ಕೃಷ್ಣೆ 🦚💙
ShareChat
click to see wallet page
@radhe_radhe4723
radhe_radhe4723
ಕೃಷ್ಣೆ 🦚💙
@radhe_radhe4723
🌷_ ನಾರಾಯಣಂ ಪರಬ್ರಹ್ಮಂ ಸರ್ವಕಾರಣಕಾರಕಂ _🌷
#🔱 ಭಕ್ತಿ ಲೋಕ ಪ್ರದೋಷಸ್ತೋತ್ರಾಷ್ಟಕಂ ಸತ್ಯಂ ಬ್ರವೀಮಿ ಪರಲೋಕಹಿತಂ ಬ್ರವೀಮಿ ಸಾರಂ ಬ್ರವೀಮ್ಯುಪನಿಷದ್ಧೃದಯಂ ಬ್ರವೀಮಿ | ಸಂಸಾರಮುಲ್ಬಣಮಸಾರಮವಾಪ್ಯ ಜಂತೋಃ ಸಾರೋಽಯಮೀಶ್ವರಪದಾಂಬುರುಹಸ್ಯ ಸೇವಾ || 1 || ಯೇ ನಾರ್ಚಯಂತಿ ಗಿರಿಶಂ ಸಮಯೇ ಪ್ರದೋಷೇ ಯೇ ನಾರ್ಚಿತಂ ಶಿವಮಪಿ ಪ್ರಣಮಂತಿ ಚಾನ್ಯೇ | ಏತತ್ಕಥಾಂ ಶ್ರುತಿಪುಟೈರ್ನ ಪಿಬಂತಿ ಮೂಢಾ- -ಸ್ತೇ ಜನ್ಮಜನ್ಮಸು ಭವಂತಿ ನರಾ ದರಿದ್ರಾಃ || 2 || ಯೇ ವೈ ಪ್ರದೋಷಸಮಯೇ ಪರಮೇಶ್ವರಸ್ಯ ಕುರ್ವಂತ್ಯನನ್ಯಮನಸೋಂಘ್ರಿಸರೋಜಪೂಜಾಂ | ನಿತ್ಯಂ ಪ್ರವೃದ್ಧಧನಧಾನ್ಯಕಳತ್ರಪುತ್ರ- -ಸೌಭಾಗ್ಯಸಂಪದಧಿಕಾಸ್ತ ಇಹೈವ ಲೋಕೇ || 3 || ಕೈಲಾಸಶೈಲಭವನೇ ತ್ರಿಜಗಜ್ಜನಿತ್ರೀಂ ಗೌರೀಂ ನಿವೇಶ್ಯ ಕನಕಾಂಚಿತರತ್ನಪೀಠೇ | ನೃತ್ಯಂ ವಿಧಾತುಮಭಿವಾಂಛತಿ ಶೂಲಪಾಣೌ ದೇವಾಃ ಪ್ರದೋಷಸಮಯೇಽನುಭಜಂತಿ ಸರ್ವೇ || 4 || ವಾಗ್ದೇವೀ ಧೃತವಲ್ಲಕೀ ಶತಮಖೋ ವೇಣುಂ ದಧತ್ಪದ್ಮಜ- -ಸ್ತಾಲೋನ್ನಿದ್ರಕರೋ ರಮಾ ಭಗವತೀ ಗೇಯಪ್ರಯೋಗಾನ್ವಿತಾ | ವಿಷ್ಣುಃ ಸಾಂದ್ರಮೃದಂಗವಾದನಪಟುರ್ದೇವಾಃ ಸಮಂತಾತ್ ಸ್ಥಿತಾಃ ಸೇವಂತೇ ತಮನು ಪ್ರದೋಷಸಮಯೇ ದೇವಂ ಮೃಡಾನೀಪತಿಂ || 5 || ಗಂಧರ್ವಯಕ್ಷಪತಗೋರಗಸಿದ್ಧಸಾಧ್ಯಾ ವಿದ್ಯಾಧರಾಮರವರಾಪ್ಸರಸಾಂ ಗಣಾಂಶ್ಚ | ಯೇಽನ್ಯೇ ತ್ರಿಲೋಕನಿಲಯಾಃ ಸಹಭೂತವರ್ಗಾಃ ಪ್ರಾಪ್ತೇ ಪ್ರದೋಷಸಮಯೇ ಹರಪಾರ್ಶ್ವಸಂಸ್ಥಾಃ || 6 || ಅತಃ ಪ್ರದೋಷೇ ಶಿವ ಏಕ ಏವ ಪೂಜ್ಯೋಽಥ ನಾನ್ಯೇ ಹರಿಪದ್ಮಜಾದ್ಯಾಃ | ತಸ್ಮಿನ್ಮಹೇಶೇ ವಿಧಿನೇಜ್ಯಮಾನೇ ಸರ್ವೇ ಪ್ರಸೀದಂತಿ ಸುರಾಧಿನಾಥಾಃ || 7 || ಏಷ ತೇ ತನಯಃ ಪೂರ್ವಜನ್ಮನಿ ಬ್ರಾಹ್ಮಣೋತ್ತಮಃ ಪ್ರತಿಗ್ರಹೈರ್ವಯೋ ನಿನ್ಯೇ ನ ಯಜ್ಞಾದ್ಯೈಃ ಸುಕರ್ಮಭಿಃ | ಅತೋ ದಾರಿದ್ರ್ಯಮಾಪನ್ನಃ ಪುತ್ರಸ್ತೇ ದ್ವಿಜಭಾಮಿನಿ ತದ್ದೋಷಪರಿಹಾರಾರ್ಥಂ ಶರಣಂ ಯಾತು ಶಂಕರಂ || 8 || ಇತಿ ಶ್ರೀಸ್ಕಾಂದಪುರಾಣೇ ಬ್ರಹ್ಮಖಂಡೇ ತೃತೀಯೇ ಬ್ರಹ್ಮೋತ್ತರಖಂಡೇ ಷಷ್ಠೋಽಧ್ಯಾಯೇ ಶಾಂಡಿಲ್ಯ ಕೃತ ಪ್ರದೋಷಸ್ತೋತ್ರಾಷ್ಟಕಂ | ಅರ್ಥ ಪ್ರದೋಷಸ್ತೋತ್ರಾಷ್ಟಕಂ ಮಹಾದೇವನ ಆರಾಧನೆಯಲ್ಲಿ ಪ್ರದೋಷ ಕಾಲದ ಮಹತ್ವವನ್ನು ಅತ್ಯಂತ ಸುಂದರವಾಗಿ ಮತ್ತು ಆಳವಾಗಿ ವಿವರಿಸುವ ಒಂದು ಶ್ರೇಷ್ಠ ಸ್ತೋತ್ರವಾಗಿದೆ. ಇದು ಶಿವನ ಮಹಿಮೆಯನ್ನು ಕೊಂಡಾಡುತ್ತಾ, ಪ್ರದೋಷ ಸಮಯದಲ್ಲಿ ಶಿವಾರಾಧನೆಯು ಮಾನವ ಜನ್ಮದ ಪರಮ ಗುರಿಯನ್ನು ತಲುಪಲು ಹೇಗೆ ಸಹಾಯಕವಾಗಿದೆ ಎಂಬುದನ್ನು ತಿಳಿಸುತ್ತದೆ. ಈ ಅಷ್ಟಕವು ಶಿವಭಕ್ತಿಯ ಸಾರವನ್ನು, ಉಪನಿಷತ್ತುಗಳ ಹೃದಯವನ್ನು ಮತ್ತು ಧರ್ಮದ ಮೂಲಭೂತ ತತ್ವಗಳನ್ನು ಪ್ರತಿಬಿಂಬಿಸುತ್ತದೆ. ಈ ಸ್ತೋತ್ರದ ಮೊದಲ ಶ್ಲೋಕವು ಜೀವನದ ಸಾರವೇ ಶಿವನ ಪಾದಕಮಲಗಳ ಸೇವೆಯಲ್ಲಿ ಅಡಗಿದೆ ಎಂದು ಸ್ಪಷ್ಟಪಡಿಸುತ್ತದೆ. ಸಂಸಾರವು ಅನಿಶ್ಚಿತ ಮತ್ತು ದುಃಖಮಯವಾಗಿದ್ದು, ಮನುಷ್ಯನಿಗೆ ಮುಕ್ತಿಯನ್ನು ನೀಡುವ ಏಕೈಕ ಮಾರ್ಗವೆಂದರೆ ಶಿವನ ಅನನ್ಯ ಭಕ್ತಿ. ಇದು ಜನ್ಮ ಜನ್ಮಾಂತರಗಳ ಸಂಸಾರಿಕ ಬಂಧನಗಳಿಂದ ವಿಮುಕ್ತಿ ಪಡೆಯಲು ಮತ್ತು ಮೋಕ್ಷವನ್ನು ಸಾಧಿಸಲು ಪರಮೇಶ್ವರನ ಅನುಗ್ರಹವೇ ಏಕೈಕ ಆಶ್ರಯ ಎಂದು ಸಾರುತ್ತದೆ. ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸದವರು, ಅಥವಾ ಈ ಪವಿತ್ರ ಕಾಲದ ಮಹಿಮೆಯನ್ನು ಅರಿಯದವರು, ಅನೇಕ ಜನ್ಮಗಳಲ್ಲಿ ದಾರಿದ್ರ್ಯವನ್ನು ಅನುಭವಿಸುತ್ತಾರೆ ಎಂದು ಸ್ತೋತ್ರವು ಎಚ್ಚರಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಪ್ರದೋಷ ಸಮಯದಲ್ಲಿ ಶಿವನನ್ನು ಅನನ್ಯ ಭಕ್ತಿಯಿಂದ ಪೂಜಿಸುವ ಭಕ್ತರಿಗೆ ಈ ಲೋಕದಲ್ಲಿಯೇ ಸಂಪತ್ತು, ಧಾನ್ಯ, ಸೌಭಾಗ್ಯ, ಸಂತಾನ ಮತ್ತು ಸಮಸ್ತ ಐಶ್ವರ್ಯಗಳು ಲಭಿಸುತ್ತವೆ ಎಂದು ಮೂರನೇ ಶ್ಲೋಕವು ಭರವಸೆ ನೀಡುತ್ತದೆ. ಇದು ಶಿವಾರಾಧನೆಯಿಂದ ಲಭಿಸುವ ಐಹಿಕ ಮತ್ತು ಪಾರಮಾರ್ಥಿಕ ಲಾಭಗಳನ್ನು ಒತ್ತಿಹೇಳುತ್ತದೆ. ಕೈಲಾಸ ಪರ್ವತದ ಭವ್ಯ ಭವನದಲ್ಲಿ, ತ್ರಿಜಗಜ್ಜನನಿಯಾದ ಪಾರ್ವತೀ ದೇವಿಯನ್ನು ರತ್ನಖಚಿತ ಸಿಂಹಾಸನದ ಮೇಲೆ ಆಸೀನರಾಗಿಸಿ, ಶೂಲಪಾಣಿಯಾದ ಶಿವನು ನೃತ್ಯ ಮಾಡಲು ಸಿದ್ಧನಾಗುವ ದಿವ್ಯ ಕ್ಷಣವನ್ನು ಈ ಸ್ತೋತ್ರವು ವರ್ಣಿಸುತ್ತದೆ. ಈ ಪ್ರದೋಷ ಸಮಯದಲ್ಲಿ, ಬ್ರಹ್ಮನು ವೀಣೆಯನ್ನು ನುಡಿಸಿದರೆ, ವಿಷ್ಣುವು ಮೃದಂಗವನ್ನು ಬಾರಿಸುತ್ತಾನೆ, ಸರಸ್ವತಿಯು ಗಾಯನ ಮಾಡುತ್ತಾಳೆ, ಲಕ್ಷ್ಮಿಯು ತಾಳವನ್ನು ಹಾಕುತ್ತಾಳೆ. ಗಂಧರ್ವರು, ಯಕ್ಷರು, ನಾಗರು, ಸಿದ್ಧರು, ಸಾಧುಗಳು, ವಿದ್ಯಾಧರರು ಮತ್ತು ಸಮಸ್ತ ದೇವತೆಗಳು ಶಿವನ ಈ ದಿವ್ಯ ನೃತ್ಯವನ್ನು ವೀಕ್ಷಿಸಲು ಮತ್ತು ಅವನ ಪಾದಸೇವೆ ಮಾಡಲು ಅಲ್ಲಿ ನೆರೆಯುತ್ತಾರೆ. ಪ್ರದೋಷ ಕಾಲದಲ್ಲಿ ಶಿವನೊಬ್ಬನೇ ಪೂಜ್ಯನಾಗಿದ್ದು, ವಿಷ್ಣು, ಬ್ರಹ್ಮಾದಿ ಸಮಸ್ತ ದೇವತೆಗಳು ಕೂಡ ಆ ಸಮಯದಲ್ಲಿ ಶಿವನನ್ನು ಪೂಜಿಸಿ ಅನುಗ್ರಹವನ್ನು ಪಡೆಯುತ್ತಾರೆ. ಶಿವಾರಾಧನೆ ನಡೆಯುವ ಸ್ಥಳದಲ್ಲಿ ಎಲ್ಲ ದಿಕ್ಪಾಲಕರು, ದೇವತೆಗಳು ಮತ್ತು ಲೋಕಪಾಲಕರು ಪ್ರಸನ್ನರಾಗುತ್ತಾರೆ ಎಂದು ಸ್ತೋತ್ರವು ಸಾರುತ್ತದೆ. ಅಂತಿಮ ಶ್ಲೋಕದಲ್ಲಿ, ಧರ್ಮವನ್ನು ತೊರೆದು, ದಾನ-ಯಜ್ಞಗಳನ್ನು ಮಾಡದೆ ಪ್ರತಿಗ್ರಹಗಳಿಂದ ಜೀವಿಸಿದ ಬ್ರಾಹ್ಮಣ ಕುಮಾರನೊಬ್ಬ ದಾರಿದ್ರ್ಯಕ್ಕೆ ಗುರಿಯಾದ ಕಥೆಯನ್ನು ಉದಾಹರಣೆಯಾಗಿ ನೀಡುತ್ತದೆ. ಇಂತಹ ದೋಷಗಳಿಂದ ಮುಕ್ತಿ ಪಡೆಯಲು ಶಿವನ ಶರಣಾಗತಿಯೇ ಏಕೈಕ ಮಾರ್ಗ ಎಂದು ಉಪದೇಶಿಸುತ್ತದೆ. ಪ್ರದೋಷ ಕಾಲದಲ್ಲಿ ಶಿವಾರಾಧನೆಯು ಶ್ರೇಯಸ್ಸಿನ ಮಾರ್ಗವಾಗಿದೆ ಎಂದು ಎಲ್ಲರಿಗೂ ತಿಳಿಸುತ್ತದೆ. ಈ ಸ್ತೋತ್ರವು ಭಕ್ತರಿಗೆ ಶಿವನ ಕೃಪೆಯನ್ನು ಪಡೆಯಲು ಮತ್ತು ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಮೋಕ್ಷವನ್ನು ಸಾಧಿಸಲು ದಿವ್ಯ ಮಾರ್ಗದರ್ಶನ ನೀಡುತ್ತದೆ. ಪ್ರಯೋಜನಗಳು (Benefits): ದಾರಿದ್ರ್ಯ ನಿವಾರಣೆ: ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸುವುದರಿಂದ ಜನ್ಮ ಜನ್ಮಾಂತರಗಳ ದಾರಿದ್ರ್ಯ ಮತ್ತು ಪಾಪಭಾರದಿಂದ ಮುಕ್ತಿ ದೊರೆಯುತ್ತದೆ. ಐಶ್ವರ್ಯ ವೃದ್ಧಿ: ಅನನ್ಯ ಭಕ್ತಿಯಿಂದ ಶಿವಾರಾಧನೆ ಮಾಡುವವರಿಗೆ ಧನ, ಧಾನ್ಯ, ಸಂಪತ್ತು, ಸೌಭಾಗ್ಯ ಮತ್ತು ಸಮೃದ್ಧಿ ಲಭಿಸುತ್ತದೆ. ಸಂತಾನ ಪ್ರಾಪ್ತಿ ಮತ್ತು ಸುಖ: ಸಂತಾನವಿಲ್ಲದವರಿಗೆ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಕಲ ಇಷ್ಟಾರ್ಥ ಸಿದ್ಧಿ: ಶಿವನ ಕೃಪೆಯಿಂದ ಎಲ್ಲಾ ಇಷ್ಟಾರ್ಥಗಳು ಪೂರೈಸಲ್ಪಡುತ್ತವೆ ಮತ್ತು ಜೀವನದಲ್ಲಿ ಸಮಗ್ರ ಶ್ರೇಯಸ್ಸು ಉಂಟಾಗುತ್ತದೆ. ದೇವಾನುದೇವತೆಗಳ ಆಶೀರ್ವಾದ: ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸುವುದರಿಂದ ಸಮಸ್ತ ದೇವತೆಗಳು ಮತ್ತು ದಿಕ್ಪಾಲಕರು ಪ್ರಸನ್ನರಾಗಿ ಭಕ್ತರಿಗೆ ಆಶೀರ್ವದಿಸುತ್ತಾರೆ. ಮೊದಲ ಭಾಗದ ಲಿಂಕ್ https://www.facebook.com/share/p/1Fv3kiJ9Ah/ ▬▬▬ஜ۩۞۩ஜ▬▬▬*▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು ಸರ್ವಜನಾಃ ಸುಖಿನೋಭವತು ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್ ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🔱 ಭಕ್ತಿ ಲೋಕ - ಭಾಗ ಎರಡು ಪ್ರದೋಷ ಸ್ತೋತ್ರಾಷ್ಟಕಂ ಭಾಗ ಎರಡು ಪ್ರದೋಷ ಸ್ತೋತ್ರಾಷ್ಟಕಂ - ShareChat
#🔱 ಭಕ್ತಿ ಲೋಕ ಪ್ರದೋಷಸ್ತೋತ್ರಾಷ್ಟಕಂ ಎಂದರೇನು? ಪ್ರದೋಷಸ್ತೋತ್ರಾಷ್ಟಕಂ ಎನ್ನುವುದು ಎಂಟು ಶ್ಲೋಕಗಳನ್ನು ಒಳಗೊಂಡಿರುವ ಒಂದು ಭಕ್ತಿಗೀತೆ. ಇದು ಪ್ರದೋಷ ಕಾಲದಲ್ಲಿ ಶಿವನನ್ನು ಆರಾಧಿಸುವ ಮಹತ್ವವನ್ನು ಮತ್ತು ಆರಾಧನೆಯಿಂದ ದೊರೆಯುವ ಪ್ರಯೋಜನಗಳನ್ನು ವಿವರಿಸುತ್ತದೆ. ಇದು ಶಿವನ ಮಹಿಮೆಯನ್ನು ಕೊಂಡಾಡುತ್ತದೆ. ಪ್ರದೋಷಸ್ತೋತ್ರಾಷ್ಟಕಂ ಯಾವಾಗ ಮತ್ತು ಹೇಗೆ ಪಠಿಸಬೇಕು? ಈ ಸ್ತೋತ್ರವನ್ನು ಪ್ರದೋಷ ಕಾಲದಲ್ಲಿ, ಅಂದರೆ ಸೂರ್ಯಾಸ್ತದ ಸುಮಾರು ಒಂದೂವರೆ ಗಂಟೆ ಮೊದಲು ಮತ್ತು ಒಂದೂವರೆ ಗಂಟೆ ನಂತರದ ಸಮಯದಲ್ಲಿ ಪಠಿಸುವುದು ಅತ್ಯಂತ ಮಂಗಳಕರ. ಶಿವನ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತು ಶುದ್ಧ ಮನಸ್ಸಿನಿಂದ ಭಕ್ತಿಯಿಂದ ಪಠಿಸಬೇಕು. ಪ್ರದೋಷಸ್ತೋತ್ರಾಷ್ಟಕಂ ಪಠಿಸುವುದರಿಂದಾಗುವ ಪ್ರಯೋಜನಗಳೇನು? ಈ ಸ್ತೋತ್ರವನ್ನು ಪಠಿಸುವುದರಿಂದ ದಾರಿದ್ರ್ಯ ನಿವಾರಣೆಯಾಗುತ್ತದೆ, ಧನ, ಧಾನ್ಯ, ಸಂತಾನ ಮತ್ತು ಸೌಭಾಗ್ಯಗಳು ಲಭಿಸುತ್ತವೆ. ಅಲ್ಲದೆ, ಪಾಪಗಳಿಂದ ಮುಕ್ತಿ ದೊರೆತು, ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ. ಪ್ರದೋಷಸ್ತೋತ್ರಾಷ್ಟಕಂ ಅನ್ನು ಯಾರು ಪಠಿಸಬೇಕು? ಶಿವನ ಕೃಪೆಯನ್ನು ಬಯಸುವವರು, ಆರ್ಥಿಕ ಸಂಕಷ್ಟದಲ್ಲಿರುವವರು, ಸಂತಾನ ಭಾಗ್ಯವಿಲ್ಲದವರು, ಮತ್ತು ಜೀವನದಲ್ಲಿ ಸಮೃದ್ಧಿ ಹಾಗೂ ಶಾಂತಿಯನ್ನು ಬಯಸುವ ಯಾವುದೇ ಭಕ್ತರು ಈ ಸ್ತೋತ್ರವನ್ನು ಪಠಿಸಬಹುದು. ಇದು ಸಕಲರಿಗೂ ಮುಕ್ತಿಯ ಮಾರ್ಗವನ್ನು ತೋರುತ್ತದೆ. ಪ್ರದೋಷಸ್ತೋತ್ರಾಷ್ಟಕಂ ಅನ್ನು ಎಷ್ಟು ಬಾರಿ ಪಠಿಸಬೇಕು? ಈ ಸ್ತೋತ್ರವನ್ನು ಪ್ರತಿದಿನ ಅಥವಾ ನಿರ್ದಿಷ್ಟವಾಗಿ ಪ್ರದೋಷ ದಿನಗಳಂದು ಕನಿಷ್ಠ ಒಂದು ಬಾರಿಯಾದರೂ ಪಠಿಸಬಹುದು. ಹೆಚ್ಚು ಫಲಕ್ಕಾಗಿ, ಭಕ್ತಿಯ ಆಳವನ್ನು ಅವಲಂಬಿಸಿ, ಮೂರು, ಐದು, ಅಥವಾ ಹನ್ನೊಂದು ಬಾರಿ ಪಠಿಸಬಹುದು. ಪ್ರದೋಷಸ್ತೋತ್ರಾಷ್ಟಕಂ ನ ಮೂಲ ಯಾವುದು? ಪ್ರದೋಷಸ್ತೋತ್ರಾಷ್ಟಕಂ ಶಿವ ಪುರಾಣದಂತಹ ಪ್ರಾಚೀನ ಹಿಂದೂ ಧರ್ಮಗ್ರಂಥಗಳಿಂದ ಸ್ಫೂರ್ತಿ ಪಡೆದಿದೆ. ಇದು ಶಿವನ ಮಹಿಮೆ ಮತ್ತು ಪ್ರದೋಷ ಕಾಲದ ಮಹತ್ವವನ್ನು ವಿವರಿಸುವ ಸನಾತನ ಪರಂಪರೆಯ ಭಾಗವಾಗಿದೆ. ಮುಂದುವರೆಯುತ್ತದೆ ಇದರ ಬಗ್ಗೆ ಮಾಹಿತಿ ಸ್ತೋತ್ರ ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
🔱 ಭಕ್ತಿ ಲೋಕ - FROM AMMA TO AWARENESS THREEFOLD REVELATIONS OF SHRI LALITHA BALA TARUNI TRIPURASUNDARI Young Young | Child Teenage Girl Married Woman FROM AMMA TO AWARENESS THREEFOLD REVELATIONS OF SHRI LALITHA BALA TARUNI TRIPURASUNDARI Young Young | Child Teenage Girl Married Woman - ShareChat
#🔱 ಭಕ್ತಿ ಲೋಕ #ಲಲಿತಾ ಸಹಸ್ರನಾಮ #ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ #🙏🎵ಶ್ಲೋಕಗಳು!! ಶ್ರೀ ಲಲಿತಾ ಸಹಸ್ರನಾಮ ಶ್ಲೋಕ ಮತ್ತು ಅರ್ಥ:- (41-42.) ಭವಾನೀ ಭಾವನಾಗಮ್ಯಾ, ಭವಾರಣ್ಯ ಕುಠಾರಿಕಾ | ಭದ್ರಪ್ರಿಯಾ, ಭದ್ರಮೂರ್ತಿ,ರ್ಭಕ್ತ ಸೌಭಾಗ್ಯ ದಾಯಿನೀ ||41|| ಭವಾನಿಯು ಭಾವನೆಯ ಮೂಲಕ ಹೊಂದಲ್ಪಡುವವಳು, ನಿತ್ಯ ಸಂಸಾರ ಜೀವನಕ್ಕೆ ಪ್ರಾಣವನ್ನು ಕೊಡುವವಳು, ಸಂಸಾರವೆಂಬ ಅರಣ್ಯವನ್ನು ಕತ್ತರಿಸುವವಳು, ಮಂಗಳಕರವಾದದ್ದನ್ನು ಪ್ರೀತಿಸುವವಳು, ಭವ್ಯವಾದ ಸ್ವರೂಪವುಳ್ಳವಳು, ಭಕ್ತರಿಗೆ ಸೌಭಾಗ್ಯವನ್ನು ಅನುಗ್ರಹಿಸುವವಳು. ಭಕ್ತಿಪ್ರಿಯಾ, ಭಕ್ತಿಗಮ್ಯಾ, ಭಕ್ತಿವಶ್ಯಾ ,ಭಯಾಪಹಾ | ಶಾಂಭವೀ, ಶಾರದಾರಾಧ್ಯ, ಶರ್ವಾಣೀ, ಶರ್ಮದಾಯಿನೀ||42|| ಜಗನ್ಮಾತೆಯು ಭಕ್ತಿಪ್ರಿಯಳು, ಭಕ್ತಿಯ ಮೂಲಕ ಸಾಕ್ಷಾತ್ಕರಿಸಬಹುದಾದವಳು, ಭಕ್ತಿಗೆ ವಶಳಾಗಿರುವವಳು, ಭಯವನ್ನು ನಾಶಮಾಡುವವಳು, ಶಂಭುವಿನ ಪತ್ನಿ , ಶಾರದೆಯಿಂದ ಆರಾಧಿಸಲ್ಪಡುವವಳು, ಶರ್ವನ (ಪರಮಶಿವನ ಶೃತಿ ಮೂರ್ತಿ) ಪತ್ನಿ, ಸುಖವನ್ನು ಅನುಗ್ರಹಿಸುವವಳು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ. #ashanagabhushan #ಆಶಾನಾಗಭೂಷಣ #ಲಲಿತಾಸಹಸ್ರನಾಮ
🔱 ಭಕ್ತಿ ಲೋಕ - ( [ ishn Wi _ Vishnu Arts vishnuprabhanc ( [ ishn Wi _ Vishnu Arts vishnuprabhanc - ShareChat
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏ತಿರುಪತಿ ತಿಮ್ಮಪ್ಪ #ಶ್ರೀನಿವಾಸ ಕಲ್ಯಾಣ 🌷🙏 ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :- ದ್ವಾಪರ ಯುಗದ ಕೃಷ್ಣನ ತಾಯಿ ಯಶೋದೆಗೂ, ಕಲಿಯುಗದ ಶ್ರೀನಿವಾ ಸನಿಗೂ ಎತ್ತಣಿಂದ ಎತ್ತ ಸಂಬಂಧ ಎಂದು ಯೋಚಿಸ ಹೊರಟರೆ ಇದು ಭಗವಂತನ ಸಂಕಲ್ಪ. ಕೃಷ್ಣನ ವರದಿಂದ ಕಾರಣ ಜನ್ಮಳಾದಳು ಬಕುಳಾದೇವಿ. ಕಾರ್ಯಕಾರಣಕ್ಕಾಗಿ ಭೃಗು ಮಹರ್ಷಿಯ ನಿಮಿತ್ತ ಶಾಪದಿಂದ ಮಹಾ ವಿಷ್ಣು,ತನ್ನ ಪತ್ನಿ ಮಹಾಲಕ್ಷ್ಮಿಯನ್ನು ಹುಡುಕುವ ಸಲುವಾಗಿ ತನ್ನ ದಿವ್ಯ ರೂಪ ವನ್ನು ವೈಕುಂಠದಲ್ಲಿ ಬಿಟ್ಟು ಮಾನವ ಶರೀರದಿಂದ ಶ್ರೀನಿವಾಸನಾಗಿ ಧರೆಯಲ್ಲಿ ಅವತರಿಸಿದನು. ಧರೆಗಿಳಿದ ಕಾರಣ ಮಾನವ ಸಹಜ ವಾಗಿ ಹಸಿವು ನೀರಡಿ ಕೆ ಗಳಿಂದ ಬಳಲಿ ಒಂದು ಮರದ ಕೆಳಗಿನ ಹುತ್ತದಲ್ಲಿ ಸೇರಿದನು. ತ್ರಿಲೋಕ ಸಂಚಾರಿ ಆದ ನಾರದರು, ಶ್ರೀನಿವಾಸನ ಹಸಿವು- ಬಾಯಾರಿಕೆ- ಬಳಲಿಕೆ ಗಳನ್ನು ತಿಳಿಸುವ ಸಲುವಾಗಿ ಕೊಲ್ಲಾಪುರಕ್ಕೆ ನಡೆದರು. ಪತಿಯ ಮೇಲಿನ ಕೋಪದಿಂದ ವೈಕುಂಠವನ್ನು ತೊರೆದು ಭೂಲೋಕದ ಕೊಲ್ಲಾಪುರ ದಲ್ಲಿ ನೆಲೆಯಾಗಿದ್ದ ಮಹಾಲ ಕ್ಷ್ಮಿಗೆ ಶ್ರೀನಿವಾಸ ಪಡುತ್ತಿದ್ದ ಕಷ್ಟವನ್ನು ತಿಳಿಸಿದರು ತನ್ನ ಪತಿ ಹಸಿವು ಬಳಲಿಕೆಯಿಂದ ಇರುವುದನ್ನು ತಿಳಿದು ಲಕ್ಷ್ಮಿಗೆ ಸಹಿಸಲಾಗ ಲಿಲ್ಲ. ಆಕೆಯ ಸಿಟ್ಟು ಇನ್ನೂ ಹೋಗಿರದ ಕಾರಣ ಅವಳು ಶ್ರೀನಿವಾಸ ಇದ್ದಲ್ಲಿಗೆ ಬರಲಿಲ್ಲ. ಆದರೆ, ದೇವಲೋಕದ ಬ್ರಹ್ಮ ಮತ್ತು ಶಿವನಲ್ಲಿ ಮೊರೆ ಹೋದಳು. ಆಲಿಸಿದ ಬ್ರಹ್ಮನು ಧೇನುವಾಗಿ, ಶಿವನು ಕರುವಾಗಿ ಭೂಮಿಗೆ ಬಂದು ಚೋಳರಾಜನ ಗೋ ಶಾಲೆ ಸೇರಿದರು. ಆ ನಂತರ ಗೋಶಾಲೆಯ ಹಸುಗಳ ಗುಂಪಿನಲ್ಲಿ ಸೇರಿಕೊಂಡು ಶ್ರೀನಿವಾಸನ ಆಶ್ರಯ ತಾಣವಾದ ಹುತ್ತದ ಬಳಿಗೆ ಬಂದ ಕಾಮಧೇನು ಹಾಲು ತುಂಬಿದ ಕೆಚ್ಚಲಿನಿಂದ ಶ್ರೀನಿವಾಸನ ಬಾಯಿಗೆ ಬೀಳುವಂತೆ ಹಾಲು ಸುರಿಸಿ ಹಸಿವು ತಣಿಸಿತು. ಆದರೆ ಒಂದೆರಡು ದಿನದೊಳಗೆ ಈ ವಿಷಯ ಚೋಳ ರಾಜನಿಗೆ ತಿಳಿದು ಅವನು ಗೋ ಶಾಲೆಯ ಗೋಪಾಲಕನಿಗೆ ಪರೀಕ್ಷಿಸಲು ಹೇಳಿದನು. ಗೋಪಾಲಕನು ಹುತ್ತದೊಳಗೆ ಹಾಲು ಸುರಿಸುತ್ತಿದ್ದ ಕಾಮಧೇನುವನ್ನು ಕಂಡ ಸಿಟ್ಟಿನಿಂದ ಹಸುವಿಗೆ ಹೊಡೆಯಲು ಕೈಲಿದ್ದ ಕೋಲನ್ನು ಅದರ ಕಡೆಗೆ ಗುರಿ ಯಿಟ್ಟು ಬೀಸಿ ಒಗೆದನು ಬೀಸಿ ಬಂದ ಕೋಲಿನ ಪೆಟ್ಟು ಕಾಮಧೇನು ವಿಗೆ ಬೀಳದಂತೆ ಶ್ರೀನಿವಾಸ ತನ್ನ ತಲೆಯನ್ನು ಅಡ್ಡ ಹಿಡಿದನು. ಆ ದೊಣ್ಣೆ ಯ ಪ್ರಹಾರದ ಪೆಟ್ಟು ಅವನ ಹಣೆಗೆ ಬಡಿಯಿತು. ಶ್ರೀನಿವಾಸನ ಹಣೆಗೆ ಬಲ ವಾದ ಪೆಟ್ಟು ಬಿದ್ದು ರಕ್ತ ಸುರಿಯಿತು. ನೋವಿನಿಂದ ನರಳ ತೊಡಗಿದ. ಈ ವಿಚಾರ ದೇವಲೋಕದಲ್ಲಿ ತಿಳಿದು ಚರ್ಚೆಯಾಯಿತು. ಅಲ್ಲಿದ್ದ ಗುರು ಬೃಹಸ್ಪತಿ ಗಳು ತಾವೇ ಶ್ರೀನಿವಾಸನಿಗೆ ಆರೈಕೆ ಮಾಡುವುದಾಗಿ ಹೊರಟ ಸಮಯದಲ್ಲಿ ನಾರದರು ಆಗಮಿಸಿ ಅವರೊಂದು ಸಲಹೆ ಕೊಟ್ಟರು. ಬೃಹಸ್ಪತಿಗಳೇ ನೀವು ಹೋಗಿ ಔಷಧಿ ಕೊಡಿ ಆದರೆ ಶ್ರೀನಿವಾಸನಿಗೆ ಆರೈಕೆ ಮಾಡಲು ಅಲ್ಲೊಬ್ಬ ತಾಯಿ ಕಾದಿದ್ದಾಳೆ. ಅವಳು ಶ್ರೀನಿವಾಸನ ಆರೈಕೆ ಪ್ರೀತಿಯಿಂದ ಮಾಡುತ್ತಾಳೆ ಆ ಜವಾಬ್ದಾರಿಯನ್ನು ಅವಳಿಗೆ ಬಿಡಿ ಎಂದರು. ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾಗಿ ಇದೇನು ಶ್ರೀನಿವಾಸನಿಗೆ ತಾಯಿಯೇ ಯಾರು ಆಕೆ ?ಎಂದಾಗ, ನಾರದರು ದ್ವಾಪರ ಯುಗದ ನೆನಪು ಮಾಡಿ ದರು. ಮೂರು ಸಾವಿರ ವರ್ಷಗಳ ಹಿಂದೆ ಮಥುರಾ ನಗರದಲ್ಲಿ ವಸುದೇವ ದೇವಕಿಗೆ ಹುಟ್ಟಿದ ಮಗು ಕೃಷ್ಣನನ್ನು,‌ ಕಂಸನದೃಷ್ಟಿಯಿಂದ ತಪ್ಪಿಸಲು, ವಿಷ್ಣುವಿನ ಆದೇಶದಂತೆ, ವಸುದೇವನು ಆಗ ತಾನೇ ಹುಟ್ಟಿದ ಹಸು ಗೂಸನ್ನು ಬುಟ್ಟಿಯಲ್ಲಿ ಹೊತ್ತು ತಂದು ಗೋಕುಲದ ಯಶೋಧ -ನಂದರ ಮನೆಯಲ್ಲಿ ಬಿಡುತ್ತಾನೆ. ಮುಂದೆ ಕೃಷ್ಣನು, ತಾಯಿ ಯಶೋಧೆಯ ಮುದ್ದಿನ ಆರೈಕೆಯಲ್ಲಿ ಬೆಳೆಯುತ್ತಾನೆ. ಇತ್ತ ಮಧುರಾದಲ್ಲಿ ಕೃಷ್ಣನ ಸೋದರ ಮಾವ ಕಂಸನು ಕೃಷ್ಣನನ್ನು ಸಂಹರಿಸಲು ತಂತ್ರರೂಪಿಸಿ ಕೃಷ್ಣ - ಬಲರಾಮರನ್ನು ಮಥುರಾಕ್ಕೆ ಕರೆಸುವ ಸಲುವಾಗಿ ಕುಸ್ತಿ ಕಾಳಗ ಸ್ಪರ್ಧೆ ಏರ್ಪಡಿಸಿ ಅವರಿಗೆ ಬರಲು ಆಹ್ವಾನ ಕೊಟ್ಟು ಕರೆ ತರಲು ಅಕ್ರೂರನನ್ನು ಕಳಿಸಿದನು. ಕಂಸನ ಕುತಂತ್ರವನ್ನು ಬಲ್ಲ ಕೃಷ್ಣನು ಮಧುರಾಕ್ಕೆ ಬೇಕೆಂದೆ ಹೋಗಿ ಅಲ್ಲಿ ಕಂಸನ ಸಂಹಾರ ಮಾಡಿ ಹೆತ್ತವರಾದ ವಸುದೇವ - ದೇವಕಿಯರನ್ನು ಬಂಧಮುಕ್ತ ಗೊಳಿಸಿದನು. ಆನಂತರ ಮತ್ತೆ ಅವನೆಂದೂ ಗೋಕುಲಕ್ಕೆ ಬರಲೇ ಇಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುವುದೇ ಆಯಿತು. ಎಷ್ಟೋ ವರ್ಷಗಳು ಕಳೆದ ಮೇಲೆ ಒಮ್ಮೆ ಯಶೋಧಾ ತಾಯಿ ಕೃಷ್ಣನ ಅರಮನೆಗೆ ಬಂದಾಗ ಅಷ್ಟಮಹಿಷಿಯರಲ್ಲದೆ ಅದರ ಮೇಲೆ ಮತ್ತೆ 16,000 ಕನ್ಯೆಯರನ್ನು ವಿವಾಹವಾದ ವಿಷಯ ತಿಳಿದು ಯಶೋಧ ತಾಯಿಗೆ ಬೇಸರವಾಯಿತು. ಕೃಷ್ಣನ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿ ಆ ಸಂಭ್ರಮವನ್ನು ಕಣ್ತುಂಬಿ ಕೊಳ್ಳುವ ಕನಸನ್ನು ಕಂಡಿದ್ದಳು. ಬೇಸರದಿಂದ ನೀನು ನನಗೆ ತಿಳಿಸದೆ ಮದುವೆಯಾಗಿರುವೆ ನಿನ್ನ ವಿವಾಹ ನೋಡುವ ಭಾಗ್ಯವನ್ನು ನನಗೆ ಕರುಣಿಸಲಿಲ್ಲ ಎಂದು ಕೃಷ್ಣನಿಗೆ ಹೇಳಿದಾಗ ಕೃಷ್ಣನು ಬೇಸರ ಪಡಬೇಡ ಮುಂದಿನ ಕಲಿಯುಗದಲ್ಲಿ ನಿನ್ನ ಕೈಯಾರೆ ನನ್ನ ವಿವಾಹವನ್ನು ಸಂಭ್ರಮ ದಿಂದ ಮಾಡುವೆ ಎಂದು ತಾಯಿ ವರ ಕೊಟ್ಟಿದ್ದ. ಅದರಂತೆ ಕಲಿಯುಗ ಕಾಲಿಟ್ಟಾಗ ಯಶೋದೆ ಸಪ್ತಗಿರಿಯಲ್ಲಿ ಬಕುಳಾ ದೇವಿಯಾಗಿ ಅವತರಿಸಿ ವರಾಹನದಿ ತಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬರುತ್ತಿರುವ ಆಕೆಯನ್ನು ನಾರದರು ದೇವಲೋಕದ ಸಭೆಯಲ್ಲಿದ್ದವರಿಗೆ ತೋರಿಸಿದರು. ಇತ್ತ ಪೆಟ್ಟು ತಿಂದು ರಕ್ತ ಸುರಿಯುತ್ತಿದ್ದ ಶ್ರೀನಿವಾಸ ಒಬ್ಬನೇ ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತಿದ್ದನು. ಆಗತಾನೆ ಸ್ನಾನ ಮುಗಿಸಿ ಬಂದ ಬಕುಳಾ ದೇವಿ ಆತನನ್ನು ನೋಡಿ ಯಾರಪ್ಪ ನೀನು? ಎಲ್ಲಿಂದ ಬಂದಿರುವೆ? ಏನಿ ದು ನಿನ್ನ ಗಾಯ? ಎಂದೆಲ್ಲಾ ಕೇಳಿದಾಗ ಶ್ರೀನಿವಾಸನು ಅಮ್ಮಾ ಎಂದು ಕರೆಯುತ್ತಿದ್ದಂತೆ, ಬಕುಳಾ ದೇವಿಗೆ ಅಮ್ಮಾ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದ ಹಾಗೆ ತಾಯಿಯ ಕರುಳು ಚುರುಕ್ ಎಂದಿತು. ಅಮ್ಮಾ ನನ್ನ ಹೆಸರು ಶ್ರೀನಿ ವಾಸ ಸ್ವಲ್ಪ ಪೆಟ್ಟು ಬಿದ್ದಿದೆ ಎಂದನು ತಾಯಿ ಕರುಳು ಕೇಳಬೇಕಲ್ಲವೇ? ಇದೇನು ಸಣ್ಣ ಗಾಯವೇ? ಎಷ್ಟೊಂದು ರಕ್ತ ಸುರಿಯುತ್ತಿದೆ ಎಂದು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಹಣೆಗೆ ಕಟ್ಟಲು ಹೊರಟಾಗ ಅಮ್ಮ ತಡೆಯಿರಿ ಎಂದು ಧ್ವನಿ ಕೇಳಿದಾಗ ತಿರುಗಿ ನೋಡಿದಳು, ಕೈಯಲ್ಲಿ ಔಷಧಿ ಹಿಡಿದು ಧನ್ವಂತರಿಯಂತೆ ಒಬ್ಬ ವ್ಯಕ್ತಿ ನಿಂತಿದ್ದನು. ಆತ ಬೇರೆ ಯಾರೊ ಆಗಿರದೇ ದೇವಗುರು ಬೃಹಸ್ಪತಿ. ಆ ಔಷಧಿ ಯನ್ನು ಬಕುಳಾದೇವಿ ಕಟ್ಟಲು ಹಿಡಿದಿದ್ದ ಸೀರೆಯ ತುಂಡಿನೊಳಗೆ ಹಾಕಿ ಈಗ ಇದನ್ನು ಕಟ್ಟಿ ಎಂದನು. ಬಕುಳಾದೇವಿ ಔಷಧಿ ತುಂಬಿದ ಸೆರಗಿನ ಅಂಚನ್ನು ಶ್ರೀನಿವಾಸನ ಹಣೆಗೆ ಕಟ್ಟಿ, ಬಂದ ವ್ಯಕ್ತಿಯ ಕಡೆ ತಿರುಗಿ ಸಮಯಕ್ಕೆ ಸರಿಯಾಗಿ ಬಂದಿರುವೆಯಲ್ಲ ಇದು ಯಾವ ಜನ್ಮದ ಸಂಬಂಧವೂ ನಾಕಾಣೆ ಇವನು ಅಮ್ಮ ಎಂದು ಕರೆದಾಗಲೇ ನನಗೆ ನನ್ನ ಮಗ ಎಂದು ಅನಿಸುತ್ತಿದೆ. ಹೀಗೆ ಆರೈಕೆ ಮಾಡು ತ್ತಲೇ ಶ್ರೀನಿವಾಸನಿಗೆ ಯಾರಪ್ಪ ನೀನು ಎಲ್ಲಿಂದ ಬಂದಿರುವೆ ನಿನ್ನ ತಂದೆ ತಾಯಿ ಬಂಧು ಬಳಗ ಎಲ್ಲಿರುವರು ಎಂದು ಕೇಳಿದಾಗ ಅಮ್ಮ ನನಗೆ ಯಾರು ಇಲ್ಲ ನೀನೇ ನನ್ನ ತಾಯಿ ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತಾಯಿಯ ಮಮತೆ ಉಕ್ಕಿಬಂದು ಈ ರೀತಿ ಪೆಟ್ಟು ಮಾಡಿದವರು ಯಾರು ಅಂತ ಹೇಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಳು. ಹೋಗಲಿ ಬಿಡಮ್ಮ ಕಳೆದು ಹೋದ ವಿಚಾರ ಬೇಡ ಈಗ ನನಗೆ ಹಸಿವಾಗುತ್ತಿದೆ ಅಮ್ಮ ಹೇಳು ಅಮ್ಮ ಹೇಳು ನಿನ್ನ ಮನೆ ಎಲ್ಲಿದೆ? ನೀನು ಯಾರ ಜೊತೆ ಇರುವೆ ಎಂದನು ಬಕುಳಾದೇವಿ ನನಗೂ ಯಾರು ಇಲ್ಲ ನಾನು ಒಬ್ಬಂಟಿಯಾಗಿರುವೆ ಎಂದಳು. ಶ್ರೀನಿವಾಸ ಹೇಳಿದ ಯಾರೂ ಇಲ್ಲ ಎಂದು ಏಕೆ ಹೇಳುವೆ, ಭಗವಂತ ನಿನ್ನ ಜೊತೆಗಿರುತ್ತಾನೆ. ಏಕಾಂಗಿ ಯಾಗಿ ಯಾರು ಇರುವು ದಿಲ್ಲ ಇನ್ನು ಮುಂದೆ ನಾನೇ ನಿನ್ನ ಮಗ ನೀನೇ ನನಗೆ ಅಮ್ಮ ಎಂದನು. ಈ ರೀತಿಯಾಗಿ ಅಮ್ಮ ಮಗನ ಬಾಂಧವ್ಯ ಮುಂದುವರೆಯಿತು. ತಾಯಿಯ ಆರೈಕೆಯಲ್ಲಿ ಶ್ರೀನಿವಾಸ ಚೇತರಿಸಿ ಕೊಂಡನು. ಮುಂದೆ ಆಕಾಶ ರಾಜನ ಮಗಳಾದ ಪದ್ಮಾವತಿ ಯೊಂದಿಗೆ ಮಗ ಶ್ರೀನಿವಾಸನ ಮದುವೆಯನ್ನು ಬಕುಳಾದೇವಿಯೇ ಮುಂದೆ ನಿಂತು, ಹಿಂದೆ ಅಂತ ಮದುವೆ ಯಾಗಿಲ್ಲ ಮುಂದೆ ಆಗುವುದಿಲ್ಲ ಅನ್ನುವ ಹಾಗೆ, ಶ್ರೀನಿವಾಸನು ತನ್ನ ಮದುವೆಗಾಗಿ ಕುಬೇರನ ಹತ್ತಿರ ಸಾಲ ಮಾಡಿ ಬಾರಿ ಮದುವೆಯನ್ನು ಸಂಭ್ರಮ ಸಡಗರದಿಂದ ಮಾಡಿ ಕೊಂಡನು. ಅಂತಹ ಶ್ರೀನಿವಾಸ ಪದ್ಮಾವತಿ ರ ಕಲ್ಯಾಣಕ್ಕೆ ಸಾಕ್ಷಿಯಾಗಿ ದ್ವಾಪರದ ಯಶೋದೆ ಕಲಿಯುಗದಲ್ಲಿ ಬಕುಳಾದೇವಿಯಾಗಿ ಆ ಸಂಭ್ರಮವನ್ನು ಕಣ್ತುಂಬಿ ಕೊಂಡಳು. ( ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆಯ ಬದಲಿಗೆ ಅಲ್ಲಿ ‘ವೇದವತಿ’ ಇದ್ದು, ರಾಮ ರಾವಣರ ಯುದ್ಧವೆಲ್ಲ ಮುಗಿದ ನಂತರ ರಾಮನು ವೇದವತಿಗೆ ಏನು ವರ ಬೇಕು ಎಂದು ಕೇಳಿದಾಗ ನೀನು ನನ್ನನ್ನು ವಿವಾಹ ಆಗಬೇಕು ಎಂದಳಂತೆ ರಾಮ ಆಗ ಏಕ ಪತ್ನಿ ವ್ರತಸ್ಥ ನಾದುದರಿಂದ ಮುಂದಿನ ಯುಗದಲ್ಲಿ ಶ್ರೀನಿವಾಸನಾಗಿ ಬಂದು ನಿನ್ನನ್ನು ವಿವಾಹ ಆಗಬೇಕು ಎಂದು ಮಾತು ಕೊಟ್ಟಿದ್ದನಂತೆ ಅದರಂತೆ ವೇದವತಿಯೇ ಪದ್ಮಾವತಿಯಾಗಿ ಜನಿಸಿ ರಾಮನೆ ಶ್ರೀನಿವಾಸನಾಗಿ ಅವಳ ಇಚ್ಛೆಯಂತೆ ವಿವಾಹವಾದನು. ಮುಂದೆ ಲಕ್ಷ್ಮಿಗೂ ಮತ್ತು ಪದ್ಮಾವತಿ ಸರಿ ಬರದೆ ಶ್ರೀನಿವಾಸ ತಿರುಪತಿಯಲ್ಲಿ ಕಲ್ಲಾದ ಎನ್ನುವ ಕಥೆಯು ಇದೆ.) ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ! ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ
ದಿನಕ್ಕೊಂದು ಕಥೆ - Asha Nagabhushana Sories Asha Nagabhushana Sories - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಕಟುಕನ ಬಾಯಲ್ಲಿ ಹರಿ ಶ್ರೀಮನ್ನಾರಾಯಣ :- ಗುಜರಾತ್ ರಾಜ್ಯದ ಒಂದು ಗ್ರಾಮದಲ್ಲಿ "ದಾರುಬ್ರಹ್ಮ" ಎಂಬ ವ್ಯಕ್ತಿಯು ಮಾಂಸದ ವ್ಯಾಪಾರ ಮಾಡುತ್ತಿದ್ದನು. ತುಂಬಾ ಪ್ರಾಮಾಣಿಕ ವ್ಯಕ್ತಿ. ಅವನು ಮಹಾವಿಷ್ಣುವಿನ ಪರಮ ಭಕ್ತನಾಗಿದ್ದನು. ಅವನು ಬೆಳಿಗ್ಗೆಯಿಂದ ರಾತ್ರಿ ಮಲಗುವ ತನಕ ಹಾಗೂ ಮಾಂಸದ ವ್ಯಾಪಾರ ಮಾಡುವಾಗ ಭಗವಂತನ ನಾಮಸ್ಮರಣೆ ಮಾಡುತ್ತಿದ್ದನು. ಸದಾ ಅವನ ಬಾಯಲ್ಲಿ, "ಶ್ರೀಮನ್ನಾರಾಯಣ ಹರಿ, ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ" ಎಂದು ಪುಂಖಾನುಪುಂಕವಾಗಿ ಅವನ ಬಾಯಲ್ಲಿ ಬರುತ್ತಿತ್ತು. ಇದು ಅಲ್ಲಿ ಬರುವ ಎಲ್ಲಾ ವ್ಯಾಪಾರಿಗಳಿಗೂ, ಸುತ್ತುಮುತ್ತು ಇರುವವರಿಗೂ ತಿಳಿದಿತ್ತು. ಅವರೆಲ್ಲರೂ ದಾರುಬ್ರಹ್ಮನ ಕುರಿತು ಮಾತನಾಡುತ್ತಿದ್ದರು. ಅವನು ನಾರಾಯಣನ ಪರಮಭಕ್ತ. ವ್ಯಾಪಾರ ಮಾಡುವಾಗ ಹಣ ಎಷ್ಟು ಕೊಟ್ಟರು ಎಂದು ನೋಡುವುದಿಲ್ಲ, ಮತ್ತು ಮಾಂಸದ ವ್ಯಾಪಾರ ಮಾಡುತ್ತಾನೆ. ಆದರೆ ತಾನು ತಿನ್ನುವುದಿಲ್ಲ. ಅವನ ಭಕ್ತಿಗೋ, ಒಳ್ಳೆಯತನಕ್ಕೋ, ಮುಗ್ಧತೆಗೋ, ಯಾವುದೇ ಗಿರಾಕಿಗಳು ಅವನಿಗೆ ಎಂದೂ ಮೋಸ ಮಾಡುತ್ತಿರಲಿಲ್ಲ. ಗಿರಾಕಿಗಳು ಅರ್ದ ಕಿಲೋ ಕೊಡು ಎಂದರೆ, ಈಗ್ಲೇ ಕೊಡುತ್ತೀನಿ, ಜೈ ಶ್ರೀ ಹರಿ ಎಂದು, ಅವರಿಂದ ಹಣ ತೆಗೆದುಕೊಳ್ಳುವಾಗ, ಚಿಲ್ಲರೆ ಕೊಡುವಾಗ, ಜೈ ಶ್ರೀ ಹರಿ, ಎಂದು ಹೇಳುತ್ತಿದ್ದನು. ಅಂಗಡಿಯ ಸುತ್ತಮುತ್ತಲು ಭಕ್ತಿಯ ವಾತಾವರಣ ತುಂಬಿತ್ತು. ಒಂದು ದಿನ ಅವನು ಮನೆಯಿಂದ ಅಂಗಡಿಗೆ ಬರುತ್ತಿರುವಾಗ, ದಾರಿಯಲ್ಲಿ ಒಂದು ಕಲ್ಲು ಎಡವಿದನು. ಬಗ್ಗಿ ಕಲ್ಲನ್ನು ಎತ್ತಿ ಬದಿಗೆ ಹಾಕಲು ಹೊರಟಿದ್ದನು. ಆದರೆ ಅವನ ಕಣ್ಣಿಗೆ ಕಲ್ಲು ಆಕರ್ಷಣೀಯವಾಗಿ ಕಂಡಿತು. ಖುಷಿಯಾದ ಅವನು ವಾಹ್ ಗೋಲಾಕಾರದ ಈ ಕಪ್ಪನೆಯ ಕಲ್ಲು ಎಷ್ಟು ಚೆನ್ನಾಗಿದೆ ಹಾಗೂ ದೊಡ್ಡದಾಗಿದೆ. ಅಂಗಡಿಯಲ್ಲಿ ಯಾವುದಾದರೂ ಕೆಲಸಕ್ಕೆ ಬರುತ್ತದೆ. ಎಂದು ಕೊಂಡು ಅಂಗಡಿಗೆ ತಂದನು. ಅದೇ ವೇಳೆಗೆ ವ್ಯಾಪಾರಿಯೊಬ್ಬ ಬಂದು, ಒಂದು ಕಿಲೋ ಮಟನ್ ಕೊಡಲು ಹೇಳಿದ. ದಾರುಬ್ರಹ್ಮ ತೂಗು ತಕ್ಕಡಿಯಲ್ಲಿ ತನಗೆ ಸಿಕ್ಕ ಕಲ್ಲು ಇಟ್ಟನು. ಇನ್ನೊಂದು ಬದಿ ಮಟನ್ ಹಾಕಿದ. ಅದು ಒಂದು ಕಿಲೋ ತೂಗಿತು. ಆಗ ದಾರು ಅಂದುಕೊಂಡ, ಓಹೋ ಈ ಕಲ್ಲು ಒಂದು ಕಿಲೋ ತೂಗುತ್ತದೆ ಎಂದು. ಅದಾಗಲೇ ಮತ್ತೊಬ್ಬ ಬಂದು, ಅರ್ಧ ಕಿಲೋ ಕೊಡು ಎಂದು ಕೇಳಿದ. ತೂಕದ ತಕ್ಕಡಿಗೆ ಮಟನ್ ಹಾಕಿದ, ಆ ಕಲ್ಲು ಅರ್ದ ಕಿಲೋ ತೂಕ ತೋರಿಸಿತು. ತುಂಬಾ ಆಶ್ಚರ್ಯವಾಯಿತು. ಮೊದಲೇ ಬಂದಿದ್ದ ಗಿರಾಕಿ, ಈ ಕಲ್ಲು ಜಾದು ಮಾಡುತ್ತದೆ. ಆಗ ನನಗೆ ಕೇಳಿದಾಗ 1 ಕಿಲೋ ತೋರಿಸಿತು, ಇವನು ಅರ್ಧ ಕಿಲೋ ಕೇಳಿದ ಅದು ಈಗ ಅರ್ಧ ಕಿಲೋ ತೂಕ ತೋರಿಸುತ್ತಿದೆ. ತಕ್ಷಣ ದಾರುಬ್ರಹ್ಮ 5 ಕೆಜಿ ಮಟನ್ ಹಾಕಿದ. ಕಲ್ಲು ಸಹ 5 ಕೆಜಿ ತೂಕ ತೋರಿಸಿತು. ಇದಂತೂ ತುಂಬಾ ಆಶ್ಚರ್ಯವಾದ ವಿಚಾರ. ಒಬ್ಬರಿಂದ ಒಬ್ಬರಿಗೆ ಹೋಗಿ ಊರೆಲ್ಲ ಹರಡಿ ಎಲ್ಲರೂ ಈ ವಿಚಿತ್ರವನ್ನು ನೋಡಲು ಬಂದರು, ಮತ್ತು ಬರುತ್ತಲೇ ಇದ್ದರು. ಅಂಗಡಿಯ ಸುತ್ತಮುತ್ತ ಜಾತ್ರೆಯಂತೆ ಜನ ಸೇರುತ್ತಿದ್ದರು. ದಾರುಬ್ರಹ್ಮ ಕಲ್ಲನ್ನು ನೋಡಿ, ಇದು ನಿಜವಾಗಿ ಜಾದು ಕಲ್ಲು, ರಸ್ತೆಯಲ್ಲಿ ಬಿದ್ದಿತ್ತು ನನಗೆ ಸಿಕ್ಕಿತು. ಈ ಕಲ್ಲು ಬಂದ ಮೇಲೆ ನನಗೆ ವ್ಯಾಪಾರ ಹೆಚ್ಚಳವಾಗಿದೆ. ಶ್ರೀಮನ್ನಾರಾಯಣ ತಂದೆ ಎಲ್ಲಾ ನಿನ್ನ ಕರುಣೆ ಎಂದನು. ಕೆಲವು ಜನರು ಕಲ್ಲಿನ ಚಮತ್ಕಾರಿ ವಿಚಾರವನ್ನು ಹಳ್ಳಿಯಲ್ಲಿದ್ದ ದೇವಸ್ಥಾನದ ಮುಖ್ಯ ಪುರೋಹಿತರಿಗೆ ತಿಳಿಸಿದರು. ದೇವಸ್ಥಾನದಲ್ಲಿದ್ದ ಅರ್ಚಕರಿಗೆ ಆ ಕಲ್ಲನ್ನು ನೋಡಬೇಕೆಂದು ಕುತೂಹಲವಾಯಿತು. ಅವನ ಅಂಗಡಿಗೆ ಬಂದು, ಅಂಗಡಿಯಿಂದ ದೂರದಲ್ಲಿ ನಿಂತು ನೋಡಿದರು. ಅವನು ಹರಿಭಜನೆ ಮಾಡುತ್ತಾ, ಮಾಂಸ ಕತ್ತರಿಸುವುದನ್ನು, ತೂಕ ಮಾಡಿ ಮಾರುವುದನ್ನು, ಎಲ್ಲಾ ನೋಡಿದರು. ಅವನು ಕಲ್ಲನ್ನು ತೆಗೆಯದೆ. ಎಷ್ಟು ಬೇಕು ಎಂದು ಹಾಕಿದರೆ ಆ ಕಲ್ಲು ಅಷ್ಟೇ ತೂಗುತ್ತಿತ್ತು. ಈ ಚಮತ್ಕಾರವನ್ನು ನೋಡಿದ ದೇವಾಲಯದ ಅರ್ಚಕರಿಗೆ ಮೈ ರೋಮಾಂಚನವಾಯಿತು. ಭಾವುಕರಾದ ಅವರು, ಕಸಾಯಿ ದಾರುಬ್ರಹ್ಮ ನ ಅಂಗಡಿ ಸಮೀಪ ಬಂದರು. ತನ್ನ ಕೆಲಸದಲ್ಲಿಯೇ ನಿರತನಾಗಿದ್ದ ದಾರುಬ್ರಹ್ಮ ಪಕ್ಕನೆ ತಿರುಗಿ ದೇವಸ್ಥಾನದ ಮುಖ್ಯಸ್ಥರನ್ನು ನೋಡಿ ಆಶ್ಚರ್ಯವಾಯಿತು. ಓಡಿಬಂದು, ಬ್ರಾಹ್ಮಣ ದೇವ, ಕಸಾಯಿ ಅಂಗಡಿಯಲ್ಲಿ, ನೀವು? ಗಾಬರಿಯಿಂದ ನನ್ನಿಂದ ಏನಾಗಬೇಕು? ಏನಾದರೂ ತಪ್ಪಾಯಿತೆ ಎಂದು ಕೈಮುಗಿದು ಕೇಳಿದ. ದಾರು, ನಿನ್ನ ಅಂಗಡಿಯಲ್ಲಿ ಒಂದು ಚಮತ್ಕಾರಿ ಕಲ್ಲು ಇದೆ ಎಂದು ಜನ ಹೇಳಿದರು. ಅದನ್ನು ನೋಡಲು ಬಂದಿದ್ದೆ, ದೂರದಿಂದಲೇ ನಿಂತು ನಾನು ನೋಡಿದೆ ಅದು ಸಾಧಾರಣ ಕಲ್ಲಲ್ಲ. ಭಗವಾನ್ ವಿಷ್ಣುವಿನ ಅಂಶವಾದ ಸಾಲಿಗ್ರಾಮ. ಅಂತಹ ಪವಿತ್ರವಾದ ಮಹಾವಿಷ್ಣುವಿನ ವಾಸವಿರುವ ಸಾಲಿಗ್ರಾಮವನ್ನು ಇಂಥ ಮಲಿನ ಜಾಗದಲ್ಲಿ ಇಟ್ಟುಕೊಳ್ಳಬಾರದು ಮಹಾಪಾಪ ಎಂದರು. ಅರ್ಚಕರು ಹೇಳಿದುದನ್ನು ಕೇಳಿದ ದಾರುಬ್ರಹ್ಮ ನು ಸ್ವಾಮಿ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿಲ್ಲದೆ ಭಗವಾನ್ ಮಹಾವಿಷ್ಣುವಿನ ಸಾಲಿಗ್ರಾಮವನ್ನು ನನ್ನ ಕಸಾಯಿಖಾನೆ ಅಂಗಡಿಯಲ್ಲಿ ಇಟ್ಟುಕೊಂಡು ಘೋರ ಅಪರಾಧ ಎಸಗಿದ್ದೇನೆ. ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ನನ್ನನ್ನು ಕ್ಷಮಿಸು ತಂದೆ ಎಂದು ಬಹಳ ನೊಂದುಕೊಂಡು, ಬ್ರಾಹ್ಮಣ ದೇವ, ನೀವು ಮಂದಿರದಲ್ಲಿ ಭಗವಂತನ ಪೂಜೆ ಮಾಡುವವರು. ಈ ವಿಷ್ಣುವಿನ ಕಲ್ಲನ್ನು ನೀವೇ ತೆಗೆದುಕೊಂಡು ಹೋಗಿ, ಪೂಜೆ ಮಾಡಿ ನನ್ನನ್ನು ಅನುಗ್ರಹಿಸಿ ಎಂದು ಕೈಮುಗಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆಗ ಅರ್ಚಕರು, ದಾರುಬ್ರಹ್ಮ ನಿನ್ನದೇನೂ ತಪ್ಪಿಲ್ಲ . ನಿನಗೆ ಸಾಲಿಗ್ರಾಮ ಎಂದು ತಿಳಿಯದು. ಅದಕ್ಕೆ ಹಾಗಾಗಿದೆ ಇನ್ನು ಮುಂದೆ, ಭಗವಾನ್ ಮಹಾವಿಷ್ಣು ವಾಸವಿರುವ ಸಾಲಿಗ್ರಾಮವನ್ನು ಮಂದಿರದಲ್ಲಿಟ್ಟು ಅಭಿಷೇಕ, ಪೂಜೆ, ಅರ್ಚನೆ ನೈವೇದ್ಯ , ಮಂಗಳಾರತಿ ಮಾಡುವೆ. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಿನಗೂ ಒಳ್ಳೆಯದಾಗುತ್ತದೆ ಎಂದರು. ದಾರು ಭಕ್ತಿಯಿಂದ ಸಾಲಿಗ್ರಾಮವನ್ನು ಅರ್ಚಕರಿಗೆ ಕೊಟ್ಟನು. ಅವರು ಅದನ್ನು ಶ್ರದ್ಧಾಭಕ್ತಿಂದ ತೆಗೆದುಕೊಂಡು ಹೋಗಿ ಗರ್ಭಗುಡಿಯಲ್ಲಿಟ್ಟು ಭಕ್ತಿ ಹಾಗೂ ಸಂತೋಷದಿಂದ ಪೂಜೆ ಅರ್ಚನೆ ಮಾಡುತ್ತಾ ಬಂದರು. ಕೆಲವು ದಿನಗಳೇ ಕಳೆಯಿತು. ಒಂದು ರಾತ್ರಿ ಅರ್ಚಕರಿಗೆ ಕನಸು ಬಿತ್ತು. ಅರ್ಚಕರು ಶೇಷಶಾಯಿಯಾದ ಮಹಾವಿಷ್ಣುವಿನ ಮುಂದೆ ನಿಂತಿದ್ದರು. ಹೇ ಬ್ರಾಹ್ಮಣೋತ್ತಮ , ಕಸಾಯಿಖಾನೆಯವನು ಕೊಟ್ಟ ಸಾಲಿಗ್ರಾಮವನ್ನು ನೀನು ಚೆನ್ನಾಗಿ ಪೂಜೆ ಅರ್ಚನೆ ಮಾಡುತ್ತಿರುವೆ ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ ನನಗೆ ಕಸಾಯಿಖಾನೆಯ ದಾರು ಬ್ರಹ್ಮನ ಮುಗ್ಧ ಭಕ್ತಿ, ನಿತ್ಯ ವೂ ನನ್ನನ್ನು ವರ್ಣನೆ ಮಾಡಿ ಆನಂದಿಸುವುದು, ದಿನದ ಪ್ರತಿ ಕ್ಷಣವೂ ನನ್ನ ನಾಮಸ್ಮರಣೆ ಮಾಡುವುದು, ಅವನ ಅನಂತವಾದ ಭಕ್ತಿ ಶ್ರದ್ಧೆ ಪ್ರೀತಿ ಇವು ನನಗೆ ಬಹಳ ಇಷ್ಟ. ಆದುದರಿಂದ ಕಸಾಯಿಖಾನೆಯವನಿಗೆ ಸಾಲಿಗ್ರಾಮವನ್ನು ಕೊಡು ಎಂದನು. ಬ್ರಾಹ್ಮಣನು ಹೆದರಿ, ಹೇ ಮಹಾವಿಷ್ಣು ನಾನು ಮಾಡುವ ಪೂಜೆಯಲ್ಲಿ ಲೋಪ ವಾಯಿತೇ, ನನಗೆ ತಿಳಿದ ಮಟ್ಟಿಗೆ ನಾನು ಶ್ರದ್ಧೆಯಿಂದ ಮಾಡಿದೆ ಹೇ ಭಗವಂತ ನನ್ನನ್ನು ಕ್ಷಮಿಸು ತಂದೆ ಎನ್ನುತ ಕೈ ಮುಗಿದು ಅಳುತ್ತಾ ಭಗವಂತನ ಪಾದಕಮಲಗಳನ್ನು ಕಣ್ಣೀರಿನಿಂದ ತೋಯಿಸಿದನು. ಪರಮಾತ್ಮನು ಬ್ರಾಹ್ಮಣನನ್ನು ಮೇಲೆತ್ತಿ, ಬ್ರಾಹ್ಮಣೋತ್ತಮ ನಿನ್ನ ಪೂಜೆ ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ, ಕಸಾಯಿಖಾನೆಯ ದಾರುಬ್ರಹ್ಮ ಮಾಡುವ ನಾಮಸ್ಮರಣೆ ನನಗೆ ಕೇಳುವುದು ತುಂಬಾ ಇಷ್ಟ. ಆದ್ದರಿಂದ ಸಾಲಿಗ್ರಾಮ ಅವನಿಗೆ ಕೊಡು ಎಂದನು. ಬ್ರಾಹ್ಮಣನಿಗೆ ಎಚ್ಚರವಾಯಿತು. ತಕ್ಷಣ ಸಾಲಿಗ್ರಾಮವನ್ನು ತೆಗೆದುಕೊಂಡು ಕಸಾಯಿಖಾನೆಯವನ ಅಂಗಡಿಗೆ ಹೋಗಿ, ದಾರುಬ್ರಹ್ಮ, ಭಗವಾನ್ ಮಹಾವಿಷ್ಣುವಿಗೆ ನೀನು ಅಂತರಾಳದಿಂದ ಮಾಡುವ ನಾಮಸ್ಮರಣೆಯೇ ಅವನಿಗೆ ಬೇಕಂತೆ, ಅವನು ನಿನ್ನ ಬಾಯಿಂದ ಬರುವ ನಾಮಸ್ಮರಣೆ ಹಿತವಂತೆ. ಎಂತೆಂಥ ತಪಸ್ಸು ಮಾಡಿದ ಋಷಿಮುನಿಗಳಿಗೆ ಅಲಭ್ಯವಾಗಿರುವ ಶ್ರೀಮನ್ನಾರಾಯಣನಿಗೆ ನಿನ್ನ ಅಂತರಂಗದ ಭಕ್ತಿಯೇ ಇಷ್ಟ. ಆದುದರಿಂದ ಸಾಲಿಗ್ರಾಮವನ್ನು ನೀನೇ ಅಂಗಡಿಯಲ್ಲಿ ಇಟ್ಟುಕೋ ಎಂದು ಕೊಟ್ಟನು. ದಾರುಬ್ರಹ್ಮ ಸಾಲಿಗ್ರಾಮವನ್ನು ತೆಗೆದುಕೊಂಡು ಆನಂದಭಾಷ್ಪ ಸುರಿಸುತ್ತಾ ಎದೆಗೊತ್ತಿಕೊಂಡು ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಎಂದು ಮೈಮರೆತನು. ಮತ್ತೆ ದಾರು ಬ್ರಹ್ಮಮಾಡುವ ಭಗವಂತನ ನಾಮಸ್ಮರಣೆಯ ತರಂಗಗಳು ಅಲೆ ಅಲೆ ಯಾಗಿ ಎಲ್ಲೆಡೆ ವ್ಯಾಪಿಸಿತು. ನಾರಾಯಣ ನಾರಾಯಣ ಜಯ ಗೋವಿಂದ ಹರೇ ನಾರಾಯಣ ನಾರಾಯಣ ಜಯ ಗೋವಿಂದ ಹರೇ ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ ಘನನೀರದಸಂಕಾಶ ಕೃತಕಲಿ ಕಲ್ಮಶ ನಾಶನ ನಾರಾಯಣ ಯಮುನಾ ತೀರ ವಿಹಾರ ! ಧೃತ ಕೌಸ್ತುಭ ಮಣಿಹಾರ ನಾರಾಯಣ ಪಿತಾಂಬರ ಪರಿಧಾನ ಸುರ ಕಲ್ಯಾಣ ವಿಧಾನ ನಾರಾಯಣ! ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಭಜಮನ ಶ್ರೀಮನ್ನಾರಾಯಣ ಭಜಮನ ಶ್ರೀಮನ್ನಾರಾಯಣಾಅಅಅ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
🔱 ಭಕ್ತಿ ಲೋಕ - AshaYagabhushana Stories AshaYagabhushana Stories - ShareChat
#🙏ತಿರುಪತಿ ತಿಮ್ಮಪ್ಪ #🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ‘ಮಣ್ಣಿನ’ ಹೂವುಗಳಿಗೆ ಸುಗಂಧ ಕೊಟ್ಟ ಭಗವಂತ:- ತಿರುಪತಿಯ ತಿಮ್ಮಪ್ಪ ಕೋಟ್ಯಾಂತರ ಕೋಟಿ ಆಸ್ತಿಗಳ ಒಡೆಯ. ಭಕ್ತರ ಭಕ್ತ ಆದರೆ ವೆಂಕಟೇಶನಿಗೆ ಮಣ್ಣಿನ ಹೂವುಗಳು, ಒಡೆದ ಮಡಿಕೆಯ ಮೊಸರನ್ನ ಬಹಳ ಪ್ರಿಯವಾದದ್ದು. ತಿರುಮಲ ದೇವಸ್ಥಾನ ಕಟ್ಟಿಸಿದ್ದು ಪದ್ಮಾವತಿ ತಂದೆ ಆಕಾಶ ರಾಜನ ಸಹೋದರ ತೋಂಡಮಾನ ಚಕ್ರವರ್ತಿ. ಪದ್ಮಾವತಿ ಶ್ರೀನಿವಾಸನ ಪತ್ನಿ. ಇವರೆಲ್ಲ ಶ್ರೀನಿವಾಸನ ಬಂಧುಗಳು. ತೋಂಡ ಮಾನ ವೆಂಕಟೇಶನ ಮಹಾಭಕ್ತ. ಎಂತಹ ಭಕ್ತ ಎಂದರೆ, ಸ್ವತಃ ಶ್ರೀನಿವಾಸ ‌ಒಂದು ಯುದ್ಧದಲ್ಲಿ ಚಕ್ರವರ್ತಿಗೆ ಸಹಾಯ ಮಾಡಿ ನೀನು ಮಾಡುವ ಯುದ್ಧದಲ್ಲಿ ನಿನಗೆ ವಿಜಯಮಾಲೆ ಒಲಿಯಲಿ ಎಂದು ತನ್ನ ಶಂಕ- ಚಕ್ರಗಳನ್ನೇ ಕೊಟ್ಟ ಸ್ವಾಮಿ. ಇದನ್ನು ತಿಳಿದ ಮತ್ತೊಬ್ಬ ಮಹಾನ್ ಭಕ್ತ ಹೊಸ ಶಂಕ- ಚಕ್ರಗಳನ್ನು ಮಾಡಿಸಿ ಶ್ರೀನಿವಾಸನಿಗೆ ಅರ್ಪಿಸಿದನು. ತೋಂಡಮಾನ್ ಚಕ್ರವರ್ತಿ ವೆಂಕಟೇಶ್ವರನ ಅರ್ಚನೆಗಾಗಿ ಪ್ರತಿದಿನ ಬಂಗಾರದ ಪುಷ್ಪಗಳನ್ನು ಮಾಡಿಸುತ್ತಿದ್ದನು. ಒಂದು ದಿನ ಅರ್ಚನೆ ಮಾಡಲು ಬಂದು ಗರ್ಭಗುಡಿಯ ಬಾಗಿಲು ತೆಗೆದು ಸ್ವಾಮಿಯ ಪಾದದ ಕೆಳಗೆ ನೋಡಿದರೆ ಬಂಗಾರದ ಹೂಗಳ ಬದಲಾಗಿ ಮಣ್ಣಿನಿಂದ ಮಾಡಿದ ಹೂವುಗಳ ಗುಡ್ಡೆ ಇತ್ತು. ಇದು ಎಲ್ಲಿಂದ ಬಂದಿತು ಎಂದು ಹೂವನ್ನು ಕೈಯಲ್ಲಿ ಹಿಡಿದು ನೋಡಿದರೆ ಅವು ಸುಗಂಧ ಭರಿತ ಪರಿಮಳ ತುಂಬಿದ ಮಣ್ಣಿನ ಹೂವುಗಳಾಗಿತ್ತು. ಆಶ್ಚರ್ಯಪಟ್ಟು, ಈ ಕುರಿತು ಸ್ವಾಮಿಯನ್ನೇ ಕೇಳುವೆ ಎಂದು, ಶ್ರೀನಿವಾಸನ ಬಳಿಬಂದು ಸ್ವಾಮಿ ಇಷ್ಟು ದಿನಗಳು ನಾನು ನಿಮ್ಮ ಪಾದಕ್ಕೆ ಅರ್ಚನೆ ಮಾಡಿದ ಬಂಗಾರದ ಹೂಗಳು ಇಲ್ಲಿ ಇರುತ್ತಿತ್ತು. ಆದರೆ ಇಂದು ಮಣ್ಣಿಂದ ಮಾಡಿದ ಹೂಗಳು ನಿಮ್ಮ ಪಾದದ ಮೇಲಿದೆ, ಅಲ್ಲದೆ ಗಿಡದಲ್ಲಿ ಬಿಡುವ ಹೂವಿಗೆ ಇರುವ ಸುವಾಸನೆಯಂತೆ ಮಣ್ಣಿನ ಹೂಗಳಿಗೂ ಸುಗಂಧ ಇದೆ ಇದು ಹೇಗೆ? ಕೇಳಿದ. ಆದರೆ ಸ್ವಾಮಿಯದು ಮುಗುಳ್ನ ಗುವೇ ಉತ್ತರವಾಗಿತ್ತು. ಇನ್ನೊಂದು ದಿನ ಹೇಳಬಹುದು ಎಂದು ಮತ್ತೆ ಒಂದಷ್ಟು ಕಾದು ನೋಡುತ್ತಿದ್ದರೆ, ತೊಂಡಮಾನ ಚಕ್ರವರ್ತಿ ಬಂಗಾರದ ಹೂವಿನ ಅರ್ಚನೆ ಮಾಡಿ ಹೋಗಿ ಮರು ದಿನ ಬೆಳಿಗ್ಗೆ ಬಂದು ನೋಡಿದಾಗ ಸ್ವಾಮಿಯ ಪಾದದ ಮೇಲೆ ಮಣ್ಣಿನ ಹೂಗಳು ಇರುತ್ತಿತ್ತು. ಬಂಗಾರದ ಹೂವುಗಳು ನಿರ್ಮಾಲ್ಯದಲ್ಲಿ ಸೇರಿತ್ತು. ಚಕ್ರವರ್ತಿಗೆ ಆಶ್ಚರ್ಯವಾಗಿ ಈ ಸುಗಂಧದ ಹೂವು ಎಲ್ಲಿಂದ ಬರುತ್ತಿದೆ. ಯಾರು ಕೊಡುತ್ತಿದ್ದಾರೆ ಎಂದು ಯೋಚಿಸಿ ಪುನಃ ಶ್ರೀನಿವಾಸನಲ್ಲಿ ಕೈಮುಗಿದು ಸ್ವಾಮಿ ನನ್ನಿಂದಲೇ ಏನೋ ಲೋಪ ವಾಗಿದೆ ನಾನು ಮಾಡಿದ ಬಂಗಾರದ ಪುಷ್ಪಗಳ ಅರ್ಚನೆಗಳು ನಿರ್ಮಾಲ್ಯ ಸೇರಿದೆ. ಮಣ್ಣಿನ ಹೂಗಳು ನಿನ್ನ ಪಾದದ ಮೇಲೆ ಇರಲು ಬಲವಾದ ಕಾರಣ ಇರಬೇಕು, ದಯವಿಟ್ಟು ತಿಳಿಸು ಸ್ವಾಮಿ , ನನ್ನಿಂದ ಆದ ಅಪರಾಧವೇನು? ತಪ್ಪನ್ನು ಮನ್ನಿಸು ಎಂದು ಕೇಳಿದ. ಆಗ ಶ್ರೀನಿವಾಸ ಹೇಳಿದ ತೊಂಡಮಾನ್ ನಿನಗೆ ಬಂಗಾರದ ಹೂಗಳನ್ನು ಮಾಡಿಸಿ ಅರ್ಚನೆ ಮಾಡುವ ಶಕ್ತಿ ನಿನ್ನಂಥ ಚಕ್ರವರ್ತಿಗೆ ಮಾತ್ರ ಸಾಧ್ಯ ಎಂಬ ಗರ್ವ ನಿನ್ನ ಮನದಲ್ಲಿತ್ತು. ಅದಕ್ಕಾಗಿ ಈ ಘಟನೆ ನಡೆದಿದೆ. ನಿಜವಾದ ಭಕ್ತಿ ಎಂದರೆ ಏನು ಎಂದು ತಿಳಿಯಬೇಕಾದರೆ ಕುಂಬಾರ ಬಾಲಯ್ಯ (ಪೊಟಯ್ಯ) ಎಂಬುವನು ನಿಜವಾದ ಭಕ್ತ ಅವನು ತಾನೆ ತಯಾರಿಸಿದ ಮಣ್ಣಿನ ಹೂಗಳನ್ನು ತಂದು ಅರ್ಪಿಸುತ್ತಾನೆ. ನೀನು ಹೋಗಿ ಅವನಿಂದ ತಿಳಿದುಕೋ ಎಂದನು. ಚಕ್ರವರ್ತಿಗೆ ಶ್ರೀನಿವಾಸನ ಮಾತು ಮನಸ್ಸಿಗೆ ನಾಟಿತು. ನನ್ನ ಭಕ್ತಿಯಲ್ಲಿ ದೋಷ ನನಗೆ ಕಾಣದಂತೆ ಬಂದುಬಿಟ್ಟಿದೆ. ಕುಂಬಾರ ಬಾಲಯ್ಯ ನನ್ನು ಹುಡುಕಿ ತಿಳಿಯ ಬೇಕು ಎಂದು ಸಾಧಾರಣ ಮನುಷ್ಯನಂತೆ ರಸ್ತೆಯಲ್ಲಿ ನಡೆದೆ ಹೊರಟನು. ಕುಂಬಾರನ ಮನೆ ಬಹಳ ದೂರವಿತ್ತು ನಡೆದು ನಡೆದು ಸುಸ್ತಾಗಿ ಕುಂಬಾರ ಬಾಲಯ್ಯನ ಮನೆ ಮುಂದೆಯೇ ತೊಂಡಮಾನ ಚಕ್ರವರ್ತಿ ಆಯಾಸದಿಂದ ತಲೆ ಸುತ್ತಿಬಂದು ಬಿದ್ದು ಬಿಟ್ಟನು. ಕುಂಬಾರ ಬಾಲಯ್ಯ ಚಕ್ರವರ್ತಿಯನ್ನು ಎಬ್ಬಿಸಿ ಶೈತ್ಯೋಪಚಾರ ಮಾಡಿ ಉಪಚರಿಸಿದಾಗ ಅವರ ಆಯಾಸ ಕಡಿಮೆಯಾಯಿತು ಆಗ ಅಲ್ಲಿಗೆ ಸಾಕ್ಷಾತ್ ಶ್ರೀನಿವಾಸನೆ ಬಂದು ನಿಂತು ಕುಂಂಬಾರ ಬಾಲಯ್ಯನಿಗೆ ಹಾಗೂ ತೊಂಡಮಾನ ಚಕ್ರವರ್ತಿಗೆ ದರ್ಶನ ಕೊಟ್ಟನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.ತೊಂಡಮಾನನಿಗೆ ಹೇಳುತ್ತಾ ಇವನೇ ನನ್ನ ನಿಜವಾದ ಭಕ್ತ ಕುಂಬಾರ ಬಾಲಯ್ಯ. ಭಕ್ತಿಯಿಂದ ಮಣ್ಣಿನ ಹೂವುಗಳನ್ನು ಮಾಡಿ ಅರ್ಪಿಸುತ್ತಾನೆ. ಇವನ ಭಕ್ತಿಗೆ ನಾನು ಸೋತು ಹೋದೆ. ಅದರಿಂದಲೇ ಆ ಭಕ್ತಿಯ ಹೂಗಳು ನನ್ನ ಪಾದದ ಬುಡದಲ್ಲಿ ಇರುತ್ತಿತ್ತು ನೀನು ಕೊಟ್ಟ ಬಂಗಾರದ ಹೂವು ನಿರ್ಮಾಲ್ಯದ ಜೊತೆ ಹೋಗುತ್ತಿತ್ತು. ಎಂದು ಭಗವಂತ ನುಡಿದನು. ಕುಂಬಾರ ಬಾಲಯ್ಯನಿಗೆ ಇವೆಲ್ಲವೂ ಕನಸಿನಂತೆ ಕಂಡಿತು. ಸಾಕ್ಷಾತ ಶ್ರೀನಿವಾಸನೆ ದರ್ಶನ ಕೊಟ್ಟಿದ್ದಾನೆ ಅಂದಮೇಲೆ ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಅವನಿಗೆ ಏನು ಮಾಡಬೇಕು, ತನ್ನ ಮನೆಗೆ ಸಾಕ್ಷಾತ್ ಭಗವಂತನೇ ಬಂದಿದ್ದಾನೆ ಅತಿಥಿ ಸತ್ಕಾರದಲ್ಲಿ ನಾನು ಏನು ಅವನಿಗೆ ಕೊಡಲಿ ಎಂದು ತಿಳಿಯಲಿಲ್ಲವಂತೆ ತಕ್ಷಣವೇ ಅಲ್ಲೇ ಮೂಲೆಯಲ್ಲಿದ್ದ ಒಡೆದ ಮಣ್ಣಿನ ಕುಡಿಕೆಯನ್ನೇ ತೊಳೆದು ಅನ್ನಕ್ಕೆ ಮೊಸರು ಹಾಕಿ ಕಲಸಿ ಅದನ್ನೇ ಒಡೆದ ಮಣ್ಣಿನ ಕುಡಿಕೆಗೆ ಹಾಕಿ ತಂದು ಭಗವಂತನಿಗೆ ಅರ್ಪಿಸಿದ. ಶ್ರೀನಿವಾಸ ಆ ಮೊಸರನ್ನ ಹಾಕಿದ್ದ ಒಡೆದ ಮಡಿಕೆಯಲ್ಲೇ ಕೈಹಾಕಿ ಮೊಸರನ್ನದ ತುತ್ತನ್ನು ಸಂತೋಷವಾಗಿ ತಿಂದು ತೃಪ್ತಿಯಾಗಿ ತೇಗಿದನಂತೆ. ಅಂದಿ ನಿಂದ ಶ್ರೀನಿವಾಸನಿಗೆ ಮೊದಲ ಹಾಗೂ ಮುಂಜಾನೆಯ ನೈವೇದ್ಯ ಮಾಡುವುದು ಕುಂಬಾರ ಬಾಲಯ್ಯ ಕೊಟ್ಟ ಮಡಿಕೆಯಂತೆ. ಅಂದರೆ ಒಡೆದ ಮಡಿಕೆಯಲ್ಲಿ ಮೊಸರನ್ನದ ನೈವೇದ್ಯ ಅರ್ಪಿಸುತ್ತಾರಂತೆ. ತೊಂಡಮಾನ ಚಕ್ರವರ್ತಿಗೆ ಕುಂಬಾರನ ಭಕ್ತಿಯ ಅರಿವಾಯಿತು. ಇನ್ನು ಮುಂದೆ ಪ್ರತಿನಿತ್ಯವೂ ಶ್ರೀನಿವಾಸನಿಗೆ ಮುಂಜಾನೆಯ ಮೊದಲ ನೈವೇದ್ಯ ಒಡೆದ ಮಡಿಕೆ ಯಲ್ಲಿ ಹಾಕಿದ ಮೊಸರನ್ನ ನೈವೇದ್ಯ ಮಾಡಿ ಭಕ್ತರಿಗೂ ಅದನ್ನೇ ಪ್ರಸಾದ ಕೊಡು ವುದು ಎಂಬ ಶಾಸನವನ್ನು ಜಾರಿಗೆ ತಂದನಂತೆ.( ಪುರಿ ಜಗನ್ನಾಥನ ಭಕ್ತಳಾದ ಕರ್ಮಭಾಯಿ, ಹೆಸರುಬೇಳೆ- ಅಕ್ಕಿ -ಬೆಲ್ಲ- ತುಪ್ಪ ಹಾಕಿ ಮಾಡಿದ ಕಿಚಡಿ ತಿನ್ನಲು ಬೆಳಗಿನ ಜಾವವೇ ಭಗವಂತ ಕರ್ಮಭಾಯಿ ಮನೆಗೆ ಬರುತ್ತಿದ್ದ. ಆಕೆಯ ಮರಣದ ನಂತರ ಜಗನ್ನಾಥನ ಅಭಿಷೇಕದ ಮೊದಲ ನೈವೇದ್ಯ ಸಿಹಿಯಾದ ಕಿಚಡಿ ಆಗಲಿ ಎಂಬ ಜಗನ್ನಾಥನ ಇಚ್ಛೆಯಂತೆ ರಾಜನು ಅದೇ ಪದ್ಧತಿಯನ್ನು ರೂಢಿಗೆ ತಂದನು.) ಇಂದಿಗೂ ತಿರುಪತಿಯಲ್ಲಿ ನಿತ್ಯವೂ ಶ್ರೀನಿವಾಸನಿಗೆ ಮೊದಲ ನೈವೇದ್ಯ ಒಡೆದ ಮಡಿಕೆ ಯಲ್ಲಿ ಮೊಸರನ್ನ ಮಾಡುವ ಪದ್ಧತಿ ನಡೆಯುತ್ತಿದೆ. ಕುಂಬಾರನ ಭಕ್ತಿ ಎಂದೆಂದಿಗೂ ಅಚ್ಚಳಿಯದೆ ಉಳಿಯಬೇಕು ಎನ್ನುವುದೇ ತೊಂಡಮಾನ ಚಕ್ರ ವರ್ತಿಯ ಆಶಯವಾಗಿ ಅದನ್ನು ಶಾಸನವನ್ನಾಗಿ ಮಾಡಿದ. ತೋಂಡಮಾನ ತಾನು ಚಕ್ರವರ್ತಿ ಎಂಬ ಭಾವದಲ್ಲಿ, ಭಕ್ತಿ ಮತ್ತು ಪ್ರೀತಿಯಿಂದ ಅಮೂಲ್ಯವಾದ ಸ್ವರ್ಣ ಹೂಗಳ ಹಾರವನ್ನು ಅರ್ಪಿಸಿದಾಗ ಸುಮ್ಮನಿದ್ದ ಶ್ರೀನಿವಾಸ, ಬಡ ಕುಂಬಾರ ಮಣ್ಣಿನಿಂದ ಮಾಡಿದ ಹೂಗಳನ್ನು ಅರ್ಪಿಸಿದಾಗ ಅದನ್ನು ಸ್ವೀಕರಿಸಿ ಮಣ್ಣಿನ ಹೂವುಗಳಿಗೆ ಸುಗಂಧವನ್ನು ಕೊಟ್ಟು, ತೋಂಡಮಾನ ಭಗವಂತನ ನಿಷ್ಠಾವಂತ ಭಕ್ತನಾದರೂ ತಾನು ದೊಡ್ಡ ಚಕ್ರವರ್ತಿ ಚಿನ್ನದ ಹೂವು ಗಳನ್ನು ಭಗವಂತನಿಗೆ ಕೊಡುವ ಶಕ್ತಿ ತನಗೆ ಮಾತ್ರ ಇದೆ ಎಂಬ ಸಣ್ಣ ಅಹಂಕಾರದ ಒಂದು ಎಳೆ ಗೊತ್ತಿದ್ದು ಗೊತ್ತಿಲ್ಲದಂತೆ ನುಸುಳಿತ್ತು. ಆದರೆ ಭಗವಂತನಿಗೆ ಬೇಕಾದ್ದು ಕುಂಬಾರನಲ್ಲಿದ್ದ ಪ್ರೀತಿ, ಭಕ್ತಿ, ಶ್ರಮ ಮತ್ತು ನಿಷ್ಠೆ. ಇದಕ್ಕಾಗಿ ಭಗವಂತ ಅವನಿಗೆ ಸ್ಪಂದಿಸಿದ. ತೋಂಡಮಾನನ ಭಕ್ತಿಯೊಳಗೆ ಆತ್ಮ ಗರ್ವವು ಇರುವುದನ್ನು ಅವನಿಗೆ ತಿಳಿಸ ಲೆಂದೇ ಕುಂಬಾರನ ಮನೆಯಲ್ಲಿ ಪ್ರತ್ಯಕ್ಷನಾದ ಭಗವಂತ, ಪ್ರೀತಿ ಮತ್ತು ಭಕ್ತಿಯಿಂದ ಒಡೆದ ಮಡಿಕೆಯಲ್ಲಿ ಕುಂಬಾರ ತಂದುಕೊಟ್ಟ ಮೊಸರನ್ನವನ್ನು ‌ಭೂರಿ ಭೋಜನ ದಂತೆ ಸವಿದನು. ಆಡಂಬರದ ಚಿನ್ನಕ್ಕಿಂತಲೂ ಭಕ್ತಿಯ ಪರಿಮ ಳವೆ ಹೆಚ್ಚು ಎಂಬುದನ್ನು ತೋಂಡಮಾದ ಚಕ್ರವರ್ತಿಗೆ ಭಗವಂತ ಈ ಮೂಲಕ ತೋರಿಸಿಕೊಟ್ಟನು. ವೆಂಕಟೇಶೋ ವಾಸುದೇವ: ಪ್ರದ್ಯುಮ್ನೋ ಅಮಿತ ವಿಕ್ರಮ: ಸಂಕರ್ಷಣೋ ಅನಿರುದ್ಧಶ್ಚ ಶೇಷಾದ್ರಿ ಪತಿರೇವ ಚ!! ಜನಾರ್ಧನ: ಪದ್ಮನಾಭೋ ವೆಂಕಟಾಚಲ ವಾಸನ: ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತ ವತ್ಸಲ: ಗೋವಿಂದೋ ಗೋಪತಿ: ಕೃಷ್ಣ: ಕೇಶವೋ ಗರುಡಧ್ವಜ: ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜ: ಕಲ್ಯಾಣಾಧ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ| ಶ್ರೀ ಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಂ|| ವೆಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ| ವೆಂಕಟೇಶ ಸಮೋದೇವೋ ನ ಭೂತೋ ನ ಭವಿಷ್ಯತಿ| ಏತೇನ ಸತ್ಯ ವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಂ!! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
🙏ತಿರುಪತಿ ತಿಮ್ಮಪ್ಪ - शgablushana Asha शgablushana Asha - ShareChat
#🔱 ಭಕ್ತಿ ಲೋಕ #🙏🎵ಶ್ಲೋಕಗಳು!! #ಲಲಿತಾ ಸಹಸ್ರನಾಮ #ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ ಶ್ರೀ ಲಲಿತಾ ಸಹಸ್ರನಾಮ ಶ್ಲೋಕ ಮತ್ತು ಅರ್ಥ:- 43-44 ಶಾಂಕರೀ ಶ್ರೀಕರೀ ಸಾಧ್ವೀ ಶರಚ್ಚಂದ್ರನಿಭಾನನಾ | ಶಾತೋದರೀ, ಶಾಂತಿಮತೀ ನಿರಾಧಾರಾ ನಿರಂಜನಾ ||43|| ಜಗಧೀಶ್ವರಿಯು ಶಂಕರನ ಪತ್ನಿ , ಸಂಪತ್ತು, ಸಂತೋಷವನ್ನು ಉಂಟುಮಾಡುವವಳು ಪತಿವ್ರತೆ, ಶರಶ್ಚಂದ್ರನಂತೆ ಮುಖವುಳ್ಳವಳು, ತೆಳುವಾದ ನಡುವನುಳ್ಳವಳು, ಶಾಂತ ಸ್ವಭಾವದವಳು, ಆಧಾರರಹಿತಳು, ಅಂಜನವಿಲ್ಲದವಳು. ನಿರ್ಲೇಪಾ, ನಿರ್ಮಲಾ, ನಿತ್ಯಾ ನಿರಾಕಾರಾ, ನಿರಾಕುಲಾ | ನಿರ್ಗುಣಾ, ನಿಷ್ಕಲಾ, ಶಾಂತಾ, ನಿಷ್ಕಾಮಾ, ನಿರುಪಪ್ಲವಾ ||44|| ಸರ್ವಮಂಗಳೆಯು, ಲೇಪವಿಲ್ಲದವಳು (ಕರ್ಮ ಸಂಬಂಧ) ನಿತ್ಯ ಶುದ್ಧಳು ನಿತ್ಯಳು, ಆಕಾರವಿಲ್ಲದವಳು ಆಕುಲತೆಯಿಲ್ಲದವಳು ನಿರ್ಗುಣಳು, ಕಲಾ ಶೂನ್ಯಳು, ಸೌಮ್ಯ ಸ್ವಭಾವದವಳು, ಕಾಮನೆಯಿಲ್ಲದವಳು, ನಾಶವಿಲ್ಲದವಳು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ. #ashanagabhushan #ಆಶಾನಾಗಭೂಷಣ #ಲಲಿತಾಸಹಸ್ರನಾಮ
🔱 ಭಕ್ತಿ ಲೋಕ - ( [ ish 6 V Vishnu Arts | @vishnuprabhanc ( [ ish 6 V Vishnu Arts | @vishnuprabhanc - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #🙏ತಿರುಪತಿ ತಿಮ್ಮಪ್ಪ ತಿಮ್ಮಪ್ಪನ ಮಹಿಮೆ ಮತ್ತು ಸ್ವಾದಿಷ್ಟ 'ಲಡ್ಡು' ಪ್ರಸಾದ:- ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಪ್ರಸಾದ ಸವಿಯಲೇಬೇಕು ಎಂಬ ಹಂಬಲ ಎಲ್ಲರ ಮನಸ್ಸಿನಲ್ಲಿ ಬೇರೂರುವಷ್ಟು 'ಪ್ರಸಾದ' ಪ್ರಸಿದ್ದಿಯಾಗಿದೆ. ತಿರುಪತಿ ಪ್ರಸಾದ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ತಿಮ್ಮಪ್ಪನ ದರ್ಶನ ಮಾಡುವಷ್ಟೇ ಕಾಯಬೇಕು. ಅದಕ್ಕಾಗಿ ಮೊದಲೇ ಕೌಂಟರ್ನಲ್ಲಿ ಹಣ ಕೊಟ್ಟು ಟಿಕೆಟ್ ಪಡೆದಿರಬೇಕು. ಒಬ್ಬರಿಗೆ ಒಂದೇ ಟಿಕೆಟ್, ಸರದಿಯಲ್ಲಿ ನಿಂತು ಗಂಟೆ ಗಟ್ಟಲೆ ಕಾಯಬೇಕು. ಇಂಥ ಭಾರಿ ಜನಜಂಗುಳಿಯ ನಿತ್ಯ ಜಾತ್ರೆಯಂತಿರುವ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಲಾಡು ಪ್ರಸಾದ ತೆಗೆದುಕೊಂಡು ಬರುವುದು ಎಂದರೆ, ವೈಕುಂಠಕ್ಕೆ ಹೋಗಿ ವಿಷ್ಣುವಿನ ದರ್ಶನ ಮಾಡಿ ಬಂದ ಪ್ಟೇ ಸಂಭ್ರಮ ಸಡಗರ ಮುಖದಲ್ಲಿ ತುಂಬಿ ತುಳುಕಾಡುತ್ತದೆ. ಇಂತಿಪ್ಪ ಶ್ರೀನಿವಾಸನ ಹೆಸರು ಕೇಳಿದರೆ ಮನಸ್ಸು ನಾಗಾಲೋಟ ದಲ್ಲಿ ತಿರುಪತಿಗೆ ಓಡುತ್ತದೆ. ತಿಮ್ಮಪ್ಪನ ಲಡ್ಡು ಪ್ರಸಾದ ಬಾಯಲ್ಲಿ ನೀರೂರುತ್ತದೆ. ಸರ್ವಾಲಂಕಾರ ಬೂಷಿತನಾದ ಸ್ವಾಮಿ ಶ್ರೀನಿವಾ ಸನ ದರ್ಶನ ಮಾಡಲು ಪುಣ್ಯ ಮಾಡಿರಬೇಕು. ಹಗಲು- ರಾತ್ರಿ ಕೆಲಮ್ಮೊಮ್ಮೆ ಒಂದು ದಿನ ಎರಡು ದಿನವು ಆಗುತ್ತದೆ. ಲಡ್ಡು ಪ್ರಸಾದವಂತು ಆಹಾ ಅದೆಂಥ ಸ್ವಾದಿಷ್ಟ ಬೇರೆ ಕಡೆ ಎಷ್ಟೇ ಹಣ ಕೊಟ್ಟರೂ ಇಂಥ ಪ್ರಸಾದ ಸಿಗುವುದಿಲ್ಲ. ಭೂ ವೈಕುಂಠ ತಿರುಪತಿಗೆ ಹೋಗುವುದೇ ದೊಡ್ಡ ಸಂಭ್ರಮ. ದಿನವೊಂದಕ್ಕೆ ಒಂದು- ಒಂದುವರೆ ಲಕ್ಷದಷ್ಟು ಲಾಡು ಪ್ರಸಾದ ವಿತರಣೆ ಯಾಗುತ್ತದೆ. ಈ ಲಾಡು -ಲಡ್ಡು, ತಯಾರಿಕೆಗೆ ಒಂದಷ್ಟು ಹಿನ್ನೆಲೆ ಇದೆ. ಸುಮಾರು 300 ವರ್ಷಗಳ ಹಿಂದೆ ಶ್ರೀನಿವಾಸನಿಗೆ ಪ್ರಸಾದಕ್ಕೆ ಪಾಯಸ, ಪೊಂಗಲ್ಲು ಅಂಬಡೆ, ಅವಲಕ್ಕಿ, ಪಂಚಕಜ್ಜಾಯ, ಈ ರೀತಿ ಪ್ರಸಾದ ಮಾಡಿ ನೈವೇದ್ಯ ಮಾಡಿ ಭಕ್ತರಿಗೆ ಕೊಡುತ್ತಿದ್ದರು. ಒಂದು ಸಂದರ್ಭದಲ್ಲಿ ತಿರುಪತಿ ದೇವಸ್ಥಾನದ ತಿಮ್ಮಪ್ಪನ ಪೂಜೆ ಮಾಡಲು ಪುರೋಹಿತರು ಸಿಗುವುದು ಕಷ್ಟವಾಯಿತು. ಅದರಲ್ಲೂ ಮಾಧ್ವ ಬ್ರಾಹ್ಮಣರೇ ಬೇಕು ಎಂಬ ಕಂಡೀಶನ್. ಇದಕ್ಕಾಗಿ ದೇವಳದ ಆಡಳಿತ ಮಂಡಳಿ, ಒಂದು ರಿಯಾಯಿತಿ ಪ್ರಕಾರ, ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಸ್ವಲ್ಪ ಪಾಲು ಅರ್ಚಕರಿಗೆ ಕೊಡುವುದಾಗಿ ಅಧಿಕಾರಿ ವರ್ಗ ಠರಾವು ಹೊರಡಿ ಸಿತು. ಅಲ್ಲಿಂದ ಮುಂದೆ ಪ್ರಸಾದ ಮಾಡುವ ಜವಾಬ್ದಾರಿಯನ್ನು ತಿರುಪತಿ ದೇವಸ್ಥಾನದ ಅರ್ಚಕರು ಪಡೆದರು. ಆ ಸಮಯದಲ್ಲಿ ತಮಿಳುನಾಡಿನಿಂದ 'ಕಲ್ಯಾಣಂ ಅಯ್ಯಂಗಾರ್' ಎಂಬ ಅರ್ಚಕ ರು ಬಂದರು. ಅವರ ನೇತೃತ್ವದಲ್ಲಿ ಈಗ ಮಾಡುತ್ತಿರುವ ' ಲಡ್ಡು' ಪ್ರಸಾದ ಮಾಡುವ ರೂಢಿ ಸಂಪ್ರದಾಯದಂತೆ ಬೆಳೆದು ಬಂದಿತು. ಇದಕ್ಕಾಗಿ ಪೋಟೋ ಎಂಬ ಅಡುಗೆಮನೆ ತಯಾರಿಸಲಾಯಿತು. ಪೋಟೋ ಎಂದರೆ 'ಮಹಾಲಕ್ಷ್ಮಿಯ' ಅಂಶದ ದೇವತೆಯೇ ಆಗಿದ್ದಾಳೆ. ಮೊದಮೊದಲು ಪ್ರಸಾದಕ್ಕೆ ಮೆತ್ತಗಿರುವ ಬೂಂದಿ ಮಾಡುತ್ತಿದ್ದರು. ಇದು ಲಾಡು ಕಾಳಿನಷ್ಟು ಗಟ್ಟಿ ಇರುವುದಿಲ್ಲ. ಎರಡು ಮೂರು ದಿನದ ಮೇಲೆ ಬರುವುದಿಲ್ಲ. ತಿಮ್ಮಪ್ಪನ ದರ್ಶನಕ್ಕೆ ಬಂದ ಪ್ರಯಾಣಿಕರು ದೂರದ ಊರುಗಳಿಗೆ ಒಯ್ಯಲು ಬರುತ್ತಿರಲಿಲ್ಲ. ಆಗ ಯೋಚಿಸಿ ಕಲ್ಯಾಣಂ ಅಯ್ಯಂ ಗಾರ್ ಅವರ ನೇತೃತ್ವದಲ್ಲಿ, ಮಿರಾಸೆ ದಾರ್ ಎಂಬ ತಂಡ ರಚಿಸಿದರು. ಈ ತಂಡಕ್ಕೆ “ಗೇಮ್ಕರ್ ಮಿರಾಸೆದಾರ್” ಎಂದು ಹೆಸರಿಸಲಾಯಿತು. ಈ ತಂಡದವರು ಲಘುವಾದ ಹಾಗೂ ಸಮೃದ್ಧಭರಿತ ವಾದ ಗಟ್ಟಿ ಇರುವ ಲಾಡು ಉಂಡೆಯನ್ನು ಮಾಡಿದರು. ಇದು 15 ದಿನಗಳು ಇಟ್ಟರೂ ಕೆಡುವುದಿಲ್ಲ. ಈ ತಂಡದವರು ಬಹಳ ವರ್ಷಗಳ ಕಾಲ ಲಾಡು ಮಾಡಿದರು. ಆದರೆ ಈ ಲಾಡುಗಳಲ್ಲಿ ಸ್ವಲ್ಪ ಭಾಗವನ್ನು ಮಿರಾಸೆ ಬ್ರಾಹ್ಮಣ ಕುಟುಂಬಕ್ಕೆ ಕೊಡಬೇಕಾಗಿತ್ತು. ಆನಂತರ ಆಂಧ್ರಪ್ರದೇಶದ ಸರ್ಕಾರ ಈ ವ್ಯವಸ್ಥೆಯನ್ನು ರದ್ದುಗೊಳಿಸಿ, ಪ್ರತ್ಯೇಕ ವ್ಯವಸ್ಥೆ ಮಾಡಿತು. ತದನಂತರ ಬಂದ ಈ ವ್ಯವಸ್ಥೆಯಲ್ಲಿ ಮಾಡುವ 'ಲಡ್ಡು' ಅದೇ ಸ್ವಾದಿಷ್ಟದಿಂದ ಕೂಡಿದ್ದು, ಇದರ ಪ್ರಖ್ಯಾತಿ ಉತ್ತುಂಗಕ್ಕೇರಿ ಬಂದ ಯಾತ್ರಿಗಳು ಲಾಡು ಮನೆಗಳಿಗೆ ಮಾತ್ರ ತೆಗೆದುಕೊಂಡು ಹೋಗುವುದಲ್ಲದೆ. ನೆರೆಹೊರೆಯವರಿಗೆ ಪ್ರಸಾದ ಕೊಡಲು ಕೊಂಡೊಯ್ಯುತ್ತಿದ್ದರು. ಇಂದು ದೇಶ ವಿದೇಶಗಳ ತನಕವೂ ತಿರುಪತಿ ಲಡ್ಡು ಪ್ರಸಾದ ಹಂಚಿಕೆಯಾಗುತ್ತಿದೆ. ದೇವಸ್ಥಾನದ ಲಡ್ಡು ಪ್ರಸಾದದ ಆದಾಯ 2000, 100( ಈಗ ಜಾಸ್ತಿ) ಕೋಟಿಗಿಂತಲೂ ಹೆಚ್ಚಿದೆ. ತಿರುಪತಿ ಪ್ರಸಾದ ಲಡ್ಡು ತಯಾರಿಸಲು, ದಿನ ಒಂದಕ್ಕೆ ಸಾವಿರ ಕೆಜಿ ಗಟ್ಟಲಳೆ, ಕಡಲೆ ಹಿಟ್ಟು, ಸಕ್ಕರೆ, ಕಲ್ಲು ಸಕ್ಕರೆ, ತುಪ್ಪ ,ಏಲಕ್ಕಿ ,ಒಣ ದ್ರಾಕ್ಷಿ ಹಾಗೂ ಸ್ವಲ್ಪ ಬಾದಾಮಿ, ಗೋಡಂಬಿ, ಇವುಗಳನ್ನು ಹದವಾಗಿ ಬೆರೆಸಿ ಸ್ವಾದಿಷ್ಟವಾದ ಲಕ್ಷಾಂತರ ಲಡ್ಡುಗಳನ್ನು ನಿತ್ಯವೂ ತಯಾರಿಸುತ್ತಾರೆ. ಅದು ತಯಾರಾಗಿ ಕೌಂಟರ್ ಗಳಲ್ಲಿ ಇಡುವುದನ್ನು ನೋಡಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಎಲ್ಲವೂ ಖಾಲಿಯಾಗಿರುತ್ತದೆ. ಬಂದ ಭಕ್ತರಿಗೆ ಪ್ರಸಾದವೆಂದು ಒಂದೊಂದು ಲಾಡುವನ್ನು ಕೊಡುತ್ತಾರೆ. ಲಾಡುವಿನಲ್ಲಿ ಮೂರ್ನಾಲ್ಕು ಗಾತ್ರಗಳನ್ನು ಮಾಡಲಾಗಿದೆ. ದೇವಸ್ಥಾನದ ವತಿಯಿಂದ ಭಕ್ತರಿಗೆ ಕೊಡುವ ಲಾಡು ಮದುವೆ ಮನೆ ಲಾಡು ಸೈಜ್, ಬ್ರಹ್ಮೋತ್ಸವಕ್ಕೆ ಎಂದು ಮಾಡುವ ಲಾಡು ಸ್ವಲ್ಪ ದೊಡ್ಡದು ಒಂದಕ್ಕೆ 50 ರೂಪಾಯಿ ಇರಬಹುದು ಈಗ. ಇನ್ನೂ ವಿಶೇಷ ದಿನಗಳಲ್ಲಿ ದೊಡ್ಡ ಗಾತ್ರದ ಅಂದರೆ ಕಡಲೆಹಿಟ್ಟಿಗೆ ಬರೋಬ್ಬರಿ ದ್ರಾಕ್ಷಿ, ಗೋಡಂಬಿ, ಬಾದಾಮಿ, ತುಪ್ಪ, ಹಾಕಿ ಮಾಡಿದಂತಹ ಲಾಡು ಸಾಮಾನ್ಯ ಲಾಡುಉಂಡೆಯ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಬೆಲೆಯು ಹಾಗೆಯೇ ಇರುತ್ತದೆ. ಬ್ರಹ್ಮೋತ್ಸವ, ವೈಕುಂಠ ಏಕಾದಶಿ, ನವರಾತ್ರಿ ಹಬ್ಬ ಹರಿ ದಿನಗಳ ವಿಶೇಷ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಲಾಡು ಖರ್ಚಾಗುತ್ತದೆ. ತಿರುಪತಿಯಲ್ಲಿ ಅತೀ ಹೆಚ್ಚು ತೂಕದ ಲಾಡು ತಯಾರಿಸಿ ತಿರುಪತಿ ಪ್ರಶಂಸೆಗೆ ಪಾತ್ರರಾಗಿದೆ ಈಗಿನ 'ಲಡ್ಡು ' ಜೊತೆಗೆ ಆರಂಭದಲ್ಲಿ ತಯಾರಿಸುತ್ತಿದ್ದ ಪ್ರಸಾದ ಪೊಂಗಲ್ಲು, ಅಂಬಡೆ, ಬೂಂದಿ ಕಾಳು, ಪಾಯಸ, ಎಲ್ಲವೂ ಇರುತ್ತದೆ. ಆದರೆ ಲಾಡುಉಂಡೆ ಗಿರುವಷ್ಟು ಬೇಡಿಕೆ ಇವುಗಳಿಗೆ ಇಲ್ಲ. ತಿರುಪತಿಯಲ್ಲಿ ಬಹಳಷ್ಟು ವಿಶೇಷಗಳಿವೆ. ಅವುಗಳಲ್ಲಿ ಲಾಡು ಉಂಡೆಗೆ ಹಾಕುವ ತುಪ್ಪ ಪುಂಗನೂರು ತಳಿಯ' ಶುದ್ಧ ಆಕಳ ತುಪ್ಪವಾಗಿದೆ. ಈ ಹಸುವಿನ ಮೂಲ ಮಹಾ ವಿಷ್ಣು, ಶ್ರೀನಿವಾಸನಾಗಿ ಭೂಲೋಕಕ್ಕೆ ಬಂದು ಹುತ್ತದಲ್ಲಿ 10,000 ವರ್ಷಗಳ ಕಾಲ ಇದ್ದನು. ಆಗ ಕಾಮಧೇನು ಸುರಭಿ ಗೋಮಾತೆ ಯಾಗಿ ಬಂದು ಹುತ್ತದಲ್ಲಿಯೇ ಭಗವಂತನಿಗೆ ಹಾಲು ಕೊಡುತ್ತಾಳೆ. ಆಗಬಂದ ಈ ಗಿಡ್ಡ ತಳಿ ಜಾತಿಯ ಹಸುವಿನ ವಂಶವೇ ಮುಂದುವರಿದ ತಳಿಯಾಗಿ ಇರುವುದೇ ಪುಂಗನೂರು ಹಸುಗಳು ಎಂದು ನಂಬಲಾಗಿದೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಈ ಹಾಲು ಎಮ್ಮೆಯ ಹಾಲಿನಷ್ಟೇ ಗಟ್ಟಿ ಇರುತ್ತದೆ ಹಾಗೂ ಔಷಧಿ ಗುಣವನ್ನು ಹೊಂದಿದೆ. ತುಂಬಾ ಪೌಷ್ಟಿಕಾಂಶದ ಈ ಹಾಲಿನಿಂದ ಮಾಡಿದ ತುಪ್ಪವನ್ನು ಲಡ್ಡು ಪ್ರಸಾದಕ್ಕೆ ಹಾಕುತ್ತಾರೆ. ವೆಂಕಟೇಶನಿಗೆ ಅಭಿಷೇಕ, ನೈವೇದ್ಯ, ಸಿಹಿ ಪದಾರ್ಥ ತಯಾರಿಸಲು, ಹಾಗೂ ಭೋಗಾ ವೆಂಕಟೇಶ ಸ್ವಾಮಿಗೆ ರಾತ್ರಿ ಕುಡಿಯಲು ಶಯನ ಗೃಹದಲ್ಲಿ ಇದೇ ಹಸುವಿನ ಹಾಲು ಇಡುತ್ತಾರೆ. ಬೆಳಗ್ಗೆ ವೆಂಕಟೇಶನನ್ನು ಎಬ್ಬಿಸಲು ಸುಪ್ರಭಾತ ಹಾಡಿ, ಅವನಿಗೆ ಮುಖ ತೋಳೆಸಿ, ಬಂಗಾರದ ಉತ್ತರಣೆ ಕಡ್ಡಿಯಿಂದ ಹಲ್ಲುಜ್ಜುತ್ತಾರೆ. ನಂತರ ಅವನ ಕೈಯಿ ಬಾಯಿ ಒರೆಸಿ, ಬೆಳಗಿನ ಉಪಹಾರಕ್ಕೆ ಪುಂಗನೂರು ಹಸುವಿನ ಹಾಲಿನಿಂದ ಮಾಡಿದ ತಿನಿಸುಗಳನ್ನೇ ಕೊಡುತ್ತಾರೆ. ಒಟ್ಟಾರೆ ಪೊಂಗನೂರು ಹಸುವಿನ ಹಾಲು ಎಲ್ಲವೂ ವೆಂಕಟೇಶನ ಪೂಜೆ ನೈವೇದ್ಯಗಳಿಗೆ ಸದ್ವಿನಿಯೋಗವಾಗುತ್ತದೆ. ಇನ್ನು ವೆಂಕಟೇಶನ ಹೂವಿನ ಅಲಂಕಾರದ ವಿಷಯ, ಶ್ರೀನಿವಾಸನ ಪೂಜೆಗೆ ಬೇಕಾದ ಹೂವುಗಳನ್ನು, ಬಹಳ ಹಿಂದೆಯೇ 'ರಂಗದಾಸ' ಎಂಬ ಶೂದ್ರನು ಸಂಪಿಗೆ, ಮಲ್ಲಿಗೆ, ಜಾಜಿ, ಪಾರಿಜಾತ, ತುಳಸಿ ಇಂಥ ಹೂ ಗಿಡಗಳನ್ನು ಬೆಳೆಸಿದ್ದನು. ಶ್ರೀದೇವಿ ಭೂದೇವಿ ತೋಡಿದ ಬಂಗಾರದ ಬಾವಿಯಿಂದ ನೀರನ್ನು ಹಾಕುತ್ತಿದ್ದನಂತೆ. ಈ ಹಳ್ಳಿಗೆ 'ಆವು ಪಳ್ಳಿ' ಎನ್ನುತ್ತಾರೆ. ಇಲ್ಲಿ ಬೆಳೆಯುವ ಹೂವುಗಳೆಲ್ಲ ತಿಮ್ಮಪ್ಪನಿಗೆ ಸಲ್ಲುತ್ತದೆ. ತಿಮ್ಮಪ್ಪನಿಗೆ ಅಲಂಕಾರ ಮಾಡಿದ ಹೂವುಗಳನ್ನು, ಭಕ್ತರಿಗೆ ಪ್ರಸಾದ ರೂಪವಾಗಿ ಯಾರಿಗೂ ಕೊಡುವುದಿಲ್ಲ. ಏಕೆಂದರೆ ಶ್ರೀನಿವಾಸನ ಪ್ರಸಾದಕ್ಕೆ ಮಹಾಲಕ್ಷ್ಮಿ ಮಾತ್ರ ಯೋಗ್ಯಳು ಎಂಬ ಪ್ರತೀತಿ. ಹೊರಗೆ ಹೂ ಮಾರುವರಿಂದ ಕೊಂಡುಕೊಂಡ ಹೂ ಗಳನ್ನು ಅಲ್ಲಿ ಮುಡಿಯುವುದಿಲ್ಲ. ಇದೇ ರೀತಿ, ಇನ್ನೊಂದು ಕೇಳಿದ ಸಂಗತಿ ತಿರುಪತಿ ಯಾತ್ರೆಗೆ ಹೋಗುವವರು, ಏನಾದರೂ ಪಕ್ಕನೇ ಖರ್ಚಿಗಾಗುತ್ತ ದೆಂದು ಲೆಕ್ಕಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋದವರಿಗೆ, ಉಳಿದ ಹಣ ತರಲು ಆಗುವುದಿಲ್ಲವಂತೆ ತಿರುಪತಿಗೆ ಹೋದ ಹಣ ತಿಮ್ಮಪ್ಪನ ಹುಂಡಿಗೆ ಸೇರುತ್ತದೆ ಎಂಬುದು ಎಲ್ಲರ ಅಂಬೋಣ. ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದ ದುಡ್ಡನ್ನು ಶ್ರೀನಿವಾಸ ತೆಗೆದು ತನ್ನ ಪಕ್ಕದಲ್ಲಿ ಇಟ್ಟುಕೊಳ್ಳುತ್ತಾನಂತೆ ಏಕೆಂದರೆ, ಶ್ರೀನಿವಾಸನು ಆಕಾಶ ರಾಜನ ಪುತ್ರಿ ಪದ್ಮಾವತಿಯನ್ನು ಮದುವೆ ಮಾಡಿಕೊಳ್ಳುವಾಗ, ಅದ್ದೂರಿ ಯಾಗಿ ಖರ್ಚು ಮಾಡಲು ಅವನಲ್ಲಿ ಹಣವಿರಲಿಲ್ಲ ಆಗ ಕುಬೇರನ ಹತ್ತಿರ ಬಡ್ಡಿಗೆ ಸಾಲ ತೆಗೆದುಕೊಂಡು, ಹತ್ತು ದಿನಗಳ ಕಾಲ ವೈಭವೋಪೇತವಾಗಿ ಮದುವೆ ಮಾಡಿಕೊಂಡನಂತೆ. ಆ ಸಾಲದ ಹಣಕ್ಕೆ ಈಗ ಕೊಡುವುದೆಲ್ಲ ಬರೀ ಬಡ್ಡಿಗೆ ಸರಿಯಾಗುತ್ತಿದೆಯಂತೆ. ಆದ್ದರಿಂದ, ಭಕ್ತರು ಭಕ್ತಿಯಿಂದ ಹಾಕುವ ಕಾಣಿಕೆ ಹಾಗೂ ದುಡ್ಡು ಹೆಚ್ಚಾದವರು ಪಾಪಪ್ರಜ್ಞೆಗಾಗಿ ತಂದು ಹಾಕುವ ಕಾಣಿಕೆ, ಅಲ್ಲದೆ ಕೋಟಿ ಗಟ್ಟಲೆ ಲಾಭ ಮಾಡಿಕೊಂಡವರು ತಿಮ್ಮಪ್ಪನಲ್ಲಿ ಅಪರಾಧಕ್ಕೆ ಕ್ಷಮೆ ಕೇಳಿ, ಮೊಸಳೆ ಕಣ್ಣೀರು ಹಾಕಿ, ಬಂದ ಭಾರಿ ಲಾಭದಲ್ಲಿ ಅಲ್ಪಸ್ವಲ್ಪವನ್ನು ಹುಂಡಿಗೆ ಹಾಕಿ ತಿಮ್ಮಪ್ಪ ನಿಗೆ ನಾಮ ಹಾಕಲು ಬಂದವರಿಗೆ ತಿಮ್ಮಪ್ಪ ಹೇಳುತ್ತಾನಂತೆ. ನೀನು ನನಗೆ ನಾಮ ಹಾಕುವೆ ಎಂದು ಕೊಂಡರೆ, ನಾನೇ ಮೂರು ನಾಮ ಹಾಕಿಕೊಂಡು ಕುಳಿತಿರುವೆ. ಬಿಟ್ಟೀ ಬಂದ ಎಷ್ಟೇ ಹಣ ತಂದುಕೊಟ್ಟರೂ ಅದೆಲ್ಲ ಬಡ್ಡಿಗೆ ಹೋಗುತ್ತದೆ ಎನ್ನುತ್ತಾ ಕಾಣಿಕೆ ಹಾಕಿದ ಹಣವನ್ನೆಲ್ಲ ತೆಗೆದು ತೆಗೆದು ಕುಬೇರನಿಗೆ ಬಡ್ಡಿ ಕೊಡುತ್ತಿದ್ದಾನಂತೆ. ಹೇಳಿದ ಕಥೆ ಕೇಳಿದ ಕಥೆಗಳು ಅದೇನೇ ಇರಲಿ, ವೈಕುಂಠದಿಂದ ಭಗವಂತ ಧರೆಗಿಳಿದು ಬಂದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತೇ ನೆಂದು ಅಭಯ ಹಸ್ತವನ್ನು ಚಾಚಿ, ಜಾತಿ, ವರ್ಣ,ವರ್ಗ ಶ್ರೀಮಂತ, ಬಡವ ಯಾವುದನ್ನು ನೋಡದೆ ಕೇವಲ ಭಕ್ತರ ಮೊರೆ ಯನ್ನು ಆಲಿಸಿ ಅವರ ಕಷ್ಟಕೊಟಲೆಗಳನ್ನು ಪರಿಹರಿ ಸಲೆಂದೇ ಬೆಟ್ಟದ ಮೇಲೆ, ಶ್ರೀದೇವಿ ಭೂದೇವಿ ಸಹಿತ ನೆಲೆಸಿರುವ ಪರಮಾತ್ಮನು ಭೂಮಿಗೆ ಬಂದು ಕೆಲ ಕಾಲದ ನಂತರ, ಹೊರಟು ನಿಂತನು. ಆಗ ಬ್ರಹ್ಮನು, ಭೂಲೋಕಕ್ಕೆ ಬಂದ ವೆಂಕಟೇಶನನ್ನು ವೈಕುಂಠಕ್ಕೆ ಬರದಂತೆ ಇಲ್ಲೇ ಇರು ಎಂದು ತಡೆದರಂತೆ, ನಾನು ಇನ್ನು ಎಷ್ಟು ಕಾಲ ಇಲ್ಲಿರಬೇಕು ಎಂದು ಕೇಳಿದಾಗ ಶ್ರೀನಿವಾಸ ಕೇಳಿದಾಗ, ಬ್ರಹ್ಮನು ನೀನು ಇಲ್ಲೇ ಯುಗಾದಿಯದವರೆಗೂ ನೆಲೆಸಿ ಜನಗಳ ಕಷ್ಟ ನೋವು ಗಳಿಗೆ ಪರಿಹಾರ ಕೊಡು, ನಾನು ಇಲ್ಲಿ ಎರಡು ದೀಪವನ್ನು ಹಚ್ಚಿಡುವೆ. , ಈ ದೀಪಗಳು ಆರುವ ತನಕ ನೀನು ಇಲ್ಲೇ ಇರಬೇಕು ಎಂದು ಹೇಳಿದನಂತೆ. ಆವಾಗಿನಿಂದಲೂ ಸ್ವಾಮಿ ತಿರುಪತಿಯಲ್ಲಿ ವಿರಾಜಮಾನನಾಗಿ, ಆಪದ್ಬಾಂಧವ, ಅನಾಥ ರಕ್ಷಕ, ವೆಂಕಟೇಶ್ವರ, ಶ್ರೀನಿವಾಸ, ತಿರುಪತಿ ತಿಮ್ಮಪ್ಪ ನೀನೇ ಕಾಪಾಡು ಭಗವಂತ ಎಂದು ನಂಬಿ ಬಂದ ಭಕ್ತರ ಕೈ ಹಿಡಿದು ದಾರಿ ತೋರಿ, ಯಾವುದೋ ರೂಪದಲ್ಲಿ ಸಲಹುತ್ತಾನೆ. 'ಸಂಕಟ ಬಂದಾಗ ವೆಂಕಟರಮಣ' ಎನ್ನುವಂತ ದೀನ ಬಂಧು, ದಯಾ ಸಿಂಧು, ಕರುಣಾ ಸಾಗರ, ನಿನ್ನನ್ನು ಎಷ್ಟು ಸ್ಮರಿಸುತ್ತಾರೋ ಅದರ ದುಪ್ಪಟ್ಟು ಕೊಟ್ಟು ಸಲಹುತ್ತಿರುವೆ. ಶ್ರೀನಿವಾಸ, ಬಂಗಾರ ಗಿರಿವಾಸ ಏಳು ಬೆಟ್ಟಗಳ ಒಡೆಯ, ಮೂಡಲಗಿರಿ ತಿಮ್ಮಪ್ಪ, ಶ್ರೀ ವೆಂಕಟೇಶ್ವರ ಸ್ವಾಮಿ ಗೋವಿಂದ, ಗೋವಿಂದ, ಗೋವಿಂದ. 🙏🙏🙏 ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕು ಕರುಣ! ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲ್ಲಿ ನಿಂದ ಕೊಳಲು ಧ್ವನಿಯೂದೋ ಚೆಂದ ನಮ್ಮ ಕುಂಡಲರಾಯ ಮುಕುಂದ! ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ ಬೇಡಿದವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ! ಬಗೆ ಬಗೆ ಭಕ್ಷ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ ಎಲ್ಲಾ ದೇವರ ಗಂಡ ಅವ ಚೆಲ್ಲರೆ ದೈವದ ಮಿಂಡ ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲು ಮುರಿದ ಪ್ರಚಂಡ! ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ! ಪಾಪ ವಿನಾಶಿನಿ ಸ್ನಾನ ಹರಿಪಾದೋದಕವೇ ಪಾನ ಕೋಪ ತಾಪಗಳ ನಿಧಾನ ನಮ್ಮ ಪುರಂದರ ವಿಠಲನ ಧ್ಯಾನ!! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ
🔱 ಭಕ್ತಿ ಲೋಕ - Magabkuhana asha stories Magabkuhana asha stories - ShareChat
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ #🙏🎵ಶ್ಲೋಕಗಳು!! ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಮತ್ತು ಅರ್ಥ:- 45-46 ನಿತ್ಯಮುಕ್ತಾ ,ನಿರ್ವಿಕಾರಾ, ನಿಷ್ಪ್ರಪಂಚಾ, ನಿರಾಶ್ರಯಾ | ನಿತ್ಯಶುದ್ಧಾ, ನಿತ್ಯಬುದ್ಧಾ, ನಿರವದ್ಯಾ, ನಿರಂತರಾ ||45|| ಶ್ರೀಮಾತೆಯು ನಿತ್ಯವೂ ಮುಕ್ತ ಸ್ವರೂಪಳಾಗಿರುವವಳು, ವಿಕಾರರಹಿತಳು, ಪ್ರಪಂಚವನ್ನೂ ಮೀರಿದವಳು, ಆಶ್ರಯ ರಹಿತಳು, ನಿತ್ಯವೂ ಶುದ್ಧಳಾಗಿರುವವಳು, ಚಿದ್ರೂಪಳು, ಧೋಷರಹಿತಳು, ಅಂತರ -ರಹಿತಳು. ನಿಷ್ಕಾರಣಾ, ನಿಷ್ಕಲಂಕಾ, ನಿರುಪಾಧಿ, ರ್ನಿರೀಶ್ವರಾ | ನೀರಾಗಾ, ರಾಗಮಥನೀ ನಿರ್ಮದಾ, ಮದನಾಶಿನೀ ||46|| ಸರ್ವಮಂಗಳೆಯು, ಕಾರಣರಹಿತಳು, ಕಳಂಕರಹಿತಳು, ಉಪಾಧಿರಹಿತಳು, ನಿರೀಶ್ವರಿಯು, ರಾಗರಹಿತಳು, ಮದಶೂನ್ಯಳು ಮದವನ್ನು ನಾಶ ಮಾಡುವವಳು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ #ashanagabhushan #ಆಶಾನಾಗಭೂಷಣ #ಲಲಿತಾಸಹಸ್ರನಾಮ #ಲಲಿತಾ ಸಹಸ್ರನಾಮ
ದಿನಕ್ಕೊಂದು ಕಥೆ - $^$ A S-A $ $^$ A S-A $ - ShareChat
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ನಿಮಿಷದಲ್ಲಿ ಕಷ್ಟ ಕಳೆಯೋ ನಿಮಿಷಾಂಬಾ ದೇವಿ :- ಸಕ್ಕರೆ ನಾಡು ಮಂಡ್ಯ ಜಿಲ್ಲೆಯ "ರಂಗನಾಥನ" ನೆಲೆವೀಡಾದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀರಂಗಪಟ್ಟಣ. ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಯ ತಟದಲ್ಲಿರುವ 'ಗಂಜಾಂ' ಎಂಬ ಗ್ರಾಮವು ತನ್ನದೇ ಆದ ಶಕ್ತಿ, ಅಪಾರ ಮಹಿಮೆ ಹೊಂದಿರುವ 'ನಿಮಿಷಾಂಬಾ' ದೇವಿ ನೆಲೆಸಿರುವ ಪುಣ್ಯ ಪವಿತ್ರ ಕ್ಷೇತ್ರವಾಗಿದೆ. ನಿಮಿಷಾಂಬಾ ದೇವಿಯನ್ನು ಜಾಗೃತ ದೇವಿ, ಕಾರಣಿಕ ದೇವಿ, ನಿಮಿಷದಲ್ಲಿ ಕಷ್ಟ ಪರಿಹರಿಸುವ ಆದಿ ಪರಾಶಕ್ತಿ ಎಂದು ಕರೆಯುತ್ತಾರೆ. ನಿಮಿಷಾಂಬಾ ದೇವಿ, ಶಕ್ತಿದೇವಿ ಪಾರ್ವತಿಯ ಅವತಾರವಾಗಿದೆ. ಈ ಕ್ಷೇತ್ರಕ್ಕೆ ಯಾರೇ ಭಕ್ತರು ಬಂದು ದರ್ಶನ ಮಾಡಿ, ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪ್ರಾರ್ಥಿಸಿದರೆ ನಿಮಿಷ ದಲ್ಲಿಯೇ ಕಷ್ಟವನ್ನು ಪರಿಹರಿಸುವಳು ಎಂಬ ಭಕ್ತರ ನಂಬಿಕೆ ಇಂದಿಗೂ ನಿಜವಾಗಿದೆ. ಸುಂದರವಾದ ರಾಜಗೋಪುರ ಹೊಂದಿರುವ ದೇವಾಲಯದಲ್ಲಿ, ಭೂ ಪ್ರಸ್ತಾರ ಕೃಷ್ಣ ಶಿಲೆಯಲ್ಲಿ ನಿರ್ಮಾಣ ಮಾಡಿ, ಎಲ್ಲಾ ದಳಗಳ ಮೇಲೆ ಬೀಜಾಕ್ಷರಿ ಮಂತ್ರ ಸಹಿತ ಇರುವ ಶ್ರೀ ಚಕ್ರದ ಮೇಲೆ ಮಂದಸ್ಮಿತಳಾಗಿ ವಿರಾಜಮಾನಳಾಗಿರುವ 'ನಿಮಿಷಾಂಬಾ ದೇವಿ' ವಿಗ್ರಹವನ್ನು ಪ್ರತಿಷ್ಠಾ ಪಿಸಲಾಗಿದೆ. ಇಲ್ಲಿನ ದೇವಾಲಯವನ್ನು ಶಿವ ಪಂಚಾಯತನ ಕ್ರಮದಲ್ಲಿ ನಿರ್ಮಿಸಿದ್ದಾರೆ. ಶಿವ ಪಂಚಾಯತನ ಎಂದರೆ, ಹಿಂದೂ ಧರ್ಮದ ಸ್ಮಾರ್ತ ಸಂಪ್ರದಾಯದ ಈ ಪೂಜಾ ವಿಧಾನವನ್ನು, ಭಗವತ್ಪಾದ ಶ್ರೀ ಶಂಕರಾ ಚಾರ್ಯರು ಪ್ರಚುರಪಡಿಸಿರುವ ಇದು ಒಂದೇ ಸ್ಥಳದಲ್ಲಿ ಐದು ದೇವತೆಗಳ ಪೂಜೆ ಮಾಡುವ ವಿಧಾನವಾಗಿದೆ. ಮುಖ್ಯವಾದ ದೇವರುಗಳು ಗಣೇಶ, ಸೂರ್ಯ, ಅಂಬಿಕಾ ಅಥವಾ ದುರ್ಗಾ, ಶಿವ, (ಲಿಂಗ) ವಿಷ್ಣು,( ಸಾಲಿಗ್ರಾಮ) ಹೀಗೆ ಐದು ದೇವತೆಗಳ ಪೂಜೆ ಮಾಡುವುದು. ಈ ದೇವಾಲಯದ ಪ್ರವೇಶ ದ್ವಾರದೊಳಗೆ ಮೌಕ್ತಿಕೇಶ್ವರ ಸ್ವಾಮಿ, ಮತ್ತು ಲಕ್ಷ್ಮೀನಾರಾಯಣ ಸ್ವಾಮಿ ಸನ್ನಿಧಿಗಳಿವೆ. 'ನಿಮಿಷಾಂಬಾ ದೇವಿ' ಯ ಪೌರಾಣಿಕ ಹಿನ್ನೆಲೆ ಪ್ರಕಾರ, ಬಹಳ ಹಿಂದೆ ಶ್ರೀ ರಂಗಪಟ್ಟಣವನ್ನು, ಸುಮನಸ್ಕಾ ಎಂಬ ರಾಜನು ಆಳುತ್ತಿದ್ದನು. ಅವನು ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಯಾಗ ಯಜ್ಞಗಳನ್ನು ಮಾಡಿಸುತ್ತಿದ್ದನು. ಎಷ್ಟೇ ಯಾಗ ಯಜ್ಞಗಳನ್ನು ಮಾಡಿಸಿದರು, ಅಸುರರ ಹಾವಳಿ ಇದ್ದೇ ಇರುತ್ತಿತ್ತು. ಆದಕಾರಣ ಈ ಸಲ ಯೋಚಿಸಿ ಆಗ ಆರಂಭಿಸಿದ ಮೇಲೆ ಯಾವುದೇ ತೊಂದರೆ ತೊಡಕುಗಳು ಆಗಬಾರದೆಂದು ಪರಮೇಶ್ವರನ ಹೃದಯ ಭಾಗದಿಂದ ಜನಿಸಿದ ಪ್ರಭಾವಶಾಲಿ ಪರಾಕ್ರಮಿ ಶಕ್ತಿಶಾಲಿಯಾದ ಮೂತಿಕೇಶ್ವರ ಎಂಬ ಮುನಿಗೆ ಯಾಗದ ನೇತೃತ್ವವನ್ನು ವಹಿಸಿ ಮಹರ್ಷಿ ಗಳಿಂದ ದೊಡ್ಡ ಯಾಗ ಕಾರ್ಯಕ್ರಮವನ್ನು ಆರಂಭಿಸಿದನು. ಯಾಗ ಆರಂಭವಾಗಿ ಸ್ವಲ್ಪಕಾಲ ಯಾವುದೇ ಅಹಿತಕರ ಘಟನೆ ಘಟಿಸದೆ ಸರಾಗವಾಗಿ ನಡೆಯಿತು. ಆ ಸಮಯಕ್ಕೆ ಜಾನು ಮತ್ತು ಮಂಡಲ ಎಂಬ ಘೋರ ರಾಕ್ಷಸರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ ಕೊಂಡು, ವರ ಕೊಡಲು ಮುಂದಾದ ಬ್ರಹ್ಮ ದೇವರಲ್ಲಿ, ಎಲ್ಲಾ ದುಷ್ಟ ರಾಕ್ಷಸ ರಂತೆ ತಮಗೆ ನೀರಿನಿಂದಾಗಲಿ, ಭೂಮಿ- ಅಗ್ನಿ - ವಾಯು- ಜಲ- ಚರ, ಯಾವುದೇ ಆಯುಧಗಳು, ಪಶು- ಪಕ್ಷಿ -ಪ್ರಕೃತಿ, ಹೀಗೆ ಜಗತ್ತಿನಲ್ಲಿರುವ ಯಾವುದರಿಂದಲೂ ಸಹಜ ಸಾವು ತಮಗೆ ಆಗಬಾರದು ಎಂಬ ವರವನ್ನು ಪಡೆದರು. ಬ್ರಹ್ಮ ತಥಾಸ್ತು ಎಂದನು. ದೇವರನ್ನು ಒಲಿಸಿಕೊಂಡು ವರ ಪಡೆ ಯುವವರಿಗೆ ಮಾತ್ರ ಅಸುರರು ಸಾತ್ವಿಕತನವನ್ನು ಕಠಿಣವಾಗಿ ಅನುಸರಿ ಸರಿಸಿ, ರಾಕ್ಷಸ ರೀತಿಯಲ್ಲಿ ಯಾವುದಕ್ಕೂ ಜಗ್ಗದೆ ಕಠಿಣ ತಪಸ್ಸು ಮಾಡಿ ಉಪಾಯವಾಗಿ ವರ ಪಡೆದುಬಿಡುತ್ತಾರೆ. ವರ ಪಡೆದ ಕೂಡಲೇ ತಮ್ಮ ದುರ್ನಡತೆಯಿಂದ ಎಲ್ಲವನ್ನು ನಾಶ ಮಾಡಲು ರೀತಿ ನೀತಿಗೆ ವಿರುದ್ಧವಾಗಿ ವರಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ದೇವತೆಗಳಿಗೆ ಶಕ್ತಿ ತುಂಬುವ ಸಲು ವಾಗಿ ಋಷಿಮುನಿಗಳು ಯಾಗ ಯಜ್ಞಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸ ನ್ನು ಕೊಡುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ರಾಜರಿಗೆ, ಸಾಮಾನ್ಯ ಜನರಿಗೆ ಹಿಂಸೆ ಕೊಡುವುದು, ಪ್ರಕೃತಿ ನಾಶ, ಒಟ್ಟಾರೆ ಜಗತ್ತಿಗೆ ಹಾನಿಯಾಗುವ ಕೆಲಸವನ್ನು ಮಾಡುವುದೇ ಅವರ ಗುರಿಯಾಗಿರುತ್ತದೆ. ಇಲ್ಲೂ ಸಹ ಸುಮನಸ್ಕ ರಾಜ ಆರಂಭಿಸಿದ ಯಾಗ ಮಾಡುವಲ್ಲಿ ಮಹರ್ಷಿ ಗಳು ನಿರತರಾಗಿದ್ದರು, ರಾಕ್ಷಸರಿಗೆ ಈ ವಿಚಾರವು ದೇವರ್ಷಿ ನಾರದರಿಂದ ಜಾನು ಮತ್ತು ಸುಮಂಡಲರಿಗೆ ತಿಳಿದು,ರಾಕ್ಷಸರು ಯಾಗ ಕೆಡಿಸಬೇಕೆಂದು, ತಮ್ಮ ಗುರುಗಳಾದ ಶುಕ್ರಾಚಾರ್ಯರ ಬಳಿ ಸಮಾಲೋಚನೆ ನಡೆಸಿ, ಮಂತ್ರಿ ಗಳಾದ ಶೂರ ಬಾಹು ಮತ್ತು ಘಟೋದರರನ್ನು ಕರೆದು ಸೈನ್ಯ ಕಟ್ಟಿಕೊಂಡು ಬಂದು ಯಾಗವನ್ನು ನಾಶಪಡಿಸಲು ಆದೇಶಿಸಿದರು. ಆದರೆ ಆ ಮಂತ್ರಿಗಳಿ ಬ್ಬರನ್ನು ಮೌಕ್ತಿಕೇಶ್ವರರು ಆಯುಧಗಳಿಂದ ಸುಲಭವಾಗಿ ಕೊಂದರು. ಇದು ರಾಕ್ಷಸರಿಗೆ ತಿಳಿದು, ಕೊಡಲೇ ಬಂದರು. ಈಗ ಮೌಕ್ತಿಕೇಶ್ವರ ಶಕ್ತಿಯು ತವಾಗಿ ಹೋರಾಟ ನಡೆಸಿದರೂ ಅದು ನಿಷ್ಪ್ರಯೋಜಕವಾಯಿತು. ಏಕೆಂದ ರೆ ಬ್ರಹ್ಮನಿಂದ ವರ ಪಡೆದ ಜಾನು ಮತ್ತು ಮಂಡಲ, ಯಾವುದೇ ಶಕ್ತಿಗೂ ಬಗ್ಗುವುದಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಹೀಗಿರುವಾಗ ಮುಂದೇನು ಗತಿ ಎಂದು ಯೋಚಿಸಿ ಮೌಕ್ತೆಶ್ವ ರರನ್ನೆ ಒಡಗೂಡಿದ ಮಹರ್ಷಿಗಳೆಲ್ಲ ಆದಿ ಸ್ವರೂಪಿಣಿ ಪರಾಶಕ್ತಿ ಪಾರ್ವತಿ ದೇವಿಯನ್ನು ಕುರಿತು ಮೂರು ದಿನಗಳ ಕಾಲ ತಪಸ್ಸು ಆಚರಿಸಿದರು. ಅವ ರ ಧ್ಯಾನ ತಪಸ್ಸಿ ಗೆ ಸಂತುಷ್ಟಳಾದ ಪಾರ್ವತಿ ದೇವಿ ಯಜ್ಞ ಕುಂಡ ದಿಂದಲೇ ಆವಿರ್ಭವಿಸಿ ಬಂದಳು. ದೇವಿ ಬಂದವಳೇ ತನ್ನ ತೇಜೋಮಯವಾದ ದೃಷ್ಟಿ ಮಾತ್ರದಿಂದಲೆ ಇಬ್ಬರು ರಾಕ್ಷಸರನ್ನು ಭಸ್ಮ ಮಾಡಿದಳು. ಕಣ್ಣೋಟದ ತೇಜ ಸ್ಸು ಎಷ್ಟು ಭಯಾನಕವಾಗಿತ್ತೆಂದರೆ ದೇವಿ ಅಸುರರನ್ನು ದೃಷ್ಟಿಸಿ ನೋಡಿದ ನೋಟದಲ್ಲಿಯೇ ಆ ರಕ್ಕಸ ಸೋದರದಿಬ್ಬರು ನಿಮಿಷದಲ್ಲಿಯೇ ಅಸು ನೀಗಿ ದರು ಇದೇ ಕಾರಣ ‘ನಿಮಿಷಾಂಬಿಕಾ’ ದೇವಿ ಎಂಬ ಹೆಸರು ಬಂದಿತು ಯಾಗದಲ್ಲಿ ನೆರದಿದ್ದ ರಾಜ, ಋಷಿಮುನಿಗಳು, ಪ್ರಜೆಗಳು ಸಂತೋಷ ಭರಿತರಾದರು. ಹಾಗೆ ಬಂದ ಪಾರ್ವತಿ ದೇವಿ ನಿಮಿಷಾಂಬಾ ದೇವಿಯಾಗಿ ಅಲ್ಲಿಯೇ ನೆಲೆಸಿದಳು. ಮೊದಲು ಸಾಧಾರಣವಾಗಿದ್ದ ದೇವಸ್ಥಾನ ಮುಂದೆ ಮೈಸೂರು ಮಹಾರಾಜರ ಕಾಲದಲ್ಲಿ ಸುಂದರವಾಗಿ ನಿರ್ಮಾಣಗೊಂಡಿತು. ದೇವಿಯ ನೆಲೆಯಲ್ಲಿ ಒಂದು ಕ್ಷಣ ನಿಂತು ಬೇಡಿಕೊಂಡರೆ ಮನಸ್ಸಿಗೆ ನೆಮ್ಮ ದಿ ಸಿಗುತ್ತದೆ. ಆದಕಾರಣ ಇವಳನ್ನು 'ನಿಮಿಷಾಂಬಿಕೆ' 'ನಿಮಿಷಾಂಬ' ದೇವಿ ಎಂದೂ ಸಹ ಕರೆಯುತ್ತಾರೆ. ಮೈಸೂರಿನ ಸುತ್ತಮುತ್ತಲ ಪ್ರದೇಶಗಳೆಲ್ಲ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದೇ ರೀತಿ ನಿಮಿಷಾಂಬ ಕ್ಷೇತ್ರ ಗಂಜಾಂ ಗ್ರಾಮವು ಪುಣ್ಯ ಕ್ಷೇತ್ರವಾಗಿ ಭಕ್ತರ ಮನದಿ ಷ್ಟಾರ್ಥಗಳನ್ನು ನೆರವೇರಿಸುತ್ತಾ, ಪ್ರತಿನಿತ್ಯ ರಾಜ್ಯ ಹೊರ ರಾಜ್ಯಗಳಿಂದ ಬಂದ ಭಕ್ತರುಗಳು ಈ ದೇವಿಯ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ. ನಿತ್ಯ ಪೂಜಾ ಕೈಂಕರ್ಯಗಳೊಂದಿಗೆ ವೈಶಾಖ ಮಾಸದಲ್ಲಿ ವರ್ಧಂತ್ಯೋ ತ್ಸವ, ( ಈ ದಿನ ಭಾನುವಾರ) ಜಾತ್ರೆ, ವಿಶೇಷ ಪೂಜೆಗಳು, ಹರಕೆ, ನವಮಿ, ಹುಣ್ಣಿಮೆ, ದಿನಗಳಲ್ಲಿ, ನವರಾತ್ರಿ- ಶ್ರಾವಣ, ಮಾಸಗಳಲ್ಲಿ ಈ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯುತ್ತಿದ್ದು ಸಾವಿರಾರು ಭಕ್ತರು ಬಂದು ತಮ್ಮ ಮನೋಭಿಲಾಷೆಗಳನ್ನು ತಾಯಿ ನಿಮಿಷಾಂಬಾ ದೇವಿಯಿಂದ ಪಡೆದು ನೆಮ್ಮದಿ ಕಂಡುಕೊಂಡಿದ್ದಾರೆ. ನ ಮಂತ್ರಂ ನೋ ಯಂತ್ರಂ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ ಪರಂ ಜಾನೇ ಮಾತ: ತ್ವದನುಸರಣಂ ಕ್ಲೇಶ ಹರಣಮ್!! ನನಗೆ ಮಂತ್ರ ವನ್ನು ಉಚ್ಚರಿಸುವುದಾಗಲಿ ಅಥವಾ ಕ್ರಮವಾಗಲಿ ಇಲ್ಲವೇ ಹೇಗೆ ಪ್ರಾರ್ಥನೆ ಮಾಡಬೇಕೆನ್ನುವುದು ಅರಿಯೆನು. ನಿನ್ನನ್ನು ಹೇಗೆ ಆಹ್ವಾ ನಿಸುವುದು, ಧ್ಯಾನಿಸುವುದು, ಹಾಗೂ ಯಾವುದೇ ರೀತಿಯ ಸ್ತೋತ್ರ ಗಳ ಬಗ್ಗೆಯೂ ತಿಳಿದಿಲ್ಲ. ಸಂಕೇತದ ಮೂಲಕ ನಿನ್ನನ್ನು ಪ್ರಾರ್ಥಿಸುವುದಾಗಲಿ ಹೃದಯ ಅಂತರಾಳದಿಂದ ಬೇಡಿಕೊಳ್ಳುವುದನ್ನು ಅರಿಯೇ, ನನಗೆ ಗೊತ್ತಿರು ವುದು ಒಂದೇ ಮಾರ್ಗ ಅದು ಏನೆಂದರೆ ನಿನ್ನ ಪ್ರೀತಿಯ ಪರಿದಿ ಯೊಳಗಿದ್ದು ನಿನ್ನನ್ನು ಅನುಸರಿಸುವುದು ಮಾತ್ರ, ಹೀಗೆ ಮಾಡಿದಲ್ಲಿ ನನಗೆ ತಿಳಿದಿರುವುದು ಏನೆಂದರೆ ನನ್ನ ಎಲ್ಲಾ ಕಷ್ಟಗಳು ದೂರ ಆಗುವುದು ಎಂಬುದು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ #ನಿಮಿಷಾಂಬ
🔱 ಭಕ್ತಿ ಲೋಕ - Asha Magabhushana Stories Asha Magabhushana Stories - ShareChat