jesus words

jmj
682 views
18 hours ago
#✝ಯೇಸು ವಾಕ್ಯಗಳು📖 #bible #jesus ಮಾತೆ* 💐💐💐 !!ಐಚ್ಛಿಕ ಸ್ಮರಣೆ!! [ಮೇ •13] ************************************ ✍️*ಮಥಿಯಾಸ್ ಕುಮಾರ್* ಮೖೆಸೂರು ************************************ ''ಪ್ರಭು ಯೇಸು ತಮ್ಮ ತಾಯನ್ನೂ ಆಕೆಯ ಪಕ್ಕದಲ್ಲಿ ನಿಂತಿದ್ದ ತಮ್ಮ ಆಪ್ತ ಶಿಷ್ಯನನ್ನೂ ನೋಡಿ, *''ಅಮ್ಮಾ ಇಗೋ, ನಿನ್ನ ಮಗ''* ಎಂದರು. ಅನಂತರ ತಮ್ಮ ಶಿಷ್ಯನನ್ನು ಕುರಿತು, *"ಇಗೋ, ನಿನ್ನ ತಾಯಿ"* ಎಂದರು. ಅಂದಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು," [ಯೊವಾನ್ನ 19:26-27] ಇದು ಸದಮಲಸ್ವಾಮಿಯಾದ ಪ್ರಭುಯೇಸುವಿನ ದೈವಾಜ್ಞೆ ಹಾಗು ಆ ಕ್ಷಣದಿಂದಲೇ ಆ ದೈವಾಜ್ಞೆಯನ್ನು ಇಂದಿನವರೆಗೂ ಪಾಲಿಸಿಕೊಂಡು ಬರುತ್ತಿರುವ ಕಥೋಲಿಕ ದೈವ ಜನಾಂಗ, ಪವಿತ್ರ ಕಥೋಲಿಕರ ಪವಿತ್ರ ಒಡಂಬಡಿಕೆಯ ಮಧುರ ವಾಕ್ಯದ ನುಡಿಗಳಿವು! ಅಂದಿನಿಂದ ಇಂದಿನವರೆಗೂ ಪರಿಶುದ್ಧ ಮಾತೆ ಮರಿಯಮ್ಮನವರನ್ನು ನಾವು (ಕಥೋಲಿಕರು) ನಮ್ಮ ಮನೆಯಲ್ಲಿ•ಮನದಲ್ಲಿ ಇರಿಸಿಕೊಂಡು ಪ್ರೀತಿ ಗೌರವಾದರಗಳಿಂದ ಗೌರವಿಸುತ್ತಿದ್ದೇವೆ. ಆದರೆ "ಆದಿಯಿಂದಲೂ ಸುಳ್ಳುಗಾರ ಹಾಗೂ ದೂರುಗಾರನು ಆದ ನಮ್ಮ ಹಾಗೂ ದೇವರ ವಿರೋಧಿಯೂ ತಮ್ಮ ದೂತರೊಡನೆ [ಕೆಲವು ಪ್ರೊಟೆಸ್ಟೆಂಟ್ ಸಹೋದರಗಳೊಡನೆ] ಹಗಲಿರುಳು ನಮ್ಮನ್ನು ದೂರುತ್ತಿದ್ದಾನೆ!, ಇದನ್ನು ಅರಿಯದ ನಮ್ಮ ಪ್ರತಿಭಟನಾ ಕ್ರೈಸ್ತ ಸಹೋದರರು ನಮ್ಮನ್ನು ನೀವು ಯೇಸುವನ್ನು ಆರಾಧಿಸದೆ ಮರಿಯಳನ್ನು ಆರಾಧಿಸುತ್ತೀರಾ.., ಪೂಜಿಸುತ್ತಿರಾ.., ಮುಂತಾದ ಅನೇಕ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಕಥೋಲಿಕ ಮನೆಗಳಲ್ಲಿ "ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿದ್ದಾರೆ."(ಪ್ರಕಟನೆ 12:10, 1ಪೇತ್ರ 5:8) ಕಥೋಲಿಕ ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಅವನ ದೂತರನ್ನು ಎದುರಿಸೋಣ. ನಮ್ಮ ಸಹ ವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇಂಥ ಹಿಂಸೆ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಮಗೆ ತಿಳಿದಿದೆ' (1ಪೇತ್ರ 5:9) "•ಮೇ•" ತಿಂಗಳು ನಮ್ಮ ಪೂಜ್ಯ ಮಾತೆಗೆ ಮೀಸಲಾದ ಮಾಸ, ಈ ಮಾತೆಯ ಮಾಸದ ಮಹಿಮೆಯು ಸಮಸ್ತ ಕಥೋಲಿಕ ಧರ್ಮಸಭೆಗೆ ಹರಡಿಕೊಂಡಿದ್ದು 17ನೆಯ ಶತಮಾನದಲ್ಲಿ ಅದು ಜೆಸ್ವಿಟ್ ಗುರು ನಿವಾಸಿಗಳ ಭಕ್ತಿಯಾಚರಣೆಗಳಿಂದ!! ಮಾತೆಯ ಮಾಸದ ಈ ಭಕ್ತಿಯಾಚರಣೆಗೆ ಪೂಜ್ಯ ಜಗದ್ಗುರು ಏಳನೇ ಭಕ್ತಿನಾಥರು [ಪೋಪ್ ಪಿಯುಸ್ VII ] ರವರಿಂದ ಅಶೀರ್ವಾದ ದೊರೆಯಿತು. 1859ರಲ್ಲಿ ಒಂಬತ್ತನೆ ಭಕ್ತಿನಾಥರು [ ಪೋಪ್ ಪಿಯುಸ್IX] ರವರಿಂದ ವಿಶೇಷ ಆಶೀರ್ವಾದದ ಘೋಷಣೆಯೂ ಆಯಿತು. 1966ರಲ್ಲಿ ಜಗದ್ಗುರುಗಳ ವಿಶೇಷ ಆಶೀರ್ವಾದವನ್ನೀಯುವ ವಿಷಯದಲ್ಲಿ ಬದಲಾವಣೆ ತಂದ ಪ್ರಯುಕ್ತ ಮಾತೆ ಮೇರಿಯ ಮಾಸದ ಭಕ್ತಿಯಾಚರಣೆಗೆ ನೀಡುವ ವಿಶೇಷ ಕೃಪೆಯನ್ನು ತೆಗೆದುಹಾಕಲಾಯಿತಾದರೂ ಅದರಿಂದ ಮಾತೆಯ ಕೃಪೆಯಂತೂ ಸಿಗದೆ ಇರಲು ಸಾಧ್ಯವಿಲ್ಲ. ಈ ಭಕ್ತಿಯುತ ಆಚರಣೆಯ ಕುರಿತು ಆಗಿಂದಾಗ್ಗೆ ಜಗದ್ಗುರುಗಳು ಹೇಳುತ್ತಲೇ ಬಂದಿದ್ದಾರೆ. ಪೂಜ್ಯ ಜಗದ್ಗುರು XIIನೇ ಪಿಯುಸರ ಭಕ್ತಿ ದೈವಾರಾಧನಾ ಪ್ರಪತ್ರವಾದ *"ಮೇ ದಿಯಾತೋರ್ ದೇಯಿ"* ಯಲ್ಲಿ ದೈವಾರಾಧನಾ ವಿಧಿಗೆ ನೇರವಾಗಿ ಅನ್ವಯಿಸದೆ ಹೋದರೂ ಇನ್ನಿತರ ವಿಧದಲ್ಲಿ ಭಕ್ತಿಯನ್ನು ಹೆಚ್ಚಿಸುವ ಸೂಕ್ತ ಮಾರ್ಗವಾಗಿದೆ ಎಂದು ತಿಳಿಸುತ್ತಾರೆ. 1956ರಲ್ಲಿ *'ಮೆನ್ಸೆಮಾಯೋ"* ಎಂಬ ಪ್ರಪತ್ರದಲ್ಲಿ VIನೇ ಪೌಲರು ಮಾತೆಯ ಮಾಸದ ಭಕ್ತಿಯನ್ನು ಶಾಂತಿಗಾಗಿ ಬಳಸ ಬಹುದಾದ ಶಾಸನವೆಂದು ಕರೆದಿದ್ದಾರೆ. ಈ ಮೂಲಕ ಮಾತೆಗೆ ಗೌರವವನ್ನು ತೋರಿಸುವುದರಲ್ಲಿ ಕ್ರೈಸ್ತರು ಶಾಂತಿ ಪ್ರೀತಿ ಸಹಬಾಳ್ವೆಯಲ್ಲಿ ಬಾಳಬೇಕೆಂದು ಜಗದ್ಗುರುಗಳು ಕ್ರೈಸ್ತ ಜನರನ್ನು ಆಗ್ರಹಿಸಿದ್ದರೂ ಮೇ ತಿಂಗಳ ಭಕ್ತಿಯಾಚರಣೆಗಾಗಿ ವಿಶೇಷ ಅಥವಾ ಅಧಿಕೃತವಾಗಿ ಪ್ರಾರ್ಥನಾ ವಿಧಿಯೆಂಬುವುದಿಲ್ಲ..! ೧೯೬೪ರ ವ್ಯಾಟಿಕನ್ ಪರಿಷತ್ತಿನ ನಂತರದಲ್ಲಿ ಸ್ಥಳೀಯ ಭಾಷೆಗಳಲ್ಲಿ ಹಲವು ಪ್ರಾರ್ಥನಾ ಪುಸ್ತಕಗಳನ್ನು ಬರೆದಿದ್ದಾರೆ ಅದರಲ್ಲಿ ಬಹು ಮುಖ್ಯವಾದದು *ದೇವರ ತಾಯಿಯ ಮಾಸವು* ಎಂಬ ಅನಂತವಾದ ಭಕ್ತಿಸಾಧನವಾದ ಆಧ್ಯಾತ್ಮಿಕ ಹೊತ್ತಿಗೆ.., ಇದರಲ್ಲಿ ಮೇ ಮಾಸದ ಒಂದು ತಿಂಗಳ ಪ್ರತಿದಿನದ ಪೂರ್ಣ ಪ್ರಾರ್ಥನಾ ಇದೆ..., ಹೀಗೆ ದೇವಾಲಯಗಳಲ್ಲಿ ಪ್ರತಿದಿನ ಬಹಿರಂಗ ಜಪಸರ ಹೇಳುವ ವಾಡಿಕೆಯಿದ್ದು ಅಥವಾ ಇತರ ಮರಿಯಮ್ಮನವರ ಪ್ರಾರ್ಥನೆಗಳೊಂದಿಗೆ ಮಾತೆಯ ಸ್ವರೂಪಕ್ಕೆ ಹೂಗಳನ್ನು ಅರ್ಪಿಸುವ ವಾಡಿಕೆಯಿತ್ತು. ಏನೇ ಆದರೂ ಮಾತೆಯ ಮಾಸದಲ್ಲಿ ಮರಿಯಮ್ಮ ನವರಿಗೆ ವಿಶೇಷ ಭಕ್ತಿಯನ್ನು ಸೂಚಿಸುವ ಪರಿಪಾಠವನ್ನು ಮಾತ್ರ ಮರೆಯಬಾರದು ಕಥೋಲಿಕ ದೈವ ಜನಾಂಗವಂತೂ ಮರೆಯುವುದಿಲ್ಲ ಬಿಡಿ. ಏಕೆಂದರೆ ಮರಿಯಾಭಕ್ತಿ. ಸಲುಗೆಮಿಶ್ರಿತ ಪ್ರೀತಿ. ಮರಿಯಾ•ಕ್ರಿಸ್ತರಿಂದ ನಮ್ಮನ್ನು ಬೇರ್ಪಡಿಸಲು ಯಾವುದರಿಂದಲೂ ಸಾಧ್ಯವಿಲ್ಲ ಇದು ನಿಶ್ಚಯ (ರೋಮ 8:31-39) ಪವಿತ್ರ ರೋಮನ್ ಕಥೋಲಿಕ ಧರ್ಮಸಭೆಯಲ್ಲಿ ಮೇರಿ ಮಾಸದ ಭಕ್ತಿಯಾಚರಣೆಯ ಸಂಭ್ರಮದಲ್ಲಿ ಮೇ ತಿಂಗಳಲ್ಲಿ ಶ್ರೀ ಮಾತೆಯ ಸ್ಮರಣಾರ್ಥ ಐದು ಹಬ್ಬಗಳನ್ನು ಆಚರಿಸುತ್ತೇವೆ.., ಅವುಗಳಲ್ಲಿ ನಾನು ತೆಗೆದುಕೊಂಡ ಸ್ಮರಣೆಯ ಹಬ್ಬ *"ಫಾತಿಮಾಮಾತೆಯ ಸ್ಮರಣೆ"* ಪವಿತ್ರ ಕಥೋಲಿಕ ವಿಶ್ವವ್ಯಾಪ್ತಿ ಕ್ರೈಸ್ತ ಸಾಮ್ರಾಜ್ಯವನ್ನು ಪೂಜ್ಯ ಜಗದ್ಗುರು XVನೇ ಬೆನೆಡಿಕ್ಟ್ ರವರು ಪರಿಪಾಲಿಸುತ್ತಿದ್ದ ಕಾಲವದು. 1917 ರ ಮೇ 13 ರಿಂದ ಅಕ್ಟೋಬರ್ 13ರ ಅವಧಿಯಲ್ಲಿ ಪೋರ್ಚುಗಲ್‌ ನ *ಫಾತಿಮಾನಗರದ ಸಮೀಪ ಇರುವ "ಕೋವಾದ ಐರಾ"* ಎಂಬ ಫಾತಿಮಾ ನಗರದ ಗವಿಯಲ್ಲಿ ಮೂರು ಮುಗ್ಧ ಮಕ್ಕಳಿಗೆ ಮಾತೆ ಮರಿಯಮ್ಮನವರ ದರ್ಶನವಾಗುತ್ತದೆ. ಆ ಮೂವರು *"ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜಸಿಂತ"* ಈ ಮೂರು ಮಕ್ಕಳ ಮೂಲಕ ಮಾತೆ ಮರಿಯಮ್ಮನವರು, ಪ್ರಾರ್ಥಿಸಬೇಕೆಂದು ಸಂದೇಶವನ್ನು ನೀಡುತ್ತಾರೆ..., ಏಕೆಂದರೆ ಮೊದಲನೇ ಮಹಾಯುದ್ದದಿಂದ ಇಡೀ ವಿಶ್ವವೇ ತತ್ತರಿಸಿದ ಕಾಲವದು. 8 ಮಿಲಿಯನ್ ಗಿಂತಲೂ ಅಧಿಕ ಜನರ ಪ್ರಾಣವನ್ನು ಆಹುತಿ ಪಡೆದಿದ್ದ ಭೀಕರ ಯುದ್ಧ ಹಲವು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಯಿತು. ರಷ್ಯಾ ದೇಶದಲ್ಲಿ ಕಮ್ಯೂನಿಸಂ ಮತ್ತು ನಾಸ್ತಿಕವಾದ ಕಾಲಿಟ್ಟಿತ್ತು. ಲೆನಿನ್ ಮತ್ತು ಟ್ರಾಟಸ್ಕಿ ಮುಖಂಡತ್ವದಲ್ಲಿ ಧಾರ್ಮಿಕತೆ, ಆಧ್ಯಾತ್ಮಿಕತೆ ಒರೆಸಿ ಹಾಕಲ್ಪಡುತ್ತಿದ್ದವು. ಈ ಸಂದರ್ಭದಲ್ಲಿ ಮಾತೆ ಮರಿಯಮ್ಮನವರು ಕಾಣಿಸಿಕೊಳ್ಳುತಾರೆ. ಈ ದರ್ಶನದ ಮುಖ್ಯ ಸಂದೇಶ ಪ್ರಾರ್ಥನೆ.! ಫಾತಿಮಾ ಮಾತೆಯ ಈ ಸಂದೇಶದ ತಿರುಳು ಮೂಲಭೂತ ಶುಭಸಂದೇಶ ಕರೆಯೇ, ಇದು ದೇವ ಜನರ (ಕ್ರೈಸ್ತರ) ಪಶ್ಚಾತ್ತಾಪ, ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸ ಮತ್ತು ಕ್ರೈಸ್ತರ ಶುದ್ಧ ಜೀವನದ ಬಗೆಗೆ ಎಂಬುದನ್ನು ಗಮನಿಸುವುದು ಮುಖ್ಯ. ಫಾತಿಮಾದಲ್ಲಿ ಮೂರು ಮಕ್ಕಳಿಗೆ ದರ್ಶನ ವಿತ್ತಿದ್ದನ್ನು ಜಗತ್ತಿಗೆ ಸಾಬೀತು ಪಡಿಸಲು ಮಾತೆ ಮರಿಯಮ್ಮನವರು 1917ರ ಅಕ್ಟೋಬರ್ 13ರಂದು ದೇವರು ಸೂಚನೆ ನೀಡಲಿದ್ದಾರೆಂದು ಮಕ್ಕಳಿಗೆ ಹೇಳಿದರು. ಆ ದಿನ ಕ್ರೈಸ್ತರು ಮತ್ತು ಅನೇಕ ಸಂದೇಹಿಗಳನ್ನು ಒಳಗೊಂಡ ಒಂದು ಲಕ್ಷ ಜನ ದೇವರ ಪವಾಡ ಸಾದೃಶ್ಯಕ್ಕಾಗಿ ಕಾಯುತ್ತಿದ್ದಾಗ, ಸೂರ್ಯ ಆಕಾಶದಲ್ಲಿ ಗಿರ್ರನೆ ತಿರುಗುತ್ತಾ ನೃತ್ಯ ಮಾಡತೊಡಗಿದ. ಆಕಾಶ ದಿಂದ ಕೆಳಗೆ ಬಿದ್ದು ಭೂಮಿಗೆ ಅಪ್ಪಳಿಸುವಂತೆ ಬಂದು ಯಥಾವತ್ತಾಗಿ ತನ್ನ ಸ್ಥಾನದಲ್ಲೇ ನಿಲ್ಲುವಂತೆ ಗೋಚರಿಸತೊಡಗಿದೆ. ಹಾಗು ಆಗಸದಿಂದ ಎಲ್ಲರ ಮೇಲೆ ಗುಲಾಬಿ ದಳಗಳು ಬೀಳುವಂತೆ ಆದರೆ ಕೈಗೂ ಸಿಗದಂತೆ ಮಾಯವಾಗ ತೊಡಗಿದ ದೃಶ್ಯ ಎಲ್ಲರೂ ಅಚ್ಚರಿಗೊಂಡು ಮೂಕವಿಸ್ಮಿತರನ್ನಾಗಿಸಿತ್ತು!!! ಇದನ್ನು ಈ ತನಕ ವೈಜ್ಞಾನಿಕವಾಗಿ ವಿವರಿಸಲು ಯಾರಿಂದಲೂ ಸಾಧ್ಯವಾಗಿಲ್ಲ! *"ಪ್ರಭುವಿನಿಂದಲೆ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ"!!*(ಕೀರ್ತನೆ 118:23) ಫಾತಿಮಾ ನಗರದಲ್ಲಿ ನಡೆದಂತಹ ಅತಿಶಯ ಅದ್ಭುತದಂತೆಯೇ ಹೋಲುವ ಘಟನೆ ಪವಿತ್ರ ಬೈಬಲ್‌ನಲ್ಲಿಯೂ ನಾವು ಕಾಣಬಹುದು ಅದು ಯೆಹೋಶುವನ ಗ್ರಂಥದಲ್ಲಿ..., *"ಸರ್ವೆಶ್ವರ ಅಮೋರಿಯರನ್ನು ಇಸ್ರಯೇಲರಿಗೆ ವಶಪಡಿಸಿದ ದಿನದಂದು ಯೆಹೋಶುವನು ಸರ್ವೇಶ್ವರರಲ್ಲಿ ಒಂದು ವಿಜ್ಞಾಪನೆ ಮಾಡಿ ಇಸ್ರಯೇಲರ ಕಣ್ಮುಂದೆಯೇ •ಸೂರ್ಯನೇ, ನೀನಿಲ್ಲು ಗಿಬ್ಯೋನಿನಲ್ಲೇ; ಚಂದ್ರನೇ ನೀ ನಿಲ್ಲು, ಅಯ್ಯಾಲೋನ್ ಕಣಿವೆಯಲ್ಲೇ• ಎಂದು ಆಜ್ಞಾಪಿಸಿದನು. ಇಸ್ರಯೇಲರು ತಮ್ಮ ಶತ್ರುಗಳಿಗೆ ಮುಯ್ಯಿ ತೀರಿಸುವ ತನಕ ಸೂರ್ಯ ಚಂದ್ರರು ಹಾಗೆಯೇ ನಿಂತರು. ಇದನ್ನು "ಯಾಷಾರ್" ಗ್ರಂಥದಲ್ಲಿ ಬರೆದಿದೆಯಲ್ಲವೇ? ಹೀಗೆ ಸೂರ್ಯ ಮುಳುಗಲು ಆತುರ ಪಡದೆ ಒಂದು ದಿನವೆಲ್ಲ ಆಕಾಶದ ಮಧ್ಯದಲ್ಲೇ ನಿಂತಿತು. ಆ ಪ್ರಕಾರ ಹಿಂದೆಯಾಗಲಿ ಮುಂದೆಯಾಗಲಿ ಸರ್ವೇಸ್ವರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟಂಥ ದಿವಸ ಇಲ್ಲವೇ ಇಲ್ಲ]"* [ಯೆಹೋಶುವ10:12-14] ಈ ಮೇಲಿನ ಬೈಬಲ್ ಶ್ರೀ ಗ್ರಂಥದ ವಾಕ್ಯದ ಘಟನಾವಳಿಯ ನಂತರ ದೇವರು ಮನುಷ್ಯನಾಗಿದ್ದ ಒಬ್ಬರ ಪ್ರಾರ್ಥನೆಗೆ ಸರ್ವೇಶ್ವರ ಸ್ವಾಮಿ ಕಿವಿಗೊಟ್ಟರೆಂದರೆ ಅದು ಫಾತಿಮಾ ನಗರದಲ್ಲಿ ನಡೆದ ಈ ಘಟನೆ ಮಾತ್ರವೇ ಎಂಬುದು ನಿಸ್ಸಂದೇಹ. ಫಾತಿಮಾ ನಗರದಲ್ಲಿ ಮಾತೆಯ ದರ್ಶನದ ಬಹುಮುಖ್ಯ ಸಂದೇಶ ಪ್ರಾರ್ಥನೆ. ಜಪಸರ ಪ್ರಾರ್ಥನೆ. ಆದೂ ಪಾಪಿಗಳ ಮನಪರಿವರ್ತನೆಗಾಗಿ ಮತ್ತು ಮಹಾಯುದ್ಧದ ಶಾಂತಿಗಾಗಿ ಮಾತ್ರವೇ ಹಾಗು ಮಾತೆ ಮರಿಯಮ್ಮನವರ ನಿರ್ಮಲ ಹೃದಯಕ್ಕಾಗುತ್ತಿರುವ ಗಾಯಗಳಿಗೆ ಪರಿಹಾರವಾಗಿ ಪ್ರತಿ ದಿನ ಜಪಸರವನ್ನು ಹೇಳುವಂತೆ ಮಾತೆ ಕರೆ ನೀಡುತ್ತಾರೆ. ಜಪಮಾಲೆಯ ಪ್ರತಿ ರಹಸ್ಯದ ಕೊನೆಯಲ್ಲಿ *"ಓ ನನ್ನ ಯೇಸುವೇ ನಮ್ಮ ಪಾಪಗಳನ್ನು ಕ್ಷಮಿಸಿರಿ, ನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ. ಸರ್ವ ಆತ್ಮಗಳನ್ನು ವಿಶೇಷವಾಗಿ ನಿಮ್ಮ ದಯೆಯನ್ನು ಅತ್ಯಧಿಕವಾಗಿ ಅಪೇಕ್ಷಿಸುವ ಆತ್ಮಗಳನ್ನು ನಿಮ್ಮ ಮೋಕ್ಷ ರಾಜ್ಯಕ್ಕೆ ಸೇರಿಸಿಕೊಳ್ಳಿರಿ*" ಎಂದು ಪ್ರಾರ್ಥಿಸಬೇಕು ಎಂದು ನಿರ್ದೇಶಿಸುತ್ತಾರೆ. ಈ ಪ್ರಾರ್ಥನೆ ಇಂದಿಗೂ ನಮ್ಮ (ಕಥೋಲಿಕ ಕ್ರೈಸ್ತರ) ಪ್ರಾರ್ಥನೆಯಾಗಿದೆ. ಫಾತಿಮಾ ಮಾತೆಯ ಸಂದೇಶದಲ್ಲಿ ಕೆಲವು ರಹಸ್ಯಗಳು ಸಹ ಇದ್ದವು. ಕೆಲವು ನೆರವೇರಿದವು ಅವುಗಳಲ್ಲಿ ಒಂದು ಜಗದ್ಗುರು ಎರಡನೇ ಜಾನ್ ಪಾಲ್ ರ ಮೇಲೆ ನಡೆದ ಕೊಲೆ ಪ್ರಯತ್ನವೂ ಸಹ ಒಂದು.!! ಪ್ರಿಯ ಕಥೋಲಿಕ ದೇವ ಜನಾಂಗದ ಮಹಾ ಜನರೇ ದೇವರು ನಮ್ಮ ಮೇಲಿಟ್ಟಿರುವ ಅದ್ವಿತೀಯ ಪ್ರೀತಿಯಿಂದ ನಮಗೆ ತಮ್ಮ ಪ್ರಿಯ ಮಾತೆಯನ್ನು ದಯಪಾಲಿಸಿದ್ದಾರೆ (ಯೊವಾನ್ನ 19:26) ಅವರ ಮಹಾ ಮಧ್ಯಸ್ಥಿಕೆಯಲ್ಲಿ ತ್ರೈಯೇಕ ದೇವರಲ್ಲಿ ಪ್ರಾರ್ಥಿಸೋಣ "ಪ್ರಭುವಿನ ಯೋಜನೆ ಶಾಶ್ವತ! ಅವರ ಸಂಕಲ್ಪ ಅನವರತ"।।( 33:11), ಸಮಸ್ತ ಕಥೋಲಿಕ ದೇವ ಜನಾಂಗಕ್ಕೆ ಮಾತೆಯ ಮಾಸದಲ್ಲಿ ಫಾತಿಮಾ ಮಾತೆಯ ಸ್ಮರಣೆಯ ಶುಭಾಶಯಗಳು.., [ಈ ಲೇಖನದಲ್ಲಿ ಕನ್ನಡ ಕ್ರೈಸ್ತರ್ಷೀ *ವಂ.ಸ್ವಾಮಿ.ಚಸರಾ* ಹಾಗೂ ಕನ್ನಡದ "ಸಾಹಿತ್ಯಶ್ರೀ" *ಡಾ.ರೀಟಾ ರೀನಿ* ರವರ 'ಸಂತ ಸಂಗಾತಿ' 'ಚರ್ಚ್ ಇತಿಹಾಸ', ಹಾಗೂ *ವಂ.ಫಾ.ಮಾರ್ಟಿನ್ ಅಂತೋಣಿ* ಅವರ 'ಮಾತೆಯಸನಿಹ' ಗ್ರಂಥಗಳನ್ನು ಆಧಾರವಾಗಿ ಉಪಯೋಗಿಸಲಾಗಿದೆ -ಲೇಖಕರು]