ಅನಿಲ್ ಮಲ್ನಾಡ್
ShareChat
click to see wallet page
@64197565
64197565
ಅನಿಲ್ ಮಲ್ನಾಡ್
@64197565
ಐ ಲವ್ ಶೇರ್ ಚಾಟ್
#💐ಮಂಗಳವಾರದ ಶುಭಾಶಯಗಳು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಪ್ರಭುತ್ವ ಗಳಿಕೆ. ಹಾರ್ಮೋನಿಯಂ, ತಬಲಾ, ಪಿಟೀಲು, ಸಾರಂಗಿ ವಾದ್ಯಗಳಲ್ಲಿ ಪರಿಣತಿ ಪಡೆದ ಉಭಯಗಾನ ವಿಶಾರದ ಡಾ. ಪುಟ್ಟರಾಜ ಗವಾಯಿ ಅವರು ಗ್ವಾಲಿಯರ್‌ ಘರಾಣೆಯ ಸಮರ್ಥ ಸಾಧಕರು.ವೀರೇಶ್ವರ ಪುಣ್ಯಾಶ್ರಮದ ಸಮರ್ಥ ಉತ್ತರಾಧಿಕಾರಿಯಾಗಿ ಅನೇಕ ಸಂಗೀತ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.ಡಾ. ಪುಟ್ಟರಾಜ ಗವಾಯಿಗಳ ಸಾಧನೆ ಸಿದ್ಧಿಗಳಿಗೆ ಅನೇಕ ಪ್ರಶಸ್ತಿ-ಗೌರವಗಳು ಸಹ ದೊರೆತಿವೆ. ಅಂತಹ ಮಹಾನ್ ಸಾಧಕರ ಜನ್ಮದಿನದ ಅಂಗವಾಗಿ ಅವರಿಗೆ ಶುಭಾಶಯವನ್ನು ಕೋರೋಣ. ಅವರ ಸಾಧನೆಗಳನ್ನು ಸ್ಮರಿಸೋಣ ಅವರ ಸಾಧನೆಗಳ ಹಾದಿಯಲ್ಲಿ ನಾವು ಸಾಗೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಮಂಗಳವಾರದ ಶುಭಾಶಯಗಳು - ಗದುಗಿನ ಗಾನಯೋಗಿ ಎಂದೇ ಖ್ಯಾತರಾಗಿದ್ದ ಪದ್ಮಭೂಪಣ ಪಂಡಿತ್ ಪುಟ್ಚರಾಜ ಗವಾಯಿ ' ಅವರ జనమదినేది సమరణిగల ಗದುಗಿನ ಗಾನಯೋಗಿ ಎಂದೇ ಖ್ಯಾತರಾಗಿದ್ದ ಪದ್ಮಭೂಪಣ ಪಂಡಿತ್ ಪುಟ್ಚರಾಜ ಗವಾಯಿ ' ಅವರ జనమదినేది సమరణిగల - ShareChat
#💐ಮಂಗಳವಾರದ ಶುಭಾಶಯಗಳು ಕಾಡನ್ನು ಹಾಳು/ನಾಶ ಮಾಡುವುದರಿಂದ ಅಲ್ಲಿನ ವನ್ಯ ಜೀವಿಗಳಿಗೆ ತುಂಬಾ ತೊಂದರೆ. ಆದ್ದರಿಂದ ಭವಿಷ್ಯದ ಪೀಳಿಗೆಗಾಗಿ ವನ್ಯ ಜೀವಿಯನ್ನು ಸಂರಕ್ಷಿಸಲು ಅನೇಕ ಪ್ರಾಣಿ ಅಭಯಾರಣ್ಯಗಳು, ಸಂರಕ್ಷಣಾಲಯಗಳು ಕಾಳಜಿ ವಹಿಸುತ್ತಿವೆ. ನಾವೆಲ್ಲರೂ ಒಂದಾಗಿ ವನ್ಯಜೀವಿಗಳನ್ನು ಸಂರಕ್ಷಿಸಲು ಮುಂದಾಗದಿದ್ದರೆ, ಇವೆಲ್ಲವನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಒಂದು ಬಾರಿ ಪ್ರಾಣಿ, ಪಕ್ಷಿಗಳು ವಿನಾಶ ಹೊಂದಿದರೆ, ಶಾಶ್ವತವಾಗಿ ಕಳೆದುಕೊಂಡಂತೆ. ಅದು ಆಗದಂತೆ ಕಾಳಜಿವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಉಳಿಸುವುದಕ್ಕಾಗಿ ವನ್ಯಜೀವಿ ದಿನವಾದ ಇಂದು ಎಲ್ಲರೂ ಜಾಗೃತಿ ಮೂಡಿಸೋಣ. ಎನ್ನುತ್ತಾ ನನ್ನೆಲ್ಲ ಸ್ನೇಹಿತರಿಗೆ ವಿಶ್ವ ವನ್ಯಜೀವಿ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಮಂಗಳವಾರದ ಶುಭಾಶಯಗಳು - మదోడ 3 ٥ చన్యజుచి దిని World Wildlife Day ವನ್ಯಜೀವಿಗಳ ಸಂರಕ್ಷಣೆ ನಮ್ಮ ಹಕ್ಕು; మదోడ 3 ٥ చన్యజుచి దిని World Wildlife Day ವನ್ಯಜೀವಿಗಳ ಸಂರಕ್ಷಣೆ ನಮ್ಮ ಹಕ್ಕು; - ShareChat
#💐ಮಂಗಳವಾರದ ಶುಭಾಶಯಗಳು ರಾಷ್ಟ್ರೀಯ ರಕ್ಷ ಣಾ ದಿನ ನಮ್ಮ ದೇಶದಲ್ಲಿ ನಾವಿಂದು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಮುಖ್ಯ ಕಾರಣ ನಮ್ಮ ಸೇನಾಪಡೆ. ಇವರು ನಮ್ಮ ದೇಶವನ್ನು ಶತ್ರುಗಳ ಕೈಯಿಂದ ರಕ್ಷಿಸುತ್ತಿರುವ ಕಾರಣ ನಾವು ಸುಖವಾಗಿ ನಿದ್ರಿಸುವಂತಾಗಿದೆ. ಶತ್ರು ದಾಳಿ ಮಾತ್ರವಲ್ಲದೆ ವಿವಿಧ ಪ್ರವಾಹ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಸೇನಾಪಡೆಗಳು ಜನರ ರಕ್ಷ ಣೆಗೆ ಧಾವಿಸುತ್ತವೆ. ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಇವರ ನಿಸ್ವಾರ್ಥ ಸೇವೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಇವರು ತಮ್ಮ ಜೀವದ ಹಂಗನ್ನು ತೊರೆದು ಪರ್ವತ ಪ್ರದೇಶಗಳಲ್ಲಿ ಮೈ ನಡುಗಿಸುವ ಚಳಿ, ಮರಳುಗಾಡಿನ ಸುಡು ಬಿಸಿಲು, ಸಾಗರದ ದೈತ್ಯ ಅಲೆಗಳನ್ನೂ ಲೆಕ್ಕಿಸದೆ ಶತ್ರುಪಡೆಗಳ ವಿರುದ್ಧ ಹೋರಾಡುತ್ತಾರೆ. ಈ ಹೋರಾಟದಲ್ಲಿ ಹುತಾತ್ಮರೂ ಆಗುತ್ತಾರೆ. ಆ ಮೂಲಕ ತಮ್ಮ ದೇಶಪ್ರೇಮವನ್ನು ಮೆರೆಯುತ್ತಾರೆ. ಆದ್ದರಿಂದ ಇವರಿಗಾಗಿಯೇ ಭಾರತದಲ್ಲಿ ಒಂದು ವಿಶೇಷ ದಿನವನ್ನು ಮೀಸಲಾಗಿಡಲಾಗಿದೆ. ಆ ದಿನವೇ ಮಾರ್ಚ್‌ 3. ಈ ದಿನವನ್ನು ನ್ಯಾಷನಲ್‌ ಡಿಫೆನ್ಸ್‌ ಡೇ ಅಥವಾ ರಾಷ್ಟ್ರೀಯ ರಕ್ಷ ಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನೆಯ ಮೂರು ಪ್ರಮುಖ ವಿಭಾಗಗಳಾದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸೈನಿಕರಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜೈ ಜವಾನ್ ಜೈ ಕಿಸಾನ್ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಮಂಗಳವಾರದ ಶುಭಾಶಯಗಳು - March 3 ರಾಷೀಯ ರಕ್ಷಣಾ ல Day National Defence | ಭೂಮಿ ಆಗಸ ವತು ಸಮುದ್ರದಲ್ಲಿ ಸಾಹಸ ಮೆರೆಯುತ್ತಾ ePen ರಕ್ಷಣೆಗಾಗಿ ಶ್ರಮಿಸುತ್ತಿರುವ ವತ್ತು ರಾಷ್ಟ್ರಸೇವೆಯಲ್ಲಿ ಹುತಾತ್ಕರಾದ ಯೋಧರಿಗೆ ప్రణామగళు నమ March 3 ರಾಷೀಯ ರಕ್ಷಣಾ ல Day National Defence | ಭೂಮಿ ಆಗಸ ವತು ಸಮುದ್ರದಲ್ಲಿ ಸಾಹಸ ಮೆರೆಯುತ್ತಾ ePen ರಕ್ಷಣೆಗಾಗಿ ಶ್ರಮಿಸುತ್ತಿರುವ ವತ್ತು ರಾಷ್ಟ್ರಸೇವೆಯಲ್ಲಿ ಹುತಾತ್ಕರಾದ ಯೋಧರಿಗೆ ప్రణామగళు నమ - ShareChat
#❤️ಸರೋಜಿನಿ ನಾಯ್ಡು ಅವರ ಪುಣ್ಯಸ್ಮರಣೆ💐 ಸರೋಜಿನಿ ನಾಯ್ಡು ಅವರು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದರು. ಚಿಕ್ಕಂದಿನಲ್ಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಯತ್ರಿ ಕೂಡ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾಗಿದ್ದರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾಗಿದ್ದರು. ಧೀಮಂತ ಮಹಿಳೆ "ಸರೋಜಿನಿ ನಾಯ್ಡು" ಅವರ ಪುಣ್ಯಸ್ಮರಣೆ ದಿನದಂದು ಮಹಿಳೆಯರಿಗೆ ಸ್ಫೂರ್ತಿದಾಯಕವಾದ ಅವರ ಸಾಧನೆಗಳನ್ನು ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
❤️ಸರೋಜಿನಿ ನಾಯ್ಡು ಅವರ ಪುಣ್ಯಸ್ಮರಣೆ💐 - నాయ్డు ಸರೋಜಿನಿ ಪುಣ್ಯಸ್ಮರಣೆ  నాయ్డు ಸರೋಜಿನಿ ಪುಣ್ಯಸ್ಮರಣೆ - ShareChat
#💐ಬುಧವಾರದ ಶುಭಾಶಯ ಕನ್ನಡ ಸಾಹಿತ್ಯಲೋಕದ ಪ್ರಮುಖರು, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ರಾಜ್ಯ ಏಕೀಕರಣಕ್ಕೆ ಶ್ರಮಿಸಿದ ಮಹಾನ್ ಚೇತನ, ಕನ್ನಡ ಕುಲಪುರೋಹಿತರು ಎಂದೇ ಖ್ಯಾತರಾದ ಶ್ರೀ ಆಲೂರು ವೆಂಕಟರಾಯರು ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು.ಜಯ ಕರ್ನಾಟಕದ ಲೇಖನ ಕರ್ನಾಟಕ ಕುಲಪುರೋಹಿತರಾದ ಇವರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಾಗಿಟ್ಟವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟ ಇವರ ಕೊಡುಗೆ ಅಪಾರ.ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ವಿಜಯಪುರದಲ್ಲಿ ಜನಿಸಿದರು. ಇವರ ವಂಶಜರು ಧಾರವಾಡದ ಬಳಿಯ ಆಲೂರ ಈಗಿನ ಗದಗ ಜಿಲ್ಲೆ, ರೋಣ ತಾಲ್ಲೂಕಿನ ಹೊಳೆ-ಆಲೂರ ಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ.ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಎ. ಪದವಿ ಪಡೆದರು. ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು. ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳು.ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು ೧೯೦೬ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ೧೯೨೨ ನವೆಂಬರ್ ೪ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು. ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. ೧೯೧೫ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.ಆಲೂರರ 'ಗತವೈಭವ'ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ... "ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ". ಈ ಮಾತುಗಳು ಅಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ಆಲೂರು ವೆಂಕಟರಾಯರು ಮಾಡಿದ ಕಾರ್ಯಗಳು ಬುನಾದಿ ಒದಗಿಸಿವೆ.ಆಲೂರರು ಪ್ರಸಿದ್ಧ 'ಜಯಕರ್ನಾಟಕ' ಪತ್ರಿಕೆಯನ್ನು ೧೯೨೨ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. "ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ."ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: "ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ... ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ.ಏಕೀಕರಣ ಹೋರಾಟದ ಮೂಲಕ ಕರ್ನಾಟಕ ರಾಜ್ಯವನ್ನು ಒಂದುಗೂಡಿಸಲು ಮುಂಚೂಣಿಯಲ್ಲಿದ್ದು ಶ್ರಮಿಸಿದ "ಕನ್ನಡದ ಕುಲ ಪುರೋಹಿತ" ಆಲೂರು ವೆಂಕಟರಾಯರ ದೇಶಾಭಿಮಾನ ಕುರಿತ ಅವರ ವಿಚಾರಗಳು ದೇಶದ ಯುವ ಜನತೆಗೆ ಸದಾ ಆದರ್ಶವಾಗಲಿ ಅವರ ಈ ಪುಣ್ಯಸ್ಮರಣೆಯ ದಿನದಂದು ನಾವು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಬುಧವಾರದ ಶುಭಾಶಯ - D 9 ಕರ್ನಾಟಕ  ಏಕೀಕರಣ   ಪಿತಾಮಹ ಆಲೂರು ವೆಂಕಟರಾಯರ್ ಪುಣ್ಯಸ್ಮರಣೆ " ಟುಲೈ 1880 ವಐ್ವರಿ 1964 12 2 D 9 ಕರ್ನಾಟಕ  ಏಕೀಕರಣ   ಪಿತಾಮಹ ಆಲೂರು ವೆಂಕಟರಾಯರ್ ಪುಣ್ಯಸ್ಮರಣೆ " ಟುಲೈ 1880 ವಐ್ವರಿ 1964 12 2 - ShareChat
#💐ಮಂಗಳವಾರದ ಶುಭಾಶಯಗಳು ನನ್ನ ಪ್ರೀತಿಯ ಸ್ನೇಹಿತರೆ ಈ ದಿನದ ವಿಷಯ ನಿಮಗೆ ತಿಳಿದಿರಲಿ ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 24 ರಂದು 'ಕೇಂದ್ರ ಅಬಕಾರಿ ದಿನ' ಆಚರಿಸಲಾಗುತ್ತದೆ. ಇದು 24 ಫೆಬ್ರವರಿ 1944 ರಂದು ಜಾರಿಗೆ ಬಂದ ಕೇಂದ್ರ ಅಬಕಾರಿ ಮತ್ತು ಉಪ್ಪು ಕಾಯಿದೆಯನ್ನು ಸ್ಮರಿಸುತ್ತದೆ. ಕೇಂದ್ರೀಯ ಅಬಕಾರಿ ದಿನವು ದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಸಿಬಿಐಸಿ ಯ ಕೊಡುಗೆಯನ್ನು ಗೌರವಿಸುತ್ತದೆ.ನಮ್ಮ ದೇಶದಲ್ಲಿ ಅಬಕಾರಿ ಇಲಾಖೆಯು ಅತ್ಯಂತ ಪ್ರಮುಖವಾದದ್ದು. ಇದು ಇಡೀ ದೇಶದ ನಾಗರಿಕರಿಂದ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅಬಕಾರಿ ಇಲಾಖೆಯ ಕೆಲಸಗಳು ತುಂಬಾ ಸೂಕ್ಷ ್ಮವಾಗಿರುತ್ತವೆ. ಆದ್ದರಿಂದ ಇದರ ನೌಕರರು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ತೆರಿಗೆ ಲೆಕ್ಕಾಚಾರ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇವರದ್ದು. ಈ ಕೆಲಸದಲ್ಲಿ ಒಂದಿನಿತು ತಪ್ಪಾದರೂ ಅದು ದೇಶಕ್ಕಾಗುವ ನಷ್ಟವಾಗುತ್ತದೆ. ಆದ್ದರಿಂದ ಕೇಂದ್ರ ಅಬಕಾರಿ ನೌಕರರನ್ನು ತುಂಬಾ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ಇವರಿಗೆ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ಫೆಬ್ರವರಿ 24. ಪ್ರತಿವರ್ಷ ಈ ದಿನವನ್ನು ಸೆಂಟ್ರಲ್‌ ಎಕ್ಸೈಸ್‌ ಡೇ ಎಂದು ಆಚರಿಸಲಾಗುತ್ತದೆ. ದೇಶಾದ್ಯಂತ ಇರುವ ಅಬಕಾರಿ ಇಲಾಖೆಯ ನೌಕರರಿಗೆ ಪ್ರೋತ್ಸಾಹ ಕೊಡುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ. ಅಬಕಾರಿ ಇಲಾಖೆಯ ನೌಕರರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗದೆ ಉತ್ತಮ ರೀತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಇವರ ಕಾರ್ಯಶೈಲಿ ಸುಧಾರಣೆಗಾಗಿ ಯಾವೆಲ್ಲಾ ನೀತಿ, ನಿಯಮಗಳನ್ನು ಜಾರಿಗೊಳಿಸಬಹುದು ಎಂಬ ಚಿಂತನೆಯನ್ನು ಈ ದಿನ ಮಾಡಲಾಗುತ್ತದೆ. ಕೇಂದ್ರ ಅಬಕಾರಿ ಇಲಾಖೆಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಈ ಇಲಾಖೆಯ ಸುಧಾರಣೆಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ.ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಮಂಗಳವಾರದ ಶುಭಾಶಯಗಳು - % ಫೆಬ್ರವರಿ 24 9 ಕೇಂದ್ರ ಅಬಕಾರಿ ದಿನ Day Central Excise % ಫೆಬ್ರವರಿ 24 9 ಕೇಂದ್ರ ಅಬಕಾರಿ ದಿನ Day Central Excise - ShareChat
#✋ಶನಿವಾರದ ಶುಭಾಶಯ ವಿಶ್ವ ಮಾತೃ ಭಾಷಾ ದಿನ " ಫೆ 21. ನಮ್ಮ ಮಾತೃ ಭಾಷೆಯನ್ನು ಉಳಿಸೋಣ ಬಳಸೋಣ ಮತ್ತು ನಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಮಾತುಗಳನ್ನೇ ಕೇಳೋಣ ಪ್ರಾದೇಶಿಕ ಭಾಷೆಗೆ ಅಗ್ರಸ್ಥಾನ ಕೊಡಬೇಕು ಅದೇಶಿಕ್ಷಣಮಾಧ್ಯಮವಾಗವಾಗಬೇಕ ಅದೇ ರಾಜ್ಯ ಭಾಷೆಯಾಗಬೇಕು ಇದು ನಿನ್ನ ಭಾಷೆ ಇದು ದೇಶ ಭಾಷೆ ಇದು ಸಾವಿರಾರು ವರ್ಷಗಳ ಸುಪ್ರಷ್ಟಸಾಹಿತ್ಯ ಭಾಷೆ ಇದು ಮಹಾಕವಿಗಳನ್ನು ಶಿಲ್ಪಿಗಳನ್ನುರಾಜಾಧಿ ರಾಜರನ್ನುವೀರಾಧಿವೀರ ರನ್ನು ರಸಋುಷಿ ದಾರ್ಶನಿಕರನ್ನು ಹಡೆದಿರುವ ಭಾಷೆ ಮಹಾಕವಿ ಕುವೆಂಪು ಇದು ಎಲ್ಲ ನಮ್ಮದಾಗಲಿ ಸರ್ಕಾರಗಳು ಕನ್ನಡಿಗರಿಗೆ ಸ್ಪಂದಿಸಲಿ ಮಾತೃಭಾಷಾ ದಿನದ ಶುಭಾಶಯಗಳು ಹೆಮ್ಮೆಯ ಕನ್ನಡಿಗ ರಾಗೋಣ ಕನ್ನಡ ಉಳಿಸೋಣ ತಾಯಿ ಕಲಿಸಿದ ಭಾಷೆ ಮರೆಯದಂತೆ ಕಲಿಯೋಣ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
✋ಶನಿವಾರದ ಶುಭಾಶಯ - ~3 ٥٥ 0 08 & ಫೆಬ್ರವರಿ 21 నెమ్మేమోకృెభాషెయి? నెమ్మె అస్మికి నావు ಸದಾ ನಮ್ಮ ತಾಯ್ನುಡಿಯ ಬಗ್ಗೆ ಹೆಮ್ಮೆಪಡಬೇಕು ` ಮಾತೃಭಾಷಾ ದಿನ  ವಿಕ ಛ ಎಲ್ಲರಿಗೂ ಅಂತಾರಾಷ್ಟೀಯ ಮಾತೃಭಾಷಾ ' ದಿನದ ಶುಭಾರಯಗಳು ~3 ٥٥ 0 08 & ಫೆಬ್ರವರಿ 21 నెమ్మేమోకృెభాషెయి? నెమ్మె అస్మికి నావు ಸದಾ ನಮ್ಮ ತಾಯ್ನುಡಿಯ ಬಗ್ಗೆ ಹೆಮ್ಮೆಪಡಬೇಕು ` ಮಾತೃಭಾಷಾ ದಿನ  ವಿಕ ಛ ಎಲ್ಲರಿಗೂ ಅಂತಾರಾಷ್ಟೀಯ ಮಾತೃಭಾಷಾ ' ದಿನದ ಶುಭಾರಯಗಳು - ShareChat
#✋ಶನಿವಾರದ ಶುಭಾಶಯ ಕಿತ್ತೂರು ರಾಜ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ವೀರ ಮಹಿಳೆ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ಪ್ರಣಾಮಗಳು ತನ್ನ ಜನರ ಹಕ್ಕುಗಳಿಗಾಗಿ ಹೋರಾಡಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಆಕೆಯ ಅವಿರತ ಹೋರಾಟವು ಮಾನವ ಚೇತನದ ಶಕ್ತಿಗೆ ಸಾಕ್ಷಿಯಾಗಿದೆ. ಎಂಬುದನ್ನು ನಾವೆಲ್ಲರೂ ಇಂದು ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
✋ಶನಿವಾರದ ಶುಭಾಶಯ - ಸ್ವಾತಂತ್ರ್ಯ   ಹೋರಾಟಗಾರ್ರಿ ವೀರ' ಕಿತ್ತುೂರು ರಾಣಿ ಚೆನೃಮ್ಯ ಪುಣ್ಯಸ್ಮರಣೆಯಂದು . ಅವರ' నదనగల হতহব ಸ್ವಾತಂತ್ರ್ಯ   ಹೋರಾಟಗಾರ್ರಿ ವೀರ' ಕಿತ್ತುೂರು ರಾಣಿ ಚೆನೃಮ್ಯ ಪುಣ್ಯಸ್ಮರಣೆಯಂದು . ಅವರ' నదనగల হতহব - ShareChat
#🕉️ ಶುಭ ಶುಕ್ರವಾರ 16ನೇ ಶತಮಾನದ ಕರುನಾಡಿನ ಕವಿಯನ್ನು ಸ್ಮರಿಸುವ ದಿನ ಇಂದು ಇವರನ್ನು 16 ನೇ ಶತಮಾನದ ತತ್ವಜ್ಞಾನಿ ಮತ್ತು ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ಅದ್ಬುತ ವಚನಕಾರರು ಸಂತ ಕವಿ ಶ್ರೀ ಸರ್ವಜ್ಞ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.ವಚನ ಸಾರ ದಿಂದ ತ್ರಿಪದಿ ರತ್ನ ದವರೆಗೆ ಸರ್ವಜ್ಞರ ಕೃತಿಗಳು ಭಕ್ತಿ ಆತ್ಮಸಾಕ್ಷಾತ್ಕಾರ ಮತ್ತು ಸಾಮಾಜಿಕ ಆತ್ಮಸಾಕ್ಷಿಯ ವಿಷಯಗಳನ್ನು ಪರಿಶೋಧಿಸುತ್ತವೆ. ಕರುನಾಡಿನ ಕವಿಯನ್ನು ಇಂದು ನಾವೆಲ್ಲರೂ ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🕉️ ಶುಭ ಶುಕ್ರವಾರ - ఫిబ్రవెరి నదె ತ್ರಿಪದಿಗಳ ಮೂಲಕ ಸಮಾಜದಲ್ಲಿ  २० సమానకి సూరిది ಸರ್ವಜ್ಞ 89 ಅವರ ಜಯಂತಿಯ ಶುಭಾರಯಗಳು  ఫిబ్రవెరి నదె ತ್ರಿಪದಿಗಳ ಮೂಲಕ ಸಮಾಜದಲ್ಲಿ  २० సమానకి సూరిది ಸರ್ವಜ್ಞ 89 ಅವರ ಜಯಂತಿಯ ಶುಭಾರಯಗಳು - ShareChat
#🕉️ ಶುಭ ಶುಕ್ರವಾರ ಮಹಾರಾಜ ಶ್ರೀಕಂಠದತ್ತ ಒಡೆಯರ್ ಎಂದೂ ಕರೆಯಲ್ಪಡುತ್ತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ ೨೦ ಫೆಬ್ರುವರಿ ೧೯೫೩ ೧೦ ಡಿಸೆಂಬರ್ ೨೦೧೩ ಅವರು ಮೈಸೂರು ಸಂಸ್ಥಾನದ ರಾಜಕುಮಾರ. ಕ್ರಿ.ಶ. ೧೩೯೯ರಿಂದ ೧೯೫೦ರವರೆಗೆ ಮೈಸೂರು ರಾಜ್ಯವನ್ನಾಳಿದ ಒಡೆಯರ್ ರಾಜಮನೆತನದ ಮುಖ್ಯಸ್ಥರಾಗಿದ್ದರು. ಮಹಾ ದೈವಭಕ್ತರು, ಜನಾನುರಾಗಿಯಾಗಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಕಳಕಳಿ, ಕಾಳಜಿ ಹೊಂದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ರಾಜರಾದರೂ ಸಾಮಾನ್ಯನಾಗಿ ಇರುವುದು ಹೇಗೆ ಜನರ ವಿಶ್ವಾಸ ಗಳಿಸುವುದು ಹೇಗೆ ಎಂದು ತೋರಿಸಿಕೊಟ್ಟ ಮಹಾರಾಜರು ಇವರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನೂ, ಮೈಸೂರು ವಿವಿಯಿಂದ ರಾಜ್ಯಶಾಸ್ತ್ರ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಶಾರದವಿಲಾಸ ಕಾನೂನು ಕಾಲೇಜಿನಲ್ಲಿ ಲಾ ಪದವಿ ಪಡೆದು, ಪಾಶ್ಚಾತ್ಯ ಹಾಗೂ ಶಾಸ್ತ್ರೀಯ ಸಂಗೀತದ ಮೇಲೆ ಆಸ್ಥೆ , ಪಾಂಡಿತ್ಯ, ಬೆಳೆಸಿಕೊಂಡಿದ್ದ ಒಡೆಯರ್, ಲಂಡನ್‍ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಸೀನಿಯರ್ ಮಟ್ಟದ ಸಂಗೀತ ಪದವಿ ಪಡೆದಿದ್ದರು. ೧೯೮೪ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೈಸೂರು ಕ್ಷೇತ್ರವನ್ನು ಲೋಕಸಭೆಯಲ್ಲಿ ವೊದಲ ಬಾರಿ ಪ್ರತಿನಿಧಿಸಿದ್ದ ೩೧ ವರ್ಷದ ಶ್ರೀಕಂಠದತ್ತ, ಮತ್ತೆ ೧೯೮೯, ೧೯೯೬ ಮತ್ತು ೧೯೯೯ರಲ್ಲಿ ಮೈಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ೧೯೯೧ರಲ್ಲಿ ಬಿ.ಜೆ.ಪಿ ಪಕ್ಷ ಸೇರಿ ಲೋಕಸಭೆಗೆ ಸ್ಪರ್ಧಿಸಿ, ಚಂದ್ರಪ್ರಭ ಅರಸ್ ಎದುರು ಸೋಲು ಕಂಡರು. ೧೯೯೫ರ ಹೊತ್ತಿಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ೧೯೯೬ರಲ್ಲಿ ಜೆ.ಹೆಚ್. ಪಟೇಲರ ಸರ್ಕಾರ, ಒಡೆಯರ ಖಾಸಗಿ ಸ್ವತ್ತಾದ ಬೆಂಗಳೂರು ಮತ್ತು ಮೈಸೂರು ಅರಮನೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ, ಆ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಒಡೆಯರ್, ಅರಮನೆಗಳನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಬದುಕಿರುವ ತನಕ ಹೋರಾಡಿದರು. ಒಡೆಯರ್ ಬದುಕಿರುವವರೆಗೆ, ಅರಮನೆಯಲ್ಲಿ ವಾಸವಿರಲು, ಅವರ ಮರಣಾನಂತರ ಸರ್ಕಾರ ಅರಮನೆಗಳನ್ನು ಸ್ವಾಧೀನ ಪಡೆಯುವುದು, ಆ ಆದೇಶದ ಮುಖ್ಯ ಭಾಗವಾಗಿತ್ತು. ೨೦೦೪ರ ಲೋಕಸಭೆ ಚುನಾವಣೆಯಲ್ಲಿ ೩ನೆ ಸ್ಥಾನ ಪಡೆದ ನಂತರ ಶ್ರೀಕಂಠದತ್ತರು, ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು. ೧೯೭೧-೭೨ರಲ್ಲಿ ದಾಂಡಿಗ ಮತ್ತು ವೇಗದ ಬೌಲರ್ ಆಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಒಡೆಯರ್, ರಾಜಮನೆತನದ ಹಮ್ಮು-ಬಿಮ್ಮು ತೋರದೆ, ತಮ್ಮ ಸರಳತೆಯಿಂದ ಸಹ ಆಟಗಾರರ ಮನ ಗೆದ್ದಿದ್ದರು. ಮಹಾರಾಜರು ಕ್ರಿಕೆಟ್ ಆಡುವುದನ್ನು ನೋಡಲೆಂದೇ ಜನ ಮುಗಿಬಿದ್ದು ಕ್ರೀಡಾಂಗಣಕ್ಕೆ ಬರುತ್ತಿದ್ದರು.೨೦೦೭ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಚುನಾವಣೆ ಗೆದ್ದ ಒಡೆಯರ್, ೨೦೧೦ರಲ್ಲಿ ಅನಿಲ್ ಕುಂಬ್ಳೆ ವಿರುದ್ಧ ಸೋತರು. ೨೦೧೩ರಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಬ್ರಿಜೇಶ್ ಪಟೇಲ್ ಎರಡೂ ಬಾರಿ ಅವರೊಂದಿಗೆ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದರು. ಗಾಲ್ಫ಼್, ಕುದುರೆ ರೇಸು, ಕ್ರಿಕೆಟ್‍ನಲ್ಲಿ ಆಸಕ್ತರಾಗಿದ್ದ ಶ್ರೀಕಂಠದತ್ತ, ಬೆಂಗಳೂರು, ಮೈಸೂರು ಮತ್ತು ದಿಲ್ಲಿ ಟರ್ಫ಼್ ಕ್ಲಬ್‍ನ ಸದಸ್ಯ ಆಗಿದ್ದರು. ಶ್ರೀಕಂಠದತ್ತರ ಧರ್ಮಪತ್ನಿ ಪ್ರಮೋದಾ ದೇವಿ, ಮೈಸೂರು ರೇಷ್ಮೆ ಸೀರೆಗಳಿಗೆ ಮೆರುಗು ಹೆಚ್ಚಿಸುವ ಡಿಸೈನ್ ಪರಿಣಿತರಾಗಿದ್ದರು.ಶ್ರೀಕಂಠದತ್ತರು ಕುದುರೆ ರೇಸ್ ಹಾಗೂ ಕ್ರಿಕೆಟ್ ಕ್ರೀಡೆಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿದ್ದರು. "ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ " ಅಧ್ಯಕ್ಷರಾಗಿ ಕಾರ್ಯ ಸಲ್ಲಿಸಿದ್ದರು. ಶ್ರೀಕಂಠದತ್ತರು ತಮ್ಮ ೨೩ನೇ ವಯಸ್ಸಿನಲ್ಲಿ ಬೆಟ್ಟದ ಕೋಟೆ ಅರಸು ವಂಶಕ್ಕೆ ಸೇರಿದ್ದ ಪ್ರಮೋದಾ ದೇವಿ ಅವರನ್ನು ಮದುವೆಯಾದರು. ಇವರಿಗೆ ಮಕ್ಕಳಾಗಲಿಲ್ಲ. ಶ್ರೀಕಂಠದತ್ತರು ಡಿಸೆಂಬರ್ ೧೦, ೨೦೧೩ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮಾರನೆ ದಿನ ಅಂದರೆ ೧೧-೧೨-೨೦೧೩ರಲ್ಲಿ ತಮ್ಮ ಉತ್ತರಾಧಿಕಾರಿ, ಸಹೋದರಿ ಗಾಯತ್ರಿ ದೇವಿಯ ಪುತ್ರರಾದ ಲಕ್ಶ್ಮೀಕಾಂತ ರಾಜೇ ಅರಸ್ ಇವರಿಂದ, ಒಡೆಯರ್ ಮನೆತನದ ಕರ್ಮಭೂಮಿಯಾದ ಮಧುವನದಲ್ಲಿ ಇವರ ಅಂತ್ಯಕ್ರಿಯೆ ನಡೆಯಿತು. ಇಂತಹ ಮಹಾನ್ ಭಾವನೆಗೊಂದು ಕೋಟಿ ಕೋಟಿ ನಮನ ಅವರ ಜನ್ಮದಿನದಂದು ಅವರನ್ನೊಮ್ಮೆ ನೆನೆಯೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🕉️ ಶುಭ ಶುಕ್ರವಾರ - న ಮೈಸೂರು ರಾಜಪ್ರಭುತ್ವದ ಜನಪ್ರಿಯ ಅರಸರು ಮಾಜಿ ಸಂಸದರು ಆಗಿದ್ದ ಮಹಾರಾಜ್ ಶ್ರೀಕಂಠದತ್ತ ನರಸಿಂಹರಾಜ ಒಡೆಯಂ್ ಅವರ ಜಯಂತಿಯಂದು ಗೌರವ ನಮನಗಳು  న ಮೈಸೂರು ರಾಜಪ್ರಭುತ್ವದ ಜನಪ್ರಿಯ ಅರಸರು ಮಾಜಿ ಸಂಸದರು ಆಗಿದ್ದ ಮಹಾರಾಜ್ ಶ್ರೀಕಂಠದತ್ತ ನರಸಿಂಹರಾಜ ಒಡೆಯಂ್ ಅವರ ಜಯಂತಿಯಂದು ಗೌರವ ನಮನಗಳು - ShareChat