#💐ಮಂಗಳವಾರದ ಶುಭಾಶಯಗಳು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ಕ್ರಾಂತಿಯ ಕಿಡಿ, ಸಶಸ್ತ್ರ ಕ್ರಾಂತಿಯ ಪಿತಾಮಹ, ಅದಮ್ಯ ಕ್ರಾಂತಿಕಾರಿ ಶ್ರೀ ವಾಸುದೇವ್ ಬಲವಂತ ಫಡಕೆ ಅವರ ಬಲಿದಾನ ದಿನದಂದು ಅನಂತ ನಮನಗಳು.ಭಾರತದ ಸ್ವಾತಂತ್ರ್ಯಕ್ಕಾಗಿ "ರಾಮೋಶಿ" ಎಂಬ ಸಶಸ್ತ್ರ ಸಂಘಟನೆಯನ್ನು ಹುಟ್ಟುಹಾಕಿ ಬ್ರಿಟಿಷ್ ಸರ್ಕಾರಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿ, ತನ್ನ ಕೊನೆಯ ಉಸಿರು ಇರುವವರೆಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇವರು ಸ್ಮರಣೀಯರು. ಈ ದಿನ ನಾವೆಲ್ಲರೂ ಇವರು ನಡೆದು ಬಂದ ಹಾದಿಯನ್ ಒಮ್ಮೆ ಮೆಲುಕು ಹಾಕೋಣವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ - ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಇವರು ಬ್ರಿಟೀಷರ ಅವಧಿಯಲ್ಲಿ ರೈತ ಸಮುದಾಯದ ಸಂಕಷ್ಟವನ್ನು ನೋಡಿ ಮರುಗಿದ್ದರು. ಸ್ವರಾಜ್ಯವೊಂದೇ ಇದಕ್ಕೆಲ್ಲ ಪರಿಹಾರ ಎಂದು ನಂಬಿದ್ದರು. ಮಹಾರಾಷ್ಟ್ರ ರಲ್ಲಿ ಕೊಲಿಸ್, ಭಿಲ್ ಮತ್ತು ಧಾಂಗರ್ ಸಮುದಾಯಗಳ ಸಹಕಾರದಿಂದ ಇವರು ರಮೋಶಿ ಎಂದು ಎಂಬ ಕ್ರಾಂತಿಕಾರಿ ಗುಂಪನ್ನು ರಚಿಸಿದರು. ಈ ಗುಂಪು ಬ್ರಿಟಿಷ್ ರಾಜ್ ಉರುಳಿಸಲು ಸಶಸ್ತ್ರ ಹೋರಾಟದಲ್ಲಿ ಆರಂಭಿಸಿತು. ಗುಂಪು ತಮ್ಮ ವಿಮೋಚನೆಯ ಹೋರಾಟದಲ್ಲಿ ಹಣವನ್ನು ಪಡೆಯಲು ಶ್ರೀಮಂತ ಇಂಗ್ಲೀಷ್ ಉದ್ಯಮಿಗಳು ಮೇಲೆ ದಾಳಿಗಳನ್ನು ಆರಂಭಿಸಿತು. ಈ ರೀತಿಯ ಅನಿರೀಕ್ಷಿತ ದಾಳಿಯ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಸಿಕ್ಕಿಬಿದ್ದಾಗ, ಫಡ್ಕೆಯವರು ಪುಣೆ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಾಗ ಫಡ್ಕೆಯವರು ಲೋಕಪ್ರಸಿದ್ಧಿ ಪಡೆದರು.ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಪನ್ವೇಲ್ ತಾಲೂಕಿನ ಶಿರ್ಧಾನ್ ಗ್ರಾಮದಲ್ಲಿ ನವೆಂಬರ್ 1845 4 ರಂದು ಜನಿಸಿದರುಬಾಲ್ಯದಲ್ಲಿ ಅವರು ಪ್ರೌಢಶಾಲಾ ಶಿಕ್ಷಣಕ್ಕಿಂತ ಕುದುರೆ ಸವಾರಿ, ಕುಸ್ತಿ ಮುಂತಾದ ಕಲಿಕಾ ಕೌಶಲಗಳಿಗೆ ಆದ್ಯತೆ ಕೊಟ್ಟು ಶಾಲೆಯನ್ನು ಬಿಟ್ಟರು. ಕೊನೆಗೆ ಪುಣೆಗೆ ತೆರಳಿದರು ಮತ್ತು 15 ವರ್ಷಗಳ ಕಾಲ ಪುಣೆಯಲ್ಲಿ ಮಿಲಿಟರಿ ಖಾತೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ನಡೆಸಿದರು. ಕ್ರಾಂತಿವೀರ ಲಹುಜಿ ವಸ್ತದ್ ಸಾಳ್ವೆ, ಆಗಿನ ಕಾಲದ ಪುಣೆ ಮೂಲದ ಪ್ರಮುಖ ಸಾಮಾಜಿಕ ವ್ಯಕ್ತಿಯಾಗಿದ್ದವರು, ಫಡ್ಕೆಯವರ ಗುರುಗಳು. ಸಾಳ್ವೆ, ಪರಿಣಿತ ಕುಸ್ತಿಪಟು, ಒಂದು ಕುಸ್ತಿ ತರಬೇತಿ ಕೇಂದ್ರ ನಿರ್ವಹಿಸುತ್ತಿದ್ದರು. ಸಾಳ್ವೆ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಫಡ್ಕೆಯವರಿಗೆ ವಿವರಿಸಿದರು. ಮಾಂಗ್ ಒಂದು ಅಸ್ಪೃಶ್ಯ ಸಮುದಾಯದವರಾಗಿದ್ದ ಸಾಳ್ವೆಯವರು,ಫಡ್ಕೆಯವರಿಗೆ ಹಿಂದುಳಿದ ವರ್ಗಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ತಿಳಿಸಿದರು. ಈ ಅವಧಿಯಲ್ಲಿ ಫಡ್ಕೆಯವರು ಮಹಾದೇವ ಗೋವಿಂದ ರಾನಡೆಯವರ ಉಪನ್ಯಾಸಕ್ಕೆ ಹೋಗಲು ಪ್ರಾರಂಭಿಸಿದರು. ಈ ಉಪನ್ಯಾಸಗಳು ಮುಖ್ಯವಾಗಿ ಬ್ರಿಟಿಷರ ನೀತಿಗಳು ಭಾರತೀಯ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುವುದರ ಕುರಿತಾಗಿತ್ತು. ಈ ನೀತಿ ಯಾವರೀತಿ ಈ ಸಮಾಜದಲ್ಲಿ ವ್ಯಾಪಕ ನೋವು ಹಾಗೂ ಹಾನಿಗೆ ಕಾರಣವಾಗುತ್ತಿದೆ ಎಂದು ಕಂಡುಕೊಂಡ ಫಡ್ಕೆಯವರು ಬಹಳವಾಗಿ ನೊಂದುಕೊಂಡರು. ೧೮೭೦ರಲ್ಲಿ ಅವರು ಪುಣೆಯಲ್ಲಿ ಜನರ ಕುಂದುಕೊರತೆಗಳ ನಿವಾರಣೆಗಳಿಗಾಗಿ ಇರುವ ಸಾಮಾಜಿಕ ಆಂದೋಳನವೊಂದಕ್ಕೆ ಸೇರಿಕೊಂಡರು. ಫಡ್ಕೆಯವರು ಐಕ್ಯ ವರ್ಧಿನಿ ಸಭಾ ಎಂಬ ಸಂಸ್ಠೆಯೊಂದನ್ನು, ಯುವಕರಿಗೆ ಶಿಕ್ಷಣ ಕೊಡುವ ಸಲುವಾಗಿ ಪ್ರಾರಂಭಿಸಿದರು. ಇವರು ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾಗ, ರಜೆ ಅನುಮೋದನೆ ವಿಳಂಬದ ಕಾರಣದಿಂದ ತನ್ನ ಸಾಯುತ್ತಿರುವ ತಾಯಿಯವರನ್ನು ನೋಡಲು ಸಾಧ್ಯವಾಗಲಿಲ್ಲ. ಈ ಘಟನೆ ಫಡ್ಕೆಯವರನ್ನು ಕೆರಳಿಸಿತು ಮತ್ತು ಅವರ ಜೀವನ ಪ್ರಮುಖ ತಿರುವು ಪಡೆಯಲು ಕಾರಣವಾಯಿತು.
೧೮೭೫ರಲ್ಲಿ, ಆಗಿನ ಬರೋಡಾದ ಗಾಯಕ್ವಾಡ್ ರಾಜನನ್ನು ಬ್ರಿಟೀಷರು ಪದಚ್ಯುತಗೊಳಿಸಿದ ನಂತರ, ಫಡ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆ ಭಾಷಣಗಳನ್ನು ಬಿಡುಗಡೆ ಮಾಡಿದರು. ಭೀಕರ ಬರಗಾಲ ಹಾಗೂ ಬ್ರಿಟಿಷ್ ಆಡಳಿತದ ಸ್ಪಷ್ಟವಾದ ನಿರಾಸಕ್ತಿ ಇವರನ್ನು ಒಂದು ಸ್ವತಂತ್ರ ಗಣರಾಜ್ಯಕ್ಕಾಗಿ ಶ್ರಮಿಸಬೇಕೆಂದು ಪ್ರೇರೇಪಿಸಿತು. ಇದಕ್ಕಾಗಿ ಅವರು ಡೆಕ್ಕನ್ ಪ್ರದೇಶದ ಪ್ರವಾಸ ಕೈಗೊಂಡರು. ಸುಶಿಕ್ಷಿತರ ಬೆಂಬಲವನ್ನು ಪಡೆಯಲು ಸಾಧ್ಯವಾಗದೇ, ರಮೋಶಿ ಜಾತಿ ಜನರ ಗುಂಪನ್ನು ಕಟ್ಟಿದರು. ಕೋಲಿಸ್, ಭಿಲ್ ಯೋಧರು ಮತ್ತು ಧಾಂಗರ್ ಜನರನ್ನು ಈ ಗುಂಪಿಗೆ ನಂತರ ಸೇರಿಸಲಾಯಿತು. ಅವರು, ಸವಾರಿ, ಕತ್ತಿವರಸೆ ಮತ್ತು ಶೂಟಿಂಗ್ ಗಳನ್ನು ತಾವೇ ಸ್ವತಃ ಕಲಿತುಕೊಂಡಿದ್ದರು. ಅವರು ಬ್ರಿಟಿಶ್ ಆಡಳಿತದಿಂದ ಭಾರತದ ವಿಮೋಚನೆಯನ್ನು ಗುರಿಯಾಗಿಟ್ಟುಕೊಂಡು, ೩೦೦ ಪುರುಷರ ಬಂಡಾಯಗಾರರ ಗುಂಪನ್ನು ಆಯೋಜಿಸಿದರು. ಫಡ್ಕೆಯವರಿಗೆ ತಮ್ಮದೇ ಆದ ಸೈನ್ಯವೊಂದನ್ನು ಕಟ್ಟುವ ಯೊಜನೆಯಿತ್ತು. ಆದರೆ ಹಣದ ಕೊರತೆಯಿಂದಾಗಿ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡುವ ಕಾರ್ಯ ಪ್ರಾರಂಭಿಸಿದರು ಹಾಗೂ ಹೀಗೆ ಸಂಗ್ರಹವಾದ ಹಣವನ್ನು ಬರ ಪೀಡಿತ ಹಳ್ಳಿಗಳ ಸಹಾಯಕ್ಕಾಗಿ ವಿನಿಯೋಗಿಸುತ್ತಿದ್ದರು. ಅವರ ಈ ಕಾರ್ಯ ಅವರಿಗೆ ಡಕಾಯಿತ ಎಂಬ ಹಣೆಪಟ್ಟಿ ಬರಲು ಕಾರಣವಾಯಿತು ಹಾಗೂ ತಲೆಮರೆಸಿಕೊಂಡು ಹಳ್ಳಿ ಹಳ್ಳಿ ತಿರುಗುವಂತಾಯಿತು. ಅದಾಗ್ಯೂ ಇವರಿಗೆ ಸವಾಜದ ಕೆಳವರ್ಗದ ಜನರ ಸಹಕಾರ ಹಾಗೂ ಆಶ್ರಯ ದೊರಕಿತು.
ಏತನ್ಮಧ್ಯೆ. ಫಡ್ಕೆಯವರ ಮುಖ್ಯ ಬೆಂಬಲಿಗರಾಗಿದ್ದ ರಾಮೋಶಿ ನಾಯಕ, ದೌಲತ್ರಾವ್ ನಾಯಕ್, ಕೊಂಕಣ ಪ್ರದೇಶಕ್ಕೆ ತೆರಳಿದರು. ಅಲ್ಲಿ ಅವರು ಪಲಾಪ್ಸೆ ಮತ್ತು ಚಿಕಲಿಯಲ್ಲಿ ಧಾಳಿ ಮಾಡಿ ಸುಮಾರು ೧.೫ ಲಕ್ಷ ರೂ ಗಳನ್ನು ಲೂಟಿ ಮಾಡಿದರು. ಆದರೆ ಘಾಟ್ ಮಾತಾ ಕಡೆಗೆ ಹಿಂದಿರುಗುತ್ತಿರುವಾಗ, ಮೇಜರ್ ಡೇನಿಯಲ್ ನಾಯಕ್ ರನ್ನು ಗುಂಡಿಕ್ಕಿ ಕೊಂದನು. ಈ ಘಟನೆ ಫಡ್ಕೆ ಯವರ ಹೋರಾಟವನ್ನು ಹಿಮ್ಮೆಟ್ಟಿಸಿತು. ಬೆಂಬಲ ನಷ್ಟದಿಂದಾಗಿ ಫಡ್ಕೆಯವರು ದಕ್ಷಿಣದ ಶ್ರೀ ಶೈಲ ಮಲ್ಲಿಕಾರ್ಜುನ ಕ್ಷೇತ್ರದ ಕಡೆಗೆ ಹೋಗುವಂತಾಯಿತು. ನಂತರ, ಫಡ್ಕೆ ಒಂದು ತಾಜಾ ಹೋರಾಟವನ್ನು ಪ್ರಾರಂಭಿಸುವುದಕ್ಕಾಗಿ ೫೦೦ ರೋಹಿಲ್ ಜನರನ್ನು ನಿಯವಿಸಿದರು.ಫಡ್ಕೆಯವರ ಬ್ರಿಟೀಷರ ವಿರುದ್ದ್ರ ಏಕಕಾಲದಲ್ಲಿ ಹಲವಾರು ರಾಷ್ಟ್ರವ್ಯಾಪಿ ಧಾಳಿಗಳನ್ನು ಮಾಡುವ ಯೋಜನೆ ಬಹಳ ಸೀಮಿತ ಯಶಸ್ಸು ಕಂಡಿತು. ಸರ್ಕಾರವೂ ಇವರನ್ನು ಹಿಡಿದು ಕೊಡುವವರಿಗೆ ಬಹುಮಾನ ಕೊಡುವುದಾಗಿಯೂ ಘೊಷಿಸಿತು. ಇದಕ್ಕೆ ಪ್ರತಿಯಾಗಿ ಫಡ್ಕೆಯವರು ಬಾಂಬೆ ಗವರ್ನರ್ ರನ್ನು ಹಿಡಿದು ತಂದರೆ ತಾವೂ ಬಹುವಾನ ಕೊಡುವುದಾಗಿ ಘೊಷಿಸಿದರು. ಇದಲ್ಲದೇ ಪ್ರತಿ ಯೂರೋಪಿಯನ್ನರನ್ನು ಕೊಂದರೂ, ಬಹುವಾನ ಕೊಡುವುದಾಗಿ ಘೊಷಿಸಿದರು ಇದಲ್ಲದೇ ಸರ್ಕಾರಕ್ಕೆ ಇತರ ಬೆದರಿಕೆಗಳನ್ನು ಹೊರಡಿಸಿದರು. ಅವರು ನಂತರ ತಮ್ಮ ಸಂಘಟನೆಗೆ ರೋಹಿಲ್ಲ ಮತ್ತು ಅರಬ್ಬರನ್ನು ಸೇರಿಸಿಕೊಳ್ಳಲು ಹೈದರಾಬಾದ್ ರಾಜ್ಯಕ್ಕೆ ಪಲಾಯನ ಮಾಡಿದರು. ಬಹುಮಾನದ ಅಸೆಗಾಗಿ ಯಾರೋ ದ್ರೋಹ ಬಗೆದಿದ್ದರಿಂದ ಪಡ್ಕೆಯವರು ಪಂಢರಪುರಕ್ಕೆ ಹೊರಟಿರುವಾಗ ಸೆರೆ ಸಿಗುವಂತಾಯಿತು. ಇಲ್ಲಿಂದ ಅವರನ್ನು ಪುಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಯಿತು. ಗಣೇಶ್ ವಾಸುದೇವ ಜೋಶಿ ಇವರ ಪರವಾದ ವಕೀಲರಾಗಿದ್ದರು. ಫಡ್ಕೆಯವರು ಹಾಗೂ ಇವರ ಸೆರೆಸಿಕ್ಕ ಸಹಚರರನ್ನು ಜಿಲ್ಲಾ ಅಧಿವೇಶನ ನ್ಯಾಯಾಲಯದ ಜೈಲು ಕಟ್ಟಡದಲ್ಲಿ ಬಂಧಿಸಿಡಲಾಗಿತ್ತು. ಫಡ್ಕೆ ಯವರ ಡೈರಿಯಲ್ಲಿ ಅವರೇ ತಮಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತೆಂದು ಉಲ್ಲೇಖಿಸಿದ್ದಾರೆ. ಫಡ್ಕೆಯವರನ್ನು ಅಡೆನ್ ನ ಜೈಲಿಗೆ ಸಾಗಿಸಲಾಯಿತು. ಆದರೆ ಜೈಲಿನಿಂದ ಇವರು ತಪ್ಪಿಸಿಕೊಂಡರೂ, ಅಲ್ಪಕಾಲದಲ್ಲೇ ಪುನಹ ಸೆರೆಸಿಕ್ಕಿದರು. ಇವರನ್ನು ಪುನಹ ಜೈಲಿಗೆ ಹಾಕಲಾಯಿತು. ನಂತರ ಇವರು ಪ್ರತಿಭಟನೆ ಉಪವಾಸ ಪ್ರಾರಂಭಿಸಿದ್ದರ ಪರಿಣಾಮವಾಗಿ 17 ಫೆಬ್ರವರಿ 1883 ರಂದು ತಮ್ಮ ಕೊನೆಯ ಉಸಿರನ್ನೆಳೆದರು. ನಾವುಗಳು ಇಂದು ಬದುಕುತ್ತಿರುವ ದೇಶದಲ್ಲಿ ಈ ದೇಶ ಉಳಿಸಲು ದುಡಿದ ಅದೆಷ್ಟೋ ಮಹಾತ್ಮರಲ್ಲೇ ಇವರು ಒಬ್ಬರು ಇಂತಹ ಮಹಾತ್ಮರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸಬೇಕು ಇಂದು ನಾವು ಬದುಕುತ್ತಿರುವ ನಾಡಿನ ಉಳಿಸಿದ ಹೋರಾಟಗಾರರನ್ನು ಸ್ನೇಹಿತರೆ ಬಂಧುಗಳೇ, ದೇಶದ ಪ್ರತಿಯೊಬ್ಬ ಪ್ರಜೆಗಳೇ ಸ್ವಾತಂತ್ರ್ಯ ಸುಮ್ಮನೆ ಬರಲಿಲ್ಲ ಅದೆಷ್ಟೋ ನನ್ನ ದೇಶದ ಜನರನ್ನು ಬಲಿ ತೆಗೆದುಕೊಂಡಿದೆ ನಾಯಕರನ್ನು ಬಲಿ ತೆಗೆದುಕೊಂಡಿದೆ ಇದೆಲ್ಲದರ ನಂತರ ಇಂದು ನಾವು ಇಷ್ಟು ಸುಂದರವಾಗಿ ಬದುಕುತ್ತಿದ್ದೇವೆ ಇದಕ್ಕಾದರೂ ಹಿಂದೆ ನಮ್ಮ ದೇಶವನ್ನು ರಕ್ಷಿಸಿದ ಇಂತಹ ಹೋರಾಟಗಾರರನ್ನು ಪ್ರತಿದಿನ ಪ್ರತಿ ಕ್ಷಣ ಸ್ಮರಿಸೋಣ ಎನ್ನುತ್ತಾಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ಕ್ರಾಂತಿಯ ಕಿಡಿ, ಸಶಸ್ತ್ರ ಕ್ರಾಂತಿಯ ಪಿತಾಮಹ, ಅದಮ್ಯ ಕ್ರಾಂತಿಕಾರಿ ಶ್ರೀ ವಾಸುದೇವ್ ಬಲವಂತ ಫಡಕೆ ಅವರ ಬಲಿದಾನ ದಿನದಂದು ಅನಂತ ನಮನಗಳು ಸಲ್ಲಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#⚫14 ಫೆಬ್ರವರಿ ಬ್ಲಾಕ್ ಡೇ💔 ದಕ್ಷ ಆಡಳಿತ ನೀಡಿ ರಾಜ್ಯದ ಏಳಿಗೆಗೆ ಶ್ರಮಿಸಿದ, ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದ, ಸರಳತೆ, ಪ್ರಾಮಾಣಿಕತೆಯಿಂದ ಜನಮನ ಗೆದ್ದಿದ್ದ ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿಗಳಾದ ಶ್ರೀ #ಕೆಂಗಲ್_ಹನುಮಂತಯ್ಯ ಅವರ 116ನೇ ಜನ್ಮ ಜಯಂತಿಯಂದು ಅವರಿಗೆ ನಮ್ಮ ನಮನಗಳು..
ಇವರ ರಾಜಕೀಯ ಸೇವೆಯನ್ನು ಎಲ್ಲರೂ ಸ್ಮರಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🕉️ ಶುಭ ಶುಕ್ರವಾರ "ರೇಡಿಯೋ" ಇಂದಿಗೂ ಎಷ್ಟೋ ಜನಕ್ಕೆ ಮನೋರಂಜನೆಯ ರೂಪ. ರೋಡ್ ಸೈಡ್ ಹೋಟೆಲ್ ಇಟ್ಟೋರ್ಗೆ, ಇಸ್ತ್ರಿ ಮಾಡೋರ್ಗೆ, ಸಣ್ಣ ಪುಟ್ಟ ಅಂಗಡಿಯವ್ರಿಗೆ ಅಷ್ಟೆಲ್ಲ ಯಾಕೆ ಮೊಬೈಲ್ ನೆಟವರ್ಕ್ ಇಲ್ದೆ ಇರೋರಿಗೆ ರೇಡಿಯೋನೇ ಬೇಕಾಗದೆ. "ಗುಗ್ಲಿಯೆಲ್ಮೊ ಮಾರ್ಕೊನಿ" ಅವರನ್ನು ಈ "ವಿಶ್ವ ರೇಡಿಯೋ ದಿನ"ದಂದು ನೆನೆಯೋಣ ಮತ್ತು ಸ್ಮರಿಸೋಣ.ಹಾಗೆಯೇ ಹಲವು ಮಾಧ್ಯಮಗಳ ನಡುವೆಯೂ ಇನ್ನೂ ಗಟ್ಟಿಯಾಗಿ ನೆಲೆಯೂರಿ ನಿಂತಿರುವ ರೇಡಿಯೊಗೆ ಒಂದು ದಿನ ಬೇಕೆಂಬ ನಿಲುವು ವ್ಯಕ್ತವಾಗಿದ್ದು ಫೆಬ್ರವರಿ13 ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಲು 2011 ರ ಯುನೆಸ್ಕೊಸಭೆಯಲ್ಲಿ ನಿರ್ಧರಿಸಲಾಯಿತು ಹಳ್ಳಿಗಾಡಿನ ಜನರು ಹಿಂದಿನ ಕಾಲದಲ್ಲಿ ರೇಡಿಯೋ ವನ್ನೇ ಅವಲಂಬಿಸಿದ್ದರೂ ಬಹುಪಾಲು ಜನರು ಇದನ್ನೇ ಅವಲಂಬಿಸಿಇದ್ದರೂ ಹಾಗೆಯೇ ನಾವು ಕೂಡ ಚಿಕ್ಕವರಾಗಿದ್ದಾಗ ರೇಡಿಯೋ ಆಲಿಸುವ ಮೂಲಕ ನಮ್ಮ ದಿನನಿತ್ಯದ ಬದುಕನ್ನು ಪ್ರಾರಂಭಿಸುತ್ತಿದ್ದೇವೆ ಎಂದುಎಂಬುದೇ ನಮ್ಮ ಖುಷಿ ಇಂತಹ ರೇಡಿಯೊ ಮಾಧ್ಯಮ ಅಂದು ಎಂದು ಕೂಡ ಹೀಗೇ ಮುಂದುವರಿಯಲಿ ಎಲ್ಲ ರೇಡಿಯೋಕಾರ್ಮಿಕರಿಗೆ ಹಾಗೂ ಎಲ್ಲ ನನ್ನ ದೇಶದ ಜನರಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🕉️ ಶುಭ ಶುಕ್ರವಾರ "ಭಾರತದ ನೈಟಿಂಗೇಲ್"ಎಂದು ಪ್ರಸಿದ್ಧರಾದ ಇವರು, ಭಾರತದ ಮೊದಲ ಮಹಿಳಾ ಗವರ್ನರ್ ಎಂಬ ಗೌರವಕ್ಕೂ ಪಾತ್ರರು. "ಸರೋಜಿನಿ ನಾಯ್ಡು". ಕವಿಯಾಗಿ, ಸಮಾಜ ಕಲ್ಯಾಣದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಆಂಗ್ಲರ ಕಾನೂನು ಮತ್ತು ತೆರಿಗೆ ನೀತಿಯನ್ನು ವಿರೋಧಿಸಿದ ಸ್ವಾತಂತ್ರ ಹೋರಾಟಗಾರಳು. ಧೀಮಂತ ಮಹಿಳೆ ಸರೋಜಿನಿ ನಾಯ್ಡು ಜಯಂತಿ ಇಂದು ಅವರನ್ನೊಮ್ಮೆ ನಾವು ಸ್ಮರಿಸೋಣ ಅವರಿಗೊಂದು ನಮನ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌹 ಹ್ಯಾಪಿ ರೋಸ್ ಡೇ 🌹 ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿ ಶ್ರೀ ಸಚೀಂದ್ರನಾಥ ಸಾನ್ಯಾಲ್ ಅವರ ಬಲಿದಾನ ದಿನದಂದು ಶತಶತ ನಮನಗಳು.
ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಇವರು ಮಾಡಿರುವ ಧೀರ ತ್ಯಾಗ ಹಾಗು ಅವರಿಗಿದ್ದ ರಾಷ್ಟ್ರ ಚಿಂತನೆ ದೇಶಪ್ರೇಮವನ್ನು ರಾಷ್ಟ್ರವು ಎಂದಿಗೂ ಸ್ಮರಿಸುತ್ತದೆ.
"ಸಚೀಂದ್ರನಾಥ್ ಸಾನ್ಯಾಲ್" ಓರ್ವ ಭಾರತೀಯ ಕ್ರಾಂತಿಕಾರಿ ೩ ಏಪ್ರಿಲ್ ೧೮೯೩ ೭ ಫೆಬ್ರವರಿ ೧೯೪೨ಇವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ HRAನ ಸ್ಥಾಪಕರು.೧೯೨೮ರ ನಂತರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರುನಾಮಕರಣಗೋಡಿತು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಪ್ರತಿರೋಧ ತೋರಿದವರಲ್ಲಿ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ. ಆ ಸಮಯದ ಯುವ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ರಂತಹ ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಪರಿಗಣಿಸಲಾಗಿದೆಬಂಗಾಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಸಚೀಂದ್ರನಾಥ್ ಸಾನ್ಯಾಲ್ ಅವರ ತಂದೆ ಹರಿನಾಥ ಸಾನ್ಯಾಲ್ ಹಾಗೂ ತಾಯಿ ಖೇರೋಡ್ ವಾಸಿನಿ ದೇವಿ. ಅವರು ಬ್ರೀಟಿಷ್ ಭಾರತದ ಸಂಯುಕ್ತ ಪ್ರಾಂತ್ಯಕ್ಕೆ ಸೇರಿದ್ದ ಬನಾರಸ್ನಲ್ಲಿ ೩ ಏಪ್ರಿಲ್ ೧೯೮೩ರಂದು ಜನಿಸಿದರು.
ಪ್ರತಿಭಾ ಸಾನ್ಯಾಲ್ ಇವರ ಪತ್ನಿಯಾಗಿದ್ದು, ಓರ್ವ ಪುತ್ರನನ್ನು ಹೊಂದಿದ್ದರು.
ಸಾನ್ಯಾಲ್, ೧೯೧೩ರಲ್ಲಿ ಪಾಟ್ನಾದಲ್ಲಿ ಅನುಶಿಲನ ಸಮಿತಿಯ ಶಾಖೆಯನ್ನು ಸ್ಥಾಪಿಸಿದರು.೧೯೧೨ರಲ್ಲಿ ನಡೆದ ದೆಹಲಿ ಪಿತೂರಿಯಲ್ಲಿ ರಾಸ್ ಬಿಹಾರಿ ಬೋಸ್ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಈ ಪಿತೂರಿಯ ಪ್ರಕಾರ ಆಗಿನ ವೈಸ್ರಾಯ್ ಹಾರ್ಡಿಂಜ್ ಅವರು ಬಂಗಾಳ ವಿಭಜನೆಯ ನಂತರ ಹೊಸದಾಗಿ ಘೋಷಣೆಗೊಂಡ ರಾಜಧಾನಿ ದೆಹಲಿಯನ್ನು ಪ್ರವೇಶಿಸುತ್ತಿದ್ದಾಗ ದಾಳಿ ನಡೆಸಿದರು.ಈ ದಾಳಿಯಲ್ಲಿ ಲಾರ್ಡ್ ಹಾರ್ಡಿಂಜ್ ತೀವ್ರವಾಗಿ ಗಾಯಗೊಂಡರು. ಭಾರತೀಖಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮುಖ್ಯವಾಗಿ ದಾಖಲಾಗಿರುವ ಗದರ್ ಪಿತೂರಿಯ ಯೋಜನೆಯಲ್ಲಿ ಕೂಡ ಇವರೂ ಕೂಡ ಪ್ರಮುಖ ಪಾಲುದಾರರು. ಈ ವಿಚಾರ ಫೆಬ್ರವರಿ ೧೯೧೫ರಲ್ಲಿ ಬಹಿರಂಗಗೊಂಡ ಬಳಿಕ ಅವರು ಭೂಗತರಾದರು.ಇವರ ಸಹವರ್ತಿ ರಾಸ್ ಬಿಹಾರಿ ಬೋಸ್ ಜಪಾನ್ಗೆ ಪರಾರಿಯಾದ ಬಳಿಕ ಸಾನ್ಯಾಲ್ ಅವರನ್ನು ಭಾರತದ ಕ್ರಾಂತಿಕಾರಿ ಚಳವಳಿಯ ಅತ್ಯಂತ ಹಿರಿಯ ನಾಯಕ ಎಂದು ಪರಿಗಣಿಸಲಾಗಿದೆ.ಬಳಿಕ ಗದರ್ ಪಿತೂರಿಯಲ್ಲಿ ಭಾಗಿಯಾದ ಆರೋಪದಲ್ಲಿ ಬ್ರಿಟೀಶ್ ಸರ್ಕಾರ ಸಚೀಂದ್ರನಾಥ್ ಸಾನ್ಯಾಲ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಸಿ ಇಡಲಾಯಿತು. ಅವಧಿಗೆ ಮುನ್ನವೇ ಬಿಡುಗಡೆಯಾದ ಇವರು ೧೯೨೨ರಲ್ಲಿ ಸೆಲ್ಯೂಲಾರ್ ಜೈಲಿನ ತನ್ನ ಅನುಭವಗಳನ್ನು "ಬಂಧೀ ಜೀವನ್ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಬಿಡುಗಡೆಗೊಂಡ ಬಳಿಕವೂ ಸಾನ್ಯಾಲ್ ಅವರು ಬ್ರಿಟೀಶ್ ಸರ್ಕಾರ ವಿರುದ್ದದ ಹೋರಾಟಗಳಲ್ಲಿ ತೊಡಗಿದ್ದರಿಂದ ಸರ್ಕಾರವು ಬನಾರಸಿನಲ್ಲಿ ಇರುವ ಇವರ ಪೂರ್ವಜರ ಮನೆಯಲ್ಲಿ ಗೃಹ ಬಂಧನದಲ್ಲಿ ಇಟ್ಟಿತು. ೧೯೨೨ರಲ್ಲಿ ಅಸಹಕಾರ ಚಳುವಳಿಯ ಅಂತ್ಯದ ನಂತರ ಸಾನ್ಯಾಲ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರ ಕೆಲವು ಕ್ರಾಂತಿಕಾರಿಗಳು ಸ್ವತಂತ್ರ ಭಾರತವನ್ನು ಬಯಸಿದ್ದರು ಮತ್ತು ತಮ್ಮ ಗುರಿಯನ್ನು ಸಾಧಿಸಲು ಬಲವನ್ನು ಬಳಸಲು ಸಿದ್ಧರಾಗಿದ್ದರು. ಸಾನ್ಯಾಲ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಇಬ್ಬರೂ ಸೇರಿ ಅಕ್ಟೋಬರ್ ೧೯೨೪ ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಅನ್ನು ಸ್ಥಾಪಿಸಿದರು. ೧೯೨೫ರ ಜನವರಿ ೧ರಂದು ಉತ್ತರ ಭಾರತದ ದೊಡ್ಡ ನಗರಗಳಲ್ಲಿ ವಿತರಿಸಲಾದ ಕ್ರಾಂತಿಕಾರಿ ಎಂಬ ಶೀರ್ಷಿಕೆಯ ಹಿಂದೂಸ್ತಾನ್ ರಿಪಬ್ಲಿಕನ್ ನ ಅಸೋಸಿಯೇಶನ್ ಪ್ರಣಾಳಿಕೆಯನ್ನು ಸಚೀಂದ್ರನಾಥ್ ಸಾನ್ಯಾಲ್ ಅವರೇ ರಚಿಸಿದ್ದರು
ಕಾಕೋರಿ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸಾನ್ಯಾಲ್ ಜೈಲುವಾಸ ಅನುಭವಿಸಿದರು. ಬಳಿಕ ಆಗಸ್ಟ್ ೧೯೩೭ರಲ್ಲಿ ನೈನಿ ಸೆಂಟ್ರಲ್ ಜೈಲಿನಿಂದ ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟರುಹೀಗೆ ಸಚೀಂದ್ರನಾಥ್ ಸಾನ್ಯಾಲ್ ಎರಡು ಬಾರಿ ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು.
ಸಾಕಷ್ಟು ಪ್ರಸಿದ್ದಿ ಪಡೆದ ಸಾನ್ಯಾಲ್ ಮತ್ತು ಮಹಾತ್ಮ ಗಾಂಧಿಯವರ ಮಧ್ಯೆ ನಡೆದ ಲೇಖನ ರೂಪದ ಚರ್ಚೆ ೧೯೨೦ ಮತ್ತು ೧೯೨೪ರ ನಡುವೆ ಯಂಗ್ ಇಂಡಿಯಾದಲ್ಲಿ ಪ್ರಕಟವಾಯಿತು. . ಸಾನ್ಯಾಲ್, ಗಾಂಧಿಯವರ ಮಂದಗಾಮಿ ವಿಧಾನದ ವಿರುದ್ಧ ವಾದಿಸಿದ್ದರು. ಸಾನ್ಯಾಲ್ ಅವರು ತನ್ನ ಧೃಢವಾದ ಹಿಂದೂ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದರು ಆದರೆ ಅವರ ಹೆಚ್ಚಿನ ಅನುಯಾಯಿಗಳು ಮಾರ್ಕ್ಸ್ ವಾದಿಗಳಾಗಿದ್ದರು ಮತ್ತು ಧರ್ಮಗಳನ್ನು ವಿರೋಧಿಸುತ್ತಿದ್ದವರಾಗಿದ್ದರು. ಭಗತ್ ಸಿಂಗ್ ಅವರು ಸಾನ್ಯಾಲ್ ಅವರ ನಂಬಿಕೆಗಳನ್ನು "ನಾನೇಕೆ ನಾಸ್ತಿಕ" ಎಂಬ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಜೋಗೇಶ್ ಚಂದ್ರ ಚಟರ್ಜಿ, ಸಾನ್ಯಾಲ್ ಅವರ ನಿಕಟ ಸಹವರ್ತಿಯಾಗಿದ್ದರು. ಮಹಾತ್ಮ ಗಾಂಧಿಯವರ ಅಹಿಂಸಾವಾದನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಮೌಲಾನಾ ಶೌಕತ್ ಅಲಿ ಬಂದೂಕುಗಳನ್ನು ಪೂರೈಸಿದ್ದರು. ಇನ್ನೊಬ್ಬ ಪ್ರಮುಖ ಕಾಂಗ್ರೆಸ್ಸಿಗ, ಕೃಷ್ಣಕಾಂತ್ ಮಾಳವೀಯ ಕೂಡ ಅವರಿಗೆ ಆಯುಧಗಳನ್ನು ಪೂರೈಸಿದ್ದರು.ದ್ವಿತೀಯ ಬಾರಿಗೆ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಯಾಗಿದ್ದ ಸಮಯದಲ್ಲಿ ಸಾನ್ಯಾಲ್ ತೀವ್ರತರವಾದ ಕ್ಷಯ ರೋಗಕ್ಕೆ ತುತ್ತಾದರು. ಅನಾರೋಗ್ಯದ ಕಾರಣ ಇವರನ್ನು ಗೋರಖಪುರ ಜೈಲಿಗೆ ಸ್ಥಳಾಂತರಿಸಲಾಯಿತು. ೧೯೪೨, ಫೆಬ್ರವರಿ ೭ರಂದು ಗೋರಖಪುರದ ಜೈಲಿನಲ್ಲಿಯೇ ಅನಾರೋಗ್ಯದ ಕಾರಣ ಮರಣ ಹೋಂದಿದರು. ಇವರ ವಾರಣಾಸಿಯ ಆಸ್ತಿಯನ್ನು ಬ್ರಿಟೀಷ್ ಸರ್ಕಾರವು ವಶಪಡಿಸಿಕೊಂಡಿತು. ಈ ಭಾರತಾಂಬೆಯ ಪುತ್ರನ ಚಿಕ್ಕ ಮೆಲುಕುತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿ, ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿ ಶ್ರೀ ಸಚೀಂದ್ರನಾಥ ಸಾನ್ಯಾಲ್ ಅವರ ಬಲಿದಾನ ದಿನದಂದು ಶತಶತ ನಮನಗಳು.ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಇವರು ಮಾಡಿರುವ ಧೀರ ತ್ಯಾಗ ಹಾಗು ಅವರಿಗಿದ್ದ ರಾಷ್ಟ್ರ ಚಿಂತನೆ, ದೇಶಪ್ರೇಮವನ್ನು ರಾಷ್ಟ್ರವು ಎಂದಿಗೂ ಸ್ಮರಿಸುತ್ತದೆ. ಮುಂದು ಸ್ಮರಿಸಲಿ ಇಂದಿನ ಯುವ ಪೀಳಿಗೆ ಇದನ್ನು ಸ್ಮರಿಸಲಿ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌹 ಹ್ಯಾಪಿ ರೋಸ್ ಡೇ 🌹ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ
ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಜನ್ಮದಿನವಿದು. ಫೆಬ್ರವರಿ 7, 1926ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು. ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನು, ಸಮಚಿತ್ತವನ್ನು, ಜನಸಂಪರ್ಕವನ್ನು ಪಡೆದಿದ್ದರು.
ಸೃಜನ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ ಮುಖ್ಯರಲ್ಲಿ ಒಬ್ಬರಾಗಿದ್ದಾರೆ. ಡಾ. ಜಿ. ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾಗಿ ನಮ್ಮ ಕನ್ನಡಿಗರ ಹೆಮ್ಮೆಯಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ, ದೂರ ದೂರದ ಹಳ್ಳಿಗಾಡುಗಳಲ್ಲಿ ಓದಿನ ಸೌಲಭ್ಯಗಳಿಗಾಗಿ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಜನಸಮುದಾಯದಿಂದ ಬಂದು ಶ್ರಮ, ನಿಷ್ಠೆ, ಹಾಗೂ ಪ್ರತಿಭೆಗಳಿಂದ ರಂಗದಲ್ಲಿ ಮುಖ್ಯರಾಗತೊಡಗಿದ್ದ, ಹಾಗೆ ತೊಡಗಿ ಯಶಸ್ಸು ಪಡೆದ ಮೊದಲ ತಲೆಮಾರಿಗೆ ಜೀಯೆಸ್ಸೆಸ್ ಸೇರುತ್ತಾರೆ. ಕನ್ನಡ ನವೋದಯದ ಮುಂದಾಳುಗಳು ರೂಪಿಸಿದ ಹಾದಿಯಲ್ಲಿ ನಡೆದು ಸಮರ್ಥ ಉತ್ತರಾಧಿಕಾರಿಗಳು ಎಂದು ಸಾಬೀತು ಮಾಡಿದ್ದಾರೆ.
ಶಿಕ್ಷಕ ತಂದೆಯೊಡನೆ ಸುತ್ತುತ್ತ ಊರೂರುಗಳಲ್ಲಿ ಶಿಕ್ಷಣ ಪಡೆದು ಮೈಸೂರು ಸೇರಿ ವೆಂಕಣ್ಣಯ್ಯ, ಕುವೆಂಪು ಅವರ ಒತ್ತಾಸೆಯಲ್ಲಿ ಬಿ.ಎ (ಆನರ್ಸ್), ಎಂ.ಎ ಹಾಗೂ ಪಿ.ಎಚ್.ಡಿ ಗಳನ್ನು ಪಡೆದರು. ಮಹಾರಾಜ ಕಾಲೇಜು ಆಗ ಟಂಕಸಾಲೆ. ಅಲ್ಲಿ ಪ್ರಮಾಣೀಕರಣಗೊಂಡರೆ ಮಾತ್ರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಚಲಾವಣೆ ಸಿಗುವಂತೆ ಇದ್ದ ಕಾಲ. ವಿಶ್ವವಿದ್ಯಾಲಯದ ಹೊರಗಿದ್ದವರೂ ಒಂದಲ್ಲ ಒಂದು ಬಗೆಯಲ್ಲಿ ಈ ಟಂಕಸಾಲೆಯ ವ್ಯಾಪ್ತಿಯ ಒಳಗಾಗಿಯೇ ಇದ್ದರೆಂಬುದಕ್ಕೆ ಪ್ರಬುದ್ಧ ಕರ್ನಾಟಕ ಹಾಗೂ ಮಹಾರಾಜ ಕಾಲೇಜು ಕರ್ನಾಟಕ ಸಂಘ ಪ್ರಕಟಿಸಿದ ಗ್ರಂಥಗಳ ಪುಟಗಳು ಸಾಕ್ಷಿಯಾಗಿವೆ. ಜೀಯೇಸ್ಸೆಸ್ ಅಲ್ಲಿ ಕವಿಯಾಗುವ ಹಂಬಲಕ್ಕೆ ಪುಷ್ಟಿ ಪಡೆದರು. ಮಾಸ್ತಿಯವರು ‘ಜೀವನ’ದಲ್ಲಿ ಈ ಕವಿಯನ್ನು ಮೊದಲು ಅನಾವರಣಗೊಳಿಸಿದರಾದರೂ ಜೀಯೆಸ್ಸೆಸ್ ಹಸಿರು ಬಾವುಟ ಕಂಡದ್ದು ಕುವೆಂಪು ಅವರಲ್ಲಿ. ಈ ಮಹಾರಾಜ ಕಾಲೇಜು ಇವರೊಳಗಿನ ವಿಮರ್ಶಕ ಮೀಮಾಂಸಕರನ್ನೂ ಬೆಳೆಸಿತು.
ಜೀಯೆಸ್ಸೆಸ್ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ (ದಾವಣಗೆರೆ, ಶಿವಮೊಗ್ಗೆ, ಮೈಸೂರು) ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರಾಗಿ ಕೆಲಸಮಾಡಿ, ಮರಳಿ ಮಹಾರಾಜಾ ಕಾಲೇಜಿಗೆ ಬಂದು, ಅನಂತರ (1966) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, 1970ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯರಾದರು. ಇಲ್ಲಿ ಎರಡು ದಶಕಗಳ ಕಾಲ ಕಾವ್ಯ, ಕಾವ್ಯಮೀಮಾಂಸೆಗಳ ಪಾಠ ಹೇಳಿದ್ದಾರೆ. ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಜೀಯೆಸ್ಸೆಸ್ ಸೇರುತ್ತಾರೆ. ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯ, ಇಂಗ್ಲಿಷ್ ರೋಮಾಂಟಿಕ್ ಕಾವ್ಯ, ಐರೋಪ್ಯ ನವ್ಯಕಾವ್ಯ, ಪಾಶ್ಚಾತ್ಯ ಮಹಾಕಾವ್ಯ ಹಾಗೂ ತೌಲನಿಕ ಕಾವ್ಯ ಮೀಮಾಂಸೆ – ಇವು ಅವರು ಪಾಠ ಹೇಳಿದ ಮುಖ್ಯ ವಲಯಗಳು. ಎಲ್ಲ ಕಾಲದ, ಎಲ್ಲ ದೇಶದ ಕವಿಗಳನ್ನು ಕನ್ನಡದ ಸಂವೇದನೆಯ ಮೂಲಕವೇ ಗ್ರಹಿಸಬಯಸುವ, ಪರೋಕ್ಷವಾಗಿ ಒಂದು ಬಗೆಯ ಶುದ್ಧ ಕಾವ್ಯವನ್ನು ಹುಡುಕುವ ವಿಧಾನವನ್ನು ಬಳಸಿದರು. ಅವರ ಪಾಠಗಳು ಪೂರ್ವಸಿದ್ಧತೆ, ವಿವರಗಳ ಮಂಡನೆ, ಚಿಂತನಶೀಲತೆ, ಸಾಮಯಿಕ ಒಳನೋಟಗಳನ್ನು ಒಳಗೊಂಡಿರುವುದರ ಜೊತೆಗೆ ಹೊಸದನ್ನು ಅಳವಡಿಸಿಕೊಳ್ಳುವ, ಹೊಸದಾದುದಕ್ಕೆ ಪ್ರತಿಕ್ರಯಿಸುವ ಆಸಕ್ತಿಯಿಂದ ಕೂಡಿರುತ್ತಿದ್ದವು. ಅವರ ಪಾಠಗಳು ಅವರ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿ ಮೊಳೆತು ಬೆಳೆದಿವೆಯಾಗಿ, ಜೀಯೆಸ್ಸೆಸ್ ಪರೋಕ್ಷವಾಗಿ ತರಗತಿಯ ಹೊರಗೂ ಮೇಷ್ಟರಾಗಿದ್ದಾರೆ. ಅವರ ಹಲವಾರು ಶಿಷ್ಯರು ಕನ್ನಡ ವಿಮರ್ಶೆ ಮತ್ತು ಸಾಹಿತ್ಯಾಧ್ಯಯನದ ಕ್ಷೇತ್ರದ ಕೃಷಿಯಲ್ಲಿ ತೊಡಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿ, ಸಂಘಟಿಸಿ, ನಿರ್ವಹಿಸಿ ಜೀಯೆಸ್ಸೆಸ್ ಹೆಸರಾಗಿದ್ದಾರೆ. ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದ್ದಾರೆ. ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕ’ದ ಯೋಜನೆಗಳು ಅನನ್ಯವಾದವು. ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಗಿದೆ. ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜೀಯೆಸ್ಸೆಸ್ ಮುಂದುವರೆಸಿ ಯಶಸ್ಸು ಸಾಧಿಸಿದ್ದರು.
ಜೀಯೆಸ್ಸೆಸ್ ಅವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಬಲುಪ್ರಿಯರು. ಅವರ ಭಾವಗೀತೆಗಳು ಹಲವಾರು ಪ್ರಮುಖ ಹಾಡುಗಾರರ, ಜನಸಾಮಾನ್ಯರ ಧ್ವನಿಗಳಲ್ಲಿ ಹಲವಾರು ದಶಕಗಳಿಂದ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭಾವಿಸದ ಕನ್ನಡಿಗನೇ ಇಲ್ಲ. ಎಲ್ಲ ಮಾದರಿಯ ಕವಿತೆಗಳಲ್ಲಿ, ಹಾಡುಗಳಲ್ಲಿ ಅದು ನಿರಂತರವಾಗಿ ಜನರ ನಾಲಿಗೆಯಲ್ಲಿ, ಜನಮಾನಸದಲ್ಲಿ ಬೆಳಗುತ್ತಿದೆ. ‘ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ಯಾರವರು ಯಾರವರು ಯಾರವರು ಯಾರೋ’, ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ’, ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು’, ‘ಹಾಡು ಹಳೆಯದಾದರೇನು’, ‘ಯಾವುದೀ ಪ್ರವಾಹವೂ’, 'ಬೆಳಗು ಬಾ ಹಣತೆಯನು', 'ನೀನು ಮುಗಿಲು ನಾನು ನೆಲ' ಹೀಗೆ ಅವರ ಭಾವಗೀತೆಗಳನ್ನು ಒಂದಾದ ಮೇಲೆ ಒಂದು ನೆನಪಿಸಿಕೊಳ್ಳುತ್ತಲೇ ಇರಬೇಕು ಎಂದೆನಿಸುತ್ತದೆ ಮಾತ್ರವಲ್ಲ ಆ ನೆನಪೇ ಒಂದು ಸವಿ ಪಯಣದ ಮೆಲುಕಿನಂತಿರುತ್ತದೆ. ಜೀಯೆಸ್ಸೆಸ್ ಕನ್ನಡಪರ ಚಳುವಳಿಗಳಲ್ಲಿ, ಖಾಳಜಿಗಳಲ್ಲಿ ಕೂಡಾ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದವರು.
ಕನ್ನಡದ ಮುಖ್ಯಕವಿಗಳಾಗಿ ಜೀಯೆಸ್ಸೆಸ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಾವ್ಯರಚನೆ ಮಾಡಿದ್ದಾರೆ. ಕುವೆಂಪು ಮತ್ತು ಪು.ತಿ.ನ ಅವರ ಕಾವ್ಯರಚನೆಗಳಿಂದ ಬೇರೆ ಬೇರೆ ಬಗೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಪ್ರಭಾವಿತರಾಗಿ ಕವಿತೆಗಳನ್ನು ಬರೆಯತೊಡಗಿದ ಜೀಯೆಸ್ಸೆಸ್ ಮುಂದಿನ ಕನ್ನಡ ಕಾವ್ಯದ ಬೆಳವಣಿಗೆಯಲ್ಲಿ ಬೆರೆಯುತ್ತ ಬೆಳೆದರು. ನವೋದಯ, ನವ್ಯ, ಬಂಡಾಯಗಳೆಂಬ ಮಾರ್ಗಗಳು ಅವರ ಕಾವ್ಯರಚನೆಯನ್ನು ಪ್ರಭಾವಿಸಿವೆ. ಇವುಗಳ ಪ್ರಭಾವ ಏನೇ ಇದ್ದರೂ, ಜೀಯೆಸ್ಸೆಸ್ ಅವರ ಮುಖ್ಯ ಕವಿತೆಗಳಲ್ಲಿ ತುಂಬಿರುವುದು ಪ್ರಸಾದ ಗುಣ. ಇವರ ಕವನ ಸಮುದಾಯದ ಅಧಿಕತಮ ಕವಿತೆಗಳ ಸಾಧಾರಣ ಧರ್ಮವನ್ನು ಗಮನಿಸಿದರೆ ಕವಿ, ಕಾವ್ಯಶರೀರವನ್ನು, ಪದಸಂಯೋಜನೆಯನ್ನು, ಅರ್ಥವು ಓದುಗನಿಗೆ ಸಂವಹನಗೊಳಿಸುವ ಪಾರದರ್ಶಕ ಮಾಧ್ಯಮವನ್ನಾಗಿ ಬಳಸುತ್ತಿರುವುದು ಸ್ಪಷ್ಟಗೊಳ್ಳುತ್ತದೆ. ಕಾವ್ಯಶರೀರ ‘ಅರ್ಥ’ವನ್ನು ಮುಚ್ಚಿಡಲು ರೂಪುಗೊಂಡುದಲ್ಲ. ಹಾಗೆಯೇ ‘ಅರ್ಥ’ವನ್ನು ಗ್ರಹಿಸಿಕೊಳ್ಳಲೆಂದೇ ಕಾವ್ಯ ಶರೀರವನ್ನು ರೂಪಿಸುವ ನವ್ಯಕವಿಗಳ ಮಾದರಿಯೂ ಇವರದ್ದಲ್ಲ. ಕವಿ ತನ್ನ ಅನುಭವಕ್ಕೆ ದಕ್ಕಿದ ಭಾವಾರ್ಥಗಳನ್ನು ಭಾಷಿಕವಾಗಿ ಮಂಡಿಸುತ್ತಾರೆ; ಹೀಗಾಗಿ ಇದೊಂದು ಬಗೆಯ ಧ್ಯಾನಿತ ಕಾವ್ಯ. ಹಾಗಾಗಿ ಕವಿ ಅನುಭವದ ಗ್ರಹಿಕೆಗೆ ಕಾವ್ಯ ಬಿಡುಗಡೆಯ ಮಾಧ್ಯಮವಾಗುತ್ತದೆ.
‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು. ಜೀಯೆಸ್ಸೆಸ್ ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗುವುದು ಕಂಡುಬರುತ್ತದೆ. ಒಂದು ಜೀವಸಂಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ವಿಸ್ಮಯ ಉತ್ಸುಕತೆಗಳು ಅವರ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ. ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿವೆ. ಇನ್ನೊಂದು ನೆಲೆಯಲ್ಲಿ ನಿರೂಪಕ ಸಾಮಾಜಿಕ ಹೊಣೆಗಾರಿಕೆಯನ್ನು ಪಡೆದುಕೊಳ್ಳುತ್ತಾನೆ. ಆವರಣದ ಮಾನವ ಜಗತ್ತಿನ ವೈಸಾದೃಶ್ಯಗಳನ್ನು, ಲಯರಾಹಿತ್ಯವನ್ನು, ಅಪಶ್ರುತಿಗಳನ್ನು ಗ್ರಹಿಸಿ ಅವುಗಳನ್ನು ತನ್ನ ಕವಿತೆಗಳಲ್ಲಿ ಮಂಡಿಸುವುದು ಈ ನಿರೂಪಕನ ಹೊಣೆ.
‘ಕಾಲ’ ಮತ್ತು ‘ಮನುಷ್ಯ’ ತಮ್ಮ ಕಾವ್ಯದ ಕೇಂದ್ರಗಳು ಎಂದು ಜೀಯೆಸ್ಸೆಸ್ ಹೇಳಿರುವುದುಂಟು. ನಿರಂತರವಾದದ್ದು ಹಾಗೂ ಅದರ ಒಂದು ಘಟಕದಲ್ಲಿ ನಿಜವಾಗವಂಥದ್ದು ಇವೆರಡೂ, ಅತೀತವಾದದ್ದು ಅನ್ಯವಲ್ಲ, ಅದು ಲೋಕವೇ ಎಂಬ ನೆಲೆಯಲ್ಲಿರುವ ಇವರ ಕಾವ್ಯ ಲೋಕಪ್ರೀತಿಯದು.
‘ಪರಿಶೀಲನದಿಂದ’ ಮೊದಲಾಗಿ ‘ಗತಿಬಿಂಬ’, ‘ನವೋದಯ’, ‘ಅನುರಣನ’, ‘ಪ್ರತಿಕ್ರಿಯೆ’, ಮತ್ತು ‘ಬೆಡಗು’ ವರೆಗಿನ ಅವರ ವಿಮರ್ಶೆಯ ಸಂಕಲನಗಳು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ. ಕನ್ನಡ ನವೋದಯ ವಿಮರ್ಶೆಯ ವಿಚಾರಮೂಲವಾದಿ ಆಕೃತಿಗಳನ್ನು ಇಡಿಯಾಗಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಕಾವ್ಯಕ್ಕೆ ಸಮರ್ಥವಾಗಿ ಅನ್ವಯಿಸುವ ಜೀಯೆಸ್ಸೆಸ್ ಅವರ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಅವರ ವಿಮರ್ಶಾ ಪ್ರಯತ್ನದ ಪ್ರಮುಖ ಹಂತ. ಅವರ ‘ಸೌಂದರ್ಯ ಸಮೀಕ್ಷೆ’ಯಲ್ಲಿ ಕಾವ್ಯಗಳಲ್ಲಿ, ಕೃತಿಭಾಗಗಳಲ್ಲಿ ಕಂಡು ಬರುವ ‘ಲೋಕಾನುಭವ ಪರಿವರ್ತನೆ’ಯನ್ನು ವ್ಯಾಖ್ಯಾನಿಸುವ ಬಗೆ ಸಾಹಿತ್ಯಾಭ್ಯಾಸಿಗಳಿಗೆ ಈಗಲೂ ಸಾಹಿತ್ಯಾಧ್ಯಯನಕ್ಕೆ ಪ್ರವೇಶವನ್ನು, ಸಾಹಿತ್ಯಾಭಿರುಚಿಗೆ ಮಾದರಿಯನ್ನು ಒದಗಿಸಬಲ್ಲದು. ತಾತ್ವಿಕವಾಗಿ ಕನ್ನಡ ಕಾವ್ಯಪರಂಪರೆಯನ್ನು ವ್ಯಾಖ್ಯಾನಿಸುವ ಅವರ ಇನ್ನೆರಡು ಪ್ರಯತ್ನಗಳೆಂದರೆ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’. ಕನ್ನಡ ಸಾಹಿತ್ಯ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಅಂಶಗಳು ಈ ಕೃತಿಗಳಲ್ಲಿ ಚರ್ಚಿತವಾಗಿವೆ.
‘ಮಹಾಕಾವ್ಯ ಸಮೀಕ್ಷೆ’ ಗ್ರಂಥದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯ ಸಂಬಂಧ ತತ್ತ್ವಗಳನ್ನು ತೌಲನಿಕವಾಗಿ ವಿವೇಚಿಸಲಾಗಿದೆ. ಇಂಥ ಹೋಲಿಕೆಯ ಅಧ್ಯಯನವನ್ನು ಸಾಹಿತ್ಯ ತತ್ವಗಳ, ತಾತ್ತ್ವಿಕ ಪರಿಕಲ್ಪನೆಗಳ ನೆಲೆಯಲ್ಲಿ ಬಳಸಿ ಬರೆದ ಲೇಖನಗಳ ಸಂಕಲನ, ‘ಕಾವ್ಯಾರ್ಥ ಚಿಂತನ’. ಜೀಯೆಸ್ಸೆಸ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದು ಕೊಟ್ಟ ಕೃತಿ ಇದು.
ಇಷ್ಟೆಲ್ಲಾ ಬರಹಗಳ ನಡುವೆ ಜೀಯೆಸ್ಸೆಸ್ ಮೂರು ಪ್ರವಾಸ ಕಥನಗಳನ್ನು (ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ, ಗಂಗೆಯ ಶಿಖರಗಳಲ್ಲಿ ಮತ್ತು ಅಮೆರಿಕದಲ್ಲಿ ಕನ್ನಡಿಗ), ಒಂದು ಜೀವನಚಿತ್ರವನ್ನು (ಕರ್ಮಯೋಗಿ) ಹಾಗೂ ಆತ್ಮಕಥನ ಭಾಗವನ್ನು (ಚತುರಂಗ) ಬರೆದಿದ್ದಾರೆ. ಪ್ರವಾಸಕಥನಗಳು ಸಮೃದ್ಧ ವಿವರಗಳ ಜೊತೆಗೆ ಸಂವೇದನಾಶೀಲವಾದ ಮನಸ್ಸಿನ ತುಡಿತಗಳನ್ನು ಒಳಗೊಂಡು ಮುಖ್ಯವಾಗುತ್ತದೆ.
‘ಕರ್ಮಯೋಗಿ’ ಸಿದ್ಧರಾಮನನ್ನು ಕುರಿತು ಬರೆದ ಜೀವನಚಿತ್ರ. ಕನ್ನಡ ಕಾವ್ಯಗಳನ್ನು, ಅವುಗಳ ಕಥನವನ್ನು ಆಧುನಿಕ ನುಡಿಕಟ್ಟಿನಲ್ಲಿ ಹೇಳುವ ಪ್ರಯತ್ನಗಳಲ್ಲಿ ಇದು ಒಂದು. ‘ಚತುರಂಗ’ದಲ್ಲಿ ತಮ್ಮ ಜೀವನದ ಬೇರೆಬೇರೆ ಹಂತಗಳನ್ನು, ನೆಲೆಗಳನ್ನು ಗಮನಿಸಿ ಮುಖ್ಯವಾದ ವಿವರಗಳನ್ನು ಬಳಸಿ ಒಂದು ಆತ್ಮಕಥಾನಕವನ್ನು ಬರೆದಿದ್ದಾರೆ.
ಕಳೆದ ಶತಮಾನದ ಸಾಹಿತ್ಯ ಚರಿತ್ರೆ ಬರೆಯುವವರು ಗಮನಿಸಲೇಬೇಕಾದ ಬಹುಮುಖ್ಯ ಕೃತಿಗಳನ್ನು ಜೀಯೆಸ್ಸೆಸ್ ಬರೆದಿದ್ದಾರೆ. ಮಾತ್ರವಲ್ಲ ಸಾಹಿತ್ಯದ ಬೆಳವಣಿಗೆಯ ಹಲವು ನೆಲೆಗಳಲ್ಲಿ ಪರೋಕ್ಷವಾಗಿ ತಮ್ಮ ಸಾಹಿತ್ಯಕ ವ್ಯಕ್ತಿತ್ವದಿಂದ ಪ್ರೇರಣೆಯನ್ನು ಒದಗಿಸಿದ್ದಾರೆ ಎಂಬುದನ್ನು ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕು.
ಈ ಮಹಾನ್ ಸಾಹಿತ್ಯಾಚಾರ್ಯರು ಡಿಸೆಂಬರ್ 23, 2013ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ಅವರ ಜನ್ಮದಿನದ ನೆನಪಲ್ಲಿ ಸಾಷ್ಟಾಂಗ ನಮನ.
ನಮಸ್ಕಾರಗಳು ಅವರನ್ನು ಸದಾ ಸ್ಮರಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌹 ಹ್ಯಾಪಿ ರೋಸ್ ಡೇ 🌹 ಯಾವುದೇ ಸಂಬಂಧಕ್ಕು "ಪ್ರೀತಿ" ಅತ್ಯಮೂಲ್ಯ, ಏಕೆಂದರೆ ಪ್ರೀತಿಗೆ ಗೊತ್ತಿರುವುದು ಪ್ರೀತಿಸುವುದೊಂದೇ!!! ನಿಮ್ಮ ಮಧುರ ಕ್ಷಣಗಳಿಗೆ ಸಾಕ್ಷಿ ಆಗಲಿದೆ ಪ್ರತಿದಿನದ ವಿಶೇಷ ದಿನದೊಂದಿಗೆ ನ "ವ್ಯಾಲೆಂಟೈನ್ಸ್ ವಿಶೇಷ ವಾರ"ದಲ್ಲಿ. ಸೊ... ಈ ವರ್ಷ ನಿಮ್ಮ "ವ್ಯಾಲೆಂಟೈನ್ಸ್ ಡೇ"ಅನ್ನು ನಿಮ್ಮ ವ್ಯಾಲೆಂಟೈನ್ ಜೊತೆ ಆಚರಿಸಿ.ನನ್ನ ಸ್ನೇಹಿತರೇ ಪ್ರತಿ ದಿನದವಿಶೇಷವನ್ನುನಿಮ್ಮ ಪ್ರೀತಿಗೆ ಹಂಚುವಲ್ಲಿ ಯಶಸ್ಸಿಗೆ ಎನ್ನುವ #ಶುಭೋದಯ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🥀🎵ಲತಾ ಮಂಗೇಶ್ಕರ್ ಅವರ ಪುಣ್ಯತಿಥಿ🎶🌸 ಹಿನ್ನೆಲೆ ಗಾಯಕಿ ಸಂಗೀತ ಸಂಯೋಜಕ ಎಂಟು ದಶಕಗಳ ವೃತ್ತಿಜೀವನದಲ್ಲಿ ಭಾರತ ಸಂಗೀತ ಉದ್ಯಮಕ್ಕೆ ಮೇರು ಕೊಡುಗೆ ನೀಡಿದ ಕ್ವೀನ್ ಆಫ್ ಮೆಲೋಡಿ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ಗೌರವ ನಮನಗಳನ್ನು ಸಲ್ಲಿಸುತ್ತೇನೆ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💐ಗುರುವಾರದ ಶುಭಾಶಯಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾಕಾರ ಮೂರ್ತಿ, ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ದಿ. ಇಬ್ರಾಹಿಂ ಸುತಾರ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
ಹಿಂದೂ ಧರ್ಮ ಪ್ರವಚನ ಸಾರುತ್ತಾ, ಭಾವೈಕ್ಯ ಬೆಸೆಯುತ್ತಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡ ಶ್ರೀಯುತರು ಸದಾ ಆದರ್ಶಪ್ರಾಯರು.ನನ್ನ ಪ್ರೀತಿಯ ಕರುನಾಡಿನ ಸ್ನೇಹಿತರೆ ಮತ್ತು ನಾಡಿನ ಜನತೆ ಅದ್ಭುತವಾದ ಪ್ರವಚನಗಾರ ಇಬ್ರಾಹಿಂ ಎನ್. ಸುತಾರ್ ಅವರ ಅಪೂರ್ಣ ಹೆಸರು ನಬೀ ಸಾಹೇಬ್ ಸುತಾರ್ ರವರು ಬದುಕಿ ಬಾಳಿದ ದಿನಗಳು ಹೀಗೆ ಅವರ ಜನನ ೧೦ ಮೇ ೧೯೪೦ - ಅವರ ಮರಣ ೦೫ ಫೆಬ್ರವರಿ ೨೦೨೨ ಬದುಕಿ ಬಂದ ದಿನವೆಲ್ಲ ನಾಡಿಗೆ ಅರ್ಪಿಸಿದ ವ್ಯಕ್ತಿ ಎಂದರು ತಪ್ಪಾಗಲಾರದು ಅವರ ಈ ಪುಣ್ಯ ಸ್ಮರಣೆ ಎಂದು ಅವರ ನಡೆದು ಬಂದು ಹಾದಿಯ ಮೆಲುಕು ಹಾಕೋಣ ಅವರನ್ನು ಮರಿಸೋಣ ಎನ್ನುವುದು ನಮ್ಮ ಯುವ ಪೀಳಿಗೆಯ ಆಸೆಯಾಗಲಿ ಎನ್ನುವುದು ನನ್ನ ಆಸೆ ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.
ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ ಭಗವದ್ಗೀತೆಗಳ ಅಧ್ಯಯನ ಮಾಡಿದರು.
ದೇವರು ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ. ಇವರು ಪಡೆದ ಪ್ರಶಸ್ತಿಗಳು ಸನ್ಮಾನ ಪುರಸ್ಕಾರಗಳು ಹಲವು೧೯೯೫ ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.೨೦೧೮ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಇವರ ಪ್ರಶಸ್ತಿಗಳಿಗೆ ಸಿಕ್ಕ ಗೌರವದ ಗೌರವಕ್ಕಿಂತ ಇವರ ವಚನಗಳು ಮತ್ತು ಇವರ ಬೋಧನೆಗಳಿಗೆ ಸಿಕ್ಕ ಗೌರವವೇ ಹೆಚ್ಚು ಅಂತಹ ಗೌರವ ಸಂಪಾದಿಸುವುದು ಸುಲಭದ ಮಾತಲ್ಲ ಕರುನಾಡಿನ ಸಂತ ಎಂದೇ ಕರೆಯಲ್ಪಡುತ್ತಿದ್ದ ಇಬ್ರಾಹಿಂ ಸುತಾರ್ ರವರ ಪುಣ್ಯ ಸ್ಮರಣೆ ಎಂದು ನಾವು ಅವರ ಬೋಧನೆಗಳನ್ನು ಮತ್ತು ಅವರ ನಡವಳಿಕೆಗಳನ್ನು ನಮ್ಮ ಜೀವನದಲ್ಲಿ ಅಂಟಿ ಹಾಕಿಕೊಳ್ಳೋಣ ದೇಶ ಕಟ್ಟೋಣ ಎನ್ನುವ ಇಬ್ರಾಹಿಂ ಸುತಾರ್ ಅವರ ಮಾತುಗಳು ನಮ್ಮ ಕಿವಿಯೊಳಗೆ ಗುಯಿಗುಟ್ಟುತ್ತಿದೆ ಅವರ ದಾರಿ ದೇಶದ ಯುವ ಪೀಳಿಗೆ ಅಳವಡಿಸಿಕೊಂಡರೆ ದೇಶ ದೇಶದ ಜನರು ಸದಾ ನಗುನಗುತ್ತಿರಬಹುದು ಅನಿಸುತ್ತದೆ ಇಬ್ರಾಹಿಂ ಸುತಾರ್ ರವರು ಕೆಲವೊಮ್ಮೆ ಹೇಳುತ್ತಿದ್ದ ಮಾತುಗಳು ನಾಡಿನ ಜನರ ಜೀವನ ಶೈಲಿಯ ಆಧಾರಿತ ಜಾತಿ ಪದ್ಧತಿಯನ್ನು ಮತ್ತು ಅವಲಂಬಿಸಿದ್ದ ಕೃಷಿ ಪದ್ಧತಿಯನ್ನು ಅವಲಂಬಿಸಿ ಜಾತಿಗಳನ್ನು ಕಟ್ಟಲಾಗಿತ್ತು ಅದನ್ನು ಇಂದು ದುರುಪಯೋಗ ಪಡಿಸದೆ ಒಳ್ಳೆತನಕ್ಕೆ ಬಳಸಿಕೊಳ್ಳೋಣ ನಾವೆಲ್ಲ ಎನ್ನುತ್ತಿದ್ದರು. ಇವರ ಮಾತುಗಳು ದೇಶದ ಜನರ ಹಾಗೂ ಕನ್ನಡ ನಾಡಿನ ಜನರ ಹಿತವನ್ನು ಕಾಪಾಡುವುದರಲ್ಲಿ ಹೆಚ್ಚಿನ ಶ್ರಮ ವಹಿಸಿದೆ ಎನಿಸುತ್ತದೆ ಸ್ನೇಹಿತರೆ, ನೋಡಿಕೊಂಡ ಅದ್ಭುತ ವ್ಯಕ್ತಿಗೆ ನಮ್ಮ ಕೋಟಿ ಕೋಟಿ ನಮನ ಸಲ್ಲಿಸೋಣ ಎಂದು ಎನ್ನುತ್ತಾ ನಿಮ್ಮ ಸ್ನೇಹಿತರು ಅನಿಲ್ ಮಲ್ನಾಡ್
#💐ಗುರುವಾರದ ಶುಭಾಶಯಗಳು ಇಂದು ನಮ್ಮ ಪ್ರೀತಿಯ ಕನ್ನಡದ ಕವಿ ಕೆ ಎಸ್ ನಿಸಾರ್ ಅಹಮದ್ ಜನ್ಮದಿನ
'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. ಪದ್ಮಶ್ರೀ ಮತ್ತು ಪಂಪ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿ, ಗೌರವಗಳು ನಿಸಾರರನ್ನು ಅಲಂಕರಿಸಿವೆ. ಮಹಾನ್ ನಿತ್ಯೋತ್ಸವ ಕವಿ " ಕೆ ಎಸ್ ನಿಸಾರ್ ಅಹಮದ್ ರವರಿಗೆ ಈ ಜನ್ಮದಿನದಂದು ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಅವರಿಗೆ ನಮ್ಮ ಗೌರವ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್













