#🕉️ ಜೈ ಶ್ರೀ ರಾಮ🙏
ಶ್ರೀರಾಮ ಕಥಾ ಮಹಿಮೆ: ಅಧ್ಯಾಯ 5.
ಹಿಂದಿನ ಅಧ್ಯಾಯದಲ್ಲಿ, ಶ್ರೀರಾಮ ಭಕ್ತನಾದ ಕೇಶವ ಭಟ್ಟನ ಮಗ ನಾರಾಯಣ ಭಟ್ಟನು ತಂದೆಯ ಆದೇಶದಂತೆ ಶ್ರೀರಾಮನನ್ನು ಹುಡುಕುತ್ತಾ ಹೊರಟವನಿಗೆ 'ಸೀತಾ ರಾಮ ಲಕ್ಷ್ಮಣ ಭರತ ಶತ್ರುಘ್ನ ಹನುಮಂತನ ಸಮೇತ ಶ್ರೀರಾಮನು ದರ್ಶನ ಕೊಟ್ಟು, ನಾರಾಯಣ ಭಟ್ಟನಿಗೆ ಮುಂದೆ ಮಾಡಬೇಕಾದ ಕಾರ್ಯಗಳೆಲ್ಲ ತಿಳಿಸಿ ಆಶೀರ್ವದಿಸಿ ಶ್ರೀರಾಮನು ಅಂತರ್ಧಾನನಾದನು. ನಾರಾಯಣ ಭಟ್ಟನಿಗೆ ಶ್ರೀರಾಮನ ದರ್ಶನವಾಗುತ್ತಿದ್ದಂತೆ ಅವನ ಸುರಪುರದ ಮನೆಯಲ್ಲಿ ಐಶ್ವರ್ಯವು ತುಂಬಿ ತುಳು ಕಾಡುತ್ತಿತ್ತು. ಅಂತರ್ಯವನ್ನು ಅರಿತ ತಂದೆ ಕೇಶವ ಭಟ್ಟನು ಮಗನನ್ನು ನಿರೀಕ್ಷಿಸುತ್ತಿದ್ದನು.
ಪಂಚಮ ಭಾಗ:- ಶ್ರೀ ರಾಮನ ದರ್ಶನ ಪಡೆದು ಹಿಂತಿರುಗಿದ ನಾರಾಯಣ ಭಟ್ಟನು ಮೊದಲು ಕೆರೆಯ ಏರಿಯನ್ನು ಕಟ್ಟಿಸುತ್ತಿದ್ದ ರಾಜನ ಬಳಿಗೆ ಬರಲು ರಾಜನು ಸ್ವಪ್ನ ವೃತ್ತಾಂತವನ್ನು ಹೇಳಿ, ಸಮಸ್ತ ರಾಜ ಮರ್ಯಾದೆಗಳಿಂದ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದನು.
೨. ನಂತರ ಪತ್ನಿ ಸಮೇತನಾಗಿ ರಾಜಭಟರೊಡನೆ ಅಲ್ಲಿಂದ ಹೊರಟು ಬರುತ್ತಿರಲು, ಅಡ್ಡನಾಗಿ ಬಿದ್ದಿದ್ದ ನಾಗರಾಜನು ನಾರಾಯಣ ಭಟ್ಟನನ್ನು ನೋಡಿ ಪೂಜ್ಯನೇ ಇಂದಿಗೆ ನಾನು ಧನ್ಯನಾದೆನು. ಈ ಸ್ಥಳದಲ್ಲಿರುವ 108 ಕೊಪ್ಪರಿಗೆ ಹಣವನ್ನು ನೀನು ಅನುಭವಿಸಲು ರಾಮನ ಆಜ್ಞೆಯಾಗಿದೆ ಇದನ್ನು ಸ್ವೀಕರಿಸು ಎಂದು ಹೇಳಿ ಮಾಯವಾಗಲು ತನ್ನ ಭಟರೊಂದಿಗೆ ಆ ಕೊಪ್ಪರಿಗೆ ಹಣವನ್ನು ಒಂಟೆಗಳ ಮೇಲೆ ಹೊರಿಸಿಕೊಂಡು ಪತ್ನಿ ಸಮೇತನಾಗಿ ನಾರಾಯಣ ಭಟ್ಟ ಬರುತ್ತಿದ್ದನು.
೩. ಮುಂದೆ ಭಗವಂತನ ದಯೆಯಿಂದ ರಾಮರಾಜ್ಯಕ್ಕೆ ರಾಜನಾಗಿದ್ದ ಬಾಲಕ ನನ್ನು, ಕಂಡು ಅವನ ವೃದ್ಧ ಮಾತಾಪಿತೃಗಳ ಭೇಟಿ ಮಾಡಿ, ಶ್ರೀ ರಾಮನ ದರ್ಶನ ಅವರಿಗೆ ವಿವರಿಸಿ ರಾಜ ಮರ್ಯಾದೆಯೊಂದಿಗೆ ಧನ ಕನಕ ವಸ್ತ್ರ ವಾಹನಗಳ ಸಹಿತ ಬಂದನು.
೪. ಹೀಗೆ ಮುಂದೆ ಬರುತ್ತಿದ್ದಾಗ ಇವನಿಗಾಗಿ ಕಾಯುತ್ತಿದ್ದ ಅವಿವಾಹಿತ ಕನ್ಯೆಯು ಈತನಿಗೆ ಸ್ವಪ್ನವನ್ನು ತಿಳಿಸಿ, ಆ ಕನ್ಯೆಯ ಮಾತ ಪಿತೃಗಳ ಅಪೇಕ್ಷೆಯಂತೆ ಆಕೆಯನ್ನು ವಿವಾಹ ಮಾಡಿಕೊಂಡು ಹೊರಟನು.
೫. ಹೀಗೆ ಮುಂದೆ ಬಂದಾಗ ಕಣ್ಣು ಬಂದ ಗೌಡನು ಈತನನ್ನು ನೋಡಿ 'ಮಹನೀಯರೇ ಇಂದು ದರ್ಸನಾ ಕೊಟ್ರಾ, ನಮ್ಮಪ್ಪ ನಡಿರಿ ಮನೀಕೆ' ಎಂದು ಹೇಳಿ ಅವನ ಮನೆಗೆ ಹೋಗಿ ಅಲ್ಲಿ ಮತ್ತೊಮ್ಮೆ ಶ್ರೀರಾಮ ಭಜನೆ ಮಾಡಿ ರಾಮಾಪುರದಲ್ಲಿದ್ದ ಮಗಳ ಮನೆಗೆ ಬಂದನು. ತಂದೆಗಾಗಿ ಕಾದಿದ್ದ ಮಗಳು ಹರ್ಷಗೊಂಡಳು. ಮಗಳನ್ನು ಕರೆದುಕೊಂಡು ರಾಜಮರ್ಯಾದೆ ಯಿಂದ 'ಸುರಪುರ' ಊರ ಬಾಗಿಲಿಗೆ ಬಂದು ತನ್ನ ತಂದೆ ತಾಯಿಗೆ ರಾಜ ಭಟರ ಮೂಲಕ ಹೇಳಿ ಕಳಿಸಿದನು. ಊರ ಮಧ್ಯದಲ್ಲಿ ಬಿಡಾರವನ್ನು ಹಾಕಿ ತಳಿರು ತೋರಣಗಳಿಂದ ಅಲಂಕರಿಸಲು ನಾರಾಯಣ ಭಟ್ಟ ತನ್ನ ಪರಿವಾರದೊಂದಿಗೆ ಬಿಡಾರಕ್ಕೆ ಬಂದನು. ತಂದೆ ತಾಯಿಗೆ ನಮಸ್ಕರಿಸಿ
ಶ್ರೀ ರಾಮನ ದರ್ಶನ ಭಾಗ್ಯವನ್ನು ವಿವರಿಸಿದನು. ಊರಿನವರೆಲ್ಲರೂ
ನಾರಾಯಣ ಭಟ್ಟನ ಪರಿವಾರದೊಂದಿಗೆ ಶ್ರೀ ರಾಮನ ಪೂಜೆಯನ್ನು
ಯಥಾವಿಧಿಯ ಆಚರಿಸಿ, ಶ್ರೀರಾಮನಾಮ ಕಥೆಯನ್ನು ಸಂತೋಷದಿಂದ ಕೇಳಿ ಪ್ರಸಾದವನ್ನು ಭುಂಜಿಸಿ ಎಲ್ಲರೂ ಭಕ್ತಿಯಿಂದ ರಾಮ ನಾಮ ಭಜನೆ ಯನ್ನು ಮೈಮರೆತು ಮಾಡುತ್ತಿರಲು, ಸೀತಾ- ಲಕ್ಷ್ಮಣ- ಭರತ -ಶತ್ರುಘ್ನ-
ಹನುಮ ಸಮೇತನಾದ ಶ್ರೀರಾಮಚಂದ್ರನು ಸರ್ವರಿಗೂ ಪ್ರತ್ಯಕ್ಷನಾಗಿ,
ಭಕ್ತ ಶಿಖಾಮಣಿಗಳಿರಾ, ಈ ರಾಮಕಥೆ ಮತ್ತು ಮಹಿಮೆಯನ್ನು ಯಾರು ಪ್ರತಿ ಶನಿವಾರ ಯಾರು ತಪ್ಪದೇ ಆಚರಿಸುವರೊ, ಯಾರು ಪಠಣ ಮಾಡುವರೊ, ಅವರು ಮುಕ್ತಿಯನ್ನು ಹೊಂದವರು. ನೀವೆಲ್ಲರೂ ಇನ್ನೂ ಕೆಲವು ಕಾಲ ರಾಮ ಧ್ಯಾನಪರರಾಗಿದ್ದು ನಂತರ ನನ್ನ ವಾಸಸ್ಥಾನವಾದ ವೈಕುಂಠವನ್ನು ಸೇರುವಿರಿ ಎಂದು ಹೇಳಿ ಅಂತರ್ದಾನನಾದನು. ಸರ್ವರೂ ಮಂಗಳವನ್ನು ಹಾಡಿದರು. ಸೀತಾರಾಮ ರಾಜ್ಯವೆಂಬ ಸುರಪುರದಲ್ಲಿ ಸುಖವಾಗಿದ್ದು ಮುಕ್ತಿಯನ್ನು ಪಡೆದರು ಎಂಬಲ್ಲಿಗೆ, ಶ್ರೀರಾಮಕತಾ ಮಹಿಮೆಯ ಐದನೇ ಅಧ್ಯಾಯ ಸಂಪನ್ನವಾಯಿತು. ----ಮಂಗಳಂ----
ಈ ಪವಿತ್ರ ಶ್ರೀರಾಮ ಕತೆ ಮಹಿಮೆಯ ಐದು ಅಧ್ಯಾಯಗಳು ಇಲ್ಲಿ ಮಂಗಳವಾಗಿ ಸಂಪನ್ನವಾದವು. ಭಕ್ತಿಯ ಮಾರ್ಗದಲ್ಲಿ ನಡೆದ ನಾರಾಯಣ ಭಟ್ಟನ ಅನುಭವಗಳು ನಮಗೆ ಒಂದು ಸತ್ಯವನ್ನು ಸಾರುತ್ತವೆ—
ರಾಮನ ಕೃಪೆ ಇದ್ದಲ್ಲಿ ಜೀವನದಲ್ಲಿ ಅಡೆತಡೆಗಳಿಲ್ಲ, ದಾರಿಯಲ್ಲೇ ದಿವ್ಯ ಅನುಗ್ರಹ ಹರಿದು ಬರುತ್ತದೆ.
ಈ ಕಥೆಯನ್ನ ಪಠಿಸುವ ಪ್ರತಿಯೊಬ್ಬರಿಗೂ ಶ್ರೀರಾಮ–ಸೀತಾ–ಲಕ್ಷ್ಮಣ–ಭರತ–ಶತ್ರುಘ್ನ–ಹನುಮಂತನ ದಿವ್ಯ ಆಶೀರ್ವಾದಗಳು ಸದಾ ಇರಲಿ. ನಿಮ್ಮ ಮನೆಯಲ್ಲಿ ಶಾಂತಿ, ನಿಮ್ಮ ಹೃದಯದಲ್ಲಿ ಭಕ್ತಿ, ನಿಮ್ಮ ಜೀವನದಲ್ಲಿ ಮಂಗಳ ಬೆಳಗಲಿ.
ಶ್ರೀ ರಾಮ ಜಯ ರಾಮ ಜಯ ಜಯ ರಾಮ ರಾಮ
ಮಂಗಳಂವೆನ್ನಿ ಮಂಗಳಂವೆನ್ನಿ
ತುಂಗಾ ಮಹಿಮ ತುರಪಾಲಕನಿಗೆ!!
ಮಂಗಳಾಂಗ ರಂಗನಾಥ
ಗಂಗಾಜನಕ ಕೃಪಾಳಾಂಗನಿಗೆ !!
ನೀರೊಳು ಭಾರವ ಪೊತ್ತೂ
ಭೂಮಿಯ ನೆತ್ತಿ ಪೊರಾನ
ಸಲಹಿದ ಬಾಲಪರಶುಧರಗೇ!!
ಶ್ರೀ ರಾಮಕೃಷ್ಣ ಬೌದ್ಧಕಲ್ಕಿ
ಐರಾವತಾರದ ನರಹರಿಗೆ!!
ಜೋಗುಳ ಪಾಡಿ ಜೋಗುಳಪಾಡಿ ಜಗದೊಡೆಯಾ
ಶ್ರೀಹರಿಗೇ ಖಗವಾಹನ ಮುಕುಂದ ಮುರಾರಿಗೇ!
ಪನ್ನಗಶಾಹಿಗೆ ಜೋ ಜೋ!!
ಲಾಲಿಯ ಪಾಡಿ ಲಾಲಿಯ ಪಾಡಿ
ನೀಲಮೇಘವರ್ಣನಿಗೆ ಬಾಲ ಲೀಲೆ ಗಳ ತೋರುವ
ಮುಕುಂದ ಶೀಲಾ ನಿತ್ಯಾನಂದ ವಿಠಲನಿಗೆ!!
ಮಂಗಳಂ ವೆನ್ನಿ ಮಂಗಳಂ ವೆನ್ನಿ
ತುಂಗಾ ಮಹಿಮ ತುರಪಾಲಕಗೆ !!
ಶ್ರೀರಾಮ ಮಹಿಮೆ ಕಥೆಯ ಐದು ಅಧ್ಯಾಯಗಳು ಸಂಪನ್ನವಾಯಿತು.
ಶ್ರೀ ರಾಮ ಜಯ ರಾಮ ಜಯ ಜಯ ರಾಮ ರಾಮ
ಶ್ರೀ ರಾಮ ಜಯ ರಾಮ ಜಯ ಜಯ ರಾಮ ರಾಮ!!
🙏🙏🙏🙏🙏🙏🙏🙏🙏🙏🙏🙏🙏🙏🙏🙏.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


