#💐ಗುರುವಾರದ ಶುಭಾಶಯಗಳು ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎಂದು ಖ್ಯಾತರಾದ ಗಾನ ಕೋಗಿಲೆ, ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಸಂಗೀತ ಕಲಾರತ್ನ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಜಯಂತಿಯಂದು ಶತಕೋಟಿ ನಮನಗಳು.
ಭಾರತ ದೇಶದ ಸಂಗೀತಗಾರರ ಪರಂಪರೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಲ್ಲಿ ಕರ್ನಾಟಕದ ಗಂಗೂಬಾಯಿ ಹಾನಗಲ್ ಪ್ರಮುಖರು. ಇವರ ಸಾಧನೆ ಅಪಾರ ಈ ದಿನ ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಅವರಿಗೆ ಕೋಟಿ ನಮನ ಸಲ್ಲಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💪ರಾಷ್ಟ್ರೀಯ ಸುರಕ್ಷತಾ ದಿನ⚔️ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಪ್ರತಿಷ್ಠಾನದ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ, ಇದು ಅಪಘಾತಗಳು ಮತ್ತು ಅಪಘಾತಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು 1972 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಅಡಿಪಾಯ ದಿನದಂದು ಆಚರಿಸಲಾಯಿತು.
ಈಗ ಅದರ 50 ನೇ ವರ್ಷದಲ್ಲಿ, ದೇಶವು ಕೈಗಾರಿಕೆಗಳು, ಇಲಾಖೆಗಳು, ಎನ್ಜಿಒಗಳು ಮತ್ತು ನಿಯಂತ್ರಕ ಏಜೆನ್ಸಿಗಳಲ್ಲಿ ವ್ಯಾಪಕವಾಗಿ ಆಚರಿಸಲ್ಪಡುವ ಪ್ರಮುಖ ರಾಷ್ಟ್ರೀಯ ಅಭಿಯಾನವಾಗಿ ಬೆಳೆದಿದೆ.ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಮುಖ್ಯ ಉದ್ದೇಶ ಮತ್ತು ದೃಷ್ಟಿ ಒಂದೇ ಆಗಿರುತ್ತದೆ - ಸಮಾಜವನ್ನು ರಕ್ಷಿಸಲು ಮತ್ತು ಸೇವೆ ಮಾಡಲು ಮತ್ತು ಜನರಲ್ಲಿ ತಡೆಗಟ್ಟುವ ಸಂಸ್ಕೃತಿ ಮತ್ತು ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸುವುದು.
"ಈ ವಿಷಯಗಳು ಮೂಲಭೂತ ಮಾನವೀಯ ಕಾಳಜಿಯಾಗಿದೆ ಎಂಬುದು ನಮ್ಮ ನಂಬಿಕೆ. ಗುಣಮಟ್ಟ ಮತ್ತು ಉತ್ಪಾದಕತೆಯೊಂದಿಗಿನ ಅವರ ಆಂತರಿಕ ಸಂಬಂಧವನ್ನು ಚೆನ್ನಾಗಿ ಪ್ರದರ್ಶಿಸಿದರೆ ಅವರ ಪರಿಣಾಮಕಾರಿ ವಿಳಾಸವು ಹೆಚ್ಚು ಅನುಕೂಲವಾಗುತ್ತದೆ ಎಂದು ನಾವು ಸಮಾನವಾಗಿ ನಂಬುತ್ತೇವೆ, ”ಎಂದು ಸಂಸ್ಥೆಯ ದೃಷ್ಟಿ ಓದುತ್ತದೆಸುರಕ್ಷಿತವಾಗಿ ಕೆಲಸ ಮಾಡಲು ನೌಕರರು ಮತ್ತು ಸಾರ್ವಜನಿಕರ ಬದ್ಧತೆಯನ್ನು ನವೀಕರಿಸುವುದು ಮತ್ತು ಸುರಕ್ಷಿತ ಮತ್ತು ಉತ್ತಮ ಕೆಲಸದ ಸಂಸ್ಕೃತಿ ಮತ್ತು ಜೀವನಶೈಲಿಯ ಏಕೀಕರಣವನ್ನು ಖಚಿತಪಡಿಸುವುದು ದಿನದ ಉದ್ದೇಶವಾಗಿದೆ.ಮಾರ್ಚ್ 4 ರಂದು ಒಂದೇ ದಿನದ ಆಚರಣೆಯಾಗಿ ಅಭಿಯಾನ ಪ್ರಾರಂಭವಾಯಿತು. ಆದರೆ ಈಗ ಮಾರ್ಚ್ 4-10 ರಿಂದ ಒಂದು ವಾರದಲ್ಲಿ ಹರಡಿತುಪ್ರತಿ ವರ್ಷ ರಾಷ್ಟ್ರೀಯ ಸುರಕ್ಷತಾ ದಿನಕ್ಕಾಗಿ ಹೊಸ ವಿಷಯವಿದೆ. ಈ ವರ್ಷದ ಥೀಮ್ 'ಸದಕ್ ಸುರಕ್ಷ (ರಸ್ತೆ ಸುರಕ್ಷತೆ)'. ಇಂತಹ ಅದ್ಭುತ ಸುರಕ್ಷತಾ ಕ್ರಮಗಳನ್ನು ಸರ್ಕಾರವು ಸದಾ ಪ್ರೋತ್ಸಾಹಿಸಿ ಜನರನ್ನು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿ ಹಾಗೂ ಎಲ್ಲಾ ಸ್ನೇಹಿತರು ಯಾವುದೇ ಕೈಗಾರಿಕಾ ಕ್ಷೇತ್ರದಲ್ಲಿ ವಾಹನ ಚಲಾಯಿಸುವಾಗ ನಿಮ್ಮ ಸುರಕ್ಷಿತ ಕ್ರಮವನ್ನು ಕೈಗೊಳ್ಳಿ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💪ರಾಷ್ಟ್ರೀಯ ಸುರಕ್ಷತಾ ದಿನ⚔️ ಈ ರಾಷ್ಟ್ರೀಯ ಭದ್ರತಾ ದಿನದಂದು, ಭಾರತದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಪಾತ್ರವನ್ನು ನಿರ್ವಹಿಸುತ್ತಿರುವ ನಮ್ಮ ಸೇನೆ, ಪೊಲೀಸ್, ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಇತರ ಎಲ್ಲಾ ಭದ್ರತಾ ಪಡೆಗಳಿಗೆ ಧನ್ಯವಾದಗಳು. ಭದ್ರತಾ ಪಡೆಗಳ ತ್ಯಾಗ ಮತ್ತು ಧೈರ್ಯವನ್ನು ಗೌರವಿಸೋಣ. ಜೈ ಜವಾನ್ ಜೈ ಕಿಸಾನ್ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌓ಹೋಳಿಹ ಹಬ್ಬದಂದು 100 ವರ್ಷದ ನಂತರ ಅಪರೂಪದ ಚಂದ್ರ ಗ್ರಹಣ🕉️ ಬಣ್ಣಗಳ ಈ ಹಬ್ಬ ನಿಮ್ಮ ಬದುಕಿನಲ್ಲಿ ಸಂತಸ ಮತ್ತು ನೆಮ್ಮದಿಯನ್ನು ತುಂಬಲಿ. ವೈವಿಧ್ಯತೆಯಲ್ಲಿ ಏಕತೆಯನ್ನು ಸಂಭ್ರಮಿಸುವ ಈ ದಿನ, ಎಲ್ಲರಿಗೂ ಸೌಹಾರ್ದಯುತ 'ಹೋಳಿ ಹಬ್ಬ'ದ ಹಾರ್ದಿಕ ಶುಭಾಶಯಗಳು.
#💐ಮಂಗಳವಾರದ ಶುಭಾಶಯಗಳು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಪ್ರಭುತ್ವ ಗಳಿಕೆ. ಹಾರ್ಮೋನಿಯಂ, ತಬಲಾ, ಪಿಟೀಲು, ಸಾರಂಗಿ ವಾದ್ಯಗಳಲ್ಲಿ ಪರಿಣತಿ ಪಡೆದ ಉಭಯಗಾನ ವಿಶಾರದ ಡಾ. ಪುಟ್ಟರಾಜ ಗವಾಯಿ ಅವರು ಗ್ವಾಲಿಯರ್ ಘರಾಣೆಯ ಸಮರ್ಥ ಸಾಧಕರು.ವೀರೇಶ್ವರ ಪುಣ್ಯಾಶ್ರಮದ ಸಮರ್ಥ ಉತ್ತರಾಧಿಕಾರಿಯಾಗಿ ಅನೇಕ ಸಂಗೀತ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.ಡಾ. ಪುಟ್ಟರಾಜ ಗವಾಯಿಗಳ ಸಾಧನೆ ಸಿದ್ಧಿಗಳಿಗೆ ಅನೇಕ ಪ್ರಶಸ್ತಿ-ಗೌರವಗಳು ಸಹ ದೊರೆತಿವೆ. ಅಂತಹ ಮಹಾನ್ ಸಾಧಕರ ಜನ್ಮದಿನದ ಅಂಗವಾಗಿ ಅವರಿಗೆ ಶುಭಾಶಯವನ್ನು ಕೋರೋಣ. ಅವರ ಸಾಧನೆಗಳನ್ನು ಸ್ಮರಿಸೋಣ ಅವರ ಸಾಧನೆಗಳ ಹಾದಿಯಲ್ಲಿ ನಾವು ಸಾಗೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💐ಮಂಗಳವಾರದ ಶುಭಾಶಯಗಳು ಕಾಡನ್ನು ಹಾಳು/ನಾಶ ಮಾಡುವುದರಿಂದ ಅಲ್ಲಿನ ವನ್ಯ ಜೀವಿಗಳಿಗೆ ತುಂಬಾ ತೊಂದರೆ. ಆದ್ದರಿಂದ ಭವಿಷ್ಯದ ಪೀಳಿಗೆಗಾಗಿ ವನ್ಯ ಜೀವಿಯನ್ನು ಸಂರಕ್ಷಿಸಲು ಅನೇಕ ಪ್ರಾಣಿ ಅಭಯಾರಣ್ಯಗಳು, ಸಂರಕ್ಷಣಾಲಯಗಳು ಕಾಳಜಿ ವಹಿಸುತ್ತಿವೆ. ನಾವೆಲ್ಲರೂ ಒಂದಾಗಿ ವನ್ಯಜೀವಿಗಳನ್ನು ಸಂರಕ್ಷಿಸಲು ಮುಂದಾಗದಿದ್ದರೆ, ಇವೆಲ್ಲವನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಒಂದು ಬಾರಿ ಪ್ರಾಣಿ, ಪಕ್ಷಿಗಳು ವಿನಾಶ ಹೊಂದಿದರೆ, ಶಾಶ್ವತವಾಗಿ ಕಳೆದುಕೊಂಡಂತೆ. ಅದು ಆಗದಂತೆ ಕಾಳಜಿವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಉಳಿಸುವುದಕ್ಕಾಗಿ ವನ್ಯಜೀವಿ ದಿನವಾದ ಇಂದು ಎಲ್ಲರೂ ಜಾಗೃತಿ ಮೂಡಿಸೋಣ. ಎನ್ನುತ್ತಾ ನನ್ನೆಲ್ಲ ಸ್ನೇಹಿತರಿಗೆ ವಿಶ್ವ ವನ್ಯಜೀವಿ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💐ಮಂಗಳವಾರದ ಶುಭಾಶಯಗಳು ರಾಷ್ಟ್ರೀಯ ರಕ್ಷ ಣಾ ದಿನ
ನಮ್ಮ ದೇಶದಲ್ಲಿ ನಾವಿಂದು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಮುಖ್ಯ ಕಾರಣ ನಮ್ಮ ಸೇನಾಪಡೆ. ಇವರು ನಮ್ಮ ದೇಶವನ್ನು ಶತ್ರುಗಳ ಕೈಯಿಂದ ರಕ್ಷಿಸುತ್ತಿರುವ ಕಾರಣ ನಾವು ಸುಖವಾಗಿ ನಿದ್ರಿಸುವಂತಾಗಿದೆ. ಶತ್ರು ದಾಳಿ ಮಾತ್ರವಲ್ಲದೆ ವಿವಿಧ ಪ್ರವಾಹ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಸೇನಾಪಡೆಗಳು ಜನರ ರಕ್ಷ ಣೆಗೆ ಧಾವಿಸುತ್ತವೆ. ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಇವರ ನಿಸ್ವಾರ್ಥ ಸೇವೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಇವರು ತಮ್ಮ ಜೀವದ ಹಂಗನ್ನು ತೊರೆದು ಪರ್ವತ ಪ್ರದೇಶಗಳಲ್ಲಿ ಮೈ ನಡುಗಿಸುವ ಚಳಿ, ಮರಳುಗಾಡಿನ ಸುಡು ಬಿಸಿಲು, ಸಾಗರದ ದೈತ್ಯ ಅಲೆಗಳನ್ನೂ ಲೆಕ್ಕಿಸದೆ ಶತ್ರುಪಡೆಗಳ ವಿರುದ್ಧ ಹೋರಾಡುತ್ತಾರೆ. ಈ ಹೋರಾಟದಲ್ಲಿ ಹುತಾತ್ಮರೂ ಆಗುತ್ತಾರೆ. ಆ ಮೂಲಕ ತಮ್ಮ ದೇಶಪ್ರೇಮವನ್ನು ಮೆರೆಯುತ್ತಾರೆ. ಆದ್ದರಿಂದ ಇವರಿಗಾಗಿಯೇ ಭಾರತದಲ್ಲಿ ಒಂದು ವಿಶೇಷ ದಿನವನ್ನು ಮೀಸಲಾಗಿಡಲಾಗಿದೆ. ಆ ದಿನವೇ ಮಾರ್ಚ್ 3. ಈ ದಿನವನ್ನು ನ್ಯಾಷನಲ್ ಡಿಫೆನ್ಸ್ ಡೇ ಅಥವಾ ರಾಷ್ಟ್ರೀಯ ರಕ್ಷ ಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನೆಯ ಮೂರು ಪ್ರಮುಖ ವಿಭಾಗಗಳಾದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸೈನಿಕರಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜೈ ಜವಾನ್ ಜೈ ಕಿಸಾನ್ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#❤️ಸರೋಜಿನಿ ನಾಯ್ಡು ಅವರ ಪುಣ್ಯಸ್ಮರಣೆ💐 ಸರೋಜಿನಿ ನಾಯ್ಡು ಅವರು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದರು. ಚಿಕ್ಕಂದಿನಲ್ಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಯತ್ರಿ ಕೂಡ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್ನ ಮೊದಲನೆಯ ಮಹಿಳಾ ಅಧ್ಯಕ್ಷರಾಗಿದ್ದರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾಗಿದ್ದರು. ಧೀಮಂತ ಮಹಿಳೆ "ಸರೋಜಿನಿ ನಾಯ್ಡು" ಅವರ ಪುಣ್ಯಸ್ಮರಣೆ ದಿನದಂದು ಮಹಿಳೆಯರಿಗೆ ಸ್ಫೂರ್ತಿದಾಯಕವಾದ ಅವರ ಸಾಧನೆಗಳನ್ನು ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💐ಬುಧವಾರದ ಶುಭಾಶಯ ಕನ್ನಡ ಸಾಹಿತ್ಯಲೋಕದ ಪ್ರಮುಖರು, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ರಾಜ್ಯ ಏಕೀಕರಣಕ್ಕೆ ಶ್ರಮಿಸಿದ ಮಹಾನ್ ಚೇತನ, ಕನ್ನಡ ಕುಲಪುರೋಹಿತರು ಎಂದೇ ಖ್ಯಾತರಾದ ಶ್ರೀ ಆಲೂರು ವೆಂಕಟರಾಯರು ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು.ಜಯ ಕರ್ನಾಟಕದ ಲೇಖನ ಕರ್ನಾಟಕ ಕುಲಪುರೋಹಿತರಾದ ಇವರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಾಗಿಟ್ಟವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟ ಇವರ ಕೊಡುಗೆ ಅಪಾರ.ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ವಿಜಯಪುರದಲ್ಲಿ ಜನಿಸಿದರು. ಇವರ ವಂಶಜರು ಧಾರವಾಡದ ಬಳಿಯ ಆಲೂರ ಈಗಿನ ಗದಗ ಜಿಲ್ಲೆ, ರೋಣ ತಾಲ್ಲೂಕಿನ ಹೊಳೆ-ಆಲೂರ ಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ.ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಎ. ಪದವಿ ಪಡೆದರು. ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.
ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳು.ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು ೧೯೦೬ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ೧೯೨೨ ನವೆಂಬರ್ ೪ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.
ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. ೧೯೧೫ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.ಆಲೂರರ 'ಗತವೈಭವ'ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ... "ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ". ಈ ಮಾತುಗಳು ಅಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ಆಲೂರು ವೆಂಕಟರಾಯರು ಮಾಡಿದ ಕಾರ್ಯಗಳು ಬುನಾದಿ ಒದಗಿಸಿವೆ.ಆಲೂರರು ಪ್ರಸಿದ್ಧ 'ಜಯಕರ್ನಾಟಕ' ಪತ್ರಿಕೆಯನ್ನು ೧೯೨೨ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. "ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ."ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: "ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ... ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ.ಏಕೀಕರಣ ಹೋರಾಟದ ಮೂಲಕ ಕರ್ನಾಟಕ ರಾಜ್ಯವನ್ನು ಒಂದುಗೂಡಿಸಲು ಮುಂಚೂಣಿಯಲ್ಲಿದ್ದು ಶ್ರಮಿಸಿದ "ಕನ್ನಡದ ಕುಲ ಪುರೋಹಿತ" ಆಲೂರು ವೆಂಕಟರಾಯರ ದೇಶಾಭಿಮಾನ ಕುರಿತ ಅವರ ವಿಚಾರಗಳು ದೇಶದ ಯುವ ಜನತೆಗೆ ಸದಾ ಆದರ್ಶವಾಗಲಿ ಅವರ ಈ ಪುಣ್ಯಸ್ಮರಣೆಯ ದಿನದಂದು ನಾವು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#💐ಮಂಗಳವಾರದ ಶುಭಾಶಯಗಳು ನನ್ನ ಪ್ರೀತಿಯ ಸ್ನೇಹಿತರೆ ಈ ದಿನದ ವಿಷಯ ನಿಮಗೆ ತಿಳಿದಿರಲಿ ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 24 ರಂದು 'ಕೇಂದ್ರ ಅಬಕಾರಿ ದಿನ' ಆಚರಿಸಲಾಗುತ್ತದೆ. ಇದು 24 ಫೆಬ್ರವರಿ 1944 ರಂದು ಜಾರಿಗೆ ಬಂದ ಕೇಂದ್ರ ಅಬಕಾರಿ ಮತ್ತು ಉಪ್ಪು ಕಾಯಿದೆಯನ್ನು ಸ್ಮರಿಸುತ್ತದೆ. ಕೇಂದ್ರೀಯ ಅಬಕಾರಿ ದಿನವು ದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಸಿಬಿಐಸಿ ಯ ಕೊಡುಗೆಯನ್ನು ಗೌರವಿಸುತ್ತದೆ.ನಮ್ಮ ದೇಶದಲ್ಲಿ ಅಬಕಾರಿ ಇಲಾಖೆಯು ಅತ್ಯಂತ ಪ್ರಮುಖವಾದದ್ದು. ಇದು ಇಡೀ ದೇಶದ ನಾಗರಿಕರಿಂದ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅಬಕಾರಿ ಇಲಾಖೆಯ ಕೆಲಸಗಳು ತುಂಬಾ ಸೂಕ್ಷ ್ಮವಾಗಿರುತ್ತವೆ. ಆದ್ದರಿಂದ ಇದರ ನೌಕರರು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ತೆರಿಗೆ ಲೆಕ್ಕಾಚಾರ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇವರದ್ದು. ಈ ಕೆಲಸದಲ್ಲಿ ಒಂದಿನಿತು ತಪ್ಪಾದರೂ ಅದು ದೇಶಕ್ಕಾಗುವ ನಷ್ಟವಾಗುತ್ತದೆ. ಆದ್ದರಿಂದ ಕೇಂದ್ರ ಅಬಕಾರಿ ನೌಕರರನ್ನು ತುಂಬಾ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ಇವರಿಗೆ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ಫೆಬ್ರವರಿ 24. ಪ್ರತಿವರ್ಷ ಈ ದಿನವನ್ನು ಸೆಂಟ್ರಲ್ ಎಕ್ಸೈಸ್ ಡೇ ಎಂದು ಆಚರಿಸಲಾಗುತ್ತದೆ. ದೇಶಾದ್ಯಂತ ಇರುವ ಅಬಕಾರಿ ಇಲಾಖೆಯ ನೌಕರರಿಗೆ ಪ್ರೋತ್ಸಾಹ ಕೊಡುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ. ಅಬಕಾರಿ ಇಲಾಖೆಯ ನೌಕರರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗದೆ ಉತ್ತಮ ರೀತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಇವರ ಕಾರ್ಯಶೈಲಿ ಸುಧಾರಣೆಗಾಗಿ ಯಾವೆಲ್ಲಾ ನೀತಿ, ನಿಯಮಗಳನ್ನು ಜಾರಿಗೊಳಿಸಬಹುದು ಎಂಬ ಚಿಂತನೆಯನ್ನು ಈ ದಿನ ಮಾಡಲಾಗುತ್ತದೆ. ಕೇಂದ್ರ ಅಬಕಾರಿ ಇಲಾಖೆಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಈ ಇಲಾಖೆಯ ಸುಧಾರಣೆಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ.ಅಬಕಾರಿ ಸುಂಕದ ಮಹತ್ವವನ್ನು ಜನರಿಗೆ ತಿಳಿಸುವುದು 'ಕೇಂದ್ರ ಅಬಕಾರಿ ದಿನ'ದ ಉದ್ದೇಶವಾಗಿದೆ. ಸದೃಢ ಆರ್ಥಿಕತೆ ಇಲ್ಲದೆ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ದಿನದಂದು ಎಲ್ಲಾ ಭಾರತೀಯರಿಗೆ ಅಬಕಾರಿ ಸುಂಕದ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್













