಯಿಸಿದವ), ಸುಗ್ರೀವೇಶ , ಹನೂಮತ್ಪ್ರಭು , ರಘೋತ್ತಮ , ದಾಶರಥಿ, ಕಾಕುತ್ಸ್ಥ ( ರಘುವಂಶದ ರಾಜಕುಮಾರ ), ಭರತಾಗ್ರಜ, ಪುರುಷ ( ವೇದಗಳ ಸರ್ವೋಚ್ಚ ಪುರುಷ ), ಪೂರ್ಣ ( ಸಂಪೂರ್ಣ, ಪರಿಪೂರ್ಣನಾದವನು), ಜಾನಕಿವಲ್ಲಭ, ಪುರಾಣ-ಪುರುಷೋತ್ತಮ (ವೈದಿಕ ಗ್ರಂಥಗಳಲ್ಲಿನ ಪ್ರಖ್ಯಾತನಾದ ಪುರುಷೋತ್ತಮ), ಇತ್ಯಾದಿ. ಮುಂದುವರೆಯುತ್ತದೆ.... ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏