ShareChat
click to see wallet page
search
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ನಿಮಿಷದಲ್ಲಿ ಕಷ್ಟ ಕಳೆಯೋ ನಿಮಿಷಾಂಬಾ ದೇವಿ :- ಸಕ್ಕರೆ ನಾಡು ಮಂಡ್ಯ ಜಿಲ್ಲೆಯ "ರಂಗನಾಥನ" ನೆಲೆವೀಡಾದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀರಂಗಪಟ್ಟಣ. ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಯ ತಟದಲ್ಲಿರುವ 'ಗಂಜಾಂ' ಎಂಬ ಗ್ರಾಮವು ತನ್ನದೇ ಆದ ಶಕ್ತಿ, ಅಪಾರ ಮಹಿಮೆ ಹೊಂದಿರುವ 'ನಿಮಿಷಾಂಬಾ' ದೇವಿ ನೆಲೆಸಿರುವ ಪುಣ್ಯ ಪವಿತ್ರ ಕ್ಷೇತ್ರವಾಗಿದೆ. ನಿಮಿಷಾಂಬಾ ದೇವಿಯನ್ನು ಜಾಗೃತ ದೇವಿ, ಕಾರಣಿಕ ದೇವಿ, ನಿಮಿಷದಲ್ಲಿ ಕಷ್ಟ ಪರಿಹರಿಸುವ ಆದಿ ಪರಾಶಕ್ತಿ ಎಂದು ಕರೆಯುತ್ತಾರೆ. ನಿಮಿಷಾಂಬಾ ದೇವಿ, ಶಕ್ತಿದೇವಿ ಪಾರ್ವತಿಯ ಅವತಾರವಾಗಿದೆ. ಈ ಕ್ಷೇತ್ರಕ್ಕೆ ಯಾರೇ ಭಕ್ತರು ಬಂದು ದರ್ಶನ ಮಾಡಿ, ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪ್ರಾರ್ಥಿಸಿದರೆ ನಿಮಿಷ ದಲ್ಲಿಯೇ ಕಷ್ಟವನ್ನು ಪರಿಹರಿಸುವಳು ಎಂಬ ಭಕ್ತರ ನಂಬಿಕೆ ಇಂದಿಗೂ ನಿಜವಾಗಿದೆ. ಸುಂದರವಾದ ರಾಜಗೋಪುರ ಹೊಂದಿರುವ ದೇವಾಲಯದಲ್ಲಿ, ಭೂ ಪ್ರಸ್ತಾರ ಕೃಷ್ಣ ಶಿಲೆಯಲ್ಲಿ ನಿರ್ಮಾಣ ಮಾಡಿ, ಎಲ್ಲಾ ದಳಗಳ ಮೇಲೆ ಬೀಜಾಕ್ಷರಿ ಮಂತ್ರ ಸಹಿತ ಇರುವ ಶ್ರೀ ಚಕ್ರದ ಮೇಲೆ ಮಂದಸ್ಮಿತಳಾಗಿ ವಿರಾಜಮಾನಳಾಗಿರುವ 'ನಿಮಿಷಾಂಬಾ ದೇವಿ' ವಿಗ್ರಹವನ್ನು ಪ್ರತಿಷ್ಠಾ ಪಿಸಲಾಗಿದೆ. ಇಲ್ಲಿನ ದೇವಾಲಯವನ್ನು ಶಿವ ಪಂಚಾಯತನ ಕ್ರಮದಲ್ಲಿ ನಿರ್ಮಿಸಿದ್ದಾರೆ. ಶಿವ ಪಂಚಾಯತನ ಎಂದರೆ, ಹಿಂದೂ ಧರ್ಮದ ಸ್ಮಾರ್ತ ಸಂಪ್ರದಾಯದ ಈ ಪೂಜಾ ವಿಧಾನವನ್ನು, ಭಗವತ್ಪಾದ ಶ್ರೀ ಶಂಕರಾ ಚಾರ್ಯರು ಪ್ರಚುರಪಡಿಸಿರುವ ಇದು ಒಂದೇ ಸ್ಥಳದಲ್ಲಿ ಐದು ದೇವತೆಗಳ ಪೂಜೆ ಮಾಡುವ ವಿಧಾನವಾಗಿದೆ. ಮುಖ್ಯವಾದ ದೇವರುಗಳು ಗಣೇಶ, ಸೂರ್ಯ, ಅಂಬಿಕಾ ಅಥವಾ ದುರ್ಗಾ, ಶಿವ, (ಲಿಂಗ) ವಿಷ್ಣು,( ಸಾಲಿಗ್ರಾಮ) ಹೀಗೆ ಐದು ದೇವತೆಗಳ ಪೂಜೆ ಮಾಡುವುದು. ಈ ದೇವಾಲಯದ ಪ್ರವೇಶ ದ್ವಾರದೊಳಗೆ ಮೌಕ್ತಿಕೇಶ್ವರ ಸ್ವಾಮಿ, ಮತ್ತು ಲಕ್ಷ್ಮೀನಾರಾಯಣ ಸ್ವಾಮಿ ಸನ್ನಿಧಿಗಳಿವೆ. 'ನಿಮಿಷಾಂಬಾ ದೇವಿ' ಯ ಪೌರಾಣಿಕ ಹಿನ್ನೆಲೆ ಪ್ರಕಾರ, ಬಹಳ ಹಿಂದೆ ಶ್ರೀ ರಂಗಪಟ್ಟಣವನ್ನು, ಸುಮನಸ್ಕಾ ಎಂಬ ರಾಜನು ಆಳುತ್ತಿದ್ದನು. ಅವನು ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಯಾಗ ಯಜ್ಞಗಳನ್ನು ಮಾಡಿಸುತ್ತಿದ್ದನು. ಎಷ್ಟೇ ಯಾಗ ಯಜ್ಞಗಳನ್ನು ಮಾಡಿಸಿದರು, ಅಸುರರ ಹಾವಳಿ ಇದ್ದೇ ಇರುತ್ತಿತ್ತು. ಆದಕಾರಣ ಈ ಸಲ ಯೋಚಿಸಿ ಆಗ ಆರಂಭಿಸಿದ ಮೇಲೆ ಯಾವುದೇ ತೊಂದರೆ ತೊಡಕುಗಳು ಆಗಬಾರದೆಂದು ಪರಮೇಶ್ವರನ ಹೃದಯ ಭಾಗದಿಂದ ಜನಿಸಿದ ಪ್ರಭಾವಶಾಲಿ ಪರಾಕ್ರಮಿ ಶಕ್ತಿಶಾಲಿಯಾದ ಮೂತಿಕೇಶ್ವರ ಎಂಬ ಮುನಿಗೆ ಯಾಗದ ನೇತೃತ್ವವನ್ನು ವಹಿಸಿ ಮಹರ್ಷಿ ಗಳಿಂದ ದೊಡ್ಡ ಯಾಗ ಕಾರ್ಯಕ್ರಮವನ್ನು ಆರಂಭಿಸಿದನು. ಯಾಗ ಆರಂಭವಾಗಿ ಸ್ವಲ್ಪಕಾಲ ಯಾವುದೇ ಅಹಿತಕರ ಘಟನೆ ಘಟಿಸದೆ ಸರಾಗವಾಗಿ ನಡೆಯಿತು. ಆ ಸಮಯಕ್ಕೆ ಜಾನು ಮತ್ತು ಮಂಡಲ ಎಂಬ ಘೋರ ರಾಕ್ಷಸರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ ಕೊಂಡು, ವರ ಕೊಡಲು ಮುಂದಾದ ಬ್ರಹ್ಮ ದೇವರಲ್ಲಿ, ಎಲ್ಲಾ ದುಷ್ಟ ರಾಕ್ಷಸ ರಂತೆ ತಮಗೆ ನೀರಿನಿಂದಾಗಲಿ, ಭೂಮಿ- ಅಗ್ನಿ - ವಾಯು- ಜಲ- ಚರ, ಯಾವುದೇ ಆಯುಧಗಳು, ಪಶು- ಪಕ್ಷಿ -ಪ್ರಕೃತಿ, ಹೀಗೆ ಜಗತ್ತಿನಲ್ಲಿರುವ ಯಾವುದರಿಂದಲೂ ಸಹಜ ಸಾವು ತಮಗೆ ಆಗಬಾರದು ಎಂಬ ವರವನ್ನು ಪಡೆದರು. ಬ್ರಹ್ಮ ತಥಾಸ್ತು ಎಂದನು. ದೇವರನ್ನು ಒಲಿಸಿಕೊಂಡು ವರ ಪಡೆ ಯುವವರಿಗೆ ಮಾತ್ರ ಅಸುರರು ಸಾತ್ವಿಕತನವನ್ನು ಕಠಿಣವಾಗಿ ಅನುಸರಿ ಸರಿಸಿ, ರಾಕ್ಷಸ ರೀತಿಯಲ್ಲಿ ಯಾವುದಕ್ಕೂ ಜಗ್ಗದೆ ಕಠಿಣ ತಪಸ್ಸು ಮಾಡಿ ಉಪಾಯವಾಗಿ ವರ ಪಡೆದುಬಿಡುತ್ತಾರೆ. ವರ ಪಡೆದ ಕೂಡಲೇ ತಮ್ಮ ದುರ್ನಡತೆಯಿಂದ ಎಲ್ಲವನ್ನು ನಾಶ ಮಾಡಲು ರೀತಿ ನೀತಿಗೆ ವಿರುದ್ಧವಾಗಿ ವರಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ದೇವತೆಗಳಿಗೆ ಶಕ್ತಿ ತುಂಬುವ ಸಲು ವಾಗಿ ಋಷಿಮುನಿಗಳು ಯಾಗ ಯಜ್ಞಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸ ನ್ನು ಕೊಡುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ರಾಜರಿಗೆ, ಸಾಮಾನ್ಯ ಜನರಿಗೆ ಹಿಂಸೆ ಕೊಡುವುದು, ಪ್ರಕೃತಿ ನಾಶ, ಒಟ್ಟಾರೆ ಜಗತ್ತಿಗೆ ಹಾನಿಯಾಗುವ ಕೆಲಸವನ್ನು ಮಾಡುವುದೇ ಅವರ ಗುರಿಯಾಗಿರುತ್ತದೆ. ಇಲ್ಲೂ ಸಹ ಸುಮನಸ್ಕ ರಾಜ ಆರಂಭಿಸಿದ ಯಾಗ ಮಾಡುವಲ್ಲಿ ಮಹರ್ಷಿ ಗಳು ನಿರತರಾಗಿದ್ದರು, ರಾಕ್ಷಸರಿಗೆ ಈ ವಿಚಾರವು ದೇವರ್ಷಿ ನಾರದರಿಂದ ಜಾನು ಮತ್ತು ಸುಮಂಡಲರಿಗೆ ತಿಳಿದು,ರಾಕ್ಷಸರು ಯಾಗ ಕೆಡಿಸಬೇಕೆಂದು, ತಮ್ಮ ಗುರುಗಳಾದ ಶುಕ್ರಾಚಾರ್ಯರ ಬಳಿ ಸಮಾಲೋಚನೆ ನಡೆಸಿ, ಮಂತ್ರಿ ಗಳಾದ ಶೂರ ಬಾಹು ಮತ್ತು ಘಟೋದರರನ್ನು ಕರೆದು ಸೈನ್ಯ ಕಟ್ಟಿಕೊಂಡು ಬಂದು ಯಾಗವನ್ನು ನಾಶಪಡಿಸಲು ಆದೇಶಿಸಿದರು. ಆದರೆ ಆ ಮಂತ್ರಿಗಳಿ ಬ್ಬರನ್ನು ಮೌಕ್ತಿಕೇಶ್ವರರು ಆಯುಧಗಳಿಂದ ಸುಲಭವಾಗಿ ಕೊಂದರು. ಇದು ರಾಕ್ಷಸರಿಗೆ ತಿಳಿದು, ಕೊಡಲೇ ಬಂದರು. ಈಗ ಮೌಕ್ತಿಕೇಶ್ವರ ಶಕ್ತಿಯು ತವಾಗಿ ಹೋರಾಟ ನಡೆಸಿದರೂ ಅದು ನಿಷ್ಪ್ರಯೋಜಕವಾಯಿತು. ಏಕೆಂದ ರೆ ಬ್ರಹ್ಮನಿಂದ ವರ ಪಡೆದ ಜಾನು ಮತ್ತು ಮಂಡಲ, ಯಾವುದೇ ಶಕ್ತಿಗೂ ಬಗ್ಗುವುದಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಹೀಗಿರುವಾಗ ಮುಂದೇನು ಗತಿ ಎಂದು ಯೋಚಿಸಿ ಮೌಕ್ತೆಶ್ವ ರರನ್ನೆ ಒಡಗೂಡಿದ ಮಹರ್ಷಿಗಳೆಲ್ಲ ಆದಿ ಸ್ವರೂಪಿಣಿ ಪರಾಶಕ್ತಿ ಪಾರ್ವತಿ ದೇವಿಯನ್ನು ಕುರಿತು ಮೂರು ದಿನಗಳ ಕಾಲ ತಪಸ್ಸು ಆಚರಿಸಿದರು. ಅವ ರ ಧ್ಯಾನ ತಪಸ್ಸಿ ಗೆ ಸಂತುಷ್ಟಳಾದ ಪಾರ್ವತಿ ದೇವಿ ಯಜ್ಞ ಕುಂಡ ದಿಂದಲೇ ಆವಿರ್ಭವಿಸಿ ಬಂದಳು. ದೇವಿ ಬಂದವಳೇ ತನ್ನ ತೇಜೋಮಯವಾದ ದೃಷ್ಟಿ ಮಾತ್ರದಿಂದಲೆ ಇಬ್ಬರು ರಾಕ್ಷಸರನ್ನು ಭಸ್ಮ ಮಾಡಿದಳು. ಕಣ್ಣೋಟದ ತೇಜ ಸ್ಸು ಎಷ್ಟು ಭಯಾನಕವಾಗಿತ್ತೆಂದರೆ ದೇವಿ ಅಸುರರನ್ನು ದೃಷ್ಟಿಸಿ ನೋಡಿದ ನೋಟದಲ್ಲಿಯೇ ಆ ರಕ್ಕಸ ಸೋದರದಿಬ್ಬರು ನಿಮಿಷದಲ್ಲಿಯೇ ಅಸು ನೀಗಿ ದರು ಇದೇ ಕಾರಣ ‘ನಿಮಿಷಾಂಬಿಕಾ’ ದೇವಿ ಎಂಬ ಹೆಸರು ಬಂದಿತು ಯಾಗದಲ್ಲಿ ನೆರದಿದ್ದ ರಾಜ, ಋಷಿಮುನಿಗಳು, ಪ್ರಜೆಗಳು ಸಂತೋಷ ಭರಿತರಾದರು. ಹಾಗೆ ಬಂದ ಪಾರ್ವತಿ ದೇವಿ ನಿಮಿಷಾಂಬಾ ದೇವಿಯಾಗಿ ಅಲ್ಲಿಯೇ ನೆಲೆಸಿದಳು. ಮೊದಲು ಸಾಧಾರಣವಾಗಿದ್ದ ದೇವಸ್ಥಾನ ಮುಂದೆ ಮೈಸೂರು ಮಹಾರಾಜರ ಕಾಲದಲ್ಲಿ ಸುಂದರವಾಗಿ ನಿರ್ಮಾಣಗೊಂಡಿತು. ದೇವಿಯ ನೆಲೆಯಲ್ಲಿ ಒಂದು ಕ್ಷಣ ನಿಂತು ಬೇಡಿಕೊಂಡರೆ ಮನಸ್ಸಿಗೆ ನೆಮ್ಮ ದಿ ಸಿಗುತ್ತದೆ. ಆದಕಾರಣ ಇವಳನ್ನು 'ನಿಮಿಷಾಂಬಿಕೆ' 'ನಿಮಿಷಾಂಬ' ದೇವಿ ಎಂದೂ ಸಹ ಕರೆಯುತ್ತಾರೆ. ಮೈಸೂರಿನ ಸುತ್ತಮುತ್ತಲ ಪ್ರದೇಶಗಳೆಲ್ಲ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದೇ ರೀತಿ ನಿಮಿಷಾಂಬ ಕ್ಷೇತ್ರ ಗಂಜಾಂ ಗ್ರಾಮವು ಪುಣ್ಯ ಕ್ಷೇತ್ರವಾಗಿ ಭಕ್ತರ ಮನದಿ ಷ್ಟಾರ್ಥಗಳನ್ನು ನೆರವೇರಿಸುತ್ತಾ, ಪ್ರತಿನಿತ್ಯ ರಾಜ್ಯ ಹೊರ ರಾಜ್ಯಗಳಿಂದ ಬಂದ ಭಕ್ತರುಗಳು ಈ ದೇವಿಯ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ. ನಿತ್ಯ ಪೂಜಾ ಕೈಂಕರ್ಯಗಳೊಂದಿಗೆ ವೈಶಾಖ ಮಾಸದಲ್ಲಿ ವರ್ಧಂತ್ಯೋ ತ್ಸವ, ( ಈ ದಿನ ಭಾನುವಾರ) ಜಾತ್ರೆ, ವಿಶೇಷ ಪೂಜೆಗಳು, ಹರಕೆ, ನವಮಿ, ಹುಣ್ಣಿಮೆ, ದಿನಗಳಲ್ಲಿ, ನವರಾತ್ರಿ- ಶ್ರಾವಣ, ಮಾಸಗಳಲ್ಲಿ ಈ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯುತ್ತಿದ್ದು ಸಾವಿರಾರು ಭಕ್ತರು ಬಂದು ತಮ್ಮ ಮನೋಭಿಲಾಷೆಗಳನ್ನು ತಾಯಿ ನಿಮಿಷಾಂಬಾ ದೇವಿಯಿಂದ ಪಡೆದು ನೆಮ್ಮದಿ ಕಂಡುಕೊಂಡಿದ್ದಾರೆ. ನ ಮಂತ್ರಂ ನೋ ಯಂತ್ರಂ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ ಪರಂ ಜಾನೇ ಮಾತ: ತ್ವದನುಸರಣಂ ಕ್ಲೇಶ ಹರಣಮ್!! ನನಗೆ ಮಂತ್ರ ವನ್ನು ಉಚ್ಚರಿಸುವುದಾಗಲಿ ಅಥವಾ ಕ್ರಮವಾಗಲಿ ಇಲ್ಲವೇ ಹೇಗೆ ಪ್ರಾರ್ಥನೆ ಮಾಡಬೇಕೆನ್ನುವುದು ಅರಿಯೆನು. ನಿನ್ನನ್ನು ಹೇಗೆ ಆಹ್ವಾ ನಿಸುವುದು, ಧ್ಯಾನಿಸುವುದು, ಹಾಗೂ ಯಾವುದೇ ರೀತಿಯ ಸ್ತೋತ್ರ ಗಳ ಬಗ್ಗೆಯೂ ತಿಳಿದಿಲ್ಲ. ಸಂಕೇತದ ಮೂಲಕ ನಿನ್ನನ್ನು ಪ್ರಾರ್ಥಿಸುವುದಾಗಲಿ ಹೃದಯ ಅಂತರಾಳದಿಂದ ಬೇಡಿಕೊಳ್ಳುವುದನ್ನು ಅರಿಯೇ, ನನಗೆ ಗೊತ್ತಿರು ವುದು ಒಂದೇ ಮಾರ್ಗ ಅದು ಏನೆಂದರೆ ನಿನ್ನ ಪ್ರೀತಿಯ ಪರಿದಿ ಯೊಳಗಿದ್ದು ನಿನ್ನನ್ನು ಅನುಸರಿಸುವುದು ಮಾತ್ರ, ಹೀಗೆ ಮಾಡಿದಲ್ಲಿ ನನಗೆ ತಿಳಿದಿರುವುದು ಏನೆಂದರೆ ನನ್ನ ಎಲ್ಲಾ ಕಷ್ಟಗಳು ದೂರ ಆಗುವುದು ಎಂಬುದು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ #ನಿಮಿಷಾಂಬ
🔱 ಭಕ್ತಿ ಲೋಕ - Asha Magabhushana Stories Asha Magabhushana Stories - ShareChat