#💐ಮಂಗಳವಾರದ ಶುಭಾಶಯಗಳು ನನ್ನ ಪ್ರೀತಿಯ ಸ್ನೇಹಿತರೆ ಈ ದಿನದ ವಿಷಯ ನಿಮಗೆ ತಿಳಿದಿರಲಿ ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 24 ರಂದು 'ಕೇಂದ್ರ ಅಬಕಾರಿ ದಿನ' ಆಚರಿಸಲಾಗುತ್ತದೆ. ಇದು 24 ಫೆಬ್ರವರಿ 1944 ರಂದು ಜಾರಿಗೆ ಬಂದ ಕೇಂದ್ರ ಅಬಕಾರಿ ಮತ್ತು ಉಪ್ಪು ಕಾಯಿದೆಯನ್ನು ಸ್ಮರಿಸುತ್ತದೆ. ಕೇಂದ್ರೀಯ ಅಬಕಾರಿ ದಿನವು ದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಸಿಬಿಐಸಿ ಯ ಕೊಡುಗೆಯನ್ನು ಗೌರವಿಸುತ್ತದೆ.ನಮ್ಮ ದೇಶದಲ್ಲಿ ಅಬಕಾರಿ ಇಲಾಖೆಯು ಅತ್ಯಂತ ಪ್ರಮುಖವಾದದ್ದು. ಇದು ಇಡೀ ದೇಶದ ನಾಗರಿಕರಿಂದ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅಬಕಾರಿ ಇಲಾಖೆಯ ಕೆಲಸಗಳು ತುಂಬಾ ಸೂಕ್ಷ ್ಮವಾಗಿರುತ್ತವೆ. ಆದ್ದರಿಂದ ಇದರ ನೌಕರರು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ತೆರಿಗೆ ಲೆಕ್ಕಾಚಾರ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇವರದ್ದು. ಈ ಕೆಲಸದಲ್ಲಿ ಒಂದಿನಿತು ತಪ್ಪಾದರೂ ಅದು ದೇಶಕ್ಕಾಗುವ ನಷ್ಟವಾಗುತ್ತದೆ. ಆದ್ದರಿಂದ ಕೇಂದ್ರ ಅಬಕಾರಿ ನೌಕರರನ್ನು ತುಂಬಾ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ಇವರಿಗೆ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ಫೆಬ್ರವರಿ 24. ಪ್ರತಿವರ್ಷ ಈ ದಿನವನ್ನು ಸೆಂಟ್ರಲ್ ಎಕ್ಸೈಸ್ ಡೇ ಎಂದು ಆಚರಿಸಲಾಗುತ್ತದೆ. ದೇಶಾದ್ಯಂತ ಇರುವ ಅಬಕಾರಿ ಇಲಾಖೆಯ ನೌಕರರಿಗೆ ಪ್ರೋತ್ಸಾಹ ಕೊಡುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ. ಅಬಕಾರಿ ಇಲಾಖೆಯ ನೌಕರರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗದೆ ಉತ್ತಮ ರೀತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಇವರ ಕಾರ್ಯಶೈಲಿ ಸುಧಾರಣೆಗಾಗಿ ಯಾವೆಲ್ಲಾ ನೀತಿ, ನಿಯಮಗಳನ್ನು ಜಾರಿಗೊಳಿಸಬಹುದು ಎಂಬ ಚಿಂತನೆಯನ್ನು ಈ ದಿನ ಮಾಡಲಾಗುತ್ತದೆ. ಕೇಂದ್ರ ಅಬಕಾರಿ ಇಲಾಖೆಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಈ ಇಲಾಖೆಯ ಸುಧಾರಣೆಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ.ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


